Homeಮುಖಪುಟರಾಜು ದಾದಾ-ಕೋಸಾ ದಾದಾರನ್ನು ಬಂಧಿಸಿ, ಹತ್ಯೆ ಮಾಡಲಾಗಿದೆ: ನಕ್ಸಲರ ದಂಡಕಾರಣ್ಯ ವಿಶೇಷ ಸಮಿತಿ

ರಾಜು ದಾದಾ-ಕೋಸಾ ದಾದಾರನ್ನು ಬಂಧಿಸಿ, ಹತ್ಯೆ ಮಾಡಲಾಗಿದೆ: ನಕ್ಸಲರ ದಂಡಕಾರಣ್ಯ ವಿಶೇಷ ಸಮಿತಿ

- Advertisement -
- Advertisement -

ರಾಯಪುರ/ಬಸ್ತರ್: ಭಾರತದ ಕಮ್ಯುನಿಸ್ಟ್ ಪಾರ್ಟಿ (ಮಾವೋವಾದಿ)ಯ ‘ದಂಡಕಾರಣ್ಯ ವಿಶೇಷ ವಲಯ ಸಮಿತಿ (DKSZC)’ಯು, ಸೆಪ್ಟೆಂಬರ್ 22 ರಂದು ನಾರಾಯಣಪುರ ಜಿಲ್ಲೆಯಲ್ಲಿ ನಡೆದಿದೆ ಎನ್ನಲಾದ ಎನ್‌ಕೌಂಟರ್ ಅನ್ನು ‘ನಕಲಿ’ ಎಂದು ಬಣ್ಣಿಸಿದ್ದು, ಇದರಲ್ಲಿ ಹಿರಿಯ ನಾಯಕರಾದ ಕಟ್ಟಾ ರಾಮಚಂದ್ರ ರೆಡ್ಡಿ (ರಾಜು ದಾದಾ) ಮತ್ತು ಕದರಿ ಸತ್ಯನಾರಾಯಣ ರೆಡ್ಡಿ (ಕೋಸಾ ದಾದಾ) ಅವರನ್ನು ಬಂಧಿಸಿ, ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದೆ.

ಸೆಪ್ಟೆಂಬರ್ 23ರಂದು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, ದಂಡಕಾರಣ್ಯ ವಿಶೇಷ ವಲಯ ಸಮಿತಿ (ಡಿ.ಕೆ.ಎಸ್.ಜೆಡ್.ಸಿ.)ಯು ಪೊಲೀಸ್ ಅಧಿಕಾರಿಗಳ ಎನ್‌ಕೌಂಟರ್ ಕಥೆ ಸಂಪೂರ್ಣ ಸುಳ್ಳು ಮತ್ತು ಕಲ್ಪಿತವಾದುದು ಎಂದು ಹೇಳಿದೆ.

‘ಬಂಧನ ಮತ್ತು ನಂತರದ ಹತ್ಯೆ’

ಪತ್ರಿಕಾ ಪ್ರಕಟಣೆಯ ಪ್ರಕಾರ, ಕೇಂದ್ರ ಸಮಿತಿ (CC) ಸದಸ್ಯರಾದ ರಾಜು ದಾದಾ ಮತ್ತು ಕೋಸಾ ದಾದಾ ಅವರಿಗೆ 10 ತಿಂಗಳ ಹಿಂದೆ ಪಕ್ಷವು ಹೊಸ ಜವಾಬ್ದಾರಿಗಳನ್ನು ನೀಡಿ ಬೇರೆಡೆಗೆ ಕಳುಹಿಸಿತ್ತು.

  • “ಕಾಮ್ರೇಡ್‌ಗಳಾದ ರಾಜು ದಾದಾ ಮತ್ತು ಕೋಸಾ ದಾದಾ ಅವರನ್ನು ಸೆಪ್ಟೆಂಬರ್ 11ರಿಂದ 20ರ ನಡುವೆ ರಾಯಪುರ ನಗರದಿಂದ ಅಥವಾ ಬೇರೆಡೆಯಿಂದ, ನಿರಾಯುಧರಾಗಿದ್ದಾಗ ಬಂಧಿಸಲಾಗಿದೆ,” ಎಂದು ಡಿ.ಕೆ.ಎಸ್.ಜೆಡ್.ಸಿ. ಸ್ಪಷ್ಟಪಡಿಸಿದೆ.
  • “ಸೆಪ್ಟೆಂಬರ್ 10ರವರೆಗೆ ಅವರು ಸುರಕ್ಷಿತವಾಗಿದ್ದಾರೆ ಎಂಬ ಸುದ್ದಿ ನಮಗೆ ಬಂದಿತ್ತು. ಬಂಧನದ ನಂತರ,  ಪಕ್ಷದ ರಹಸ್ಯ ಮಾಹಿತಿಗಾಗಿ ಅವರಿಗೆ ತೀವ್ರ ಚಿತ್ರಹಿಂಸೆ ನೀಡಲಾಗಿದೆ. ಅಂತಿಮವಾಗಿ, ಅವರನ್ನು ಸೆಪ್ಟೆಂಬರ್ 22ರಂದು ಮಾಡ್ ಪ್ರದೇಶಕ್ಕೆ ಕರೆತಂದು ಹತ್ಯೆ ಮಾಡಲಾಗಿದೆ,” ಎಂದು ಸಮಿತಿಯು ಆರೋಪಿಸಿದೆ.
  • ಈ ಹತ್ಯೆ ಮಾಡುವುದಕ್ಕಾಗಿ ಸೆಪ್ಟೆಂಬರ್ 21ರಿಂದ ಬೃಹತ್ ಕಾರ್ಯಾಚರಣೆ ಪ್ರಾರಂಭವಾಗಿದೆ ಮತ್ತು ಅದು ಇನ್ನೂ ಮುಂದುವರೆದಿದೆ ಎಂದು ಸಮಿತಿ ಹೇಳಿದೆ.

ಸಿಪಿಐ (ಮಾವೋವಾದಿ) ಈ ಹತ್ಯೆಗಳನ್ನು ಖಂಡಿಸಿದೆ ಮತ್ತು ಬಂಧನದ ನಂತರ ಕಾಮ್ರೇಡ್‌ಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗಿತ್ತು ಎಂದು ಒತ್ತಾಯಿಸಿ, ಈ ನಕಲಿ ಎನ್‌ಕೌಂಟರ್ ಅನ್ನು ಎಲ್ಲರೂ ಪ್ರತಿಭಟಿಸಬೇಕು ಎಂದು ಕರೆ ನೀಡಿದೆ.

ಹಿರಿಯ ನಾಯಕರಿಗೆ ಶ್ರದ್ಧಾಂಜಲಿ

ಸಮಿತಿಯು ಹಿರಿಯ ನಾಯಕರಾದ ರಾಜು ದಾದಾ ಮತ್ತು ಕೋಸಾ ದಾದಾ ಅವರಿಗೆ ಗೌರವ ನಮನ ಸಲ್ಲಿಸಿದೆ. ಈ ಕಾಮ್ರೇಡ್‌ಗಳನ್ನು ಕಳೆದುಕೊಂಡಿರುವುದು ಭಾರತೀಯ ಕ್ರಾಂತಿಕಾರಿ ಚಳುವಳಿಗೆ ತುಂಬಲಾರದ ನಷ್ಟ ಎಂದು ಹೇಳಿದ್ದು, ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪ ವ್ಯಕ್ತಪಡಿಸಿದೆ. ಕ್ರಾಂತಿಕಾರಿ ಶಿಬಿರವು ಈ ನಿರಂತರ ನಷ್ಟಗಳಿಂದ ತೀವ್ರವಾಗಿ ಕ್ಷುಬ್ಧಗೊಂಡಿದೆ ಮತ್ತು ಸಂಗಾತಿಗಳ ಪ್ರತಿಜ್ಞೆಗಳನ್ನು ಈಡೇರಿಸುವುದಾಗಿ ದೃಢಪಡಿಸಿದೆ. ಮೃತಪಟ್ಟ ಇತರ ಸಿ.ಸಿ., ಎಸ್.ಜೆ.ಸಿ. ಮತ್ತು ಡಿ.ವಿ.ಸಿ. ಸದಸ್ಯರಾದ ಮೋಧೇಂ ಬಾಲಕೃಷ್ಣ (ಮನೋಜ್ ದಾದಾ), ಜಾರ್ಖಂಡಿನ ಸಹದೇವ್ ಸೋರೆನ್, ಕಾಮ್ರೇಡ್ ಪಾಟು, ಕಾಮ್ರೇಡ್ ವಿಜಯ್, ಲೋಕೇಶ್, ಸುಮಿತ್ರಾ ಮತ್ತು ವಿಮಲಾ ಅವರಿಗೂ ಶ್ರದ್ಧಾಂಜಲಿ ಸಲ್ಲಿಸಲಾಗಿದೆ.

ನಾಯಕರ ಸುಳಿವು ನೀಡಿದ ಶರಣಾಗತರು

ಕೇಂದ್ರ ಸಮಿತಿ ಸದಸ್ಯರನ್ನು ತಲುಪಲು ಪೊಲೀಸರ ಗುಪ್ತಚರ ವಿಭಾಗಕ್ಕೆ ಹೇಗೆ ಸಾಧ್ಯವಾಯಿತು ಎಂಬುದರ ಕುರಿತು ಡಿ.ಕೆ.ಎಸ್.ಜೆಡ್.ಸಿ. ಹಲವು ಸಾಧ್ಯತೆಗಳನ್ನು ಚರ್ಚಿಸಿದೆ. ಈ ನಷ್ಟಕ್ಕೆ ‘ನಿರಂತರ ಶರಣಾಗತಿಗಳು ಮುಖ್ಯ ಕಾರಣವಾಗುತ್ತಿವೆ’ ಎಂದು ಸಮಿತಿಯು ಅಭಿಪ್ರಾಯಪಟ್ಟಿದೆ.

ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾದ ನಾಲ್ಕು ಸಂಭವನೀಯತೆಗಳು:

  1. ಶರಣಾಗತರಿಂದ ಮಾಹಿತಿ: ರಾಜು ದಾದಾ ಮತ್ತು ಕೋಸಾ ದಾದಾ ಅವರು ಸ್ವಲ್ಪ ಸಮಯದಿಂದ ಗೆರಿಲ್ಲಾ ಪಡೆಗಳೊಂದಿಗೆ ಕಾಡಿನಲ್ಲಿ ಇರಲಿಲ್ಲ. ಈ ಬಗ್ಗೆ ತಿಳಿದಿದ್ದ ಎಸ್.ಜೆ.ಸಿ. ಮಟ್ಟದಿಂದ ಸಾಮಾನ್ಯ ಸದಸ್ಯರವರೆಗಿನ ಹಲವು ಶರಣಾದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
  2. ಆಂತರಿಕ ಸಮನ್ವಯದ ಬಹಿರಂಗ: ಅವರೊಂದಿಗೆ ಆಂತರಿಕ ಸಮನ್ವಯದ ಜವಾಬ್ದಾರಿ ಹೊತ್ತಿದ್ದ ವ್ಯಕ್ತಿಯ ಗುರುತು ಸಹ ಪೊಲೀಸ್ ಇಲಾಖೆಗೆ ತಿಳಿದಿದೆ.
  3. ನಕ್ಸಲರ ಭದ್ರತಾ ತಂಡದ ಮಾಜಿ ಸದಸ್ಯರ ಸಹಕಾರ: ಈ ನಾಯಕರು ಹೊರಟುಹೋದಾಗ, ಅವರ ಭದ್ರತಾ ತಂಡದ ಭಾಗವಾಗಿದ್ದ ಎರಡು ಅಥವಾ ಮೂರು ವ್ಯಕ್ತಿಗಳು ಶರಣಾಗಿ ಡಿಆರ್‌ಜಿ (DRG)ಯಲ್ಲಿ ಸಕ್ರಿಯರಾಗಿದ್ದಾರೆ. ಇವರಲ್ಲಿ ಒಬ್ಬರು ಕೋಸಾ ದಾದಾ ಅವರೊಂದಿಗಿದ್ದ ಕೊರಿಯರ್ (ಸಂದೇಶವಾಹಕ) ಬಗ್ಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಆಗಸ್ಟ್ 13ರಂದು ಈ ಕೊರಿಯರ್‌ನ ಮನೆಗೆ ಬಂದು ಕರೆದುಕೊಂಡು ಹೋಗಿದ್ದಾರೆ. ಚಿತ್ರಹಿಂಸೆಯ ನೀಡಿದ್ದರಿಂದ ಆತ ನಮ್ಮ ನಾಯಕರನ್ನು ಎಲ್ಲಿಗೆ ಕರೆದುಕೊಂಡು ಹೋಗಿದ್ದ ಮತ್ತು ಅಲ್ಲಿ ಯಾರು ಸ್ವೀಕರಿಸಿದ್ದರು ಎಂಬ ಬಗ್ಗೆ ಮಾಹಿತಿ ಬಹಿರಂಗಪಡಿಸಿರುವ ಸಾಧ್ಯತೆ ಇದೆ.
  4. ಕೊರಿಯರ್‌ನ ದುರ್ಬಲತೆ ಮತ್ತು ದ್ರೋಹ: ನಾಯಕರು ನೆಲೆಸಿದ್ದ ಪ್ರದೇಶದ ಕೊರಿಯರ್ ದುರ್ಬಲಗೊಂಡಿರಬಹುದು ಅಥವಾ ಕುಟುಂಬ/ಸ್ನೇಹಿತರನ್ನು ಭೇಟಿ ಮಾಡಲು ಹೋಗಿರಬಹುದು. ಸೆಪ್ಟೆಂಬರ್‌ನಲ್ಲಿ ರಾಜು ದಾದಾ ಅವರು ಬರೆದ ಕೊನೆಯ ಪತ್ರದಲ್ಲಿ ಈ ಕೊರಿಯರ್‌ನ ಕೆಲವು ದೌರ್ಬಲ್ಯಗಳು ಮತ್ತು ದ್ರೋಹಗಳಿಂದ ಉಂಟಾಗಬಹುದಾದ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದ್ದರು ಎಂದು ಸಮಿತಿ ತಿಳಿಸಿದೆ.

ಈ ಹೇಳಿಕೆಯನ್ನು ಸಿಪಿಐ (ಮಾವೋವಾದಿ) ದಂಡಕಾರಣ್ಯ ವಿಶೇಷ ವಲಯ ಸಮಿತಿಯ ಪ್ರತಿನಿಧಿ ನೀಡಿದ್ದಾರೆ.

ನಕ್ಸಲರ ಕೇಂದ್ರ ಸಮಿತಿ ಸದಸ್ಯರಾದ ರಾಜು ದಾದಾ ಮತ್ತು ಕೋಸಾ ದಾದಾ ಎನ್‌ಕೌಂಟರ್‌ನಲ್ಲಿ ಸಾವು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...