Homeಮುಖಪುಟ90ರ ದಶಕದ ರಾಜಕೀಯ ಬೆಳವಣಿಗೆಗಳು ಮತ್ತು ರೈತರು

90ರ ದಶಕದ ರಾಜಕೀಯ ಬೆಳವಣಿಗೆಗಳು ಮತ್ತು ರೈತರು

- Advertisement -
- Advertisement -

80ರ ದಶಕದಲ್ಲಿ ಹುಟ್ಟಿ ಅಬ್ಬರಿಸಿದ ರೈತ ಚಳವಳಿಗಳೆಲ್ಲ 90ರ ದಶಕದಲ್ಲಿ ಇಳಿಮುಖವಾಗತೊಡಗಿದವು. ಕರ್ನಾಟಕ ರಾಜ್ಯ ರೈತ ಸಂಘದ ಇಳಿಮುಖವೂ ಈ ಪ್ರಕ್ರಿಯೆಯ ಅವಿಭಾಜ್ಯ ಅಂಗ. 80ರ ದಶಕದಲ್ಲಿ ಈ ಎಲ್ಲ ಚಳವಳಿಗಳ ಹುಟ್ಟನ್ನು 70ರ ದಶಕದ ಬೆಳವಣಿಗೆಗಳ ಹಿನ್ನೆಲೆಯಲ್ಲಿಯೇ ಅರ್ಥೈಸಬೇಕು. ಈ ಚಳವಳಿಗಳ ಬೆಳವಣಿಗೆಯನ್ನು ಅರ್ಥೈಸಲು 80ರ ದಶಕದ ರಾಜಕೀಯ, ಆರ್ಥಿಕ ಹಾಗೂ ಕೃಷಿ ನೀತಿಗಳ ಹಿನ್ನೆಲೆ ಅವಶ್ಯ. ಹಾಗೆಯೇ ಈ ಚಳವಳಿಗಳ ಇಳಿಮುಖವನ್ನೂ 90ರ ದಶಕದ ರಾಜಕೀಯ, ಆರ್ಥಿಕ, ಕೃಷಿ ನೀತಿಗಳು, ಅವುಗಳಿಂದಾಗಿ ರೈತ ಮನಸ್ಥಿತಿಯಲ್ಲಾದ ಬದಲಾವಣೆಯಲ್ಲಿಯೇ
ಅರ್ಥೈಸಿಕೊಳ್ಳುವುದು ಅತ್ಯಗತ್ಯ. ಈ ಚಳವಳಿಗಳ ನಾಯಕರ ವೈಯಕ್ತಿಕ ಗುಣಾವಗುಣಗಳು ಇಳಿಮುಖತೆಗೆ ಕೊಡುಗೆ ನೀಡಿವೆ. ಆದರೆ ಈ ನಾಯಕರ ವಿಭಿನ್ನ ವ್ಯಕ್ತಿತ್ವ, ವಿಭಿನ್ನ ಗುಣಾವಗುಣಗಳು ಈ ಇಳಿಮುಖವನ್ನು ತಡೆಯಲು ಸಹಾಯವಾಗಲಿಲ್ಲ. ಆದ್ದರಿಂದ ವಸ್ತುನಿಷ್ಠವಾಗಿ ವಿಶ್ಲೇಷಣೆ ಮಾಡಬೇಕಾದರೆ 90ರ ದಶಕದ ಹಿನ್ನೆಲೆ ಅಗತ್ಯ.

ಕರಾಳ ಅಧ್ಯಾಯ

90ರ ದಶಕ ದೇಶದ ಚರಿತ್ರೆಯಲ್ಲಿ ಒಂದು ಬಹು ದೊಡ್ಡ ಕರಾಳ ಅಧ್ಯಾಯ. ಈ ದಶಕದ ಆರಂಭದಲ್ಲೇ ಅತಂತ್ರದ ಚಂದ್ರಶೇಖರ್ ಸರ್ಕಾರ ರಿಸರ್ವ್ ಬ್ಯಾಂಕ್ ಸುಪರ್ದಿನಲ್ಲಿದ್ದ ಚಿನ್ನವನ್ನು ತರಾತುರಿಯಲ್ಲಿ ಅಡವಿಟ್ಟ ದುರ್ನೀತಿಗೆ ನಾಂದಿ ಹಾಡಿದ್ದು ಮತ್ತು ರಾಜೀವ್ ಗಾಂಧಿಯ ಕೊಲೆ ಎಂಬ ದುರ್ಘಟನೆ ನಡೆದದ್ದು. ನಂತರದಲ್ಲಿ ಒಂದು ಕಡೆ ಮತ್ತೆ ದೊಡ್ಡ ಮೊತ್ತದ ಐಎಂಎಫ್ ಸಾಲ, ಭಾರತದ ಆರ್ಥಿಕ ಸಾರ್ವಭೌಮತ್ವಕ್ಕೆ ಧಕ್ಕೆ, ದೇಶದ ಕೃಷಿ, ಕೈಗಾರಿಕೆಗಳಿಗೆ ವಿದೇಶಿ ಆಮದುಗಳಿಂದ ರಕ್ಷಣೆ ಎಂಬ ಕೋಟೆಯ ನಾಶ, ಮತ್ತೊಂದು ಕಡೆ ಬಾಬರಿ ಮಸೀದಿಯ ನಾಶದೊಂದಿಗೆ ದೇಶದ ಪ್ರಜಾಪ್ರಭುತ್ವಕ್ಕೆ ದೊಡ್ಡ ಆಘಾತ, ಕೋಮು ದಂಗೆಗಳು ಮತ್ತು ಭಯೋತ್ಪಾದಕ ಹತ್ಯೆಗಳ ಸರಮಾಲೆ.

ಮೊಟ್ಟಮೊದಲ ಬಿಜೆಪಿ ಸರ್ಕಾರ ರಚನೆ. ಸ್ವಾತಂತ್ರ್ಯ ಸಮಯದ ಕೋಮುದಂಗೆಯ ಸಾವುಗಳ ಭೀಕರತೆಯನ್ನು ಮತ್ತೆ ನೆನಪಿಗೆ ತಂದ ಗುಜರಾತ್ ನರಮೇಧಕ್ಕೆ ಅಡಿಪಾಯ. ಈ ದಶಕದಲ್ಲಿಯೇ ಪ್ರಾದೇಶಿಕ ಪಕ್ಷಗಳು ಹಲವು ರಾಜ್ಯಗಳಲ್ಲಿ ಗೆದ್ದು ತಮ್ಮ ರಾಜಕೀಯ ಪ್ರಭಾವವನ್ನು ಹೆಚ್ಚಿಸಿಕೊಂಡವು. ಅವು ಕೇಂದ್ರದ ಸಂಯುಕ್ತ ರಂಗ ಸರ್ಕಾರದಲ್ಲಿ ಪ್ರಧಾನ ಪಾತ್ರ ವಹಿಸಿದವು.

ಜಾಗತಿಕ ವಿದ್ಯಮಾನಗಳು

ಜಾಗತೀಕರಣ ಎಂದಕೂಡಲೇ ಜಗತ್ತಿನ ವಿದ್ಯಮಾನಗಳ ಮುಖ್ಯ ಪಾತ್ರ ಮತ್ತು ಅದರ ಜೊತೆಗೆ ಹೆಣೆದುಕೊಂಡ ಪರಿಣಾಮಗಳು ಮುಖ್ಯವಾಗುತ್ತವೆ. ಈ ಹಿನ್ನೆಲೆಯಲ್ಲಿ ಅಂದಿನ ವಿಶ್ವಮಟ್ಟದ ಬೆಳವಣಿಗೆಗಳನ್ನು ಗಮನಿಸಬೇಕು.

ಜಾಗತೀಕರಣದ ಆಘಾತಕ್ಕೆ ತುತ್ತಾದ ದೇಶ ಕೇವಲ ಭಾರತ ಮಾತ್ರವೇ ಆಗಿರಲಿಲ್ಲ. ಮೂರನೇ ಜಗತ್ತಿನ ಹಲವು ದೇಶಗಳು ಆರ್ಥಿಕ ಬಿಕ್ಕಟ್ಟಿನೊಳಗೆ ಸಿಲುಕಿ ವಿಲವಿಲನೆ ಒದ್ದಾಡಲಾರಂಭಿಸಿದವು. ಅಮೆರಿಕ ಮತ್ತು ಯುರೋಪಿನ ಸಾಮ್ರಾಜ್ಯಶಾಹಿ ದೇಶಗಳೊಡನೆ ಮೂರನೇ ದೇಶಗಳ ವಾಣಿಜ್ಯ ವ್ಯವಹಾರಗಳಲ್ಲಿ 80ರ ದಶಕದಲ್ಲಿಯೇ ಆರಂಭವಾದ ಬಹು ದೊಡ್ಡ ಅಸಮಾನತೆಯೇ ಇದಕ್ಕೆ ಮೂಲ ಕಾರಣ.

ಅಮೆರಿಕ ಮೊದಲಾದ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದ ಕೈಗಾರಿಕೆ ಹಾಗೂ ಹೊಸ ತಂತ್ರಜ್ಞಾನದ ವಸ್ತುಗಳ ಬೆಲೆ ಹೆಚ್ಚಾಯಿತು. ಮೂರನೇ ಜಗತ್ತಿನ ಕೃಷಿ, ಗಣಿ ಮತ್ತು ಪಾರಂಪರಿಕ ಕುಶಲ ಕರ್ಮದ ಉತ್ಪನ್ನಗಳ ಬೆಲೆಯನ್ನು ಕುಗ್ಗಿಸಲಾಯಿತು. ಇದರ ಪರಿಣಾಮ ಮೂರನೇ ಜಗತ್ತಿನ ದೇಶಗಳಿಗೆ ವಿದೇಶಿ ವಿನಿಮಯದ ಕೊರತೆಯಾಗಿ ಅವು ಭಾರತದಂತೆಯೇ ಐಎಂಎಫ್ ಕಡೆಗೆ ಸಾಲಕ್ಕೆ ಕೈ ಚಾಚಿದವು. ಅವುಗಳ ಈ ದುಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಮೂರನೇ ಜಗತ್ತಿನ ದೇಶಗಳ ಮೇಲೆ ಒಂದಾದ ಮೇಲೊಂದರಂತೆ ಜಾಗತೀಕರಣದ ಷರತ್ತುಗಳನ್ನು ಹೇರಲಾಯಿತು.

ಇದೇ ಸಮಯದಲ್ಲಿ 80ರ ದಶಕದ ಕೊನೆಯಿಂದ ಆರಂಭಿಸಿ 1991ರವರೆಗೆ ಸೋವಿಯತ್ ರಷ್ಯಾವೂ ಸೇರಿದಂತೆ ಸಮಾಜವಾದಿ ದೇಶಗಳು ಕುಸಿದು ಹೋದವು. ಅಮೆರಿಕ ಮತ್ತು ಯುರೋಪಿನ ಬೃಹತ್ ಕಾರ್ಪೊರೇಟ್‌ಗಳು ಈ ದೇಶಗಳ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡು ಬಲಕಾಯಿಸಿದವು. ವಿಶ್ವದಲ್ಲಿ ಸಾಮ್ರಾಜ್ಯಶಾಹಿ ದೇಶಗಳಿಗೆ ಎದುರಾಳಿಗಳೇ ಇಲ್ಲದಂತಾಯಿತು. ಸಾರ್ವಜನಿಕ ರಂಗ ಪ್ರಧಾನತೆಯ ಕೈಗಾರಿಕೆ, ಬ್ಯಾಂಕುಗಳು, ವಿಮೆ, ಶಿಕ್ಷಣ, ಆರೋಗ್ಯ, ಸಾರಿಗೆ, ಸಂಚಾರ ವ್ಯವಸ್ಥೆಯನ್ನು ರೂಪಿಸಿದ್ದ ಸಮಾಜವಾದಿ ದೇಶಗಳ ಕುಸಿತ ಇಡೀ ವಿಶ್ವದಲ್ಲಿ ಖಾಸಗಿ ಶ್ರೇಷ್ಠತೆಯನ್ನು ಒಂದು ಪ್ರಬಲ ಸಿದ್ಧಾಂತವಾಗಿ ಪ್ರತಿಪಾದಿಸಲು ಹಾಗೂ ಹೇರಲು ನೆಪವಾಯಿತು. ಕಾರ್ಪೊರೆಟ್‌ಗಳು ತಮ್ಮ ಮನಸ್ಸಿಗೆ ಬಂದಂತೆ ವ್ಯವಹಾರ ನಡೆಸುವ ಸ್ವಾತಂತ್ರ್ಯವನ್ನು ಮೊಟಕು ಮಾಡಿ ಜನರ ಕಲ್ಯಾಣದ ನಿರ್ದಿಷ್ಟ ಗುರಿಗಳಿಗನುಸಾರವಾಗಿ ರೂಪಿಸಿದ ಯೋಜನೆಗಳ ಅಧೀನದಲ್ಲಿ ತಮ್ಮ ವ್ಯವಹಾರ ನಡೆಸಬೇಕಾದ ಅನಿವಾರ್ಯತೆಯನ್ನು ಕಿತ್ತುಹಾಕಿತು.

ಈ ಅವಕಾಶವನ್ನು ಬಳಸಿಕೊಂಡ ಅಮೆರಿಕ ಮೂರನೇ ಜಗತ್ತಿನ ಮೇಲೆ ಆರ್ಥಿಕ ಹಿಡಿತ ಪಡೆಯುವುದು ಮಾತ್ರವಲ್ಲದೆ ಅವುಗಳನ್ನು ಅಧೀನಮಾಡಿಕೊಳ್ಳುವ ದುಷ್ಟ ನೀತಿಗೆ ಕೈ ಹಾಕಿತು. ಪನಾಮಾ ದೇಶದ ಮೇಲೆ ಆಕ್ರಮಣ, ಇರಾಕ್ ಮೇಲೆ ಆಕ್ರಮಣ ಈ ದಶಕದಲ್ಲಿನ ಜ್ವಲಂತ ಉದಾಹರಣೆಗಳು.

ಮುಂದಿನ ಅವಧಿಯಲ್ಲಿ ಆಫ್ಘಾನಿಸ್ತಾನ, ಲಿಬಿಯಾ ಮತ್ತಿತರ ದೇಶಗಳ ಆಕ್ರಮಣ, ಇನ್ನೂ ಅನೇಕ ದೇಶಗಳಲ್ಲಿ ಸರ್ಕಾರಗಳನ್ನೇ ಉರುಳಿಸುವುದು ಅಮೆರಿಕದ ನೀತಿಯ ಭಾಗವಾಯಿತು. ಅಮೆರಿಕ, ಯುರೋಪಿನ ಕಾರ್ಪೊರೆಟ್‌ಗಳು ಆ ದೇಶಗಳ ಸಂಪತ್ತು, ಕೃಷಿ ಭೂಮಿ ಮತ್ತು ಬೆಳೆಗಳನ್ನು ತಮ್ಮ ಅತಿಲಾಭದ ಗಳಿಕೆಗೆ ಸಾಧನಗಳನ್ನಾಗಿಸಿಕೊಂಡವು.

ರೈತ ಚಳವಳಿಗಳ ಮೇಲೆ ಪರಿಣಾಮ

ಈ ಎಲ್ಲ ಘಟನೆಗಳು 90ರ ದಶಕದಲ್ಲಿ ರೈತ ಚಳವಳಿಗಳ ಮೇಲೆ ಬಹು ದೊಡ್ಡ ಪರಿಣಾಮ ಬೀರಿದವು. ಅಂದಿನಿಂದ ಇಂದಿನವರೆಗೂ ಜನತೆ ಈ ಜಾಗತೀಕರಣ ಮತ್ತು ಕೋಮುದ್ವೇಷದ ನೀತಿಗಳಿಗೆ ಇರುವ ತಮ್ಮ ಅಸಮ್ಮತಿ ಮತ್ತು ವಿರೋಧವನ್ನು, ಹೋರಾಟಗಳು, ಬೃಹತ್ ಮುಷ್ಕರಗಳೂ ಸೇರಿದಂತೆ ಹಲವು ರೀತಿಯಲ್ಲಿ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ತಮ್ಮ ಮತದಾನದ ಹಕ್ಕನ್ನು ಬಳಸಿಕೊಂಡು ಪ್ರತಿ ಚುನಾವಣೆಯ ನಂತರವೂ ಹಿಂದಿನ ಸರ್ಕಾರಗಳನ್ನು ಎರಡು ಬಾರಿಗೆ ಮೀರದಂತೆ ಸೋಲಿಸುತ್ತಾ ಬಂದಿದ್ದಾರೆ. ಆದರೂ, ಈ ಅತೃಪ್ತಿಯ, ಸಿಟ್ಟಿನ ಫಲವಾಗಿ ಅಧಿಕಾರಕ್ಕೆ ಬಂದ ಯಾವುದೇ ಪಕ್ಷ, ಪಕ್ಷಗಳ ಸರ್ಕಾರಗಳು ಭಾರತ ಸರ್ಕಾರದ ಈ ದುರ್ನೀತಿಗಳನ್ನು ಬದಲಾವಣೆ ಮಾಡಲಿಲ್ಲ ಮಾತ್ರವಲ್ಲ, ಈ ಹಾನಿಕರ ನೀತಿಗಳು ಹೆಚ್ಚುಹೆಚ್ಚು ಬಲಗೊಳ್ಳುವಂತೆ ನೋಡಿಕೊಂಡವು. 90ರ ದಶಕ ಮತ್ತು ನಂತರದ ರೈತ ಚಳವಳಿಗಳ ಬಲಹೀನತೆ ಈ ಸಮಸ್ಯೆಗೆ ದೊಡ್ಡ ಕೊಡುಗೆ ಕೊಟ್ಟಿದೆ.

ಈ ದಶಕದಲ್ಲಿ ರಾಜ್ಯದಲ್ಲಿ ಬಂಗಾರಪ್ಪ, ಮೊಯಿಲಿ ನೇತೃತ್ವದ ಕಾಂಗ್ರೆಸ್ ಸರ್ಕಾರಗಳು, ನಂತರ 1994ರಲ್ಲಿ ಕಾಂಗ್ರೆಸ್ ಸೋತು ಜನತಾ ದಳದ ಗೆಲುವು. 94-96ರಲ್ಲಿ ಪ್ರಧಾನ ಮಂತ್ರಿಯಾಗುವವರೆಗೆ ಅಲ್ಪ ಕಾಲದವರೆಗೆ ದೇವೇಗೌಡರ, ನಂತರ ಜೆ.ಎಚ್.ಪಟೇಲರ ಸರ್ಕಾರ. 1999ರಲ್ಲಿ ಮತ್ತೆ ಕಾಂಗ್ರೆಸ್ ಗೆಲುವು, ಎಸ್.ಎಂ.ಕೃಷ್ಣ ಸರ್ಕಾರ ಅಸ್ತಿತ್ವಕ್ಕೆ ಬಂದವು.

ಬಾಬರಿ ಮಸೀದಿ ನಾಶದ ನಂತರದ ಕೋಮು ದಂಗೆಗಳು, ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದ, ಅದರ ಪರಿಹಾರ, ಕಾಂಗ್ರೆಸ್‌ನಲ್ಲಿ ಅತೀವ ಗುಂಪುಗಾರಿಕೆಯಿಂದ ಪದೇಪದೇ ಮುಖ್ಯಮಂತ್ರಿಗಳ ಬದಲಾವಣೆ, ಜನತಾದಳದಲ್ಲಿ ಮತ್ತೆಮತ್ತೆ ಒಡಕಾಗಿ ಉತ್ತರ ಕರ್ನಾಟಕ ಬಿಜೆಪಿಯ ತೆಕ್ಕೆಗೆ ಸರಿದದ್ದು – ಇವೆಲ್ಲ ಗ್ರಾಮೀಣ ಪ್ರದೇಶಗಳಲ್ಲಿ, ರೈತ ಸಮುದಾಯದ ಮನಸ್ಥಿತಿಯಲ್ಲಿ ಆದ ಹಾನಿಕರ ಬದಲಾವಣೆಗೆ ಕಾರಣವಾಯಿತು.

ಈ ಬೆಳವಣಿಗೆಗಳು ಕರ್ನಾಟಕದ ರೈತ ಚಳವಳಿಗಳ ಮೇಲೆ ಗಣನೀಯ ಪರಿಣಾಮ ಬೀರಿವೆ. ಅದೇ ಸಮಯದಲ್ಲಿ ರಾಜ್ಯ ರೈತ ಸಂಘದ ಇಳಿಮುಖ ಬೆಳವಣಿಗೆ ಮತ್ತು ಒಡಕುಗಳು ಈ ಹಾನಿಕರ ಬೆಳವಣಿಗೆಗೆ ಕೊಡುಗೆ ನೀಡಿವೆ.

ಆರ್ಥಿಕ ಸಾರ್ವಭೌಮತೆಯ ನಾಶ

1981ರಲ್ಲಿ ಇಂದಿರಾ ಸರ್ಕಾರ ತೆಗೆದುಕೊಂಡ ಐಎಂಎಫ್ ಸಾಲವೇ 1991ರಲ್ಲಿ ಮತ್ತೆ ಐಎಂಫ್ ಕೈಗೆ ಜುಟ್ಟು ಕೊಟ್ಟ ಸಮಸ್ಯೆಗೆ ಕಾರಣವಾಯಿತು. 500 ಮಿಲಿಯನ್ ಡಾಲರುಗಳಷ್ಟು ಬೃಹತ್ ಮೊತ್ತದ ಸಾಲಕ್ಕೆ ಕೈ ಚಾಚಿಸಲಾಯಿತು. ಇದು ಭಾರತವನ್ನು ವಿಶ್ವದಲ್ಲೇ ಮೂರನೇ ಅತಿ ದೊಡ್ಡ ಸಾಲಗಾರ ದೇಶವನ್ನಾಗಿಸಿತು. 1981ರ ಸಾಲದ ಷರತ್ತುಗಳು ಮತ್ತು ಈ ಸಾಲದ ಷರತ್ತುಗಳು ಮತ್ತು ಅದರ ಪರಿಣಾಮಗಳು ಮುಂದೆ ಕೇವಲ ಮಕ್ಕಳಾಟ ಎಂಬಂತೆ ಆಯಿತು. ಏಕೆಂದರೆ ಇವು ಕೇವಲ ಸಾಲದ ಷರತ್ತುಗಳಾಗಿರದೆ ಇಡೀ ಆರ್ಥಿಕ ಸ್ವಾತಂತ್ರ್ಯ ಮತ್ತು ಸಾರ್ವಭೌಮತೆಗೆ ಕೊಡಲಿ ಪೆಟ್ಟು ಹಾಕಿ ಇದುವರೆಗೂ ಅನುಸರಿಸಿಕೊಂಡು ಬಂದಿದ್ದ ಅರೆಬರೆ ಸಾಮಾಜಿಕ ಕಲ್ಯಾಣ ಕಾರ್ಯಕ್ರಮ ಮತ್ತು ಸಾರ್ವಜನಿಕ ರಂಗದ ಪಾತ್ರವನ್ನು ಕಿತ್ತೆಸೆದು ಜಾಗತೀಕರಣ, ಖಾಸಗೀಕರಣ, ಉದಾರಿಕರಣ ಯುಗವನ್ನೇ ಉದ್ಘಾಟನೆ ಮಾಡಿತು.

ಹೊಸ ಆರ್ಥಿಕ ನೀತಿ, ತೆರೆದ ಬಾಗಿಲ ನೀತಿ ಎಂಬ ಹೆಸರಿನಲ್ಲಿ ಕೈಗಾರಿಕಾ ನೀತಿ, ಕೃಷಿ ನೀತಿ, ಬೀಜನೀತಿ, ಆಮದು ರಫ್ತು ನೀತಿ, ಬ್ಯಾಂಕ್ ನೀತಿ, ತೆರಿಗೆ ನೀತಿ, ವಿದೇಶಿ ಬಂಡವಾಳ ಹೂಡಿಕೆ ನೀತಿ, ಆ ನೀತಿ, ಈ ನೀತಿಗಳನ್ನು ಜಾರಿಗೆ ತರಲಾಯಿತು.

ಎಲ್ಲಕ್ಕಿಂತ ಮೊದಲು ನರಸಿಂಹರಾವ್-ಮನಮೋಹನ ಸಿಂಗ್ ಜೋಡಿ ಕೈಗೊಂಡಿದ್ದು ರೂಪಾಯಿಯ ಅಪಮೌಲ್ಯ. 1991ರಲ್ಲಿ ಮಾಡಿದ ಶೇ.20ರಷ್ಟು ದೊಡ್ಡ ಪ್ರಮಾಣದ ಅಪಮೌಲ್ಯೀಕರಣದ ನಂತರ ಮತ್ತೆ 1992ರಲ್ಲಿ ಮತ್ತೆ ಶೇ.20ರಷ್ಟು ಅಪಮೌಲ್ಯ. ನಂತರ ಗೊತ್ತಿರುವ ಅಥವಾ ಗೊತ್ತಿಲ್ಲದ ಹಾಗೆ ನಿರಂತರ ಅಪಮೌಲ್ಯ.

ಅಪಮೌಲ್ಯವೆಂದರೆ ವಿದೇಶದಿಂದ ಆಮದು ಮಾಡಿಕೊಳ್ಳುವ ವಸ್ತುಗಳು ದುಬಾರಿ, ನಾವು ರಫ್ತು ಮಾಡುವ ವಸ್ತುಗಳು ಅಗ್ಗ. ಮೇಲೆ ಹೇಳಿದಂತೆ ಯಾವ ವಾಣಿಜ್ಯ ಅಸಮಾನತೆಯಿಂದಾಗಿ ಸಾಲಕ್ಕೆ ಸಿಕ್ಕಿಕೊಳ್ಳುವಂತಾಯಿತೋ ಅದನ್ನು ಮತ್ತಷ್ಟು ಉಲ್ಬಣಗೊಳಿಸುವುದು. ಅಷ್ಟೇ ಅಲ್ಲದೆ ದೇಶದ ಒಳಗೆ ವಿಪರೀತ ಬೆಲೆ ಏರಿಕೆ. ರೈತರು ಬೆಳೆದ ಬೆಳೆಗಳು ಅಗ್ಗವಾಗಿ ರೈತರ ದುಡಿಮೆಗೆ ಸಿಗುತ್ತಿದ್ದ ಪ್ರತಿಫಲ ಮತ್ತಷ್ಟು ಕಡಿಮೆಯಾಗುವುದು. ವಿದೇಶಗಳಿಂದ ಆಮದು ಮಾಡಿಕೊಳ್ಳುವ ಯಂತ್ರೋಪಕರಣಗಳು, ರಸಗೊಬ್ಬರ, ಔಷಧಿಗಳು ಇತ್ಯಾದಿಗಳ ಬೆಲೆ ಹೆಚ್ಚುವುದು. ಅದರಿಂದಾಗಿ ಕೃಷಿ ಉತ್ಪಾದನಾ ವೆಚ್ಚ ಹೆಚ್ಚುವುದು.

ಹೊಸ ಕೈಗಾರಿಕಾ ನೀತಿ 1992ರಲ್ಲಿಯೇ ದೇಶದ 34 ಕೈಗಾರಿಕಾ ರಂಗಗಳಲ್ಲಿ ವಿದೇಶಿ ಬಂಡವಾಳಿಗರಿಗೆ ಆಡಳಿತವನ್ನು ಒಪ್ಪಿಸುವಂತೆ ಶೇ.51ರಷ್ಟು ಪಾಲಿಗೆ ವಿದೇಶಿ ಬಂಡವಾಳಕ್ಕೆ ಅನುಮತಿ ನೀಡಿತು. ನೂರಕ್ಕೆ ನೂರರಷ್ಟು ವಿದೇಶಿ ಬಂಡವಾಳಕ್ಕೂ ಅವಕಾಶ ನೀಡುವುದಾಗಿ ಘೋಷಿಸಲಾಯಿತು. ಲೈಸೆನ್ಸ್ ನೀಡಿಕೆ ಪದ್ಧತಿಯನ್ನು ರದ್ದು ಪಡಿಸಲಾಯಿತು.

ಗಣಿ, ಅಣು ವಿದ್ಯುತ್, ರೈಲ್ವೆ, ರಕ್ಷಣಾ ಉತ್ಪಾದನೆಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ರಂಗಗಳ ಸಾರ್ವಜನಿಕ ಕೈಗಾರಿಕೆಗಳನ್ನು ಖಾಸಗೀಕರಣಗೊಳಿಸುವುದು ಅದರ ನೀತಿಯಾಯಿತು. (ಇದು ಆಗಿನ ನೀತಿ. ಈಗ ಇವುಗಳನ್ನೂ ವಿದೇಶಿಗಳಿಗೆ ತೆರೆದಿಡಲಾಗಿದೆ). ಗುತ್ತೇದಾರಿ ನಿಯಂತ್ರಣ ಕಾನೂನು, ವಿದೇಶಿ ವಿನಿಮಯ ನಿಯಂತ್ರಣ ಕಾನೂನುಗಳನ್ನು ಸರಿಸುಮಾರು ಇಲ್ಲವಾಗಿಸಲಾಯಿತು.

ಆಮದು ನಿಷೇಧದ ಪಟ್ಟಿಯಲ್ಲಿದ್ದ ಕೃಷಿ ಫಸಲುಗಳೂ ಸೇರಿದಂತೆ 144 ವಸ್ತುಗಳ ಮೇಲಿನ ನಿಷೇಧವನ್ನು ಕಿತ್ತೆಸೆಯಲಾಯಿತು. ದೇಶದೊಳಗಿನ ಉತ್ಪಾದನೆಗಳಿಗೆ ರಕ್ಷಣೆ ನೀಡಲೆಂದು ವಿಧಿಸಲಾಗಿದ್ದ ಆಮದು ಸುಂಕಗಳನ್ನು ಶೇ.250ರಿಂದ ಶೇ.150ಕ್ಕೆ ಇಳಿಸಲಾಯಿತು. ನಗರಗಳ ಅತಿ ಶ್ರೀಮಂತರಿಗೆ ವಿದೇಶಿ ಆಮದು ಕಾರು, ಟಿವಿ, ಫ್ರಿಜ್ ಮತ್ತು ಇತರ ಅನೇಕ ಶೋಕಿ ವಸ್ತುಗಳು ಅಗ್ಗವಾಗಿ ದೊರೆತು ಖುಷಿಯಾದರು.

ಈ ಎಲ್ಲ ನೀತಿಗಳು ಕೃಷಿಯ ಮೇಲೆ ಹಾನಿಕರ ಪರಿಣಾಮಗಳನ್ನು ಬೀರಿದವು. ಈ ನೀತಿಗಳ ಉರಿಯ ಮೇಲೆ ಮೆಣಸಿನ ಖಾರ ಸವರಿದಂತೆ ವಿಶ್ವ ವಾಣಿಜ್ಯ ಸಂಸ್ಥೆ ಎಂಬ ಹೊಸ ಹೆಸರಿನಲ್ಲಿ ಅಮರಿಕೊಂಡ ಕೃಷಿ ವ್ಯಾಪಾರ ಒಪ್ಪಂದ, ಬೀಜ ಹಕ್ಕು ನಾಶಕ, ಪೇಟೆಂಟ್ ಕಾನೂನು ಇತ್ಯಾದಿಗಳು ಕೃಷಿಕರ ಬದುಕನ್ನು ಹಾಳುಗೆಡವಲಾರಂಭಿಸಿದವು.

ಈ ನೀತಿಗಳ ಬಗ್ಗೆ 80ರ ದಶಕದ ರೈತ ಚಳವಳಿಗಳ ನಾಯಕರು ವಿಭಿನ್ನ ನಿಲುವುಗಳನ್ನು ತಳೆದರು. ಆದರೆ ಈ ನೀತಿಗಳನ್ನು ಬಹಳ ದೃಢವಾಗಿ ವಿರೋಧಿಸಿದ 80ರ ದಶಕದ ರೈತ ಚಳವಳಿಗಳ ನಾಯಕರಲ್ಲಿ ನಂಜುಂಡಸ್ವಾಮಿಯವರು ಮುಖ್ಯರು.

ಈ ನೀತಿಗಳು ಹಾಗೂ ನಂಜುಂಡಸ್ವಾಮಿಯವರು ಇವುಗಳ ವಿರುದ್ಧ ರೂಪಿಸಿದ ಪ್ರತಿಭಟನೆಗಳ ಬಗ್ಗೆ, ರಾಷ್ಟ್ರೀಯ, ಅಂತಾರಾಷ್ಟ್ರೀಯ ರೈತ ಚಳವಳಿಗಳಲ್ಲಿನ ಭಾಗವಹಿಸುವಿಕೆ ಬಗ್ಗೆ ಮುಂದಿನ ವಾರ.

ಜಿ. ಎನ್. ನಾಗರಾಜ್

ಜಿ. ಎನ್. ನಾಗರಾಜ್
ಸರ್ಕಾರಿ ಅಧಿಕಾರಿಯಾಗಿದ್ದ ಜಿ. ಎನ್. ನಾಗರಾಜ್ 80ರ ದಶಕದ ಕರ್ನಾಟಕದ ರೈತ ಬಂಡಾಯದ ಹೊತ್ತಿನಲ್ಲಿ ನೌಕರಿ ಬಿಟ್ಟು ಪೂರ್ಣಾವಧಿ ಸಂಘಟಕರಾದವರು. ಸಿಪಿಎಂ ಪಕ್ಷದ ರಾಜ್ಯ ಮಟ್ಟದ ನಾಯಕರಾಗಿದ್ದಾರೆ. ಆಳವಾದ ಅಧ್ಯಯನ ಮತ್ತು ವಿಶ್ಲೇಷಣೆಯಿಂದ ವಿಚಾರ ಮಂಡಿಸುವವರು.


ಇದನ್ನೂ ಓದಿ: ರೈತ ಹೋರಾಟ; 80-90ರ ದಶಕದ ಬೆಳವಣಿಗೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...