ಸ್ವತಂತ್ರ ಪತ್ರಕರ್ತೆ ಮತ್ತು ದಿ ವೈರ್ಗೆ ಆಗಾಗ್ಗೆ ಕೊಡುಗೆ ನೀಡುವ ರೋಹಿಣಿ ಸಿಂಗ್ಗೆ ಕೊಲೆ ಮತ್ತು ಅತ್ಯಾಚಾರ ಬೆದರಿಕೆಗಳ ಸಂದೇಶಗಳನ್ನು ಕಳುಹಿಸಿದ್ದಕ್ಕಾಗಿ ಎಬಿವಿಪಿ ಜೊತೆ ಸಬಂಧವಿರುವ 26 ವರ್ಷದ ಕಾನೂನು ವಿದ್ಯಾರ್ಥಿ ಕಪಿಲ್ ವಿಯಾನ್ ಎಂಬಾತನನ್ನು ರಾಜಸ್ಥಾನ್ ಪೊಲೀಸರು ಬಂಧಿಸಿದ್ದಾರೆ ಎಂದು ದಿ ವೈರ್ ವರದಿ ಮಾಡಿದೆ.
ರೈತರ ಟ್ರಾಕ್ಟರ್ ರ್ಯಾಲಿ ಕುರಿತು ರೋಹಿಣಿ ಸಿಂಗ್ ಮಾಡಿದ ಟ್ವೀಟ್ಗೆ ಪ್ರತಿಕ್ರಿಯೆಯಾಗಿ, ಕಪಿಲ್ ವಿಯಾನ್ ರೋಹಿಣಿ ಅವರಿಗೆ ನೇರ ಸಂದೇಶ ಕಳುಹಿಸಿ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಹಾಕಿದ್ದ. ಬೆದರಿಕೆಗಳ ಬಗ್ಗೆ ಟ್ವೀಟ್ನಲ್ಲಿ ಉಲ್ಲೇಖಿಸಿದ್ದ ರೋಹಿಣಿ ಸಿಂಗ್ ಉದಯಪುರದ ಉನ್ನತ ಪೊಲೀಸರು ಮತ್ತು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಟ್ಯಾಗ್ ಮಾಡಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು.
Dear @IgpUdaipur, this handle- @KViayan is sending me rape and murder threats on Twitter DM. He is Udaipur based. Bringing this criminal to your attention. @ashokgehlot51
— Rohini Singh (@rohini_sgh) January 29, 2021
ಇದರ ಬೆನ್ನಲ್ಲೇ ತಕ್ಷಣ ಕ್ರಮ ಕೈಗೊಳ್ಳುವಂತೆ ಉದಯಪುರ ಐಜಿ ಮತ್ತು ಎಸ್ಪಿಗೆ ಗೆಹ್ಲೋಟ್ ನಿರ್ದೇಶನ ನೀಡಿದರು. ವಿಯಾನ್ನನ್ನು ಉದಯಪುರದ ಸೆಮಾರಿ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ. ಆತ ಬಿಜೆಪಿಯ ವಿದ್ಯಾರ್ಥಿ ವಿಭಾಗ ಅಖಿಲ್ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಜೊತೆ ಸಂಬಂಧ ಹೊಂದಿದ್ದಾನೆಂದು ಕಂಡುಬಂದಿದೆ.
ಉದಯಪುರ ವ್ಯಾಪ್ತಿಯ ಇನ್ಸ್ಪೆಕ್ಟರ್ ಜನರಲ್, ಸತ್ಯವೀರ್ ಸಿಂಗ್, ಕಪಿಲ್ ವಿಯಾನ್ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ದೃಢಪಡಿಸಿದ್ದಾರೆ.
पत्रकार रोहिणी सिंह को मर्डर व रेप की धमकी देने के आरोपी कपिल सिंह को हिरासत में लिया जाकर पूछताछ की जा रही हैं। Fir no. 40/21 धारा 506,509 ipc and 67 IT act थाना गोवर्धन विलास, जिला-उदयपुर @ashokgehlot51 @rohini_sgh @IgpUdaipur @RajPoliceHelp
— Udaipur Police (@UdaipurPolice) January 30, 2021
“ನಮ್ಮ ತಂಡವು ಸೆಮರಿ ನಿವಾಸಿ ಕಪಿಲ್ ವಿಯಾನ್ನನ್ನು ಬಂಧಿಸಿದೆ. ಅವನು ಪತ್ರಕರ್ತೆ ರೋಹಿಣಿ ಸಿಂಗ್ ಅವರಿಗೆ ಕೊಲೆ ಮತ್ತು ಅತ್ಯಾಚಾರ ಬೆದರಿಕೆಗಳನ್ನು ಕಳುಹಿಸುತ್ತಿದ್ದ” ಎಂದು ಐಜಿಪಿ ಟ್ವೀಟ್ ಮಾಡಿದ್ದಾರೆ.
ರೈತರ ರ್ಯಾಲಿಯ ಬಗ್ಗೆ ರೋಹಿಣಿ ಸಿಂಗ್ ವರದಿ ಮಾಡಿರುವುದು ತನಗೆ ಕೋಪ ತಂದಿತ್ತು. ಹಾಗಾಗಿ ಬೆದರಿಕೆ ಸಂದೇಶ ಕಳಿಸಿದ್ದೆ ಎಂದು ವಿಯಾನ್ ಪೊಲೀಸರಿಗೆ ತಿಳಿಸಿದ್ದಾನೆ.
Thank you @UdaipurPolice @ashokgehlot51 for prompt action. Disagreement should never be an excuse to indulge in abuse and rape and murder threats. We need safer spaces for women- online and off line. https://t.co/2lCZcAZitt
— Rohini Singh (@rohini_sgh) January 30, 2021
ತ್ವರಿತ ಕ್ರಮ ಕೈಗೊಂಡಿದ್ದಾಗಿ ಪತ್ರಕರ್ತೆ ರೋಹಿಣಿ ಸಿಂಗ್ ರಾಜಸ್ಥಾನ ಸಿಎಂ ಮತ್ತು ಉದಯಪುರ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ. ಭಿನ್ನಾಭಿಪ್ರಾಯವಿದ್ದ ಕಾರಣಕ್ಕೆ ಯಾರೂ ಯಾರಿಗೂ ಯಾವುದೇ ಬೆದರಿಕೆ ಹಾಕುವುದು ಸರಿಯಲ್ಲ. ಮಹಿಳೆಯರಿಗೆ ಸಮಾಜ ಮತ್ತು ಅಂತರ್ಜಾಲ ಎರಡೂ ಕಡೆ ರಕ್ಷಣೆ ಬೇಕು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ರೈತರು ಪ್ರತಿಭಟನೆಗೆ ತಲುಪದಂತೆ ರೈಲನ್ನೇ ತಿರುಗಿಸಿದ ಕೇಂದ್ರ ಸರ್ಕಾರ?


