Homeಅಂಕಣಗಳುರಾಜಕಾರಣವನ್ನು ಹೊಲಸು ಮಾಡಿದ ರಾಜಕೀಯ

ರಾಜಕಾರಣವನ್ನು ಹೊಲಸು ಮಾಡಿದ ರಾಜಕೀಯ

- Advertisement -
- Advertisement -

ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಜನರು ತಮ್ಮ ಪ್ರತಿನಿಧಿಗಳನ್ನು ಚುನಾಯಿಸುವುದು ಹಕ್ಕು ಅಥವಾ ಕರ್ತವ್ಯವೆಂದು ಭಾವಿಸುತ್ತಲೇ ಬಂದದ್ದಾರೆ, ಇದಕ್ಕೆ ಅಪವಾದಗಳಿರಲೂ ಸಾಧ್ಯ. ಭಾರತೀಯ ನಾಗರರಿಕರೂ ಸಹ 1952ರಿಂದ ಇದೇ ರೀತಿಯ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅನುಭವವನ್ನು ಪಡೆದಿದ್ದಾರೆ ಮತ್ತು ಸಹಜವಾಗಿಯೇ ಈ ಪ್ರತಿನಿಧಿಗಳು ತಮ್ಮ ಜೀವನವನ್ನು ಹಸನುಗೊಳಿಸುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಾರೆ ಎಂದು ನಂಬುವ ಜನ ಇವರು ಎಂದು ಹೇಳಲಾಗಿದೆ. ಆದರೆ ಅಂದಿನಿಂದ ಇಂದಿನವರೆಗೆ ಅಧಿಕಾರದಲ್ಲಿ ಕುಳಿತಿರುವ ಪಕ್ಷಗಳು, ಅವುಗಳ ನಾಯಕರು ಜನರ ಇಂಥ ನಿರೀಕ್ಷೆಗಳನ್ನು ಎಷ್ಟರ ಮಟ್ಟಿಗೆ ನಿಜವಾಗಿಸಿದ್ದಾರೆ ಎಂಬ ಪ್ರಶ್ನೆ ಮುಖ್ಯವಾಗಿ ಚುನಾವಣೆಗಳು ಎದುರಾದಾಗ ನಮ್ಮ ಮುಂದೆ ನಿಲ್ಲುತ್ತದೆ.
ಆದರೆ ಚುನಾವಣೆ ಎಂಬ ಪ್ರಕ್ರಿಯೆಯೇ ಪ್ರಜಾತಂತ್ರದ ಅತ್ಯಂತ ಪ್ರಮುಖ ಅಂಶ ಎಂದಾಯಿತು. ಕೆಲವು ಬಾರಿ ಚುನಾವಣೆ ನಡೆಸುವುದೇ, ಅದರಲ್ಲಿ ಭಾಗವಹಿಸಿ ಮತ ‘ದಾನ’ ಮಾಡುವುದೇ ಪ್ರಜಾತಂತ್ರ ಎನ್ನುವ ಅತಿರೇಕದ ಮಾತುಗಳೂ ಕೇಳಿಬರುತ್ತಿವೆ. ಭಾರತ ಜಗತ್ತಿನ ಅತಿ ‘ದೊಡ್ಡ’ ಪ್ರಜಾಪ್ರಭುತ್ವ ರಾಷ್ಟ್ರ (ಜನಸಂಖ್ಯೆಯ ದೃಷ್ಟಿಯಿಂದ ಎನ್ನುವ ಮಾತಿನ ಹಿಂದಿನ ಪ್ರೇರಣೆ ಇದೆ) ಆದರೆ ಈ ಮಾತನ್ನು ಹೇಳುವವರು, ಅದನ್ನು ಪ್ರಶ್ನೆ ಮಾಡದೇ ಒಪ್ಪುವವರು ಮರೆಯುವ ಒಂದು ವಿಷಯವೇನೆಂದರೆ ಪ್ರಜಾತಂತ್ರವೆಂದರೆ ಕೇವಲ ಚುನಾವಣೆಗಳನ್ನು ನಡೆಸುವುದಲ್ಲ, ಮತ ಚಲಾಯಿಸುವುದಲ್ಲ, ಬದಲಿಗೆ ಅದು ಸಾಮಾಜಿಕ ಮೌಲ್ಯ ಎಂಬುದು. ನಮ್ಮ ಸಮಾಜ ಇನ್ನೂ ಉಳಿದುಕೊಂಡೇ ಬಂದಿರುವ ಸಾಮಾಜಿಕ, ಆರ್ಥಿಕ ಅಂತರಗಳು, ತಾರತಮ್ಯಗಳು, ಅವುಗಳ ಹೆಸರಿನಲ್ಲಿ ನಡೆಯುವ ದೌರ್ಜನ್ಯಗಳು ಭಾರತವನ್ನು ಒಂದು ಪ್ರಜಾಪ್ರಭುತ್ವ ರಾಷ್ಟ್ರ ಎಂದು ಹೇಳಿ ಹೊರಟವರ ನಾಲಿಗೆಯನ್ನು ಕಟ್ಟಿಹಾಕುತ್ತವೆ. ಹೀಗಿದ್ದೂ, ಈ ಮಾತನ್ನು ಹೇಳಿದ್ದೇವೆಂದರೆ ನಮ್ಮನ್ನು ನಾವು ಮೋಸಗೊಳಿಸಿಕೊಳ್ಳುತ್ತಿದ್ದೇವೆಂದೇ ಹೇಳಬೇಕು.
ರಾಜಕಾರಣವು ‘ಸಾಧ್ಯತೆಗಳ ಕಲೆ’ (ಪಾಲಿಟಿಕ್ಸ್ ಇಸ್ ದ ಆರ್ಟ್ ಆಫ್ ಪಾಸಿಬಲ್) ಎಂದು ಜರ್ಮನಿಯ ಏಕೀಕರಣದ ರೂವಾರಿಯೆಂದೂ, ಉಕ್ಕಿನ ಮನುಷ್ಯನೆಂದೂ ಬಣ್ಣಿಸಲಾದ ಬಿಸ್ಮಾರ್ಕ್ ಹೇಳಿದನೆಂದು ಪ್ರಚಲಿತವಿದೆ. ಅಂದರೆ ರಾಜಕಾರಣದಲ್ಲಿ ತೊಡಗಿರುವವರು ಆದರ್ಶಗಳ ಬೆನ್ನು ಹತ್ತದೆ ತಮ್ಮ ಸಾಮಥ್ರ್ಯ ಹಾಗೂ ಮಿತಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸಾಧ್ಯತೆಗಳನ್ನು ಗುರುತಿಸಿ ಅವುಗಳನ್ನು ಕಾರ್ಯರೂಪಕ್ಕೆ ಇಳಿಸುತ್ತಾರೆ ಎಂಬ ಮಾತಿದು. ಆದರೆ ಆ ಸಾಧ್ಯತೆಗಳು ಎಂಥವು, ಯಾರಿಗೆ ಒಳ್ಳೆಯದನ್ನು ಮಾಡುತ್ತವೆ ಎಂಬುದು ಪ್ರಶ್ನೆ. ಈ ಆಚರಣಯೋಗ್ಯ ಯೋಜನೆಗಳಿಂದಾಗಿ ನಾಯಕರಿಗೆ ಮಾತ್ರ ಲಾಭ ಸಿಗುತ್ತದೋ, ಅಥವಾ ಸಮಾಜದಲ್ಲಿ ಈಗಾಗಲೇ ಸವಲತ್ತುಗಳನ್ನು ಅನುಭವಿಸುವವರು ಉಪಯುಕ್ತರಾಗುತ್ತಾರೋ, ಅಥವಾ ದುರ್ಭರ ಜೀವನವನ್ನು ನಡೆಸುವವರ ಬಾಳು ಹಸನಾಗುತ್ತದೋ ಎನ್ನುವುದರ ಮೇಲೆ ಆ ಸಾಧ್ಯತೆಗಳ ಗುಣಾವಗುಣಗಳನ್ನು ವಿಶ್ಲೇಷಿಸಬೇಕಾಗುತ್ತದೆ.
ಸಮಕಾಲೀನ ರಾಜಕಾರಣವು ರಾಜಕೀಯವಾಗಿರುವ ಬಗೆಯ ಹಿನ್ನೆಲೆಯಲ್ಲಿ ನಮ್ಮ ರಾಜಕೀಯ ಸನ್ನಿವೇಷವನ್ನು ಅರ್ಥಮಾಡಿಕೊಳ್ಳಬಹುದು. ದುರಂತವೆಂದರೆ ಭಾರತದ ಬಹುತೇಕ ರಾಜಕೀಯ ನಾಯಕರು ಈ ಸಾಧ್ಯತೆಗಳನ್ನು ತೀರಾ ವೈಯಕ್ತಿಕ ನೆಲೆಯಲ್ಲಿಯೇ ಸ್ವೀಕರಿಸುತ್ತಿದ್ದಾರೆ. ಹಾಗಾಗಿ ಧನಾತ್ಮಕ ಶಬ್ದವಾದ ‘ರಾಜಕಾರಣ’ ಇಂದು ಋಣಾತ್ಮಕವಾದ ‘ರಾಜಕೀಯ’ವಾಗಿದೆ. ಅದೆಷ್ಟರಮಟ್ಟಿಗೆಂದರೆ ಯಾವನಾದರು ಕುತಂತ್ರಿಯೆಂದರೆ ಅವನು ರಾಜಕೀಯ ಮಾಡುತ್ತಾನೆ ಎಂದು ಹೇಳುವುದು ಸಾಮಾನ್ಯವಾಗಿದೆ.
ಅಧಿಕಾರವನ್ನು ಪಡೆಯಲು ಮತ್ತು ಸಿಕ್ಕ ಅಧಿಕಾರವನ್ನು ಉಳಿಸಿಕೊಳ್ಳಲು ಏನು ಮಾಡಿದರೂ ಸರಿ ಎಂಬುದು ಇಂದು ರಾಜಕಾರಣಿಗಳ ನಡುವೆ ಮಾತ್ರವಲ್ಲ, ಅವರನ್ನು ಚುನಾಯಿಸುವ ಪ್ರಜೆಗಳ ನಡುವೆಯೂ ಒಪ್ಪಿತ ಮೌಲ್ಯವೇ ಆಗಿದೆ. ಹಣ ಸಂಪಾದನೆಗಾಗಿ ಬಂಡವಾಳ ಹೂಡುವಂತೆ ಅಧಿಕಾರ (ಆ ಮೂಲಕ ಹಣ) ಸಂಪಾದನೆಗಾಗಿ ಹಣದ ಹೊಳೆ ಹರಿಸುವುದು ನಮಗೆ ಆಶ್ಚರ್ಯವನ್ನು ಉಂಟುಮಾಡುವುದೇ ಇಲ್ಲ. ಯಾರಾದರೂ ಕೆಲವರು ಹಣವನ್ನು ಖರ್ಚುಮಾಡದೆ ಚುನಾವಣೆಯಲ್ಲಿ ಸ್ಪರ್ಧಿಸಲು ಹೊರಟರೆ ಅಂಥವರನ್ನು ತಲೆಕೆಟ್ಟವರೆಂದೇ ಕರೆಯಲಾಗುವ ಹಂತಕ್ಕೆ ಸಮಾಜ ತಲುಪಿದೆ. ಇಂಥ ಅವನತಿಗೆ ಕಾರಣವೇನು? ಒಂದು ಓಟಿಗೆ ನಿಗಿದಿತ ಮೊತ್ತವನ್ನೋ, ಬೆಳೆ ಬಾಳುವ ವಸ್ತುವನ್ನೋ ನೀಡದಿದ್ದರೆ ಮತ‘ದಾನ’ ಮಾಡುವ ಗೋಜಿಗೆ ಹೋಗದ ಜನರಿದ್ದಾರೆ. ಮತ‘ದಾನ’ಯೆಂಬುದು ವ್ಯವಹಾರವಾಗಿ ‘ಮತ’ವು ಒಂದು ಸರಕಿನ ಸ್ಥಿತಿಯನ್ನು ತಲುಪುವಂತೆ ಮಾಡುವಲ್ಲಿ ಜನನಾಯಕರೆನ್ನಿಸಿಕೊಳ್ಳುವವರ ಪಾತ್ರವೇ ದೊಡ್ಡದು. ಆಗ ಮತ ಪವಿತ್ರವೆಂದೂ ಮತ‘ದಾನ’ ಕರ್ತವ್ಯವೆಂದೂ, ಆ ಕರ್ತವ್ಯವನ್ನೇ ಮಾಡದಿರುವವರು ಪ್ರಭುತ್ವವನ್ನು ಪ್ರಶ್ನಿಸುವ ಹಕ್ಕನ್ನೇ ಕಳೆದುಕೊಳ್ಳುತ್ತಾರೆಂದೂ ಹೇಳುವುದು ಹುಂಬತನದ ಮಾತುಗಳು ಮಾತ್ರವಾಗುತ್ತವೆ.
ಇನ್ನು ಈ ದೇಶದ ಹಲವು ಮೂಲೆಗಳಲ್ಲಿ ನಡೆಯುವ ಚಳವಳಿಗಳು ಪ್ರಜಾತಂತ್ರವೆಂಬ ಮೌಲ್ಯವನ್ನು ಜನರಲ್ಲಿ ಅರ್ಥಪೂರಿತವಾಗಿ ನೆಡುವಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಿದೆ ಎಂಬುದು ಮತ್ತೊಂದು ಪ್ರಶ್ನೆ. ಚುನಾವಣೆಗಳೇ ಪ್ರಜಾತಂತ್ರ ಎಂಬ ಭ್ರಮೆಯಲ್ಲಿ ಜನ ತೇಲುವಂತೆ ಮಾಡಲು ಜನನಾಯಕರೆನಿಸಿಕೊಳ್ಳುವವರು ಯಾವಾಗಲೂ ಪ್ರಯತ್ನಿಸುತ್ತಲೇ ಇರುವುದರಿಂದ ಈ ಚಳವಳಿಗಳು ಜನರನ್ನು ಆಕರ್ಷಿಸುವುದು ಅಸಾಧ್ಯವಲ್ಲದಿದ್ದರೂ ಕಷ್ಟದ ಮಾತು.
2019ನೇ ಇಸವಿಯಲ್ಲಿ ನಡೆಯುತ್ತಿರುವ ಚುನಾವಣೆಗಳಿಗೆ ಈ ಎಲ್ಲ ಮಾತುಗಳು ಅನ್ವಯವಾಗುತ್ತವೆ. ಇದುವರೆಗೂ ಜನರ ಹೆಸರಿನಲ್ಲಿಯೇ ಸಂವಿಧಾನದ ಸಾಕ್ಷಿಯಾಗಿ ಅಧಿಕಾರವನ್ನು ಅನುಭವಿಸಿದ ಸರ್ಕಾರಗಳ ಸೋಲನ್ನೇ ತನ್ನ ಚಿಮ್ಮುವ ಹಲಗೆಯನ್ನಾಗಿ ಮಾಡಿಕೊಂಡು ಯಶಸ್ಸನ್ನು ಗಳಿಸಿದ ಭಾರತೀಯ ಜನತಾ ಪಕ್ಷ ತನ್ನ ಒಬ್ಬ ನಾಯಕನನ್ನು ಅತಿಮಾನುಷನಂತೆ ಚಿತ್ರಿಸುತ್ತಾ ಇಲ್ಲಿಯವರೆಗೂ ತೋರಿಕೆಗಾಗಿಯಾದರೂ ಕಾಣಿಸಿಕೊಳ್ಳುತ್ತಿದ್ದ ಪ್ರಜಾತಂತ್ರವನ್ನು ಹಾಳುಮಾಡಲು ಹೊರಟಿದೆ. ಸಂಸದೀಯ ಪ್ರಜಾಪ್ರಭುತ್ವ ನಮ್ಮದು ಎಂಬ ಮಾತನ್ನೇ ಮರೆಮಾಚಿ, ಈ ದೇಶದ ಪ್ರಧಾನಿಯನ್ನು ನೇರವಾಗಿ ಚುನಾಯಿಸುತ್ತೇವೆಂದು ಅಥವಾ ಸೋಲಿಸುತ್ತೇವೆಂದು ಜನರು ನಂಬುವಂತೆ, ಹೇಳುವಂತೆ ಆಗಿದೆ. ಆ ಪಕ್ಷ ನಾಯಕರು ತಮ್ಮ ಸೇನಾಪತಿಯನ್ನು ಮುಂದಿಟ್ಟುಕೊಂಡು ಮಾಧ್ಯಮಗಳ ಭಾಷೆಯಲ್ಲಿ ಸಮರಕ್ಕೇ ಹೊರಟಿದ್ದಾರೆ. ಇದೆಲ್ಲಾ ಒಂದು ಮಹಾಯುದ್ಧವೇನೊ ಎಂಬಂತೆ ಇಲ್ಲಿನ ಜನ ಪ್ರೇಕ್ಷಕರಾಗಿದ್ದಾರೆ. ಇನ್ನು ಪ್ರಜಾತಂತ್ರಕ್ಕೇ ಇಲ್ಲಿ ಜಾಗವೆಲ್ಲಿದೆ? ಇಬ್ಬರು ಯೋಧರ ನಡುವೆ ನಡೆಯುವ ಯುದ್ಧದೋಪಾದಿಯಲ್ಲಿ ಈ ಚುನಾವಣೆಗಳು ನಮ್ಮ ಮುಂದೆ ವಿಜೃಂಭಿಸುತ್ತಿವೆ.
ಸರ್ಕಾರದ ಹಲವು ವೈಫಲ್ಯಗಳು, ಸುಳ್ಳುಗಳು, ಅವರ ಕೃಪಾಪೋಷಿತ ಪುಂಡರುಗಳ ದಾಂಧಲೆಗಳು ಢಾಳಾಗಿ ಕಾಣಿಸಿಕೊಳ್ಳುತ್ತಿದ್ದರೂ ಇಲ್ಲಿನ ಮಾಧ್ಯಮ, ಮೇಲ್ವರ್ಗದ ಜನ ಮತ್ತು ನವಉದಾರವಾದಿ ವ್ಯವಸ್ಥೆಯ ಫಲಾನುಭವಿಗಳು ಈ ಎಲ್ಲಾ ವಾಸ್ತವಗಳಿಗೆ ಕಣ್ಣು ಮುಚ್ಚಿದ್ದಾರೆ. ತಮ್ಮ ಎದುರಾಳಿಗಳನ್ನು ಅಂದರೆ ತಮ್ಮ ಮಾತುಗಳನ್ನು ಒಪ್ಪದವರನ್ನು ‘ನಗರದ ನಕ್ಸಲರು’, ದೇಶದ್ರೋಹಿಗಳು, ‘ತುಕಡೆ ತುಕಡೆ’ ಗುಂಪುಗಳು ಮುಂತಾದ ಹೆಸರುಗಳಿಂದ ಕರೆದು, ಅಶ್ಲೀಲ ಭಾಷೆಯಲ್ಲಿ ಟೀಕಿಸಿ ವಿಚಿತ್ರ ಸಂತೋಷವನ್ನು ಅನುಭವಿಸುತ್ತಿದ್ದಾರೆ. ಇಂಥವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದು, ಇತರರ ದನಿ ಅಡಗಿ ಹೋಗುವಷ್ಟು ಗಲಾಟೆ ಮಾಡುತ್ತಾರೆ. ಇಂಥ ಸಂದರ್ಭದಲ್ಲಿ ಹಲವರು ಮೌನಕ್ಕೆ ಶರಣು ಹೋಗಿದ್ದಾರೆ. ಅಸಡ್ಡೆಯಿಂದ, ಹೆದರಿಕೆಯಿಂದ, ನಿರಾಸಕ್ತಿಯಿಂದ.
ಇನ್ನು, ಇಲ್ಲಿನ ವಿರೋಧ ಪಕ್ಷಗಳ ನಡವಳಿಕೆ ಏನು ಪ್ರಶ್ನಾತೀತವಾಗಿ ಉಳಿದಿಲ್ಲ. ತಮ್ಮ ಸಣ್ಣತನಗಳು, ಒಳಜಗಳಗಳು, ಪ್ರತಿಷ್ಠೆಗಳು, ಅಧಿಕಾರದಾಹ ಇವುಗಳಿಂದಲೂ ಸಂಪೂರ್ಣವಾಗಿ ಮುಕ್ತರಾಗದ ಇವರು ಯಾವ ಕ್ಷಣದಲ್ಲಿ ಯಾವ ನಿಲುವು ತಾಳುತ್ತಾರೆ ಎಂಬುದು ಉತ್ತರವಿಲ್ಲದ ಪ್ರಶ್ನೆ. ಇಂಥವರನ್ನು ನಂಬಿ ಇವರ ಕೈಗೆ ಅಧಿಕಾರವನ್ನು ಕೊಡುವುದು ಹೇಗೆ ಎನ್ನುವುದು ಜನಸಾಮಾನ್ಯರ, ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುವವರ ಚಿಂತೆ
ಚುನಾವಣೆಗಳೂ ಪ್ರಜಾತಂತ್ರದ ಒಂದು ಪ್ರಕ್ರಿಯೆ, ಮುಖ್ಯವಾದ ಪ್ರಕ್ರಿಯೆ ಎಂದು ಅರ್ಥಮಾಡಿಕೊಂಡು, ಪ್ರಜಾತಂತ್ರವೆಂದರೆ ಜನರೆಲ್ಲರ ಸಾರ್ಥಕ ಪಾಲುಗೊಳ್ಳುವಿಕೆ ಎಂಬುದನ್ನು ಆಚರಣೆಗೆ ತರುವವರೆಗೂ ನಮ್ಮ ಅತಿ ದೊಡ್ಡ ಪ್ರಜಾತಂತ್ರದ ಈ ಗೊಂದಲಗಳು ಮುಂದುವರೆಯುವಂಥವೇ. ಚಳವಳಿಗಳ ಯಶಸ್ಸಿನ ಬಗ್ಗೆ ಎಷ್ಟೇ ಅನುಮಾಗಳಿರಲಿ, ಅಂತಿಮವಾಗಿ ಜನರನ್ನು ನಿಜವಾದ ಅರ್ಥದಲ್ಲಿ ಪ್ರಜಾತಂತ್ರವಾದಿಗಳನ್ನಾಗಿ ಮಾಡುವಂಥ ಶಕ್ತಿ ಇರುವುದು ಜನಪರ ಚಳವಳಿಗೆ ಮಾತ್ರ ಎನ್ನುವ ಮಾತನ್ನು ನಂಬಿ ಕಾರ್ಯಪ್ರವೃತ್ತರಾಗುವುದೊಂದೇ ಇಲ್ಲಿನ ಪ್ರಜಾತಾಂತ್ರಿಕ ಶಕ್ತಿಗಳಿಗೆ ಉಳಿದಿರುವ ದಾರಿ. ರಾಜಕೀಯದ ಜಾಗದಲ್ಲಿ ರಾಜಕಾರಣವನ್ನು ನಮ್ಮದಾಗಿಸಿಕೊಳ್ಳಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...