Homeಕರ್ನಾಟಕಪ್ರೀತಿ, ಕಾಳಜಿ, ಹೊಣೆಗಾರಿಕೆಯ ‘ಸಂಪ್ರೀತಿ ಕಲಾ ಬಳಗ'ದ ಶಿಕ್ಷಕಿ-ಶಿಕ್ಷಕರಿಗೊಂದು ಸಲಾಂ

ಪ್ರೀತಿ, ಕಾಳಜಿ, ಹೊಣೆಗಾರಿಕೆಯ ‘ಸಂಪ್ರೀತಿ ಕಲಾ ಬಳಗ’ದ ಶಿಕ್ಷಕಿ-ಶಿಕ್ಷಕರಿಗೊಂದು ಸಲಾಂ

ಪ್ರತಿ ಜಿಲ್ಲೆ ಮತ್ತು ತಾಲೂಕಿನಲ್ಲಿ ಯುವ ಶಿಕ್ಷಕ ಶಿಕ್ಷಕಿಯರು ಜಡತೆಯನ್ನು ಕೊಡವಿ ಕ್ರಿಯಾಶೀಲವಾದರೆ ಸರಕಾರಿ ಶಾಲೆಗಳನ್ನು ಅತ್ತುತ್ತಮ ಮಾದರಿಗಳನ್ನಾಗಿ ರೂಪಿಸಬಹುದು ಎನ್ನುವುದನ್ನು ಈ ತಂಡ ತೋರಿಸಿಕೊಟ್ಟಿದೆ.

- Advertisement -
- Advertisement -

ಎಲೆಮರೆ-44

-ಅರುಣ್ ಜೋಳದಕೂಡ್ಲಿಗಿ

ಜನವರಿ 9, 10, 2020 ರಂದು ಆನೆಗುಂದಿ ಉತ್ಸವವಿತ್ತು. ಅಂದು ನಾನು ಕುಮಾರರಾಮನ ಬಗ್ಗೆ ವಿಷಯ ಮಂಡಿಸಿ, ಹಂಪಿಗೆ ಹೋಗಲೆಂದು ಬೈಕ್ ಏರಿದೆ. ಎದುರಿಗೆ ಹಸಿರು ನೀಲಿಯ ಟೀಶರ್ಟ್ ತೊಟ್ಟು ‘ಸರಕಾರಿ ಶಾಲೆ ನಮ್ಮ ಹೆಮ್ಮೆ, ನಮ್ಮ ಶಾಲೆ ನಮಗೆ ಹೆಮ್ಮೆ ಎಂದು ಸ್ಲೋಗನ್ ಬರೆದುಕೊಂಡ ಎಂಟತ್ತು ಜನರ ತಂಡವೊಂದು ಬೈಕ್ ಏರಿ ನಿಂತಿದ್ದರು. ಅವರು ಉತ್ಸವದ ವೇದಿಕೆಯಲ್ಲಿ ರೈತಗೀತೆ ನಾಡಗೀತೆ ಹಾಡಿ ಬಂದಿದ್ದರು. ನಾನು ಕುತೂಹಲದಿಂದ ‘ಯಾರು ನೀವು? ಏನಿದು ಕ್ಯಾಂಪೇನ್ ಎಂದು ಕೇಳಿದೆ. ಅದರಲ್ಲೊಬ್ಬರು ‘ನಾವು ಸರಕಾರಿ ಶಾಲೆಗಳ ಶಿಕ್ಷಕರು ಸರ್, ಉತ್ಸವದಲ್ಲಿ ಒಂದು ಮಳಿಗೆ ಹಾಕಿದಿವಿ, ಬಂದು ನೋಡಿ ಎಲ್ಲಾ ಅರ್ಥ ಆಗುತ್ತೆ ಎಂದರು. ಅಷ್ಟು ಮಾತನಾಡುವ ಹೊತ್ತಿಗೆ ನನಗೆ ಪರಿಚಯವಿದ್ದ ಕವಿ ಸೋಮು ಕುದ್ರಿಹಾಳ ಬಂದರು. ಅವರೂ ಈ ತಂಡದ ಒಬ್ಬ ಸದಸ್ಯರು. ನಾನು ಅವರ ಜೊತೆಗೂಡಿ ಆನೆಗುಂದಿ ಉತ್ಸವದ ಮುಖ್ಯ ವೇದಿಕೆಯ ಬಳಿಗೆ ಹೋದೆ. ಅಲ್ಲೊಂದು ಅಪರೂಪದ ‘ಸರಕಾರಿ ಶಾಲೆ ನಮ್ಮ ಹೆಮ್ಮೆ ಎನ್ನುವ ಮಳಿಗೆ ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು. ತಾಲೂಕಿನ ಅತ್ಯುತ್ತಮ ಸರಕಾರಿ ಶಾಲೆಗಳ ಪರಿಚಯವಿತ್ತು. ಸರಕಾರಿ ಶಾಲೆಗಳ ವಿನೂತನ ಪ್ರಯೋಗಗಳ ಪ್ರದರ್ಶನವಿತ್ತು. ಈ ಒಂದೊಂದನ್ನು ರಸವತ್ತಾಗಿ ಅತ್ಯುತ್ಸಾಹದಲ್ಲಿ ವಿವರಿಸುವ ಶಿಕ್ಷಕ ಶಿಕ್ಷಕಿಯರ ಬಳಗವಿತ್ತು. ಈ ಬಳಗವೇ ಗಂಗಾವತಿಯ ‘ಸಂಪ್ರೀತಿ ಶಿಕ್ಷಕರ ಕಲಾ ಬಳಗ’.

ಈ ಮಳಿಗೆ ಹಾಕುವ ಮುನ್ನ ಹದಿನೈದು ದಿನಗಳ ಕಾಲ ಈ ಸಂಪ್ರೀತಿ ಬಳಗ ಗಂಗಾವತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸೋಮಶೇಖರಗೌಡ ಅವರ ಮಾರ್ಗದರ್ಶನದಲ್ಲಿ ತಾಲ್ಲೂಕಿನ ಹದಿನೈದಕ್ಕೂ ಹೆಚ್ಚು ಅತ್ಯುತ್ತಮ ಶಾಲೆಗಳಿಗೆ ಭೇಟಿ ನೀಡಿತ್ತು. ‘ಸರಕಾರಿ ಶಾಲೆಗಳ ಸಬಲೀಕರಣದತ್ತ ನಮ್ಮ ಚಿತ್ತ’ ಎಂಬ ಆಶಯದಲ್ಲಿ ಶಾಲೆಯ ಮಕ್ಕಳು, ಪಾಲಕರು, ಶಿಕ್ಷಕರೊಂದಿಗೆ ‘ಸರಕಾರಿ ಶಾಲೆ ನಮಗೇಕೆ ಬೇಕು?’ ಎಂಬ ಮಾತುಕತೆ ನಡೆಸಿ ಶಾಲೆಯನ್ನು ಅಭಿವೃದ್ಧಿಪಡಿಸಿದ ಕಾರಣ, ಪ್ರೇರಣೆ, ಮುಂದಿನ ಕನಸುಗಳ ಮಾಹಿತಿ ಸಂಗ್ರಹಿಸಿದ್ದರು. ಈ ಚಟುವಟಿಕೆಗಳ ಫೋಟೋ ಮತ್ತು ವಿಡಿಯೋ ಚಿತ್ರೀಕರಣ ಮಾಡಿದ್ದರು. ಈ ಎಲ್ಲವೂ ಮಳಿಗೆಯಲ್ಲಿ ಪ್ರದರ್ಶನಗೊಂಡಿದ್ದವು. ‘ಇಂತಹದ್ದೊಂದು ಪ್ರಯತ್ನ ಕರ್ನಾಟಕದಲ್ಲಿಯೇ ಮೊದಲನೆಯದು, ಶಿಕ್ಷಣ ಇಲಾಖೆ ಮಾದರಿಯಾಗಿ ಪರಿಗಣಿಸಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೇಳುತ್ತಾರೆ.

ನಾನು ಈ ಮಳಿಗೆಯಲ್ಲಿರುವ ಶಿಕ್ಷಕ ಶಿಕ್ಷಕಿಯರನ್ನು ಮಾತನಾಡಿಸಿದಾಗ ನನ್ನ ಗಮನಸೆಳೆದದ್ದು ಈ ಎಲ್ಲರ ಕಣ್ಣುಗಳಲ್ಲಿ ಸರಕಾರಿ ಶಾಲೆಗಳ ಬಗೆಗಿನ ಪ್ರೀತಿ, ಕಾಳಜಿ ಎದ್ದು ಕಾಣುತ್ತಿತ್ತು. ಇದರ ಫಲವಾಗಿಯೇ ಸರಕಾರಿ ಶಾಲೆಗಳನ್ನು ಸದೃಢಗೊಳಿಸಬೇಕು, ಎಲ್ಲರೂ ಮೆಚ್ಚುವಂತೆ ಮಾಡಬೇಕು ಎನ್ನುವ ಹೊಣೆಗಾರಿಕೆ ಇವರಲ್ಲಿ ಕುಡಿಯೊಡೆದಿರಬೇಕು. ಈ ಹೊಣೆಗಾರಿಕೆಯ ಫಲವಾಗಿಯೇ ಸಂಪ್ರೀತಿ ಕಲಾ ಬಳಗ ತಮ್ಮ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸಿಕೊಂಡರು.

2019 ರ ಸೆಪ್ಟಂಬರ್ ತಿಂಗಳಲ್ಲಿ ಗಂಗಾವತಿಯಲ್ಲಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಂದು ಆಪ್ತ ಹದಿನೈದು ಶಿಕ್ಷಕಿ ಶಿಕ್ಷಕರ ‘ಸಂಪ್ರೀತಿ ಕಲಾ ಬಳಗ’ ಶಿಕ್ಷಣ ಸಚಿವರಾದ ಎಸ್.ಸುರೇಶ್ ಕುಮಾರ್ ಅವರ ಉಪಸ್ಥಿತಿಯಲ್ಲಿ ಆರಂಭವಾಗುತ್ತದೆ. ಅಂದು ಈ ಬಳಗ ರೈತ ಗೀತೆಯನ್ನು ಹಾಡಿ ಚಾಲನೆಗೊಳ್ಳುತ್ತದೆ. ಆ ದಿನ ಬಳಗದ ಎಲ್ಲರೂ ಬಿಳಿ ಕಚ್ಚೆ, ಹಸಿರು ಪೈಜಾಮು, ತಲೆಗೆ ಕೆಂಪು ಮುಂಡಾಸು, ಹಚ್ಚಹಸಿರ ಶಲ್ಲೇವಿನಿಂದ ಗಮನಸೆಳೆದಿತ್ತು. ಶಿಕ್ಷಕರ ಬಳಗವೊಂದು ಚಾಲನೆಗೆ ರೈತ ಗೀತೆ ಹಸಿರು ಉಡುಪಿನ ಸಾಂಕೇತಿಕತೆ ಬಳಸಿದ್ದು ವಿಶೇಷವಾಗಿತ್ತು. ಇದು ಸರಕಾರಿ ಶಾಲೆ ಮತ್ತು ರೈತ ಸಮುದಾಯದ ನಂಟಿನ ಬೆಸುಗೆಯಂತೆಯೂ ಕಂಡಿತ್ತು. ಈ ತಂಡ ಆರಂಭಕ್ಕೆ ಕಾರಟಗಿ, ಕೊಪ್ಪಳ, ಆನೆಗುಂದಿ ಮೊದಲಾದ ಕಡೆಗಳಲ್ಲಿ ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳಲ್ಲಿ ರೈತಗೀತೆ ಮತ್ತು ನಾಡಗೀತೆಗಳನ್ನು ಹಾಡುವುದರಲ್ಲಿ ಗಮನಸೆಳೆಯಿತು. ನಂತರ ಇದರ ಮುಂದುವರಿಕೆಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಶಾಲಾ ಶೈಕ್ಷಣಿಕ ವಾಸ್ತವ್ಯ ಎನ್ನುವ ವಿನೂತನ ಕಾರ್ಯಕ್ರಮದಲ್ಲಿ ಈ ತಂಡ ‘ಕತ್ತಲನ್ನು ದಾಟಿತು ಬೆಳಕು ಎಂಬ ನಾಟಕ ಪ್ರದರ್ಶಿಸಿತು. ಈ ನಾಟಕದಲ್ಲಿ ಹಾಡುಕರ್ನಾಟಕ ಟಿವಿ ರಿಯಾಲಿಟಿ ಶೋಗೆ ಆಯ್ಕೆಯಾಗಿದ್ದ ಈ ತಂಡದ ಸದಸ್ಯ ಮೆಹಬೂಬ್ ಕಿಲ್ಲೇದಾರ್ ಅದ್ಭುತವಾಗಿ ಹಾಡಿ ಜನಮನಸೆಳೆದಿದ್ದರು. ಹೀಗೆ ತಂಡದ ಹಾಡಿಕೆ, ನಾಟಕಕ್ಕೆ ವಿಸ್ತರಿಸಿಕೊಂಡಿತು.

ಈ ತಂಡದ ಟೀಂ ಸ್ಪಿರಿಟ್ ದೃಢವಾದದ್ದು. ‘ಸರಕಾರಿ ಶಾಲೆಗಳ ಸಬಲೀಕರಣದತ್ತ ನಮ್ಮ ಚಿತ್ತ ಎನ್ನುವ ಆಶಯದೊಂದಿಗೆ ಶಾಲೆಗಳನ್ನು ಚಿತ್ರಕಲೆಗಳಿಂದ ಆಕರ್ಷಕಗೊಳಿಸಿದ್ದು ವಿಶೇಷ. ಕೆಲಸದ ಮಧ್ಯೆ ಬಿಡುವು ಎನ್ನುವಂತಿರುವ ಭಾನುವಾರ ಮತ್ತು ಇತರೆ ಸರಕಾರಿ ರಜೆಗಳನ್ನು ಈ ಟೀಂ ಶಾಲೆಗಳ ಪೇಂಟಿಂಗ್ ಮತ್ತು ಚಿತ್ರಕಲೆಗಾಗಿ ಬಳಸಿಕೊಂಡರು. ಮೊದಲು ಪ್ರಯೋಗವಾಗಿ ಗಂಗಾವತಿಗೆ ಸಮೀಪವಿರುವ ಕುಂಟೋಜಿ ಕ್ಯಾಂಪ್ ಶಾಲೆಯನ್ನು ಸತತ ಒಂಭತ್ತು ಭಾನುವಾರಗಳಂದು ಚಿತ್ತಾಕರ್ಷಕಗೊಳಿಸಿದರು. ನಂತರದಲ್ಲಿ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕಬ್ಬಿನಕಣವಿ, ಯಲಬುರ್ಗಾ ತಾಲೂಕು ವಡ್ಡರಕಲ್ಲು ಒಳಗೊಂಡಂತೆ ಗಂಗಾವತಿ ತಾಲೂಕಿನ ಈ ತನಕ ಹನ್ನೆರಡು ಶಾಲೆಗಳನ್ನು ಹೀಗೆ ಚಿತ್ತಾಕರ್ಶಕಗೊಳಿಸಿ ಎಲ್ಲರ ಕಣ್ಮನ ಸೆಳೆಯುವಂತೆ ಮಾಡಿದ್ದಾರೆ. ಆಹ್ವಾನಿಸಿದ ಶಾಲೆಗಳಲ್ಲಿ ಆಯಾ ಶಾಲೆಯ ಶಿಕ್ಷಕರು ಬಣ್ಣವನ್ನು ತಂದುಕೊಡುತ್ತಾರೆ. ಊರಿನ ಹಿರಿಯ ವಿದ್ಯಾರ್ಥಿಗಳು ಜೊತೆಗೂಡುತ್ತಾರೆ. ಆಯಾ ಶಾಲಾ ಶಿಕ್ಷಕರು ಇಷ್ಟಪಟ್ಟಂತೆ ಚಿತ್ರಗಳನ್ನು ಬಿಡಿಸಲಾಗುತ್ತದೆ. ಶಿವರಾತ್ರಿ ಸಂಕ್ರಾಂತಿಯಂತಹ ಹಬ್ಬಗಳನ್ನೂ ಶಾಲೆಯಲ್ಲಿ ಚಿತ್ರಕಲೆ ಬಿಡಿಸುವ ಮೂಲಕ ಈ ಟೀಂ ಆಚರಿಸಿದೆ. ಈಗ ಚಿತ್ರಕಲೆಯ ಜತೆ ಆಯಾ ಶಾಲೆಯಲ್ಲಿ ಸಾಂಕೇತಿಕವಾಗಿ ಗಿಡನೆಡುವ ಕಾರ್ಯಕ್ರಮವನ್ನೂ ಮಾಡುತ್ತಿದೆ. ವಿಶೇಷವೆಂದರೆ ಈ ತಂಡದ ಯಾವ ಶಿಕ್ಷಕರೂ ಚಿತ್ರಕಲಾ ಶಿಕ್ಷಕರಲ್ಲ, ಇವರೆಲ್ಲಾ ಹವ್ಯಾಸಿ ಕಲಾವಿದರು.

ಈ ಸಂಪ್ರೀತಿಯ ಬಳಗದಲ್ಲಿ ನಾಲ್ಕು ಸಂಗಾತಿ ಜೋಡಿಗಳಿವೆ. ರಂಗನಾಥ ಕುಲಕರ್ಣಿ, ಆರಾಳ ಮತ್ತು ಶ್ವೇತಾ ಕುಲಕರ್ಣಿ, ವೆಂಕಟಗಿರಿ. ಸೋಮು ಕುದ್ರಿಹಾಳ, ಲಕ್ಷ್ಮೀಕ್ಯಾಂಪ್ ಕುಂಟೋಜಿ ಮತ್ತು ರೇಖಾ.ಜೆ.ಎಸ್, ಗುಂಡೂರು. ಯೋಗೀಶ್ ಎನ್, ಹಣವಾಳಕ್ಯಾಂಪ್ ಮತ್ತು ಇಂದು ವೈ ಎಂ, ಮರಳಿ ಬಸವಣ್ಣ ಕ್ಯಾಂಪ್. ರಮೇಶ್ ಬಾಳಿಕಾಯಿ, ವಡ್ಡರಹಟ್ಟಿ ಕ್ಯಾಂಪ್, ಮತ್ತು ಅನ್ನಪೂರ್ಣ ಚೌಹಾಣ್ ಉಪ್ಪಿನಮಾಳಿ ಕ್ಯಾಂಪ್ ಗಂಗಾವತಿ. ಉಳಿದಂತೆ ಮಧುಕುಮಾರ್, ಯರಡೋಣ, ಶಂಭುಲಿಂಗಯ್ಯ, ಶ್ರೀರಾಮನಗರ, ಸುರೇಶ್.ಜಿ.ಎಸ್, ಭಟ್ಟರ ನರಸಾಪುರ, ಷಡಕ್ಷರಿ ಕರ್ಕಿಹಳ್ಳಿ, ವಿವೇಕ ಭಾರತಿ ಶಾಲೆ ಗಂಗಾವತಿ, ಮಂಜುನಾಥ್ ತಾವರಗಿ, ಆನೆಗುಂದಿ, ಪರಶುರಾಮ್ ಗಡ್ಡಿ, ಈಳಿಗನೂರು, ಮೆಹಬೂಬ್ ಕಿಲ್ಲೇದಾರ, ಕಾರಟಗಿ. ಇಲ್ಲಿನ ನಾಲ್ಕು ಜೋಡಿಗಳ ಪ್ರೀತಿಯ ಬೆಸುಗೆಯೂ ಈ ಸಂಪ್ರೀತಿಯಲ್ಲಿ ಬೆಸೆದಿದೆ. ಜೊತೆಗೆ ಈ ಎಲ್ಲರೂ ‘ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ ಎನ್ನುವ ತತ್ವವನ್ನು ಪಾಲಿಸಿದ ಕಾರಣ ಈ ಬಳಗವನ್ನು ‘ಪ್ರೀತಿ ‘ಸ್ನೇಹದ ಒತ್ತಾಸೆ ಕಟ್ಟಿಹಾಕಿದೆ.

ಈ ತಂಡದ ಬೆನ್ನಿಗೆ ನಿಂತವರು ಗಂಗಾವತಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ. ಇವರ ಪ್ರೋತ್ಸಾಹ ಈ ಬಳಗದ ಉತ್ಸಾಹವನ್ನು ಹೆಚ್ಚಿಸಿದೆ. ಈ ಬಳಗದ ಶಿಕ್ಷಕಿ ಶಿಕ್ಷಕರ ಯೌವನದ ಚೈತನ್ಯ ಹೊಸ ಆಲೋಚನೆಗೆ ಪ್ರೇರೇಪಿಸಿದೆ. ಹೀಗೆ ಪ್ರತಿ ಜಿಲ್ಲೆ ಮತ್ತು ತಾಲೂಕಿನಲ್ಲಿ ಯುವ ಶಿಕ್ಷಕ ಶಿಕ್ಷಕಿಯರು ಜಡತೆಯನ್ನು ಕೊಡವಿ ಕ್ರಿಯಾಶೀಲವಾದರೆ ಸರಕಾರಿ ಶಾಲೆಗಳನ್ನು ಅತ್ತುತ್ತಮ ಮಾದರಿಗಳನ್ನಾಗಿ ರೂಪಿಸಬಹುದು ಎನ್ನುವುದನ್ನು ಈ ತಂಡ ತೋರಿಸಿಕೊಟ್ಟಿದೆ. ಈ ತಂಡದ ಪ್ರೀತಿ ಸ್ನೇಹ ಉತ್ಸಾಹ ಮತ್ತಷ್ಟು ಗಟ್ಟಿಯಾಗಲಿ ಎಂದು ಪತ್ರಿಕೆ ಹಾರೈಸುತ್ತದೆ.


ಇದನ್ನೂ ಓದಿ: ಎಲೆಮರೆ -39: ಊರನ್ನೇ ರಂಗಭೂಮಿ ಮಾಡಿದ ಶಿಕ್ಷಕ ಅಶೋಕ ತೋಟ್ನಳ್ಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...