2002ರ ಗುಜರಾತ್ ನರಮೇಧದ ವಿಚಾರ ಬಂದಾಗಲೆಲ್ಲಾ, ಬಿಜೆಪಿಯು 1984ರ ಸಿಖ್ ನರಮೇಧದ ವಿಚಾರವನ್ನು ಎತ್ತುತ್ತದೆ. ಕಾಂಗ್ರೆಸ್ ಅದಕ್ಕೆ ಉತ್ತರ ಕೊಡಲೇಬೇಕು. ಆದರೆ, 1984ರ ನರಮೇಧದಲ್ಲೂ ಬಿಜೆಪಿಯ ಮಾತೃಸಂಸ್ಥೆ ಆರೆಸ್ಸೆಸ್ ನ ಪಾತ್ರ ಬಹಳಷ್ಟು ಜನರಿಗೆ ಗೊತ್ತಿಲ್ಲ. ಇದರ ಬಗ್ಗೆ ಗೌರಿಲಂಕೇಶ್ ಪತ್ರಿಕೆಯಲ್ಲಿ ಶಿವಸುಂದರ್ ಅವರು 2009ರ ಏಪ್ರಿಲ್ 29ರಂದು ಬರೆದ ಮಹತ್ವದ ಲೇಖನವನ್ನು ನಾನುಗೌರಿ.ಕಾಂನ ಓದುಗರಿಗಾಗಿ ಪುನರ್ ಪ್ರಕಟಿಸುತ್ತಿದ್ದೇವೆ.
ಚಪ್ಪಲಿ ಪೂಜೆಯಾಗದ ಹೊರತು ನಮ್ಮ ರಾಜಕಾರಣಿಗಳು ಪಾಠ ಕಲಿಯುವುದಿಲ್ಲವೆಂಬುದು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಸಾಬೀತಾಗಿದೆ. 1984ರಲ್ಲಿ ನಡೆದ ಘನಘೋರ ಸಿಖ್ ನರಮೇಧಕ್ಕೆ ನೇತೃತ್ವ ಕೊಟ್ಟು ಹಲವಾರು ಸಿಖ್ಖರನ್ನು ಕಡಿದುರುಳಿಸಿದ ಜಗದೀಶ್ ಟೈಟ್ಲರ್ ಮತ್ತು ಸಜ್ಜನ್ ಕುಮಾರ್ಗೆ ಈ ಬಾರಿಯೂ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಟ್ಟಿತ್ತು. ಗಾಯಕ್ಕೆ ಬರೆ ಎಳೆಯುವಂತೆ ಸಿಬಿಐ ಎಂಬ ಕೇಂದ್ರ ಸರ್ಕಾರದ ಕೈಗೊಂಬೆ ತನಿಖಾ ಸಂಸ್ಥೆ ಸಿಖ್ ನರಮೇಧದಲ್ಲಿ ಟೈಟ್ಲರ್ ಭಾಗವಹಿಸಿದ್ದು ಸೂರ್ಯನ ಬೆಳಕಷ್ಟೆ ಸತ್ಯವಾಗಿದ್ದರೂ ಆತನ ವಿರುದ್ಧ ಯಾವುದೇ ಸಾಕ್ಷಿ ಇಲ್ಲವೆಂದು ಕ್ಲೀನ್ ಚಿಟ್ ಕೊತ್ತುಬಿಟ್ಟಿತು. ಇದು ದೇಶದೆಲ್ಲೆಡೆ ಸಿಖ್ಖರ ಅಪಾರ ಪ್ರತಿಭಟನೆಗೆ ಕಾರಣವಾಯಿತು.
ಗೃಹಮಂತ್ರಿ ಚಿದಂಬರಂ ಪತ್ರಿಕಾಗೋಷ್ಠಿಯೊಂದರಲ್ಲಿ ಈ ಬಗ್ಗೆ ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡದಿದ್ದರಿಂದ ಕೆರಳಿದ ‘ದೈನಿಕ್ ಜಾಗರಣ್’ ಪತ್ರಿಕೆಯ ವರದಿಗಾರ ಜರ್ನೈಲ್ ಸಿಂಗ್ ಚಿದಂಬರಂ ಕಡೆಗೆ ಚಪ್ಪಲಿ ತೂರಿದ್ದು ಈ ಪ್ರತಿಭಟನೆಗಳ ಮುಂದುವರಿಕೆಯೇ ಆಗಿತ್ತು. ಪಂಜಾಬ್ನಲ್ಲಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಫಲಿತಾಂಶವನ್ನು ನಿರೀಕ್ಷಿಸುತ್ತಿತ್ತು. ಆದರೆ ಈ ಚಪ್ಪಲಿ ಪ್ರಕರಣ ಫಲಿತಾಂಶದ ಮೇಲೆ ಕೆಟ್ಟ ಪ್ರಭಾವ ಬೀರಬಹುದೆಂದು ಹೆದರಿ ಟೈಟ್ಲರ್ ಮತ್ತು ಸಜ್ಜನ್ ಕುಮಾರ್ರನ್ನು ಕೊನೆಗೂ ಕಾಂಗ್ರೆಸ್ ಕೈಬಿಟ್ಟಿದೆ. ಆದರೆ ಇದೂ ಸಹ ಅವಕಾಶವಾದಿ ರಾಜಕಾರಣವೇ ಹೊರತು ಪಶ್ಚಾತ್ತಾಪದ ರಾಜಕಾರಣ ವೇನಲ್ಲ ಎಂಬುದು ಎಳೆಮಕ್ಕಳಿಗೂ ಅರ್ಥವಾಗುತ್ತದೆ.
ಆದರೆ ಒಟ್ಟಾರೆ 1984ರ ಸಿಖ್ ನರಮೇಧದ ಪ್ರಕರಣದಲ್ಲಿ ಕಾಂಗ್ರೆಸ್ಗಿಂತ ಹೆಚ್ಚಿಗೆ ಅವಕಾಶವಾದದಿಂದ ವರ್ತಿಸುತ್ತಿರುವುದು ಆರೆಸ್ಸೆಸ್ ಮತ್ತು ಬಿಜೆಪಿ ಗಳು. ಗುಜರಾತ್ನಲ್ಲಿ ಸಂಘ ಪರಿವಾರ ನಡೆಸಿದ ಮುಸ್ಲಿಮರ ಮಾರಣಹೋಮದ ಬಗ್ಗೆ ಬಿಜೆಪಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾದಾಗಲೆಲ್ಲ ಕಾಂಗ್ರೆಸ್ನವರು ಸಿಖ್ ನರಮೇಧ ನಡೆಸಲಿಲ್ಲವೇ ಎಂದು ಪ್ರತಿದಾಳಿ ನಡೆಸಿ ತಮ್ಮ ಹುಳುಕನ್ನು ಮುಚ್ಚಿಕೊಳ್ಳುತ್ತಾ ಬಂದಿದ್ದಾರೆ. ಅದರಲ್ಲೂ 1999ರಿಂದ ಬಿಜೆಪಿ ಪಕ್ಷದ ಆಪ್ತಮಿತ್ರನಾಗಿದ್ದ ಮಾಜಿ ರಕ್ಷಣಾ ಸಚಿವ ಮತ್ತು ಮಾಜಿ ಸಮಾಜವಾದಿ ಜಾರ್ಜ್ ಫರ್ನಾಂಡಿಸ್ರವರಂತೂ ಗುಜರಾತ್ ಪಾಪದಿಂದ ಬಿಜೆಪಿ ಯನ್ನು ರಕ್ಷಿಸಲು 84ರ ಸಿಖ್ ನರಮೇಧವನ್ನು ಪ್ರತ್ಯಾಸ್ತ್ರವನ್ನಾಗಿ ಬಳಸುವುದರಲ್ಲಿ ನಿಸ್ಸೀಮರಾಗಿದ್ದರು. 2002ರಲ್ಲಿ ಸಂಸತ್ನಲ್ಲಿ ಪೋಟಾ ಬಗ್ಗೆ ನಡೆದ ಚರ್ಚೆ ಯಲ್ಲೂ ಜಾರ್ಜ್ ಫರ್ನಾಂಡಿಸರು ಸಮಾಜವಾದಿಯಾಗಿದ್ದಾಗ ಕಲಿತ ವಾಕ್ಚಾ ತುರ್ಯವನ್ನೆಲ್ಲಾ ಬಳಸಿಕೊಂಡು ಸಿಖ್ ನರಮೇಧದ ಮುಂದೆ ಗುಜರಾತ್ ನರಮೇಧ ಏನೂ ಅಲ್ಲವೆಂದು ವಾದಿಸಿದ್ದರು.
ಆದರೆ 84ರ ನರಮೇಧದ ಬಗ್ಗೆ ಸಂಘ ಪರಿವಾರದ ನಿಲುವು ಮತ್ತು ಪಾತ್ರವೇನಾಗಿತ್ತು ಎಂಬುದನ್ನು ಮಾತ್ರ ಈ ಜಾರ್ಜ್ ಮತ್ತು ಸಂಘಪರಿವಾರ ಎರಡೂ ಮುಚ್ಚಿಹಾಕುತ್ತಿವೆ. ವಾಸ್ತವವಾಗಿ 1984ರಲ್ಲಿ ಜಾರ್ಜ್ ಫರ್ನಾಂಡಿಸರು ಇನ್ನೂ ಸಂಘ ಪರಿವಾರದ ಸನಿಹ ಸುಳಿಯದೇ ಇದ್ದಾಗ ಪ್ರತೀಕ್ಷಾ ಎಂಬ ಹಿಂದಿ ವಾರಪತ್ರಿಕೆಯನ್ನು ಹೊರತರುತ್ತಿದ್ದರು. ಅದರ 1984ರ ನವಂಬರ್ 25ರ ಸಂಚಿಕೆಯಲ್ಲಿ ಸಿಖ್ ಹತ್ಯಾಕಾಂಡದಲ್ಲಿ ಆರೆಸ್ಸೆಸ್ನ ಪಾತ್ರದ ಬಗ್ಗೆ ಫರ್ನಾಂಡಿಸರು ‘Indira Congress-RSS collusion’ (ಇಂದಿರಾ ಕಾಂಗ್ರೆಸ್ ಮತ್ತು ಆರೆಸ್ಸೆಸ್ಗಳ ಒಳ ಒಪ್ಪಂದ) ಎಂಬ ಲೇಖನವನ್ನು ಬರೆದಿದ್ದರು. ಅಲ್ಲದೆ ಸಿಖ್ ಹತ್ಯಾಕಾಂಡದ ಬಗ್ಗೆ ಆರೆಸ್ಸೆಸ್ ನಿಲುವೇನು ಎಂದು ಆಗಿನ ಆರೆಸ್ಸೆಸ್ ಪ್ರಮುಖರಲ್ಲಿ ಒಬ್ಬರಾದ ನಾನಾ ದೇಶಮುಖ್ ಎಂಬುವರು ಗುರು ನಾನಕ್ ದಿವಸವಾದ ನವಂಬರ್ 8, 2004ರಂದು ಎಲ್ಲಾ ರಾಜಕೀಯ ಪಕ್ಷಗಳಿಗೂ ಕಳಿಸಿದ ಪತ್ರವೊಂದನ್ನು ಯಥಾವತ್ ಪ್ರಕಟಿಸಿದ್ದರು.
ಅಷ್ಟು ಮಾತ್ರವಲ್ಲ ಆರೆಸ್ಸೆಸ್ನ ಆ ಪತ್ರದ ಬಗ್ಗೆ ಫರ್ನಾಂಡಿಸರು ತಮ್ಮ ಸಂಪಾದಕೀಯದಲ್ಲಿ ಹೀಗೆ ಬರೆದುಕೊಂಡಿದ್ದರು:
“ಈ ಕೆಳಗಿನ ಪತ್ರವನ್ನು ಬರೆದಿರುವವರು ಆರೆಸ್ಸೆಸ್ಸಿನ ಪ್ರಮುಖ ಸಿದ್ಧಾಂತಕರ್ತರು ಮತ್ತು ನೀತಿ ನಿರ್ಣಯ ಮಾಡುವವರೂ ಆಗಿದ್ದಾರೆ. ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯಾದ ನಂತರ ಅವರು ಈ ದಾಖಲೆಯನ್ನು ಎಲ್ಲಾ ಪ್ರಮುಖ ರಾಜಕಾರಣಿಗಳಿಗೂ ವಿತರಿಸಿದರು. ಇದಕ್ಕೆ ಒಂದು ಐತಿಹಾಸಿಕ ಮಹತ್ವವಿರುವುದರಿಂದ ನಾವು ನಮ್ಮ ಪತ್ರಿಕಾ ನೀತಿಯನ್ನು ಉಲ್ಲಂಘಿಸಿ ಅದರ ಪೂರ್ಣ ಪಾಠವನ್ನು ಪ್ರಕಟಿಸುತ್ತಿದ್ದೇವೆ. ಈ ದಾಖಲೆಯು ಆರೆಸ್ಸೆಸ್ಸಿಗೂ ಮತ್ತು ಇಂದಿರಾ ಕಾಂಗ್ರೆಸ್ಸಿಗೂ ಕುದುರುತ್ತಿರುವ ಗೆಳೆತನದ ಬಗ್ಗೆಯೂ ಬೆಳಕು ಚೆಲ್ಲುತ್ತದೆ.”
“ಈ ಕೆಳಗಿನ ಪತ್ರವನ್ನು ಬರೆದಿರುವವರು ಆರೆಸ್ಸೆಸ್ಸಿನ ಪ್ರಮುಖ ಸಿದ್ಧಾಂತಕರ್ತರು ಮತ್ತು ನೀತಿ ನಿರ್ಣಯ ಮಾಡುವವರೂ ಆಗಿದ್ದಾರೆ. ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯಾದ ನಂತರ ಅವರು ಈ ದಾಖಲೆಯನ್ನು ಎಲ್ಲಾ ಪ್ರಮುಖ ರಾಜಕಾರಣಿಗಳಿಗೂ ವಿತರಿಸಿದರು. ಇದಕ್ಕೆ ಒಂದು ಐತಿಹಾಸಿಕ ಮಹತ್ವವಿರುವುದರಿಂದ ನಾವು ನಮ್ಮ ಪತ್ರಿಕಾ ನೀತಿಯನ್ನು ಉಲ್ಲಂಘಿಸಿ ಅದರ ಪೂರ್ಣ ಪಾಠವನ್ನು ಪ್ರಕಟಿಸುತ್ತಿದ್ದೇವೆ. ಈ ದಾಖಲೆಯು ಆರೆಸ್ಸೆಸ್ಸಿಗೂ ಮತ್ತು ಇಂದಿರಾ ಕಾಂಗ್ರೆಸ್ಸಿಗೂ ಕುದುರುತ್ತಿರುವ ಗೆಳೆತನದ ಬಗ್ಗೆಯೂ ಬೆಳಕು ಚೆಲ್ಲುತ್ತದೆ.”
ಜಾರ್ಜ್ ಫರ್ನಾಂಡಿಸ್
ಆದರೆ ಫರ್ನಾಂಡಿಸರಿಗೂ ಮತ್ತು ಆರೆಸ್ಸೆಸ್ಸಿಗೂ ಗೆಳೆತನ ಕುದುರಿದ ನಂತರ ಇದರ ಬಗ್ಗೆ ಮಾತನಾಡುವುದನ್ನೇ ಬಿಟ್ಟುಬಿಟ್ಟರು. ಈಗ ಮತ್ತೆ 1984ರ ಸಿಖ್ ನರಮೇಧ ಮತ್ತು 2002ರ ಗುಜರಾತ್ ಹತ್ಯಾಕಾಂಡಗಳನ್ನು ರಾಜಕೀಯ ಪಕ್ಷಗಳು ಅದರಲ್ಲೂ ವಿಶೇಷವಾಗಿ ಬಿಜೆಪಿ ಅಮಾನವೀಯವಾದ ಅವಕಾಶವಾದಿ ರಾಜಕಾರಣವಾದ ವಸ್ತುವನ್ನಾಗಿ ಮಾಡಿಕೊಳ್ಳುತ್ತಿರುವುದರಿಂದ ಈ ಮಹತ್ವದ ದಾಖಲೆಯ ಬಗ್ಗೆ ದೆಹಲಿ ವಿಶ್ವವಿದ್ಯಾಲಯದ ಫ್ರೋಫೆಸರ್ ಆಗಿರುವ ಶಂಸುಲ್ ಇಸ್ಲಾಂರವರು ಮತ್ತೊಮ್ಮೆ ಎಲ್ಲರ ಗಮನವನ್ನು ಸೆಳೆದಿದ್ದಾರೆ.
ನಾನಾ ದೇಶ್ ಮುಖ್
ನಾನಾ ದೇಶ್ಮುಖ್ರವರ ಆ ಸುದೀರ್ಘ ಪತ್ರದ ಪೂರ್ಣ ಪಾಠವನ್ನು ಇಲ್ಲಿ ಅಚ್ಚು ಮಾಡಲು ಸಾಧ್ಯವಿಲ್ಲವಾದ್ದರಿಂದ ಸಿಖ್ ನರಮೇಧದ ಬಗ್ಗೆ ಆರೆಸ್ಸೆಸ್ ನಿಲುವುಗಳನ್ನು ಬಯಲುಗೊಳಿಸುವ ಮುಖ್ಯಾಂಶಗಳನ್ನು ಮಾತ್ರ ಇಲ್ಲಿ ಉಲ್ಲೇಖಿಸಲಾಗಿದೆ:
1. ಸಿಖ್ಖರ ನರಮೇಧವನ್ನು ಮಾಡಿದವರು ಯಾರೋ ಕಲವು ಸಮಾಜ ವಿರೋಧಿ ಪುಂಡರಲ್ಲ. ಬದಲಿಗೆ ಅದು ಭಾರತದ ಹಿಂದೂಗಳಲ್ಲಿ ಉಂಟಾಗಿದ್ದ ಸಹಜ ಆಕ್ರೋಶದ ಅಭಿವ್ಯಕ್ತಿಯಾಗಿದೆ.
2. ಇಂದಿರಾ ಗಾಂಧಿಯವರನ್ನು ಕೊಂದ ಇಬ್ಬರು ಸಿಖ್ಖರು ಮತ್ತು ಇಡೀ ಸಿಖ್ ಸಮುದಾಯದ ನಡುವೆ ನಾನಾ ದೇಶಮುಖರು ಯಾವುದೇ ವ್ಯತ್ಯಾಸ ಕಾಣುವುದಿಲ್ಲ. ಅವರ ಪ್ರಕಾರ ಇಡೀ ಸಿಖ್ ಸಮುದಾಯದ ಆದೇಶದಂತೆಯೇ ಅವರಿಬ್ಬರೂ ಇಂದಿರಾರವರನ್ನು ಹತ್ಯೆ ಮಾಡಿದ್ದಾರೆ.
3. ‘ಆಪರೇಷನ್ ಬ್ಲೂ ಸ್ಟಾರ್’ ಅತ್ಯಂತ ರಾಷ್ಟ್ರಭಕ್ತಿಯಿಂದ ಕೂಡಿದ ಕಾರ್ಯಾಚರಣೆಯಾಗಿದೆ. ಅದನ್ನು ವಿರೋಧಿಸುವುದು ರಾಷ್ಟ್ರದ್ರೋಹ.
4. ಸಿಖ್ಖರು ತಮ್ಮ ಮೇಲೆ ರಾಷ್ಟ್ರೀಯವಾದಿ ಹಿಂದೂಗಳು ನಡೆಸುತ್ತಿರುವ ದೌರ್ಜನ್ಯಗಳನ್ನು ಸಹಿಸಬೇಕೆ ವಿನಃ ಪ್ರತಿಭಟಿಸಬಾರದು.
5. ಇಂದಿರಾ ಗಾಂಧಿಯವರು ರಾಷ್ಟ್ರದ ದೊಡ್ಡ ನಾಯಕಿಯಾಗಿದ್ದು ಅಂಥವರನ್ನು ಕೊಂದಾಗ ಇಂಥ ಹತ್ಯಾಕಾಂಡಗಳು ಸಂಭವಿಸುವುದು ಸಹಜ.
6. “ದೊಡ್ಡ ಮರವೊಂದು ಉರುಳಿದಾಗ ಸುತ್ತಮುತ್ತಲಲ್ಲಿ ಕಂಪನ ಉಂಟಾಗುವುದು ಸಹಜ” ಎಂಬ ರಾಜೀವ್ ಗಾಂಧಿ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ.
ಸಿಖ್ ನರಮೇಧವಾಗಿ 25 ವರ್ಷಗಳಾಯಿತು. ಗುಜರಾತ್ ನರಮೇಧವಾಗಿ 7 ವರ್ಷಗಳಾಯಿತು. ಹಳೆಯ ಗಾಯಗಳನ್ನು ಕೆರೆದುಕೊಳ್ಳುವ ಬದಲಿಗೆ ಎಲ್ಲವನ್ನೂ ಮರೆತು ಭವಿಷ್ಯದ ಕಡೆ ನೋಡಬೇಕಲ್ಲವೆ ಎಂದು ಸಂಘಪರಿವಾರದ ಕೆಲವು ಜಾಣ ರಾಜಕಾರಣಿಗಳು ಪ್ರಶ್ನಿಸುತ್ತಾರೆ. ಆದರೆ ಇತಿಹಾಸವನ್ನು ಮರೆತವರು ವರ್ತಮಾನವನ್ನೂ ಅರಿತುಕೊಳ್ಳಲಾರರು ಮತ್ತು ಭವಿಷ್ಯವನ್ನೂ ನಿರ್ಮಿಸಲಾರರು ಎಂಬುದು ಇತಿಹಾಸದಲ್ಲಿ ಪದೇ ಪದೇ ರುಜುವಾತಾಗಿದೆ. “ಸಿಖ್ ನರಮೇಧ ನಡೆದು 25 ವರ್ಷಗಳಾದ ಮೇಲೆ ಈಗೇಕೆ ಅದನ್ನು ಕೆದಕುತ್ತಿದ್ದೀರಿ?” ಎಂದು ಸಿಖ್ ಹತ್ಯಾಕಾಂಡದ ಬಲಿ ಪಶುಗಳಾದವರ ಪರವಾಗಿ ವಾದಿಸಿದ ವಕೀಲರಾದ ಹರ್ವಿಂದರ್ ಸಿಂಗ್ ಫೂಲ್ಕ ಅವರಿಗೆ ಪತ್ರಕರ್ತರೊಬ್ಬರು ಪ್ರಶ್ನಿಸಿದರಂತೆ. ಅದಕ್ಕೆ ಅವರು ಕೊಟ್ಟ ದಾರ್ಶನಿಕ ಉತ್ತರ ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರವಾಗುತ್ತದೆ:
“25 ವರ್ಷಗಳ ಕೆಳಗೆ ನಡೆದದ್ದರ ಬಗ್ಗೆ ಈಗೇಕೆ ಮಾತನಾಡುತ್ತಿದ್ದೀಯಾ ಎಂದು ನನ್ನನ್ನು ಕೇಳಿದವರಿಗೆ 1984ರ ಹತ್ಯಾಕಾಂಡದ ಅರೋಪಿಗಳಿಗೆ ಶಿಕ್ಷೆ ಆಗಿದ್ದರೆ 2002ರ ಗುಜರಾತ್ ಹತ್ಯಾಕಾಂಡ ಸಂಭವಿಸುತ್ತಿರಲಿಲ್ಲ ಎಂದು ನಾನು ಉತ್ತರಿಸುತ್ತೇನೆ. ನೀವು 1984 ಮತ್ತು ಗುಜರಾತನ್ನು ಮರೆತುಬಿಟ್ಟರೆ ಮತ್ತೊಮ್ಮೆ ಅದೇ ರೀತಿಯ ಹತ್ಯಾಕಾಂಡಕ್ಕೆ ಸಿದ್ಧವಾಗಬೇಕಾಗುತ್ತದೆ. ಅಪರಾಧ ನ್ಯಾಯಸಂಹಿತೆಯ ಮೂಲ ಸಿದ್ಧಾಂತವೇ ಶಿಕ್ಷೆ ಏಕೆಂದರೆ ಅದು ಭಾವೀ ಅಪರಾಧಿಗಳು ಅಪರಾಧವನ್ನು ಮಾಡದಂತೆ ಎಚ್ಚರಿಕೆ ನೀಡುತ್ತದೆ. ಆದರೆ ಇಂಥ ಹೀನಾಯ ಅಪರಾಧವನ್ನು ಎಸಗಿದ ರಾಜಕಾರಣಿಗಳು ತಾವು ಕಾನೂನಿಗಿಂತ ದೊಡ್ಡವರು ಎಂಬಂತೆ ಯಾವುದೇ ಶಿಕ್ಷೆ ಇಲ್ಲದೆ ರಾಜಾರೋಷವಾಗಿ ಬೀದಿಗಳಲ್ಲಿ ನಡೆದಾಡುತ್ತಿದ್ದರೆ, ಮುಂದೆಯೂ ಅವರು ಓಟಿಗಾಗಿ ಮತ್ತು ಕುರ್ಚಿಗಾಗಿ ಇಂಥ ಹತ್ಯಾಕಾಂಡಗಳನ್ನು ನಡೆಸುತ್ತಲೇ ಹೋಗುತ್ತಾರೆ. ಇದು ಆಗ ಬಾರದು. ಇದರಿಂದ ಕಾನೂನಿನ ಆಡಳಿತವಾಗಲೀ ಪ್ರಜಾತಂತ್ರ ವಾಗಲೀ ಉಳಿಯುವುದಿಲ್ಲ.”
ನಾನಾ ದೇಶಮುಖರು ಮೇಲಿನ ಪತ್ರವನ್ನು ಬರೆದದ್ದು 1984ರ ನವಂಬರ್ 8ರ ಗುರುನಾನಕ್ ದಿನದಂದು. ದೆಹಲಿಯಲ್ಲಿ ಸಿಖ್ಖರನ್ನು ಅತಿ ಹೆಚ್ಚು ಸಂಖ್ಯೆಯಲ್ಲಿ ಹತ್ಯೆ ಮಾಡಿದ್ದು 1984ರ ನವಂಬರ್ 5-8ರ ನಡುವೆ. ಅಂದರೆ ಸಿಖ್ಖರ ಹತ್ಯಾಕಾಂಡ ಬೀದಿಗಳಲ್ಲಿ ನಡೆಯುತ್ತಿರುವಾಗ ಅದನ್ನು ನಿಲ್ಲಿಸಬೇಕೆಂಬ ಯಾವ ಒತ್ತಾಯವನ್ನು ಹಾಕದೆ ಅದನ್ನು ‘ಆಕ್ರೋಶ ಗೊಂಡ ಹಿಂದೂಗಳ ಸಹಜ ವರ್ತನೆ’ ಎಂದು ಸಮರ್ಥಿಸಿಕೊಂಡ ಆರೆಸ್ಸೆಸ್ನ ಪಾತ್ರ ಈ ಹತ್ಯಾಕಾಂಡದಲ್ಲಿ ಏನಿತ್ತೆಂಬುದನ್ನು ಕೂಲಂಕಷ ತನಿಖೆಗೆ ಒಳಪಡಿಸಲೇ ಬೇಕಾಗಿದೆ. ಅಲ್ಲದೆ ಬಿಜೆಪಿ ಮತ್ತು ಸಂಘ ಪರಿವಾರ ಸಿಖ್ ಹತ್ಯಾಕಾಂಡವನ್ನು ಗುಜರಾತ್ ನರಮೇಧಕ್ಕೆ ಗುರಾಣಿಯಾಗಿ ಬಳಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಸಿಖ್ ನರಮೇಧದಲ್ಲಿ ಆರೆಸ್ಸೆಸ್ನ ಪಾತ್ರವೇನೆಂಬುದನ್ನು ಕೇವಲ ಸಿಖ್ ಸಮುದಾಯವಲ್ಲ ಇಡೀ ಭಾರತದ ಜನತೆ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ.
ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ಎಚ್ಆರ್ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...
ಕರ್ತವ್ಯದಲ್ಲಿರುವಾಗ ಸಬ್-ಇನ್ಸ್ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ.
ಮೇಲಧಿಕಾರಿಗಳು...
ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...
ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ.
ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...
ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....
ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...
ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...
ಜೆಫ್ರಿ ಎಪ್ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...
ಎಕ್ಸ್ಪ್ರೆಸ್ ರೈಲಿನ ಕೋಚ್ನ ಪವರ್ ಸಾಕೆಟ್ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...
ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್ಸ್ಟೆಬಲ್ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ.
ಆದರೆ ಯಾವುದೇ ಪ್ರಕರಣವೂ...