HomeUncategorizedಜನಸಾಮಾನ್ಯರ ನೋವಿನ ಹಾಡುಗಳಲ್ಲಿ ಲೀನವಾದ ಗದ್ದರ್

ಜನಸಾಮಾನ್ಯರ ನೋವಿನ ಹಾಡುಗಳಲ್ಲಿ ಲೀನವಾದ ಗದ್ದರ್

- Advertisement -
- Advertisement -

ಗದ್ದರ್ ಇನ್ನಿಲ್ಲ ಎಂದು ಪತ್ರಿಕೆಗಳಲ್ಲಿ-ಟಿವಿಗಳಲ್ಲಿ ಹೇಳ್ತಿದ್ದಾರೆ. ಆದರೆ ಅವರ ಹಾಡುಗಳು ಅದನ್ನು ಸುಳ್ಳು ಮಾಡುತ್ತವೆ. ಈ ನೆಲದಲ್ಲಿ ತಮ್ಮ ಸಹಜೀವಿಗಳಿಗಾಗಿ ಅವರ ಹಕ್ಕುಗಳಿಗಾಗಿ ಹೋರಾಡಿ ಹುತಾತ್ಮರಾದ ಎಷ್ಟೋ ಜನರನ್ನು ಅವರ ಹಾಡುಗಳು ಅಮರರನ್ನಾಗಿಸಿವೆ. ಜೀವನ ಪೂರ್ತಿ ಹಾಡಿ, ತಾನೇ ಹಾಡಾದ ಆ ಸ್ವರ ಗದ್ದರ್; ಜನರ ಕ್ರಾಂತಿ ಬಯಸುವ ಯಾರಿಗೇ ಆದರೂ ಗದ್ದರ್ ಸತ್ತಿಲ್ಲ ಎಂದೇ ಅನಿಸುತ್ತದೆ.

ಕಾರ್ಮಿಕರ ದಿನಗೂಲಿ ಹೆಚ್ಚಿಸಿ ಎಂದು ಕರ್ನಾಟಕದಲ್ಲಿ ಹೋರಾಟ ಕಟ್ಟಿದ ಪಾರ್ವತಿ ಹಾಜಿಮಾರನ್ನು ಕೊಂದ ಸಂದರ್ಭದಲ್ಲಿ ಮೆಣಸಿನ ಹಾಡ್ಯಕ್ಕೆ ಬಂದ ಗದ್ದರ್ ಅಲ್ಲಿಯೇ ಅವರಿಬ್ಬರ ತ್ಯಾಗವನ್ನು ಹಾಡು ಕಟ್ಟಿ ಹಾಡಿ ಅಮರರನ್ನಾಗಿಸಿದ್ದು ಈ ತಕ್ಷಣಕ್ಕೆ ನೆನಪಾಗುತ್ತಿದೆ.

ಇಂಜಿನಿಯರಿಂಗ್ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಸಿ, ನಕ್ಸಲ್ ಹೋರಾಟದಲ್ಲಿ ಆಸಕ್ತಿ ತಳೆದಿದ್ದ ಅವರು ಹಿರಿಯ ಹೋರಾಟಗಾರ ಕೊಂಡಪ್ಪಲ್ಲಿ ಸೀತರಾಮಯ್ಯನವರಿಂದ ಪ್ರಭಾವಿತರಾಗಿ ಚಳವಳಿಗೆ ಧುಮುಕಿದರು. ಗದ್ದರ್‌ರವರ ಮೂಲ ಹೆಸರು ಗುಮ್ಮಡಿ ವಿಠಲ್ ರಾವ್. ತಂದೆ ಗುಮ್ಮಡಿ ಶೇಷಯ್ಯ, ತಾಯಿ ಲಚ್ಚುಮ್ಮಮ್ಮ.

ಗದ್ದರ್ ಒಬ್ಬ ಅಸಾಮಾನ್ಯ ಕಲಾವಿದರಾಗಿದ್ದರು. ತಮ್ಮೊಳಿಗಿನ ಆ ಕಲಾಪ್ರತಿಭೆಯನ್ನು ಅಸಮಾನತೆಯ ವಿರುದ್ಧದ ಹೋರಾಟಕ್ಕೆ ಬಳಸಿದ್ದರು. ತಮ್ಮ ಹಾಡುಗಳ ಮೂಲಕವೇ ಕೋಟ್ಯಾಂತರ ಜನರ ಗಮನ ಸೆಳೆದವರು ಗದ್ದರ್. ವೇದಿಕೆಯಲ್ಲಿ ಗದ್ದರ್‌ರವರು ಜನರ ಭಾಷೆಯಲ್ಲಿ, ಜಾನಪದ ಶೈಲಿಯಲ್ಲಿ, ಹಾಡುತ್ತಾ-ಕುಣಿಯುತ್ತ ಅಬ್ಬರಿಸುತ್ತಿದ್ದರೆ ಅವರನ್ನು ನೋಡಿ ಕಣ್ತುಂಬಿಕೊಳ್ಳಲು ಲಕ್ಷಾಂತರ ಜನರು ನೆರೆಯುತ್ತಿದ್ದರು. ಅನ್ಯಾಯ ನಡೆದ ಸ್ಥಳದಲ್ಲಿಯೇ ಹಾಡು ಕಟ್ಟಿ ತಮ್ಮದೇ ಟ್ಯೂನ್ ಹಾಕಿ ಹಾಡುತ್ತಿದ್ದರು. ತೆಲಂಗಾಣದ ಸ್ವರ ಅವರದ್ದಾಗಿತ್ತು.

ಆಂಧ್ರ ಪ್ರದೇಶದಲ್ಲಿ ಜನನಾಟ್ಯ ಮಂಡಳಿಯೆಂಬ ಬಹುದೊಡ್ಡ ಸಾಂಸ್ಕೃತಿಕ ಸಂಘಟನೆ ಕಟ್ಟಿದ್ದ ಗದ್ದರ್ ಆ ಮೂಲಕ ನಕ್ಸಲ್ ಚಳವಳಿಯ ಸಿದ್ಧಾಂತವನ್ನು ಪ್ರಚಾರ ಮಾಡಿದರು. ಅದಕ್ಕಾಗಿ ಅವರು 8 ವರ್ಷ ಅಜ್ಞಾತವಾಸ ಅನುಭವಿಸಬೇಕಾಯಿತು. ಪೊಲೀಸರು ಹಲವಾರು ಬಾರಿ ಅವರ ಮೇಲೆ ದಾಳಿ ನಡೆಸಿದ್ದರು. ಒಂದು ಗುಂಡು ಅವರ ದೇಹವೊಕ್ಕಿತ್ತು. ಅದನ್ನು ತೆಗೆಯಲು ಸಾಧ್ಯವಾಗಿರಲಿಲ್ಲ.

ಗದ್ದರ್ ಅವರಿಗೆ ಮೀನು ಎಂದರೆ ಪಂಚಪ್ರಾಣ. ಅವರಿಗೆ ಮೂವರು ಮಕ್ಕಳಿದ್ದರು. ಸೂರ್ಯ, ಚಂದ್ರ ಮತ್ತು ವೆನೆಲ್ಲ (ಬೆಳದಿಂಗಳು) ಎಂಬ ಹೆಸರಿಟ್ಟಿದ್ದರು. ಮಕ್ಕಳು ತಮ್ಮಂತೆಯೇ ಹೋರಾಟದಲ್ಲಿ ತೊಡಗಿಕೊಳ್ಳಬೇಕೆಂಬುದು ಅವರ ಬಯಕೆಯಾಗಿತ್ತು.

ಮನುಷ್ಯರನ್ನು ಮನುಷ್ಯರನ್ನಾಗಿಯೇ ನೋಡಬೇಕು. ಒಬ್ಬರು ಹೆಚ್ಚು, ಒಬ್ಬರು ಕಡಿಮೆ ಎಂದು ಜಾತಿ-ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ ಎಂದು ವಾದಿಸುತ್ತಿದ್ದರು. ಮನುಷ್ಯರನ್ನು ಮನುಷ್ಯರನ್ನಾಗಿ ನೋಡುವ ಮನಸ್ಥಿತಿ ನಿರ್ಮಾಣವಾಗುವುದೇ ತನ್ನ ಹೋರಾಟಕ್ಕೆ ಸಿಕ್ಕುವ ಅಂತಿಮ ಫಲಶ್ರುತಿ ಎಂದು ಅವರು ನಂಬಿದ್ದರು.

1975ರಲ್ಲಿ ಮೊದಲ ಬಾರಿಗೆ ನಾನು ಗದ್ದರ್‌ರವರನ್ನು ಭೇಟಿ ಮಾಡಿದೆ. ಆನಂತರ ಎಷ್ಟೋ ಬಾರಿ ಅವರೊಟ್ಟಿಗೆ ಚರ್ಚೆ ನಡೆಸಿದ್ದಿದೆ. ಬಾಬಾಬುಡನ್ ಗಿರಿ ಸೌಹಾರ್ದ ಹೋರಾಟಕ್ಕೆ ಗದ್ದರ್ ಕರ್ನಾಟಕಕ್ಕೆ ಬಂದಿದ್ದರು. ಗೌರಿ ಲಂಕೇಶ್ ಅವರನ್ನು ಪ್ರೀತಿಯಿಂದ ಆಹ್ವಾನಿಸಿದ್ದರು. ಒಮ್ಮೆ ಗದ್ದರ್ ಅವರಿಗೆ ಕರ್ನಾಟಕದಲ್ಲಿ ದೊರೆತ ಪ್ರಶಸ್ತಿ ಮೊತ್ತ 1 ಲಕ್ಷ ರೂಗಳನ್ನು ಕರ್ನಾಟಕದ ಚಳವಳಿಗೆ ಬಳಸಿಕೊಳ್ಳಿ ಎಂದು ಕೊಟ್ಟು ಹೋಗಿದ್ದರು. ನಾನು ಪಾಠ ಮಾಡುತ್ತಿದ್ದ ಸಂದರ್ಭದಲ್ಲಿ ಒಮ್ಮೆ ಅವರನ್ನು ಬೆಂಗಳೂರು ವಿವಿಗೆ ಕರೆಸಿದ್ದೆ. ಅವರ ಹಾಡು-ಮಾತುಗಳನ್ನು ಕೇಳಿದ ವಿದ್ಯಾರ್ಥಿಗಳು ಪುಳಕಿತರಾಗಿದ್ದರು.

ಇದನ್ನೂ ಓದಿ: ’ದ ಹಂಟ್ ಫಾರ್ ವೀರಪ್ಪನ್’ ಸಾಕ್ಷ್ಯಚಿತ್ರ ಎತ್ತುವ ಅಹಿತಕರ ಪ್ರಶ್ನೆಗಳು

ದಲಿತರು ದಮನಿತರ ಮೇಲಿನ ಹಲ್ಲೆ ದೌರ್ಜನ್ಯಗಳನ್ನು ಕಟು ಪದಗಳಲ್ಲಿ ಟೀಕಿಸಿ ಹಾಡು ಬರೆದು ಹಾಡುತ್ತಿದ್ದರು. ಆ ಕೆಚ್ಚು ಅವರಲ್ಲಿತ್ತು, ರಾಗ ಅವರದ್ದೇ ಆಗಿರುತ್ತಿತ್ತು. ಜೀವನದುದ್ದಕ್ಕೂ ಜನರನ್ನು ಎಚ್ಚರಗೊಳಿಸುವುದಕ್ಕೆ ತಮ್ಮ ಪ್ರತಿಭೆಯನ್ನು ಬಳಸಿದರು. ತಮ್ಮ ಹಾಡಿನ ಮೂಲಕ ಅವರು ಜನರಿಗೆ ಮುಟ್ಟಿಸಿದ ವಿಚಾರಗಳನ್ನು ನೂರಾರು ಭಾಷಣ-ಬರಹಗಳಿಂದಲೂ ಮುಟ್ಟಿಸಲು ಸಾಧ್ಯವಿಲ್ಲ ಎನ್ನುವಮಟ್ಟಿಗೆ ಅವರ ಹಾಡುಗಳು ಖ್ಯಾತಿ ಗಳಿಸಿದ್ದವು.

ಖಾಸಗಿ ಆಸ್ತಿ ಮಾಡಬಾರದೆನ್ನುವ ಪಕ್ಷದ ತೀರ್ಮಾನ ಅವರಿಗೆ ಹಿಡಿಸಿರಲಿಲ್ಲ. ಹಾಗಾಗಿ ಹೊರಬಂದು ಕೊನೆಗಾಲಕ್ಕೆ ಆರ್ಥಿಕ ಸಮಸ್ಯೆಗಳನ್ನು ನೀಗಿಸಿಕೊಂಡಿದ್ದರು. ಸತ್ಯಂ ಎನ್ನುವ ಅವರ ಅಕ್ಕನ ಮಗ ಅವರನ್ನು ನೋಡಿಕೊಳ್ಳುತ್ತಿದ್ದರು.

8 ತಿಂಗಳ ಹಿಂದೆ ಅವರನ್ನು ನೋಡಲು ಹೈದರಾಬಾದ್‌ನ ಅವರ ಮನೆಗೆ ಹೋಗಿದ್ದೆ. ಅವರು ತಮ್ಮ ಬಗೆಗಿನ ಟೀಕೆಗಳಿಗೆ ಉತ್ತರಿಸಿದ್ದು ಹೀಗೆ: “ನಾನು ಹೋರಾಟದ ಹಾದಿ ಬಿಟ್ಟಿದ್ದೇನೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ನಾನು ಕ್ರಾಂತಿಯ ಧ್ಯೇಯವನ್ನು ಕೈಬಿಟ್ಟಿಲ್ಲ. ನಾನು ಕಲಾವಿದ. ಹಗ್ಗದ ಮೇಲೆ ನಡೆಯುತ್ತಿದ್ದೇನೆ. ಜನ ನನ್ನನ್ನು ನೋಡಿ ಬೀಳುತ್ತಿದ್ದಾನೆ ಅಂದುಕೊಳ್ಳುತ್ತಿರಬಹುದು. ಆದರೆ ಆ ಕಡೆ ಈ ಕಡೆ ವಾಲುತ್ತಿದ್ದೇನೆ, ಬ್ಯಾಲೆನ್ಸ್ ಮಾಡುತ್ತಿದ್ದೇನೆಯೇ ಹೊರತು ಬೀಳುವುದಿಲ್ಲ.. ಕೊನೆಗೆ ನಾನು ಅದೇ ಝಂಡ ಹಿಡಿಯುತ್ತೇನೆ ನೋಡುತ್ತಿರಿ” ಎಂದಿದ್ದರು. ’ನಗರಿ ಬಾಬಯ್ಯನವರ ತಮ್ಮ ಗದ್ದರ್’ ಎಂದು ಕರ್ನಾಟಕ ಪೊಲೀಸ್ ದಾಖಲೆಯಲ್ಲಿ ಬರೆದಿದ್ದಾರೆ. ಅಷ್ಟರಮಟ್ಟಿಗೆ ಅವರಿಗೂ ನನಗೂ ಸಂಬಂಧವಿತ್ತು.

ಕಾರಂಚೇಡು ಘಟನೆಗಳ ನಂತರ ಜಾತಿ ಪದ್ಧತಿಯಿಂದ ರೋಸಿಹೋಗಿದ್ದ ಗದ್ದರ್‌ರವರು ಬೌದ್ಧ ಧರ್ಮವನ್ನು ಅಪ್ಪಿಕೊಂಡಿದ್ದರು. ಆ ಆಚರಣೆಯಂತೆಯೇ ಅವರ ಅಂತ್ಯಸಂಸ್ಕಾರ ಮಾಡಲಾಗಿದೆ.

ಪ್ರಪಂಚದ ನಾಲ್ಕನೇ ಮೂರರಷ್ಟು ಜನರು ಇಂದಿಗೂ ಹಸಿವು, ನಿರುದ್ಯೋಗದಿಂದ ಬಳಲುತ್ತಿದ್ದಾರೆ. ಬಡತನ ರೇಖೆಗಿಂತ ಕೆಳಗಿದ್ದಾರೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಜನರ ಪರಿಸ್ಥಿತಿ ಬದಲಾಗಲಿಲ್ಲ. ಅವು ಅಧಿಕಾರಕ್ಕೆ ಹವಣಿಸುತ್ತವೆಯೇ ಹೊರತು ಜನರ ನಿಜವಾದ ಕಷ್ಟಗಳನ್ನು ಅರಿಯುವ ಯತ್ನ ಮಾಡುತ್ತಿಲ್ಲ ಅನ್ನುವ ಕೊರಗು ಗದ್ದರ್‌ರವರಿಗೆ ಕೊನೆಯವರೆಗೂ ಇತ್ತು. ಈಗ ಅವರು ದೈಹಿಕವಾಗಿ ನಮ್ಮನ್ನು ಅಗಲಿದ್ದಾರೆ. ಆದರೆ ಅವರು ಹಾಡುಗಳ ಮೂಲಕ ಎಂದೆಂದಿಗೂ ಜೀವಂತವಿದ್ದಾರೆ. ಅವರ ಹೋರಾಟವನ್ನು ಮುಂದುವರಿಸುವ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ.

– ನಗರಿ ಬಾಬಯ್ಯ

ಗದ್ದರ್ ಅವರ ಒಂದು ಹಾಡು..

ಮಲ್ಲಿಗೆ ಬಳ್ಳಿಗೆ ಚಪ್ಪರದಂತೆ ಮಬ್ಬುಕತ್ತಲಲ್ಲಿ ಬೆಳದಿಂಗಳಂತೆ
ನಿನ್ನ ಪಾದದ ಮೇಲೆ ಪುಟ್ಟಮಚ್ಚೆಯಂತೆ ತಂಗ್ಯಮ್ಮಾ..
ಒಡಹುಟ್ಟಿದ ಋಣ ತೀರಿಸಿಕೊಳ್ಳುವೆ ತಂಗ್ಯಮ್ಮಾ..
ನಿನ್ನ ಪಾದದ ಮೇಲೆ ಪುಟ್ಟಮಚ್ಚೆಯಂತೆ ತಂಗ್ಯಮ್ಮಾ..
ಒಡಹುಟ್ಟಿದ ಋಣ ತೀರಿಸಿಕೊಳ್ಳುವೆ ತಂಗ್ಯಮ್ಮಾ..

ಮುಳ್ಳಬಳ್ಳಿಯಮ್ಮ ಬೇಲಿಯ ಮೇಲೆ ಸೀರೆ ಹಾಕಿದರೆ ಬರಲೆ ಇಲ್ಲಮ್ಮ
ಹೆಣ್ಣುಮಗುವನ್ನು ರೆಪ್ಪೆ ರೆಪ್ಪೆ ತೆಗೆದು ನೋಡಿದರೆ ತಪ್ಪಮ್ಮಾ
ದೊಡ್ಡವಳಾಗಿ ಅರಳಿದಾಗ ಹೆಣ್ಣಿನ ಮೇಲಿನ ಬಯಕೆಗಳೆಷ್ಟೋ
ನೋಡುವುದನ್ನು ನೋಡಬೇಡೆನ್ನುವರು ನಗುವ ಕಡೆ ನಗಬೇಡೆನ್ನುವರು
ಆ ರೀತಿಯ ಅಣ್ಣನು ನಾನಲ್ಲ ತಂಗ್ಯಮ್ಮಾ.

ನಿನ್ನ ಬಾಲ್ಯದ ಸ್ನೇಹಿತನು ನಾನು ತಂಗ್ಯಮ್ಮಾ॒॒
ಅಡವಿಯಲ್ಲಿನ ನವಿಲಿನಂತೆ ತಂಗ್ಯಮ್ಮಾ.
ಆಟ ಆಡುನೀ ಹಾಡನ್ನೂ ಹಾಡು ನೀ ತಂಗ್ಯಮ್ಮಾ
ಗದ್ದರ್ ಹಾಡು

ಕನ್ನಡಕ್ಕೆ: ಅನಿಲ್ ಚಿಕ್ಕದಾಳವಟ್ಟ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೋದಿಯವರ ವಿದೇಶಾಂಗ ನೀತಿ ಸಂಪೂರ್ಣವಾಗಿ ದಿಕ್ಕು ತಪ್ಪಿದೆ, ನಗೆಪಾಟಲಿಗೆ ಈಡಾಗಿದೆ, ಅನೈತಿಕತೆಯಿಂದ ಕೂಡಿದೆ. ಇದು ಜಗಜ್ಜಾಹೀರಾಗಿದೆ – ಶ್ರೀಪಾದ್‌ ಭಟ್

ತಮ್ಮ ಸ್ಥಳೀಯ ಮತಬ್ಯಾಂಕ್ ರಾಜಕಾರಣದ ಜೊತೆಗೆ ವಿದೇಶಿ ನೀತಿಯನ್ನು ತಳುಕು ಹಾಕುವುದು. ಉದಾಹರಣೆಗೆ ಅಮೆರಿಕ-ಇಸ್ರೇಲ್ ಜಂಟಿಯಾಗಿ ನಡೆಸುತ್ತಿರುವ ಇರಾನ್ ಮೇಲಿನ ಯುದ್ಧದ ಸಮಯದಲ್ಲಿ ಮೋದಿ ನೇತೃತ್ವದ ಸರ್ಕಾರವು ತಾನು ಇರಾನ್ ಪರ ನಿಲುವು ತಾಳಿದರೆ...

ದೆಹಲಿ ಪೊಲೀಸರಿಂದ 10 ಮಂದಿ ಹೋರಾಟಗಾರರ ಅಪಹರಣ ಆರೋಪ : ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ

ಸಿವಿಲ್ ಸೊಸೈಟಿಯ ಹತ್ತು ಮಂದಿ ಹೋರಾಟಗಾರರನ್ನು ದೆಹಲಿ ಪೊಲೀಸರು ಅಪಹರಿಸಿದ್ದಾರೆ ಅಥವಾ ಅಕ್ರಮವಾಗಿ ಬಂಧಿಸಿದ್ದಾರೆ ಎಂದು ಮಾನವ ಹಕ್ಕುಗಳ ಗುಂಪುಗಳು ಆರೋಪಿಸಿವೆ. ಹತ್ತು ಮಂದಿಯನ್ನು ದೆಹಲಿ ಪೊಲೀಸರು ಮತ್ತು ಇತರ ರಾಜ್ಯಗಳ ಏಜೆನ್ಸಿಗಳು ಅಪಹರಿಸಿವೆ...

ಗುಜರಾತ್‌: 34 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ: ವಿಧಾನಸಭೆಗೆ ಮಾಹಿತಿ ನೀಡಿದ ಸರ್ಕಾರ

ಗಾಂಧಿನಗರ: ರಾಜ್ಯದ 34 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಮತ್ತು ಪರಿಸ್ಥಿತಿಯನ್ನು ಸುಧಾರಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಗುಜರಾತ್ ಸರ್ಕಾರ ಶನಿವಾರ ವಿಧಾನಸಭೆಗೆ...

‘ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆ ನಿವಾರಿಸಲು ಸರ್ಕಾರ ಬದ್ಧ’: ಮುಖ್ಯಮಂತ್ರಿ ಸಿದ್ದರಾಮಯ್ಯ

ಬಾಗಲಕೋಟೆ: ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಲು ಸರ್ಕಾರ ಬದ್ಧವಾಗಿದ್ದು, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಜನರ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.  ಮಾರ್ಚ್ 14ರಂದು, ಬಾಗಲಕೋಟೆ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ...

ಮಣಿಪುರ ಹಿಂಸಾಚಾರ: ಕಾಮ್ಜಾಂಗ್‌ನಲ್ಲಿ ಇಬ್ಬರು ಕುಕಿ ಪುರುಷರು ಶವವಾಗಿ ಪತ್ತೆ; ಹೆಚ್ಚಿದ ಉದ್ವಿಗ್ನತೆ 

ಮಣಿಪುರದ ಕಾಮ್ಜಾಂಗ್ ಜಿಲ್ಲೆಯಲ್ಲಿ ಬುಧವಾರದಿಂದ ನಾಪತ್ತೆಯಾಗಿದ್ದ ಇಬ್ಬರು ಕುಕಿ ಪುರುಷರು ಗುರುವಾರ ಥವಾಯ್ ಕುಕಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದರಿಂದ ಉದ್ವಿಗ್ನತೆ ಹೆಚ್ಚಾಗಿದೆ. ಜಿಲ್ಲೆಯ ಥಾವಾಯಿ ಕುಕಿ ಗ್ರಾಮದ 42 ವರ್ಷದ ಥೇಂಗಿನ್...

ಉತ್ತರ ಪ್ರದೇಶ | ಮುಸ್ಲಿಮರೊಂದಿಗಿನ ಶಾಂತಿ ಸಭೆಯಲ್ಲಿ ‘ಇರಾನ್‌ಗೆ ಹೋಗಿ’ ಎಂದ ಪೊಲೀಸ್‌ ಅಧಿಕಾರಿ : ತೀವ್ರ ಆಕ್ರೋಶ

ಉತ್ತರ ಪ್ರದೇಶದಲ್ಲಿ ಈದುಲ್ ಫಿತರ್ (ರಂಝಾನ್) ಹಬ್ಬಕ್ಕೆ ಪೂರ್ವಭಾವಿಯಾಗಿ ನಡೆದ ಶಾಂತಿ ಸಭೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ನೀಡಿದ ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಂಭಾಲ್ ಜಿಲ್ಲೆಯ ಅಸ್ಮೋಲಿ ಪ್ರದೇಶದಲ್ಲಿ ರಂಝಾನ್ ತಿಂಗಳ ಕೊನೆಯ...

ಪಶ್ಚಿಮ ಏಷ್ಯಾ ಸಂಘರ್ಷ: ಲೆಬನಾನ್‌ನಲ್ಲಿ ಆರೋಗ್ಯ ಕೇಂದ್ರದ ಮೇಲೆ ಇಸ್ರೇಲ್ ದಾಳಿ: ವೈದ್ಯರು, ದಾದಿಯರು ಸೇರಿ 12 ಮಂದಿ ಸಾವು

ದಕ್ಷಿಣ ಲೆಬನಾನ್‌ನಲ್ಲಿರುವ ಆರೋಗ್ಯ ಕೇಂದ್ರದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 12 ವೈದ್ಯಕೀಯ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎಂದು ಲೆಬನಾನಿನ ಸಾರ್ವಜನಿಕ ಆರೋಗ್ಯ ಸಚಿವಾಲಯ ವರದಿ ಮಾಡಿದೆ.  ಲೆಬನಾನ್‌ನಾದ್ಯಂತ ಇಸ್ರೇಲಿ ದಾಳಿಯಲ್ಲಿ ಈವರೆಗೂ 103 ಮಕ್ಕಳು...

ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಪರ ತೀರ್ಮಾನಕ್ಕೆ ಎಲ್ಲರೂ ಸಹಕರಿಸಿ: ಒಳಮೀಸಲಾತಿ ಹೋರಾಟ ಸಮಿತಿ ಮನವಿ

ಬೆಂಗಳೂರು: ಒಳಮೀಸಲಾತಿ ಜಾರಿ ಮಾಡುವ ಪ್ರಕ್ರಿಯೆಯು ಕೊನೆಯ ಹಂತಕ್ಕೆ ತಲುಪಿದ್ದು, ಇದನ್ನು ಸುಲಲಿತವಾಗಿ ಬಗೆಹರಿಸಿ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಲು ಆಗ್ರಹಿಸಿ ಇಂದು (14 ಮಾರ್ಚ್)‌ ನಗರದ ಪ್ರೆಸ್‌ ಕ್ಲಬ್‌ನಲ್ಲಿ ಒಳಮೀಸಲಾತಿ ಹೋರಾಟಗಾರರು...

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅಕ್ರಮ ನೇಮಕಾತಿ; ರೋಸ್ಟರ್ ಮೀಸಲು ಕ್ರಮ ಉಲ್ಲಂಘನೆ ಆರೋಪ: ನ್ಯಾಯಾಂಗ ತನಿಖೆಗೆ ಆಗ್ರಹ

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿರುವ Central University of Karnataka ದಲ್ಲಿ ಬೋಧಕ ಹುದ್ದೆಗಳ ನೇಮಕಾತಿಯಲ್ಲಿ ಮೀಸಲು ಕ್ರಮ ಉಲ್ಲಂಘನೆ ಹಾಗೂ ಅಕ್ರಮ ನೇಮಕಾತಿಗಳು ನಡೆದಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ...

ಸಂಭಾಲ್ | ಮಸೀದಿಯಲ್ಲಿ ನಮಾಝ್ ಮಾಡುವವರ ಸಂಖ್ಯೆ ಮಿತಿಗೊಳಿಸಲು ಸಾಧ್ಯವಿಲ್ಲ; ಕಾನೂನು ಸುವ್ಯವಸ್ಥೆ ಕಾಪಾಡಲು ಆಗದಿದ್ದರೆ ರಾಜೀನಾಮೆ ನೀಡಿ: ಅಧಿಕಾರಿಗಳಿಗೆ ಅಲಹಾಬಾದ್ ಹೈಕೋರ್ಟ್ ತರಾಟೆ

ಸಂಭಾಲ್ ಜಿಲ್ಲೆಯ ಮಸೀದಿಯೊಂದರಲ್ಲಿ ರಂಝಾನ್ ಸಮಯದಲ್ಲಿ ನಮಾಝ್ ಮಾಡುವವರ ಸಂಖ್ಯೆಯನ್ನು ಮಿತಿಗೊಳಿಸುವ ಉತ್ತರ ಪ್ರದೇಶ ಸರ್ಕಾರದ ನಿರ್ಧಾರವನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಜವಾಬ್ದಾರಿ ಎಂದಿದೆ. ಫೆಬ್ರವರಿ 27ರಂದು...