ಕಾದಿದ್ದೇನೆ

- Advertisement -
- Advertisement -

ಎಷ್ಟೆಂದು ಬಿಚ್ಚಿಡಲಿ ನನ್ನೊಳಗನ್ನು?
ಹೇಗೆ ನಿರೂಪಿಸಲಿ ನನ್ನ ನಂಬಿಕೆಯನ್ನು
ಒಂದೊಂದೇ ವಸ್ತ್ರ ಕಳಚಿ ಬೆತ್ತಲಾಗಿಸಿ
ದೇಹದ ಇಂಚಿಂಚನ್ನೂ ಭೂತಗನ್ನಡಿಯಲ್ಲಿ
ಉಗುರು, ಹಲ್ಲಿನ ಗುರುತಿಗಾಗಿ ತಡಕಾಡುವಾಗ
ನಾನು ಹೆಣ್ಣಾದ ನೋವು ಎದೆಯ ಗೀರನ್ನು ಆಳವಾಗಿಸಿದೆ

ಹೆಣ್ಣೆಂಬ ಆಕಾರವೇ ಜೊಲ್ಲು ಸುರಿಸುವಂತಿರುವಾಗ
ಮಧ್ಯರಾತ್ರಿಯ ಉಬ್ಬುತಗ್ಗುಗಳ ಕನವರಿಕೆಯಲ್ಲಿ
ದಕ್ಕಿಸಿಕೊಂಡ ಸುಖ, ಸುಖವೆನಿಸದೇ
ಮರ್ಮಾಂಗಕ್ಕೆ ಸಲಾಕೆ ನುಗ್ಗಿಸಿ ಪಡುವ
ತೃಪ್ತಿಯ ಅಟ್ಟಹಾಸದ ಕೆಕೆ ಯಲ್ಲಿ
ಹೆಣ್ಣೆಂಬ ಶಬ್ಧ ನನ್ನ ಮೈಗೂ ಅಂಟಿ ತಲ್ಲಣಿಸುವಂತೆ ಮಾಡಿದೆ

ಹೊರ ಪ್ರಪಂಚದ ಮಾತು ಬೇಡ
ಮನೆಯೊಳಗಣ ಜಗತ್ತೂ ಕ್ರೌರ್ಯದ ಉತ್ತುಂಗದಲ್ಲಿ
ವಿಜೃಂಭಿಸಿ ಭೀಷಣವಾಗಿ ನಗುತ್ತ
ದಿನ ತುಂಬದೆ ಹುಟ್ಟಿದ ಹಸುಳೆಯ ಬಾಯೊಳಗೆ
ಅಳ್ಳೆಯ ತುಂಬ ಕಳ್ಳಿಯ ಹಾಲೆರೆದು ನೀಲಿಗಟ್ಟಿದಾಗ
ಅಯ್ಯೋ, ನಾನು ಹುಟ್ಟಿದ್ದೂ ಹೆಣ್ಣಾಗಿಯೇ….

ಬಸಿರು ಸಂಕಟದ ಯಮಯಾತನೆಯ ಮಾತು ಬಿಡಿ
ಸೋರುವ ರಕ್ತವ ಕಾಣದಂತೆ ಪ್ಯಾಡ್‍ಗಳಲ್ಲೇ ಇಂಗಿಸಿ
ಮುಟ್ಟಿನ ಬೆನ್ನು, ಹೊಟ್ಟೆಯ ನೋವಲ್ಲೂ ಬಗ್ಗಿ
ಮುಟ್ಟಿದರೂ ನೋಯುವ ತುಂಬಿದ ಮೊಲೆಗಳ ಬಾಯಿಗಿಟ್ಟು
ಚಪ್ಪರಿಸುವ ಪರಿ ನೋಡಲಾಗದಿದ್ದರೂ
ಹಸ್ತ, ಬಾಯಿ, ಮುಖ ಮೈಥುನಕ್ಕೆ ಸಿದ್ಧಳಾಗುವವವಳ ಕಂಡಾಗ
ಎದೆ ಝಲ್ಲೆಂದು ಬೆದರುತ್ತದೆ ನಾನು ಹೆಣ್ಣಾದ ಸಂಕಟಕ್ಕೆ

ಅಲ್ಲೆಲ್ಲೋ ಹಿಂಬಾಲಿಸಿದವನಿಗೆ ಚಪ್ಪಲಿಯೇಟು ನೀಡಿದ
ಮೈ ಮುಟ್ಟಿದಾತನಿಗೆ ಮರಣಮೃದಂಗವಾಡಿಸಿದ
ದುರಾಚಾರಕ್ಕೆರಗಿದವನ ಶಿಶ್ನ ಕತ್ತರಿಸಿದ
ಮನೆಯ ನಾಲ್ಕು ಗೋಡೆಯ ಒಳಗೂ
ಬಲವಂತವ ಧಿಕ್ಕರಿಸಿ ಕೋರ್ಟಿನ ಕಟಕಟೆ ಹತ್ತಿದ ಸುದ್ದಿ
ಗಾಳಿಯೊಂದಿಗೆ ಅಲೆಅಲೆಯಾಗಿ ತೇಲಿ ಬಂದಿದೆ
ನನ್ನೊಳಗಲ್ಲೂ ಹೆಣ್ಣೆಂಬ ಅಹಂ ನಿಧಾನವಾಗಿ
ತಲೆ ಎತ್ತುವಂತೆ ಮಾಡುವ ಗಳಿಗೆಗಾಗಿ ಕಾದಿದ್ದೇನೆ

– ಶ್ರೀದೇವಿ ಕೆರೆಮನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಆರ್‌ಎಸ್‌ಎಸ್ ನೋಂದಣಿಗೆ ಕಾಂಗ್ರೆಸ್ ಕಾನೂನು ತರಲಿದೆ’: ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಂಗಳವಾರ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕುರಿತ ತಮ್ಮ ಹೇಳಿಕೆಗಳನ್ನು ಮತ್ತು ಕರಾವಳಿ ಕರ್ನಾಟಕದ ಹೂಡಿಕೆಗಳ ಮೇಲೆ ಕೋಮು ಉದ್ವಿಗ್ನತೆ ಪರಿಣಾಮ...

ವಿನೋದ್ ಅದಾನಿ ಸಹಚರರ ವಿರುದ್ಧ ತನಿಖೆ ನಡೆಸಿದ ಇಟಾಲಿಯನ್ ಬ್ಯಾಂಕ್; ಅನುಮಾನಾಸ್ಪದ ‘ಹೆಡ್ಜ್ ಫಂಡ್’ ಹೂಡಿಕೆ ಪತ್ತೆ

ಜನವರಿ 2023 ರಲ್ಲಿ ಹಿಂಡೆನ್‌ಬರ್ಗ್‌ ರಿಸರ್ಚ್ ವರದಿಯ ಬೆನ್ನಲ್ಲೇ, ಇಟಲಿಯ ಅತಿದೊಡ್ಡ ಬ್ಯಾಂಕ್ 'ಇಂಟೆಸಾ ಸ್ಯಾನ್ಪೋಲೊ' ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರ ಸಹೋದರ ವಿನೋದ್ ಅದಾನಿ ಅವರ ಇಬ್ಬರು ಸಹಚರರನ್ನು...

‘ಸ್ತನ ಹಿಡಿಯುವುದು, ಪೈಜಾಮದ ಲಾಡಿ ಬಿಚ್ಚುವುದು ಅತ್ಯಾಚಾರ ಯತ್ನವಲ್ಲ’ ಎಂಬ ಅಲಹಾಬಾದ್ ಹೈಕೋರ್ಟ್ ತೀರ್ಪು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

"ಹೆಣ್ಣು ಮಕ್ಕಳ ಸ್ತನ ಹಿಡಿಯುವುದು, ಪೈಜಾಮದ ಲಾಡಿ ಬಿಚ್ಚುವುದು, ಅವರನ್ನು ಚರಂಡಿ ಕಡೆಗೆ ಅಥವಾ ಮೋರಿಯ ಅಡಿಗೆ ಎಳೆಯುವುದು 'ಅತ್ಯಾಚಾರ ಅಥವಾ ಅತ್ಯಾಚಾರ ಯತ್ನವಲ್ಲ" ಎಂಬ ಅಲಹಾಬಾದ್‌ ಹೈಕೋರ್ಟ್‌ನ ವಿವಾದಾತ್ಮಕ ತೀರ್ಪಿನ್ನು ಸುಪ್ರೀಂ...

‘ದೇವರಿಗೆ ಧನ್ಯವಾದಗಳು, ದಕ್ಷಿಣ ಇನ್ನೂ ಸ್ವತಂತ್ರವಾಗಿದೆ, ನಾವು ನಿಮ್ಮಿಂದ ಶಕ್ತಿ ಪಡೆಯುತ್ತೇವೆ’: ಕೇರಳ ಸಮ್ಮೇಳನದಲ್ಲಿ ಫಾರೂಕ್ ಅಬ್ದುಲ್ಲಾ ಭಾವುಕ ಮಾತು

"ದೇವರಿಗೆ ಧನ್ಯವಾದಗಳು, ದಕ್ಷಿಣ ಇನ್ನೂ ಸ್ವತಂತ್ರವಾಗಿದೆ, ಮತ್ತು ಅದು ಸ್ವತಂತ್ರವಾಗಿಯೇ ಉಳಿದಿದೆ ಮತ್ತು ಅಭಿವೃದ್ಧಿ ಹೊಂದುತ್ತದೆ ಮತ್ತು ಬಲಗೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ. ನಾವು ನಿಮ್ಮಿಂದ ಶಕ್ತಿಯನ್ನು ಪಡೆಯುತ್ತೇವೆ. ನಾವು ನಿಮ್ಮನ್ನು ನೋಡುತ್ತೇವೆ...

ದತ್ತಾಂಶ ಸಂರಕ್ಷಣಾ ಕಾನೂನಿನಡಿಯಲ್ಲಿ ಆರ್‌ಟಿಐ ತಿದ್ದುಪಡಿಗೆ ತಡೆ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್

ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆಯ ಮೂಲಕ ಪರಿಚಯಿಸಲಾದ ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿಯನ್ನು ತಡೆಹಿಡಿಯಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ ಎಂದು 'ಬಾರ್ ಮತ್ತು ಬೆಂಚ್' ವರದಿ ಮಾಡಿದೆ. ಸಾರ್ವಜನಿಕ ಹಿತಾಸಕ್ತಿಯ ಆಧಾರದ...

ಅಜಿತ್ ಪವಾರ್ ಸಾವು : ಎರಡೂ ಫ್ಲೈಟ್ ರೆಕಾರ್ಡರ್‌ಗಳು ಹಾನಿಗೊಳಗಾಗಿವೆ ಎಂದ ವಿಮಾನಯಾನ ಸಚಿವಾಲಯ

ಬಾರಾಮತಿಯಲ್ಲಿ ಜನವರಿ 28 ರಂದು ಅಜಿತ್ ಪವಾರ್ ಅವರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಅಪಘಾತಕ್ಕೀಡಾದ ಬಗ್ಗೆ ನಾಗರಿಕ ವಿಮಾನಯಾನ ಸಚಿವಾಲಯವು ಮಂಗಳವಾರ (ಫೆ.17) ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ವಿಮಾನದ ಎರಡೂ ಸ್ವತಂತ್ರ ಫ್ಲೈಟ್...

ರಾಜಸ್ಥಾನ| ಮೊದಲ ಬಜೆಟ್‌ನಲ್ಲಿ ಪಕ್ಷವು ‘ಗಂಡು ಮಗುವಿಗೆ ಜನ್ಮ ನೀಡಿದೆ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಶಾಸಕ

ರಾಜಸ್ಥಾನದ ಬಿಜೆಪಿ ಶಾಸಕ ಬಹದ್ದೂರ್ ಸಿಂಗ್ ಕೋಲಿ, ತಮ್ಮ ಪಕ್ಷ ಮತ್ತು ಕಾಂಗ್ರೆಸ್ ಮಂಡಿಸಿದ ಬಜೆಟ್‌ಗಳನ್ನು ಗಂಡು ಮತ್ತು ಹೆಣ್ಣು ಮಗುವಿನ ಜನನಕ್ಕೆ ಹೋಲಿಸಿದ ಬಳಿಕ ವಿಧಾನಸಭೆಯಲ್ಲಿ ವಿವಾದ ಭುಗಿಲೆದ್ದಿತು. ರಾಜ್ಯ ಬಜೆಟ್ ಮೇಲಿನ...

ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ತಾರಿಖ್ ರೆಹಮಾನ್ ಪ್ರಮಾಣವಚನ ಸ್ವೀಕಾರ

ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ನಾಯಕ ತಾರಿಖ್ ರೆಹಮಾನ್ ಅವರು ಮಂಗಳವಾರ (ಫೆ.17) ಪ್ರಮಾಣ ವಚನ ಸ್ವೀಕರಿಸಿದರು. ಪದಗ್ರಹಣ ಕಾರ್ಯಕ್ರಮವು ಸಂಪ್ರದಾಯದಂತೆ ಅಧ್ಯಕ್ಷೀಯ ಅರಮನೆಯಲ್ಲಿ ನಡೆಯುವ ಬದಲು, ಢಾಕಾದ ರಾಷ್ಟ್ರೀಯ...

ಮಹಾರಾಷ್ಟ್ರ| ಪರೀಕ್ಷೆಯ ಸಮಯದಲ್ಲಿ ಸಾಮೂಹಿಕ ನಕಲಿಗೆ ಬೆಂಬಲಿಸಿದ 5 ಜನ ಶಿಕ್ಷಕರ ಅಮಾನತು

ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಕೇಂದ್ರವೊಂದರಲ್ಲಿ ನಡೆದ 12 ನೇ ತರಗತಿಯ ಹೆಚ್‌ಎಸ್‌ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ನಕಲು ಮಾಡಲು ಅನುಕೂಲ ಮಾಡಿಕೊಟ್ಟ ಆರೋಪದ ಮೇಲೆ ಸಿಕ್ಕಿಬಿದ್ದ ಐದು ಶಿಕ್ಷಕರನ್ನು...

ಬಿಜೆಪಿ ವಿರುದ್ಧ 40% ಕಮಿಷನ್ ಜಾಹೀರಾತು : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್‌

ಜಾಹೀರಾತಿಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಹೈಕೋರ್ಟ್ ಮಂಗಳವಾರ (ಫೆ.17) ರದ್ದುಗೊಳಿಸಿದೆ ಎಂದು ಕಾನೂನು ಸುದ್ದಿ ಸಂಸ್ಥೆ ಬಾರ್ & ಬೆಂಚ್ ವರದಿ ಮಾಡಿದೆ. ಪ್ರಕರಣ ರದ್ದುಕೋರಿ...