Homeರಾಜಕೀಯಜಯಮಾಲ ಮೇಡಂಗೆ ಮಂತ್ರಿಗಿರಿ ಒಲಿದ ಮರ್ಮವೇನು?

ಜಯಮಾಲ ಮೇಡಂಗೆ ಮಂತ್ರಿಗಿರಿ ಒಲಿದ ಮರ್ಮವೇನು?

- Advertisement -
- Advertisement -

ಸಿಕ್ಕಾಪಟ್ಟೆ ಸರ್ಕಸ್ ತರುವಾಯ ಸಮ್ಮಿಶ್ರ ಸರ್ಕಾರದ ಅರೆಬೆಂದ ಸಚಿವ ಸಂಪುಟ ಅಣಿಯಾಗಿದೆ. ಸಚಿವಗಿರಿ ಸಿಗದೆ ಬಂಡಾಯದ ಬಾವುಟ ಹಾರಾಡಿಸಿಕೊಂಡು ದಿಲ್ಲಿಗೂ, ಬೆಂಗ್ಳೂರಿಗೂ ಅಲೆದಾಡಿದ ಪುಣ್ಯಾತ್ಮರೂ ದಿನದಿಂದ ದಿನಕ್ಕೆ ತಣ್ಣಗಾಗುತ್ತಿದ್ದಾರೆ. ಇನ್ನು ಸಿಕ್ಕ ಖಾತೆಗಳ ಬಗ್ಗೆ ಕ್ಯಾತೆ ತೆಗೆದವರೂ, ಪಾಲಿಗೆ ಬಂದ ಪಂಚಾಮೃತದ ಮುಂದೆ ಚಕ್ಕಮಕ್ಕಳ ಹಾಕಿ ಕೂತು, ಕೈ-ಬಾಯಿ ಅಣಿಯಾಗಿಸಿಕೊಳ್ಳುತ್ತಿರುವ ಹೊತ್ತಿನಲ್ಲೇ ಕುಮಾರಣ್ಣನ ಸಂಪುಟದ ರೈಲು ನಿಧಾನಕ್ಕೆ ಹಳಿಗಳಿಗೆ ಕುದುರಿಕೊಳ್ಳಲು ಶುರುವಾಗಿದೆ. ಒಂದು ಸರ್ಕಾರ ಅಂತ ರಚನೆಯಾದಾಗ, ಅದರಲ್ಲೂ ಬಣ್ಣಬಣ್ಣದ ಕೌದಿಯಂತಹ ಸಮ್ಮಿಶ್ರ ಸರ್ಕಾರ ಅಂದಮೇಲೆ ಇಂತದ್ದೆಲ್ಲ ಮಾಮೂಲಿ. ಈ ಸಲದ ಸಂಪುಟ ಕಸರತ್ತಿನಲ್ಲಿ ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ಬಸವರಾಜ್ ಹೊರಟ್ಟಿಯಂತಹ ಘಟಾನುಘಟಿಗಳಿಗೆ ಮಂತ್ರಿಗಿರಿ ಮಿಸ್ ಆಗಿರೋದು ಎಷ್ಟು ಶಾಕ್‍ನ ಸಂಗತಿಯೋ, ಗಿರಿಕನ್ಯೆ ಜಯಮಾಲಾ ಮೇಡಂಗೆ ಮಂತ್ರಿಗಿರಿ ಸಿಕ್ಕಿರೋದೂ ಅಷ್ಟೇ ದಿಗ್ಬ್ರಾಂತಿಯ ವಿಷಯವಾಗಿದೆ. ಯಾಕೆಂದರೆ ಯಾರೊಬ್ಬರೂ ಜಯಮಾಲಾ ಮಿನಿಸ್ಟರ್ ಆಗಲಿದ್ದಾರೆ ಅಂತ ಎಣಿಸಿರಲಿಲ್ಲ. ಮಹಿಳಾ ಕೋಟಾದ ಪ್ರಶ್ನೆ ಬಂದಾಗಲೂ ಡಿಕೇಶಿ ಬಳಗದ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಮರಾಠಾ ಬ್ರ್ಯಾಂಡಿನ ಖಾನಾಪುರದ ಅಂಜಲಿ ನಿಂಬಾಳ್ಕರ್ ನಡುವೆಯೇ ಹಗ್ಗಜಗ್ಗಾಟ ನಡೆದಿತ್ತು. ಪಾಪದ ಮೋಟಮ್ಮ ನನ್ನನ್ನ ಮಂತ್ರಿ ಮಾಡಿ ಅಂತ ಕೇಳಿದಾಗಲೂ `ಏಯ್ ಸುಮ್ನೇ ಇರಮ್ಮ, ಗೆದ್ದ ಶಾಸಕರನ್ನೇ ಬಿಜೆಪಿಯವರ ಬಕಾಸುರ ಬಾಯಿಂದ ಕಾಪಾಡಿಕೊಳ್ಳಲು ಹೆಣಗಾಡ್ತಿದೀವಿ. ಹಾಗಾಗಿ ಅವ್ರನ್ನ ತೃಪ್ತಿ ಪಡಿಸ್ಲಿಕ್ಕೇ ಸಾಕುಸಾಕಾಗಿ ಹೋಗ್ತಿದೆ. ಅದಕ್ಕೋಸ್ಕರ ಈ ಸಲ ಎಂಎಲ್‍ಸಿಗಳಿಗೆ ಮಂತ್ರಿ ಮಾಡುವ ಪ್ರಸ್ತಾಪ ನಮ್ಮ ಮುಂದಿಲ್ಲ. ನಂತ್ರ ನೋಡೋಣ’ ಅನ್ನೋ ಉತ್ತರ ಬಿಸಾಕಿದ ದಿಲ್ಲಿ ದಲ್ಲಾಳಿಗಳು ಆಯಮ್ಮನನ್ನು ಗದರಿಕೊಂಡಿದ್ದರಂತೆ.
ಆದರೆ ಕೊನೇ ಘಳಿಗೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್‍ರನ್ನು ಹಿಂದಿಕ್ಕಿದ್ದಲ್ಲದೇ, ಎಂಎಲ್‍ಸಿಗಳಿಗೆ ಮಂತ್ರಿಭಾಗ್ಯ ಇಲ್ಲ ಎಂಬ ಅಡ್ಡಗೋಡೆಯನ್ನೂ ಜಿಗಿದುಬಂದ ಜಯಮಾಲ ಮೇಡಂ ಮಂತ್ರಿಣಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಮಂತ್ರಿಗಿರಿ ಮಿಸ್ ಮಾಡಿಕೊಂಡ `ಪುಣ್ಯಾತ್ಮ’ರು ಅಂಟಿಸುವ `ನಿಷ್ಠಾವಂತರಿಗೆ ಬೆಲೆ ಇಲ್ಲದಂತಾಗಿದೆ. ಪಕ್ಷಕ್ಕೆ ದುಡಿದವರಿಗೆ ಸ್ಥಾನ ಕೊಡದೆ, ಬಕೇಟು ಹಿಡಿದ ಲಾಬಿ ಗಿರಾಕಿಗಳನ್ನು ಮಂತ್ರಿ ಮಾಡಿದ್ದಾರೆ. ನನ್ನ ಬೆಂಬಲಿಗರ ಜೊತೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರ್ತೀನಿ’ ಅನ್ನೋ ಠುಸ್ ಪಟಾಕಿಗೆ ಪ್ರತಿಯಾಗಿ ಮಂತ್ರಿಗಿರಿ ಸಿಕ್ಕ `ಮಹಾತ್ಮ’ರು `ನನ್ನ ನಿಷ್ಠೆ ನೋಡಿ ಪಕ್ಷ ಈ ಸ್ಥಾನ ನೀಡಿದೆ. ನಾನು ಸಚಿವ ಸ್ಥಾನಕ್ಕೆ ಲಾಬಿ ಮಾಡಿದವನೇ/ಳೇ ಅಲ್ಲ. ನನ್ನ ಗೆಲ್ಲಿಸಿದ ಜನರ ಸೇವೆಗೆ ಇದನ್ನು ಸದುಪಯೋಗ ಮಾಡಿಕೊಳ್ತೀನಿ’ ಅನ್ನೋ ಢಂಢಂ ಪಟಾಕಿ ಅಂಟಿಸೋದು ಸಹಜ. ಜಮಯಾಲ ಮೇಡಂ ಕೂಡಾ ಅಂತದ್ದೇ ಒಂದು ಢಂಢಂ ಪಟಾಕಿ ಅಂಟಿಸಿದ್ದಾರಾದರು ಅವರ ಮಂತ್ರಿಗಿರಿಯ ಹಿಂದೆ ಒಂದು ಪೊಲಿಟಿಕಲ್ ಲಾಬಿ ಇದ್ದೇ ಇದೆ ಅನ್ನೋದು ಮಾತ್ರ ಸುಳ್ಳಲ್ಲ.
ಬಣ್ಣದ ಲೋಕದಿಂದ ಬಂದ ಬೇರೆಬೇರೆ ಪಾರ್ಟ್‍ಟೈಂ ರಾಜಕಾರಣಿಗಳಿಗೆ ಹೋಲಿಸಿದರೆ ಜಯಮಾಲ ಮೇಡಮ್ಮು ಹೆಚ್ಚು ದಕ್ಷ, ದಿಟ್ಟ ರಾಜಕಾರಣಿ ಅನ್ನೋದ್ರಲ್ಲಿ ಸಂಶಯವಿಲ್ಲ. ಆದರೆ, ಇರೋ ಒಂದು ರೊಟ್ಟಿಯನ್ನೇ ಹರಿದು, ಹಸಿವಿನಿಂದ ರಂಪಾಟ ಮಾಡುತ್ತಿರುವ ತನ್ನ ಸಂತಾನ ಸೈನ್ಯಕ್ಕೆ ಹಂಚಬೇಕಾದ ನಿಕೃಷ್ಟ ಬರಗಾಲಕ್ಕೆ ಸಿಲುಕಿರುವ ಕಾಂಗ್ರೆಸ್ ಅನ್ನೋ ಶತಮಾನದ ಪಾರ್ಟಿ ಯಾವ ಲಾಬಿಯೂ ಇಲ್ಲದೆ, ದಕ್ಷತೆಯ ಮೈಲೇಜಿನ ಮೇಲೆ ಜಯಮಾಲರನ್ನು ಮಂತ್ರಿ ಮಾಡುತ್ತೆ ಅನ್ನೋದನ್ನು ನಂಬಲು ಕಷ್ಟ; ಅದೂ, ಮ್ಯಾನ್ ಆಫ್ ದಿ ಮ್ಯಾಚ್ ಡಿಕೇಶಿ ಬೆಟಾಲಿಯನ್ನಿನ ವಿಕೆಟನ್ನೇ ರನ್‍ಔಟ್ ಮಾಡಿಸಿ! ಜಯಮಾಲರನ್ನು ಮಂತ್ರಿ ಮಾಡಲೇಬೇಕು ಅಂತ ಪಟ್ಟು ಹಿಡಿದು, ಲಾಬಿ ಮಾಡಿದ್ದು ಮಾಜಿ ಸಿಎಂ ಸಿದ್ರಾಮಯ್ಯನವರು ಅನ್ನೋ ಮಾತುಗಳು ಕಾಂಗ್ರೆಸ್ ಪಡಸಾಲೆಯಿಂದಲೇ ಕೇಳಿಬರುತ್ತಿವೆ. ಜಯಮಾಲ ಮೊದಲಿನಿಂದಲೂ ಸಿದ್ರಾಮಯ್ಯನವರ ಅತ್ಯಾಪ್ತ ವಲಯದ ರಾಜಕೀಯ ಪಟು. ಸಿದ್ದು ಸಿಎಂ ಆಗಿದ್ದಾಗ, ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಕುರಿತು ಅಧ್ಯಯನ ನಡೆಸಲು 16 ಜನರ ಒಂದು ಸಮಿತಿ ರಚಿಸಿದ್ದರು. ಆ ಸಮಿತಿಗೆ ಅಧ್ಯಕ್ಷೆಯನ್ನಾಗಿ ಸಿದ್ದು ಆಯ್ಕೆ ಮಾಡಿದ್ದು ಇದೇ ಜಯಮಾಲ ಮೇಡಂರನ್ನು. ಇನ್ನು ಮೊನ್ನೆಯ ಎಲೆಕ್ಷನ್ ವೇಳೆ, ಸಿದ್ದುವಿಗೆ ಚಾಮುಂಡೇಶ್ವರಿಯಲ್ಲಿ ಕಂಟಕವಿರುವ ಮುನ್ಸೂಚನೆ ಸಿಕ್ಕಾಗ ಜಯಮಾಲ ಮೇಡಂ, ಒಂದು ಕಾಲದ ಬಿಜೆಪಿ ಒಡನಾಡಿ ಮುಖ್ಯಮಂತ್ರಿ ಚಂದ್ರುರಂತಹ ಸಹೋದ್ಯೋಗಿಯನ್ನೇ ಕರಕೊಂಡು ಬಂದು ಸಿದ್ದು ಪರ ಅದ್ದೂರಿ ಪ್ರಚಾರ ಮಾಡಿದ್ದರು. ಅಷ್ಟರಮಟ್ಟಿಗೆ ಅವರಿಬ್ಬರ ನಡುವೆ ಆಪ್ತತೆ ಇದೆ, ಅಭಿಮಾನವಿದೆ. ಸಿದ್ದು, ಜಯಮಾಲರ ಮೇಲಿಟ್ಟಿರುವ ಆ ಅಭಿಮಾನವೇ ಇವತ್ತು ಅವರನ್ನು ಮಂತ್ರಿ ಮಾಡಿದೆ. ಅಂದಹಾಗೆ, ಸಿದ್ದು ಬಗ್ಗೆ ಜಯಮಾಲ ಮೇಡಂಗೆ ಅಭಿಮಾನ ತುಂಬಿ ಬಂದು, ಅಂತರಾಳದಿಂದ ಹೆಮ್ಮೆ ಎನಿಸಿದಾಗ ಏನಂತ ಹೊಗಳ್ತಾರೆ ಗೊತ್ತುಂಟಾ, `ನಂ ಸಿದ್ರಾಮಯ್ಯನೋರು ಗಂಡು ಹುಲಿ ಕಣ್ರೀ!’.
ಸಂಪುಟ ರಚನೆಯಲ್ಲಿ ಸಿದ್ರಾಮಯ್ಯರನ್ನು ಹೈಕಮಾಂಡ್ ಮೂಲೆಗುಂಪು ಮಾಡಿದೆ, ಅವರ ಆಪ್ತರಿಗೆ ಸಚಿವಗಿರಿ ತಪ್ಪಿಸಲಾಗಿದೆ ಅಂತ ಬೊಬ್ಬಿಡುವ ಖಾಲಿ ಡಬ್ಬಗಳಿಗೆ ಜಯಮಾಲ ಆಯ್ಕೆಯೇ ಒಂದು ದೊಡ್ಡ ಉತ್ತರ. ಕಾಂಗ್ರೆಸ್‍ನೊಳಗೆ ಸಿದ್ದು ಈಗಲೂ ಡಿಗ್ನಿಫೈಡ್ ರೋಲ್ ನಿಭಾಯಿಸುತ್ತಿದ್ದಾರೆ ಅನ್ನೋದಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್‍ರನ್ನ ಓವರ್‍ಟೇಕ್ ಮಾಡಿ ಜಯಮಾಲ ಮಂತ್ರಿಯಾಗಿರೋದು ಸಾಕ್ಷಿ. ಇದೆಲ್ಲ ಆಯ್ಕೆ ಹಿಂದಿನ ಕಸರತ್ತಾಯ್ತು. ಇನ್ನು ದಕ್ಷತೆ ವಿಚಾರಕ್ಕೆ ಬಂದರೆ, ಈ ಸಮ್ಮಿಶ್ರ ಸಂಪುಟದಲ್ಲಿರುವ ಕೆಲವೇ ಕೆಲವು ಅರ್ಹ ಮಂತ್ರಿಗಳಲ್ಲಿ ಜಯಮಾಲ ಕೂಡಾ ಒಬ್ಬರು ಅನ್ನೋದ್ರಲ್ಲಿ ತಪ್ಪಿಲ್ಲ. ಸಿದ್ದು ಲಾಬಿಯಿಂದ ಸಿಕ್ಕಿದೆಯೋ, ಬಿಲ್ಲವ ಕೋಟಾದಡಿ ದಕ್ಕಿದೆಯೋ, ಒಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಒಬ್ಬ ಸಮರ್ಥ ಸಾರಥಿಯೇ ಸಿಕ್ಕಂತಾಗಿದೆ. ಯಾಕೆಂದರೆ ಜಯಮಾಲ ಗ್ರಾಮೀಣ ಮಹಿಳೆಯರ ಪುನರ್ವಸತಿ ವಿಷಯದ ಮೇಲೆ ಅಧ್ಯಯನ ಮಾಡಿಯೇ ಡಾಕ್ಟರೇಟ್ ಪದವಿ ಪಡೆದುಕೊಂಡಂತವರು. ಮೊದಲೇ ಹೇಳಿದಂತೆ ಕಳೆದ ಸರ್ಕಾರದಲ್ಲಿ ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಕುರಿತು ಅಧ್ಯಯನ ನಡೆಸಿದ ಸಮಿತಿಯ ಅಧ್ಯಕ್ಷೆಯಾಗಿಯೂ ಮಹಿಳಾ ಸವಾಲುಗಳನ್ನು ಕಂಡ ಅನುಭವವಿದೆ. ಈ ಹಿಂದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆಯಾಗಿ ಕನ್ನಡ ಸಿನಿರಂಗದ ಬಿಕ್ಕಟ್ಟುಗಳನ್ನು ಬಗೆಹರಿಸಿದ ಗಟ್ಟಿತನವಿರುವ ಜಯಮಾಲರಿಗೆ ಮಂತ್ರಿಯಾಗುವ ಸಾಮಥ್ರ್ಯ ಉಳಿದ ಬಣ್ಣದ ಮಂದಿಗಿಂತ ಹೆಚ್ಚಿದೆ ಅನ್ನೋದ್ರಲ್ಲಿ ತಪ್ಪಿಲ್ಲ. ಅಂದಹಾಗೆ, 1993ರಲ್ಲಿ ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟ ಘಳಿಗೆಯಿಂದ ಇಲ್ಲಿಯವರೆಗು ಕಾಂಗ್ರೆಸ್‍ನಲ್ಲೇ ಗುರುತಿಸಿಕೊಂಡು ಬಂದಿದ್ದಾರೆ. ಇತರರಂತೆ ಪಕ್ಷಾಂತರ ಮಾಡಿದವರಲ್ಲ.
ತನ್ನ 13ನೇ ವಯಸ್ಸಿಗೇ ಬಣ್ಣ ಹಚ್ಚಿ, 16ನೇ ವಯಸ್ಸಿಗೆ ಡಾ.ರಾಜ್ ಎದುರು ಪ್ರೇಮದ ಕಾಣಿಕೆಯಲ್ಲಿ ನಾಯಕಿಯಾಗಿ ಮಿಂಚಿದ ಈ ಗಿರಿಕನ್ಯೆ ತನ್ನ ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ಏಳುಬೀಳು ಕಂಡುಬಂದಂತವರು. ಪ್ರತಿಭಾವಂತ ನಟನಾಗಿದ್ದರೂ, ತನ್ನ ಚಟಗಳಿಗೆ ಮಿತಿ ಹೇರಿಕೊಳ್ಳದೆ ಮರೆಯಾಗಿ ಹೋದ ಟೈಗರ್ ಪ್ರಭಾಕರ್ ಜೊತೆ ಜಯಮಾಲ ಇಟ್ಟ ಮೊದಲ ದಾಂಪತ್ಯ ದೀರ್ಘಕಾಲ ಉಳಿಯಲಿಲ್ಲ. ಯಾವ ಮುಲಾಜುಗಳಿಗೂ ಕಟ್ಟುಬೀಳದೆ ಡೈವೋರ್ಸ್ ಪಡೆದು ಆ ದಾಂಪತ್ಯದಿಂದ ಹೊರಬಂದ ಅವರು ನಂತರ ಛಾಯಾಗ್ರಾಹಕ ರಾಮಚಂದ್ರರವರನ್ನು ಮದುವೆಯಾಗಿ ಮತ್ತೊಮ್ಮೆ ದಿಟ್ಟತೆ ತೋರಿದ್ದರು. ಮಹಿಳೆಯರಿಗೆ ಪ್ರವೇಶವಿಲ್ಲದ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ್ದ ವಿವಾದ ಭುಗಿಲೆದ್ದಾಗಲೂ ಜಯಮಾಲ ಬಲು ದಿಟ್ಟತೆಯಿಂದಲೇ ಎದುರಿಸಿದ್ದರು. ಕಮರ್ಷಿಯಲ್ ಚಿತ್ರಗಳಲ್ಲಿ ಹೀರೋಯಿನ್ ಆಗಿ ಮಿಂಚುತ್ತಲೇ `ತಾಯಿ ಸಾಹೇಬ’ದಂತಹ ರಾಷ್ಟ್ರಪ್ರಶಸ್ತಿ ವಿಜೇತ ಕಲಾತ್ಮಕ ಚಿತ್ರವನ್ನೂ ನಿರ್ಮಿಸಿ ಸೈ ಅನ್ನಿಸಿಕೊಂಡಿದ್ದ ಅವರು ಮಹಿಳಾ ಕಲ್ಯಾಣ ಹಾಗೂ ಕನ್ನಡ, ಸಂಸ್ಕøತಿ ಇಲಾಖೆಗಳಿಗೆ ನ್ಯಾಯ ಸಲ್ಲಿಸುತ್ತಾರೆಂಬ ವಿಶ್ವಾಸವಿದೆ. ಕಾದು ನೋಡಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಪೊಲೀಸರನ್ನು ನಿಯಂತ್ರಿಸದಿದ್ದರೆ ಜರ್ಮನಿಯ ನಾಜಿಗಳಂತೆ ಆಗಬಹುದು’: ದಲಿತ ವ್ಯಕ್ತಿಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಪಾಟ್ನಾ ಹೈಕೋರ್ಟ್ ಕಳವಳ

ದಲಿತ ವ್ಯಕ್ತಿಯೊಬ್ಬರ ಜಾತಿ ತಿಳಿದ ನಂತರ ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಬಿಹಾರದ ಮಾಜಿ ಪೊಲೀಸ್ ಅಧಿಕಾರಿಯ ವಿರುದ್ಧ ತಕ್ಷಣವೇ ಎಫ್‌ಐಆರ್ (FIR) ದಾಖಲಿಸುವಂತೆ ಪಾಟ್ನಾ ಹೈಕೋರ್ಟ್ ನಿರ್ದೇಶಿಸಿದೆ....

“ಎಷ್ಟೊಂದು ದುರಹಂಕಾರ!”: ಜೆ.ಪಿ.ನಡ್ಡಾ ಹೇಳಿಕೆಗೆ ಕಪಿಲ್ ಸಿಬಲ್ ತೀವ್ರ ಆಕ್ಷೇಪ; ಪ್ರತಿಭಟನಾನಿರತ ಸಿಜೆಪಿ ಬೆಂಬಲಿಸಿ ವೀಡಿಯೋ ಸಂದೇಶ

ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಕ್ರಾಂತಿಕಾರಿ ಜಿರಳೆ ಜನತಾ ಪಕ್ಷ (ಸಿಜೆಪಿ) ನಡೆಸುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ನಡೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಕೇಂದ್ರ ಸಚಿವ ಜೆ.ಪಿ....

ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ: ಮೋದಿ-ಅಮಿತ್ ಶಾ ರಾಜೀನಾಮೆಗೆ ರಾಹುಲ್ ಗಾಂಧಿ ಆಗ್ರಹ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ 'ಸಂಸತ್ ಚಲೋ' ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಕಾಂಗ್ರೆಸ್ ನಾಯಕ ರಾಹುಲ್...

ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಸಿಜೆಪಿ ನಿಯೋಗ; ಮನವಿ ಪತ್ರ ಸಲ್ಲಿಕೆ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ನವದೆಹಲಿಯಲ್ಲಿ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ ಇಂದು ಕೇಂದ್ರ ಸಚಿವ ಜೆಪಿ ನಡ್ಡಾ ಅವರನ್ನು ಸಿಜೆಪಿ ಸದಸ್ಯರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ...

‘ಸಂಸತ್ ಚಲೋ’: ‘ಸೋನಮ್ ವಾಂಗ್ಚುಕ್ ಪತ್ನಿ ಮೇಲೆ ದೆಹಲಿ ಪೊಲೀಸರಿಂದ ಹಲ್ಲೆ’: ವಿದ್ಯಾರ್ಥಿಗಳ ಮೇಲೂ ಲಾಠಿ ಚಾರ್ಜ್  

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಯೋಜಿಸಲಾಗಿದ್ದ ‘ಸಂಸದ್ ಚಲೋ’ ಮೆರವಣಿಗೆಯ ವೇಳೆ ಶಿಕ್ಷಣ ತಜ್ಞ ಹಾಗೂ ಲಡಾಖ್ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಸೇರಿದಂತೆ ಹಲವಾರು ಪ್ರತಿಭಟನಾಕಾರರ ಮೇಲೆ...

ಕನಿಷ್ಠ 20 ಸಾವಿರ ‘ಕಾಕ್ರೋಚ್‌’ಗಳಿಂದ ಸಂಸತ್ತಿಗೆ ಮೆರವಣಿಗೆ; ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ್ – ಅಶ್ರುವಾಯು

ಧರ್ಮೇಂದ್ರ ಪ್ರಧಾನ್ ರಾಜೀನಾಮಗೆ ಒತ್ತಾಯಿಸಿ ಮುಂಗಾರು ಅಧಿವೇಶನದ ಮೊದಲ ದಿನದಂದು ಸಂಸತ್ತಿಗೆ ಮೆರವಣಿಗೆ ನಡೆಸಲು ದೆಹಲಿಯಲ್ಲಿ ಜಮಾಯಿಸಿದ್ದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಾವಿರಾರು ಬೆಂಬಲಿಗರನ್ನು ಚದುರಿಸಲು ದೆಹಲಿ ಪೊಳಿಸರು ಅಶ್ರುವಾಯು ಶೆಲ್‌ಗಳನ್ನು...

ಸಿಜೆಪಿ ಪ್ರತಿಭಟನೆಗೆ ನಡುಗಿದ ಕೇಂದ್ರ ಸರ್ಕಾರ; ತರಾತುರಿಯಲ್ಲಿ ಸಂಸತ್ತಿನ ಗೇಟ್ ಮುಚ್ಚಿದ ಭದ್ರತಾ ಸಿಬ್ಬಂದಿ

ನೀಟ್‌ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ವಿರೋಧಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಹಮ್ಮಿಕೊಂಡಿರುವ ಸಂಸತ್ ಮೆರವಣಿಗೆಗೆ ಕೇಂದ್ರ ಸರ್ಕಾರ...

ಹಕ್ಕುಗಳ ಕಾಯ್ದೆಗೆ 7 ವರ್ಷ: ಕಾಗದದಲ್ಲಷ್ಟೇ ಸಮಾನತೆ, ಉದ್ಯೋಗ ಸಿಗದೆ ಬೀದಿಗೆ ತಳ್ಳಲ್ಪಡುತ್ತಿರುವ ಟ್ರಾನ್ಸ್‌ಜೆಂಡರ್‌ ಸಮುದಾಯ

ಬೆಂಗಳೂರು: ರಾಷ್ಟ್ರೀಯ ಮಟ್ಟದಲ್ಲಿ ‘ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ-2019’ ಜಾರಿಗೆ ಬಂದು ಏಳು ವರ್ಷಗಳು ಕಳೆದಿದ್ದರೂ, ಸಮುದಾಯದ ಆರ್ಥಿಕ ಸಬಲೀಕರಣ ಇನ್ನೂ ಕನಸಾಗಿಯೇ ಉಳಿದಿದೆ. ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ...

ಸಂಸತ್‌ ಚಲೋ: ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ಭಾರೀ ಬೆಂಬಲ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್‌ (NEET) ಪ್ರಶ್ನೆಪತ್ರಿಕೆ ಸೋರಿಕೆ, ಸಾಲು ಸಾಲು ವಿದ್ಯಾರ್ಥಿಗಳ ಆತ್ಮಹತ್ಯೆ ಹಾಗೂ ದೇಶದ ಪರೀಕ್ಷಾ ವ್ಯವಸ್ಥೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಆಯೋಜಿಸಿರುವ...

ಡಿಜಿಟಲೀಕರಣಗೊಂಡ 2002ರ ಮತದಾರರ ಪಟ್ಟಿಯಿಂದ ಬೆಂಗಳೂರಿನ ಮತಗಟ್ಟೆಗಳೇ ಮಾಯ: ಮಾಹಿತಿ ಸಿಗದೆ ಆತಂಕದಲ್ಲಿ ನೂರಾರು ಮತದಾರರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ 2002ರ ಡಿಜಿಟಲೀಕರಣಗೊಂಡ ಮತದಾರರ ಪಟ್ಟಿಯಿಂದ ಇಡೀ ಮತಗಟ್ಟೆಗಳೇ ಕಾಣೆಯಾಗಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರಿಂದಾಗಿ ನೂರಾರು ಮತದಾರರು ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ ಎಂದು...