HomeUncategorizedಜನಸಾಮಾನ್ಯರ ನೋವಿನ ಹಾಡುಗಳಲ್ಲಿ ಲೀನವಾದ ಗದ್ದರ್

ಜನಸಾಮಾನ್ಯರ ನೋವಿನ ಹಾಡುಗಳಲ್ಲಿ ಲೀನವಾದ ಗದ್ದರ್

- Advertisement -
- Advertisement -

ಗದ್ದರ್ ಇನ್ನಿಲ್ಲ ಎಂದು ಪತ್ರಿಕೆಗಳಲ್ಲಿ-ಟಿವಿಗಳಲ್ಲಿ ಹೇಳ್ತಿದ್ದಾರೆ. ಆದರೆ ಅವರ ಹಾಡುಗಳು ಅದನ್ನು ಸುಳ್ಳು ಮಾಡುತ್ತವೆ. ಈ ನೆಲದಲ್ಲಿ ತಮ್ಮ ಸಹಜೀವಿಗಳಿಗಾಗಿ ಅವರ ಹಕ್ಕುಗಳಿಗಾಗಿ ಹೋರಾಡಿ ಹುತಾತ್ಮರಾದ ಎಷ್ಟೋ ಜನರನ್ನು ಅವರ ಹಾಡುಗಳು ಅಮರರನ್ನಾಗಿಸಿವೆ. ಜೀವನ ಪೂರ್ತಿ ಹಾಡಿ, ತಾನೇ ಹಾಡಾದ ಆ ಸ್ವರ ಗದ್ದರ್; ಜನರ ಕ್ರಾಂತಿ ಬಯಸುವ ಯಾರಿಗೇ ಆದರೂ ಗದ್ದರ್ ಸತ್ತಿಲ್ಲ ಎಂದೇ ಅನಿಸುತ್ತದೆ.

ಕಾರ್ಮಿಕರ ದಿನಗೂಲಿ ಹೆಚ್ಚಿಸಿ ಎಂದು ಕರ್ನಾಟಕದಲ್ಲಿ ಹೋರಾಟ ಕಟ್ಟಿದ ಪಾರ್ವತಿ ಹಾಜಿಮಾರನ್ನು ಕೊಂದ ಸಂದರ್ಭದಲ್ಲಿ ಮೆಣಸಿನ ಹಾಡ್ಯಕ್ಕೆ ಬಂದ ಗದ್ದರ್ ಅಲ್ಲಿಯೇ ಅವರಿಬ್ಬರ ತ್ಯಾಗವನ್ನು ಹಾಡು ಕಟ್ಟಿ ಹಾಡಿ ಅಮರರನ್ನಾಗಿಸಿದ್ದು ಈ ತಕ್ಷಣಕ್ಕೆ ನೆನಪಾಗುತ್ತಿದೆ.

ಇಂಜಿನಿಯರಿಂಗ್ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಸಿ, ನಕ್ಸಲ್ ಹೋರಾಟದಲ್ಲಿ ಆಸಕ್ತಿ ತಳೆದಿದ್ದ ಅವರು ಹಿರಿಯ ಹೋರಾಟಗಾರ ಕೊಂಡಪ್ಪಲ್ಲಿ ಸೀತರಾಮಯ್ಯನವರಿಂದ ಪ್ರಭಾವಿತರಾಗಿ ಚಳವಳಿಗೆ ಧುಮುಕಿದರು. ಗದ್ದರ್‌ರವರ ಮೂಲ ಹೆಸರು ಗುಮ್ಮಡಿ ವಿಠಲ್ ರಾವ್. ತಂದೆ ಗುಮ್ಮಡಿ ಶೇಷಯ್ಯ, ತಾಯಿ ಲಚ್ಚುಮ್ಮಮ್ಮ.

ಗದ್ದರ್ ಒಬ್ಬ ಅಸಾಮಾನ್ಯ ಕಲಾವಿದರಾಗಿದ್ದರು. ತಮ್ಮೊಳಿಗಿನ ಆ ಕಲಾಪ್ರತಿಭೆಯನ್ನು ಅಸಮಾನತೆಯ ವಿರುದ್ಧದ ಹೋರಾಟಕ್ಕೆ ಬಳಸಿದ್ದರು. ತಮ್ಮ ಹಾಡುಗಳ ಮೂಲಕವೇ ಕೋಟ್ಯಾಂತರ ಜನರ ಗಮನ ಸೆಳೆದವರು ಗದ್ದರ್. ವೇದಿಕೆಯಲ್ಲಿ ಗದ್ದರ್‌ರವರು ಜನರ ಭಾಷೆಯಲ್ಲಿ, ಜಾನಪದ ಶೈಲಿಯಲ್ಲಿ, ಹಾಡುತ್ತಾ-ಕುಣಿಯುತ್ತ ಅಬ್ಬರಿಸುತ್ತಿದ್ದರೆ ಅವರನ್ನು ನೋಡಿ ಕಣ್ತುಂಬಿಕೊಳ್ಳಲು ಲಕ್ಷಾಂತರ ಜನರು ನೆರೆಯುತ್ತಿದ್ದರು. ಅನ್ಯಾಯ ನಡೆದ ಸ್ಥಳದಲ್ಲಿಯೇ ಹಾಡು ಕಟ್ಟಿ ತಮ್ಮದೇ ಟ್ಯೂನ್ ಹಾಕಿ ಹಾಡುತ್ತಿದ್ದರು. ತೆಲಂಗಾಣದ ಸ್ವರ ಅವರದ್ದಾಗಿತ್ತು.

ಆಂಧ್ರ ಪ್ರದೇಶದಲ್ಲಿ ಜನನಾಟ್ಯ ಮಂಡಳಿಯೆಂಬ ಬಹುದೊಡ್ಡ ಸಾಂಸ್ಕೃತಿಕ ಸಂಘಟನೆ ಕಟ್ಟಿದ್ದ ಗದ್ದರ್ ಆ ಮೂಲಕ ನಕ್ಸಲ್ ಚಳವಳಿಯ ಸಿದ್ಧಾಂತವನ್ನು ಪ್ರಚಾರ ಮಾಡಿದರು. ಅದಕ್ಕಾಗಿ ಅವರು 8 ವರ್ಷ ಅಜ್ಞಾತವಾಸ ಅನುಭವಿಸಬೇಕಾಯಿತು. ಪೊಲೀಸರು ಹಲವಾರು ಬಾರಿ ಅವರ ಮೇಲೆ ದಾಳಿ ನಡೆಸಿದ್ದರು. ಒಂದು ಗುಂಡು ಅವರ ದೇಹವೊಕ್ಕಿತ್ತು. ಅದನ್ನು ತೆಗೆಯಲು ಸಾಧ್ಯವಾಗಿರಲಿಲ್ಲ.

ಗದ್ದರ್ ಅವರಿಗೆ ಮೀನು ಎಂದರೆ ಪಂಚಪ್ರಾಣ. ಅವರಿಗೆ ಮೂವರು ಮಕ್ಕಳಿದ್ದರು. ಸೂರ್ಯ, ಚಂದ್ರ ಮತ್ತು ವೆನೆಲ್ಲ (ಬೆಳದಿಂಗಳು) ಎಂಬ ಹೆಸರಿಟ್ಟಿದ್ದರು. ಮಕ್ಕಳು ತಮ್ಮಂತೆಯೇ ಹೋರಾಟದಲ್ಲಿ ತೊಡಗಿಕೊಳ್ಳಬೇಕೆಂಬುದು ಅವರ ಬಯಕೆಯಾಗಿತ್ತು.

ಮನುಷ್ಯರನ್ನು ಮನುಷ್ಯರನ್ನಾಗಿಯೇ ನೋಡಬೇಕು. ಒಬ್ಬರು ಹೆಚ್ಚು, ಒಬ್ಬರು ಕಡಿಮೆ ಎಂದು ಜಾತಿ-ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ ಎಂದು ವಾದಿಸುತ್ತಿದ್ದರು. ಮನುಷ್ಯರನ್ನು ಮನುಷ್ಯರನ್ನಾಗಿ ನೋಡುವ ಮನಸ್ಥಿತಿ ನಿರ್ಮಾಣವಾಗುವುದೇ ತನ್ನ ಹೋರಾಟಕ್ಕೆ ಸಿಕ್ಕುವ ಅಂತಿಮ ಫಲಶ್ರುತಿ ಎಂದು ಅವರು ನಂಬಿದ್ದರು.

1975ರಲ್ಲಿ ಮೊದಲ ಬಾರಿಗೆ ನಾನು ಗದ್ದರ್‌ರವರನ್ನು ಭೇಟಿ ಮಾಡಿದೆ. ಆನಂತರ ಎಷ್ಟೋ ಬಾರಿ ಅವರೊಟ್ಟಿಗೆ ಚರ್ಚೆ ನಡೆಸಿದ್ದಿದೆ. ಬಾಬಾಬುಡನ್ ಗಿರಿ ಸೌಹಾರ್ದ ಹೋರಾಟಕ್ಕೆ ಗದ್ದರ್ ಕರ್ನಾಟಕಕ್ಕೆ ಬಂದಿದ್ದರು. ಗೌರಿ ಲಂಕೇಶ್ ಅವರನ್ನು ಪ್ರೀತಿಯಿಂದ ಆಹ್ವಾನಿಸಿದ್ದರು. ಒಮ್ಮೆ ಗದ್ದರ್ ಅವರಿಗೆ ಕರ್ನಾಟಕದಲ್ಲಿ ದೊರೆತ ಪ್ರಶಸ್ತಿ ಮೊತ್ತ 1 ಲಕ್ಷ ರೂಗಳನ್ನು ಕರ್ನಾಟಕದ ಚಳವಳಿಗೆ ಬಳಸಿಕೊಳ್ಳಿ ಎಂದು ಕೊಟ್ಟು ಹೋಗಿದ್ದರು. ನಾನು ಪಾಠ ಮಾಡುತ್ತಿದ್ದ ಸಂದರ್ಭದಲ್ಲಿ ಒಮ್ಮೆ ಅವರನ್ನು ಬೆಂಗಳೂರು ವಿವಿಗೆ ಕರೆಸಿದ್ದೆ. ಅವರ ಹಾಡು-ಮಾತುಗಳನ್ನು ಕೇಳಿದ ವಿದ್ಯಾರ್ಥಿಗಳು ಪುಳಕಿತರಾಗಿದ್ದರು.

ಇದನ್ನೂ ಓದಿ: ’ದ ಹಂಟ್ ಫಾರ್ ವೀರಪ್ಪನ್’ ಸಾಕ್ಷ್ಯಚಿತ್ರ ಎತ್ತುವ ಅಹಿತಕರ ಪ್ರಶ್ನೆಗಳು

ದಲಿತರು ದಮನಿತರ ಮೇಲಿನ ಹಲ್ಲೆ ದೌರ್ಜನ್ಯಗಳನ್ನು ಕಟು ಪದಗಳಲ್ಲಿ ಟೀಕಿಸಿ ಹಾಡು ಬರೆದು ಹಾಡುತ್ತಿದ್ದರು. ಆ ಕೆಚ್ಚು ಅವರಲ್ಲಿತ್ತು, ರಾಗ ಅವರದ್ದೇ ಆಗಿರುತ್ತಿತ್ತು. ಜೀವನದುದ್ದಕ್ಕೂ ಜನರನ್ನು ಎಚ್ಚರಗೊಳಿಸುವುದಕ್ಕೆ ತಮ್ಮ ಪ್ರತಿಭೆಯನ್ನು ಬಳಸಿದರು. ತಮ್ಮ ಹಾಡಿನ ಮೂಲಕ ಅವರು ಜನರಿಗೆ ಮುಟ್ಟಿಸಿದ ವಿಚಾರಗಳನ್ನು ನೂರಾರು ಭಾಷಣ-ಬರಹಗಳಿಂದಲೂ ಮುಟ್ಟಿಸಲು ಸಾಧ್ಯವಿಲ್ಲ ಎನ್ನುವಮಟ್ಟಿಗೆ ಅವರ ಹಾಡುಗಳು ಖ್ಯಾತಿ ಗಳಿಸಿದ್ದವು.

ಖಾಸಗಿ ಆಸ್ತಿ ಮಾಡಬಾರದೆನ್ನುವ ಪಕ್ಷದ ತೀರ್ಮಾನ ಅವರಿಗೆ ಹಿಡಿಸಿರಲಿಲ್ಲ. ಹಾಗಾಗಿ ಹೊರಬಂದು ಕೊನೆಗಾಲಕ್ಕೆ ಆರ್ಥಿಕ ಸಮಸ್ಯೆಗಳನ್ನು ನೀಗಿಸಿಕೊಂಡಿದ್ದರು. ಸತ್ಯಂ ಎನ್ನುವ ಅವರ ಅಕ್ಕನ ಮಗ ಅವರನ್ನು ನೋಡಿಕೊಳ್ಳುತ್ತಿದ್ದರು.

8 ತಿಂಗಳ ಹಿಂದೆ ಅವರನ್ನು ನೋಡಲು ಹೈದರಾಬಾದ್‌ನ ಅವರ ಮನೆಗೆ ಹೋಗಿದ್ದೆ. ಅವರು ತಮ್ಮ ಬಗೆಗಿನ ಟೀಕೆಗಳಿಗೆ ಉತ್ತರಿಸಿದ್ದು ಹೀಗೆ: “ನಾನು ಹೋರಾಟದ ಹಾದಿ ಬಿಟ್ಟಿದ್ದೇನೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ನಾನು ಕ್ರಾಂತಿಯ ಧ್ಯೇಯವನ್ನು ಕೈಬಿಟ್ಟಿಲ್ಲ. ನಾನು ಕಲಾವಿದ. ಹಗ್ಗದ ಮೇಲೆ ನಡೆಯುತ್ತಿದ್ದೇನೆ. ಜನ ನನ್ನನ್ನು ನೋಡಿ ಬೀಳುತ್ತಿದ್ದಾನೆ ಅಂದುಕೊಳ್ಳುತ್ತಿರಬಹುದು. ಆದರೆ ಆ ಕಡೆ ಈ ಕಡೆ ವಾಲುತ್ತಿದ್ದೇನೆ, ಬ್ಯಾಲೆನ್ಸ್ ಮಾಡುತ್ತಿದ್ದೇನೆಯೇ ಹೊರತು ಬೀಳುವುದಿಲ್ಲ.. ಕೊನೆಗೆ ನಾನು ಅದೇ ಝಂಡ ಹಿಡಿಯುತ್ತೇನೆ ನೋಡುತ್ತಿರಿ” ಎಂದಿದ್ದರು. ’ನಗರಿ ಬಾಬಯ್ಯನವರ ತಮ್ಮ ಗದ್ದರ್’ ಎಂದು ಕರ್ನಾಟಕ ಪೊಲೀಸ್ ದಾಖಲೆಯಲ್ಲಿ ಬರೆದಿದ್ದಾರೆ. ಅಷ್ಟರಮಟ್ಟಿಗೆ ಅವರಿಗೂ ನನಗೂ ಸಂಬಂಧವಿತ್ತು.

ಕಾರಂಚೇಡು ಘಟನೆಗಳ ನಂತರ ಜಾತಿ ಪದ್ಧತಿಯಿಂದ ರೋಸಿಹೋಗಿದ್ದ ಗದ್ದರ್‌ರವರು ಬೌದ್ಧ ಧರ್ಮವನ್ನು ಅಪ್ಪಿಕೊಂಡಿದ್ದರು. ಆ ಆಚರಣೆಯಂತೆಯೇ ಅವರ ಅಂತ್ಯಸಂಸ್ಕಾರ ಮಾಡಲಾಗಿದೆ.

ಪ್ರಪಂಚದ ನಾಲ್ಕನೇ ಮೂರರಷ್ಟು ಜನರು ಇಂದಿಗೂ ಹಸಿವು, ನಿರುದ್ಯೋಗದಿಂದ ಬಳಲುತ್ತಿದ್ದಾರೆ. ಬಡತನ ರೇಖೆಗಿಂತ ಕೆಳಗಿದ್ದಾರೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಜನರ ಪರಿಸ್ಥಿತಿ ಬದಲಾಗಲಿಲ್ಲ. ಅವು ಅಧಿಕಾರಕ್ಕೆ ಹವಣಿಸುತ್ತವೆಯೇ ಹೊರತು ಜನರ ನಿಜವಾದ ಕಷ್ಟಗಳನ್ನು ಅರಿಯುವ ಯತ್ನ ಮಾಡುತ್ತಿಲ್ಲ ಅನ್ನುವ ಕೊರಗು ಗದ್ದರ್‌ರವರಿಗೆ ಕೊನೆಯವರೆಗೂ ಇತ್ತು. ಈಗ ಅವರು ದೈಹಿಕವಾಗಿ ನಮ್ಮನ್ನು ಅಗಲಿದ್ದಾರೆ. ಆದರೆ ಅವರು ಹಾಡುಗಳ ಮೂಲಕ ಎಂದೆಂದಿಗೂ ಜೀವಂತವಿದ್ದಾರೆ. ಅವರ ಹೋರಾಟವನ್ನು ಮುಂದುವರಿಸುವ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ.

– ನಗರಿ ಬಾಬಯ್ಯ

ಗದ್ದರ್ ಅವರ ಒಂದು ಹಾಡು..

ಮಲ್ಲಿಗೆ ಬಳ್ಳಿಗೆ ಚಪ್ಪರದಂತೆ ಮಬ್ಬುಕತ್ತಲಲ್ಲಿ ಬೆಳದಿಂಗಳಂತೆ
ನಿನ್ನ ಪಾದದ ಮೇಲೆ ಪುಟ್ಟಮಚ್ಚೆಯಂತೆ ತಂಗ್ಯಮ್ಮಾ..
ಒಡಹುಟ್ಟಿದ ಋಣ ತೀರಿಸಿಕೊಳ್ಳುವೆ ತಂಗ್ಯಮ್ಮಾ..
ನಿನ್ನ ಪಾದದ ಮೇಲೆ ಪುಟ್ಟಮಚ್ಚೆಯಂತೆ ತಂಗ್ಯಮ್ಮಾ..
ಒಡಹುಟ್ಟಿದ ಋಣ ತೀರಿಸಿಕೊಳ್ಳುವೆ ತಂಗ್ಯಮ್ಮಾ..

ಮುಳ್ಳಬಳ್ಳಿಯಮ್ಮ ಬೇಲಿಯ ಮೇಲೆ ಸೀರೆ ಹಾಕಿದರೆ ಬರಲೆ ಇಲ್ಲಮ್ಮ
ಹೆಣ್ಣುಮಗುವನ್ನು ರೆಪ್ಪೆ ರೆಪ್ಪೆ ತೆಗೆದು ನೋಡಿದರೆ ತಪ್ಪಮ್ಮಾ
ದೊಡ್ಡವಳಾಗಿ ಅರಳಿದಾಗ ಹೆಣ್ಣಿನ ಮೇಲಿನ ಬಯಕೆಗಳೆಷ್ಟೋ
ನೋಡುವುದನ್ನು ನೋಡಬೇಡೆನ್ನುವರು ನಗುವ ಕಡೆ ನಗಬೇಡೆನ್ನುವರು
ಆ ರೀತಿಯ ಅಣ್ಣನು ನಾನಲ್ಲ ತಂಗ್ಯಮ್ಮಾ.

ನಿನ್ನ ಬಾಲ್ಯದ ಸ್ನೇಹಿತನು ನಾನು ತಂಗ್ಯಮ್ಮಾ॒॒
ಅಡವಿಯಲ್ಲಿನ ನವಿಲಿನಂತೆ ತಂಗ್ಯಮ್ಮಾ.
ಆಟ ಆಡುನೀ ಹಾಡನ್ನೂ ಹಾಡು ನೀ ತಂಗ್ಯಮ್ಮಾ
ಗದ್ದರ್ ಹಾಡು

ಕನ್ನಡಕ್ಕೆ: ಅನಿಲ್ ಚಿಕ್ಕದಾಳವಟ್ಟ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...