Homeಮುಖಪುಟಒಕ್ಕಲಿಗರ ರಾಜಧಾನಿಯ ಮೇಲೆ ವೈದಿಕಶಾಹಿಯ ಕಣ್ಣು: ಮಂಡ್ಯಕ್ಕೇನು ಕಾದಿದೆ?

ಒಕ್ಕಲಿಗರ ರಾಜಧಾನಿಯ ಮೇಲೆ ವೈದಿಕಶಾಹಿಯ ಕಣ್ಣು: ಮಂಡ್ಯಕ್ಕೇನು ಕಾದಿದೆ?

- Advertisement -
- Advertisement -

ಮಂಡ್ಯದ ಒಕ್ಕಲಿಗರು ಕುವೆಂಪು ಅವರ ಕಟ್ಟಾ ಅನುಯಾಯಿಗಳೇನೂ ಅಲ್ಲ. ಆದರೆ, ಇಲ್ಲಿನ ಮುಖ್ಯವಾಹಿನಿ ಪ್ರಜ್ಞೆಯು ವೈದಿಕಶಾಹಿಯ ಪದತಲದಲ್ಲಿ ಶರಣಾಗಿಲ್ಲ. ಅದು 30 ವರ್ಷಗಳ ಕೆಳಗೆ ಹೇಗೋ ಇಂದಿಗೂ ಹಾಗೆಯೇ ಇದೆ. ಇದೇ ಮಾತನ್ನು ರಾಜ್ಯದ ಉಳಿದೆಲ್ಲಾ ಜಿಲ್ಲೆಗಳ ವಿಚಾರದಲ್ಲಿ ಹೇಳುವ ಹಾಗಿಲ್ಲ. ಕಳೆದ 30 ವರ್ಷಗಳಲ್ಲಿ ಉಳಿದ ಜಿಲ್ಲೆಗಳ ಅಧ್ಯಾಪಕರು, ಸಾಹಿತಿಗಳ ಒಂದು ವಿಭಾಗ, ಪತ್ರಕರ್ತರು ಮತ್ತಿತರ ಸುಶಿಕ್ಷಿತ ವರ್ಗ ನಿಧಾನಕ್ಕೆ ವೈದಿಕರ ಬಾಲಂಗೋಚಿಗಳಾಗುತ್ತಾ ನಡೆದರು. ಅದರ ಭಾಗವಾಗಿ ಅಲ್ಲಿ ಆರೆಸ್ಸೆಸ್ ಚಿಂತನೆ ಹಾಗೂ ಬಿಜೆಪಿಯೂ ಬೆಳೆಯುತ್ತಾ ಸಾಗಿದವು. ಆದರೆ ಮಂಡ್ಯದಲ್ಲಿ ಇವ್ಯಾವುವೂ ಆಗಿರಲಿಲ್ಲ.

ಒಕ್ಕಲಿಗ ಪ್ರಾಧಾನ್ಯತೆ ಮಂಡ್ಯಕ್ಕೆ ಮಾತ್ರ ಸೀಮಿತವಾದದ್ದೇನಲ್ಲ. ದಕ್ಷಿಣದ ಏಳೆಂಟು ಜಿಲ್ಲೆಗಳಲ್ಲಿ ಒಕ್ಕಲಿಗರು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ರಾಜಕೀಯವಾಗಿ ಬಲಾಢ್ಯರು. ಹಾಸನ ಮತ್ತು ರಾಮನಗರಗಳು ‘ಒಕ್ಕಲಿಗ ಪಕ್ಷ’ವೆಂದು ಹೆಸರಾದ ಜೆಡಿಎಸ್‍ನ ನಾಯಕರುಗಳನ್ನು ಸತತವಾಗಿ ಆರಿಸಿ ಕಳಿಸಿದ ಜಿಲ್ಲೆಗಳು. ಆದರೂ ಮಂಡ್ಯವೇ ಈ ವಿದ್ಯಮಾನದ ರಾಜಧಾನಿ.

ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಅಧಿಕಾರ ಹಿಡಿಯಲು ದಕ್ಷಿಣ ಕರ್ನಾಟಕದಲ್ಲಿ ಪ್ರಾಬಲ್ಯ ಬೆಳೆಸಿಕೊಳ್ಳುವುದು ಬಿಜೆಪಿಗೆ ಅನಿವಾರ್ಯ. ಬಿಜೆಪಿ ಪ್ರಬಲವಾಗುವುದೆಂದರೆ ಕೆಲವು ವಿರೋಧ ಪಕ್ಷಗಳ ನಾಯಕರುಗಳನ್ನು ತನ್ನೆಡೆಗೆ ಸೆಳೆದುಕೊಳ್ಳುವುದು ಮಾತ್ರವಲ್ಲಾ. ತನ್ನ ಐಡಿಯಾಲಜಿಯನ್ನೂ ಅಲ್ಲಿ ಸ್ಥಾಪಿಸುವುದು. ಹಾಗೆ ಮಾಡಿದಾಗ ಮಾತ್ರ ಈ ಸಾರಿ ದಕ್ಷಿಣ ಕನ್ನಡದಲ್ಲಿ ಆದಂತೆ ಯಾರನ್ನೇ ಚುನಾವಣೆಗೆ ನಿಲ್ಲಿಸಿದರೂ ಅಲ್ಲಿಂದ ಗೆದ್ದು ಬರುವಂತೆ ಮಾಡಿಕೊಳ್ಳಬಹುದು. ಈ ಎಲ್ಲಾ ದೃಷ್ಟಿಯಿಂದ ಆರೆಸ್ಸೆಸ್‍ಗೆ ತನ್ನ ಚಿಂತನೆಯನ್ನು ಹರಡಲು ಮಂಡ್ಯ ಮತ್ತು ಸುತ್ತಲಿನ ಜಿಲ್ಲೆಗಳು ಬಹುಮುಖ್ಯ. ಕನಕಪುರದಲ್ಲಿ ಏಸು ಪ್ರತಿಮೆಯ ವಿಚಾರದಲ್ಲಿ ಗಲಭೆ ಎಬ್ಬಿಸಲು ಕಲ್ಲಡ್ಕ ಪ್ರಭಾಕರ ಭಟ್ಟರೇ ರಂಗಕ್ಕಿಳಿದಿರುವುದೂ ಆ ಉದ್ದೇಶದಿಂದಲೇ. ಈಗ ‘ಅವರು ಬಂದು ಇಲ್ಲಿ ಏನು ಮಾಡಿಕೊಳ್ಳಲೂ ಸಾಧ್ಯವಿಲ್ಲ’ ಎಂಬಂತೆ ವರ್ತಿಸುತ್ತಿರುವ ಡಿ.ಕೆ.ಬ್ರದರ್ಸ್‍ಗೆ ಇನ್ನು ನಾಲ್ಕೈದು ವರ್ಷಗಳಲ್ಲೇ ಆಘಾತವಾಗುವಂತೆ ಅವರ ವಿರುದ್ಧ ಅಲೆ ಬೀಸುವಂತೆ ಮಾಡುವುದು ಸಂಘಪರಿವಾರಕ್ಕೆ ಕಷ್ಟವಿಲ್ಲ.

ಅದೇ ರೀತಿ ಮಂಡ್ಯದ ಮೇಲೆ ಆರೆಸ್ಸೆಸ್‍ನ ಕಣ್ಣು ಬಿದ್ದಿರುವುದಕ್ಕೂ ಇದೇ ಕಾರಣವಿದೆ. ಮೊದಲು ಅವರು ಗುರಿ ಮಾಡಿಕೊಂಡಿದ್ದು ಆದಿಚುಂಚನಗಿರಿ ಮಠದ ಮೇಲೆ. ಮೂಲತಃ ನಾಥಪರಂಪರೆಗೆ ಸೇರಿದ ಈ ಮಠವು ಅವೈದಿಕ ನೆಲೆಯದ್ದಾಗಿತ್ತು. ಆದರೆ ಎಲ್ಲಾ ಬ್ರಾಹ್ಮಣೇತರ ಜಾತಿಗಳಿಗೂ, ಅದರಲ್ಲೂ ಅಂತಹ ಮಠಗಳಿಗೆ ತಾವು ಬ್ರಾಹ್ಮಣಶಾಹಿಯ ಜೊತೆಗೆ ಗುರುತಿಸಿಕೊಂಡರೇನೇ ಮಾನ್ಯತೆ ಎಂಬ ಭಾವನೆ. ಇದು ಕೀಳರಿಮೆಯಿಂದ ಕೂಡಿದ್ದೋ ಅಥವಾ ಅಧಿಕಾರದ ಹಂಬಲದಿಂದ ಬಂದಿದ್ದೋ ಹೇಳುವುದು ಕಷ್ಟ. ಹೀಗಾಗಿ ಬಾಲಗಂಗಾಧರನಾಥರನ್ನೇ ಆರೆಸ್ಸೆಸ್ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಕಷ್ಟವಾಗಿರಲಿಲ್ಲ.

ಈಗಂತೂ ಈ ವಿಚಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಗೌರಿ ಲಂಕೇಶ್ ಮರ್ಡರ್ ಕೇಸಿನಲ್ಲಿ ಬಂಧಿತನಾಗಿರುವ ಹೊಟ್ಟೆ ನವೀನನನ್ನು ಸನಾತನ ಸಂಸ್ಥೆಯ ಸುಜಿತ್ ಅಲಿಯಾಸ್ ಪ್ರವೀಣ್ ಮಾತಾಡಿಸಿ ಗೌರಿ ಲಂಕೇಶ್ ಹತ್ಯೆಯ ಯೋಜನೆಯ ಸುದ್ದಿ ತಿಳಿಸಿದ್ದು ವಿಜಯನಗರದ ಆದಿಚುಂಚನಗಿರಿ ಮಠದ ಕಾರ್ಯಕ್ರಮಕ್ಕೆ ಬಂದಿದ್ದಾಗಲೇ. ಅಲ್ಲಿ ಹಿಂದೂ ಜನಜಾಗೃತಿ ಸಮಿತಿ ಎಂಬ ಸನಾತನ ಸಂಸ್ಥೆಯ ಸೋದರ ಸಂಘಟನೆಯ ಕಾರ್ಯಕ್ರಮಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಆರೆಸ್ಸೆಸ್ ಮತ್ತು ಸನಾತನ ಸಂಸ್ಥೆಗಳು ಒಂದಕ್ಕೊಂದು ಸಂಬಂಧವಿಲ್ಲದಂತೆ ತೋರಿಸಿಕೊಂಡರೂ, ಅಸಲೀ ಸತ್ಯ ಗೊತ್ತಿದ್ದವರಿಗೆಲ್ಲಾ ಗೊತ್ತಿದೆ.

ಗೌರಿ ಲಂಕೇಶರ ಹತ್ಯೆಯ ಕೇಸಿನ ವಿಚಾರಣೆಯಲ್ಲಿ ಹೊಟ್ಟೆ ನವೀನನನ್ನು ಇಲ್ಲಿಯೇ ಮಾತಾಡಿಸಲಾಯಿತು ಎಂಬುದು ಚಾರ್ಜ್‍ಶೀಟ್‍ನಲ್ಲಿ ಪ್ರಸ್ತಾಪವಾದ ನಂತರವೂ, ಈ ಮಠದಲ್ಲಿ ಎರಡು ಸಭೆಗಳು ನಡೆದಿವೆ. ಜಯಂತ್ ಬಾಲಾಜಿ ಅತಾವಳೆ ಸನಾತನ ಸಂಸ್ಥೆಯ ಸ್ಥಾಪಕನ ಜಯಂತಿಯು 2019ರ ಮೇ 18ರಂದು ನಡೆಯಿತು ಮತ್ತು ಆ ಕಾರ್ಯಕ್ರಮದಲ್ಲಿ ಮಠದ ಉಸ್ತುವಾರಿ ಸೌಮ್ಯನಾಥ ಸ್ವಾಮೀಜಿಯೂ ಪಾಲ್ಗೊಂಡು ಭಾಷಣ ಮಾಡಿದರು. ಅದರಲ್ಲಿ ಅತಾವಳೆಯನ್ನೂ ಹೊಗಳಿ ಮಾತಾಡಿದರು. ಅವರ ಸಾರ್ಥಕ ಬದುಕು ಮತ್ತು ಮಾರ್ಗದರ್ಶನವು ಹಿಂದೂ ಸಮಾಜಕ್ಕೆ ಬೇಕೆಂದು ಹೇಳಿದರು. ಅಂದ ಹಾಗೆ ಈ ಹೊಟ್ಟೆ ನವೀನ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹುಡುಗ ಮತ್ತು ಇದೀಗ ಪಶ್ಚಾತ್ತಾಪ ಪಡುತ್ತಾ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ.

ಒಕ್ಕಲಿಗರ ಮೇಲೆ ಕೇಂದ್ರೀಕರಿಸಬೇಕು ಎಂಬ ಉದ್ದೇಶ ಇರುವುದರಿಂದ ಮತ್ತು ಆ ಕೆಲಸವನ್ನು ಇದುವರೆಗೆ ಆರ್.ಅಶೋಕ್ ಯಶಸ್ವಿಯಾಗಿ ಮಾಡಿಲ್ಲ ಹಾಗೂ ಸಿ.ಟಿ.ರವಿ ಮೈಸೂರು ಭಾಗದಲ್ಲಿ ಇದನ್ನು ಮಾಡುವುದು ಸುಲಭವಿಲ್ಲ ಎಂಬ ಕಾರಣದಿಂದಲೇ ಬೆಂಗಳೂರಿನ ಸಿ.ಎನ್.ಅಶ್ವತ್ಥನಾರಾಯಣರನ್ನು ಉಪಮುಖ್ಯಮಂತ್ರಿ ಮಾಡಲಾಗಿದೆ ಎಂಬುದನ್ನೂ ಇಲ್ಲಿ ಗಮನಿಸಬೇಕು.

ಇವೆಲ್ಲದರ ಮುಂದುವರೆದ ಭಾಗವಾಗಿಯೇ ಮಂಡ್ಯದಿಂದ ಕೇವಲ 3 ಕಿ.ಮೀ. ದೂರವಿರುವ ಸಾತನೂರಿನಲ್ಲಿ ಇದೀಗ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಎಂಬ ಸಂಘಪರಿವಾರದ ಅಷ್ಟು ಪ್ರಚಾರದಲ್ಲಿಲ್ಲದ ಅಂಗಸಂಘಟನೆಯೊಂದು ‘ರಾಷ್ಟ್ರೀಯವಾದಿಗಳ ಸಮ್ಮೇಳನ’ವನ್ನು ಆಯೋಜಿಸಿದೆ. ಅದರಲ್ಲಿ ಪೌರತ್ವ ಕಾಯ್ದೆಯ ವಿಚಾರದಿಂದ ಹಿಡಿದು, ಟಿಪ್ಪು ಮತ್ತು ಮೇಲುಕೋಟೆಯ ತನಕ ಹತ್ತು ಹಲವು ಸಂಗತಿಗಳನ್ನು ಚರ್ಚಿಸಲಾಗಿದೆ. ಕಳೆದ ತಿಂಗಳು (ಫೆ.23) ನಡೆದ ಈ ಕಾರ್ಯಕ್ರಮದಲ್ಲಿ ‘ಕಾವೇರಿ ಡಿಬೇಟ್’ ಕುರಿತಾದ ಕ್ರಿಯಾಯೋಜನೆಯನ್ನು ಮಂಡಿಸಲಾಗಿದೆ. ಅಂದರೆ ಕಾವೇರಿ ಬೆಲ್ಟ್‌ಅನ್ನು ಕೇಂದ್ರೀಕರಿಸುತ್ತಿರುವ ಹಿನ್ನೆಲೆಯಲ್ಲಿ ತಮಗೆ ಬೇಕಾದ ಕಥನವನ್ನು ಸೃಷ್ಟಿಸುವ ಕೆಲಸ ಯೋಜಿತವಾಗಿ ಸಾಗಿದೆ ಎಂಬುದರಲ್ಲಿ ಸಂಶಯವೇ ಇಲ್ಲ.

ಸಂಘಪರಿವಾರದ ಬೆಳವಣಿಗೆಗೆ ಬೇಕಾದ ವ್ಯವಸ್ಥಿತ ಯೋಜನೆಯೊಂದು ಸದ್ದಿಲ್ಲದೇ ಜಾರಿಯಾಗುತ್ತಿದೆ ಎಂಬುದನ್ನು ಮೇಲಿನ ಹಲವು ಸಂಗತಿಗಳು ಬಿಚ್ಚಿಡುತ್ತಿವೆ. ಹತ್ತು ಹಲವು ಬಗೆಯಲ್ಲಿ ವಿಘಟಿತವಾಗಿರುವ ‘ಮಂಡ್ಯ ಪ್ರಜ್ಞೆ’ಯ ಪ್ರತಿನಿಧಿಗಳು ಇದನ್ನು ವ್ಯವಸ್ಥಿತವಾಗಿ ಎದುರಿಸಬಲ್ಲರೇ ಎಂಬುದು ಮುಂದಿನ ದಿನಗಳಲ್ಲಿ ತೀರ್ಮಾನವಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...