Homeಚಳವಳಿ'Prisonor No. 626710 is present' ಸಾಕ್ಷ್ಯ ಚಿತ್ರ | 'ನಿನ್ನೆಯ ಸಂಜೆ ಉಮರ್‌ ಜೊತೆ...'

‘Prisonor No. 626710 is present’ ಸಾಕ್ಷ್ಯ ಚಿತ್ರ | ‘ನಿನ್ನೆಯ ಸಂಜೆ ಉಮರ್‌ ಜೊತೆ…’

- Advertisement -
- Advertisement -

ನಿನ್ನೆ ಬೆಂಗಳೂರಿನ ಆಶಿರ್ವಾದ್‌ ಕೇಂದ್ರದಲ್ಲಿ Prisonor No. 626710 is present ಎಂಬ ಸಾಕ್ಷ್ಯ ಚಿತ್ರದ ಪ್ರದರ್ಶನ ಏರ್ಪಾಡಾಗಿತ್ತು. 6.30ಕ್ಕೆ ಪ್ರದರ್ಶನ ಎಂದು ಹಾಕಲಾಗಿತ್ತು. 6.15ಕ್ಕೇ ಹಾಲ್‌ ಫುಲ್‌ ಆಗಿತ್ತು. ಆದರೂ ಸಿನಿಮಾ ಶುರುವಾದದ್ದು 6.45ಕ್ಕೆ. ಬಂದವರನ್ನು ಕೂರಿಸಲು ಫಾದರ್‌ ಅರುಣ್‌ ಲೂಯಿಸ್ ಪೇಚಾಡುತ್ತಿದ್ದರು. ಸುಮಾರು ಜನ ನೆಲದ ಮೇಲೆಯೇ ಕೂತರು. ಕೂರಲೂ ಜಾಗವಿಲ್ಲ. ಹಾಗೂ ಹೀಗೂ ಮಾಡಿ ಚಿತ್ರವನ್ನು ಚಾಲು ಮಾಡಲಾಯಿತು.ಉಮರ್ ಖಾಲಿದ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ

“ನೀವು ಈ ವಿಡಿಯೋ ನೋಡುತ್ತಿದ್ದೀರೆಂದರೆ ನಾನು ಬಂಧನವಾಗಿದ್ದೇನೆ ಎಂದೇ ಅರ್ಥ” ಎಂಬ ಉಮರ್‌ ನ ಮಾತಿನೊಂದಿಗೆ ಸಾಕ್ಷ್ಯ ಚಿತ್ರ ಪ್ರಾರಂಭವಾಯಿತು. ತನ್ನ ಬಂಧನವನ್ನು ನಿರೀಕ್ಷಿಸಿದ್ದ ಉಮರ್‌ ಮೊದಲೇ ರೆಕಾರ್ಡ್‌ ಮಾಡಿದ್ದ ವಿಡಿಯೋ ಅದು. ಸ್ವಯಂ ಉಮರ್‌, ಅವರ ಬಾಳ ಸಂಗಾತಿ ಜೋಸ್ನ ಹಾಗೂ ಅವರ ಮತ್ತೊಬ್ಬ ಮಿತ್ರನ ಮಾತುಗಳನ್ನು ನಿರೂಪಣೆಯಾಗಿ ಹೆಣೆಯಲಾಗಿದೆ.

ಇದನ್ನೂ ಓದಿ: ವಿಚಾರಣೆಯಿಲ್ಲದೆ ನಾಲ್ಕು ವರ್ಷಗಳಿಂದ ಜೈಲಿನಲ್ಲಿರುವ ವಿದ್ಯಾರ್ಥಿ ಮುಖಂಡ ಉಮರ್ ಖಾಲಿದ್

ಮಧ್ಯದಲ್ಲಿ 2016 ರಿಂದ 2020ರ ನಡುವೆ ಜೆ ಎನ್‌ ಯು ಹಾಗೂ ದೆಹಲಿಯಲ್ಲಿ ನಡೆದ ಘಟನಾವಳಿಗಳನ್ನು ಹಿನ್ನೆಲೆಯಾಗಿ ಸಮರ್ಥ ರೀತಿಯಲ್ಲಿ ಬಳಸಲಾಗಿದೆ. ಸಿನೆಮಾ ಉಮರ್‌ ಬಗ್ಗೆ ಮಾತನಾಡಿದರೂ ಅದು ಹೇಳುವುದು ಈ ದೇಶದ ದುರಂತ ಕಥೆಯನ್ನು. ಬಹಳ ಸರಳವಾಗಿ, ನೇರವಾಗಿ, ಕಣ್ಣಿಗೆ ಕಟ್ಟುವ ವಿಡಿಯೋ ತುಣುಕುಗಳ ಮೂಲಕ ಹಾಗೂ ಹೃದಯ ಕಲಕುವ ವಾಸ್ತವಗಳ ಮೂಲಕ ನಿರ್ದೇಶಕ ಲಲಿತ್‌ ವಾಚಾನಿ ಅವರು ಚಿತ್ರವನ್ನು ಕಟ್ಟಿಕೊಡುವ ಪರಿ simple but super.

ಸಿನಿಮಾ ಮುಗಿದ ಮೇಲೆ ಸಂವಾದದ ಆರಂಭಿಕ ಮಾತುಗಳನ್ನಾಡಲು ನನ್ನನ್ನು ಕರೆದರು. ಉಮರ್‌ ಅವರನ್ನು ಹತ್ತಿರದಿಂದ ಬಲ್ಲವನು ಎಂಬ ಕಾರಣಕ್ಕೆ. ಮನದಾಳದಿಂದ ಉಮರ್‌ ಗೆ ಕ್ಷಮೆ ಕೇಳಿದೆ. ಉಮರ್‌ ಬಿಡುಗಡೆಗೆ ಇಷ್ಟು ವರ್ಷವಾದರೂ ನಾವು ಗಟ್ಟಿ ದನಿ ಎತ್ತಲಿಲ್ಲವಲ್ಲಾ ಎಂಬ ಕೊರಗು ಕಾಡುತ್ತಿತ್ತು. ನನ್ನದು ಮಾತ್ರವಲ್ಲ ಬಂದವರೆಲ್ಲರ ಮನಸ್ಸುಗಳೂ ಉಮರ್‌ ಬಿಡುಗಡೆಗೆ ಏನಾದರೂ ಮಾಡಬೇಕು ಎಂದು ಒತ್ತಾಯಿಸುತ್ತಿದ್ದವು.

ಭಾಗವಹಿಸಿದವರಲ್ಲಿ ಬಹುತೇಕ ಯುವ ಮುಖಗಳು. ಅ ಮುಖಗಳಲ್ಲಿ ಒಂದು ಕಾಳಜಿ ಇತ್ತು, ಹೊಳಪಿತ್ತು. ಸಂವಾದದ ಭಾಗವಾಗಿ ಹಲವರು ಯುವ ಮಿತ್ರರು ಬಹಳ ಚೆನ್ನಾಗಿ ಮಾತನಾಡಿದರು. ಮರ ಸಂಸ್ಥೆಯ ರಾಮ್‌ ಅರ್ಥಪೂರ್ಣ ಮಾತುಗಳ ಮೂಲಕ ಸಭೆಯನ್ನು ಸಮಾರೋಪಗೊಳಿಸಿದರು. ಸಭೆ ಮುಗಿದರೂ ಅನೇಕರಿಗೆ ಹೊರಡುವ ಮನಸ್ಸಿರಲಿಲ್ಲ. ಅಲ್ಲಲ್ಲೆ ಗುಂಪಾಗಿ ನಿಂತು, ಕುಳಿತು, ಮಾತಿನಲ್ಲಿ ತಲ್ಲೀನರಾಗಿದ್ದರು. ಕಳಕಳಿಯ ಮನಸ್ಸುಗಳ ಕಲರವದ ಮಾತಾವರಣ ಎಲ್ಲರನ್ನು ಹಿಡಿದಿಟ್ಟುಕೊಂಡಿತ್ತು ಅನಿಸುತ್ತೆ.

ಇದನ್ನೂಓದಿ: ಉಮರ್ ಖಾಲಿದ್ ಜಾಮೀನು ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ

ಯುವಜನರ ನಡುವೆ ಹಿರಿಯ ಹೋರಾಟಗಾರರೂ ಇದ್ದರು. ಯುವಜನರಿಗೆ ಮಾತನಾಡಲು ಬಿಟ್ಟು ಅವರು ಸುಮ್ಮನೆ ಕೂತು ಆಲಿಸುತ್ತಿದ್ದರು. ಒಂದು ರೀತಿಯಲ್ಲಿ ಆನಂದಿಸುತ್ತಿದ್ದರು. ಪ್ರಸಿದ್ಧ ರಂಗ ಕರ್ಮಿ ರಘುನಂದನ್ ಅವರು ವಿರೋಧ ಪಕ್ಷಗಳಾವುವೂ ಕೋರೆಗಾಂವ್‌ ಆರೋಪಿಗಳ ಬಗ್ಗೆಯಾಗಲೀ, ಉಮರ್‌ ಬಗ್ಗೆಯಾಗಲೀ ಮಾತನಾಡುತ್ತಿಲ್ಲ. ಎಲ್ಲಿ ತಮ್ಮನ್ನೂ ಭಯೋತ್ಪಾದಕರ ಬೆಂಬಲಿಗರು ಎಂದು ದೂಷಿಸಲಾಗುತ್ತೋ ಎಂಬ ಭಯ ಅವರಿಗೆ. ಆದರೆ ಈ ಪಕ್ಷಗಳೂ ಸಹ ಮಾತನಾಡಲೇಬಾಕಾದಂತಹ ವಾತಾವರಣವನ್ನು ಹಾಗೂ ಒತ್ತಡವನ್ನು ನಾವು ಸೃಷ್ಟಿಸಬೇಕು ಎಂದು ಸಲಹೆ ಮಾಡಿದರು.

ಸ್ಕ್ರೀನಿಂಗ್‌ ಹಾಗೂ ಸಂವಾದ ಎರಡನ್ನೂ ಮುಗಿಸಿಕೊಂಡು ಹೊರಟೆ. ಆದರೂ ಎರಡೂ ಹಿಂಬಾಲಿಸುತ್ತಲೇ ಬಂದವು. ಈಗಲೂ ಮನದ ಮೂಲೆಯಲ್ಲಿ ಗಟ್ಟಿಯಾಗಿ ಕೂತಿವೆ. ಏನು ಮಾಡುತ್ತೀರಿ ಎಂದು ಕೇಳುತ್ತಿವೆ. ಉತ್ತರ ಕಂಡುಕೊಳ್ಳಲೇಬೇಕು, ನಾವೆಲ್ಲರೂ ಕೂಡಿ.

ಮುಗಿಸುವ ಮುನ್ನ ಒಂದು ಮಾತು. ಈ ಸಾಕ್ಷ್ಯ ಚಿತ್ರ ತಾವು ನೋಡಲೇಬೇಕು. ಸಾಧ್ಯವಾದಷ್ಟು ನೀವಿರುವ ಕಡೆಗಳಲ್ಲಿ ಸ್ಕ್ರೀನಿಂಗ್‌ ಏರ್ಪಡಿಸಿ ಸಮಾನ ಮನಸ್ಕರ ಜೊತೆ ನೋಡಿ. ಆಗದಿದ್ದರೆ ವ್ಯಕ್ತಿಗತವಾಗಿಯಾದರೂ ನೋಡಿ. ಚಿತ್ರದ ಲಿಂಕ್‌ ಬೇಕಿದ್ದಲ್ಲಿ ನಿಸಾರ್‌ [8056035809] ಅವರನ್ನು ಸಂಪರ್ಕಿಸಿ.

ಉಮರ್‌ ಬಳಿ ಮತ್ತೊಮ್ಮೆ ಕ್ಷಮೆ ಕೋರುತ್ತಾ.

ವಿಡಿಯೊನೋಡಿ: ಕಟ್ಟುತ್ತೇವಾ ನಾವು ಜಾತಿ ಇಲ್ಲದ ಭೀತಿ ಇಲ್ಲದ ನಾಡ ಕಟ್ಟುತ್ತೇವೆ; ಹಾಡು ನೋಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಡದಿ ರೈತರ ವಿಚಾರದಲ್ಲಿ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಆದರೆ.., ಸಂಯುಕ್ತ ಹೋರಾಟ ಸಮಿತಿಯ ಎಚ್ಚರಿಕೆಯ ಮಾತು

ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಬಲವಂತವಾಗಿ ಯಾವುದೇ ರೈತರ ಭೂಮಿ ಕಿತ್ತುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳುತ್ತಿರುವುದು ಕೇವಲ ಮಾತಿನ ಜಾಣ್ಮೆಯಷ್ಟೇ. ಬಿಡದಿ ಭಾಗದ ಮೂರು ಗ್ರಾಮಗಳಿಗೆ ಹೊರಡಿಸಲಾಗಿರುವ ಭೂಸ್ವಾಧೀನದ ಅಂತಿಮ ಅಧಿಸೂಚನೆಯನ್ನು ಸಂಪೂರ್ಣವಾಗಿ...

“8.5 ಕೆಜಿ ತೂಕ ಇಳಿಸಿಕೊಂಡ ಸೋನಮ್ ವಾಂಗ್‌ಚುಕ್ ಜೀವಕ್ಕೆ ಅಪಾಯ: ಬಲವಂತ ಆಹಾರ ನೀಡುವಂತೆ ದೆಹಲಿ ಹೈಕೋರ್ಟ್‌ನಲ್ಲಿ ಪಿಐಎಲ್”

ದೇಶದ ಶೈಕ್ಷಣಿಕ ವ್ಯವಸ್ಥೆಯ ಭವಿಷ್ಯವನ್ನು ಗಾಳಿಗೆ ತೂರಿರುವ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಸಾಲು ಸಾಲು ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದು, ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪ್ರಖ್ಯಾತ ಹವಾಮಾನ ಮತ್ತು...

ಇನ್‌ಸ್ಟಾಮಾರ್ಟ್‌ನಲ್ಲಿ ಸಿಗಲಿದೆ ಎಲ್‌ಪಿಜಿ ಸಿಲಿಂಡರ್: ಬೆಂಗಳೂರಿನಲ್ಲಿ ಹೊಸ ಸೇವೆ ಆರಂಭ!

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಗ್ರಾಹಕರು ಇನ್ನು ಮುಂದೆ ಪ್ರಮುಖ ಕ್ವಿಕ್ ಕಾಮರ್ಸ್ ಸಂಸ್ಥೆಯಾದ 'ಇನ್‌ಸ್ಟಾಮಾರ್ಟ್' (Instamart) ಆ್ಯಪ್ ಮೂಲಕವೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್...

ಬಿಡದಿ ರೈತರ ಹೋರಾಟಕ್ಕೆ ಜಯ: ಬಲವಂತವಾಗಿ ಒಬ್ಬೇ ಒಬ್ಬ ರೈತರ ಜಮೀನನ್ನೂ ಪಡೆಯಲ್ಲ ಸಿಎಂ ಡಿ.ಕೆ.ಶಿವಕುಮಾರ್

"ಬಿಡದಿ ಸ್ಮಾರ್ಟ್ ಸಿಟಿ/ಟೌನ್ ಶಿಪ್ ಯೋಜನೆಯ ಹೆಸರಿನಲ್ಲಿ ಬಲವಂತವಾಗಿ ಒಬ್ಬೇ ಒಬ್ಬ ರೈತರ ಅಥವಾ ರೈತ ಮಹಿಳೆಯರ ಜಮೀನನ್ನು ನಮ್ಮ ಸರ್ಕಾರ ಭೂಸ್ವಾಧೀನ ಮಾಡಿಕೊಳ್ಳುವುದಿಲ್ಲ," ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಬಿಡದಿ ಟೌನ್‌ಶಿಪ್...

ಪಶ್ಚಿಮ ಬಂಗಾಳ: TMC ಬಂಡಾಯ ನಾಯಕ ರಿತಬ್ರತ ಬ್ಯಾನರ್ಜಿಗೆ ವಿಪಕ್ಷ ಸ್ಥಾನ ನೀಡಿದ್ದಕ್ಕೆ ನ್ಯಾಯಾಧೀಶರ ತೀವ್ರ ಆಕ್ಷೇಪ

ತೃಣಮೂಲ ಕಾಂಗ್ರೆಸ್‌ನ ಬಂಡಾಯ ಬಣದ ಮುಖ್ಯಸ್ಥ ರಿತಬ್ರತ ಬ್ಯಾನರ್ಜಿ ಅವರನ್ನು ಪಶ್ಚಿಮ ಬಂಗಾಳದ ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡುವಲ್ಲಿ ಸ್ಪೀಕರ್ ರತೀಂದ್ರ ಬೋಸ್ ತೋರಿರುವ "ತರಾತುರಿ"ಯನ್ನು ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ...

ಎರಡು ವರ್ಷಗಳಲ್ಲಿ 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ; ಇವರಲ್ಲಿ 193 ಮಂದಿ ವಿದೇಶಿಯರೆಂದು ಘೋಷಿತರು: ಅಸ್ಸಾಂ ಸರ್ಕಾರ

ಗುವಾಹಟಿ: ಕಳೆದ ಎರಡು ವರ್ಷಗಳ ಅವಧಿಯಲ್ಲಿ ಗಡೀಪಾರು, ಗಡಿಯಿಂದ ಆಚೆಗೆ ತಳ್ಳುವಿಕೆ (ಪುಶ್‌ಬ್ಯಾಕ್) ಅಥವಾ ಉಚ್ಚಾಟನೆ ಪ್ರಕ್ರಿಯೆಯ ಮೂಲಕ ಒಟ್ಟು 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ ಎಂದು ಅಸ್ಸಾಂ ಸರ್ಕಾರ ರಾಜ್ಯ ವಿಧಾನಸಭೆಗೆ...

17 ದಿನ, 9 ಕೆಜಿ ತೂಕ ಇಳಿಕೆ, ಸೋನಮ್ ವಾಂಗ್‌ಚುಕ್ ಆರೋಗ್ಯ ಸ್ಥಿತಿ ಗಂಭೀರ: ಉಪವಾಸ ಕೈಬಿಡುವಂತೆ ಅಖಿಲೇಶ್-ಕೇಜ್ರಿವಾಲ್ ಮನವಿ

ದೇಶದ ಶಿಕ್ಷಣ ವ್ಯವಸ್ಥೆಯನ್ನು ಜರ್ಜರಿತಗೊಳಿಸಿರುವ ಸರಣಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರವನ್ನು ವಿರೋಧಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಖ್ಯಾತ ಪರಿಸರ ಕಾರ್ಯಕರ್ತ ಸೋನಮ್...

ಎನ್‌ಸಿಪಿಯ ಎರಡೂ ಬಣಗಳಲ್ಲೂ ಬಿರುಸಿನ ಬೆಳವಣಿಗೆ : ಬಿಜೆಪಿ ತೆಕ್ಕೆಗೆ ಮತ್ತೊಂದು ಪಕ್ಷ?

ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ (ಎನ್‌ಸಿಪಿ) ಎರಡೂ ಬಣಗಳ ಮುಖ್ಯ ನಾಯಕರು ಮಂಗಳವಾರ (ಜು.14) ರಾತ್ರಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ಸಭೆಯು ಶರದ್ ಪವಾರ್ ಅವರ...

ಮೋದಿಯ ಮೌನವನ್ನು ಪ್ರಶ್ನಿಸುವ ರಾಹುಲ್ ಗಾಂಧಿ, ಸಾರ್ವಜನಿಕ ಹಿತಾಸಕ್ತಿಯ ಈ ವಿಷಯಗಳಲ್ಲಿ ತಾವೇಕೆ ಮೌನ?

ಪ್ರಧಾನಿ ಮೋದಿಯವರದ್ದು ಜಾಣ ಮೌನ ಎಂದು ಈಗಾಗಲೇ ಈ ದೇಶದ ಜನಕ್ಕೆ ಮನವರಿಕೆಯಾಗಿದೆ. ಕಳೆದ 14ವರ್ಷದಲ್ಲಿ ಒಂದೇ ಒಂದು ಪ್ರೆಸ್ ಮೀಟ್‌ಅನ್ನು ಅಡ್ರೆಸ್ ಮಾಡದೆ ಇರುವವರ ಬಗ್ಗೆ ಜನ ಹೆಚ್ಚಿನದ್ದೇನನ್ನು ನಿರೀಕ್ಷಿಸಲಾರರು, ಆದರೆ...

ಹೊಸ ಮತದಾರರ ಫಾರಂ 6ಕ್ಕೆ ಪೋಷಕರ ಎಸ್‌ಐಆರ್ ಕಡ್ಡಾಯಗೊಳಿಸಿದ ಚು. ಆಯೋಗ : ಸಂಪೂರ್ಣ ಕಾನೂನುಬಾಹಿರ ಎಂದ ಸಂಸದ ಜಾನ್ ಬ್ರಿಟ್ಟಾಸ್

ಹೊಸ ಮತದಾರರನ್ನು ನೋಂದಾಯಿಸಲು ಬಳಸುವ ತನ್ನ ಆನ್‌ಲೈನ್ ಅರ್ಜಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಹೊಸ ವಿಭಾಗವನ್ನು ಸೇರಿಸುವ ಮೂಲಕ ಚುನಾವಣಾ ಆಯೋಗವು (ಇಸಿ) "ಸಂಪೂರ್ಣವಾಗಿ ಕಾನೂನು ಅಧಿಕಾರವಿಲ್ಲದೆ ಕಾರ್ಯನಿರ್ವಹಿಸಿದೆ" ಎಂದು...