Homeಮುಖಪುಟಸುಪ್ರೀಂಕೋರ್ಟಿನ ನ್ಯಾಯಾಂಗ ನಿಂದನೆ ನೋಟೀಸಿಗೆ ವಕೀಲ ಪ್ರಶಾಂತ್ ಭೂಷಣ್ ಸ್ಫೋಟಕ ಉತ್ತರ!

ಸುಪ್ರೀಂಕೋರ್ಟಿನ ನ್ಯಾಯಾಂಗ ನಿಂದನೆ ನೋಟೀಸಿಗೆ ವಕೀಲ ಪ್ರಶಾಂತ್ ಭೂಷಣ್ ಸ್ಫೋಟಕ ಉತ್ತರ!

ದೇಶದಲ್ಲಿ ದಬ್ಬಾಳಿಕೆ ಮತ್ತು ಬಹುಸಂಖ್ಯಾವಾದವು ಆಳವಾಗಿ ಬೇರೂರಿದಾಗ ನ್ಯಾಯಾಲಯವು ಶರಣಾಯಿತು. ನಾಗರಿಕ ಹಕ್ಕುಗಳು ಮತ್ತು ಸಂಸ್ಥೆಗಳ ಮೇಲಿನ ಅತಿರೇಕದ ದಾಳಿಗಳನ್ನು ಯಾವುದೇ ಉತ್ತರದಾಯಿತ್ವವೇ ಇಲ್ಲದೆ ಸುಪ್ರೀಂಕೋರ್ಟಿನ ದಯಾಳು ಕಣ್ಣುಗಳ ಮುಂದೆಯೇ ನಡೆಯಲು ಬಿಡಲಾಯಿತು.

- Advertisement -
- Advertisement -

ಜೂನ್ ತಿಂಗಳಲ್ಲಿ ಮಾಡಿದ ಎರಡು ಟ್ವೀಟ್‌ಗಳಿಗಾಗಿ ಸುಪ್ರೀಂಕೋರ್ಟ್ ನೀಡಿದ ಸ್ವಯಂಪ್ರೇರಿತ (sue Motu) ನ್ಯಾಯಾಂಗ ನಿಂದನೆಯ ನೋಟೀಸುಗಳಿಗೆ ವಕೀಲ ಪ್ರಶಾಂತ್ ಭೂಷಣ್ ಅವರು ವಿವರವಾದ ಸ್ಫೋಟಕ ಉತ್ತರವನ್ನು ನೀಡಿದ್ದಾರೆ. ಅವರ ಉತ್ತರದ ನಂತರದ ಈ ಪ್ರಕರಣವು ಆಗಸ್ಟ್ 5ರಂದು ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಬಿ.ಆರ್. ಗವಾಯ್ ಮತ್ತು ಕೃಷ್ಣ ಮುರಾರಿ ಅವರ ಪೀಠದಲ್ಲಿ ವಿಚಾರಣೆಗೆ ಬಂದಿದೆ. 

ಈ ವಿಚಾರಣೆಯ ವಿವರಗಳನ್ನು ಒತ್ತಟ್ಟಿಗಿಟ್ಟರೂ, ಪ್ರಶಾಂತ್ ಭೂಷಣ್ ಅವರು ತನ್ನ ವಿವರವಾದ ಲಿಖಿತ ಉತ್ತರದಲ್ಲಿ ಎತ್ತಿರುವ ಹಲವಾರು ಪ್ರಶ್ನೆಗಳು ಕುತೂಹಲಕಾರಿಯಾಗಿವೆ. ಮೆಹಕ್ ಮಹೇಶ್ವರಿ ಅವರ ದೂರನ್ನು ಸುಪ್ರೀಂಕೋರ್ಟ್ ಸ್ವಯಂ ದೂರನ್ನಾಗಿ ಪರಿವರ್ತಿಸಿದ್ದರೂ, ಮೂಲ ದೂರನ್ನು ಲಗತ್ತಿಸದೇ ನೋಟೀಸು ನೀಡಿರುವುದನ್ನು ಅವರು ಮೊದಲಾಗಿ ಪ್ರಶ್ನಿಸಿದ್ದಾರೆ. ಅಲ್ಲದೇ, ಮಹೇಶ್ವರಿಯವರ ದೂರನ್ನು ನ್ಯಾಯಾಂಗದ ಕಡೆಯಲ್ಲಿ ಇರಿಸಿದ ಆಡಳಿತಾತ್ಮಕ ಆದೇಶಗಳ ಪ್ರತಿಗಳನ್ನೂ ನೋಟೀಸಿನ ಜೊತೆ ಲಗತ್ತಿಸದೇ ಇರುವುದನ್ನೂ ಅವರು ಪ್ರಶ್ನಿಸಿದ್ದಾರೆ.

ಎರಡು ಟ್ವೀಟ್‌ಗಳಿಗಾಗಿ ಭೂಷಣ್ ಅವರ ವಿರುದ್ಧ ನ್ಯಾಯಾಂಗ ನಿಂದನೆಯ ಕಲಾಪ ಆರಂಭಿಸುವಂತೆ ಕೋರುವ ಮಹೇಶ್ವರಿಯವರ ದೂರನ್ನು, ನಿಯಮದಂತೆ ಅಗತ್ಯವಿರುವ ಅಟಾರ್ನಿ ಜನರಲ್ ಅವರ ಅನುಮತಿಯಿಂದ ವಿನಾಯಿತಿ ಕೋರುವ ಅರ್ಜಿಯ ಜೊತೆಯಲ್ಲಿ ಸಲ್ಲಿಸಲಾಗಿತ್ತು. ಸುಪ್ರೀಂಕೋರ್ಟಿನ ಮಹಾ ಕಾರ್ಯದರ್ಶಿಯವರು ತನ್ನ ವಿನಂತಿಯಂತೆ ಈ ದಾಖಲೆಗಳನ್ನು ಒದಗಿಸಿಲ್ಲ ಎಂಬುದನ್ನು ಭೂಷಣ್ ಅವರು ನ್ಯಾಯಪೀಠದ ಗಮನಕ್ಕೆ ತಂದಿದ್ದಾರೆ. ಆದರೂ, ಅಗತ್ಯ ದಾಖಲೆಗಳನ್ನು ಪೂರೈಸದ ಕುರಿತು ತನ್ನ ಪ್ರತಿಭಟನೆಯ ಪೂರ್ವಗ್ರಹವಿಲ್ಲದೆಯೇ ಮುಂದುವರಿದು, ನ್ಯಾಯಾಂಗ ನಿಂದನೆಯ ನೋಟೀಸಿಗೆ “ಪ್ರಾಥಮಿಕ ಉತ್ತರ” ನೀಡಿರುವುದಾಗಿ ಅವರು ಹೇಳಿದ್ದಾರೆ. ತನ್ನ ಎರಡೂ ಟ್ವೀಟ್‌ಗಳನ್ನು ವಿವರಿಸುತ್ತಾ, ಯಾರು ಬೇಕಾದರೂ ತನ್ನ ಅಭಿಪ್ರಾಯವನ್ನು ಒಪ್ಪದಿರಬಹುದು; ಆದರೆ ಅದು ತನ್ನ ಪ್ರಾಮಾಣಿಕವಾದ ಅಭಿಪ್ರಾಯಗಳನ್ನು ನ್ಯಾಯಾಂಗ ನಿಂದನೆಯಾಗಿಸುವುದಿಲ್ಲ ಎಂದು ಭೂಷಣ್ ಹೇಳಿದ್ದಾರೆ.

ಮುಖ್ಯ ನ್ಯಾಯಾಧೀಶರ ಬೈಕ್ ಸವಾರಿ ಟ್ವೀಟ್

ಭಾರತದ ಮುಖ್ಯ ನ್ಯಾಯಾಧೀಶ ಎ.ಎಸ್. ಬೋಬ್ಡೆ ಅವರು ಮಹಾರಾಷ್ಟ್ರದ ನಾಗಪುರದ ರಾಜಭವನದಲ್ಲಿ ಹೆಲ್ಮೆಟ್ ಮತ್ತು ಮಾಸ್ಕ್ ಧರಿಸದೆ ಬಿಜೆಪಿ ನಾಯಕನೊಬ್ಬನಿಗೆ ಸೇರಿದ 50 ಲಕ್ಷ ರೂ. ಮೌಲ್ಯದ ಐಷಾರಾಮಿ ಬೈಕಿನ ಮೇಲೆ ಕುಳಿತಿರುವ ಕುರಿತ ಜೂನ್ 27ರ ತನ್ನ ಟ್ವೀಟ್ ಬಗ್ಗೆ ಭೂಷಣ್ ಅವರು ಕೆಳಗಿನಂತೆ ಸ್ಪಷ್ಟೀಕರಣ ನೀಡಿದ್ದಾರೆ:

“ನಾನು ಬೈಕ್ ಸ್ಟ್ಯಾಂಡ್ ಮೇಲೆ ನಿಂತಿರುವುದನ್ನು ಗಮನಿಸಲಿಲ್ಲ; ಆದುದರಿಂದ ಹೆಲ್ಮೆಟ್‌ನ ಅಗತ್ಯವಿರಲಿಲ್ಲ ಎಂಬುದನ್ನು ಮೊದಲಾಗಿಯೇ ಒಪ್ಪಿಕೊಳ್ಳುತ್ತೇನೆ. ಆದುದರಿಂದ, ನಾನು ನನ್ನ ಟ್ವೀಟ್‌ನ ಆ ಭಾಗಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಆದರೆ, ನನ್ನ ಟ್ವೀಟ್‌ನ ಉಳಿದ ಭಾಗದಲ್ಲಿ ನಾನು ಏನು ಹೇಳಿದ್ದೇನೋ ಅದಕ್ಕೆ ಬದ್ಧನಾಗಿದ್ದೇನೆ.”

ಕೋವಿಡ್-19 ಲಾಕ್‌ಡೌನ್ ಹೇರಿಕೆಯ ನಂತರ ನ್ಯಾಯಾಂಗದ ಸಾಮಾನ್ಯ ಕಲಾಪಗಳು ಇಲ್ಲವಾಗಿದ್ದು, ಕೆಲವೇ ಕೆಲವು ವಿಷಯಗಳ ವಿಚಾರಣೆ- ಅದೂ ವಿಡಿಯೋ ಕಾನ್ಫರೆನ್ಸಿಂಗ್‌ನ “ಅತೃಪ್ತಿಕರ” ವಿಧಾನದ ಮೂಲಕ ನಡೆಯುತ್ತಿರುವುದರಿಂದ, ತನ್ನ ಆತಂಕ ಹೆಚ್ಚುತ್ತಿದ್ದ ಕಾರಣದಿಂದ ತಾನು ಹಾಗೆ ಟ್ವೀಟ್ ಮಾಡಿದೆ ಎಂದು ಸಮರ್ಥಿಸಿಕೊಂಡಿರುವ ಭೂಷಣ್, ದಿಲ್ಲಿಯ ಅನೇಕ ಸರಕಾರಿ ಕಚೇರಿಗಳು ಮತ್ತು ಸಂಸ್ಥೆಗಳು ತಮ್ಮ ಕೆಲಸವನ್ನ ಪುನರಾರಂಭಿಸಿವೆ ಎಂದು ಬೆಟ್ಟುಮಾಡಿ ತೋರಿಸಿದ್ದಾರೆ.

“ಸುಪ್ರೀಂಕೋರ್ಟಿನ ಪರಮೋಚ್ಛ ಆಡಳಿತಾತ್ಮಕ ಅಧಿಕಾರ ಹೊಂದಿರುವ ಮುಖ್ಯ ನ್ಯಾಯಾಧೀಶರು ಕೋವಿಡ್ ಪಿಡುಗಿನ ಕಾರಣದಿಂದ ಕಳೆದ ನಾಲ್ಕು ತಿಂಗಳುಗಳಿಂದ ನ್ಯಾಯಾಲಯದ ಸಾಮಾನ್ಯ ಕಲಾಪ ನಡೆಯಲು ಬಿಡದಿರುವಾಗ, ಅವರೇ ಸಾರ್ವಜನಿಕ ಸ್ಥಳದಲ್ಲಿ ಹಲವಾರು ಜನರು ಸುತ್ತಮುತ್ತ ಇರುವಾಗ ಮಾಸ್ಕ್ ಧರಿಸದೇ ಬೈಕ್ ಮೇಲೆ ಕುಳಿತಿರುವಂತೆ ಕಾಣಿಸಿಕೊಂಡರು. ಇದು ಅಸಮಂಜಸವೆಂದು ನನಗೆ ಅನಿಸಿತು” ಎಂದು ಅವರು ಹೇಳಿದ್ದಾರೆ.

ಸುಪ್ರೀಂಕೋರ್ಟಿನ ಸೀಮಿತ ಕಾರ್ಯಾಚರಣೆಯು ನ್ಯಾಯಾಲಯದ ಕದತಟ್ಟುವ ನಾಗರಿಕರ ಮೂಲಭೂತ ಹಕ್ಕಿಗೆ ಅಡಚಣೆ ಉಂಟುಮಾಡಿದೆ ಎಂಬುದು ಕೇವಲ ತನ್ನ ಅಭಿಪ್ರಾಯ ಮಾತ್ರವಲ್ಲ ಎಂದು ವಿವರಿಸಿರುವ ಭೂಷಣ್, ಸುಪ್ರೀಂಕೋರ್ಟ್ ಬಾರ್ ಎಸೋಸಿಯೇಷನ್, ಕಾನೂನು ವೀಕ್ಷಕರು, ಮಾಜಿ ನ್ಯಾಯಾಧೀಶರು ಮತ್ತು ವಕೀಲರು- ಸುಪ್ರೀಂಕೋರ್ಟ್‌ನ ಲಾಕ್‌ಡೌನ್ ಮತ್ತು ಕೇವಲ ಆಯ್ದ ತುರ್ತು ವಿಷಯಗಳ ವಿಚಾರಣೆಗೆ ಕಲಾಪಗಳನ್ನು ಸೀಮಿತಗೊಳಿಸಿರುವುದನ್ನು ಪ್ರಶ್ನಿಸಿ ಗೊತ್ತುವಳಿಗಳನ್ನು ಅಂಗೀಕರಿಸಿದ್ದಾರೆ ಮತ್ತು ಲೇಖನಗಳನ್ನು ಬರೆದಿದ್ದಾರೆ ಎಂದು ಹೇಳಿದ್ದಾರೆ.

ಕೋವಿಡ್ ಪಿಡುಗಿನಿಂದ ಬಾಧಿತರಾದ ಬಾರ್ ಸದಸ್ಯರಿಗೆ ಹಣಕಾಸಿನ ನೆರವು ಒದಗಿಸುವ ಕುರಿತ ಸ್ವಯಂ ಅರ್ಜಿಯ ಮೇಲೆ ಸುಪ್ರೀಂಕೋರ್ಟ್ ಜುಲೈ 22ರಂದು ನೀಡಿದ ತೀರ್ಪಿನಲ್ಲೇ, ನ್ಯಾಯಾಲಯಗಳು ಮುಚ್ಚಿರುವುದರಿಂದ ವಕೀಲರು ತಮ್ಮ ಜೀವನೋಪಾಯವನ್ನು ಗಳಿಸುವ ಮೂಲಗಳಿಂದ ವಂಚಿತರಾಗಿದ್ದಾರೆ ಎಂದು ಒಪ್ಪಿಕೊಂಡಿದೆ ಎಂದು ಭೂಷಣ್ ಎತ್ತಿತೋರಿಸಿದ್ದಾರೆ.

“ಪ್ರಜಾಪ್ರಭುತ್ವದ ನಾಶ” ಕುರಿತ ಟ್ವೀಟ್

ಜೂನ್ 27ರಂದು ಮಾಡಲಾದ ಮತ್ತು ನ್ಯಾಯಾಂಗ ನಿಂದನೆಯ ನೋಟೀಸಿಗೆ ಮೂಲ ಆಧಾರ ಎಂದು ಹೇಳಲಾದ ಭೂಷಣ್ ಅವರ ಎರಡನೆಯ ಟ್ವೀಟ್‌‌ಗೆ ಸಂಬಂಧಿಸಿದಂತೆ ಅವರು ಮೊದಲ ಟ್ವೀಟ್‌ಗೆ ನೀಡಿದ್ದಕ್ಕಿಂತ ಹೆಚ್ಚು ಉದ್ದವಾದ ಸಮರ್ಥನೆಯನ್ನು ನೀಡಿದ್ದಾರೆ. ಈ ಎರಡನೇ ಟ್ವೀಟ್‌ನಲ್ಲಿ ಅವರು ಹೀಗೆ ಹೇಳಿದ್ದಾರೆ:

“ಭಾರತದಲ್ಲಿ ಅಧಿಕೃತ ತುರ್ತುಪರಿಸ್ಥಿತಿ ಇಲ್ಲದೆಯೂ ಪ್ರಜಾಪ್ರಭುತ್ವವನ್ನು ಹೇಗೆ ನಾಶ ಮಾಡಲಾಗಿದೆ ಎಂಬ ಕುರಿತು ಭವಿಷ್ಯದಲ್ಲಿ ಇತಿಹಾಸಕಾರರು ಕಳೆದ ಆರು ವರ್ಷಗಳತ್ತ ಹಿಂತಿರುಗಿ ನೋಡಿದಾಗ, ನಿರ್ದಿಷ್ಟವಾಗಿ ಅದರ ನಾಶದಲ್ಲಿ ಸುಪ್ರೀಂಕೋರ್ಟಿನ ಪಾತ್ರವನ್ನು, ಅದಕ್ಕಿಂತಲೂ ನಿರ್ದಿಷ್ಟವಾಗಿ ಕಳೆದ ನಾಲ್ಕು ಮುಖ್ಯ ನ್ಯಾಯಾಧೀಶರ ಪಾತ್ರವನ್ನು ಗುರುತಿಸುತ್ತಾರೆ.”

ಕಳೆದ ಆರು ವರ್ಷಗಳ ಅವಧಿಯಲ್ಲಿ ಪ್ರಜಾಪ್ರಭುತ್ವವನ್ನು “ಗಣನೀಯವಾಗಿ ನಾಶ ಮಾಡಲಾಗಿದೆ” ಎಂಬುದನ್ನು ವಿವರಿಸಲು ಪ್ರಯತ್ನಿಸಿರುವ ಭೂಷಣ್ ಅವರು, ಬೇಕೆಂದೋ, ಲೋಪದಿಂದಲೋ ಮಾಡಿದ ತನ್ನ ಕೃತ್ಯಗಳಿಂದ ಸುಪ್ರೀಂಕೋರ್ಟ್, ಭಾರತೀಯ ಪ್ರಜಾಪ್ರಭುತ್ವದ “ನಿರ್ವೀರ್ಯತೆಗೆ” ಅನುವು ಮಾಡಿಕೊಟ್ಟಿದೆ; ಈ ಪ್ರಕ್ರಿಯೆಯಲ್ಲಿ ಕಳೆದ ನಾಲ್ವರು ಮುಖ್ಯ ನ್ಯಾಯಾಧೀಶರ ಪಾತ್ರವು ಅತ್ಯಂತ ನಿರ್ಣಾಯಕವಾಗಿದೆ ಎಂದು ಹೇಳಿದ್ದಾರೆ.

ತನ್ನ ಅಭಿಪ್ರಾಯವನ್ನು ವಿಸ್ತರಿಸಿರುವ ಅವರು, ಕಳೆದ ನಾಲ್ಕು ಮುಖ್ಯ ನ್ಯಾಯಾಧೀಶರ ಅಧಿಕಾರಾವಧಿಗಳಲ್ಲಿ ಕಾರ್ಯಾಂಗದ ಮುಂದೆ ಇರಲೇಬೇಕಾದ ಪ್ರಬಲವಾದ ಮೂಲಭೂತ ಕಡಿವಾಣಗಳು ಸಂಪೂರ್ಣವಾಗಿ ಮಾಯವಾಗಿದ್ದವು ಎಂದು ತನ್ನ ಉತ್ತರದಲ್ಲಿ ಆರೋಪಿಸಿದ್ದಾರೆ. ಭೂಷಣ್ ಅವರು ತನ್ನ ಉತ್ತರದಲ್ಲಿ ಏನು ಬರೆದಿದ್ದಾರೆ ಎಂದರೆ:

“ದೇಶದಲ್ಲಿ ದಬ್ಬಾಳಿಕೆ ಮತ್ತು ಬಹುಸಂಖ್ಯಾವಾದವು ಆಳವಾಗಿ ಬೇರೂರಿದಾಗ ನ್ಯಾಯಾಲಯವು ಶರಣಾಯಿತು. ನಾಗರಿಕ ಹಕ್ಕುಗಳು ಮತ್ತು ಸಂಸ್ಥೆಗಳ ಮೇಲಿನ ಅತಿರೇಕದ ದಾಳಿಗಳನ್ನು ಯಾವುದೇ ಉತ್ತರದಾಯಿತ್ವವೇ ಇಲ್ಲದೆ ಸುಪ್ರೀಂಕೋರ್ಟಿನ ದಯಾಳು ಕಣ್ಣುಗಳ ಮುಂದೆಯೇ ನಡೆಯಲು ಬಿಡಲಾಯಿತು. ಇಂತಹ ರಾಜಕೀಯ ಪರಿಸ್ಥಿತಿಯಲ್ಲಿಯೇ ಅತ್ಯಂತ ಸ್ವತಂತ್ರವಾಗಿದ್ದ ನಿಯಂತ್ರಕ ಸಂಸ್ಥೆಗಳು ಉರುಳಿಬಿದ್ದಿರುವುದು ಮತ್ತು ಸುಪ್ರೀಂಕೋರ್ಟ್ ಕೂಡಾ ಎದ್ದುನಿಂತು ಸರಕಾರದ ಈ ಅತಿರೇಕಗಳಿಗೆ ಕಡಿವಾಣ ಹಾಕಲು ಶಕ್ತವಾಗಿಲ್ಲ.”

ಸಂವಿಧಾನದ ವಿಧಿ 370ರ ರದ್ದತಿ ಹಾಗೂ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂತೆಗೆತ ಕುರಿತ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ತಿಂಗಳುಗಳ ಕಾಲ ತಪ್ಪಿಸಿಕೊಂಡ ರೀತಿಯೇ ಭೂಷಣ್ ಅವರ ಅಭಿಪ್ರಾಯಗಳಿಗೆ ಬೆಂಬಲ ದೊರಕಿಸಿಕೊಟ್ಟಿದೆ. ನ್ಯಾಯಾಲಯವು ಹೇಬಿಯಸ್ ಕಾರ್ಪಸ್ ಅರ್ಜಿಗಳನ್ನು, ಲಾಕ್‌ಡೌನ್ ವಿರುದ್ಧದ ಅರ್ಜಿಗಳನ್ನು, ಕಾಶ್ಮೀರದಲ್ಲಿ ಇಂಟರ್ನೆಟ್ ಸಂಪರ್ಕ ಕಡಿತ ಕುರಿತ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಚಾರಣೆ ನಡೆಸಲಿಲ್ಲ ಎಂದು ಅವರು ಹೇಳಿದ್ದಾರೆ.

“ಅವುಗಳ ವಿಚಾರಣೆ ನಡೆಯುವಾಗಲೂ, ಯಾವುದೇ ಮಧ್ಯಂತರ ಪರಿಹಾರ ನೀಡದೆಯೇ ಮತ್ತೆಮತ್ತೆ ವಿಚಾರಣೆಯನ್ನು ಮುದೂಡಲಾಯಿತು. ಜಾಮಿಯಾ ಮತ್ತು ಜೆಎನ್‌ಯು ಮೇಲಿನ ಗಂಭೀರವಾದ ದಾಳಿಗಳಿಗೂ ಸುಪ್ರೀಂಕೋರ್ಟ್ ಕಿವುಡಾಯಿತು. ನೈಸರ್ಗಿಕ ನ್ಯಾಯದ ಸಂಪೂರ್ಣ ಉಲ್ಲಂಘನೆಯಲ್ಲಿ, ಸರಕಾರವು ನ್ಯಾಯಾಲಯಕ್ಕೆ ಸಲ್ಲಿಸುವ ಸಹಿಯೇ ಇಲ್ಲದ ಟಿಪ್ಪಣಿಗಳನ್ನು ಪ್ರತಿವಾದಿಗಳಿಗೆ ಕೂಡಾ ತೋರಿಸದೆ ಸ್ವೀಕರಿಸಿ, ಆದೇಶಗಳನ್ನು ಹೊರಡಿಸುವ ಮುಚ್ಚಿದ ಲಕೋಟೆ ಎಂಬ ಹೊಸ ನ್ಯಾಯಪದ್ಧತಿ ಆರಂಭವಾಯಿತು” ಎಂದು ಪ್ರಶಾಂತ್ ಭೂಷಣ್ ತನ್ನ ಉತ್ತರದಲ್ಲಿ ಆರೋಪಿಸಿದ್ದಾರೆ.

ಮುಚ್ಚಿದ ಲಕೋಟೆ ಪದ್ಧತಿಯು ಪ್ರಸ್ತುತ ಕೇಂದ್ರ ಗೃಹ ಮಂತ್ರಿಯಾಗಿರುವ ಅಮಿತ್ ಶಾ ವಿರುದ್ಧದ ಸಂಚು ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾ. ಬಿ.ಎಚ್. ಲೋಯಾ ಅವರ ನಿಗೂಢ ಸಾವಿನ ಪ್ರಕರಣಕ್ಕೂ “ಮುಚ್ಚಳ ಹಾಕಲು” ಸುಪ್ರೀಂಕೋರ್ಟಿಗೆ ಅನುವು ಮಾಡಿಕೊಟ್ಟಿತು ಎಂದು ಭೂಷಣ್ ಹೇಳಿದ್ದಾರೆ. “ಅದು ರಫೇಲ್ ರಕ್ಷಣಾ ಹಗರಣವನ್ನು ಮುಚ್ಚಿಹಾಕಲು ಕೂಡಾ ಅವರಿಗೆ ಅನುಕೂಲ ಮಾಡಿಕೊಟ್ಟಿತು. ಅಸ್ಸಾಮಿನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿಯ ರಚನಾ ಪ್ರಕ್ರಿಯೆಯ ಮೇಲುಸ್ತುವಾರಿ ಪ್ರಕರಣದಲ್ಲೂ ಈ ಮುಚ್ಚಿದ ಲಕೋಟೆ ಪದ್ಧತಿ ವ್ಯಾಪಕವಾಗಿ ಬಳಕೆಯಾಯಿತು” ಎಂದು ತನ್ನ ಉತ್ತರದಲ್ಲಿ ಭೂಷಣ್ ವಾದಿಸಿದ್ದಾರೆ.

ಕೋವಿಡ್-19 ಲಾಕ್‌ಡೌನ್ ಬಳಿಕದ ವಲಸೆ ಕಾರ್ಮಿಕರ ಬಿಕ್ಕಟ್ಟಿನ ವಿಷಯದ ಕುರಿತು ಬರೆದಿರುವ ಭೂಷಣ್, ಜನರು ಕೆಲವೊಮ್ಮೆ ನೂರಾರು ಕಿ.ಮೀ. ವರೆಗೆ ನಡೆದು ಮನೆ ಸೇರಬೇಕಾದಂತೆ ಮಾಡಿದ, ಅವರ ಉಪವಾಸಕ್ಕೆ ಕಾರಣವಾದ, ಅವರನ್ನು ನಿರಾಶ್ರಿತ ನಿರ್ಗತಿಕರನ್ನಾಗಿ ಮಾಡಿದ ಮಾನವ ಹಕ್ಕುಗಳ ಉಲ್ಲಂಘನೆಯ ಗಂಭೀರ ವಿಚಾರಣೆಯನ್ನು ಕೂಡಾ ನಡೆಸದೆ ಸುಪ್ರೀಂಕೋರ್ಟ್ “ಸರಕಾರದ ವಿವೇಚನೆಯನ್ನು ಬೆಂಬಲಿಸಿತು” ಎಂದು ಕೂಡಾ ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ.

ಇಂತಹಾ ಎಲ್ಲಾ ರಾಜಕೀಯ ಸೂಕ್ಷ್ಮತೆಯ ಪ್ರಕರಣಗಳಲ್ಲಿ ಸರಕಾರದ ಮುಂಚೂಣಿ ವ್ಯಕ್ತಿಯಾಗಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ, ಸರಕಾರಕ್ಕೆ ನ್ಯಾಯಾಲಯದ ನೋಟೀಸು ನೀಡದೆಯೇ, ಸರಕಾರವು ಕೇವಿಯಟ್ ಅರ್ಜಿ ಸಲ್ಲಿಸದೆಯೇ ಈ ಎಲ್ಲಾ ವಿಚಾರಣೆಗಳಲ್ಲಿ ಹಾಜರಾಗಿ ವಾದಿಸಲು ಅವಕಾಶ ನೀಡಲಾಗಿದ್ದು, ಇವೆಲ್ಲವೂ ನಿಯಮಬಾಹಿರವಾಗಿವೆ ಎಂದು ಭೂಷಣ್ ಹೇಳಿದ್ದಾರೆ.

“ಹೆಚ್ಚಿನ ಬಾರಿ ನ್ಯಾಯಾಲಯದ ಬಳಿ ಸಾಲಿಸಿಟರ್ ಜನರಲ್ ಸಲ್ಲಿಸಿದ ಟಿಪ್ಪಣಿಗಳ ಪ್ರತಿಗಳು ಮತ್ತೊಂದು ವರದಿ ಇರುತ್ತಿದ್ದು, ಅದನ್ನು ಪರಿಶೀಲಿಸುವ ಅವಕಾಶ ಪ್ರತಿವಾದಿಗಳಿಗೆ ಇರುತ್ತಿರಲಿಲ್ಲ ಮತ್ತು ಅವುಗಳೇ ಹೆಚ್ಚಿನ ಬಾರಿ ಈ ಪ್ರಕರಣಗಳಲ್ಲಿ ನ್ಯಾಯಾಲಯದ ಆದೇಶಗಳಿಗೆ ಆಧಾರಗಳಾಗಿದ್ದವು” ಎಂದು ಪ್ರಶಾಂತ್ ಭೂಷಣ್ ತನ್ನ ಉತ್ತರದಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

(ನಿರೀಕ್ಷಿಸಿ: ಸುಪ್ರೀಂಕೋರ್ಟಿನ ಕಳೆದ ನಾಲ್ವರು ಮುಖ್ಯ ನ್ಯಾಯಾಧೀಶರ ನಡವಳಿಕೆ ಕುರಿತು ವಕೀಲ ಪ್ರಶಾಂತ್ ಭೂಷಣ್ ಗಂಭೀರ ಆರೋಪ)

ವಿ. ವೆಂಕಟೇಸನ್, 

ಅನುವಾದ: ನಿಖಿಲ್ ಕೋಲ್ಪೆ


ಇದನ್ನೂ ಓದಿ: ಪ್ರಶಾಂತ್ ಭೂಷಣ್ ಪರ ನಿಂತ 8ಕ್ಕೂ ಹೆಚ್ಚು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಾಧೀಶರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...