Homeಮುಖಪುಟಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ತಂತ್ರಜ್ಞ ಪುಟ್ಟಣ್ಣ ಕಣಗಲ್ ಸ್ಮರಣೆ

ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ತಂತ್ರಜ್ಞ ಪುಟ್ಟಣ್ಣ ಕಣಗಲ್ ಸ್ಮರಣೆ

ಕಲಾವಿದರಿಗೆ ಸ್ವತಃ ತಾವೇ ಅಭಿನಯಿಸಿ ತೋರಿಸುವ ಪರಿಪಾಠ ರೂಢಿಸಿಕೊಂಡಿದ್ದ ನಿರ್ದೇಶಕ ಅವರು. ನಟ, ನಟಿಯರು ಇದನ್ನು ಶ್ರದ್ಧೆಯಿಂದ ಅನುಸರಿಸಿದರೆ ಸಾಕಿತ್ತು. ಹೀಗೆ ಪುಟ್ಟಣ್ಣನವರ ನಿರ್ದೇಶನದಲ್ಲಿ ತೀರಾ ಸಾಧಾರಣ ಎನ್ನುವವರು ಕೂಡ ಪಳಗಿದ ಕಲಾವಿದರಾಗಿ ಹೆಸರು ಮಾಡಿದರು.

- Advertisement -
- Advertisement -

70-80ರ ದಶಕಗಳಲ್ಲಿ ದಕ್ಷಿಣ ಭಾರತದ ಇತರೆ ಚಿತ್ರರಂಗಗಳು ಮಾತ್ರವಲ್ಲ ಬಾಲಿವುಡ್‍ನವರೂ ಕನ್ನಡ ಸಿನಿಮಾದತ್ತ ಹೊರಳಿ ನೋಡುವಂಥ ಚಿತ್ರಗಳನ್ನು ರೂಪಿಸಿದವರು ಪುಟ್ಟಣ್ಣ ಕಣಗಾಲ್. ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ತಂತ್ರಜ್ಞ ಪುಟ್ಟಣ್ಣ ಅಗಲಿ ಇಂದಿಗೆ (ಜೂನ್ 5) ಮೂವತ್ತೈದು ವರ್ಷ. ಪುಟ್ಟಣ್ಣನವರ ಹತ್ತು ಸಿನಿಮಾಗಳಿಗೆ ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ ಪ್ರಗತಿ ಅಶ್ವತ್ಥ ನಾರಾಯಣ ಅವರು ಮೇರು ನಿರ್ದೇಶಕನನ್ನು ಸ್ಮರಿಸಿಕೊಂಡಿದ್ದಾರೆ.

***

ಪುಟ್ಟಣ್ಣನವರನ್ನು ಮೊದಲ ಬಾರಿ ನಾನು ಭೇಟಿ ಮಾಡಿದ್ದು ಮದರಾಸಿನ ವೀನಸ್ ಸ್ಟುಡಿಯೋದಲ್ಲಿ. ಅವರ ’ಬೆಳ್ಳಿಮೋಡ’ (1965) ಸಿನಿಮಾ ಸ್ಟಿಲ್ ಫೋಟೋಗ್ರಫಿಗೆಂದು ಹೋಗಿದ್ದೆ. ಮುಂದೆ ಅವರ ನಿರ್ದೇಶನದ ಹತ್ತು ಸಿನಿಮಾಗಳಿಗೆ (ಒಂಬತ್ತು ಕನ್ನಡ ಮತ್ತು ಒಂದು ಮಲಯಾಳಂ) ಕೆಲಸ ಮಾಡಿದೆ. ಅವರೊಂದಿಗೆ ಕೆಲಸ ಮಾಡುವ ಮೂಲಕ ನನಗೂ ಕಲಿಯಲು ಸಾಧ್ಯವಾಯ್ತು ಎಂದು ಹೇಳಬಹುದು. ಈಗಲೂ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್, ಸಿದ್ದಲಿಂಗಯ್ಯನವರ ಹೆಸರು ಹೇಳಿ ನನ್ನನ್ನು ಗುರುತಿಸುವಾಗ ಹೆಮ್ಮೆ ಎನಿಸುತ್ತದೆ.
ನೀವು ಗಮನಿಸಿ, ಪುಟ್ಟಣ್ಣನವರ ಸಿನಿಮಾಗಳ ಪ್ರತೀ ಸೀನ್‍ಗಳಿಗೂ ಒಂದು ಕಲಾತ್ಮಕ ಫ್ರೇಮ್ ಇರುತ್ತದೆ. ಅವರಿಗೆ ಕ್ಯಾಮರಾ ಆಂಗಲ್‌ಗಳ ಬಗ್ಗೆ ಸ್ಪಷ್ಟ ಚಿತ್ರಣವಿತ್ತು. ಅಗ್ಗದ ಗಿಮಿಕ್‍ಗಳ ಬಗ್ಗೆ ಕಿಡಿಕಾರುತ್ತಿದ್ದ ಅವರು ಅನಗತ್ಯವಾಗಿ  ಟೆಕ್ನಾಲಜಿ ಬಳಕೆ ಮಾಡುತ್ತಿರಲಿಲ್ಲ. ಕತೆ, ದೃಶ್ಯಕ್ಕೆ ಅಗತ್ಯವಿದ್ದರಷ್ಟೇ ಕ್ಯಾಮರಾ ತಂತ್ರಗಾರಿಕೆ ಬಳಕೆಯಾಗುತ್ತಿತ್ತು. ’ನಾಗರಹಾವು’ ಚಿತ್ರದ ಹಾಡನ್ನು ಸ್ಲೋ ಮೋಷನ್‍ನಲ್ಲಿ ಚಿತ್ರಿಸಿದ ಪುಟ್ಟಣ್ಣ ’ಋಣಮುಕ್ತಳು’ ಚಿತ್ರಕ್ಕೆ ಝೂಮ್ ಬಳಕೆ ಮಾಡಿರಲೇ ಇಲ್ಲ.

ತಂತ್ರಜ್ಞರನ್ನು ಅವರು ಅತ್ಯಂತ ಸಮರ್ಥವಾಗಿ ದುಡಿಸಿಕೊಂಡರು. ಸಾಧಾರಣ ಎನಿಸಿಕೊಂಡ ತಂತ್ರಜ್ಞರು ಕೂಡ ಪುಟ್ಟಣ್ಣನವರ ಸಂಗದಲ್ಲಿ ಅತ್ಯುತ್ತಮ ಕೆಲಸಗಾರರಾಗಿ ಹೊರಹೊಮ್ಮಿದರು. ಚಿತ್ರೀಕರಣವಾದ ನಂತರ ನಾನು ಸ್ಟಿಲ್ಸ್ ತೆಗೆದುಕೊಳ್ಳುವಾಗಲೂ ಅವರು ಅಲ್ಲಿರುತ್ತಿದ್ದರು. ಮೂವೀ ಕ್ಯಾಮರಾ ಪೊಸಿಷನ್‌ನಲ್ಲೇ ಫೋಟೋ ತೆಗೆಯಬೇಕಾಗಿತ್ತು. ಆಗ ಪುಟ್ಟಣ್ಣ ನನಗೂ ಸೂಕ್ತ ನಿರ್ದೇಶನ ನೀಡುತ್ತಿದ್ದರು. ಲೈಟಿಂಗ್ ಬಗ್ಗೆ ಅವರಿಗೆ ಅತಿಯಾದ ಕಾಳಜಿ. ಟೇಕ್‍ಗೆ ಮುನ್ನ ಕಲಾವಿದರಿಗೆ ಲೈಟಿಂಗ್ ರಿಹರ್ಸಲ್ ಕೊಡುತ್ತಿದ್ದುದು ಕಡ್ಡಾಯವಾಗಿತ್ತು.
ನಿರ್ದೇಶಕ ಪುಟ್ಟಣ್ಣನವರೊಂದಿಗೆ ಕೆಲಸ ಮಾಡಿದ ನಮಗೆ ಈಗಿನ ತಂತ್ರಜ್ಞರ ಕಾರ್ಯವೈಖರಿ ನೋಡಿದಾಗ ಕೆಲವು ಬಾರಿ ಸೋಜಿಗವೆನಿಸುತ್ತದೆ. ತೆರೆಯ ಮೇಲಿನ ಚಲಿಸುವ ಚಿತ್ರಗಳಿಗೂ, ಹಿನ್ನೆಲೆ ಸಂಗೀತಕ್ಕೂ ಸಂಬಂಧವಿಲ್ಲದಿದ್ದರೆ ಫ್ರೇಮ್‍ಗಳು ನೀರಸವೆನಿಸುತ್ತವೆ. ದೃಶ್ಯ ಮಾಧ್ಯಮವನ್ನು ದುಡಿಸಿಕೊಳ್ಳುವ ಕಲೆ ಗೊತ್ತಿರದಿದ್ದರೆ ಜನರನ್ನು ತಲುಪಲು ಸಾಧ್ಯವೇ ಇಲ್ಲ. ಪುಟ್ಟಣ್ಣನವರಿಗೆ ಸಿನಿಮಾದ ಎಲ್ಲಾ ವಿಭಾಗಗಳಲ್ಲಿಯೂ ಅಪಾರ ಜ್ಞಾನವಿತ್ತು ಮತ್ತು ಅವರು ಇದನ್ನು ಸಮರ್ಪಕವಾಗಿ ದುಡಿಸಿಕೊಳ್ಳುತ್ತಿದ್ದರು. ಹಾಗಾಗಿಯೇ ಅವರು ಚಿತ್ರಿಸಿರುವ ಪ್ರತೀ ಸನ್ನಿವೇಶಗಳಲ್ಲಿಯೂ ಜೀವಂತಿಕೆ ಕಾಣಿಸುವುದು.

ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಅವರೊಂದಿಗೆ

ಸೆಟ್‍ನಲ್ಲಿ ಪುಟ್ಟಣ್ಣನವರೊಂದಿಗೆ ಚಿತ್ರಕ್ಕೆ ಸಂಭಾಷಣೆ, ಗೀತೆಗಳನ್ನು ಬರೆದವರು ಇರುತ್ತಿದ್ದರು. ಪ್ರತೀ ಶಾಟ್‍ಗೆ ಮುನ್ನ ಪರಸ್ಪರರಲ್ಲಿ ಚರ್ಚೆ ನಡೆಯುತ್ತಿತ್ತು. ಸೆಟ್‍ನಲ್ಲಿ ಜೊತೆಗಿರುವ ಬರಹಗಾರರ ಅಭಿಪ್ರಾಯಗಳನ್ನು ಪಡೆದ ನಂತರ ತಮ್ಮ ಹೇಳಿಕೆಯನ್ನೂ ಪುಟ್ಟಣ್ಣ ದಾಖಲಿಸುತ್ತಿದ್ದರು. ಇವುಗಳಲ್ಲಿ ಅತ್ಯಂತ ಸಮರ್ಪಕವೆನಿಸುವ ಅಭಿಪ್ರಾಯವೊಂದು ಸನ್ನಿವೇಶವಾಗಿ ಮೈದಾಳುತ್ತಿತ್ತು. ಪುಟ್ಟಣ್ಣ ಸನ್ನಿವೇಶವೊಂದನ್ನು ಕ್ಷಣಕ್ಷಣಕ್ಕೂ ಚೆಂದಗೊಳಿಸಲು ಶ್ರಮಿಸುತ್ತಿದ್ದರು. ಕಲಾವಿದರಿಗೆ ಸ್ವತಃ ತಾವೇ ಅಭಿನಯಿಸಿ ತೋರಿಸುವ ಪರಿಪಾಠ ರೂಢಿಸಿಕೊಂಡಿದ್ದ ನಿರ್ದೇಶಕ ಅವರು. ನಟ, ನಟಿಯರು ಇದನ್ನು ಶ್ರದ್ಧೆಯಿಂದ ಅನುಸರಿಸಿದರೆ ಸಾಕಿತ್ತು. ಹೀಗೆ ಪುಟ್ಟಣ್ಣನವರ ನಿರ್ದೇಶನದಲ್ಲಿ ತೀರಾ ಸಾಧಾರಣ ಎನ್ನುವವರು ಕೂಡ ಪಳಗಿದ ಕಲಾವಿದರಾಗಿ ಹೆಸರು ಮಾಡಿದರು.

ನಾನು ನೋಡಿದಂತೆ, ವೃತ್ತಿಪರತೆಗೆ ಒಳ್ಳೆಯ ಉದಾಹರಣೆ ಪುಟ್ಟಣ್ಣ. ಅವರ ಶೂಟಿಂಗ್ ಸೆಟ್‍ನಲ್ಲಿ ಕೆಲಸ ಮಾಡುವ ಎಲ್ಲರಲ್ಲೂ ಶಿಸ್ತು ಮೈಗೂಡಿರುತ್ತಿತ್ತು. ಸೆಟ್‍ನಲ್ಲಿ ಕೆಲಸ ಮಾಡುವಾಗ ಅನುಚಿತ ವರ್ತನೆ, ಜೋರು ದನಿಯಲ್ಲಿ ಮಾತನಾಡುವುದನ್ನು ಪುಟ್ಟಣ್ಣ ಸಹಿಸುತ್ತಿರಲಿಲ್ಲ. ಯಾವುದೇ ಒತ್ತಡವಿಲ್ಲದೆ ಆರಾಮವಾಗಿ ಚಿತ್ರಿಸುವುದು ಅವರ ಶೈಲಿ. ಸೆಟ್‍ನಲ್ಲಿ ಎಲ್ಲರಿಗೂ ಪುಟ್ಟಣ್ಣನವರ ರೀತಿ, ನೀತಿಯ ಅರಿವಿರುತ್ತಿತ್ತು. ಹಾಗಾಗಿ ಅವರ ಕೋಪಕ್ಕೆ ಆಸ್ಪದ ನೀಡದಂತೆ ನಡೆದುಕೊಳ್ಳುತ್ತಿದ್ದರು.

‘ಧರ್ಮಸೆರೆ’ ಸಿನಿಮಾ ಚಿತ್ರೀಕರಣದಲ್ಲಿ ಕಲಾವಿದರಿಗೆ ನಿರ್ದೇಶನ

ಬೆಳಗ್ಗೆ ಒಂಬತ್ತೂವರೆಗೇ ಪ್ಯಾಕ್ ಅಪ್!

ಪುಟ್ಟಣ್ಣನವರು ತಾವು ಅಂದುಕೊಂಡಂತೆಯೇ ಶಾಟ್ ಮೂಡಿಬರಬೇಕೆಂದು ಪಟ್ಟು ಹಿಡಿಯುತ್ತಿದ್ದರು. ಇದಕ್ಕಾಗಿ ಅವರೆಷ್ಟು ಶ್ರಮ ಹಾಕುತ್ತಿದ್ದರು ಎನ್ನುವುದಕ್ಕೆ ’ಪಡುವಾರಹಳ್ಳಿ ಪಾಂಡವರು’ ಚಿತ್ರದ ಸನ್ನಿವೇಶವೊಂದನ್ನು ಉದಾಹರಿಸಬಹುದು. ಚಿತ್ರದ ಕತೆಗೆ ತಿರುವು ನೀಡುವಂಥ ಸನ್ನಿವೇಶವೊಂದನ್ನು ಅಂದು ಚಿತ್ರಿಸಬೇಕಿತ್ತು. ನಟ ರಾಮಕೃಷ್ಣ ತನ್ನ ಮನೆ ತೊರೆದು ಹೋಗುವ ಸನ್ನಿವೇಶವದು. ಆತ ಗ್ರಾಮದ ಪ್ರತೀ ಮನೆ ಎದುರು ನಿಂತು ಡೈಲಾಗ್ ಹೇಳಿ ಊರಿನ ಹೆಬ್ಬಾಗಿಲಿನಿಂದ ತೆರಳುತ್ತಾನೆ. ಸುಮಾರು ಇನ್ನೂರೈವತ್ತು – ಮುನ್ನೂರು ಅಡಿಗಳ ಶಾಟ್ ಅದು. ಪುಟ್ಟಣ್ಣ ಇದನ್ನು ಒಂದೇ ಶಾಟ್‍ನಲ್ಲಿ ಚಿತ್ರಿಸಬೇಕೆಂದಿದ್ದರು.

ಅತಿ ಹೆಚ್ಚೆಂದರೆ ನೂರು ಅಡಿವರೆಗಷ್ಟೇ ಚಿತ್ರಿಸಲು ಸಾಧ್ಯವಾಗುತ್ತಿದ್ದುದು. ಮುನ್ನೂರು ಅಡಿಯಷ್ಟು ದೂರಕ್ಕೆ ಟ್ರ್ಯಾಲಿ, ಟ್ರ್ಯಾಕ್ ಹಾಕಲು ಸಾಧ್ಯವಿರಲಿಲ್ಲ. ಈ ಶಾಟ್‍ಗಾಗಿ ಎರಡು ದಿನ ಏನೇನೋ ಪ್ರಯೋಗಗಳನ್ನು ನಡೆಸಿದ್ದಾಯ್ತು. ದೇವರನ್ನು ಪಲ್ಲಕ್ಕಿಯಲ್ಲಿ ಹೊತ್ತೊಯ್ಯುವಂತೆ ನಾಲ್ವರು ಕ್ಯಾಮರಾ ಹೊತ್ತೊಯ್ದರು. ಇದೇ ರೀತಿ ಹಲವಾರು ಪ್ರಯತ್ನಗಳನ್ನು ನಡೆಸಿದ್ದಾಯ್ತು. ಜರ್ಕ್ ಬರುತ್ತಿದ್ದುದರಿಂದ ಈ ಐಡಿಯಾಗಳು ವರ್ಕ್ ಆಗಲಿಲ್ಲ. ಅಂದು ಸಂಜೆ ಪುಟ್ಟಣ್ಣ, ನಟಿ ಆರತಿ ಅಣ್ಣ ಮುಕುಂದ ಹಾಗೂ ಛಾಯಾಗ್ರಾಹಕ ಮಾರುತಿ ರಾವ್ ಮತ್ತೊಂದು ಪ್ರಯೋಗ ನಡೆಸುವುದೆಂದು ಮಾತನಾಡಿಕೊಂಡರು.

ಛಾಯಾಗ್ರಾಹಕ ಬಿ.ಎಸ್.ಬಸವರಾಜ್ ಅವರೊಂದಿಗೆ

ಮರುದಿನ ಬೆಳಗ್ಗೆ ಆರೂವರೆ ಹೊತ್ತಿಗೆ ಶೂಟಿಂಗ್ ಶುರುವಾಯ್ತು. ನಟ ರಾಮಕೃಷ್ಣ ಹಾದು ಹೋಗುವ ರಸ್ತೆಗೆ ಮಣ್ಣು ಹಾಕಿ ಸಮತಟ್ಟು ಮಾಡಲಾಗಿತ್ತು. ಹಿಂದಿನ ದಿನ ಮಾತನಾಡಿಕೊಂಡಂತೆ, ಸಹ ನಿರ್ದೇಶಕ ಮುಕುಂದ ನಿಧಾನವಾಗಿ ಸ್ಕೂಟರ್ ಓಡಿಸಬೇಕು. ಹಿಂದೆ ಕುಳಿತ ಮಾರುತಿರಾವ್ ತಮ್ಮ ಕ್ಯಾಮರಾದಲ್ಲಿ ದೃಶ್ಯ ಸೆರೆಹಿಡಿಯಬೇಕಾಗಿತ್ತು. ಪುಟ್ಟಣ್ಣ ಆ್ಯಕ್ಷನ್ ಹೇಳುತ್ತಿದ್ದಂತೆ ರಾಮಕೃಷ್ಣ ಸಂಭಾಷಣೆ ಹೇಳುತ್ತಾ ಪ್ರತೀ ಮನೆಯನ್ನು ಹಾದು ಊರಿನಿಂದ ಹೊರಗೆ ತೆರಳಿದರು. ಮುಕುಂದ, ಮಾರುತಿರಾವ್ ಸ್ಕೂಟರ್ ಮೇಲೆ ಅವರನ್ನು ಅನುಸರಿಸಿಕೊಂಡು ಹೋದರು. ಶಾಟ್ ಓಕೆ ಆಯ್ತು! ಪುಟ್ಟಣ್ಣನವರು ಅಂದುಕೊಂಡಂತೆಯೇ ಶಾಟ್ ಬಂತು. ಬೆಳಗ್ಗೆ ಏಳೂವರೆಗೆ ಶುರುವಾದ ಚಿತ್ರೀಕರಣ ಒಂಭತ್ತೂವರೆ ಹೊತ್ತಿಗೆ ಮುಗಿದಿತ್ತು. ಪುಟ್ಟಣ್ಣ, ’ಪ್ಯಾಕ್‍ಅಪ್’ ಅಂದರು! ಎಲ್ಲರಿಗೂ ಆಶ್ಚರ್ಯ! ’ನಾನು ಇಂದು ಏನು ಚಿತ್ರಿಸಬೇಕು ಅಂದುಕೊಂಡಿದ್ದೆನೋ ಅದು ಮುಗಿದಿದೆ. ಮುಂದಿನ ಶಾಟ್ ಏನೂಂತ ಯೋಚಿಸಿಲ್ಲ. ನಾಳೆ ನೋಡೋಣ. ಎಲ್ಲರೂ ಹೋಗಿ..!’ ಎಂದರು ಪುಟ್ಟಣ್ಣ. ಬೆಳ್ಳಂಬೆಳಗ್ಗೆ ಪ್ಯಾಕ್‍ಅಪ್ ಹೇಳಿದ್ದು ಆಗ ಗಾಂಧಿನಗರದಲ್ಲಿ ದೊಡ್ಡ ಸುದ್ದಿಯಾಗಿತ್ತು.

ಪುಟ್ಟಣ್ಣರ ಅಭಿಮಾನಿ ಬಾಲಚಂದರ್

ಸೂಪರ್‌ಹಿಟ್ `ಅವಳ್ ಒರು ತೊಡರ್ ಕಥೈ’ ತಮಿಳು ಚಿತ್ರವನ್ನು ಕನ್ನಡಕ್ಕೆ ತರಲು ನಿರ್ಮಾಪಕ ಚಂದೂಲಾಲ್ ಜೈನ್ ನಿರ್ಧರಿಸಿದ್ದರು. ತಮಿಳು ಸಿನಿಮಾ ನಿರ್ದೇಶಿಸಿದ್ದ ಕೆ.ಬಾಲಚಂದರ್ ಅವರೇ ಕನ್ನಡ ಅವತರಣಿಕೆಯನ್ನೂ (ಬೆಂಕಿಯಲ್ಲಿ ಅರಳಿದ ಹೂ) ನಿರ್ದೇಶಿಸುವುದೆಂದು ಗೊತ್ತಾಯಿತು. ಕನ್ನಡ ಅವತರಣಿಕೆಗೂ ತಮ್ಮೊಂದಿಗೆ ಮದರಾಸಿನ ತಂತ್ರಜ್ಞರೇ ಕೆಲಸ ಮಾಡಬೇಕೆಂದು ಬಾಲಚಂದರ್ ಹೇಳಿದ್ದರು. ಆದರೆ, ಸ್ಟಿಲ್ ಫೋಟೋಗ್ರಾಫರ್ ಆಗಿ ನಾನೇ ಕೆಲಸ ಮಾಡಬೇಕೆನ್ನುವುದು ನಿರ್ಮಾಪಕ ಚಂದೂಲಾಲ್ ಜೈನ್ ಆಶಯವಾಗಿತ್ತು. ಸ್ಟಿಲ್‍ಗಳಿಗೆಂದು ಪ್ರತೀ ಬಾರಿ ಮದ್ರಾಸ್‍ಗೆ ಹೋಗಿ ಬರುವ ತಾಪತ್ರಯ ತಪ್ಪುತ್ತದೆ ಎನ್ನುವ ಉದ್ದೇಶವೂ ಇದರ ಹಿಂದಿತ್ತು.

’ಇವರು ಪುಟ್ಟಣ್ಣ ಕಣಗಾಲ್ ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ನಿಮ್ಮ ಚಿತ್ರಕ್ಕೂ ಇವರೇ ಇರಲಿ..’ ಎಂದು ಚಂದೂಲಾಲ್ ನಿರ್ದೇಶಕ ಬಾಲಚಂದರ್‌ಗೆ ನನ್ನನ್ನು ಪರಿಚಯಿಸಿದ್ದರು. ಪುಟ್ಟಣ್ಣನವರೊಂದಿಗೆ ಕೆಲಸ ಮಾಡಿದ ಫೋಟೋಗ್ರಾಫರ್ ಎನ್ನುವ ಒಂದೇ ಕಾರಣಕ್ಕೆ ಬಾಲಚಂದರ್ ನನ್ನನ್ನು ಒಪ್ಪಿಕೊಂಡರು. ಅವರು ಪುಟ್ಟಣ್ಣನವರ ಅಭಿಮಾನಿ ಎನ್ನುವುದು ಮುಂದಿನ ದಿನಗಳಲ್ಲಿ ನನಗೆ ಮನವರಿಕೆಯಾಯ್ತು. ’ಬೆಂಕಿಯಲ್ಲಿ ಅರಳಿದ ಹೂ’ ಚಿತ್ರೀಕರಣದುದ್ದಕ್ಕೂ ಬಾಲಚಂದರ್, ಪುಟ್ಟಣ್ಣನವರ ವರ್ಕಿಂಗ್ ಸ್ಟೈಲ್ ಹಾಗೂ ಇತರೆ ಸಂಗತಿಗಳ ಬಗ್ಗೆ ನನ್ನನ್ನು ಕೇಳುತ್ತಿದ್ದರು. ಬಾಲಚಂದರ್ ಕೂಡ ದೊಡ್ಡ ನಿರ್ದೇಶಕರೇ. ಆದಾಗ್ಯೂ ಯಾವುದೇ ಹೆಚ್ಚುಗಾರಿಕೆ ಇಲ್ಲದೆ ಪುಟ್ಟಣ್ಣನವರ ಬಗ್ಗೆ ಅವರು ಕೇಳಿ ತಿಳಿದುಕೊಳ್ಳುತ್ತಿದ್ದರು. ಇದು ಬಾಲಚಂದರ್ ಸರಳತೆ, ಸಜ್ಜನಿಕೆಯನ್ನು ಎತ್ತಿ ಹಿಡಿದಿತ್ತು.

(ಫೋಟೋಗಳು: ಪ್ರಗತಿ ಅಶ್ವತ್ಥ ನಾರಾಯಣ)

(ನಿರೂಪಣೆ: ಶಶಿಧರ ಚಿತ್ರದುರ್ಗ)


ಇದನ್ನೂ ಓದಿ: 120 ಕ್ಕೂ ಹೆಚ್ಚು ಹೀರೋಗಳಿಗೆ ಹಾಡಿದ್ದಾರೆ ಎಸ್.ಪಿ.ಬಾಲಸುಬ್ರಹ್ಮಣ್ಯಂ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉದ್ಯಮಿ ಸಿಜೆ ರಾಯ್ ಮರಣೋತ್ತರ ಪರೀಕ್ಷೆ; ಹೃದಯ-ಶ್ವಾಸಕೋಶದಲ್ಲಿ 6.35 ಎಂಎಂ ಗುಂಡಿನ ಗಾಯ

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರ ಆತ್ಮಹತ್ಯೆಯ ಮರಣೋತ್ತರ ಪರೀಕ್ಷೆಯ ವರದಿಗಯನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅರವಿಂದ್ ಎಂಎನ್ ವಿವರಿಸಿದ್ದಾರೆ. 6.35 ಎಂಎಂ ಗುಂಡಿನ ದಾಳಿಯು ತಕ್ಷಣದ...

ಮುಂಬೈ| ನಿರ್ದೇಶಕ ರೋಹಿತ್ ಶೆಟ್ಟಿ ಮನೆಯ ಹೊರಗೆ 4 ಸುತ್ತು ಗುಂಡು ಹಾರಿಸಿದ ಅಪರಿಚಿತರು

ಶನಿವಾರ ತಡರಾತ್ರಿ, ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂಬೈನ ಜುಹು ನಿವಾಸದ ಹೊರಗೆ ನಾಲ್ಕು ಸುತ್ತು ಗುಂಡು ಹಾರಿಸಲಾಗಿದ್ದು, ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಚಿತ್ರ ನಿರ್ಮಾಪಕ-ನಿರ್ದೇಶಕರ ಕಟ್ಟಡದ ಬಳಿ ಅಪರಿಚಿತ...

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...