Homeನಿಜವೋ ಸುಳ್ಳೋ‘ರಿಪಬ್ಲಿಕ್’ ಆಫ್ ಮೋದಿ, ಮೀಡಿಯಾ ಆ್ಯಂಡ್ ಪಿಆರ್‍ಒಸ್:  ಓಟು, ಟಿಆರ್‍ಪಿಗಾಗಿ ಯಾವ ಮಟ್ಟಕ್ಕೂ.....

‘ರಿಪಬ್ಲಿಕ್’ ಆಫ್ ಮೋದಿ, ಮೀಡಿಯಾ ಆ್ಯಂಡ್ ಪಿಆರ್‍ಒಸ್:  ಓಟು, ಟಿಆರ್‍ಪಿಗಾಗಿ ಯಾವ ಮಟ್ಟಕ್ಕೂ…..

ನ್ಯೂಸ್ 18 ಕನ್ನಡ ಹಿನ್ನೆಲೆಯಲ್ಲಿ ಒಂದು ಭಕ್ತಿಯ ಹಾಡಿನ ಸಂಗೀತ ತೇಲಿಬಿಟ್ಟು ಪಾವನವಾಯಿತು. ಸಕಲ ಸೌಲಭ್ಯಗಳ ಆ ಕೃತಕ ಗುಹೆಯಲ್ಲಿ ಮೋದಿಯ ಕೃತಕ ಧ್ಯಾನದ ಬಗ್ಗೆ ಇವರಾರೂ ಚಕಾರ ಎತ್ತಲಿಲ್ಲ.

- Advertisement -
- Advertisement -

ಚುನಾವಣಾ ಪ್ರಚಾರ ಅಂತ್ಯವಾದ ನಂತರವೂ, ಮತದಾರರ ಮೇಲೆ ಪ್ರಭಾವ ಬೀರಲು ‘ಭಕ್ತಿ’ಯನ್ನೂ ಒಂದು ಸರಕಾಗಿಸಿದ ಮೋದಿ, ಮೀಡಿಯಾ ಮತ್ತು ಪಿಆರ್‍ಒಗಳ ರಿಪಬ್ಲಿಕ್ ಕಳೆದ ಐದು ವರ್ಷ ಇಂತಹ ಜನದ್ರೋಹ ಕೆಲಸದಲ್ಲೇ ನಿರತವಾಗಿತ್ತಲ್ಲವೇ?

ಆಯ್ತು, ಪ್ರಧಾನಿ ನರೇಂದ್ರ ಮೋದಿಯವರಿಗೆ ಭಕ್ತಿ ಉಕ್ಕಿ ಬಂದಿತ್ತು, ಅವರು ಕೇದಾರನಾಥಕ್ಕೆ ಹೋದರು. ಆದರೆ ಇದಿಷ್ಟನ್ನು ಜನರಿಗೆ ತಿಳಿಸಿಬಿಟ್ಟಿದ್ದರೆ ಮೀಡಿಯಾ ಕೆಲಸ ಮುಗಿದಿರೋದು. ಆದರೆ, ಬಹುಪಾಲು ದೃಶ್ಯ ಮಾಧ್ಯಮಗಳು ಇದನ್ನೊಂದು ತಪ್ಪಸ್ಸಿನಂತೆ ಬಿಂಬಿಸಿ, ಜನರನ್ನು ದಾರಿ ತಪ್ಪಿಸಲು ಯತ್ನಿಸಿದ್ದು ಅಸಹ್ಯವಾಗಿತ್ತು. ಪ್ರಧಾನಿ ಸಾಹೇಬರ ಪಿಆರ್‍ಒ ಟೀಮ್ ಅಂತೂ ಪ್ರಧಾನಿಯನ್ನು ಫ್ಯಾನ್ಸಿ ಡ್ರೆಸ್ ಮಾಡೆಲ್ ಮಟ್ಟಕ್ಕೆ ಇಳಿಸಿದೆ. ಮೋದಿ-ಮೀಡಿಯಾ-ಪಿಆರ್‍ಒ ‘ರಿಪಬ್ಲಿಕ್’ ಓಟು ಮತ್ತು ಟಿಆರ್‍ಪಿಗಾಗಿ ಯಾವ ಮಟ್ಟಕ್ಕೂ ಇಳಿಯಬಲ್ಲದು. ಆದರೆ, ಪಾಪ, ಈ ಸಲ ಏರಿದ್ದಾರೆ, ಕೇದಾರ ಬೆಟ್ಟ ಏರಿದ್ದಾರೆ! ಸೋ, ಯಾವ ಮಟ್ಟಕ್ಕಾದರೂ ಏರಬಲ್ಲರು ಅಂತ ಬೇಕಾದರೆ ಓದಿಕೊಳ್ಳಿ!

‘ಮುಂಜಾನೆಯೇ ಮೋದಿ ‘ಪರಿಕ್ರಮ’ ಮುಗಿಸಿ, 16 ಪೂಜಾವಿಧಾನಗಳನ್ನೂ ಮುಗಿಸಿ 2 ಕಿ.ಮೀ ಟ್ರೆಕ್ಕಿಂಗ್ ಮಾಡಿ ಗುಹೆ ತಲುಪಿ ಧ್ಯಾನಾಸಕ್ತರಾದರು. ಈ ವಯಸ್ಸಲ್ಲಿ ಇದೆಂತಹ ಶೃದ್ಧೆ, ಭಕ್ತಿ …ಅವರ ದೇಹಕ್ಕೆ ಸುಸ್ತೇ ಇಲ್ಲವೇನೋ?’ –ರಿಪಬ್ಲಿಕ್ ಟಿವಿಯ ನ್ಯೂಸ್ ಎಡಿಟರ್ ವಿವೇಕ್ ಶಾಂಡಿಲ್ಯನ ಸ್ಪಾಟ್ ವರದಿಯಿದು. ಪ್ರೈಮ್ ನ್ಯೂಸ್ ವರದಿ. ರಾತ್ರಿನೂ ಇತ್ತು. ಅದು ಅಲ್ಲದೇ ಇವತ್ತು ಸ್ಪೇಷಲ್ ಸ್ಟೋರಿ ಬೇರೆ ಐತಂತೆ!

‘ಮೋದಿ ಅಧಿಕಾರಿಗಳೊಂದಿಗೆ ಕೇದಾರನಾಥ ಪುನರ್‍ನಿರ್ಮಾಣದ ಕಾಮಗಾರಿ ಕುರಿತು ಚರ್ಚಿಸಿದರು.. ದುರ್ಗಮ ಹಾದಿಯಲ್ಲಿ ಕೋಲು ಹಿಡಿದು ಬೆಟ್ಟ ಏರಿದರು. ಆಗ ಅವರ ಮುಖದಲ್ಲಿ ಬೆವರಿತ್ತು’…-ಸೂಪರ್ ಇದಪ್ಪ ರಿಪೋರ್ಟಿಂಗ್ ಅಂದ್ರೆ!

ನ್ಯೂಸ್ 18 ಕನ್ನಡ ಹಿನ್ನೆಲೆಯಲ್ಲಿ ಒಂದು ಭಕ್ತಿಯ ಹಾಡಿನ ಸಂಗೀತ ತೇಲಿಬಿಟ್ಟು ಪಾವನವಾಯಿತು. ಸಕಲ ಸೌಲಭ್ಯಗಳ ಆ ಕೃತಕ ಗುಹೆಯಲ್ಲಿ ಮೋದಿಯ ಕೃತಕ ಧ್ಯಾನದ ಬಗ್ಗೆ ಇವರಾರೂ ಚಕಾರ ಎತ್ತಲಿಲ್ಲ. ಇದನ್ನು ಗೋದಿ ಮೀಡಿಯಾ ಎನ್ನದೆ ಬೇರೆ ಎನನ್ನಬೇಕು.

ಇದಕ್ಕೆ ವ್ಯತಿರಿಕ್ತವಾಗಿ ನೀವು ಸೋಷಿಯಲ್ ಮೀಡಿಯಾದಲ್ಲಿ ಕಣ್ಣಾಯಿಸಿದರೆ ಬರೀ ಮೋದಿ ಮೇಲಿನ ಟ್ರೋಲ್ ಗಳೇ ಕಾಣುತ್ತಿವೆ. ಕಳೆದೊಂದು ವಾರದಿಂದ ರಾಡಾರ್ ಮೋಡ, ಕವನ, ಸ್ಕ್ರಿಪ್ಟೆಡ್ ಸಂದರ್ಶನ, ಪ್ರಶ್ನೆಗಳಿಲ್ಲದ ಪತ್ರಿಕಾಗೋಷ್ಟಿ, ಈಗ ಐಟೆಕ್ ಧ್ಯಾನ ಸೇರಿದಂತೆ ಎಲ್ಲವೂ ವ್ಯಾಪಕ ಟೀಕೆಗೆ ಟ್ರೋಲ್ ಗೆ ಒಳಗಾಗಿವೆ. ಕಾರ್ಟೂನ್‍ಗಳಂತೂ ಒಂದನ್ನೊಂದು ಮೀರಿಸುವಷ್ಟು ಸೃಜನಶೀಲತೆಯಿಂದ ಕೂಡಿವೆ. ಆಡಳಿತ ಪಕ್ಷದ ನೀತಿಗಳು ಕುರಿತು ಹೀಗೆ ನಡೆದುಕೊಳ್ಳುವುದೇ ಪ್ರಜಾತಂತ್ರ. ಇದರಲ್ಲಿ ಮಾಧ್ಯಮಗಳು ನಡೆ ಪ್ರಜಾತಂತ್ರ ವಿರೋಧಿಯಾಗಿದೆ. ಆದರೆ ನೆಟ್ಟಿಗರು ಮಾತ್ರ ಟ್ರೋಲ್ ಮಾಡುವುದನ್ನು ಬಿಟ್ಟಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...