Homeಕರ್ನಾಟಕಮತಾಂಧ ಸರ್ವಾಧಿಕಾರದತ್ತ ಕರ್ನಾಟಕ: ವಿಧಾನಸಭೆಯ ಮುಂದೆ ‘ಧಾರ್ಮಿಕ ಬಂದೀಖಾನೆಯ ವಿಧೇಯಕ’

ಮತಾಂಧ ಸರ್ವಾಧಿಕಾರದತ್ತ ಕರ್ನಾಟಕ: ವಿಧಾನಸಭೆಯ ಮುಂದೆ ‘ಧಾರ್ಮಿಕ ಬಂದೀಖಾನೆಯ ವಿಧೇಯಕ’

- Advertisement -
- Advertisement -
  • ನೂರ್‌ ಶ್ರೀಧರ್‌‌

ಭಾರತ ಕಂಡರಿಯದ ಕಠೋರ ವಿಧೇಯಕವೊಂದನ್ನು ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿದೆ. ಯುಎಪಿಎ ಕಾಯ್ದೆಗಳೂ ಸಹ ಇಷ್ಟೊಂದು ಕಠೋರ ಎಂಬುದನ್ನು ಗಮನಿಸಬೇಕು. ಈ ವಿಧೇಯಕದಲ್ಲಿ ಏನಿದೆ? ಯಾವ ಉದ್ದೇಶಕ್ಕೆ ಇದನ್ನು ತರಲಾಗಿದೆ? ಇದರ ಪರಣಾಮವೇನು? ಸಂಕ್ಷಿಪ್ತ ಟಿಪ್ಪಣಿ.

ವಿಧೇಯಕ ಏನು ಹೇಳುತ್ತಿದೆ?

  • ವಿಧೇಯಕಕ್ಕೆ “ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ” ಎಂಬ ಸುಂದರ ಹೆಸರನ್ನು ನೀಡಲಾಗಿದೆ.
  • ತಪ್ಪು ನಿರೂಪಣೆ, ಬಲವಂತ, ಅನುಚಿತ ಪ್ರಭಾವ, ವಂಚನೆ, ಒತ್ತಾಯ, ಆಮಿಷ, ಮದುವೆ, ಮದುವೆ ವಾಗ್ದಾನ ಅಥವಾ ಇನ್ನಾವುದೇ ವಂಚಕ ವಿಧಾನಗಳ ಮೂಲಕ ಮಾಡಲಾಗುವ ಮತಾಂತರವನ್ನು ತಡೆಯುವುದು ಮತ್ತು ಶಿಕ್ಷಿಸುವುದು ಇದರ ಉದ್ದೇಶವಾಗಿ ಹೇಳಲಾಗಿದೆ.
  • ಅಪರಾಧಿಗಳಿಗೆ 3 ರಿಂದ 5 ವರ್ಷಗಳ ತನಕ ಕಾರಾಗೃಹದ ಶಿಕ್ಷೆ.
  • ಅಪ್ರಾಪ್ತ, ಅಸ್ವಸ್ಥಚಿತ್ತ, ಮಹಿಳೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರನ್ನು ಮತಾಂತರ ಮಾಡಿದರೆ ಕಠಿಣ ಶಿಕ್ಷೆ.
  • ಸಾಮೂಹಿಕ ಮತದಾನ ಮಾಡಿದರೆ ಮತ್ತಷ್ಟು ಕಠಿಣ ಶಿಕ್ಷೆ.
  • ಈ ಶಿಕ್ಷೆಗಳ ಪ್ರಮಾಣ ಏರುಗತಿಯಲ್ಲಿರುತ್ತದೆ. ಕನಿಷ್ಟ 3 ವರ್ಷದಿಂದ 10 ವರ್ಷಗಳವರೆಗಿನ ಕಾರಾಗೃಹ, 1 ಲಕ್ಷದವರೆಗೆ ಜುಲ್ಮಾನೆ ಮತ್ತು ಮತಾಂತರಗೊಂಡಿದ್ದವರಿಗೆ ಮತಾಂತರ ಮಾಡಿದವರು 5 ಲಕ್ಷದವರೆಗೆ ಪರಿಹಾರ ನೀಡಬೇಕು.
  • ಇದರಲ್ಲಿ ಯಾವುದಾದರೂ ಸಂಸ್ಥೆ ಒಳಗೊಂಡಿದ್ದರೆ ಅದರ ಮೇಲೂ ಕ್ರಮ ಕೈಗೊಳ್ಳಲಾಗುವುದು. ಅದು ಪಡೆಯುತ್ತಿರಬಹುದಾದ ಅನುದಾನಗಳನ್ನು ನಿಶೇಧಿಸಲಾಗುವುದು.
  • ಅಕ್ರಮ ಮತಾಂತರ ನಡೆದಿದೆ ಎಂಬ ದೂರನ್ನು ಮತಾಂತರಗೊಂಡವರನ್ನು ‘ಬಲ್ಲ’ ಯಾರು ಬೇಕಾದರೂ ದೂರು ನೀಡಬಹುದು.
  • ಈ ಅಪರಾಧವನ್ನು ಹೀನಾಯವಾದುದೆಂದು ಪರಿಗಣಿಸಲಾಗುವುದು ಮತ್ತು ಇದು ಜಾಮೀನು ರಹಿತವಾದದ್ದು.
  • ಆರೋಪ ಮಾಡಿದವರ ಮೇಲೆ ಅದನ್ನು ಸಾಬೀತು ಪಡಿಸುವ ಹೊಣೆ ಇರುವುದಿಲ್ಲ. ತಾನು ನಿರ್ದೂಷಿ ಎಂದು ಸಾಬೀತುಪಡಿಸುವ ಹೊಣೆ ಆರೋಪಕ್ಕೆ ಗುರಿಯಾದವರದು.
  • ಅಪರಾಧಕ್ಕೆ ಸಹಾಯ ಮಾಡಿದವರ ಮೇಲೂ ಮತ್ತು ಅವರ ಪರವಾಗಿ ನಿಲ್ಲುವವರ ಮೇಲೂ ಕ್ರಮ ಜರುಗಿಸಬಹುದು.
  • ಮತಾಂತರದ ಉದ್ದೇಶದಿಂದ ಮದುವೆಯಾಗಿದ್ದರೆ ಅಂತಹ ಅಂತರ್ ಧರ್ಮೀಯ ಮದುವೆಗಳನ್ನು ರದ್ದುಗೊಳಿಸಬಹುದು.
  • ಸಕ್ರಮವಾಗಿ ಮತಾಂತರವಾಗಲು ಬಯಸಿದಲ್ಲಿ ಅದಕ್ಕೆ ಸುದೀರ್ಘ ಪ್ರಕ್ರಿಯೆಯ ಮೂಲಕ ಹಾದು ಹೋಗಬೇಕು: 30 ದಿನಗಳ ಮೊದಲು ಮತಾಂತರವಾಗುವವರು ಮತ್ತು ಮತಾಂತರ ಮಾಡುವವರು ತಮ್ಮ ವಿವರ ಹಾಗೂ ಉದ್ದೇಶಗಳುಳ್ಳ ಅರ್ಜಿಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು. ಅದರ ಕುರಿತು ತಾಲ್ಲೂಕು ಹಾಗೂ ಜಿಲ್ಲಾಧಿಕಾರಿ ಕಛೇರಿಯಲ್ಲಿ ಪ್ರಕಟಣೆ ಹಾಕಿ ಆಕ್ಷೇಪಣೆಗಳನ್ನು ಆಹ್ವಾನಿಸಬೇಕು, ಬಂದ ಆಕ್ಷೇಪಣೆಗಳನ್ನು ವಿಚಾರಣೆಗೆ ಒಳಪಡಿಸಬೇಕು, ಅನುಮೋದನೆ ದೊರಕಿದಲ್ಲಿ ಅದರ ಪ್ರಕಟಣೆಯನ್ನು ಮತ್ತೆ ಜಿಲ್ಲಾಧಿಕಾರಿ ಕಛೇರಿಗಳಲ್ಲಿ ಹಾಕಬೇಕು. ಅದಕ್ಕೆ ಯಾವ ಆಕ್ಷೇಪಣೆಯೂ ಬರದಿದ್ದಲ್ಲಿ ಆಗ ಅದನ್ನು ಸಕ್ರಮಗೊಳಿಸಲಾಗುವುದು. ಆದರೆ ಈ ಪ್ರಕ್ರಿಯೆಯಲ್ಲಿ ದೋಷ ಅಥವ ದುರುದ್ದೇಶ ಕಂಡುಬಂದಲ್ಲಿ ಕ್ರಮಕೈಗೊಳ್ಳುವಂತೆ ಅಧಿಕಾರಿಗಳು ಪೋಲೀಸರಿಗೆ ಸೂಚಿಸಬಹುದು. ಈ ಕ್ರಮವನ್ನು ಸರಿಯಾಗಿ ಪಾಲಿಸದಿದ್ದಲ್ಲಿ ಅಧಿಕಾರಿಗಳ ಮೇಲೂ ಕ್ರಮ ಜರುಗಿಸಬಹುದು.

ಇದನ್ನೂ ಓದಿ:ಮತಾಂತರ: ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್‌ ಆರೋಪ ತಳ್ಳಿಹಾಕಿ ವರದಿ ನೀಡಿದ್ದ ತಹಸೀಲ್ದಾರ್ ವರ್ಗಾವಣೆ!

ಇದರ ಉದ್ದೇಶಗಳೇನು?

  • ಧಾರ್ಮಿಕ ದುರಭಿಮಾನ ಮತ್ತು ವಾಗ್ವಾದಗಳಲ್ಲಿ ರಾಜ್ಯವನ್ನು ಸಿಲುಕಿಸುವುದು ಮತ್ತು ಮುಂದಿನ ಚುನಾವಣೆಯಲ್ಲಿ ಅದರ ರಾಜಕೀಯ ಲಾಭ ಪಡೆಯುವುದು.
  • ದಲಿತ, ಆದಿವಾಸಿ, ಅಲೆಮಾರಿ ಸಮುದಾಯಗಳು ಜಾತಿ ಬಂಧನದಿಂದ ಮುಕ್ತಿ ಪಡೆಯದಂತೆ ಕಟ್ಟಿಡುವುದು.
  • ಅಂತರ್ ಧರ್ಮೀಯ ಮದುವೆಗಳನ್ನು ತಡೆಯುವುದು. ಮಹಳೆಯರನ್ನು ಹೊಸಿಲು ದಾಟದಂತೆ ಬಂಧಿಸುವುದು.
  • ಕ್ರೈಸ್ತ ಮತ್ತು ಇತರೆ ಧಾರ್ಮಿಕ ಸಂಸ್ಥೆಗಳನ್ನು ಗುರಿಯಾಗಿಸಿ ಕಟಕಟೆಯಲ್ಲಿ ನಿಲ್ಲಿಸುವುದು. ಅವರ ಸಂಪನ್ಮೂಲಗಳನ್ನು ರದ್ದುಗೊಳಿಸಿ, ಅವು ಮಾಡುತ್ತಿದ್ದ ಸೇವಾ ಚಟುವಟಿಕೆಗಳನ್ನು ನಿಲ್ಲಿಸುವಂತೆ ಮಾಡುವುದು.
  • ಹೋರಾಟಗಾರರನ್ನು ಮತ್ತೊಮ್ಮೆ ಭಾವನಾತ್ಮಕ ವಾದ ವಿವಾದದಲ್ಲಿ ಮುಳುಗಿಸಿ ನಿಜವಾದ ವಿಚಾರಗಳ ಸುತ್ತ ಹೋರಾಟಗಳು ಬೆಳೆಯದಂತೆ ನೋಡಿಕೊಳ್ಳುವುದು.

ಇದನ್ನೂ ಓದಿ:ಮತಾಂತರ ನಿಷೇಧ ಕಾಯಿದೆ ಹಿಂದೆ ದೇಶದ ಕೋಮುಸೌಹಾರ್ದತೆ ಹಾಳುಗೆಡವುವ ದುರುದ್ದೇಶವಿದೆ- ಸಿದ್ದರಾಮಯ್ಯ

ಇದರ ಪರಿಣಾಮಗಳೇನು?

  • ಆಮಿಷ ಮತ್ತು ಅನುಚಿತ ಪ್ರಭಾವದ ಹೆಸರಿನಲ್ಲಿ ಸಲೀಸಾಗಿ ಅಲ್ಪಸಂಖ್ಯಾತ ಧರ್ಮದ ವ್ಯಕ್ತಿಗಳನ್ನು ಮತ್ತು ಸಂಸ್ಥೆಗಳನ್ನು ಕಟಕಟೆಯಲ್ಲಿ ನಿಲ್ಲಿಸಬಹುದು.
  • ಅವರಿಗೆ ಜಾಮೀನು ಸಿಗದಂತೆ, ಅವರ ಪರವಾಗಿ ಯಾರೂ ದನಿ ಎತ್ತದಂತೆ ಮಾಡಬಹುದು. ಅವರ ಆರ್ಥಿಕ ಸಂಪನ್ಮೂಲಗಳನ್ನೆಲ್ಲಾ ರದ್ದುಗೊಳಿಸಬಹುದು.
  • ಕೇಸರಿ ಪಡೆಗಳಿಗೆ, ಪೋಲೀಸ್ ಪಡೆಗಳಿಗೆ ಮತ್ತು ಅಧಿಕಾರಿಗಳಿಗೆ ಅಲ್ಪಸಂಖ್ಯಾತರನ್ನು ಕಾಡುವ ಅಪರಿಮಿತ ಅಧಿಕಾರವನ್ನು ನೀಡಲಾಗುತ್ತಿದೆ.
  • ಜಾತಿ ಮತ್ತು ಪುರುಷ ಮೇಲಾಧಿಪತ್ಯದಿಂದ ದೌರ್ಜನ್ಯಗಳಿಂದ ಮುಕ್ತಿ ಪಡೆಯಲು ದಲಿತರು, ಆದಿವಾಸಿಗಳು, ಅಲೆಮಾರಿಗಳು ಬೌದ್ಧ, ಕ್ರೈಸ್ತ, ಸಿಖ್ ಅಥವ ಮುಸ್ಲಿಂ ಧರ್ಮಕ್ಕೆ ಮತಾತಂತರಗೊಂಡ ಪರಿಪಾಠ ಇದ್ದದ್ದಿದೆ. ಸ್ವಯಂ ಇಚ್ಛೆ ಮಾತ್ರವಲ್ಲ ಮುಕ್ತಿಯ ಮಾರ್ಗಗಳಾಗಿಯೂ ದಮನಿತ ಜನ ಅದನ್ನು ಪರಿಗಣಿಸಿದ್ದಿದೆ. ಸ್ವಯಂ ಅಂಬೇಡ್ಕರ್ ಅವರು ಮುಂದೆ ನಿಂತು ಅದನ್ನು ಮಾಡಿಸಿದ್ದಾರೆ. ಸ್ವಧರ್ಮದಲ್ಲಿ ಸೂಕ್ತ ಗೌರವ ನೀಡಿ ಉಳಿಸಿಕೊಳ್ಳಲಾಗದ ಜಾತಿಗ್ರಸ್ಥ ಮನಸ್ಸುಗಳು ಈಗ ಬಲವಂತದ ಮೂಲಕ ದಮನಿತ ಸಮುದಾಯಗಳನ್ನು ಜಾತಿ ಮತ್ತು ಪುರುಷಾಧಿಪತ್ಯ ವ್ಯವಸ್ಥೆಯಡಿ ಕಟ್ಟಿಡಲು ಹೊರಟಿದ್ದಾರೆ.
  • ಅಲ್ಪಸಂಖ್ಯಾತ ಸಮುದಾಯಗಳು ದೇಶದ ಉದ್ದಗಲಕ್ಕೂ ಆಹಾರ, ಆರೋಗ್ಯ, ಶಿಕ್ಷಣವನ್ನು ನೀಡುವಂತಹ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅದರ ಫಲ ಈ ದೇಶದ ದಮನಿತ ಮತ್ತು ಶೋಷಿತ ಜನ ವರ್ಗಗಳು ಪಡೆದಿವೆ, ಪಡೆಯುತ್ತಿವೆ. ಈ ಎಲ್ಲಾ ಸಂಸ್ಥೆಗಳು ಶಂಕಿತ ಸ್ಥಾನದಲ್ಲಿ ನಿಲ್ಲಲಿವೆ ಮತ್ತು ನಿಂತು ಹೋಗುವ ಅಪಾಯವನ್ನು ಎದುರಿಸಲಿವೆ.
  • ಅಂತರ್ ಧರ್ಮೀಯ ಪ್ರೀತಿ ಮತ್ತು ಅಂತರ್ ಧರ್ಮೀಯ ಮದುವೆಗೆ ಶಾಶ್ವತವಾಗಿ ಮುಳ್ಳು ಬೇಲಿಯನ್ನು ಜಡಿಯಲಾಗುತ್ತಿದೆ.

ಮಾಡಬೇಕಾದುದೇನು?

ಮನುಷ್ಯರಾಗಿ ಪ್ರತಿರೋಧಿಸೋಣವೆ? ಗುಲಾಮತೆಯನ್ನು ಒಪ್ಪಿಕೊಳ್ಳೋಣವೆ? ಎಂಬ ತೀರ್ಮಾನಕ್ಕೆ ಬರಬೇಕಿರುವುದು. ಆಯ್ಕೆ ನಿಮ್ಮದು ನಮ್ಮದು.

ಇದನ್ನೂ ಓದಿ:ಫ್ಯಾಕ್ಟ್‌ಚೆಕ್: ಯುಪಿಯಲ್ಲಿ 34 ಮುಸ್ಲಿಂ ಕುಟುಂಬಗಳು ಹಿಂದೂ ಧರ್ಮಕ್ಕೆ ಮತಾಂತರಗೊಂಡರು ಎಂಬುದು ಸುಳ್ಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಸಂವಿಧಾನ ವಿರೋಧಿ ಕಾಯಿದೆಯನ್ನು ವಿರೋದಿ ಸುತ್ತನೆ. ವ್ಯಕ್ತಿಯ ಸ್ವಾತಂತ್ರ್ಯಕ್ಕೆ ದಕ್ಕೆ ತರುವ ಈ ಕಾಯಿದೆ ಕರ್ನಾಟಕ ಸರ್ಕಾರ ಕೈಬಿಡಬೇಕು

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...