Homeಕರ್ನಾಟಕಪ್ರೀತಿ, ಕಾಳಜಿ, ಹೊಣೆಗಾರಿಕೆಯ ‘ಸಂಪ್ರೀತಿ ಕಲಾ ಬಳಗ'ದ ಶಿಕ್ಷಕಿ-ಶಿಕ್ಷಕರಿಗೊಂದು ಸಲಾಂ

ಪ್ರೀತಿ, ಕಾಳಜಿ, ಹೊಣೆಗಾರಿಕೆಯ ‘ಸಂಪ್ರೀತಿ ಕಲಾ ಬಳಗ’ದ ಶಿಕ್ಷಕಿ-ಶಿಕ್ಷಕರಿಗೊಂದು ಸಲಾಂ

ಪ್ರತಿ ಜಿಲ್ಲೆ ಮತ್ತು ತಾಲೂಕಿನಲ್ಲಿ ಯುವ ಶಿಕ್ಷಕ ಶಿಕ್ಷಕಿಯರು ಜಡತೆಯನ್ನು ಕೊಡವಿ ಕ್ರಿಯಾಶೀಲವಾದರೆ ಸರಕಾರಿ ಶಾಲೆಗಳನ್ನು ಅತ್ತುತ್ತಮ ಮಾದರಿಗಳನ್ನಾಗಿ ರೂಪಿಸಬಹುದು ಎನ್ನುವುದನ್ನು ಈ ತಂಡ ತೋರಿಸಿಕೊಟ್ಟಿದೆ.

- Advertisement -
- Advertisement -

ಎಲೆಮರೆ-44

-ಅರುಣ್ ಜೋಳದಕೂಡ್ಲಿಗಿ

ಜನವರಿ 9, 10, 2020 ರಂದು ಆನೆಗುಂದಿ ಉತ್ಸವವಿತ್ತು. ಅಂದು ನಾನು ಕುಮಾರರಾಮನ ಬಗ್ಗೆ ವಿಷಯ ಮಂಡಿಸಿ, ಹಂಪಿಗೆ ಹೋಗಲೆಂದು ಬೈಕ್ ಏರಿದೆ. ಎದುರಿಗೆ ಹಸಿರು ನೀಲಿಯ ಟೀಶರ್ಟ್ ತೊಟ್ಟು ‘ಸರಕಾರಿ ಶಾಲೆ ನಮ್ಮ ಹೆಮ್ಮೆ, ನಮ್ಮ ಶಾಲೆ ನಮಗೆ ಹೆಮ್ಮೆ ಎಂದು ಸ್ಲೋಗನ್ ಬರೆದುಕೊಂಡ ಎಂಟತ್ತು ಜನರ ತಂಡವೊಂದು ಬೈಕ್ ಏರಿ ನಿಂತಿದ್ದರು. ಅವರು ಉತ್ಸವದ ವೇದಿಕೆಯಲ್ಲಿ ರೈತಗೀತೆ ನಾಡಗೀತೆ ಹಾಡಿ ಬಂದಿದ್ದರು. ನಾನು ಕುತೂಹಲದಿಂದ ‘ಯಾರು ನೀವು? ಏನಿದು ಕ್ಯಾಂಪೇನ್ ಎಂದು ಕೇಳಿದೆ. ಅದರಲ್ಲೊಬ್ಬರು ‘ನಾವು ಸರಕಾರಿ ಶಾಲೆಗಳ ಶಿಕ್ಷಕರು ಸರ್, ಉತ್ಸವದಲ್ಲಿ ಒಂದು ಮಳಿಗೆ ಹಾಕಿದಿವಿ, ಬಂದು ನೋಡಿ ಎಲ್ಲಾ ಅರ್ಥ ಆಗುತ್ತೆ ಎಂದರು. ಅಷ್ಟು ಮಾತನಾಡುವ ಹೊತ್ತಿಗೆ ನನಗೆ ಪರಿಚಯವಿದ್ದ ಕವಿ ಸೋಮು ಕುದ್ರಿಹಾಳ ಬಂದರು. ಅವರೂ ಈ ತಂಡದ ಒಬ್ಬ ಸದಸ್ಯರು. ನಾನು ಅವರ ಜೊತೆಗೂಡಿ ಆನೆಗುಂದಿ ಉತ್ಸವದ ಮುಖ್ಯ ವೇದಿಕೆಯ ಬಳಿಗೆ ಹೋದೆ. ಅಲ್ಲೊಂದು ಅಪರೂಪದ ‘ಸರಕಾರಿ ಶಾಲೆ ನಮ್ಮ ಹೆಮ್ಮೆ ಎನ್ನುವ ಮಳಿಗೆ ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು. ತಾಲೂಕಿನ ಅತ್ಯುತ್ತಮ ಸರಕಾರಿ ಶಾಲೆಗಳ ಪರಿಚಯವಿತ್ತು. ಸರಕಾರಿ ಶಾಲೆಗಳ ವಿನೂತನ ಪ್ರಯೋಗಗಳ ಪ್ರದರ್ಶನವಿತ್ತು. ಈ ಒಂದೊಂದನ್ನು ರಸವತ್ತಾಗಿ ಅತ್ಯುತ್ಸಾಹದಲ್ಲಿ ವಿವರಿಸುವ ಶಿಕ್ಷಕ ಶಿಕ್ಷಕಿಯರ ಬಳಗವಿತ್ತು. ಈ ಬಳಗವೇ ಗಂಗಾವತಿಯ ‘ಸಂಪ್ರೀತಿ ಶಿಕ್ಷಕರ ಕಲಾ ಬಳಗ’.

ಈ ಮಳಿಗೆ ಹಾಕುವ ಮುನ್ನ ಹದಿನೈದು ದಿನಗಳ ಕಾಲ ಈ ಸಂಪ್ರೀತಿ ಬಳಗ ಗಂಗಾವತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸೋಮಶೇಖರಗೌಡ ಅವರ ಮಾರ್ಗದರ್ಶನದಲ್ಲಿ ತಾಲ್ಲೂಕಿನ ಹದಿನೈದಕ್ಕೂ ಹೆಚ್ಚು ಅತ್ಯುತ್ತಮ ಶಾಲೆಗಳಿಗೆ ಭೇಟಿ ನೀಡಿತ್ತು. ‘ಸರಕಾರಿ ಶಾಲೆಗಳ ಸಬಲೀಕರಣದತ್ತ ನಮ್ಮ ಚಿತ್ತ’ ಎಂಬ ಆಶಯದಲ್ಲಿ ಶಾಲೆಯ ಮಕ್ಕಳು, ಪಾಲಕರು, ಶಿಕ್ಷಕರೊಂದಿಗೆ ‘ಸರಕಾರಿ ಶಾಲೆ ನಮಗೇಕೆ ಬೇಕು?’ ಎಂಬ ಮಾತುಕತೆ ನಡೆಸಿ ಶಾಲೆಯನ್ನು ಅಭಿವೃದ್ಧಿಪಡಿಸಿದ ಕಾರಣ, ಪ್ರೇರಣೆ, ಮುಂದಿನ ಕನಸುಗಳ ಮಾಹಿತಿ ಸಂಗ್ರಹಿಸಿದ್ದರು. ಈ ಚಟುವಟಿಕೆಗಳ ಫೋಟೋ ಮತ್ತು ವಿಡಿಯೋ ಚಿತ್ರೀಕರಣ ಮಾಡಿದ್ದರು. ಈ ಎಲ್ಲವೂ ಮಳಿಗೆಯಲ್ಲಿ ಪ್ರದರ್ಶನಗೊಂಡಿದ್ದವು. ‘ಇಂತಹದ್ದೊಂದು ಪ್ರಯತ್ನ ಕರ್ನಾಟಕದಲ್ಲಿಯೇ ಮೊದಲನೆಯದು, ಶಿಕ್ಷಣ ಇಲಾಖೆ ಮಾದರಿಯಾಗಿ ಪರಿಗಣಿಸಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೇಳುತ್ತಾರೆ.

ನಾನು ಈ ಮಳಿಗೆಯಲ್ಲಿರುವ ಶಿಕ್ಷಕ ಶಿಕ್ಷಕಿಯರನ್ನು ಮಾತನಾಡಿಸಿದಾಗ ನನ್ನ ಗಮನಸೆಳೆದದ್ದು ಈ ಎಲ್ಲರ ಕಣ್ಣುಗಳಲ್ಲಿ ಸರಕಾರಿ ಶಾಲೆಗಳ ಬಗೆಗಿನ ಪ್ರೀತಿ, ಕಾಳಜಿ ಎದ್ದು ಕಾಣುತ್ತಿತ್ತು. ಇದರ ಫಲವಾಗಿಯೇ ಸರಕಾರಿ ಶಾಲೆಗಳನ್ನು ಸದೃಢಗೊಳಿಸಬೇಕು, ಎಲ್ಲರೂ ಮೆಚ್ಚುವಂತೆ ಮಾಡಬೇಕು ಎನ್ನುವ ಹೊಣೆಗಾರಿಕೆ ಇವರಲ್ಲಿ ಕುಡಿಯೊಡೆದಿರಬೇಕು. ಈ ಹೊಣೆಗಾರಿಕೆಯ ಫಲವಾಗಿಯೇ ಸಂಪ್ರೀತಿ ಕಲಾ ಬಳಗ ತಮ್ಮ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸಿಕೊಂಡರು.

2019 ರ ಸೆಪ್ಟಂಬರ್ ತಿಂಗಳಲ್ಲಿ ಗಂಗಾವತಿಯಲ್ಲಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಂದು ಆಪ್ತ ಹದಿನೈದು ಶಿಕ್ಷಕಿ ಶಿಕ್ಷಕರ ‘ಸಂಪ್ರೀತಿ ಕಲಾ ಬಳಗ’ ಶಿಕ್ಷಣ ಸಚಿವರಾದ ಎಸ್.ಸುರೇಶ್ ಕುಮಾರ್ ಅವರ ಉಪಸ್ಥಿತಿಯಲ್ಲಿ ಆರಂಭವಾಗುತ್ತದೆ. ಅಂದು ಈ ಬಳಗ ರೈತ ಗೀತೆಯನ್ನು ಹಾಡಿ ಚಾಲನೆಗೊಳ್ಳುತ್ತದೆ. ಆ ದಿನ ಬಳಗದ ಎಲ್ಲರೂ ಬಿಳಿ ಕಚ್ಚೆ, ಹಸಿರು ಪೈಜಾಮು, ತಲೆಗೆ ಕೆಂಪು ಮುಂಡಾಸು, ಹಚ್ಚಹಸಿರ ಶಲ್ಲೇವಿನಿಂದ ಗಮನಸೆಳೆದಿತ್ತು. ಶಿಕ್ಷಕರ ಬಳಗವೊಂದು ಚಾಲನೆಗೆ ರೈತ ಗೀತೆ ಹಸಿರು ಉಡುಪಿನ ಸಾಂಕೇತಿಕತೆ ಬಳಸಿದ್ದು ವಿಶೇಷವಾಗಿತ್ತು. ಇದು ಸರಕಾರಿ ಶಾಲೆ ಮತ್ತು ರೈತ ಸಮುದಾಯದ ನಂಟಿನ ಬೆಸುಗೆಯಂತೆಯೂ ಕಂಡಿತ್ತು. ಈ ತಂಡ ಆರಂಭಕ್ಕೆ ಕಾರಟಗಿ, ಕೊಪ್ಪಳ, ಆನೆಗುಂದಿ ಮೊದಲಾದ ಕಡೆಗಳಲ್ಲಿ ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳಲ್ಲಿ ರೈತಗೀತೆ ಮತ್ತು ನಾಡಗೀತೆಗಳನ್ನು ಹಾಡುವುದರಲ್ಲಿ ಗಮನಸೆಳೆಯಿತು. ನಂತರ ಇದರ ಮುಂದುವರಿಕೆಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಶಾಲಾ ಶೈಕ್ಷಣಿಕ ವಾಸ್ತವ್ಯ ಎನ್ನುವ ವಿನೂತನ ಕಾರ್ಯಕ್ರಮದಲ್ಲಿ ಈ ತಂಡ ‘ಕತ್ತಲನ್ನು ದಾಟಿತು ಬೆಳಕು ಎಂಬ ನಾಟಕ ಪ್ರದರ್ಶಿಸಿತು. ಈ ನಾಟಕದಲ್ಲಿ ಹಾಡುಕರ್ನಾಟಕ ಟಿವಿ ರಿಯಾಲಿಟಿ ಶೋಗೆ ಆಯ್ಕೆಯಾಗಿದ್ದ ಈ ತಂಡದ ಸದಸ್ಯ ಮೆಹಬೂಬ್ ಕಿಲ್ಲೇದಾರ್ ಅದ್ಭುತವಾಗಿ ಹಾಡಿ ಜನಮನಸೆಳೆದಿದ್ದರು. ಹೀಗೆ ತಂಡದ ಹಾಡಿಕೆ, ನಾಟಕಕ್ಕೆ ವಿಸ್ತರಿಸಿಕೊಂಡಿತು.

ಈ ತಂಡದ ಟೀಂ ಸ್ಪಿರಿಟ್ ದೃಢವಾದದ್ದು. ‘ಸರಕಾರಿ ಶಾಲೆಗಳ ಸಬಲೀಕರಣದತ್ತ ನಮ್ಮ ಚಿತ್ತ ಎನ್ನುವ ಆಶಯದೊಂದಿಗೆ ಶಾಲೆಗಳನ್ನು ಚಿತ್ರಕಲೆಗಳಿಂದ ಆಕರ್ಷಕಗೊಳಿಸಿದ್ದು ವಿಶೇಷ. ಕೆಲಸದ ಮಧ್ಯೆ ಬಿಡುವು ಎನ್ನುವಂತಿರುವ ಭಾನುವಾರ ಮತ್ತು ಇತರೆ ಸರಕಾರಿ ರಜೆಗಳನ್ನು ಈ ಟೀಂ ಶಾಲೆಗಳ ಪೇಂಟಿಂಗ್ ಮತ್ತು ಚಿತ್ರಕಲೆಗಾಗಿ ಬಳಸಿಕೊಂಡರು. ಮೊದಲು ಪ್ರಯೋಗವಾಗಿ ಗಂಗಾವತಿಗೆ ಸಮೀಪವಿರುವ ಕುಂಟೋಜಿ ಕ್ಯಾಂಪ್ ಶಾಲೆಯನ್ನು ಸತತ ಒಂಭತ್ತು ಭಾನುವಾರಗಳಂದು ಚಿತ್ತಾಕರ್ಷಕಗೊಳಿಸಿದರು. ನಂತರದಲ್ಲಿ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕಬ್ಬಿನಕಣವಿ, ಯಲಬುರ್ಗಾ ತಾಲೂಕು ವಡ್ಡರಕಲ್ಲು ಒಳಗೊಂಡಂತೆ ಗಂಗಾವತಿ ತಾಲೂಕಿನ ಈ ತನಕ ಹನ್ನೆರಡು ಶಾಲೆಗಳನ್ನು ಹೀಗೆ ಚಿತ್ತಾಕರ್ಶಕಗೊಳಿಸಿ ಎಲ್ಲರ ಕಣ್ಮನ ಸೆಳೆಯುವಂತೆ ಮಾಡಿದ್ದಾರೆ. ಆಹ್ವಾನಿಸಿದ ಶಾಲೆಗಳಲ್ಲಿ ಆಯಾ ಶಾಲೆಯ ಶಿಕ್ಷಕರು ಬಣ್ಣವನ್ನು ತಂದುಕೊಡುತ್ತಾರೆ. ಊರಿನ ಹಿರಿಯ ವಿದ್ಯಾರ್ಥಿಗಳು ಜೊತೆಗೂಡುತ್ತಾರೆ. ಆಯಾ ಶಾಲಾ ಶಿಕ್ಷಕರು ಇಷ್ಟಪಟ್ಟಂತೆ ಚಿತ್ರಗಳನ್ನು ಬಿಡಿಸಲಾಗುತ್ತದೆ. ಶಿವರಾತ್ರಿ ಸಂಕ್ರಾಂತಿಯಂತಹ ಹಬ್ಬಗಳನ್ನೂ ಶಾಲೆಯಲ್ಲಿ ಚಿತ್ರಕಲೆ ಬಿಡಿಸುವ ಮೂಲಕ ಈ ಟೀಂ ಆಚರಿಸಿದೆ. ಈಗ ಚಿತ್ರಕಲೆಯ ಜತೆ ಆಯಾ ಶಾಲೆಯಲ್ಲಿ ಸಾಂಕೇತಿಕವಾಗಿ ಗಿಡನೆಡುವ ಕಾರ್ಯಕ್ರಮವನ್ನೂ ಮಾಡುತ್ತಿದೆ. ವಿಶೇಷವೆಂದರೆ ಈ ತಂಡದ ಯಾವ ಶಿಕ್ಷಕರೂ ಚಿತ್ರಕಲಾ ಶಿಕ್ಷಕರಲ್ಲ, ಇವರೆಲ್ಲಾ ಹವ್ಯಾಸಿ ಕಲಾವಿದರು.

ಈ ಸಂಪ್ರೀತಿಯ ಬಳಗದಲ್ಲಿ ನಾಲ್ಕು ಸಂಗಾತಿ ಜೋಡಿಗಳಿವೆ. ರಂಗನಾಥ ಕುಲಕರ್ಣಿ, ಆರಾಳ ಮತ್ತು ಶ್ವೇತಾ ಕುಲಕರ್ಣಿ, ವೆಂಕಟಗಿರಿ. ಸೋಮು ಕುದ್ರಿಹಾಳ, ಲಕ್ಷ್ಮೀಕ್ಯಾಂಪ್ ಕುಂಟೋಜಿ ಮತ್ತು ರೇಖಾ.ಜೆ.ಎಸ್, ಗುಂಡೂರು. ಯೋಗೀಶ್ ಎನ್, ಹಣವಾಳಕ್ಯಾಂಪ್ ಮತ್ತು ಇಂದು ವೈ ಎಂ, ಮರಳಿ ಬಸವಣ್ಣ ಕ್ಯಾಂಪ್. ರಮೇಶ್ ಬಾಳಿಕಾಯಿ, ವಡ್ಡರಹಟ್ಟಿ ಕ್ಯಾಂಪ್, ಮತ್ತು ಅನ್ನಪೂರ್ಣ ಚೌಹಾಣ್ ಉಪ್ಪಿನಮಾಳಿ ಕ್ಯಾಂಪ್ ಗಂಗಾವತಿ. ಉಳಿದಂತೆ ಮಧುಕುಮಾರ್, ಯರಡೋಣ, ಶಂಭುಲಿಂಗಯ್ಯ, ಶ್ರೀರಾಮನಗರ, ಸುರೇಶ್.ಜಿ.ಎಸ್, ಭಟ್ಟರ ನರಸಾಪುರ, ಷಡಕ್ಷರಿ ಕರ್ಕಿಹಳ್ಳಿ, ವಿವೇಕ ಭಾರತಿ ಶಾಲೆ ಗಂಗಾವತಿ, ಮಂಜುನಾಥ್ ತಾವರಗಿ, ಆನೆಗುಂದಿ, ಪರಶುರಾಮ್ ಗಡ್ಡಿ, ಈಳಿಗನೂರು, ಮೆಹಬೂಬ್ ಕಿಲ್ಲೇದಾರ, ಕಾರಟಗಿ. ಇಲ್ಲಿನ ನಾಲ್ಕು ಜೋಡಿಗಳ ಪ್ರೀತಿಯ ಬೆಸುಗೆಯೂ ಈ ಸಂಪ್ರೀತಿಯಲ್ಲಿ ಬೆಸೆದಿದೆ. ಜೊತೆಗೆ ಈ ಎಲ್ಲರೂ ‘ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ ಎನ್ನುವ ತತ್ವವನ್ನು ಪಾಲಿಸಿದ ಕಾರಣ ಈ ಬಳಗವನ್ನು ‘ಪ್ರೀತಿ ‘ಸ್ನೇಹದ ಒತ್ತಾಸೆ ಕಟ್ಟಿಹಾಕಿದೆ.

ಈ ತಂಡದ ಬೆನ್ನಿಗೆ ನಿಂತವರು ಗಂಗಾವತಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ. ಇವರ ಪ್ರೋತ್ಸಾಹ ಈ ಬಳಗದ ಉತ್ಸಾಹವನ್ನು ಹೆಚ್ಚಿಸಿದೆ. ಈ ಬಳಗದ ಶಿಕ್ಷಕಿ ಶಿಕ್ಷಕರ ಯೌವನದ ಚೈತನ್ಯ ಹೊಸ ಆಲೋಚನೆಗೆ ಪ್ರೇರೇಪಿಸಿದೆ. ಹೀಗೆ ಪ್ರತಿ ಜಿಲ್ಲೆ ಮತ್ತು ತಾಲೂಕಿನಲ್ಲಿ ಯುವ ಶಿಕ್ಷಕ ಶಿಕ್ಷಕಿಯರು ಜಡತೆಯನ್ನು ಕೊಡವಿ ಕ್ರಿಯಾಶೀಲವಾದರೆ ಸರಕಾರಿ ಶಾಲೆಗಳನ್ನು ಅತ್ತುತ್ತಮ ಮಾದರಿಗಳನ್ನಾಗಿ ರೂಪಿಸಬಹುದು ಎನ್ನುವುದನ್ನು ಈ ತಂಡ ತೋರಿಸಿಕೊಟ್ಟಿದೆ. ಈ ತಂಡದ ಪ್ರೀತಿ ಸ್ನೇಹ ಉತ್ಸಾಹ ಮತ್ತಷ್ಟು ಗಟ್ಟಿಯಾಗಲಿ ಎಂದು ಪತ್ರಿಕೆ ಹಾರೈಸುತ್ತದೆ.


ಇದನ್ನೂ ಓದಿ: ಎಲೆಮರೆ -39: ಊರನ್ನೇ ರಂಗಭೂಮಿ ಮಾಡಿದ ಶಿಕ್ಷಕ ಅಶೋಕ ತೋಟ್ನಳ್ಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...