Homeಕರ್ನಾಟಕಪ್ರೀತಿ, ಕಾಳಜಿ, ಹೊಣೆಗಾರಿಕೆಯ ‘ಸಂಪ್ರೀತಿ ಕಲಾ ಬಳಗ'ದ ಶಿಕ್ಷಕಿ-ಶಿಕ್ಷಕರಿಗೊಂದು ಸಲಾಂ

ಪ್ರೀತಿ, ಕಾಳಜಿ, ಹೊಣೆಗಾರಿಕೆಯ ‘ಸಂಪ್ರೀತಿ ಕಲಾ ಬಳಗ’ದ ಶಿಕ್ಷಕಿ-ಶಿಕ್ಷಕರಿಗೊಂದು ಸಲಾಂ

ಪ್ರತಿ ಜಿಲ್ಲೆ ಮತ್ತು ತಾಲೂಕಿನಲ್ಲಿ ಯುವ ಶಿಕ್ಷಕ ಶಿಕ್ಷಕಿಯರು ಜಡತೆಯನ್ನು ಕೊಡವಿ ಕ್ರಿಯಾಶೀಲವಾದರೆ ಸರಕಾರಿ ಶಾಲೆಗಳನ್ನು ಅತ್ತುತ್ತಮ ಮಾದರಿಗಳನ್ನಾಗಿ ರೂಪಿಸಬಹುದು ಎನ್ನುವುದನ್ನು ಈ ತಂಡ ತೋರಿಸಿಕೊಟ್ಟಿದೆ.

- Advertisement -
- Advertisement -

ಎಲೆಮರೆ-44

-ಅರುಣ್ ಜೋಳದಕೂಡ್ಲಿಗಿ

ಜನವರಿ 9, 10, 2020 ರಂದು ಆನೆಗುಂದಿ ಉತ್ಸವವಿತ್ತು. ಅಂದು ನಾನು ಕುಮಾರರಾಮನ ಬಗ್ಗೆ ವಿಷಯ ಮಂಡಿಸಿ, ಹಂಪಿಗೆ ಹೋಗಲೆಂದು ಬೈಕ್ ಏರಿದೆ. ಎದುರಿಗೆ ಹಸಿರು ನೀಲಿಯ ಟೀಶರ್ಟ್ ತೊಟ್ಟು ‘ಸರಕಾರಿ ಶಾಲೆ ನಮ್ಮ ಹೆಮ್ಮೆ, ನಮ್ಮ ಶಾಲೆ ನಮಗೆ ಹೆಮ್ಮೆ ಎಂದು ಸ್ಲೋಗನ್ ಬರೆದುಕೊಂಡ ಎಂಟತ್ತು ಜನರ ತಂಡವೊಂದು ಬೈಕ್ ಏರಿ ನಿಂತಿದ್ದರು. ಅವರು ಉತ್ಸವದ ವೇದಿಕೆಯಲ್ಲಿ ರೈತಗೀತೆ ನಾಡಗೀತೆ ಹಾಡಿ ಬಂದಿದ್ದರು. ನಾನು ಕುತೂಹಲದಿಂದ ‘ಯಾರು ನೀವು? ಏನಿದು ಕ್ಯಾಂಪೇನ್ ಎಂದು ಕೇಳಿದೆ. ಅದರಲ್ಲೊಬ್ಬರು ‘ನಾವು ಸರಕಾರಿ ಶಾಲೆಗಳ ಶಿಕ್ಷಕರು ಸರ್, ಉತ್ಸವದಲ್ಲಿ ಒಂದು ಮಳಿಗೆ ಹಾಕಿದಿವಿ, ಬಂದು ನೋಡಿ ಎಲ್ಲಾ ಅರ್ಥ ಆಗುತ್ತೆ ಎಂದರು. ಅಷ್ಟು ಮಾತನಾಡುವ ಹೊತ್ತಿಗೆ ನನಗೆ ಪರಿಚಯವಿದ್ದ ಕವಿ ಸೋಮು ಕುದ್ರಿಹಾಳ ಬಂದರು. ಅವರೂ ಈ ತಂಡದ ಒಬ್ಬ ಸದಸ್ಯರು. ನಾನು ಅವರ ಜೊತೆಗೂಡಿ ಆನೆಗುಂದಿ ಉತ್ಸವದ ಮುಖ್ಯ ವೇದಿಕೆಯ ಬಳಿಗೆ ಹೋದೆ. ಅಲ್ಲೊಂದು ಅಪರೂಪದ ‘ಸರಕಾರಿ ಶಾಲೆ ನಮ್ಮ ಹೆಮ್ಮೆ ಎನ್ನುವ ಮಳಿಗೆ ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು. ತಾಲೂಕಿನ ಅತ್ಯುತ್ತಮ ಸರಕಾರಿ ಶಾಲೆಗಳ ಪರಿಚಯವಿತ್ತು. ಸರಕಾರಿ ಶಾಲೆಗಳ ವಿನೂತನ ಪ್ರಯೋಗಗಳ ಪ್ರದರ್ಶನವಿತ್ತು. ಈ ಒಂದೊಂದನ್ನು ರಸವತ್ತಾಗಿ ಅತ್ಯುತ್ಸಾಹದಲ್ಲಿ ವಿವರಿಸುವ ಶಿಕ್ಷಕ ಶಿಕ್ಷಕಿಯರ ಬಳಗವಿತ್ತು. ಈ ಬಳಗವೇ ಗಂಗಾವತಿಯ ‘ಸಂಪ್ರೀತಿ ಶಿಕ್ಷಕರ ಕಲಾ ಬಳಗ’.

ಈ ಮಳಿಗೆ ಹಾಕುವ ಮುನ್ನ ಹದಿನೈದು ದಿನಗಳ ಕಾಲ ಈ ಸಂಪ್ರೀತಿ ಬಳಗ ಗಂಗಾವತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸೋಮಶೇಖರಗೌಡ ಅವರ ಮಾರ್ಗದರ್ಶನದಲ್ಲಿ ತಾಲ್ಲೂಕಿನ ಹದಿನೈದಕ್ಕೂ ಹೆಚ್ಚು ಅತ್ಯುತ್ತಮ ಶಾಲೆಗಳಿಗೆ ಭೇಟಿ ನೀಡಿತ್ತು. ‘ಸರಕಾರಿ ಶಾಲೆಗಳ ಸಬಲೀಕರಣದತ್ತ ನಮ್ಮ ಚಿತ್ತ’ ಎಂಬ ಆಶಯದಲ್ಲಿ ಶಾಲೆಯ ಮಕ್ಕಳು, ಪಾಲಕರು, ಶಿಕ್ಷಕರೊಂದಿಗೆ ‘ಸರಕಾರಿ ಶಾಲೆ ನಮಗೇಕೆ ಬೇಕು?’ ಎಂಬ ಮಾತುಕತೆ ನಡೆಸಿ ಶಾಲೆಯನ್ನು ಅಭಿವೃದ್ಧಿಪಡಿಸಿದ ಕಾರಣ, ಪ್ರೇರಣೆ, ಮುಂದಿನ ಕನಸುಗಳ ಮಾಹಿತಿ ಸಂಗ್ರಹಿಸಿದ್ದರು. ಈ ಚಟುವಟಿಕೆಗಳ ಫೋಟೋ ಮತ್ತು ವಿಡಿಯೋ ಚಿತ್ರೀಕರಣ ಮಾಡಿದ್ದರು. ಈ ಎಲ್ಲವೂ ಮಳಿಗೆಯಲ್ಲಿ ಪ್ರದರ್ಶನಗೊಂಡಿದ್ದವು. ‘ಇಂತಹದ್ದೊಂದು ಪ್ರಯತ್ನ ಕರ್ನಾಟಕದಲ್ಲಿಯೇ ಮೊದಲನೆಯದು, ಶಿಕ್ಷಣ ಇಲಾಖೆ ಮಾದರಿಯಾಗಿ ಪರಿಗಣಿಸಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೇಳುತ್ತಾರೆ.

ನಾನು ಈ ಮಳಿಗೆಯಲ್ಲಿರುವ ಶಿಕ್ಷಕ ಶಿಕ್ಷಕಿಯರನ್ನು ಮಾತನಾಡಿಸಿದಾಗ ನನ್ನ ಗಮನಸೆಳೆದದ್ದು ಈ ಎಲ್ಲರ ಕಣ್ಣುಗಳಲ್ಲಿ ಸರಕಾರಿ ಶಾಲೆಗಳ ಬಗೆಗಿನ ಪ್ರೀತಿ, ಕಾಳಜಿ ಎದ್ದು ಕಾಣುತ್ತಿತ್ತು. ಇದರ ಫಲವಾಗಿಯೇ ಸರಕಾರಿ ಶಾಲೆಗಳನ್ನು ಸದೃಢಗೊಳಿಸಬೇಕು, ಎಲ್ಲರೂ ಮೆಚ್ಚುವಂತೆ ಮಾಡಬೇಕು ಎನ್ನುವ ಹೊಣೆಗಾರಿಕೆ ಇವರಲ್ಲಿ ಕುಡಿಯೊಡೆದಿರಬೇಕು. ಈ ಹೊಣೆಗಾರಿಕೆಯ ಫಲವಾಗಿಯೇ ಸಂಪ್ರೀತಿ ಕಲಾ ಬಳಗ ತಮ್ಮ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸಿಕೊಂಡರು.

2019 ರ ಸೆಪ್ಟಂಬರ್ ತಿಂಗಳಲ್ಲಿ ಗಂಗಾವತಿಯಲ್ಲಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಂದು ಆಪ್ತ ಹದಿನೈದು ಶಿಕ್ಷಕಿ ಶಿಕ್ಷಕರ ‘ಸಂಪ್ರೀತಿ ಕಲಾ ಬಳಗ’ ಶಿಕ್ಷಣ ಸಚಿವರಾದ ಎಸ್.ಸುರೇಶ್ ಕುಮಾರ್ ಅವರ ಉಪಸ್ಥಿತಿಯಲ್ಲಿ ಆರಂಭವಾಗುತ್ತದೆ. ಅಂದು ಈ ಬಳಗ ರೈತ ಗೀತೆಯನ್ನು ಹಾಡಿ ಚಾಲನೆಗೊಳ್ಳುತ್ತದೆ. ಆ ದಿನ ಬಳಗದ ಎಲ್ಲರೂ ಬಿಳಿ ಕಚ್ಚೆ, ಹಸಿರು ಪೈಜಾಮು, ತಲೆಗೆ ಕೆಂಪು ಮುಂಡಾಸು, ಹಚ್ಚಹಸಿರ ಶಲ್ಲೇವಿನಿಂದ ಗಮನಸೆಳೆದಿತ್ತು. ಶಿಕ್ಷಕರ ಬಳಗವೊಂದು ಚಾಲನೆಗೆ ರೈತ ಗೀತೆ ಹಸಿರು ಉಡುಪಿನ ಸಾಂಕೇತಿಕತೆ ಬಳಸಿದ್ದು ವಿಶೇಷವಾಗಿತ್ತು. ಇದು ಸರಕಾರಿ ಶಾಲೆ ಮತ್ತು ರೈತ ಸಮುದಾಯದ ನಂಟಿನ ಬೆಸುಗೆಯಂತೆಯೂ ಕಂಡಿತ್ತು. ಈ ತಂಡ ಆರಂಭಕ್ಕೆ ಕಾರಟಗಿ, ಕೊಪ್ಪಳ, ಆನೆಗುಂದಿ ಮೊದಲಾದ ಕಡೆಗಳಲ್ಲಿ ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳಲ್ಲಿ ರೈತಗೀತೆ ಮತ್ತು ನಾಡಗೀತೆಗಳನ್ನು ಹಾಡುವುದರಲ್ಲಿ ಗಮನಸೆಳೆಯಿತು. ನಂತರ ಇದರ ಮುಂದುವರಿಕೆಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಶಾಲಾ ಶೈಕ್ಷಣಿಕ ವಾಸ್ತವ್ಯ ಎನ್ನುವ ವಿನೂತನ ಕಾರ್ಯಕ್ರಮದಲ್ಲಿ ಈ ತಂಡ ‘ಕತ್ತಲನ್ನು ದಾಟಿತು ಬೆಳಕು ಎಂಬ ನಾಟಕ ಪ್ರದರ್ಶಿಸಿತು. ಈ ನಾಟಕದಲ್ಲಿ ಹಾಡುಕರ್ನಾಟಕ ಟಿವಿ ರಿಯಾಲಿಟಿ ಶೋಗೆ ಆಯ್ಕೆಯಾಗಿದ್ದ ಈ ತಂಡದ ಸದಸ್ಯ ಮೆಹಬೂಬ್ ಕಿಲ್ಲೇದಾರ್ ಅದ್ಭುತವಾಗಿ ಹಾಡಿ ಜನಮನಸೆಳೆದಿದ್ದರು. ಹೀಗೆ ತಂಡದ ಹಾಡಿಕೆ, ನಾಟಕಕ್ಕೆ ವಿಸ್ತರಿಸಿಕೊಂಡಿತು.

ಈ ತಂಡದ ಟೀಂ ಸ್ಪಿರಿಟ್ ದೃಢವಾದದ್ದು. ‘ಸರಕಾರಿ ಶಾಲೆಗಳ ಸಬಲೀಕರಣದತ್ತ ನಮ್ಮ ಚಿತ್ತ ಎನ್ನುವ ಆಶಯದೊಂದಿಗೆ ಶಾಲೆಗಳನ್ನು ಚಿತ್ರಕಲೆಗಳಿಂದ ಆಕರ್ಷಕಗೊಳಿಸಿದ್ದು ವಿಶೇಷ. ಕೆಲಸದ ಮಧ್ಯೆ ಬಿಡುವು ಎನ್ನುವಂತಿರುವ ಭಾನುವಾರ ಮತ್ತು ಇತರೆ ಸರಕಾರಿ ರಜೆಗಳನ್ನು ಈ ಟೀಂ ಶಾಲೆಗಳ ಪೇಂಟಿಂಗ್ ಮತ್ತು ಚಿತ್ರಕಲೆಗಾಗಿ ಬಳಸಿಕೊಂಡರು. ಮೊದಲು ಪ್ರಯೋಗವಾಗಿ ಗಂಗಾವತಿಗೆ ಸಮೀಪವಿರುವ ಕುಂಟೋಜಿ ಕ್ಯಾಂಪ್ ಶಾಲೆಯನ್ನು ಸತತ ಒಂಭತ್ತು ಭಾನುವಾರಗಳಂದು ಚಿತ್ತಾಕರ್ಷಕಗೊಳಿಸಿದರು. ನಂತರದಲ್ಲಿ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕಬ್ಬಿನಕಣವಿ, ಯಲಬುರ್ಗಾ ತಾಲೂಕು ವಡ್ಡರಕಲ್ಲು ಒಳಗೊಂಡಂತೆ ಗಂಗಾವತಿ ತಾಲೂಕಿನ ಈ ತನಕ ಹನ್ನೆರಡು ಶಾಲೆಗಳನ್ನು ಹೀಗೆ ಚಿತ್ತಾಕರ್ಶಕಗೊಳಿಸಿ ಎಲ್ಲರ ಕಣ್ಮನ ಸೆಳೆಯುವಂತೆ ಮಾಡಿದ್ದಾರೆ. ಆಹ್ವಾನಿಸಿದ ಶಾಲೆಗಳಲ್ಲಿ ಆಯಾ ಶಾಲೆಯ ಶಿಕ್ಷಕರು ಬಣ್ಣವನ್ನು ತಂದುಕೊಡುತ್ತಾರೆ. ಊರಿನ ಹಿರಿಯ ವಿದ್ಯಾರ್ಥಿಗಳು ಜೊತೆಗೂಡುತ್ತಾರೆ. ಆಯಾ ಶಾಲಾ ಶಿಕ್ಷಕರು ಇಷ್ಟಪಟ್ಟಂತೆ ಚಿತ್ರಗಳನ್ನು ಬಿಡಿಸಲಾಗುತ್ತದೆ. ಶಿವರಾತ್ರಿ ಸಂಕ್ರಾಂತಿಯಂತಹ ಹಬ್ಬಗಳನ್ನೂ ಶಾಲೆಯಲ್ಲಿ ಚಿತ್ರಕಲೆ ಬಿಡಿಸುವ ಮೂಲಕ ಈ ಟೀಂ ಆಚರಿಸಿದೆ. ಈಗ ಚಿತ್ರಕಲೆಯ ಜತೆ ಆಯಾ ಶಾಲೆಯಲ್ಲಿ ಸಾಂಕೇತಿಕವಾಗಿ ಗಿಡನೆಡುವ ಕಾರ್ಯಕ್ರಮವನ್ನೂ ಮಾಡುತ್ತಿದೆ. ವಿಶೇಷವೆಂದರೆ ಈ ತಂಡದ ಯಾವ ಶಿಕ್ಷಕರೂ ಚಿತ್ರಕಲಾ ಶಿಕ್ಷಕರಲ್ಲ, ಇವರೆಲ್ಲಾ ಹವ್ಯಾಸಿ ಕಲಾವಿದರು.

ಈ ಸಂಪ್ರೀತಿಯ ಬಳಗದಲ್ಲಿ ನಾಲ್ಕು ಸಂಗಾತಿ ಜೋಡಿಗಳಿವೆ. ರಂಗನಾಥ ಕುಲಕರ್ಣಿ, ಆರಾಳ ಮತ್ತು ಶ್ವೇತಾ ಕುಲಕರ್ಣಿ, ವೆಂಕಟಗಿರಿ. ಸೋಮು ಕುದ್ರಿಹಾಳ, ಲಕ್ಷ್ಮೀಕ್ಯಾಂಪ್ ಕುಂಟೋಜಿ ಮತ್ತು ರೇಖಾ.ಜೆ.ಎಸ್, ಗುಂಡೂರು. ಯೋಗೀಶ್ ಎನ್, ಹಣವಾಳಕ್ಯಾಂಪ್ ಮತ್ತು ಇಂದು ವೈ ಎಂ, ಮರಳಿ ಬಸವಣ್ಣ ಕ್ಯಾಂಪ್. ರಮೇಶ್ ಬಾಳಿಕಾಯಿ, ವಡ್ಡರಹಟ್ಟಿ ಕ್ಯಾಂಪ್, ಮತ್ತು ಅನ್ನಪೂರ್ಣ ಚೌಹಾಣ್ ಉಪ್ಪಿನಮಾಳಿ ಕ್ಯಾಂಪ್ ಗಂಗಾವತಿ. ಉಳಿದಂತೆ ಮಧುಕುಮಾರ್, ಯರಡೋಣ, ಶಂಭುಲಿಂಗಯ್ಯ, ಶ್ರೀರಾಮನಗರ, ಸುರೇಶ್.ಜಿ.ಎಸ್, ಭಟ್ಟರ ನರಸಾಪುರ, ಷಡಕ್ಷರಿ ಕರ್ಕಿಹಳ್ಳಿ, ವಿವೇಕ ಭಾರತಿ ಶಾಲೆ ಗಂಗಾವತಿ, ಮಂಜುನಾಥ್ ತಾವರಗಿ, ಆನೆಗುಂದಿ, ಪರಶುರಾಮ್ ಗಡ್ಡಿ, ಈಳಿಗನೂರು, ಮೆಹಬೂಬ್ ಕಿಲ್ಲೇದಾರ, ಕಾರಟಗಿ. ಇಲ್ಲಿನ ನಾಲ್ಕು ಜೋಡಿಗಳ ಪ್ರೀತಿಯ ಬೆಸುಗೆಯೂ ಈ ಸಂಪ್ರೀತಿಯಲ್ಲಿ ಬೆಸೆದಿದೆ. ಜೊತೆಗೆ ಈ ಎಲ್ಲರೂ ‘ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ ಎನ್ನುವ ತತ್ವವನ್ನು ಪಾಲಿಸಿದ ಕಾರಣ ಈ ಬಳಗವನ್ನು ‘ಪ್ರೀತಿ ‘ಸ್ನೇಹದ ಒತ್ತಾಸೆ ಕಟ್ಟಿಹಾಕಿದೆ.

ಈ ತಂಡದ ಬೆನ್ನಿಗೆ ನಿಂತವರು ಗಂಗಾವತಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ. ಇವರ ಪ್ರೋತ್ಸಾಹ ಈ ಬಳಗದ ಉತ್ಸಾಹವನ್ನು ಹೆಚ್ಚಿಸಿದೆ. ಈ ಬಳಗದ ಶಿಕ್ಷಕಿ ಶಿಕ್ಷಕರ ಯೌವನದ ಚೈತನ್ಯ ಹೊಸ ಆಲೋಚನೆಗೆ ಪ್ರೇರೇಪಿಸಿದೆ. ಹೀಗೆ ಪ್ರತಿ ಜಿಲ್ಲೆ ಮತ್ತು ತಾಲೂಕಿನಲ್ಲಿ ಯುವ ಶಿಕ್ಷಕ ಶಿಕ್ಷಕಿಯರು ಜಡತೆಯನ್ನು ಕೊಡವಿ ಕ್ರಿಯಾಶೀಲವಾದರೆ ಸರಕಾರಿ ಶಾಲೆಗಳನ್ನು ಅತ್ತುತ್ತಮ ಮಾದರಿಗಳನ್ನಾಗಿ ರೂಪಿಸಬಹುದು ಎನ್ನುವುದನ್ನು ಈ ತಂಡ ತೋರಿಸಿಕೊಟ್ಟಿದೆ. ಈ ತಂಡದ ಪ್ರೀತಿ ಸ್ನೇಹ ಉತ್ಸಾಹ ಮತ್ತಷ್ಟು ಗಟ್ಟಿಯಾಗಲಿ ಎಂದು ಪತ್ರಿಕೆ ಹಾರೈಸುತ್ತದೆ.


ಇದನ್ನೂ ಓದಿ: ಎಲೆಮರೆ -39: ಊರನ್ನೇ ರಂಗಭೂಮಿ ಮಾಡಿದ ಶಿಕ್ಷಕ ಅಶೋಕ ತೋಟ್ನಳ್ಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...