Homeಅಂಕಣಗಳುಈ ಎನ್‌ಇಪಿ ಅಂದ್ರೆ ಏನು? ಅದರೊಳಗ ಏನೈತಿ, ಏನಿಲ್ಲ?

ಈ ಎನ್‌ಇಪಿ ಅಂದ್ರೆ ಏನು? ಅದರೊಳಗ ಏನೈತಿ, ಏನಿಲ್ಲ?

ಅದಾನಿ- ಅಂಬಾನಿ ಸಾಹುಕಾರರು ಕಲ್ಲಿನಾಗ ಪೆಟ್ರೋಲು ತೆಗೆಯೋದ ಬಿಟ್ಟು ಸಾಲಿ-ಕಾಲೇಜು, ವಿವಿ- ತಗೀಲಿಕ್ಕೆ ಹತ್ಯಾರ. ಇದನ್ನ ನೆನಪು ಇಟಗೊಂಡು ನಾವು ಎನ್.ಇ.ಪಿ ಅರ್ಥ ಮಾಡಿಕೊಳ್ಳಬೇಕು.

- Advertisement -
- Advertisement -

ನಾವು ಸಣ್ಣವರಿದ್ದಾಗ ದೊಡ್ಡವರೆಲ್ಲಾ ಫೈವ್ ಎನ್.ಪಿ, ಟೆನ್ ಎನ್.ಪಿ ಅಂತ ಮಾತಾಡ್ತಿದ್ದರು. ಹಂಗಂದರ ನಯಾ ಪೈಸಾ. ಅದು ಆಣೆ – ಬಿಲ್ಲಿ ಲೆಕ್ಕ ಎಲ್ಲ ಹೋಗಿ ಪೈಸಾ ಬಂದಿದ್ದ ಕಾಲ.

ಅದು ಹಳೇದು ಆತು. ಈಗ ಬಂದಿರೋದು ಎನ್.ಇ.ಪಿ. ಅದು ಒಂದು ಥರ ಆಣೆ – ಬಿಲ್ಲಿ ಲೆಕ್ಕ ಹೋಗಿ ನಯಾ ಪೈಸಾ ಬಂದಂಗ. ಈ ಎನ್.ಇ.ಪಿ ಎನಪಾ ಅಂದ್ರ ಅದು ಹೊಸ ಶಿಕ್ಷಣ ನೀತಿ.

ನೀವು ಇಷ್ಟು ದಿವಸ ಬಹಳ ನೀತಿ- ನಿಯಮ ನೋಡಿರಬಹುಡು. ಅವುಕುರ ಹಣೆಬರಹ ಅಷ್ಟ.

ನೀತಿ ನಿಯಮಗಳು ಬರೇ ಕಾಗದದಾಗ ಇರಬೇಕು, ಜಾರಿಗೆ ಮಾತ್ರ ಬರೋದಿಲ್ಲ ಅಂತ ನೀವು ಏನರ ತಿಳ್ಕೊಂಡಿರಬಹುದು. ಅದು ಗಾಡಿ ಓಡಿಸೋವಾಗ ಎಡಗಡೆಯಿಂದ ಮುಂದಕ್ಕ ಹೋಗಬಾರದು ಅನ್ನೋ ಸರಳ ನಿಯಮ ಇರಬಹುದು ಅಥವಾ ಅಭಯಾರಣ್ಯದಾಗಿನ ಹುಲಿ- ಸಿಂಹ ಎಲ್ಲ ಕೊಂದು ಕಾರಖಾನಿ ಮಾಲೀಕರಿಗೆ ಕೊಡಬಾರದು ಅನ್ನೋ ಸಹಜ ನೀತಿ ಇರಲಿ, ಎಲ್ಲಾನೂ ಮುರಿಯಬಹುದು. ನೀತಿ ನಿಯಮದ ವಿಷಯಕ್ಕ ಬಂದರ ನಮಗ ಪ್ರತಿ ದಿನಾನು ದಸರಾ. ಪ್ರತಿ ಸಂಜೆ ಸೀಮೋಲ್ಲಂಘನ. ಈ ವಿಷಯಕ್ಕ ಬಂದರ ನಾವು ಮಹಿಷ ಕುಲದವರು.

ನಾವು ಧಾರವಾಡದ ಹತ್ತರ ಎಮ್ಮಿಗನೂರಿನ ನಾಡಹಬ್ಬ ಮಾಡಲಿ, ಮಂಡ್ಯದ ಹತ್ತರ ಮಹಿಷಾಸುರ ಊರಿನೊಳಗ ಚಾಮುಂಡಿ ಬೆಟ್ಟದ ಹತ್ತರ ದಸರಾ ಆಚರಿಸಲಿ, ಅದಕ್ಕ ಭಾಳ ವ್ಯತ್ಯಾಸ ಏನೂ ಇಲ್ಲ.

ಈಗ ನೋಡ್ರಿಪಾ, ಆ ನೀತಿ ಕೇಂದ್ರ ಸಚಿವ ಸಂಪುಟದಾಗ ಪಾಸು ಆಗಿ ಮೂರು ದಿವಸ ಆದ ಮ್ಯಾಲೆ ಅದನ್ನ ಕೇಂದ್ರ ಶಿಕ್ಷಣ ಇಲಾಖೆ ಜಾಲತಾಣದಾಗ ಬಿಟ್ಟಾರೂ. ಅದು ಸುಮಾರು 70 ಪುಟ ಐತಿ. ಅದರವು ಕೆಲವು ಪೇಜು ಅಷ್ಟ ನೋಡೋಣ.

ಮೊದಲಿಗೆ ಅದರಾಗ ಛಲೋ ಏನ ಐತಿ ಅನ್ನೋದು ನೋಡೋಣು. ಮೊದಲಿಗೆ, ಸಾಧ್ಯವಾದಷ್ಟು ಮಟ್ಟಿಗೆ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಅಂತ ಒಂದು ಮಾತು ಐತಿ.

ಇದು ಈಗ ಸದ್ಯ ಚಾಲ್ತಿ ಇರೋ ಆಸೋಸಿಯೇಟೆಡ್ ಮ್ಯಾನೇಜ್ಮೆಂಟ್ ಪ್ರಕರಣದಾಗ ಸುಪ್ರೀಂ ಕೋರ್ಟು 2013ದೊಳಗ ನೀಡಿದ ತೀರ್ಪಿನ ವಿರುದ್ಧ ಐತಿ. ಯಾರಾದರೂ ಅದನ್ನು ಪ್ರಶ್ನಿಸಿದರ, ದೆಹಲಿಯೊಳಗಿನ ನಮ್ಮ ಲಾರ್ಡ್‍ಗಳು ನ್ಯಾಯಾಲಯದ ಲಾರ್ಡ್‍ಗಳನ್ನು ಹೆಂಗ ಒಪ್ಪಿಸತಾರ ನೋಡಬೇಕು.

ಎರಡನೇದು, ನಮ್ಮಂತಹ ಡ್ರಾಪ್‍ಔಟ್‍ಗಳು ಕಾಲೇಜು ಬಿಟ್ಟು ಹೋಗಿ ಹತ್ತು ವರ್ಷ ಆದ ಮ್ಯಾಲೆ ಮತ್ತ ಓದಬೇಕು ಅಂತ ಅನ್ನಿಸಿದರ ವಾಪಸ್ ಕಾಲೇಜಿಗೆ ಬಂದು ಎಲ್ಲಿಗೆ ಬಿಟ್ಟಿದ್ದಾರೋ ಅಲ್ಲಿಂದ ಶುರು ಮಾಡಬಹುದು.

ಮೂರನೇದು `ರೀಕಾಗ್ನಿಷನ್ ಆಫ್ ಪ್ರಯರ್ ಲರನಿಂಗ್’ ಅಂದ್ರ ಮುಂಚಿನ ಕಲಿಕೆಯನ್ನು ಗುರುತಿಸುವುದು ಅನ್ನೋ ಯೋಜನೆ ಒಳಗ, ಪ್ರಾಥಮಿಕ ಶಿಕ್ಷಣದ ನಂತರ ವಿದ್ಯಾರ್ಥಿಗಳು ಕರಕುಶಲ ಕಲೆ, ವೃತ್ತಿ ಶಿಕ್ಷಣ ಹಾಗೂ ಉದ್ಯೋಗ ಆಧಾರಿತ ಶಿಕ್ಷಣದ ತರಬೇತಿ ತೊಗೋಬಹುದು.

ಇನ್ನೊಂದು ಮಜಾ ಅಂದ್ರ ಎಂ.ಫಿಲ್ ಅಂತ ಒಂದು ಯಾರಿಗೂ ಬ್ಯಾಡಾಗಿದ್ದು ಒಂದು ಕೋರ್ಸ್ ಇತ್ತು. ನಮ್ಮ ಧಾರವಾಡ ಯುನಿವರ್ಸಿಟಿ ಒಳಗ ಒಂದು ಜೋಕು ಇತ್ತು. ಕೆಲಸ ಸಿಗಲಾರದ ಗಂಡು ಮಕ್ಕಳು ಮತ್ತು ಮದುವೆ ಆಗಲಾರದ ಹೆಣ್ಣು ಮಕ್ಕಳು ಸೇರಿಕೊಳ್ಳುವಂತಹ ಯಾವುದಾದರೂ ಕೋರ್ಸ್ ಇತ್ತು ಅಂದ್ರ ಅದು ಎಂ.ಫಿಲ್ ಅಂತ. ಆನಂತರ ನಮ್ಮ ಬಾಗಲಕೋಟೆಯ ಬಜರಂಗಿ ಭಾಯಿಜಾನ ಅರವಿಂದ್ ಲಿಂಬಾವಳಿ ಅವರು ಸಚಿವರಾದ ಮೇಲೆ ಅದನ್ನ ಸರ್ಕಾರಿ ಅಧ್ಯಾಪಕರ ನೇಮಕಾತಿಗೆ ಕಡ್ಡಾಯ ಮಾಡಿದರು. ಹಂಗ ಮಾಡಿದ ಮ್ಯಾಲೆ ನಮ್ಮ ಊರಾಗ ಟೂ ಮಿನಿಟ್ ಮ್ಯಾಗಿ ಮಾಡಿಕೊಂಡು ಇದ್ದ ಸಾವಿರಾರು ಡಬಲ್ ಪದವೀಧರರು ತಮಿಳುನಾಡು- ಒರಿಸ್ಸಾ – ಆಂಧ್ರ- ಗುಜರಾತಿನ ನೂರಾರು ಯೂನಿವರ್ಸಿಟಿಗಳಲ್ಲಿ ಧಿಡೀರ ಎಂ.ಫಿಲ್ ಮಾಡಿಬಿಟ್ಟರು. ಅಷ್ಟೊಂದು ಓದಿದವರಿಗೆ ಹೆಣ್ಣು ಹುಡುಕುವುದು ಕಷ್ಟ ಆಯಿತು. ಎಲ್ಲಿಂದ ಎಂ.ಫಿಲ್ ಮಾಡಿದಿರೋ ಅಲ್ಲಿಂದನ ಹೆಣ್ಣು ತರಬೇಕಾಗಿತ್ತು ಅಂತ ಹಿರೇರು ಹೇಳೋ ಪರಿಸ್ಥಿತಿ ಬಂತು.

ಈ ಎಂ.ಫಿಲ್‍ಅನ್ನ ರದ್ದು ಮಾಡರಿ ಅಂತ ಎನ್.ಇ.ಪಿದಾಗ ಒಂದು ಶಿಫಾರಸು ಐತಿ. ಇದಕ್ಕೂ ಒಂದು ವೆಲ್‍ಕಂ ಇರಲಿ.

ಡಿಗ್ರಿ ಮೂರು ವರ್ಷ ಹೋಗಿ ನಾಕು ಮಾಡಿದಾರು. ಒಂದು ವರ್ಷ ಓದಿದರ ಪ್ರಮಾಣ ಪತ್ರ, ಎರಡು ಓದಿದರ ಡಿಪ್ಲೋಮಾ, ಮೂರು ಓದಿದರ ಡಿಗ್ರಿ, ಹಾಗೂ ನಾಕು ಓದಿದರ ಮಾಸ್ಟರ್ ಡಿಗ್ರಿ ಅಂತ ಐತಿ. ಇನ್ನೊಂದು ವರ್ಷ ಓದರಿ, ನೌಕರಿ ಕೊಡ್ತೇವಿ ಅಂತ ಇರಬೇಕಾಗಿತ್ತು. ಆದರ ಹಂಗ ಇಲ್ಲ.

ಅಮೆರಿಕ – ಯುರೋಪಿನ ಪದ್ಧತಿಯಂತೆ ನಾಕು ವರ್ಷ ಡಿಗ್ರಿ, ಆನಂತರ ನೇರವಾಗಿ ಪಿ. ಎಚ್ ಡಿ. ಅಂತ ನಿಯಮ ಮಾಡಿದಾರು. ಹಂಗಾರ ಎಂಎ, ಎಂ ಕಾಂ, ಎಂಎಸ್ಸಿ ಕಲಿಸಿಗೋತ ನೂರಾರು ಎಕರೆ ಕ್ಯಾಂಪಸ್ಸುದೊಳಗ ಎರಡೂವರೆ ಎಕರೆ ಸರಕಾರಿ ಮನೆ ಒಳಗ ಇರೋ ಯೂಜಿಸಿ ಸಂಬಳದ ಪ್ರೊ.ಲಕ್ಷ್ಮೀಪತಿ ಅವರು ಮುಂದ ಏನು ಮಾಡಬೇಕು? ಈ ಪ್ರಶ್ನೆಗೆ ಉತ್ತರ ಸದ್ಯಕ್ಕಂತೂ ಇಲ್ಲ.

ಸರಕಾರಿ ಸಾಲಿ ಒಳಗ ಮೂರನೇ ವರ್ಷದಿಂದ ಮಕ್ಕಳಿಗೆ ಪ್ರವೇಶ ಕೊಡರಿ ಅಂತ ಹೇಳಿದಾರ. ಅದರ ಅದಕ್ಕ ತಕ್ಕ ತರಬೇತಿ, ಮೂಲ ಸೌಕರ್ಯ ಮುಂತಾದರ ಮಾತು ಇಲ್ಲ.

ಎಲ್ಲ ರೀತಿಯ ಉನ್ನತ ಶಿಕ್ಷಣದ ಮೂಗುದಾರ ಹಿಡಿಯಲಿಕ್ಕೆ ಒಂದೇ ಸಂಸ್ಥೆ ಮಾಡ್ತೇವಿ ಅಂತ ಘೋಷಣೆ ಹಾಕಿದಾರು. ಯುಜಿಸಿ, ಎ.ಐ.ಸಿ.ಟಿ.ಇ., ಕೃಷಿ ಶಿಕ್ಷಣ ಪರಿಷತ್ತು, ಮುಂತಾದಾವೆಲ್ಲ ಸೇರಿಸಿ ಒಂದ ಸಂಘಟನೆ ಆಗೋ ವಿಚಾರ ಐತಿ. ಇದು ಒಂದು ಲೆಕ್ಕದಾಗ ಅಪಾಯಕಾರಿ. ಸರಕಾರಿ ಸಂಘಟೆನೆಗಳಿಗೆ ಸಾಮಾನ್ಯವಾಗಿ ರಾಜಕೀಯ ನೇಮಕಾತಿ ಆಗತದ. ಅದರಗೂ ಆಳುವ ಪಕ್ಷದವರು, ಬರೆ ಸಿದ್ಧಾಂತದ ಆಧಾರದ ಮೇಲೆ ನೇಮಕ ಆಗತಾರ. ಏನರ ಓದಿದವರು, ರಾಜಕೀಯ ಕಾರಣಕ್ಕಾಗಿ ಇದರಾಗ ಸೇರಿಕೊಂಡು ಏನೇನರ ಬದಲಾವಣೆ ಮಾಡಲಿಕ್ಕ ಹತ್ತಿದರ ಏನು ಕತಿ?

ಇನ್ನ ಹಳ್ಳಿಯ ಸಣ್ಣ ಶಾಲೆಗಳನ್ನ ಬಂದು ಮಾಡಿ 5-10 ಕಿಲೋಮೀಟರು ಅಂತರದಾಗ ದೊಡ್ಡ ಶಾಲೆ ತಗಿಬೇಕು ಅಂತ ಇದರಾಗ ಒಂದು ಉದ್ಧಘೋಷ ಐತಿ. ಇದು ಖಂಡಿತ ಅಡ್ಡಡ್ಡ ಪರಿಣಾಮ ಬೀರತೇತಿ. ಈಗ ಪ್ರಾಥಮಿಕ ಶಾಲೆಗಳು ಒಂದು ಕಿಲೋಮೀಟರು ಅಂತರದೊಳಗ ಇರಬೇಕು ಅಂತ ಐತಿ. ಇದನ್ನ ತಗದು ಹತ್ತು ಕಿಲೋಮೀಟರು ಅಂತರ ಮಾಡಿದರ ಅದರ ದುಷ್ಪರಿಣಾಮ ಹತ್ತು ಪಟ್ಟುಗಿಂತ ಜಾಸ್ತಿ ಆಗತದ ಅಂತ ಒಂದು ಅಂದಾಜು.

ಸಾವಿರಾರು ವರ್ಷದಿಂದ ಶಿಕ್ಷಣದಿಂದ ದೂರ ಉಳಿದ ಸಮುದಾಯಗಳು ಇವತ್ತು ಸಾಲಿ ಮೆಟ್ಟಲ ಹತ್ತಲಿಕ್ಕೆ ಸಾಧ್ಯ ಆಗಿದ್ದು ಈ ಒಂದು ಕಿಲೋಮೀಟರು ಅಂತರದ ಕಾನೂನಿನಿಂದನ. ಇದು ದೊಡ್ಡವರಿಗೆ ತಿಳಿಯದೇ ಇರಲಿಕ್ಕೆ ಸಾಧ್ಯ ಇಲ್ಲ.

ಈ ಜಿ.ಇ.ಆರ್ ಅಂತ ಒಂದು ಐತಿ. ಅದು ಎಂ.ಜಿ.ಆರ್, ಎನ್.ಟಿ.ಆರ್‍ರಷ್ಟು ಜನಪ್ರಿಯ ಅಲ್ಲ. ಚಾಲ್ತಿ ಒಳಗೂ ಇಲ್ಲ. ಅದು ಏನಪ ಅಂದ್ರ ನಿಮ್ಮ ಊರಾಗ ಒಂದು ನೂರು ಹುಡುಗರು ಒಂದನೇ ತರಗತಿಗೆ ಸಾಲಿಗೆ ಹೋದರ ಆದರಾಗ ಎಷ್ಟು ಮಂದಿ ಯುನಿವರ್ಸಿಟಿಗೆ ಹೋಗತಾರ ಅನ್ನೋ ಲೆಕ್ಕ.

ಅದು ಈಗ ದಕ್ಷಿಣ ಭಾರತದಾಗ ಸುಮಾರು 30-50ರ ಒಳಗ ಐತಿ. ಉತ್ತರ ಹಿಂದೂಸ್ತಾನದಾಗ 5-25 ರವರೆಗೂ ಐತಿ. ಈ ಹಿನ್ನೆಲೆಯೊಳಗ 2035 ರವರೆಗೆ ಸಮಗ್ರ ಭಾರತ ರಾಷ್ಟ್ರದ ಸರಾಸರಿ ಜಿ.ಇ.ಆರ್ ಅನ್ನು 50 ಮಾಡಬೇಕು ಅಂತ ಎನ್.ಇ.ಪಿ ಒಳಗ ಐತಿ.

ಅದರ ಅದನ್ನ ಹೆಂಗ ಮಾಡಬೇಕು ಅನ್ನೋ ಮಾತು ಇದರಾಗ ಇಲ್ಲ. ಈಗ ದೇಶದ ತಲಾ ಉತ್ಪನ್ನದ ಶೇಕಡಾ 2-4 ರ ಒಳಗ ಇರೋ ಬಾಬತ್ತು 4-8 ಆಗಬೇಕು ಅನ್ನೋ ಮಾತು ಇಲ್ಲ. ಇದು ಹೆಂಗ ಅಂದ್ರ ಮನಿಗ ಹಾಲು, ಸಕ್ಕರಿ, ಶಾವಿಗೆ ತಂದು ಕೊಡಲಾರದ ಗಂಡ `ನಾಳೆ ಪಾಯಸ ಮಾಡು ಇಲ್ಲಾಂದರ ಬಡಿತೇನಿ’ ಅಂತ ಹೆಂಡತಿಗೆ ಹೇಳಿದ ಹಂಗ.

ಇನ್ನ ಖಾಸಗಿ ಸಹಭಾಗಿತ್ವದ ಮಾತಿಗೆ ಬರೋಣ. ಖಾಸಗಿ ಕ್ಷೇತ್ರ ಸರಕಾರದ ಭಾರ ಹಂಚಿಕೊಳ್ಳಬೇಕು. ಬಡವರಿಗೆ ಹೊರೆ ಆಗದಂತೆ ಖಾಸಗಿ ಸಂಸ್ಥೆಗಳು ಲಾಭ ಮಾಡಿಕೊಳ್ಳಲು ಅವಕಾಶ ಮಾಡಿಕೊಳ್ಳಬೇಕು ಅಂತ ಇದಾರಗ ಒಂದು ಫರಮಾನು ಐತಿ.

ಸರಕಾರಿ ಹಾಗೂ ಖಾಸಗಿ ಶಾಲೆ- ಕಾಲೇಜುಗಳಿಗೆ ಒಂದೇ ಮಾನದಂಡ. ಅವಕ್ಕೆ ಒಂದೇ ನಿಗರಾಣಿ ಸಂಸ್ಥೆ ಅಂತ ಒಂದು ಶೀಲಾಲೇಖ ಐತಿ. ಕಲ್ಲಿನ ಮ್ಯಾಲೆ ಬರದ ಮಾತು ಸುಳ್ಳು ಆಗತದ? ಇಲ್ಲ. ಆ ನಿಗರಾಣಿ ಸಂಸ್ಥೆಯೊಳಗ ನಮ್ಮ ನಿರಾಣಿ ಸಾಹೇಬರು ಅಥವಾ ಅಂತವರು ಸೇರಿಕೊಂಡರ ಮುಂದ ಏನು?

ಅದಾನಿ- ಅಂಬಾನಿ ಸಾಹುಕಾರರು ಕಲ್ಲಿನಾಗ ಪೆಟ್ರೋಲು ತೆಗೆಯೋದ ಬಿಟ್ಟು ಸಾಲಿ-ಕಾಲೇಜು, ವಿವಿ- ತಗೀಲಿಕ್ಕೆ ಹತ್ಯಾರ. ಇದನ್ನ ನೆನಪು ಇಟಗೊಂಡು ನಾವು ಎನ್.ಇ.ಪಿ ಅರ್ಥ ಮಾಡಿಕೊಳ್ಳಬೇಕು.

ಹಿಂದ ಟಿ.ಎಂ.ಎ. ಪೈ ಪ್ರಕರಣದಾಗ ನ್ಯಾಯಾಧೀಶರು `ಯೋಗ್ಯ ಲಾಭ’ ಮಾಡಿಕೊಳ್ಳಲು ಅನುವು ಮಾಡಿಕೊಟ್ಟರು. ಅದನ್ನು ಕೇಂದ್ರ ಸರಕಾರ 2020 ರೊಳಗ ಅಫಿಶಿಯಲ್ ನೀತಿಯನ್ನಾಗಿ ಪ್ರಕಟಮಾಡಿತು.

ನಮ್ಮ ಪಂಥ ಪ್ರಧಾನ ಸೇವಕರು ಈ ನೀತಿ ನೌಕರಿ ಹುಡುಕುವರನ್ನು ಹುಟ್ಟು ಹಾಕುವುದಿಲ್ಲ. ನೌಕರಿ ಸೃಷ್ಟಿ ಮಾಡುವರನ್ನು ತಯಾರಿಸುತ್ತಾದೆ ಅಂತ ಹೇಳಿದಾರು. ಎಂಥ ಗಹನವಾದ ವಿಷಯಗಳನ್ನು ಅವರು ಎಷ್ಟು ಸರಳವಾದ ಭಾಷೆಯೊಳಗ ತಿಳಿ ಹೇಳತಾರ. ಮತ್ತು ಅದನ್ನ ಕೇಳಿಸಿಕೊಂಡವರು ಹೂಂ ಅಂತ ತಲೆದೂಗಿ ಚಪ್ಪಾಳೆ ತಟ್ಟಿ ವ್ಹಾ ವ್ಹಾ ಅಂತಾರ. ಈ ಗಹನವಾದ ಆಡಳಿತ ನೀತಿಯನ್ನು ಮೊದಲು ನಾವು ತಿಳಿದುಕೊಳ್ಳಬೇಕು.


ಇದನ್ನು ಓದಿ: ಹೊಸ ಶಿಕ್ಷಣ ನೀತಿ: ದುರ್ಬಲ ವರ್ಗಗಳ ವಿದ್ಯಾರ್ಥಿಗಳಿಗೆ ಮಾಡಿದ ವ್ಯವಸ್ಥಿತ ವಂಚನೆ! 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...