Homeಕರ್ನಾಟಕಮತಾಂಧ ಸರ್ವಾಧಿಕಾರದತ್ತ ಕರ್ನಾಟಕ: ವಿಧಾನಸಭೆಯ ಮುಂದೆ ‘ಧಾರ್ಮಿಕ ಬಂದೀಖಾನೆಯ ವಿಧೇಯಕ’

ಮತಾಂಧ ಸರ್ವಾಧಿಕಾರದತ್ತ ಕರ್ನಾಟಕ: ವಿಧಾನಸಭೆಯ ಮುಂದೆ ‘ಧಾರ್ಮಿಕ ಬಂದೀಖಾನೆಯ ವಿಧೇಯಕ’

- Advertisement -
- Advertisement -
  • ನೂರ್‌ ಶ್ರೀಧರ್‌‌

ಭಾರತ ಕಂಡರಿಯದ ಕಠೋರ ವಿಧೇಯಕವೊಂದನ್ನು ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿದೆ. ಯುಎಪಿಎ ಕಾಯ್ದೆಗಳೂ ಸಹ ಇಷ್ಟೊಂದು ಕಠೋರ ಎಂಬುದನ್ನು ಗಮನಿಸಬೇಕು. ಈ ವಿಧೇಯಕದಲ್ಲಿ ಏನಿದೆ? ಯಾವ ಉದ್ದೇಶಕ್ಕೆ ಇದನ್ನು ತರಲಾಗಿದೆ? ಇದರ ಪರಣಾಮವೇನು? ಸಂಕ್ಷಿಪ್ತ ಟಿಪ್ಪಣಿ.

ವಿಧೇಯಕ ಏನು ಹೇಳುತ್ತಿದೆ?

  • ವಿಧೇಯಕಕ್ಕೆ “ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ” ಎಂಬ ಸುಂದರ ಹೆಸರನ್ನು ನೀಡಲಾಗಿದೆ.
  • ತಪ್ಪು ನಿರೂಪಣೆ, ಬಲವಂತ, ಅನುಚಿತ ಪ್ರಭಾವ, ವಂಚನೆ, ಒತ್ತಾಯ, ಆಮಿಷ, ಮದುವೆ, ಮದುವೆ ವಾಗ್ದಾನ ಅಥವಾ ಇನ್ನಾವುದೇ ವಂಚಕ ವಿಧಾನಗಳ ಮೂಲಕ ಮಾಡಲಾಗುವ ಮತಾಂತರವನ್ನು ತಡೆಯುವುದು ಮತ್ತು ಶಿಕ್ಷಿಸುವುದು ಇದರ ಉದ್ದೇಶವಾಗಿ ಹೇಳಲಾಗಿದೆ.
  • ಅಪರಾಧಿಗಳಿಗೆ 3 ರಿಂದ 5 ವರ್ಷಗಳ ತನಕ ಕಾರಾಗೃಹದ ಶಿಕ್ಷೆ.
  • ಅಪ್ರಾಪ್ತ, ಅಸ್ವಸ್ಥಚಿತ್ತ, ಮಹಿಳೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರನ್ನು ಮತಾಂತರ ಮಾಡಿದರೆ ಕಠಿಣ ಶಿಕ್ಷೆ.
  • ಸಾಮೂಹಿಕ ಮತದಾನ ಮಾಡಿದರೆ ಮತ್ತಷ್ಟು ಕಠಿಣ ಶಿಕ್ಷೆ.
  • ಈ ಶಿಕ್ಷೆಗಳ ಪ್ರಮಾಣ ಏರುಗತಿಯಲ್ಲಿರುತ್ತದೆ. ಕನಿಷ್ಟ 3 ವರ್ಷದಿಂದ 10 ವರ್ಷಗಳವರೆಗಿನ ಕಾರಾಗೃಹ, 1 ಲಕ್ಷದವರೆಗೆ ಜುಲ್ಮಾನೆ ಮತ್ತು ಮತಾಂತರಗೊಂಡಿದ್ದವರಿಗೆ ಮತಾಂತರ ಮಾಡಿದವರು 5 ಲಕ್ಷದವರೆಗೆ ಪರಿಹಾರ ನೀಡಬೇಕು.
  • ಇದರಲ್ಲಿ ಯಾವುದಾದರೂ ಸಂಸ್ಥೆ ಒಳಗೊಂಡಿದ್ದರೆ ಅದರ ಮೇಲೂ ಕ್ರಮ ಕೈಗೊಳ್ಳಲಾಗುವುದು. ಅದು ಪಡೆಯುತ್ತಿರಬಹುದಾದ ಅನುದಾನಗಳನ್ನು ನಿಶೇಧಿಸಲಾಗುವುದು.
  • ಅಕ್ರಮ ಮತಾಂತರ ನಡೆದಿದೆ ಎಂಬ ದೂರನ್ನು ಮತಾಂತರಗೊಂಡವರನ್ನು ‘ಬಲ್ಲ’ ಯಾರು ಬೇಕಾದರೂ ದೂರು ನೀಡಬಹುದು.
  • ಈ ಅಪರಾಧವನ್ನು ಹೀನಾಯವಾದುದೆಂದು ಪರಿಗಣಿಸಲಾಗುವುದು ಮತ್ತು ಇದು ಜಾಮೀನು ರಹಿತವಾದದ್ದು.
  • ಆರೋಪ ಮಾಡಿದವರ ಮೇಲೆ ಅದನ್ನು ಸಾಬೀತು ಪಡಿಸುವ ಹೊಣೆ ಇರುವುದಿಲ್ಲ. ತಾನು ನಿರ್ದೂಷಿ ಎಂದು ಸಾಬೀತುಪಡಿಸುವ ಹೊಣೆ ಆರೋಪಕ್ಕೆ ಗುರಿಯಾದವರದು.
  • ಅಪರಾಧಕ್ಕೆ ಸಹಾಯ ಮಾಡಿದವರ ಮೇಲೂ ಮತ್ತು ಅವರ ಪರವಾಗಿ ನಿಲ್ಲುವವರ ಮೇಲೂ ಕ್ರಮ ಜರುಗಿಸಬಹುದು.
  • ಮತಾಂತರದ ಉದ್ದೇಶದಿಂದ ಮದುವೆಯಾಗಿದ್ದರೆ ಅಂತಹ ಅಂತರ್ ಧರ್ಮೀಯ ಮದುವೆಗಳನ್ನು ರದ್ದುಗೊಳಿಸಬಹುದು.
  • ಸಕ್ರಮವಾಗಿ ಮತಾಂತರವಾಗಲು ಬಯಸಿದಲ್ಲಿ ಅದಕ್ಕೆ ಸುದೀರ್ಘ ಪ್ರಕ್ರಿಯೆಯ ಮೂಲಕ ಹಾದು ಹೋಗಬೇಕು: 30 ದಿನಗಳ ಮೊದಲು ಮತಾಂತರವಾಗುವವರು ಮತ್ತು ಮತಾಂತರ ಮಾಡುವವರು ತಮ್ಮ ವಿವರ ಹಾಗೂ ಉದ್ದೇಶಗಳುಳ್ಳ ಅರ್ಜಿಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು. ಅದರ ಕುರಿತು ತಾಲ್ಲೂಕು ಹಾಗೂ ಜಿಲ್ಲಾಧಿಕಾರಿ ಕಛೇರಿಯಲ್ಲಿ ಪ್ರಕಟಣೆ ಹಾಕಿ ಆಕ್ಷೇಪಣೆಗಳನ್ನು ಆಹ್ವಾನಿಸಬೇಕು, ಬಂದ ಆಕ್ಷೇಪಣೆಗಳನ್ನು ವಿಚಾರಣೆಗೆ ಒಳಪಡಿಸಬೇಕು, ಅನುಮೋದನೆ ದೊರಕಿದಲ್ಲಿ ಅದರ ಪ್ರಕಟಣೆಯನ್ನು ಮತ್ತೆ ಜಿಲ್ಲಾಧಿಕಾರಿ ಕಛೇರಿಗಳಲ್ಲಿ ಹಾಕಬೇಕು. ಅದಕ್ಕೆ ಯಾವ ಆಕ್ಷೇಪಣೆಯೂ ಬರದಿದ್ದಲ್ಲಿ ಆಗ ಅದನ್ನು ಸಕ್ರಮಗೊಳಿಸಲಾಗುವುದು. ಆದರೆ ಈ ಪ್ರಕ್ರಿಯೆಯಲ್ಲಿ ದೋಷ ಅಥವ ದುರುದ್ದೇಶ ಕಂಡುಬಂದಲ್ಲಿ ಕ್ರಮಕೈಗೊಳ್ಳುವಂತೆ ಅಧಿಕಾರಿಗಳು ಪೋಲೀಸರಿಗೆ ಸೂಚಿಸಬಹುದು. ಈ ಕ್ರಮವನ್ನು ಸರಿಯಾಗಿ ಪಾಲಿಸದಿದ್ದಲ್ಲಿ ಅಧಿಕಾರಿಗಳ ಮೇಲೂ ಕ್ರಮ ಜರುಗಿಸಬಹುದು.

ಇದನ್ನೂ ಓದಿ:ಮತಾಂತರ: ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್‌ ಆರೋಪ ತಳ್ಳಿಹಾಕಿ ವರದಿ ನೀಡಿದ್ದ ತಹಸೀಲ್ದಾರ್ ವರ್ಗಾವಣೆ!

ಇದರ ಉದ್ದೇಶಗಳೇನು?

  • ಧಾರ್ಮಿಕ ದುರಭಿಮಾನ ಮತ್ತು ವಾಗ್ವಾದಗಳಲ್ಲಿ ರಾಜ್ಯವನ್ನು ಸಿಲುಕಿಸುವುದು ಮತ್ತು ಮುಂದಿನ ಚುನಾವಣೆಯಲ್ಲಿ ಅದರ ರಾಜಕೀಯ ಲಾಭ ಪಡೆಯುವುದು.
  • ದಲಿತ, ಆದಿವಾಸಿ, ಅಲೆಮಾರಿ ಸಮುದಾಯಗಳು ಜಾತಿ ಬಂಧನದಿಂದ ಮುಕ್ತಿ ಪಡೆಯದಂತೆ ಕಟ್ಟಿಡುವುದು.
  • ಅಂತರ್ ಧರ್ಮೀಯ ಮದುವೆಗಳನ್ನು ತಡೆಯುವುದು. ಮಹಳೆಯರನ್ನು ಹೊಸಿಲು ದಾಟದಂತೆ ಬಂಧಿಸುವುದು.
  • ಕ್ರೈಸ್ತ ಮತ್ತು ಇತರೆ ಧಾರ್ಮಿಕ ಸಂಸ್ಥೆಗಳನ್ನು ಗುರಿಯಾಗಿಸಿ ಕಟಕಟೆಯಲ್ಲಿ ನಿಲ್ಲಿಸುವುದು. ಅವರ ಸಂಪನ್ಮೂಲಗಳನ್ನು ರದ್ದುಗೊಳಿಸಿ, ಅವು ಮಾಡುತ್ತಿದ್ದ ಸೇವಾ ಚಟುವಟಿಕೆಗಳನ್ನು ನಿಲ್ಲಿಸುವಂತೆ ಮಾಡುವುದು.
  • ಹೋರಾಟಗಾರರನ್ನು ಮತ್ತೊಮ್ಮೆ ಭಾವನಾತ್ಮಕ ವಾದ ವಿವಾದದಲ್ಲಿ ಮುಳುಗಿಸಿ ನಿಜವಾದ ವಿಚಾರಗಳ ಸುತ್ತ ಹೋರಾಟಗಳು ಬೆಳೆಯದಂತೆ ನೋಡಿಕೊಳ್ಳುವುದು.

ಇದನ್ನೂ ಓದಿ:ಮತಾಂತರ ನಿಷೇಧ ಕಾಯಿದೆ ಹಿಂದೆ ದೇಶದ ಕೋಮುಸೌಹಾರ್ದತೆ ಹಾಳುಗೆಡವುವ ದುರುದ್ದೇಶವಿದೆ- ಸಿದ್ದರಾಮಯ್ಯ

ಇದರ ಪರಿಣಾಮಗಳೇನು?

  • ಆಮಿಷ ಮತ್ತು ಅನುಚಿತ ಪ್ರಭಾವದ ಹೆಸರಿನಲ್ಲಿ ಸಲೀಸಾಗಿ ಅಲ್ಪಸಂಖ್ಯಾತ ಧರ್ಮದ ವ್ಯಕ್ತಿಗಳನ್ನು ಮತ್ತು ಸಂಸ್ಥೆಗಳನ್ನು ಕಟಕಟೆಯಲ್ಲಿ ನಿಲ್ಲಿಸಬಹುದು.
  • ಅವರಿಗೆ ಜಾಮೀನು ಸಿಗದಂತೆ, ಅವರ ಪರವಾಗಿ ಯಾರೂ ದನಿ ಎತ್ತದಂತೆ ಮಾಡಬಹುದು. ಅವರ ಆರ್ಥಿಕ ಸಂಪನ್ಮೂಲಗಳನ್ನೆಲ್ಲಾ ರದ್ದುಗೊಳಿಸಬಹುದು.
  • ಕೇಸರಿ ಪಡೆಗಳಿಗೆ, ಪೋಲೀಸ್ ಪಡೆಗಳಿಗೆ ಮತ್ತು ಅಧಿಕಾರಿಗಳಿಗೆ ಅಲ್ಪಸಂಖ್ಯಾತರನ್ನು ಕಾಡುವ ಅಪರಿಮಿತ ಅಧಿಕಾರವನ್ನು ನೀಡಲಾಗುತ್ತಿದೆ.
  • ಜಾತಿ ಮತ್ತು ಪುರುಷ ಮೇಲಾಧಿಪತ್ಯದಿಂದ ದೌರ್ಜನ್ಯಗಳಿಂದ ಮುಕ್ತಿ ಪಡೆಯಲು ದಲಿತರು, ಆದಿವಾಸಿಗಳು, ಅಲೆಮಾರಿಗಳು ಬೌದ್ಧ, ಕ್ರೈಸ್ತ, ಸಿಖ್ ಅಥವ ಮುಸ್ಲಿಂ ಧರ್ಮಕ್ಕೆ ಮತಾತಂತರಗೊಂಡ ಪರಿಪಾಠ ಇದ್ದದ್ದಿದೆ. ಸ್ವಯಂ ಇಚ್ಛೆ ಮಾತ್ರವಲ್ಲ ಮುಕ್ತಿಯ ಮಾರ್ಗಗಳಾಗಿಯೂ ದಮನಿತ ಜನ ಅದನ್ನು ಪರಿಗಣಿಸಿದ್ದಿದೆ. ಸ್ವಯಂ ಅಂಬೇಡ್ಕರ್ ಅವರು ಮುಂದೆ ನಿಂತು ಅದನ್ನು ಮಾಡಿಸಿದ್ದಾರೆ. ಸ್ವಧರ್ಮದಲ್ಲಿ ಸೂಕ್ತ ಗೌರವ ನೀಡಿ ಉಳಿಸಿಕೊಳ್ಳಲಾಗದ ಜಾತಿಗ್ರಸ್ಥ ಮನಸ್ಸುಗಳು ಈಗ ಬಲವಂತದ ಮೂಲಕ ದಮನಿತ ಸಮುದಾಯಗಳನ್ನು ಜಾತಿ ಮತ್ತು ಪುರುಷಾಧಿಪತ್ಯ ವ್ಯವಸ್ಥೆಯಡಿ ಕಟ್ಟಿಡಲು ಹೊರಟಿದ್ದಾರೆ.
  • ಅಲ್ಪಸಂಖ್ಯಾತ ಸಮುದಾಯಗಳು ದೇಶದ ಉದ್ದಗಲಕ್ಕೂ ಆಹಾರ, ಆರೋಗ್ಯ, ಶಿಕ್ಷಣವನ್ನು ನೀಡುವಂತಹ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅದರ ಫಲ ಈ ದೇಶದ ದಮನಿತ ಮತ್ತು ಶೋಷಿತ ಜನ ವರ್ಗಗಳು ಪಡೆದಿವೆ, ಪಡೆಯುತ್ತಿವೆ. ಈ ಎಲ್ಲಾ ಸಂಸ್ಥೆಗಳು ಶಂಕಿತ ಸ್ಥಾನದಲ್ಲಿ ನಿಲ್ಲಲಿವೆ ಮತ್ತು ನಿಂತು ಹೋಗುವ ಅಪಾಯವನ್ನು ಎದುರಿಸಲಿವೆ.
  • ಅಂತರ್ ಧರ್ಮೀಯ ಪ್ರೀತಿ ಮತ್ತು ಅಂತರ್ ಧರ್ಮೀಯ ಮದುವೆಗೆ ಶಾಶ್ವತವಾಗಿ ಮುಳ್ಳು ಬೇಲಿಯನ್ನು ಜಡಿಯಲಾಗುತ್ತಿದೆ.

ಮಾಡಬೇಕಾದುದೇನು?

ಮನುಷ್ಯರಾಗಿ ಪ್ರತಿರೋಧಿಸೋಣವೆ? ಗುಲಾಮತೆಯನ್ನು ಒಪ್ಪಿಕೊಳ್ಳೋಣವೆ? ಎಂಬ ತೀರ್ಮಾನಕ್ಕೆ ಬರಬೇಕಿರುವುದು. ಆಯ್ಕೆ ನಿಮ್ಮದು ನಮ್ಮದು.

ಇದನ್ನೂ ಓದಿ:ಫ್ಯಾಕ್ಟ್‌ಚೆಕ್: ಯುಪಿಯಲ್ಲಿ 34 ಮುಸ್ಲಿಂ ಕುಟುಂಬಗಳು ಹಿಂದೂ ಧರ್ಮಕ್ಕೆ ಮತಾಂತರಗೊಂಡರು ಎಂಬುದು ಸುಳ್ಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಸಂವಿಧಾನ ವಿರೋಧಿ ಕಾಯಿದೆಯನ್ನು ವಿರೋದಿ ಸುತ್ತನೆ. ವ್ಯಕ್ತಿಯ ಸ್ವಾತಂತ್ರ್ಯಕ್ಕೆ ದಕ್ಕೆ ತರುವ ಈ ಕಾಯಿದೆ ಕರ್ನಾಟಕ ಸರ್ಕಾರ ಕೈಬಿಡಬೇಕು

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...