ಹೀಗಿದೆ ಆರೆಸೆಸ್

- Advertisement -
- Advertisement -

ಆರ್.ಎಸ್.ಎಸ್. ಬೇಡಿಕೆ: “ಭಾರತೀಯ ಸಂವಿಧಾನದ ಸ್ಥಾನದಲ್ಲಿ ಮನುಸ್ಮøತಿಯ ಅನುಷ್ಠಾನ” – ಹಾಗಾದರೆ ದಲಿತರು ಮತ್ತು ಮಹಿಳೆಯರ ಗತಿಯೇನು? ಭಾರತ ಸಂವಿಧಾನದ ಮೇಲಿರುವ ಆರ್.ಎಸ್.ಎಸ್. ನಿಷ್ಠೆಯನ್ನು ಗೋಲ್ವಾಲ್ಕರ್ ಅವರ “ಚಿಂತನಾಗುಚ್ಛ” ಕೃತಿಯಲ್ಲಿನ ವಿವರ ಹೇಳಿಕೆಗಳಿಂದ ಸ್ಪಷ್ಟವಾಗಿ ತಿಳಿಯಬಹುದಾಗಿದೆ. ಈ ಕೃತಿ ಕೇವಲ ಆಯ್ದ ಲೇಖನಗಳ ಸಂಕಲನವಷ್ಟೇ ಅಲ್ಲ, ಬದಲಿಗೆ ಆರ್.ಎಸ್.ಎಸ್. ಸ್ವಯಂಸೇವಕರ ಪಾಲಿಗೆ ಒಂದು ಪವಿತ್ರ ಗ್ರಂಥ ಕೂಡ.
“ನಮ್ಮ ಸಂವಿಧಾನ ವಿವಿಧ ಪಾಶ್ಚಿಮಾತ್ಯ ರಾಷ್ಟ್ರಗಳ ಸಂವಿಧಾನಗಳಿಂದ ಆಯ್ದುಕೊಂಡ ವಿವಿಧ ಲೇಖನಗಳು ಮತ್ತು ಅನುಚ್ಛೇದದ ತುಣುಕುಗಳ ಸಂಚಯಿತ ರೂಪ. ಇದು ನಮ್ಮದೆಂದು ಹೇಳಿಕೊಳ್ಳಲು ನಿಚ್ಚಳವಾದ ಯಾವ ಹೆಗ್ಗಳಿಕೆಯೂ ಇಲ್ಲ. ನಮ್ಮ ರಾಷ್ಟ್ರ ಬದುಕಿನ ಧ್ಯೇಯವನ್ನಾಗಲಿ ಅಥವಾ ನಮ್ಮ ಬದುಕಿಗಿರುವ ಮಾರ್ಗದರ್ಶಿ ತತ್ತ್ವವನ್ನಾಗಲಿ ತೆರೆದು ತೋರುವ ಯಾವ ಮಾರ್ಗದರ್ಶಕ ಸಿದ್ಧಾಂತಗಳ ಒಂದು ಪದವಾದರೂ ಅದರಲ್ಲಿದೆಯೆ?
ವಾಸ್ತವ ಸಂಗತಿಯೆಂದರೆ, ಭಾರತ ಸಂವಿಧಾನದ ಸ್ಥಾನದಲ್ಲಿ ಮನುಸ್ಮøತಿ ಅಥವಾ ಮನುಸಂಹಿತೆ ಅಥವಾ ಮನುಧರ್ಮಶಾಸ್ತ್ರವಿರಬೇಕೆಂದು ಆರ್.ಎಸ್.ಎಸ್. ಅಪೇಕ್ಷಿಸಿತ್ತು. ಎಲ್ಲರೂ ತಿಳಿದಿರುವಂತೆ ಶೂದ್ರರು, ದಲಿತರು ಮತ್ತು ಮಹಿಳೆಯರ ಕುರಿತಂತೆ, ಅತ್ಯಂತ ಅವಹೇಳನಕಾರಿ ಮತ್ತು ಅಮಾನುಷ ಪ್ರಸ್ತಾಪಗಳ ಉಲ್ಲೇಖವಿರುವ ಮನುಸ್ಮøತಿ ಅವರ ಅಪೇಕ್ಷೆಯ ಸಂವಿಧಾನವಾಗಿತ್ತು. ಸಂಸದೀಯ ಸಭೆ, ಸಂವಿಧಾನ ರಚನೆ ಮತ್ತು ಮಂಡನೆಯ ಕಾರ್ಯವನ್ನು ಅಂತಿಮಗೊಳಿಸಿದಾಗ, ಆರ್.ಎಸ್.ಎಸ್ ತನ್ನ ಅಸಮಾಧಾನ ಮತ್ತು ಬೇಸರವನ್ನು ವ್ಯಕ್ತಪಡಿಸಿತು. ನವೆಂಬರ್ 30, 1949ರ ಆರ್ಗನೈಸರ್ ಪತ್ರಿಕೆಯ ಸಂಪಾದಕೀಯದಲ್ಲಿ ತನ್ನ ಆಕ್ಷೇಪವನ್ನು ಸ್ಪಷ್ಟವಾಗಿ ತಿಳಿಸಿದೆ.
“ಆದರೆ ನಮ್ಮ ಸಂವಿಧಾನದಲ್ಲಿ, ಪ್ರಾಕ್ತನ ಭಾರತದಲ್ಲಿ ಆಗಿರಬಹುದಾದ ಒಂದು ಅನನ್ಯ ಸಂವಿಧಾನಾತ್ಮಕ ಬೆಳವಣಿಗೆಯ ವಿವರಗಳಾಗಲಿ, ಉಲ್ಲೇಖಗಳಾಗಲಿ ಲವಲೇಶವಿಲ್ಲ. ಸ್ಪಾರ್ಟ್ ದ ಲೈಕರ್ಗಸ್ (820 ಬಿ.ಸಿ) ಅಥವಾ ಪರ್ಷಿಯಾದ ಸೊಲೊನ್ (640 ಬಿ.ಸಿ) ಅವರುಗಳಿಗೂ ಪೂರ್ವದಲ್ಲೇ ಮನುಸ್ಮøತಿ ರಚಿತವಾಗಿತ್ತು. ಇಂದಿನವರೆಗೂ ಮನುಸ್ಮøತಿಯಲ್ಲಿ ಪ್ರತಿಪಾದಿತವಾಗಿರುವ ವಿಧಿ ನಿಬಂಧನೆಗಳು ಜಗತ್ತಿನ ಮೆಚ್ಚುಗೆಗೆ ಪಾತ್ರವಾಗಿವೆ ಹಾಗೂ ಸ್ವಯಂಪ್ರೇರಿತ ನಿಷ್ಠೆ ಮತ್ತು ಅನುಸರಣೀಯ ಗುಣವನ್ನು ಪ್ರೇರೇಪಿಸಿದೆ. ಆದರೆ ಈ ಯಾವ ವಿಚಾರವು ನಮ್ಮ ಸಂವಿಧಾನದ ಪಂಡಿತೋತ್ತಮರಿಗೆ ಅರ್ಥವಾಗುವುದಿಲ್ಲ. ಹಾಗೆ ಅವರಿಗೆ ಮುಖ್ಯವೂ ಅಲ್ಲ”
ಸ್ವತಂತ್ರ ಭಾರತದಲ್ಲಿ ಮನುಧರ್ಮಶಾಸ್ತ್ರವನ್ನು ಅಂಗೀಕರಿಸಿ, ಅಧಿಕೃತವಾಗಿ ಘೋಷಿಸಬೇಕೆಂದು ಆರ್.ಎಸ್.ಎಸ್. ಒತ್ತಾಯಿಸುತ್ತಿರುವುದಕ್ಕೆ ನಿಜವಾದ ಕಾರಣವೆಂದರೆ, ತಮ್ಮ ಮಾರ್ಗದರ್ಶಿ, ತತ್ವಜಿಜ್ಞಾಸು ಮತ್ತು ವಿಚಾರ ಉದ್ದೀಪಕರಾಗಿರುವ ವಿ.ಡಿ.ಸಾವರ್ಕರ್ ಅವರನ್ನು ನಿಷ್ಠೆಯಿಂದ ಹಿಂಬಾಲಿಸುತ್ತಿರುವುದು. ಸಾವರ್ಕರರ ಮೇರೆಗೆ ;
“ನಮ್ಮ ಹಿಂದು ರಾಷ್ಟ್ರದ ಪವಿತ್ರ ಕೃತಿಗಳಾದ ವೇದಗಳ ಅನಂತರ ಅತ್ಯಂತ ಪೂಜ್ಯನೀಯ ಮತಧರ್ಮಶಾಸ್ತ್ರವೆಂದರೆ ‘ಮನುಸ್ಮøತಿ’ ಮಾತ್ರ. ಅಲ್ಲದೆ ಪ್ರಾಚೀನ ಕಾಲದಿಂದಲೂ ನಮ್ಮ ಸಂಸ್ಕøತಿ, ಸಂಪ್ರದಾಯ, ಚಿಂತನೆ ಮತ್ತು ಆಚರಣೆಯ ಮೂಲ ತಳಹದಿ ‘ಮನುಸ್ಮøತಿ’ಯಾಗಿದೆ. ಅಧ್ಯಾತ್ಮ ಮತ್ತು ದೈವಿಕತೆ ಕೇಂದ್ರಿತ ನಮ್ಮ ದೇಶ ಸಾಧಿಸಿರುವ ಮುನ್ನಡೆಯನ್ನು ಈ ಕೃತಿ ಸಂಕೇತರೂಪದಲ್ಲಿ ತನ್ನೊಡಲಲ್ಲಿ ಇರಿಸಿಕೊಂಡಿದೆ. ಇಂದಿಗೂ ಕೋಟ್ಯಾಂತರ ಮಂದಿ ಹಿಂದುಗಳು ತಮ್ಮ ಬದುಕಿನಲ್ಲಿ ಮತ್ತು ಆಚರಣೆಗಳಲ್ಲಿ ಪಾಲಿಸುತ್ತಿರುವ ವಿಧಿನಿಯಮಗಳು ‘ಮನುಸ್ಮøತಿ’ ಯನ್ನು ಆಧರಿಸಿವೆ. ಇಂದು ಹಿಂದು ಮತೀಯರ ಕಾನೂನು ಎಂದರೆ ಅದು ‘ಮನುಸ್ಮøತಿ’ ಮಾತ್ರ
ಆರ್.ಎಸ್.ಎಸ್. ದೃಷ್ಟಿಯಲ್ಲಿ ಹಿಂದು ರಾಷ್ಟ್ರದ ಸಮಾನಾರ್ಥಕ ಪದವೆಂದರೆ ‘ಜಾತೀಯತೆ’:
ಆರ್.ಎಸ್.ಎಸ್. ಪ್ರಧಾನರ ಶ್ರದ್ಧೆ, ನಂಬಿಕೆಯಿರುವುದು ಮನುಸ್ಮøತಿಯಲ್ಲಿ. ಆದ್ದರಿಂದ ಸಹಜವಾಗಿಯೆ ಜಾತೀಯತೆಯನ್ನು ನಂಬುವ ಕಡೆಗೆ ಅವರನ್ನು ಕರೆದೊಯ್ಯಿತು. ಆರ್.ಎಸ್.ಎಸ್.ಗೆ ಜಾತೀಯತೆಯೇ ಹಿಂದು ಧರ್ಮದ ಮತ್ತು ಹಿಂದು ರಾಷ್ಟ್ರೀಯತೆಯ ಅಂತಃಸ್ಸಾರ. ಮನು ಮೇರೆಗೆ ಹಿಂದು ಧರ್ಮೀಯರು ಮತ್ತಾರೂ ಅಲ್ಲ, ಆದರೆ ;
“ಹಿಂದು ಧರ್ಮೀಯರು ವಿರಾಟ್ ಪುರುಷ ಸಂಭೂತರು, ಆ ದೈವೀಶಕ್ತಿಯ ಮಾನುಷಾವತಾರಿಗಳು, ‘ಹಿಂದು’ ಶಬ್ದದ ಬಳಕೆ ಮಾಡದಿದ್ದರೂ, ‘ಪುರುಷ ಸೂಕ್ತ’ ದಲ್ಲಿ ವರ್ಣಿತವಾಗಿರುವ ದೈವೀಶಕ್ತಿಯ ವಿವರಗಳಲ್ಲಿ ಸ್ಪಷ್ಟವಾಗಿ ವ್ಯಕ್ತವಾಗಿದೆ; ಸೂರ್ಯಚಂದ್ರರು ವಿರಾಟ್ ಪುರುಷನ ಎರಡು ಕಣ್ಣುಗಳು, ಅವನ ಹೊಕ್ಕಳು ಮೂಲದಿಂದಲೇ ತಾರೆಗಳು ಮತ್ತು ಗಗನ ಸೃಷ್ಟಿತವಾಗಿದೆ. ಹಾಗು ಅವನ ಶಿರವೇ ಬಾ ್ರಹ್ಮಣರು, ತೋಳುಗಳೇ ಕ್ಷತ್ರಿಯರು, ವೈಶ್ಯರು ಅವನೆರಡು ಊರುಗಳು ಮತ್ತು ಪಾದಗಳೇ ಶೂದ್ರರು. ಇಂಥ ಪುರಾಣ ರೂಪಿಕೆಯ ಅರ್ಥವೆಂದರೆ; ಚಾತುರ್ವಣ್ರ್ಯ ವ್ಯವಸ್ಥೆಯಿರುವ ಸಮುದಾಯವೇ ಹಿಂದು ಮತೀಯರು – ನಮ್ಮ ದೇವತೆಗಳು ಹಾಗು ವಿರಾಟ್ ಪುರುಷನ ಶ್ರೇಷ್ಠಾಂಗವಾದ ಶಿರದ ಉತ್ಕøಷ್ಟ ದರ್ಶನವೇ ನಮ್ಮ ‘ರಾಷ್ಟ್ರ’ ಪರಿಕಲ್ಪನೆಯ ಆಂತರ್ಯದ ತಿರುಳು. ಈ ಅಂತಃಸತ್ತ್ವ ನಮ್ಮ ಚಿಂತನಾಕ್ರಮವನ್ನು ವಿಸ್ತರಿಸಿದೆ ಹಾಗು ನಮ್ಮ ಸಾಂಸ್ಕøತಿಕ ಪರಂಪರೆಯ ವಿವಿಧ ಅನನ್ಯ ಪರಿಕಲ್ಪನೆಗಳ ಆವಿರ್ಭಾವಕ್ಕೆ ಕಾರಣವಾಗಿದೆ”.
ಆರ್.ಎಸ್.ಎಸ್. ಮತ್ತು ಹಿಂದುತ್ವದ ಸಂಘಟನೆಗಳು ಮನುಸಂಹಿತೆಯನ್ನು ಜಾರಿಗೊಳಿಸುವ ಮೂಲಕ ಯಾವ ಬಗೆಯ ನಾಗರಿಕತೆಯನ್ನು ಕಟ್ಟಲು ಹೊರಟಿದ್ದಾರೆ ಎಂಬುದನ್ನು ಕೂಲಂಕಷವಾಗಿ ತಿಳಿಯಬೇಕಾದರೆ, ಮನುತತ್ತ್ವ ಶೂದ್ರರು ಮತ್ತು ಮಹಿಳೆಯರನ್ನು ಕುರಿತಂತೆ ರೂಪಿಸಿರುವ ನ್ಯಾಯವಿಧಿಗಳತ್ತ ಒಮ್ಮೆ ಅವಲೋಕಿಸಬೇಕಾಗುತ್ತದೆ. ಅಮಾನವೀಯವೂ ಮತ್ತು ಭ್ರಷ್ಟವೂ ಆಗಿರುವ ಕೆಲವು ನಿಯಮಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ. ಇವುಗಳೇ ತಮ್ಮ ಅರ್ಥವನ್ನು ಸ್ವಯಂ ನಿರ್ವಚಿಸಿಕೊಳ್ಳುತ್ತವೆ.
ಪ್ರಜಾಪ್ರಭುತ್ವದ ವಿರುದ್ಧ :
ಪ್ರಜಾಪ್ರಭುತ್ವದ ತಾತ್ತ್ವಿಕತೆಗೆ ತದ್ವಿರುದ್ಧವಾದ ನಿರಂಕುಶ ಆಳ್ವಿಕೆಯ ಅಡಿಯಲ್ಲಿ ಭಾರತ ತನ್ನ ಆಡಳಿತ ನಡೆಸಬೇಕೆಂದು ಆರ್.ಎಸ್.ಎಸ್. ನಿರಂತರವಾಗಿ ಆಗ್ರಹಿಸುತ್ತಲೇ ಬಂದಿದೆ. 1940 ರಂದು ಆರ್.ಎಸ್.ಎಸ್. ಕೇಂದ್ರಸ್ಥಾನವಾಗಿರುವ ನಾಗಪುರದ ರೇಷಮ್ ಭಾಗ್‍ನಲ್ಲಿ ಜರುಗಿದ ರಾಷ್ಟ್ರಮಟ್ಟದ ಆರ್‍ಎಸ್‍ಎಸ್‍ನ ಸುಮಾರು 1350 ಮಂದಿ ಉನ್ನತ ಸ್ತರದ ಸಂಘಟನೆಯ ಸ್ವಯಂಸೇವಕ ಪದವೃಂದವನ್ನುದ್ದೇಶಿಸಿ ಮಾತಾಡುತ್ತಾ ಗೋಲ್ವಾಲ್ಕರ್ ಮಹತ್ತರ ಹೇಳಿಕೆಯೊಂದನ್ನು ಘೋಷಿಸಿದರು ;
“ಒಂದು ಧ್ವಜ, ಒಬ್ಬ ನಾಯಕ ಮತ್ತು ಒಂದು ಸಿದ್ಧಾಂತ ಎಂಬ ನಿಲುವಿನಿಂದ ಆರ್.ಎಸ್.ಎಸ್. ಸ್ಫೂರ್ತಿ ಪಡೆದಿದೆ. ಈ ಸ್ಫೂರ್ತಿ ಜ್ಯೋತಿಯೇ ನಮ್ಮ ಮಹಾನ್ ನೆಲದ ಮೂಲೆಮೂಲೆಯಲ್ಲೂ ಹಿಂದುತ್ವದ ದೀಪ ಹಚ್ಚಿ ದೇದಿಪ್ಯಮಾನಗೊಳಿಸುತ್ತಿದೆ”.
ಒಂದು ಧ್ವಜ, ಒಬ್ಬ ನಾಯಕ ಮತ್ತು ಒಂದು ಸಿದ್ಧಾಂತವೆಂಬ ಈ ಘೋಷಣೆ, ಯುರೋಪಿನ ನಾಜಿ ಮತ್ತು ಉಗ್ರ ಬಲಪಂಥೀಯರಿಂದ ನೇರವಾಗಿ ಎರವಲು ಪಡೆದ, ಸ್ವಪಜ್ಞತೆಯಿರದ ಅನುಕರಣಾರ್ಥಕ ಘೋಷಣೆ. ಒಂದು ಆಸಕ್ತಿದಾಯಕ ಸಂಗತಿಯೆಂದರೆ, ಹಿಂದು ಮಹಾಸಭಾದ ಮುಖಂಡರಾಗಿದ್ದ ಶ್ಯಾಮಪ್ರಸಾದ ಮುಖರ್ಜಿಯವರೂ ಈ ಸಭೆಯಲ್ಲಿ ಉಪಸ್ಥಿತರಿದ್ದದ್ದು. ಇದೇ ಮುಖರ್ಜಿಯವರು, ವಿಭಜನೆ ಪೂರ್ವದಲ್ಲಿದ್ದ ಮುಸ್ಲಿಂ ಲೀಗ್ ಮತ್ತು ಹಿಂದು ಮಹಾಸಭಾ ಜೊತೆಗೂಡಿ 1942ರಲ್ಲಿ ರಚಿಸಿದ್ದ ಸಂಮಿಶ್ರ ಸರ್ಕಾರದಲಿ ್ಲ ಉಪಮುಖ್ಯಮಂತ್ರಿಯಾಗಿದ್ದವರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...