ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿಯಲ್ಲಿ ಉರುಸ್ ನಡೆಸಲು ಅನುಮತಿ ನೀಡುವಂತೆ ಆಗ್ರಹಿಸಿದ ಕರ್ನಾಟಕ ಸಮಸ್ತ ಪ್ರಗತಿಪರ ಸೌಹಾರ್ದ ಸಂಘಟನೆಗಳ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದು ಆಗ್ರಹಿಸಿದ್ದಾರೆ.
ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿಯ ಸೌಹಾರ್ದ ಪರಂಪರೆಯನ್ನು ಸಂರಕ್ಷಿಸಲು ಹಾಗೂ ಸಂಪ್ರದಾಯದಂತೆ ಉರುಸ್ ನಡೆಸಲು ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ಕಳುಹಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
“ಸೌಹಾರ್ದ ತಾಣವಾದ ಬಾಬಾ ಬುಡನ್ ಗಿರಿ ಉಳಿವಿಗೋಸ್ಕರ ಕರ್ನಾಟಕದ ಎಲ್ಲಾ ಪ್ರಗತಿಪರ ಮನಸ್ಸುಗಳು ಅನೇಕ ದಶಕಗಳ ಕಾಲ ಹೋರಾಟ ಮಾಡಿದ್ದ ಇತಿಹಾಸ ನಮಗೆಲ್ಲರಿಗೂ ಗೊತ್ತೇ ಇದೆ. ಅದರಾಚೆಗೂ ಕೂಡ ಸಂಘಪರಿವಾರದ ಒತ್ತಡಕ್ಕೆ ಮಣಿದ ಕಾಂಗ್ರೆಸ್ ಸರ್ಕಾರ ಒಂದು ರಾಜಿ ಸೂತ್ರವನ್ನು ಮುಂದಿಟ್ಟಿತ್ತು. ಅದರ ಪ್ರಕಾರ ಉರುಸ್ ಹಾಗೂ ದತ್ತಪೂಜೆ ಎರಡನ್ನೂ ನಡೆಸಲು ಅವಕಾಶ ಇರಬೇಕು. ಎರಡನ್ನೂ ಕೂಡ ಜಿಲ್ಲಾಡಳಿತ ಮೇಲ್ವಿಚಾರಣೆ ಮಾಡಬೇಕು ಎನ್ನುವ ತೀರ್ಮಾನಕ್ಕೆ ಇದಾಗಿತ್ತು. ದತ್ತ ಪೂಜೆಯ ಹೆಸರಿನಲ್ಲಿ ಸಂಘಪರಿವಾರಕ್ಕೆ ಬ್ರಾಹ್ಮಣೀಯ ಆಚರಣೆಯನ್ನು ತುರುಕಲು ಇದು ಅವಕಾಶ ನೀಡುವುದಾಗಿದ್ದರೂ, ಒಂದು ರೀತಿಯಲ್ಲಿ ಈಗಾದರೂ ಈ ಸಂಘರ್ಷ ಮುಕ್ತಾಯಗೊಳ್ಳಲಿ ಎಂದು ಅದನ್ನು ಬೆಂಬಲಿಸಿದ ಜನರೂ ಇದ್ದರು. ಆದರೆ ಇದು ಇಬ್ಬರಿಗೂ ಅವಕಾಶ ಮಾಡಿಕೊಡುವ ಜಾತ್ಯಾತೀತ ನಿಲುವಲ್ಲ. ಸಂಘ ಪರಿವಾರಕ್ಕೆ ಮಣೆ ಹಾಕಿ, ಸೂಫಿ ಪರಂಪರೆಯನ್ನು ನಮ ನಿಶೇಧಿಸುವ ತಂತ್ರಗಾರಿಕೆ ಎಂಬುದು ಬಯಲಾಗಿದೆ” ಎಂದು ಬಹಿರಂಗ ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಬ್ರಾಹ್ಮಣೀಯ ರೀತಿಯಲ್ಲಿ ದತ್ತ ಜಯಂತಿ ನಡೆಸಲು ಜಿಲ್ಲಾಡಳಿತ ಸಂಪೂರ್ಣ ಅವಕಾಶ ನೀಡಿತ್ತು. ಬಾಬಾ ಬುಡನ್ ಗಿರಿಯನ್ನು ಕೇಸರಿಮಯಗೊಳಿಸಿ ಸಂಘಪರಿವಾರದ ನೇತೃತ್ವದಲ್ಲಿ ದತ್ತ ಜಯಂತಿ ನಡೆಯಿತು. ಆದರೆ, ಅದೇ ಸಂಧರ್ಭದಲ್ಲಿ ನೆನ್ನೆ(ಮಾರ್ಚ್4), ಇಂದು(ಮಾರ್ಚ್5) ಮತ್ತು ನಾಳೆ(ಮಾರ್ಚ್6) ದರ್ಗಾ ಸಮಿತಿ ಕಡೆಯಿಂದ ಉರುಸ್ ಆಯೋಜನೆಗೊಂಡಿತ್ತು. ಆದರೆ ಜಿಲ್ಲಾಡಳಿತ ಉರುಸ್ ನಡೆಯದಂತೆ ತಡೆಯೊಡ್ಡಿದೆ. ಸಜ್ಜಾದೆ ಅವರಿಗೆ ನಿಮಗೆ ಇಲ್ಲಿ ಸಂಪ್ರದಾಯದಂತೆ ಗಂಧ ಹಚ್ಚುವ, ಉರುಸ್ ಅನ್ನು ನಡೆಸಿಕೊಡುವ ಹಕ್ಕು ಇಲ್ಲ ಎಂದು ತಡೆ ಹಿಡಿದು, ಗೋರಿಯ ಮೇಲೆ ಹಸಿರು ಚಾದರ್ ಹಾಕುವುದಕ್ಕಾಗಲಿ, ಅವರ ಸಂಪ್ರದಾಯದಂತೆ ಉರುಸ್ ನಡೆಸಲಾಗಲಿ ಅವಕಾಶ ಕೊಡದೆ ಅವರನ್ನು ಹೊರಗಿಡಲಾಗಿದೆ” ಎಂದು ಆರೋಪಿಸಿದ್ದಾರೆ.
“ಈ ಅನ್ಯಾಯವನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿದ್ದವು. ಆ ಪ್ರತಿಭಟನೆಗೂ ಅವಕಾಶ ಕೊಡದಂತೆ ಪೊಲೀಸರು ಪ್ರತಿಭಟನೆಗೆ ಮುಂದಾದ ಹೋರಾಟಗಾರರನ್ನು ಎಳೆದಾಡಿ ಅವಮಾನಕಾರಿಯಾಗಿ ನಡೆಸಿಕೊಂಡಿದ್ದಾರೆ. ಇದು ಹುಸಿ ಜಾತ್ಯಾತೀತ ಹಾಗೂ ದ್ವಂದ್ವ ನೀತಿಯಾಗಿದೆ. ಕಾಂಗ್ರೆಸ್ ಸರ್ಕಾರದ ಈ ನಡವಳಿಕೆಯನ್ನು ನಾವು ಖಂಡಿಸುತ್ತಿದ್ದೇವೆ. ತಾವು ಈ ಕೂಡಲೇ ಮಧ್ಯಪ್ರವೇಶ ಮಾಡಿ ಬಾಬಾ ಬುಡನ್ ಗಿರಿಯಲ್ಲಿ ಸೌಹಾರ್ದ ಪರಂಪರೆಯನ್ನು ಸಂರಕ್ಷಿಸಬೇಕು, ಸುಪ್ರೀಂಕೋರ್ಟ್ ತೀರ್ಪಿನ ಆದೇಶದಂತೆ ನಡೆದುಕೊಳ್ಳಬೇಕು. ಉರುಸ್ ನಡೆಸಲು ಸಜ್ಜಾದೆ ಮತ್ತು ಭಕ್ತಾದಿಗಳಿಗೆ ಅವಕಾಶ ನೀಡಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ಸೂಕ್ತ ರೀತಿಯಲ್ಲಿ ನಿರ್ದೇಶನ ನೀಡಬೇಕೆಂದು ಒತ್ತಾಯಿಸುತ್ತಿದ್ದೇವೆ” ಎಂದು ಆಗ್ರಹಿಸಿದ್ದಾರೆ.
ಪತ್ರದಲ್ಲಿ ಸಹಿ ಮಾಡಿದರವರು:
- ಡಾ.ವಿಜಯಮ್ಮ, ಹಿರಿಯ ಪತ್ರಕರ್ತರು.
- ತಾರಾರಾವ್, ಎದ್ದೇಳು ಕರ್ನಾಟಕ.
- ಬಂಜಗೆರೆ ಜಯಪ್ರಕಾಶ್
- ಪ್ರಕಾಶ್ ರಾಜ್
- ಕೆ.ಎಲ್.ಅಶೋಕ್, ಕಾರ್ಯದರ್ಶಿ, ಕರ್ನಾಟಕ ಜನಶಕ್ತಿ.
- ಗೌಸ್ ಮೊಹಿಯುದ್ಧೀನ್.
- ನಗರಗೆರೆ ರಮೇಶ್, ಶಾಂತಿಗಾಗಿ ನಾಗರಿಕರ ವೇದಿಕೆ.
- ಪ್ರೊ.ವಿ.ಎಸ್.ಶ್ರೀಧರ್, ಶಾಂತಿಗಾಗಿ ನಾಗರಿಕರ ವೇದಿಕೆ.
- ನೂರ್ ಶ್ರೀಧರ್ ರಾಜ್ಯಾಧ್ಯಕ್ಷರು, ಕರ್ನಾಟಕ ಜನಶಕ್ತಿ.
- ಶ್ರೀಪಾದ್ ಭಟ್, ಶಿಕ್ಷಣ ತಜ್ಞರು.
- ಬಸವರಾಜ್ ಕೌತಾಳ್, ಒಳ ಮೀಸಲಾತಿ ಹೋರಾಟ ಸಮಿತಿ.
- ಕರಿಯಪ್ಪ ಗುಡಿಮನಿ, ಒಳಮೀಸಲಾತಿ ಹೋರಾಟಗಾರರು.
- ನಿರಂಜನಾರಾಧ್ಯ ವಿ.ಪಿ., ಶಿಕ್ಷಣ ತಜ್ಞರು.
- ಸಿರಿಮನೆ ನಾಗರಾಜ್, ಗೌರವಾಧ್ಯಕ್ಷರು, ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ.
- ಸಿದ್ಗೌಡ ಮೋದಗಿ, ಭಾರತೀಯ ಕೃಷಿಕ ಸಮಾಜ.
- ಅನಂತ್, ಯುವಶಕ್ತಿ.
- ಮಲ್ಲು ಕುಂಬಾರ್ ಲೈಂಗಿಕ ಅಲ್ಪಸಂಖ್ಯಾತರ ಒಕ್ಕೂಟ.,
- ಬಸವರಾಜ್ ಸೂಳಿಭಾವಿ ಮೇ ಸಾಹಿತ್ಯ ಬಳಗ.,
- ಬಸವರಾಜ್, ಬಾದರ್ಲಿ.
- ಸಿದ್ಧರಾಜು ಮಂಡ್ಯ, ಕರ್ನಾಟಕ ಜನಶಕ್ತಿ
- ಕುಮಾರ್ ಸಮತಳ, ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ.
- ಲಕ್ಷ್ಮಣ ಮಂಡಲಗೇರಾ, ರಂಗಕರ್ಮಿ-ಪತ್ರಕರ್ತ
- ದುರ್ಗೇಶ್ ರಾಜ್ಯ ಸಂಚಾಲಕ ಕೆವಿಎಸ್,
- ರಘು ನಂದನ್, ರಂಗಕರ್ಮಿ.
- ಡಾ.ಕಿರಣ್ ಕಮಲ್ ಪ್ರಸಾದ್, ಜೀವಿಕ.
- ಎ.ಎಸ್.ಪ್ರಭಾಕರ್, ಪ್ರಾಧ್ಯಾಪಕರು.
- ಎಂ.ಆರ್.ನAದನ್ ನಿವೃತ್ತ ಪ್ರಾಧ್ಯಾಪಕರು.
- ಚೆನ್ನಮ್ಮ, ಮಹಿಳಾ ಮುನ್ನಡೆ.
- ಶಿವಣ್ಣ, ಪ್ರಾಧ್ಯಾಪಕ.
- ಫಾ.ಸಮೀರ್ ಮಿನ್ಜಿ, ಮೈನ್ ಇಂಡಿಯನ್ ಸೋಸಿಯಲ್ ಇನ್ಸ್ಟಿಟ್ಯೂಟ್.
- ಖಲೀಂಉಲ್ಲಾ, ಸ್ವರಾಜ್ ಇಂಡಿಯಾ.
- ರವಿ ಮೋಹನ್, ಕಾರ್ಮಿಕ ಮುಖಂಡ.
- ನಾಗೇಶ್ ಅರಳಕುಪ್ಪೆ
- ಪೂರ್ಣಿಮಾ, ಮಹಿಳಾ ಮುನ್ನಡೆ.
- ಚಂದ್ರು ತರಹುಣಿಸೆ – ಪತ್ರಕರ್ತ
- ಮಂಜುಳಾ ಹುಲಿಕುಂಟೆ – ಕವಿ


