Homeಚಳವಳಿಪಿತೃಪ್ರಧಾನ ಪ್ರಭುತ್ವದಲ್ಲಿ ಜಡ್ಡುಗಟ್ಟಿದ ಸಮಾಜಕ್ಕೆ ಸವಾಲೆಸೆದ ಶೋಮಾ ಸೇನ್

ಪಿತೃಪ್ರಧಾನ ಪ್ರಭುತ್ವದಲ್ಲಿ ಜಡ್ಡುಗಟ್ಟಿದ ಸಮಾಜಕ್ಕೆ ಸವಾಲೆಸೆದ ಶೋಮಾ ಸೇನ್

ಶಿಕ್ಷಣ ಕ್ಷೇತ್ರಕ್ಕೆ ಶೋಮಾ ನೀಡಿದ ಅದ್ಭುತ ಕೊಡುಗೆಗಳು, ಜನರನ್ನು ಅದರಲ್ಲೂ ವಿವಿಧ ಪ್ರದೇಶಗಳ ಮಹಿಳೆಯರನ್ನು ಸಂಘಟಿಸುವ ಅವರ ಶಕ್ತಿಯಿಂದ ಪ್ರಭುತ್ವ ಇವರ ಮೇಲೆ ಕಣ್ಣಿಡುವುದಕ್ಕೆ ಕಾರಣವಾಯಿತು.

- Advertisement -
- Advertisement -

ಹೆಸರಾಂತ ಶಿಕ್ಷಣ ತಜ್ಞೆ, ದಲಿತರ ಮತ್ತು ಮಹಿಳೆಯರ ಹಕ್ಕುಗಳ ಚಳುವಳಿಗಾರ್ತಿ, ಶಿಕ್ಷಕಿ ಮತ್ತು ಹೋರಾಟಗಾರ್ತಿ – ಶೋಮಾ ಸೇನ್ ಇವೆಲ್ಲವೂ ಹೌದು ಮತ್ತು ಇವೆಲ್ಲವಕ್ಕಿಂತ ದೊಡ್ಡ ವ್ಯಕ್ತಿತ್ವದವರು. ಮುಂಬೈ ನಗರದಲ್ಲಿ ಹುಟ್ಟಿ ಬೆಳೆದ ಶೋಮಾ ಸಮಾಜದ ಆಂಚಿನಲ್ಲಿರುವ ದುರ್ಬಲ ಜನರ ಪ್ರಜಾಪ್ರಭುತ್ವ ಹಕ್ಕುಗಳನ್ನು ರಕ್ಷಿಸುವ ಧೃಡ ನಿರ್ಧಾರದೊಂದಿಗೆ ತನ್ನ ಸಂಗಾತಿ ಮತ್ತು ಮಗಳೊಂದಿಗೆ ನಾಗಪುರಕ್ಕೆ ಹೋಗುತ್ತಾರೆ.

ಹೆಚ್ಚು ಕಡಿಮೆ ಮೂರು ದಶಕಗಳ ಕಾಲ ಶೋಮಾ ಗೌರವಾನ್ವಿತ ಶಿಕ್ಷಣ ತಜ್ಞೆಯಾಗಿದ್ದಾರೆ. ವಾರ್ಧ ವಿಶ್ವವಿದ್ಯಾಲಯದ ಮಹಿಳೆಯರ ವಿಭಾಗದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಶೋಮಾ ನಾಗಪುರದ ವಿವಿಧ ಕಾಲೇಜುಗಳಲ್ಲಿ ಪಾಠ ಮಾಡುತ್ತಿದ್ದರು. ಬಂಧನಕ್ಕೊಳಗಾದ ಸಮಯದಲ್ಲಿ ಶೋಮಾ ರಾಷ್ಟ್ರಸಂತ್ ತುಕದೋಜಿ ಮಹಾರಾಜ್ ನಾಗಪುರ ವಿಶ್ವವಿದ್ಯಾನಿಲಯದಲ್ಲಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ವಸಾಹತುಶಾಹಿಯ ನಂತರದ ದಿನಗಳ ಕುರಿತು ಮತ್ತು ಮಹಿಳಾ ಅಧ್ಯಯನದ ಕುರಿತು ಹಲವಾರು ಪ್ರಮುಖ ಲೇಖನಗಳನ್ನು ದಶಕಗಳಿಂದ ಶೋಮಾ ಬರೆದಿದ್ದಾರೆ.

 

ದಲಿತ ಮತ್ತು ಆದಿವಾಸಿ ಮಹಿಳೆಯರ ಮೇಲೆ ನಡೆಯುವ ಹಲವು ವಿಧದ ಸ್ತರದ ದೌರ್ಜನ್ಯಗಳ ಕುರಿತಾಗಿ ಸ್ತ್ರೀವಾದಿ ದೃಷ್ಟಿಕೋನಗಳನ್ನು ಶೋಮಾ ತಮ್ಮ ಬರವಣಿಗೆಯಲ್ಲಿ ಚರ್ಚಿಸಿದ್ದಾರೆ. ಮಹಿಳೆಯರ ರಾಜಕೀಯ ಪ್ರತಿಪಾದನೆ-ಸಮರ್ಥನೆಗಳ ಕುರಿತು ಮತ್ತು ಸ್ತ್ರೀಶಕ್ತಿಯ ಬಗ್ಗೆ ಅವರ ಬರಹಗಳು ಬೆಳಕು ಚೆಲ್ಲಿವೆ. ತಮ್ಮ ಬರಹಗಳ ಜೊತೆಗೆ, ಅವರ ಚಳುವಳಿಯ ಕೆಲಸಗಳು ರಾಜಕೀಯ ಮತ್ತು ಸಾಮಾಜಿಕ ಮಾರ್ಪಾಟಿಗೆ ಅಪಾರ ಕೊಡುಗೆ ನೀಡಿದೆ. 1970ರ ಸಮಯದಲ್ಲಿ ಮುಂಬೈಯಲ್ಲಿ ಓದುವ ಸಮಯದಲ್ಲಿ ಅವರು ವಿದ್ಯಾರ್ಥಿ ಪ್ರಗತಿ ಸಂಘಟನೆಯ ಭಾಗವಾಗಿದ್ದರು. 1980ರಲ್ಲಿ ವಿದ್ಯಾರ್ಥಿಗಳ ಪತ್ರಿಕೆಯಾದ ’ಕಲಂ’ನ ಸಂಪಾದಕರಾಗಿದ್ದರು. ಬಟ್ಟೆ ಉದ್ದಿಮೆಯ ಕಾರ್ಮಿಕರ ಮುಷ್ಕರಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

ಇದನ್ನೂ ಓದಿ: ವಿದ್ಯಾರ್ಥಿಗಳ ನೆಚ್ಚಿನ, ಜನಪ್ರಿಯ ಪ್ರಾಧ್ಯಾಪಕ ಡಾ. ಹನಿ ಬಾಬು ಬಂಧನದಲ್ಲಿ…

ನಾಗಪುರಕ್ಕೆ ಹೋದ ನಂತರ ಶೋಮಾ ಪ್ರಜಾಪ್ರಭುತ್ವ ಹಕ್ಕುಗಳ ಕುರಿತಾದ ತಮ್ಮ ಹೋರಾಟವನ್ನು ಮುಂದುವರಿಸಿದರು. ಕಮಿಟಿ ಫಾರ್ ಪ್ರೊಟೆಕ್ಷನ್ ಆಫ್ ಡೆಮಾಕ್ರೆಟಿಕ್ ರೈಟ್ಸ್ (ಸಿಪಿಡಿಆರ್ – ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗಾಗಿ ಸಮಿತಿ) ಸಂಘಟನೆಯ ಚಟುವಟಿಕೆಯಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿದ್ದರು. ಸಿಪಿಡಿಆರ್ ಸಂಸ್ಥೆಯ ಮೂಲಕ ಪ್ರಜಾಪ್ರಭುತ್ವ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ ಜನರನ್ನು ಸಂಘಟಿಸುತ್ತಿದ್ದರು. ಮಹಿಳೆಯರ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಕಮಿಟಿ ವಿಮೆನ್ಸ್ ಎಗೇನ್ಸ್ಟ್ ಸೆಕ್ಷುಯಲ್ ವಯಲೆನ್ಸ್ ಅಂಡ್ ಸ್ಟೇಟ್ ರಿಪ್ರೆಷನ್ (ಸಿಎವಿಒಡಬ್ಲ್ಯು – ಲೈಂಗಿಕ ದೌರ್ಜನ್ಯ ಮತ್ತು ಪ್ರಭುತ್ವ ದಮನದ ವಿರುದ್ಧ ಮಹಿಳೆಯರ ಸಮಿತಿ) ಮತ್ತು ಸ್ತ್ರೀ ಚೇತನ ಸಂಘಟನೆಗಳ ಭಾಗವಾಗಿದ್ದರು. ಕಮಿಟಿ ವಿಮೆನ್ಸ್ ಎಗೇನ್ಸ್ಟ್ ಸೆಕ್ಷುಯಲ್ ವಯಲೆನ್ಸ್ ಅಂಡ್ ಸ್ಟೇಟ್ ರಿಪ್ರೆಷನ್ ಸಂಘಟನೆಯನ್ನು ಕಟ್ಟಿ ಬೆಳೆಸಿದರು. ಶೋಮಾ ಕಟ್ಟಿದ ಸಂಘಟನೆಯು ಪ್ರಭುತ್ವದ ಹಿಂಸೆಗೆ ಗುರಿಯಾಗಿದ್ದ ಮಣಿಪುರ ಮತ್ತು ಚತ್ತೀಸ್‌ಗಡದ ಪ್ರದೇಶದಲ್ಲಿ ಸತ್ಯಶೋಧನ ಕೆಲಸದಲ್ಲಿ ತೊಡಗಿಸಿಕೊಂಡಿತ್ತು. ಮಹಿಳಾ ರಾಜಕೀಯ ಖೈದಿಗಳಿಗೆ ಕಾನೂನಾತ್ಮಕ ಸಹಾಯ ಒದಗಿಸಲೂ ಶೋಮಾ ನಿರಂತರವಾಗಿ ಕೆಲಸ ಮಾಡಿದರು. ಪ್ರಜಾಪ್ರಭುತ್ವದ ಪ್ರಕ್ರಿಯೆಗಳಲ್ಲಿ ಮಹಿಳೆಯರ ಪಾತ್ರ ಹೆಸರಿಗಷ್ಟೇ ಅಂತಾಗಬಾರದು, ಮಹಿಳೆಯರು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುವಂತಹ ವಾತಾವರಣವಿರಬೇಕು ಎಂದು ಶೋಮಾ ಧೃಡವಾಗಿ ನಂಬಿದ್ದರು. ಬ್ರಾಹ್ಮಣ್ಯ – ಪಿತೃಪ್ರಧಾನ ವ್ಯವಸ್ಥೆಯಿಂದ ದುಪ್ಪಟ್ಟು ಶೋಷಣೆಗೊಳಪಟ್ಟಿರುವ ದಲಿತ ಮಹಿಳೆಯರ ಹಕ್ಕುಗಳಿಗಾಗಿ ಅವಿರತವಾಗಿ ಹೋರಾಡುತ್ತಿದ್ದರು. ಮುಖ್ಯವಾಹಿನಿಯ ಸ್ತ್ರೀವಾದವು ಜಾತಿಯ ಕುರಿತು ಕುರುಡಾಗಿದೆ, ದಲಿತ ಮಹಿಳೆಯರು ಸಮುದಾಯದ ಒಳಗೆ ಮತ್ತು ಹೊರಗೆ ಅನುಭವಿಸುವ ದೌರ್ಜನ್ಯದ ಕುರಿತು ಮೌನವಾಗಿದೆ ಎಂದು ಶೋಮಾ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.

ಅರವತ್ತು ವರ್ಷದ ಶೋಮಾರನ್ನು ಪುಣೆಯ ಪೋಲೀಸರು ಜೂನ್ 8, 2018ರಲ್ಲಿ ಬಂಧಿಸುತ್ತಾರೆ. ಪ್ರಭುತ್ವವು ಮಾನವ ಹಕ್ಕುಗಳ ರಕ್ಷಣೆಗೆ ಹೋರಾಡುವವರ ವಿರುದ್ಧ ತೆಗೆದುಕೊಂಡ ಹಿಂಸಾತ್ಮಕ ಕ್ರಮಗಳ ಭಾಗವಾಗಿಯೇ ಈ ಬಂಧನವಾಗುತ್ತದೆ. ಜೈಲಿನಲ್ಲಿನ ಭೇಟಿಗಳ ಕುರಿತು ಶೋಮಾರ ಮಗಳು ಸಾಮಾಜಿಕ ಜಾಲತಾಣಗಳಲ್ಲಿ ಬರೆದಿದ್ದಾರೆ. ಮಗಳಿಗೆ ಬರೆದ ಪತ್ರವೊಂದರಲ್ಲಿ ಶೋಮಾ “ಅವರು ನನ್ನನ್ನು ಬಂಧಿಸಿರಬಹುದು, ಆದರೆ ನನ್ನ ಆಲೋಚನೆಗಳು ಸ್ವತಂತ್ರವಾಗಿವೆ” ಎಂದು ಬರೆಯುತ್ತಾರೆ. ಈ ಸಾಲುಗಳು ಅವರ ಬತ್ತದ ಉತ್ಸಾಹಕ್ಕೆ ಕನ್ನಡಿಯಾಗಿದೆ. ಜೈಲಿನ ಅಧಿಕಾರಿಗಳು ಶೋಮಾರ ವಯಸ್ಸು, ಅವರ ಅಗತ್ಯಗಳು, ಕೀಲು ನೋವಿನ ಕುರಿತು ಅಸೂಕ್ಷ್ಮವಾಗಿ ವರ್ತಿಸಿದರೂ ಶೋಮಾರ ಉತ್ಸಾಹವನ್ನು ಕಡಿಮೆ ಮಾಡಲು ಸಾಧ್ಯವಾಗಿಲ್ಲ.

ಶಿಕ್ಷಣ ಕ್ಷೇತ್ರಕ್ಕೆ ಶೋಮಾ ನೀಡಿದ ಅದ್ಭುತ ಕೊಡುಗೆಗಳು, ಜನರನ್ನು ಅದರಲ್ಲೂ ವಿವಿಧ ಪ್ರದೇಶಗಳ ಮಹಿಳೆಯರನ್ನು ಸಂಘಟಿಸುವ ಅವರ ಶಕ್ತಿಯಿಂದ ಪ್ರಭುತ್ವ ಇವರ ಮೇಲೆ ಕಣ್ಣಿಡುವುದಕ್ಕೆ ಕಾರಣವಾಯಿತು. ಜಡ್ಡುಗಟ್ಟಿದ ಸಮಾಜಕ್ಕೆ ಸವಾಲೆಸೆದು ಅದನ್ನು ಬದಲಿಸುವ ಉದ್ದೇಶದಿಂದ ಹೋರಾಡುತ್ತಿದ್ದ ಮಹಿಳೆಯ ದನಿಯನ್ನು ಅಡಗಿಸುವ ಸ್ಪಷ್ಟ ಉದ್ದೇಶ ಪಿತೃಪ್ರಧಾನ ಪ್ರಭುತ್ವಕ್ಕಿರುವುದರಲ್ಲಿ ಅನುಮಾನವಿಲ್ಲ.

ಕೃಪೆ: ಮುಂಬೈ ರೈಸಸ್ ಟು ಸೇವ್ ಡೆಮಾಕ್ರಸಿ

ಅನುವಾದ: ಡಾ. ಕೆ. ಆರ್. ಅಶೋಕ್


ಇದನ್ನೂ ಓದಿ: ನ್ಯಾಯಕ್ಕಾಗಿ ಎದೆಯುಬ್ಬಿಸಿ ನಿಲ್ಲುವ ವರ್ನನ್ ಗೊನ್ಸಾಲ್ವೆಸ್ ಜೈಲಿನಲ್ಲಿ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...