Homeಮುಖಪುಟರಾಜು ದಾದಾ-ಕೋಸಾ ದಾದಾರನ್ನು ಬಂಧಿಸಿ, ಹತ್ಯೆ ಮಾಡಲಾಗಿದೆ: ನಕ್ಸಲರ ದಂಡಕಾರಣ್ಯ ವಿಶೇಷ ಸಮಿತಿ

ರಾಜು ದಾದಾ-ಕೋಸಾ ದಾದಾರನ್ನು ಬಂಧಿಸಿ, ಹತ್ಯೆ ಮಾಡಲಾಗಿದೆ: ನಕ್ಸಲರ ದಂಡಕಾರಣ್ಯ ವಿಶೇಷ ಸಮಿತಿ

- Advertisement -
- Advertisement -

ರಾಯಪುರ/ಬಸ್ತರ್: ಭಾರತದ ಕಮ್ಯುನಿಸ್ಟ್ ಪಾರ್ಟಿ (ಮಾವೋವಾದಿ)ಯ ‘ದಂಡಕಾರಣ್ಯ ವಿಶೇಷ ವಲಯ ಸಮಿತಿ (DKSZC)’ಯು, ಸೆಪ್ಟೆಂಬರ್ 22 ರಂದು ನಾರಾಯಣಪುರ ಜಿಲ್ಲೆಯಲ್ಲಿ ನಡೆದಿದೆ ಎನ್ನಲಾದ ಎನ್‌ಕೌಂಟರ್ ಅನ್ನು ‘ನಕಲಿ’ ಎಂದು ಬಣ್ಣಿಸಿದ್ದು, ಇದರಲ್ಲಿ ಹಿರಿಯ ನಾಯಕರಾದ ಕಟ್ಟಾ ರಾಮಚಂದ್ರ ರೆಡ್ಡಿ (ರಾಜು ದಾದಾ) ಮತ್ತು ಕದರಿ ಸತ್ಯನಾರಾಯಣ ರೆಡ್ಡಿ (ಕೋಸಾ ದಾದಾ) ಅವರನ್ನು ಬಂಧಿಸಿ, ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದೆ.

ಸೆಪ್ಟೆಂಬರ್ 23ರಂದು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, ದಂಡಕಾರಣ್ಯ ವಿಶೇಷ ವಲಯ ಸಮಿತಿ (ಡಿ.ಕೆ.ಎಸ್.ಜೆಡ್.ಸಿ.)ಯು ಪೊಲೀಸ್ ಅಧಿಕಾರಿಗಳ ಎನ್‌ಕೌಂಟರ್ ಕಥೆ ಸಂಪೂರ್ಣ ಸುಳ್ಳು ಮತ್ತು ಕಲ್ಪಿತವಾದುದು ಎಂದು ಹೇಳಿದೆ.

‘ಬಂಧನ ಮತ್ತು ನಂತರದ ಹತ್ಯೆ’

ಪತ್ರಿಕಾ ಪ್ರಕಟಣೆಯ ಪ್ರಕಾರ, ಕೇಂದ್ರ ಸಮಿತಿ (CC) ಸದಸ್ಯರಾದ ರಾಜು ದಾದಾ ಮತ್ತು ಕೋಸಾ ದಾದಾ ಅವರಿಗೆ 10 ತಿಂಗಳ ಹಿಂದೆ ಪಕ್ಷವು ಹೊಸ ಜವಾಬ್ದಾರಿಗಳನ್ನು ನೀಡಿ ಬೇರೆಡೆಗೆ ಕಳುಹಿಸಿತ್ತು.

  • “ಕಾಮ್ರೇಡ್‌ಗಳಾದ ರಾಜು ದಾದಾ ಮತ್ತು ಕೋಸಾ ದಾದಾ ಅವರನ್ನು ಸೆಪ್ಟೆಂಬರ್ 11ರಿಂದ 20ರ ನಡುವೆ ರಾಯಪುರ ನಗರದಿಂದ ಅಥವಾ ಬೇರೆಡೆಯಿಂದ, ನಿರಾಯುಧರಾಗಿದ್ದಾಗ ಬಂಧಿಸಲಾಗಿದೆ,” ಎಂದು ಡಿ.ಕೆ.ಎಸ್.ಜೆಡ್.ಸಿ. ಸ್ಪಷ್ಟಪಡಿಸಿದೆ.
  • “ಸೆಪ್ಟೆಂಬರ್ 10ರವರೆಗೆ ಅವರು ಸುರಕ್ಷಿತವಾಗಿದ್ದಾರೆ ಎಂಬ ಸುದ್ದಿ ನಮಗೆ ಬಂದಿತ್ತು. ಬಂಧನದ ನಂತರ,  ಪಕ್ಷದ ರಹಸ್ಯ ಮಾಹಿತಿಗಾಗಿ ಅವರಿಗೆ ತೀವ್ರ ಚಿತ್ರಹಿಂಸೆ ನೀಡಲಾಗಿದೆ. ಅಂತಿಮವಾಗಿ, ಅವರನ್ನು ಸೆಪ್ಟೆಂಬರ್ 22ರಂದು ಮಾಡ್ ಪ್ರದೇಶಕ್ಕೆ ಕರೆತಂದು ಹತ್ಯೆ ಮಾಡಲಾಗಿದೆ,” ಎಂದು ಸಮಿತಿಯು ಆರೋಪಿಸಿದೆ.
  • ಈ ಹತ್ಯೆ ಮಾಡುವುದಕ್ಕಾಗಿ ಸೆಪ್ಟೆಂಬರ್ 21ರಿಂದ ಬೃಹತ್ ಕಾರ್ಯಾಚರಣೆ ಪ್ರಾರಂಭವಾಗಿದೆ ಮತ್ತು ಅದು ಇನ್ನೂ ಮುಂದುವರೆದಿದೆ ಎಂದು ಸಮಿತಿ ಹೇಳಿದೆ.

ಸಿಪಿಐ (ಮಾವೋವಾದಿ) ಈ ಹತ್ಯೆಗಳನ್ನು ಖಂಡಿಸಿದೆ ಮತ್ತು ಬಂಧನದ ನಂತರ ಕಾಮ್ರೇಡ್‌ಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗಿತ್ತು ಎಂದು ಒತ್ತಾಯಿಸಿ, ಈ ನಕಲಿ ಎನ್‌ಕೌಂಟರ್ ಅನ್ನು ಎಲ್ಲರೂ ಪ್ರತಿಭಟಿಸಬೇಕು ಎಂದು ಕರೆ ನೀಡಿದೆ.

ಹಿರಿಯ ನಾಯಕರಿಗೆ ಶ್ರದ್ಧಾಂಜಲಿ

ಸಮಿತಿಯು ಹಿರಿಯ ನಾಯಕರಾದ ರಾಜು ದಾದಾ ಮತ್ತು ಕೋಸಾ ದಾದಾ ಅವರಿಗೆ ಗೌರವ ನಮನ ಸಲ್ಲಿಸಿದೆ. ಈ ಕಾಮ್ರೇಡ್‌ಗಳನ್ನು ಕಳೆದುಕೊಂಡಿರುವುದು ಭಾರತೀಯ ಕ್ರಾಂತಿಕಾರಿ ಚಳುವಳಿಗೆ ತುಂಬಲಾರದ ನಷ್ಟ ಎಂದು ಹೇಳಿದ್ದು, ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪ ವ್ಯಕ್ತಪಡಿಸಿದೆ. ಕ್ರಾಂತಿಕಾರಿ ಶಿಬಿರವು ಈ ನಿರಂತರ ನಷ್ಟಗಳಿಂದ ತೀವ್ರವಾಗಿ ಕ್ಷುಬ್ಧಗೊಂಡಿದೆ ಮತ್ತು ಸಂಗಾತಿಗಳ ಪ್ರತಿಜ್ಞೆಗಳನ್ನು ಈಡೇರಿಸುವುದಾಗಿ ದೃಢಪಡಿಸಿದೆ. ಮೃತಪಟ್ಟ ಇತರ ಸಿ.ಸಿ., ಎಸ್.ಜೆ.ಸಿ. ಮತ್ತು ಡಿ.ವಿ.ಸಿ. ಸದಸ್ಯರಾದ ಮೋಧೇಂ ಬಾಲಕೃಷ್ಣ (ಮನೋಜ್ ದಾದಾ), ಜಾರ್ಖಂಡಿನ ಸಹದೇವ್ ಸೋರೆನ್, ಕಾಮ್ರೇಡ್ ಪಾಟು, ಕಾಮ್ರೇಡ್ ವಿಜಯ್, ಲೋಕೇಶ್, ಸುಮಿತ್ರಾ ಮತ್ತು ವಿಮಲಾ ಅವರಿಗೂ ಶ್ರದ್ಧಾಂಜಲಿ ಸಲ್ಲಿಸಲಾಗಿದೆ.

ನಾಯಕರ ಸುಳಿವು ನೀಡಿದ ಶರಣಾಗತರು

ಕೇಂದ್ರ ಸಮಿತಿ ಸದಸ್ಯರನ್ನು ತಲುಪಲು ಪೊಲೀಸರ ಗುಪ್ತಚರ ವಿಭಾಗಕ್ಕೆ ಹೇಗೆ ಸಾಧ್ಯವಾಯಿತು ಎಂಬುದರ ಕುರಿತು ಡಿ.ಕೆ.ಎಸ್.ಜೆಡ್.ಸಿ. ಹಲವು ಸಾಧ್ಯತೆಗಳನ್ನು ಚರ್ಚಿಸಿದೆ. ಈ ನಷ್ಟಕ್ಕೆ ‘ನಿರಂತರ ಶರಣಾಗತಿಗಳು ಮುಖ್ಯ ಕಾರಣವಾಗುತ್ತಿವೆ’ ಎಂದು ಸಮಿತಿಯು ಅಭಿಪ್ರಾಯಪಟ್ಟಿದೆ.

ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾದ ನಾಲ್ಕು ಸಂಭವನೀಯತೆಗಳು:

  1. ಶರಣಾಗತರಿಂದ ಮಾಹಿತಿ: ರಾಜು ದಾದಾ ಮತ್ತು ಕೋಸಾ ದಾದಾ ಅವರು ಸ್ವಲ್ಪ ಸಮಯದಿಂದ ಗೆರಿಲ್ಲಾ ಪಡೆಗಳೊಂದಿಗೆ ಕಾಡಿನಲ್ಲಿ ಇರಲಿಲ್ಲ. ಈ ಬಗ್ಗೆ ತಿಳಿದಿದ್ದ ಎಸ್.ಜೆ.ಸಿ. ಮಟ್ಟದಿಂದ ಸಾಮಾನ್ಯ ಸದಸ್ಯರವರೆಗಿನ ಹಲವು ಶರಣಾದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
  2. ಆಂತರಿಕ ಸಮನ್ವಯದ ಬಹಿರಂಗ: ಅವರೊಂದಿಗೆ ಆಂತರಿಕ ಸಮನ್ವಯದ ಜವಾಬ್ದಾರಿ ಹೊತ್ತಿದ್ದ ವ್ಯಕ್ತಿಯ ಗುರುತು ಸಹ ಪೊಲೀಸ್ ಇಲಾಖೆಗೆ ತಿಳಿದಿದೆ.
  3. ನಕ್ಸಲರ ಭದ್ರತಾ ತಂಡದ ಮಾಜಿ ಸದಸ್ಯರ ಸಹಕಾರ: ಈ ನಾಯಕರು ಹೊರಟುಹೋದಾಗ, ಅವರ ಭದ್ರತಾ ತಂಡದ ಭಾಗವಾಗಿದ್ದ ಎರಡು ಅಥವಾ ಮೂರು ವ್ಯಕ್ತಿಗಳು ಶರಣಾಗಿ ಡಿಆರ್‌ಜಿ (DRG)ಯಲ್ಲಿ ಸಕ್ರಿಯರಾಗಿದ್ದಾರೆ. ಇವರಲ್ಲಿ ಒಬ್ಬರು ಕೋಸಾ ದಾದಾ ಅವರೊಂದಿಗಿದ್ದ ಕೊರಿಯರ್ (ಸಂದೇಶವಾಹಕ) ಬಗ್ಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಆಗಸ್ಟ್ 13ರಂದು ಈ ಕೊರಿಯರ್‌ನ ಮನೆಗೆ ಬಂದು ಕರೆದುಕೊಂಡು ಹೋಗಿದ್ದಾರೆ. ಚಿತ್ರಹಿಂಸೆಯ ನೀಡಿದ್ದರಿಂದ ಆತ ನಮ್ಮ ನಾಯಕರನ್ನು ಎಲ್ಲಿಗೆ ಕರೆದುಕೊಂಡು ಹೋಗಿದ್ದ ಮತ್ತು ಅಲ್ಲಿ ಯಾರು ಸ್ವೀಕರಿಸಿದ್ದರು ಎಂಬ ಬಗ್ಗೆ ಮಾಹಿತಿ ಬಹಿರಂಗಪಡಿಸಿರುವ ಸಾಧ್ಯತೆ ಇದೆ.
  4. ಕೊರಿಯರ್‌ನ ದುರ್ಬಲತೆ ಮತ್ತು ದ್ರೋಹ: ನಾಯಕರು ನೆಲೆಸಿದ್ದ ಪ್ರದೇಶದ ಕೊರಿಯರ್ ದುರ್ಬಲಗೊಂಡಿರಬಹುದು ಅಥವಾ ಕುಟುಂಬ/ಸ್ನೇಹಿತರನ್ನು ಭೇಟಿ ಮಾಡಲು ಹೋಗಿರಬಹುದು. ಸೆಪ್ಟೆಂಬರ್‌ನಲ್ಲಿ ರಾಜು ದಾದಾ ಅವರು ಬರೆದ ಕೊನೆಯ ಪತ್ರದಲ್ಲಿ ಈ ಕೊರಿಯರ್‌ನ ಕೆಲವು ದೌರ್ಬಲ್ಯಗಳು ಮತ್ತು ದ್ರೋಹಗಳಿಂದ ಉಂಟಾಗಬಹುದಾದ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದ್ದರು ಎಂದು ಸಮಿತಿ ತಿಳಿಸಿದೆ.

ಈ ಹೇಳಿಕೆಯನ್ನು ಸಿಪಿಐ (ಮಾವೋವಾದಿ) ದಂಡಕಾರಣ್ಯ ವಿಶೇಷ ವಲಯ ಸಮಿತಿಯ ಪ್ರತಿನಿಧಿ ನೀಡಿದ್ದಾರೆ.

ನಕ್ಸಲರ ಕೇಂದ್ರ ಸಮಿತಿ ಸದಸ್ಯರಾದ ರಾಜು ದಾದಾ ಮತ್ತು ಕೋಸಾ ದಾದಾ ಎನ್‌ಕೌಂಟರ್‌ನಲ್ಲಿ ಸಾವು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...