HomeUncategorizedಜನಸಾಮಾನ್ಯರ ನೋವಿನ ಹಾಡುಗಳಲ್ಲಿ ಲೀನವಾದ ಗದ್ದರ್

ಜನಸಾಮಾನ್ಯರ ನೋವಿನ ಹಾಡುಗಳಲ್ಲಿ ಲೀನವಾದ ಗದ್ದರ್

- Advertisement -
- Advertisement -

ಗದ್ದರ್ ಇನ್ನಿಲ್ಲ ಎಂದು ಪತ್ರಿಕೆಗಳಲ್ಲಿ-ಟಿವಿಗಳಲ್ಲಿ ಹೇಳ್ತಿದ್ದಾರೆ. ಆದರೆ ಅವರ ಹಾಡುಗಳು ಅದನ್ನು ಸುಳ್ಳು ಮಾಡುತ್ತವೆ. ಈ ನೆಲದಲ್ಲಿ ತಮ್ಮ ಸಹಜೀವಿಗಳಿಗಾಗಿ ಅವರ ಹಕ್ಕುಗಳಿಗಾಗಿ ಹೋರಾಡಿ ಹುತಾತ್ಮರಾದ ಎಷ್ಟೋ ಜನರನ್ನು ಅವರ ಹಾಡುಗಳು ಅಮರರನ್ನಾಗಿಸಿವೆ. ಜೀವನ ಪೂರ್ತಿ ಹಾಡಿ, ತಾನೇ ಹಾಡಾದ ಆ ಸ್ವರ ಗದ್ದರ್; ಜನರ ಕ್ರಾಂತಿ ಬಯಸುವ ಯಾರಿಗೇ ಆದರೂ ಗದ್ದರ್ ಸತ್ತಿಲ್ಲ ಎಂದೇ ಅನಿಸುತ್ತದೆ.

ಕಾರ್ಮಿಕರ ದಿನಗೂಲಿ ಹೆಚ್ಚಿಸಿ ಎಂದು ಕರ್ನಾಟಕದಲ್ಲಿ ಹೋರಾಟ ಕಟ್ಟಿದ ಪಾರ್ವತಿ ಹಾಜಿಮಾರನ್ನು ಕೊಂದ ಸಂದರ್ಭದಲ್ಲಿ ಮೆಣಸಿನ ಹಾಡ್ಯಕ್ಕೆ ಬಂದ ಗದ್ದರ್ ಅಲ್ಲಿಯೇ ಅವರಿಬ್ಬರ ತ್ಯಾಗವನ್ನು ಹಾಡು ಕಟ್ಟಿ ಹಾಡಿ ಅಮರರನ್ನಾಗಿಸಿದ್ದು ಈ ತಕ್ಷಣಕ್ಕೆ ನೆನಪಾಗುತ್ತಿದೆ.

ಇಂಜಿನಿಯರಿಂಗ್ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಸಿ, ನಕ್ಸಲ್ ಹೋರಾಟದಲ್ಲಿ ಆಸಕ್ತಿ ತಳೆದಿದ್ದ ಅವರು ಹಿರಿಯ ಹೋರಾಟಗಾರ ಕೊಂಡಪ್ಪಲ್ಲಿ ಸೀತರಾಮಯ್ಯನವರಿಂದ ಪ್ರಭಾವಿತರಾಗಿ ಚಳವಳಿಗೆ ಧುಮುಕಿದರು. ಗದ್ದರ್‌ರವರ ಮೂಲ ಹೆಸರು ಗುಮ್ಮಡಿ ವಿಠಲ್ ರಾವ್. ತಂದೆ ಗುಮ್ಮಡಿ ಶೇಷಯ್ಯ, ತಾಯಿ ಲಚ್ಚುಮ್ಮಮ್ಮ.

ಗದ್ದರ್ ಒಬ್ಬ ಅಸಾಮಾನ್ಯ ಕಲಾವಿದರಾಗಿದ್ದರು. ತಮ್ಮೊಳಿಗಿನ ಆ ಕಲಾಪ್ರತಿಭೆಯನ್ನು ಅಸಮಾನತೆಯ ವಿರುದ್ಧದ ಹೋರಾಟಕ್ಕೆ ಬಳಸಿದ್ದರು. ತಮ್ಮ ಹಾಡುಗಳ ಮೂಲಕವೇ ಕೋಟ್ಯಾಂತರ ಜನರ ಗಮನ ಸೆಳೆದವರು ಗದ್ದರ್. ವೇದಿಕೆಯಲ್ಲಿ ಗದ್ದರ್‌ರವರು ಜನರ ಭಾಷೆಯಲ್ಲಿ, ಜಾನಪದ ಶೈಲಿಯಲ್ಲಿ, ಹಾಡುತ್ತಾ-ಕುಣಿಯುತ್ತ ಅಬ್ಬರಿಸುತ್ತಿದ್ದರೆ ಅವರನ್ನು ನೋಡಿ ಕಣ್ತುಂಬಿಕೊಳ್ಳಲು ಲಕ್ಷಾಂತರ ಜನರು ನೆರೆಯುತ್ತಿದ್ದರು. ಅನ್ಯಾಯ ನಡೆದ ಸ್ಥಳದಲ್ಲಿಯೇ ಹಾಡು ಕಟ್ಟಿ ತಮ್ಮದೇ ಟ್ಯೂನ್ ಹಾಕಿ ಹಾಡುತ್ತಿದ್ದರು. ತೆಲಂಗಾಣದ ಸ್ವರ ಅವರದ್ದಾಗಿತ್ತು.

ಆಂಧ್ರ ಪ್ರದೇಶದಲ್ಲಿ ಜನನಾಟ್ಯ ಮಂಡಳಿಯೆಂಬ ಬಹುದೊಡ್ಡ ಸಾಂಸ್ಕೃತಿಕ ಸಂಘಟನೆ ಕಟ್ಟಿದ್ದ ಗದ್ದರ್ ಆ ಮೂಲಕ ನಕ್ಸಲ್ ಚಳವಳಿಯ ಸಿದ್ಧಾಂತವನ್ನು ಪ್ರಚಾರ ಮಾಡಿದರು. ಅದಕ್ಕಾಗಿ ಅವರು 8 ವರ್ಷ ಅಜ್ಞಾತವಾಸ ಅನುಭವಿಸಬೇಕಾಯಿತು. ಪೊಲೀಸರು ಹಲವಾರು ಬಾರಿ ಅವರ ಮೇಲೆ ದಾಳಿ ನಡೆಸಿದ್ದರು. ಒಂದು ಗುಂಡು ಅವರ ದೇಹವೊಕ್ಕಿತ್ತು. ಅದನ್ನು ತೆಗೆಯಲು ಸಾಧ್ಯವಾಗಿರಲಿಲ್ಲ.

ಗದ್ದರ್ ಅವರಿಗೆ ಮೀನು ಎಂದರೆ ಪಂಚಪ್ರಾಣ. ಅವರಿಗೆ ಮೂವರು ಮಕ್ಕಳಿದ್ದರು. ಸೂರ್ಯ, ಚಂದ್ರ ಮತ್ತು ವೆನೆಲ್ಲ (ಬೆಳದಿಂಗಳು) ಎಂಬ ಹೆಸರಿಟ್ಟಿದ್ದರು. ಮಕ್ಕಳು ತಮ್ಮಂತೆಯೇ ಹೋರಾಟದಲ್ಲಿ ತೊಡಗಿಕೊಳ್ಳಬೇಕೆಂಬುದು ಅವರ ಬಯಕೆಯಾಗಿತ್ತು.

ಮನುಷ್ಯರನ್ನು ಮನುಷ್ಯರನ್ನಾಗಿಯೇ ನೋಡಬೇಕು. ಒಬ್ಬರು ಹೆಚ್ಚು, ಒಬ್ಬರು ಕಡಿಮೆ ಎಂದು ಜಾತಿ-ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ ಎಂದು ವಾದಿಸುತ್ತಿದ್ದರು. ಮನುಷ್ಯರನ್ನು ಮನುಷ್ಯರನ್ನಾಗಿ ನೋಡುವ ಮನಸ್ಥಿತಿ ನಿರ್ಮಾಣವಾಗುವುದೇ ತನ್ನ ಹೋರಾಟಕ್ಕೆ ಸಿಕ್ಕುವ ಅಂತಿಮ ಫಲಶ್ರುತಿ ಎಂದು ಅವರು ನಂಬಿದ್ದರು.

1975ರಲ್ಲಿ ಮೊದಲ ಬಾರಿಗೆ ನಾನು ಗದ್ದರ್‌ರವರನ್ನು ಭೇಟಿ ಮಾಡಿದೆ. ಆನಂತರ ಎಷ್ಟೋ ಬಾರಿ ಅವರೊಟ್ಟಿಗೆ ಚರ್ಚೆ ನಡೆಸಿದ್ದಿದೆ. ಬಾಬಾಬುಡನ್ ಗಿರಿ ಸೌಹಾರ್ದ ಹೋರಾಟಕ್ಕೆ ಗದ್ದರ್ ಕರ್ನಾಟಕಕ್ಕೆ ಬಂದಿದ್ದರು. ಗೌರಿ ಲಂಕೇಶ್ ಅವರನ್ನು ಪ್ರೀತಿಯಿಂದ ಆಹ್ವಾನಿಸಿದ್ದರು. ಒಮ್ಮೆ ಗದ್ದರ್ ಅವರಿಗೆ ಕರ್ನಾಟಕದಲ್ಲಿ ದೊರೆತ ಪ್ರಶಸ್ತಿ ಮೊತ್ತ 1 ಲಕ್ಷ ರೂಗಳನ್ನು ಕರ್ನಾಟಕದ ಚಳವಳಿಗೆ ಬಳಸಿಕೊಳ್ಳಿ ಎಂದು ಕೊಟ್ಟು ಹೋಗಿದ್ದರು. ನಾನು ಪಾಠ ಮಾಡುತ್ತಿದ್ದ ಸಂದರ್ಭದಲ್ಲಿ ಒಮ್ಮೆ ಅವರನ್ನು ಬೆಂಗಳೂರು ವಿವಿಗೆ ಕರೆಸಿದ್ದೆ. ಅವರ ಹಾಡು-ಮಾತುಗಳನ್ನು ಕೇಳಿದ ವಿದ್ಯಾರ್ಥಿಗಳು ಪುಳಕಿತರಾಗಿದ್ದರು.

ಇದನ್ನೂ ಓದಿ: ’ದ ಹಂಟ್ ಫಾರ್ ವೀರಪ್ಪನ್’ ಸಾಕ್ಷ್ಯಚಿತ್ರ ಎತ್ತುವ ಅಹಿತಕರ ಪ್ರಶ್ನೆಗಳು

ದಲಿತರು ದಮನಿತರ ಮೇಲಿನ ಹಲ್ಲೆ ದೌರ್ಜನ್ಯಗಳನ್ನು ಕಟು ಪದಗಳಲ್ಲಿ ಟೀಕಿಸಿ ಹಾಡು ಬರೆದು ಹಾಡುತ್ತಿದ್ದರು. ಆ ಕೆಚ್ಚು ಅವರಲ್ಲಿತ್ತು, ರಾಗ ಅವರದ್ದೇ ಆಗಿರುತ್ತಿತ್ತು. ಜೀವನದುದ್ದಕ್ಕೂ ಜನರನ್ನು ಎಚ್ಚರಗೊಳಿಸುವುದಕ್ಕೆ ತಮ್ಮ ಪ್ರತಿಭೆಯನ್ನು ಬಳಸಿದರು. ತಮ್ಮ ಹಾಡಿನ ಮೂಲಕ ಅವರು ಜನರಿಗೆ ಮುಟ್ಟಿಸಿದ ವಿಚಾರಗಳನ್ನು ನೂರಾರು ಭಾಷಣ-ಬರಹಗಳಿಂದಲೂ ಮುಟ್ಟಿಸಲು ಸಾಧ್ಯವಿಲ್ಲ ಎನ್ನುವಮಟ್ಟಿಗೆ ಅವರ ಹಾಡುಗಳು ಖ್ಯಾತಿ ಗಳಿಸಿದ್ದವು.

ಖಾಸಗಿ ಆಸ್ತಿ ಮಾಡಬಾರದೆನ್ನುವ ಪಕ್ಷದ ತೀರ್ಮಾನ ಅವರಿಗೆ ಹಿಡಿಸಿರಲಿಲ್ಲ. ಹಾಗಾಗಿ ಹೊರಬಂದು ಕೊನೆಗಾಲಕ್ಕೆ ಆರ್ಥಿಕ ಸಮಸ್ಯೆಗಳನ್ನು ನೀಗಿಸಿಕೊಂಡಿದ್ದರು. ಸತ್ಯಂ ಎನ್ನುವ ಅವರ ಅಕ್ಕನ ಮಗ ಅವರನ್ನು ನೋಡಿಕೊಳ್ಳುತ್ತಿದ್ದರು.

8 ತಿಂಗಳ ಹಿಂದೆ ಅವರನ್ನು ನೋಡಲು ಹೈದರಾಬಾದ್‌ನ ಅವರ ಮನೆಗೆ ಹೋಗಿದ್ದೆ. ಅವರು ತಮ್ಮ ಬಗೆಗಿನ ಟೀಕೆಗಳಿಗೆ ಉತ್ತರಿಸಿದ್ದು ಹೀಗೆ: “ನಾನು ಹೋರಾಟದ ಹಾದಿ ಬಿಟ್ಟಿದ್ದೇನೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ನಾನು ಕ್ರಾಂತಿಯ ಧ್ಯೇಯವನ್ನು ಕೈಬಿಟ್ಟಿಲ್ಲ. ನಾನು ಕಲಾವಿದ. ಹಗ್ಗದ ಮೇಲೆ ನಡೆಯುತ್ತಿದ್ದೇನೆ. ಜನ ನನ್ನನ್ನು ನೋಡಿ ಬೀಳುತ್ತಿದ್ದಾನೆ ಅಂದುಕೊಳ್ಳುತ್ತಿರಬಹುದು. ಆದರೆ ಆ ಕಡೆ ಈ ಕಡೆ ವಾಲುತ್ತಿದ್ದೇನೆ, ಬ್ಯಾಲೆನ್ಸ್ ಮಾಡುತ್ತಿದ್ದೇನೆಯೇ ಹೊರತು ಬೀಳುವುದಿಲ್ಲ.. ಕೊನೆಗೆ ನಾನು ಅದೇ ಝಂಡ ಹಿಡಿಯುತ್ತೇನೆ ನೋಡುತ್ತಿರಿ” ಎಂದಿದ್ದರು. ’ನಗರಿ ಬಾಬಯ್ಯನವರ ತಮ್ಮ ಗದ್ದರ್’ ಎಂದು ಕರ್ನಾಟಕ ಪೊಲೀಸ್ ದಾಖಲೆಯಲ್ಲಿ ಬರೆದಿದ್ದಾರೆ. ಅಷ್ಟರಮಟ್ಟಿಗೆ ಅವರಿಗೂ ನನಗೂ ಸಂಬಂಧವಿತ್ತು.

ಕಾರಂಚೇಡು ಘಟನೆಗಳ ನಂತರ ಜಾತಿ ಪದ್ಧತಿಯಿಂದ ರೋಸಿಹೋಗಿದ್ದ ಗದ್ದರ್‌ರವರು ಬೌದ್ಧ ಧರ್ಮವನ್ನು ಅಪ್ಪಿಕೊಂಡಿದ್ದರು. ಆ ಆಚರಣೆಯಂತೆಯೇ ಅವರ ಅಂತ್ಯಸಂಸ್ಕಾರ ಮಾಡಲಾಗಿದೆ.

ಪ್ರಪಂಚದ ನಾಲ್ಕನೇ ಮೂರರಷ್ಟು ಜನರು ಇಂದಿಗೂ ಹಸಿವು, ನಿರುದ್ಯೋಗದಿಂದ ಬಳಲುತ್ತಿದ್ದಾರೆ. ಬಡತನ ರೇಖೆಗಿಂತ ಕೆಳಗಿದ್ದಾರೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಜನರ ಪರಿಸ್ಥಿತಿ ಬದಲಾಗಲಿಲ್ಲ. ಅವು ಅಧಿಕಾರಕ್ಕೆ ಹವಣಿಸುತ್ತವೆಯೇ ಹೊರತು ಜನರ ನಿಜವಾದ ಕಷ್ಟಗಳನ್ನು ಅರಿಯುವ ಯತ್ನ ಮಾಡುತ್ತಿಲ್ಲ ಅನ್ನುವ ಕೊರಗು ಗದ್ದರ್‌ರವರಿಗೆ ಕೊನೆಯವರೆಗೂ ಇತ್ತು. ಈಗ ಅವರು ದೈಹಿಕವಾಗಿ ನಮ್ಮನ್ನು ಅಗಲಿದ್ದಾರೆ. ಆದರೆ ಅವರು ಹಾಡುಗಳ ಮೂಲಕ ಎಂದೆಂದಿಗೂ ಜೀವಂತವಿದ್ದಾರೆ. ಅವರ ಹೋರಾಟವನ್ನು ಮುಂದುವರಿಸುವ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ.

– ನಗರಿ ಬಾಬಯ್ಯ

ಗದ್ದರ್ ಅವರ ಒಂದು ಹಾಡು..

ಮಲ್ಲಿಗೆ ಬಳ್ಳಿಗೆ ಚಪ್ಪರದಂತೆ ಮಬ್ಬುಕತ್ತಲಲ್ಲಿ ಬೆಳದಿಂಗಳಂತೆ
ನಿನ್ನ ಪಾದದ ಮೇಲೆ ಪುಟ್ಟಮಚ್ಚೆಯಂತೆ ತಂಗ್ಯಮ್ಮಾ..
ಒಡಹುಟ್ಟಿದ ಋಣ ತೀರಿಸಿಕೊಳ್ಳುವೆ ತಂಗ್ಯಮ್ಮಾ..
ನಿನ್ನ ಪಾದದ ಮೇಲೆ ಪುಟ್ಟಮಚ್ಚೆಯಂತೆ ತಂಗ್ಯಮ್ಮಾ..
ಒಡಹುಟ್ಟಿದ ಋಣ ತೀರಿಸಿಕೊಳ್ಳುವೆ ತಂಗ್ಯಮ್ಮಾ..

ಮುಳ್ಳಬಳ್ಳಿಯಮ್ಮ ಬೇಲಿಯ ಮೇಲೆ ಸೀರೆ ಹಾಕಿದರೆ ಬರಲೆ ಇಲ್ಲಮ್ಮ
ಹೆಣ್ಣುಮಗುವನ್ನು ರೆಪ್ಪೆ ರೆಪ್ಪೆ ತೆಗೆದು ನೋಡಿದರೆ ತಪ್ಪಮ್ಮಾ
ದೊಡ್ಡವಳಾಗಿ ಅರಳಿದಾಗ ಹೆಣ್ಣಿನ ಮೇಲಿನ ಬಯಕೆಗಳೆಷ್ಟೋ
ನೋಡುವುದನ್ನು ನೋಡಬೇಡೆನ್ನುವರು ನಗುವ ಕಡೆ ನಗಬೇಡೆನ್ನುವರು
ಆ ರೀತಿಯ ಅಣ್ಣನು ನಾನಲ್ಲ ತಂಗ್ಯಮ್ಮಾ.

ನಿನ್ನ ಬಾಲ್ಯದ ಸ್ನೇಹಿತನು ನಾನು ತಂಗ್ಯಮ್ಮಾ॒॒
ಅಡವಿಯಲ್ಲಿನ ನವಿಲಿನಂತೆ ತಂಗ್ಯಮ್ಮಾ.
ಆಟ ಆಡುನೀ ಹಾಡನ್ನೂ ಹಾಡು ನೀ ತಂಗ್ಯಮ್ಮಾ
ಗದ್ದರ್ ಹಾಡು

ಕನ್ನಡಕ್ಕೆ: ಅನಿಲ್ ಚಿಕ್ಕದಾಳವಟ್ಟ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಪೊಲೀಸರನ್ನು ನಿಯಂತ್ರಿಸದಿದ್ದರೆ ಜರ್ಮನಿಯ ನಾಜಿಗಳಂತೆ ಆಗಬಹುದು’: ದಲಿತ ವ್ಯಕ್ತಿಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಪಾಟ್ನಾ ಹೈಕೋರ್ಟ್ ಕಳವಳ

ದಲಿತ ವ್ಯಕ್ತಿಯೊಬ್ಬರ ಜಾತಿ ತಿಳಿದ ನಂತರ ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಬಿಹಾರದ ಮಾಜಿ ಪೊಲೀಸ್ ಅಧಿಕಾರಿಯ ವಿರುದ್ಧ ತಕ್ಷಣವೇ ಎಫ್‌ಐಆರ್ (FIR) ದಾಖಲಿಸುವಂತೆ ಪಾಟ್ನಾ ಹೈಕೋರ್ಟ್ ನಿರ್ದೇಶಿಸಿದೆ....

“ಎಷ್ಟೊಂದು ದುರಹಂಕಾರ!”: ಜೆ.ಪಿ.ನಡ್ಡಾ ಹೇಳಿಕೆಗೆ ಕಪಿಲ್ ಸಿಬಲ್ ತೀವ್ರ ಆಕ್ಷೇಪ; ಪ್ರತಿಭಟನಾನಿರತ ಸಿಜೆಪಿ ಬೆಂಬಲಿಸಿ ವೀಡಿಯೋ ಸಂದೇಶ

ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಕ್ರಾಂತಿಕಾರಿ ಜಿರಳೆ ಜನತಾ ಪಕ್ಷ (ಸಿಜೆಪಿ) ನಡೆಸುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ನಡೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಕೇಂದ್ರ ಸಚಿವ ಜೆ.ಪಿ....

ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ: ಮೋದಿ-ಅಮಿತ್ ಶಾ ರಾಜೀನಾಮೆಗೆ ರಾಹುಲ್ ಗಾಂಧಿ ಆಗ್ರಹ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ 'ಸಂಸತ್ ಚಲೋ' ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಕಾಂಗ್ರೆಸ್ ನಾಯಕ ರಾಹುಲ್...

ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಸಿಜೆಪಿ ನಿಯೋಗ; ಮನವಿ ಪತ್ರ ಸಲ್ಲಿಕೆ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ನವದೆಹಲಿಯಲ್ಲಿ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ ಇಂದು ಕೇಂದ್ರ ಸಚಿವ ಜೆಪಿ ನಡ್ಡಾ ಅವರನ್ನು ಸಿಜೆಪಿ ಸದಸ್ಯರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ...

‘ಸಂಸತ್ ಚಲೋ’: ‘ಸೋನಮ್ ವಾಂಗ್ಚುಕ್ ಪತ್ನಿ ಮೇಲೆ ದೆಹಲಿ ಪೊಲೀಸರಿಂದ ಹಲ್ಲೆ’: ವಿದ್ಯಾರ್ಥಿಗಳ ಮೇಲೂ ಲಾಠಿ ಚಾರ್ಜ್  

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಯೋಜಿಸಲಾಗಿದ್ದ ‘ಸಂಸದ್ ಚಲೋ’ ಮೆರವಣಿಗೆಯ ವೇಳೆ ಶಿಕ್ಷಣ ತಜ್ಞ ಹಾಗೂ ಲಡಾಖ್ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಸೇರಿದಂತೆ ಹಲವಾರು ಪ್ರತಿಭಟನಾಕಾರರ ಮೇಲೆ...

ಕನಿಷ್ಠ 20 ಸಾವಿರ ‘ಕಾಕ್ರೋಚ್‌’ಗಳಿಂದ ಸಂಸತ್ತಿಗೆ ಮೆರವಣಿಗೆ; ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ್ – ಅಶ್ರುವಾಯು

ಧರ್ಮೇಂದ್ರ ಪ್ರಧಾನ್ ರಾಜೀನಾಮಗೆ ಒತ್ತಾಯಿಸಿ ಮುಂಗಾರು ಅಧಿವೇಶನದ ಮೊದಲ ದಿನದಂದು ಸಂಸತ್ತಿಗೆ ಮೆರವಣಿಗೆ ನಡೆಸಲು ದೆಹಲಿಯಲ್ಲಿ ಜಮಾಯಿಸಿದ್ದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಾವಿರಾರು ಬೆಂಬಲಿಗರನ್ನು ಚದುರಿಸಲು ದೆಹಲಿ ಪೊಳಿಸರು ಅಶ್ರುವಾಯು ಶೆಲ್‌ಗಳನ್ನು...

ಸಿಜೆಪಿ ಪ್ರತಿಭಟನೆಗೆ ನಡುಗಿದ ಕೇಂದ್ರ ಸರ್ಕಾರ; ತರಾತುರಿಯಲ್ಲಿ ಸಂಸತ್ತಿನ ಗೇಟ್ ಮುಚ್ಚಿದ ಭದ್ರತಾ ಸಿಬ್ಬಂದಿ

ನೀಟ್‌ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ವಿರೋಧಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಹಮ್ಮಿಕೊಂಡಿರುವ ಸಂಸತ್ ಮೆರವಣಿಗೆಗೆ ಕೇಂದ್ರ ಸರ್ಕಾರ...

ಹಕ್ಕುಗಳ ಕಾಯ್ದೆಗೆ 7 ವರ್ಷ: ಕಾಗದದಲ್ಲಷ್ಟೇ ಸಮಾನತೆ, ಉದ್ಯೋಗ ಸಿಗದೆ ಬೀದಿಗೆ ತಳ್ಳಲ್ಪಡುತ್ತಿರುವ ಟ್ರಾನ್ಸ್‌ಜೆಂಡರ್‌ ಸಮುದಾಯ

ಬೆಂಗಳೂರು: ರಾಷ್ಟ್ರೀಯ ಮಟ್ಟದಲ್ಲಿ ‘ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ-2019’ ಜಾರಿಗೆ ಬಂದು ಏಳು ವರ್ಷಗಳು ಕಳೆದಿದ್ದರೂ, ಸಮುದಾಯದ ಆರ್ಥಿಕ ಸಬಲೀಕರಣ ಇನ್ನೂ ಕನಸಾಗಿಯೇ ಉಳಿದಿದೆ. ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ...

ಸಂಸತ್‌ ಚಲೋ: ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ಭಾರೀ ಬೆಂಬಲ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್‌ (NEET) ಪ್ರಶ್ನೆಪತ್ರಿಕೆ ಸೋರಿಕೆ, ಸಾಲು ಸಾಲು ವಿದ್ಯಾರ್ಥಿಗಳ ಆತ್ಮಹತ್ಯೆ ಹಾಗೂ ದೇಶದ ಪರೀಕ್ಷಾ ವ್ಯವಸ್ಥೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಆಯೋಜಿಸಿರುವ...

ಡಿಜಿಟಲೀಕರಣಗೊಂಡ 2002ರ ಮತದಾರರ ಪಟ್ಟಿಯಿಂದ ಬೆಂಗಳೂರಿನ ಮತಗಟ್ಟೆಗಳೇ ಮಾಯ: ಮಾಹಿತಿ ಸಿಗದೆ ಆತಂಕದಲ್ಲಿ ನೂರಾರು ಮತದಾರರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ 2002ರ ಡಿಜಿಟಲೀಕರಣಗೊಂಡ ಮತದಾರರ ಪಟ್ಟಿಯಿಂದ ಇಡೀ ಮತಗಟ್ಟೆಗಳೇ ಕಾಣೆಯಾಗಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರಿಂದಾಗಿ ನೂರಾರು ಮತದಾರರು ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ ಎಂದು...