Homeಚಳವಳಿಲಿಂಗತ್ವ ಕಂದರವನ್ನು ಹೆಚ್ಚಿಸಿದ ಲಾಕ್‌ಡೌನ್‌: ಮಹಿಳೆಯರನ್ನು ಮರೆತುಬಿಟ್ಟ ಸರ್ಕಾರ

ಲಿಂಗತ್ವ ಕಂದರವನ್ನು ಹೆಚ್ಚಿಸಿದ ಲಾಕ್‌ಡೌನ್‌: ಮಹಿಳೆಯರನ್ನು ಮರೆತುಬಿಟ್ಟ ಸರ್ಕಾರ

ಭಾರತದಲ್ಲಿ ಪ್ರತಿನಿತ್ಯ 70,000 ಮಹಿಳೆಯರು ಹೆರುತ್ತಾರೆ, ಮತ್ತು 45,000 ಹೆಣ್ಣುಮಕ್ಕಳು ಗರ್ಭಪಾತ ಮಾಡಿಸುತ್ತಾರೆ ಎಂಬುದನ್ನು ಸರಕಾರ ಮರೆತುಬಿಟ್ಟಿದೆ. ಪ್ರತಿನಿತ್ಯ 10,000ದಷ್ಟು ಮಹಿಳೆಯರಿಗೆ ಆರೋಗ್ಯ ಶುಶ್ರೂಸೆ ಬೇಕಾಗುತ್ತದೆ.

- Advertisement -
- Advertisement -

ಭಾರತವು ಕೊರೋನ ಪಿಡುಗು ಮತ್ತು ನಂತರ ಹೇರಲಾದ ಲಾಕ್‌ಡೌನ್ ಪರಿಣಾಮವಾಗಿ ಕಳೆದ ಕೆಲವು ತಿಂಗಳುಗಳಿಂದ ಹಿಂದೆಂದೂ ಕಂಡಿರದಂತಹ ಬಿಕ್ಕಟ್ಟನ್ನು ಅನುಭವಿಸುತ್ತಿದೆ. ಈ ನಿರ್ಧಾರದ ಅಯೋಜಿತ ಮತ್ತು ಕಠೋರ ಸ್ವರೂಪವು ಆರೋಗ್ಯ ಮತ್ತು ಶುಶ್ರೂಷೆಯ ಬಿಕ್ಕಟ್ಟಿನ ಹೊರತಾಗಿ ದೊಡ್ಡ ಪ್ರಮಾಣದ ಮಾನವೀಯ ದುರಂತಕ್ಕೆ ಕಾರಣವಾಯಿತು. ಅತ್ಯಂತ ಕಣ್ಣಿಗೆ ರಾಚುವ ದುಷ್ಪರಿಣಾಮವು ಅನೌಪಚಾರಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಮೇಲಾಯಿತು. ಅವರು ಹತಾಶರಾಗಿ ನಗರಗಳಿಂದ ನೂರಾರು ಮೈಲಿ ದೂರದಲ್ಲಿರುವ ತಮ್ಮ ಊರುಗಳಿಗೆ ಧಾವಿಸಬೇಕಾಯಿತು. ಇನ್ನೂ ಕೂಡಾ ಅವರು ಆದಾಯ ನಷ್ಟ, ಉಪವಾಸ ಮತ್ತು ಬಡತನಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ನರಳುತ್ತಿದ್ದಾರೆ. ಆದರೆ, ಕಣ್ಣಿಗೆ ಬೀಳದ ಪರಿಣಾಮವು ಮಹಿಳೆಯರು, ಹೆಣ್ಣು ಮಕ್ಕಳು ಮತ್ತು ಅಸಮ ಲಿಂಗತ್ವವಿರುವ ವ್ಯಕ್ತಿಗಳ ಮೇಲಾಗಿದ್ದು, ಅವರು ಮೌನವಾಗಿ ತಮ್ಮ ನೋವನ್ನು ಅದುಮಿಕೊಂಡು ಕಷ್ಟಪಡುತ್ತಿದ್ದಾರೆ.

ಈ ಬಿಕ್ಕಟ್ಟಿನ ಮುಂಚೂಣಿಯಲ್ಲಿ ಆರೋಗ್ಯ ಕಾರ್ಯಕರ್ತೆಯರಾಗಿರುವ, ಆಯಾಗಳು, ದಾದಿಯರು ಮತ್ತು ಸ್ವಚ್ಛತಾ ಕಾರ್ಮಿಕರಾಗಿ ಕೆಲಸ ಮಾಡುವ ಮಹಿಳೆಯರು ನಮ್ಮ ಕಣ್ಣಿಗೆ ಬೀಳುತ್ತಿಲ್ಲ. ನಮ್ಮ ಆರೋಗ್ಯ ವ್ಯವಸ್ಥೆಯಲ್ಲಿ 70 ಶೇಕಡಾದಷ್ಟು ಮಹಿಳೆಯರೇ ಇರುವುದೆಂದು ನಮಗೆಲ್ಲಾ ಗೊತ್ತಿದೆ. ಆದರೂ, ಅವರ ಸಹಜ ಹಕ್ಕುಗಳಿಗೆ ಯಾವುದೇ ಖಾತರಿಯಿಲ್ಲ. ಸಾಮಾನ್ಯವಾಗಿ ಆರೋಗ್ಯ ವ್ಯವಸ್ಥೆಯ ಶ್ರೇಣೀಕೃತ ವ್ಯವಸ್ಥೆಯಲ್ಲಿ ಅತ್ಯಂತ ಕೆಳಗೆ ಇರುವವರೇ ಮಹಿಳೆಯರು. 10 ಲಕ್ಷಕ್ಕೂ ಹೆಚ್ಚು  ಹಲವಾರು ರಾಜ್ಯಗಳಲ್ಲಿ ಕನಿಷ್ಟ ವೇತನವನ್ನೂ ಪಡೆಯದೇ ಅತ್ಯಂತ ಹೆಚ್ಚು ಅಪಾಯವಿರುವ ಸಮುದಾಯ ಕಣ್ಗಾವಲಿನಲ್ಲಿ ತೊಡಗಿರುವುದು ನಮಗೆ ಕಾಣಿಸುತ್ತಿಲ್ಲ.

ದಾದಿಯರು ಹೇಗೆ ಆಸ್ಪತ್ರೆಗಳು ಸಂಬಳವಿಲ್ಲದೇ ಕೆಲಸ ಮಾಡಲು ಕೆಲವು ತಿಂಗಳುಗಳಿಂದ ಒತ್ತಾಯಿಸುತ್ತಿವೆ ಎಂಬ ಕುರಿತು ಗಮನ ಸೆಳೆಯಲು ಸಾಂಕೇತಿಕ ಮುಷ್ಕರವನ್ನೂ ನಡೆಸಿದ್ದಾರೆ. ವೈದ್ಯರುಗಳಿಗಿಂತ ಹೆಚ್ಚು ಸಮಯವನ್ನು ಕೊರೋನ ರೋಗಿಗಳ ಸಂಪರ್ಕದಲ್ಲಿ ಕಳೆಯುವ ಮಹಿಳಾ ಆರೋಗ್ಯ ಕಾರ್ಯಕರ್ತರಿಗೆ ಅಗತ್ಯವಾದ ಪಿಪಿಇ ಕಿಟ್‌ಗಳನ್ನು ಸಾಕಷ್ಟು ಪ್ರಮಾಣದಲ್ಲಿ ನೀಡಲಾಗುತ್ತಿಲ್ಲ ಎಂದು ಅವರು ದೂರಿದ್ದಾರೆ. ಮಹಿಳಾ ದಾದಿಯರು ಅಶೌಚ ಮತ್ತು ಅಸುರಕ್ಷಿತ ತಾಣಗಳಲ್ಲಿ ರಾತ್ರಿ ಹೊತ್ತು ಉಳಿಯುವಂತೆ ಮಾಡಲಾಗಿದ್ದರೆ, ಹೆಚ್ಚಾಗಿ ಪುರುಷರೇ ಆಗಿರುವ ವೈದ್ಯರುಗಳನ್ನು ಹೊಟೇಲುಗಳಲ್ಲಿ ವಾಸಿಸಲು ಅವಕಾಶ ನೀಡಲಾಗಿದೆ.

ಮನೆಯೊಳಗೂ ಮಹಿಳೆಯರು ಮಾಡುವ ಸಂಬಳವಿಲ್ಲದ ಕಾಯಕದ ಹೊರೆಯು ಹೆಚ್ಚಿದೆ.  ಏಕೆಂದರೆ, ಮನೆಯಲ್ಲಿ ಅಸ್ವಸ್ಥ ಕುಟುಂಬದ ಸದಸ್ಯರ ಆರೈಕೆ ಮಾಡುವವರೂ ಅವರೇ, ಕ್ವಾರಂಟೈನ್‌ನಲ್ಲಿರುವವರನ್ನು ನೋಡಿಕೊಳ್ಳುವವರೂ ಅವರೇ, ಮನೆಗಳಿಗೆ ಪಡಿತರ ತರುವವರು, ಕೆಲವು ಕಡೆಗಳಲ್ಲಿ ದೂರದೂರದಿಂದ ನೀರು ತರುವವರೂ ಅವರೇ. ಇವೆಲ್ಲವೂ ಅವರನ್ನು ಹೆಚ್ಚಿನ ಸೋಂಕು ಅಪಾಯಕ್ಕೆ ತಳ್ಳುತ್ತದೆ.

ಈ ಸಂದರ್ಭದಲ್ಲಿ ಶಾಲೆಗಳಲ್ಲಿ ಮಧ್ಯಾಹ್ನದ ಊಟ ಮತ್ತು ಅಂಗನವಾಡಿಗಳ ಪೌಷ್ಠಿಕ ಪೂರಕ ಆಹಾರ ಲಭಿಸದೇ ಇರುವುದರಿಂದ ಮತ್ತು ನಗರಗಳಿಗೆ ವಲಸೆ ಹೋಗಿದ್ದ ಹೆಚ್ಚಿನ ಪುರುಷರು ಮನೆಗೆ ಮರಳಿರುವುದರಿಂದ ಪ್ರತಿಯೊಂದು ಮನೆಯಲ್ಲಿ, ಮುಖ್ಯವಾಗಿ ಬಡವರ ಮನೆಗಳಲ್ಲಿ ಆಹಾರಕ್ಕಾಗಿ ಒತ್ತಡವು ಹೆಚ್ಚಿದೆ. ಸಾಮಾನ್ಯವಾಗಿ ಮಹಿಳೆಯರು ಕೊನೆಗೆ ಉಣ್ಣುತ್ತಾರೆ ಮತ್ತು ಪುರುಷರಿಗೆ ಹೋಲಿಸಿದರೆ ಕಡಿಮೆ ಪೌಷ್ಟಿಕಾಂಶವುಳ್ಳ ಆಹಾರ ಸೇವಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ.

ಈಗ ಆಹಾರದ ಲಭ್ಯತೆ ಕಡಿಮೆಯಾಗಿರುವಾಗ, ಮುಖ್ಯವಾಗಿ ಗರ್ಭಿಣಿಯರು ಮತ್ತು ಮೊಲೆಯೂಡಿಸುವ ಮಹಿಳೆಯರ ಪರಿಸ್ಥಿತಿ ಹದಗೆಡಲಿದೆ. ಇದು ಒಂದು ಆತಂಕಕಾರಿ ವಿಷಯವಾಗಿದೆ. ಯಾಕೆಂದರೆ, ಭಾರತವು ಈಗಾಗಲೇ ಮಹಿಳೆಯರಲ್ಲಿ ರಕ್ತಹೀನತೆ ಮತ್ತು ದೈಹಿಕ ದೌರ್ಬಲ್ಯದ ಮಟ್ಟದಲ್ಲಿ ಅತ್ಯಂತ ಕೆಳಗಿನ ಸ್ಥಾನದಲ್ಲಿದ್ದು, ನಾಚಿಕೆಗೇಡಿನ ಪರಿಸ್ಥಿತಿಯಲ್ಲಿದೆ. ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ 2016 (NFHS-4) ತೋರಿಸಿರುವಂತೆ, ಗರ್ಭಿಣಿಯರು ಮತ್ತು ಮೊಲೆಯೂಡಿಸುವ ಮಹಿಳೆಯರೂ ಸೇರಿದಂತೆ ಒಟ್ಟಾರೆ ಮಹಿಳೆಯರಲ್ಲಿ ಅರ್ಧದಷ್ಟು ಮಂದಿ ರಕ್ತಹೀನತೆಯಿಂದ ಬಳಲುತ್ತಿದ್ದಾರೆ.

ಮನೆಗಳ ಒಳಗೆಯೇ, ಅತ್ಯಂತ ಹೆಚ್ಚಿನ ಮಾನಸಿಕ ಒತ್ತಡದ ಸಂದರ್ಭದಲ್ಲಿ ಕೌಟುಂಬಿಕ ಹಿಂಸೆಯು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಲಾಕ್‌ಡೌನ್ ಸಮಯದಲ್ಲಿ ಹಿಂಸಾಚಾರದ ವರದಿ ಮಾಡುವುದು ಅಥವಾ ಔಷಧಾಲಯಗಳು ಮುಚ್ಚಿರುವುದರಿಂದ ಸೂಕ್ತವಾದ ಚಿಕಿತ್ಸೆ ಪಡೆಯುವುದು ಕೂಡಾ ಅತ್ಯಂತ ಕಷ್ಟಸಾಧ್ಯ ವಿಷಯವಾಗಿದೆ. ಅದಕ್ಕಿಂತ ಹೆಚ್ಚಾಗಿ ಹಿಂಸಾತ್ಮಕವಾಗಿ ಲಾಕ್‌ಡೌನ್ ಅನುಷ್ಟಾನಗೊಳಿಸುತ್ತಿರುವ ಪೊಲೀಸರನ್ನು ಸಂಪರ್ಕಿಸಿ ನೆರವು ಪಡೆಯುವುದೂ ಕೂಡಾ ತುಂಬಾ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಮಹಿಳೆಯರು, ಹೆಣ್ಣುಮಕ್ಕಳು ಮತ್ತು ಅಸಮ ಲಿಂಗತ್ವ ಹೊಂದಿರುವ ವ್ಯಕ್ತಿಗಳು ಹಾಗೂ ಲೈಂಗಿಕ ಕಾರ್ಮಿಕರು ಸಾಕಷ್ಟು ಹೆಚ್ಚಿನ ಪ್ರಮಾಣದಲ್ಲಿ ಲೈಂಗಿಕ ಕಿರುಕುಳ ಹೊಂದಿರುವ ಸಾಧ್ಯತೆಗಳು ಇವೆ. ಅವರಿಗೆ ಈ ಬಲಾತ್ಕಾರದ ಲಾಕ್‌ಡೌನ್ ಸಂದರ್ಭದಲ್ಲಿ ರಕ್ಷಣೆ, ಸಂತಾನೋತ್ಪತ್ತಿ ನಿರೋಧಕ ಸಾಧನಗಳ ಲಭ್ಯತೆ ಇರುವುದು ಸಾಧ್ಯವಿಲ್ಲ. ಇದು ಎಚ್ಐವಿ ಮತ್ತಿತರ ಲೈಂಗಿಕವಾಗಿ ಹರಡುವ ರೋಗಗಳ, ಬಯಸದಿರುವ ಗರ್ಭ, ಗರ್ಭಪಾತ ಇತ್ಯಾದಿ ಅಪಾಯಗಳನ್ನು ಗಣನೀಯವಾಗಿ ಹೆಚ್ಚುಮಾಡುತ್ತದೆ.

ಭಾರತದಲ್ಲಿ ಸಂತಾನೋತ್ಪತ್ತಿ ಆರೋಗ್ಯ ಸೇವೆಗಳ ಪ್ರತಿಷ್ಠಾನ (FRHSI) ಅಧ್ಯಯನದ ಪ್ರಕಾರ ಈ ಲಾಕ್‌ಡೌನ್ ಎಂಟು ಲಕ್ಷಕ್ಕೂ ಹೆಚ್ಚು ಅಸುರಕ್ಷಿತ ಗರ್ಭಪಾತಕ್ಕೆ ಕಾರಣವಾಗಲಿದೆ. 23 ಲಕ್ಷ ಬಯಸದ ಗರ್ಭಗಳಿಂದ 1,750ರಷ್ಟು ತಾಯಂದಿರ ಮರಣವು (ಎಂಎಂಅರ್) ಸಂಭವಿಸಲಿವೆ. ಹೆಣ್ಣುಮಕ್ಕಳ ಋತುಕಾಲದ (ಮುಟ್ಟು ಕಾಲದ) ಸುರಕ್ಷಾ ಸಾಧನಗಳು ಸ್ಯಾನಿಟರಿ ಪ್ಯಾಡ್) ಇತ್ಯಾದಿ ಇಲ್ಲಿಯವರೆಗೆ ಶಾಲೆಯಿಂದ, ಅಂಗನವಾಡಿಯಿಂದ ಅಥವಾ ಆಶಾ ಕಾರ್ಯಕರ್ತೆಯರಿಂದ ದೊರಕುತ್ತಿದ್ದವು. ಈಗ ಅದೂ ಇಲ್ಲವಾಗಿದೆ. ದುಬಾರಿಯಾದ ಇಂತಹ ಉತ್ಪನ್ನಗಳನ್ನು ಖರೀದಿಸಲು ಎಷ್ಟು ಹೆಣ್ಣುಮಕ್ಕಳಿಗೆ ಸಾಧ್ಯವಿದೆ ಮತ್ತು ಎಷ್ಟು ಜನ ಈ ಲಾಕ್‌ಡೌನ್ ಸಂದರ್ಭದಲ್ಲಿ ಹೋಗಿ ಕೊಳ್ಳಲು ಸಾಧ್ಯ?

ಅವಸರದ ಲಾಕ್‌ಡೌನ್ ನಿರ್ಧಾರದ ಸಂದರ್ಭದಲ್ಲಿ ಭಾರತದಲ್ಲಿ ಪ್ರತಿನಿತ್ಯ 70,000 ಮಹಿಳೆಯರು ಹೆರುತ್ತಾರೆ, ಮತ್ತು 45,000 ಹೆಣ್ಣುಮಕ್ಕಳು ಗರ್ಭಪಾತ ಮಾಡಿಸುತ್ತಾರೆ ಎಂಬುದನ್ನು ಸರಕಾರ ಮರೆತುಬಿಟ್ಟಿದೆ. ಪ್ರತಿನಿತ್ಯ 10,000ದಷ್ಟು ಮಹಿಳೆಯರಿಗೆ ವಿಶೇಷ ಶುಶ್ರೂಷೆ ಬೇಕಾಗಿರುವ ಹೆರಿಗೆ ಸಂಬಂಧಿ ಕಷ್ಟಗಳು ಎದುರಾಗುತ್ತವೆ ಎಂಬುದೂ ಸರಕಾರಕ್ಕೆ ಮರೆತುಹೋದಂತಿದೆ. ಇಂತವರಿಗೆ ಸರಕಾರಿ ಆಗಲೀ, ಖಾಸಗಿಯಾಗಲೀ ಯಾವುದೇ ಸೇವೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.

 

ಲಾಕ್‌ಡೌನ್‌ನ ಅವಸರದ ನಿರ್ಧಾರದ ಈ ಸಂದರ್ಭದಲ್ಲಿ ಹಲವಾರು ಗರ್ಭಿಣಿಯರು ಐದಾರು ಆಸ್ಪತ್ರೆಗಳಿಗೆ ಅಲೆದಾಡಿದ ಮಾಧ್ಯಮ ವರದಿಗಳಿವೆ. ಅವುಗಳು ರೋಗಿಗಳನ್ನು ದಾಖಲಿಸಲು ಹಿಂಜರಿಯುತ್ತಿರುವುದೇ ಇದಕ್ಕೆ ಕಾರಣ. ಮಹಿಳೆಯರು ಮನೆಗಳಲ್ಲಿ, ರೈಲುಗಳಲ್ಲಿ, ವಾಹನಗಳಲ್ಲಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇಂತಹ ಪ್ರಕರಣಗಳ ಕುರಿತು ದೂರುಗಳು ತೆಲಂಗಾಣ, ಮುಂಬಯಿ ಮತ್ತು ದಿಲ್ಲಿ ಹೈಕೋರ್ಟ್‌ಗಳಲ್ಲಿ ದಾಖಲಾಗಿವೆ. ಹಲವಾರು ಮಹಿಳೆಯರು ಬಹಿರಂಗವಾಗಿ ತಮ್ಮ ಊರುಗಳಿಗೆ ನೂರಾರು ಮೈಲಿ ನಡೆಯುತ್ತಾ ರಸ್ತೆಗಳಲ್ಲಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅವರ ಮಾಲಕರಾಗಲೀ, ಸರಕಾರವಾಗಲೀ ಅವರ ನೆರವಿಗೆ ಬಂದಿಲ್ಲ. ಇದಕ್ಕಿಂತ ನಾಚಿಕೆಗೆಡು ಬೇರೆ ಇದೆಯೇ ಒಂದು ದೇಶಕ್ಕೆ?

ಇದು ಭಾರತವು ಎದುರಿಸಬೇಕಾಗಿರುವ ಮೊದಲ ಬಿಕ್ಕಟ್ಟು ಏನೂ ಅಲ್ಲ. ಈ ದೇಶದಲ್ಲಿ ಮಹಿಳೆಯರು ಮತ್ತವರ ಆರೋಗ್ಯದ ಬಗ್ಗೆ ದಂಗುಬಡಿಸುವಂತಹ ಅಸಡ್ಡೆ ತೋರಲಾಗಿದೆ. ಯಾವುದೇ ಸಾಂಕ್ರಾಮಿಕ ರೋಗವು ಪುರುಷರು, ಮಹಿಳೆಯರು, ಅಸಮ ಲಿಂಗತ್ವ ಹೊಂದಿರುವವರು ಮತ್ತು ಮಕ್ಕಳ ಮೇಲೆ ಬೇರೆಬೇರೆ ರೀತಿಯ ಪರಿಣಾಮಗಳನ್ನು ಬೀರುತ್ತವೆ ಎಂಬ ಸೂಕ್ಷ್ಮತೆಯನ್ನು ನಮ್ಮ ಯೋಜಕರು ತಿಳಿದುಕೊಳ್ಳಬೇಕಾಗುತ್ತದೆ. ಜಾತಿ, ಧರ್ಮ, ಅಂತಸ್ತು, ಪ್ರಾದೇಶಿಕತೆ, ಸಂಪನ್ಮೂಲ ಮತ್ತು ಸೌಲಭ್ಯಗಳ ಲಭ್ಯತೆಯ ಆಧಾರದಲ್ಲೂ ಇವುಗಳು ಬದಲಾಗುತ್ತವೆ ಎಂಬುದನ್ನು ಕೂಡಾ ಅವರು ತಿಳಿದುಕೊಳ್ಳಬೇಕು. ಈ ಪಿಡುಗು ಈಗಾಗಲೇ ನಮ್ಮ ಸಮಾಜದಲ್ಲಿ ಇರುವ ಲಿಂಗತ್ವ ಸಂಬಂಧಿ ಕಂದರವನ್ನು ಇನ್ನಷ್ಟು ಆಲ, ಅಗಲ ಮಾಡದಂತೆ ತಡೆಯಬೇಕು.

  • ಜಶೋಧರ ದಾಸ್‌ಗುಪ್ತಾ

ಅನುವಾದ: ನಿಖಿಲ್ ಕೋಲ್ಪೆ


ಇದನ್ನೂ ಓದಿ: ವರ್ಷಗಳ ಕಾಲ ವೇತನ ರಹಿತ ರಜೆ: ಸಂಕಷ್ಟದಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...