Homeಚಳವಳಿಇರಾನಿನ ಮೊದಲ ಮಹಿಳಾ ನ್ಯಾಯಮೂರ್ತಿ ಶಿರಿನ್ ಇಬಾದಿಯ ಹೋರಾಟದ ಕಥೆ

ಇರಾನಿನ ಮೊದಲ ಮಹಿಳಾ ನ್ಯಾಯಮೂರ್ತಿ ಶಿರಿನ್ ಇಬಾದಿಯ ಹೋರಾಟದ ಕಥೆ

- Advertisement -
- Advertisement -

ತಮ್ಮ ಸಾಮರ್ಥ್ಯದಿಂದ ಶಿರಿನ್ ಇಬಾದಿ ಇರಾನಿನ ಮೊದಲ ಮಹಿಳಾ ನ್ಯಾಯಮೂರ್ತಿಯಾದರು. 1975ರಲ್ಲಿ ಇಸ್ಲಾಮಿಕ್ ರೆವಲ್ಯೂಶನ್ ಚುನಾವಣೆಯಲ್ಲಿ ಗೆದ್ದು ಬಂದಿತು. ಆಗ ಸಂಪ್ರದಾಯವಾದಿ ಧಾರ್ಮಿಕರು ಮಹಿಳೆಯು ನ್ಯಾಯಾಧೀಶೆಯಾಗಿರುವುದನ್ನು ವಿರೋಧಿಸಿ ಪ್ರತಿರೋಧ ಒಡ್ಡಿದರು. ನ್ಯಾಯಮೂರ್ತಿಯಾಗಿದ್ದವರನ್ನು ನ್ಯಾಯಾಲಯದಲ್ಲೇ ಗುಮಾಸ್ತೆಯಾಗಿರುವಂತೆ ಸೂಚಿಸಿತು.

ಇತ್ತೀಚೆಗೆ ಜೆಎನ್‍ಯುನಲ್ಲಿ ರಾಜಕೀಯ ಮತ್ತು ಮತೀಯ ಶಕ್ತಿಗಳು ಒಗ್ಗೂಡಿ ನಡೆಸಿದ ದಾಳಿಯಲ್ಲಿ ವಿದ್ಯಾರ್ಥಿ ಮುಂದಾಳು ಆಯಿಶಾ ಘೋಶ್ ಮತ್ತು ಇತರ ವಿದ್ಯಾರ್ಥಿಗಳು, ಹಾಗೂ ಪ್ರಾಧ್ಯಾಪಕರೂ ಗಾಯಗೊಂಡರು. ಅದರಂತೆಯೇ 1999ರಲ್ಲಿ ನಾಗರಿಕ ಪೋಷಾಕಿನ ರಾಜಕೀಯ ಶಕ್ತಿಗಳು ಟೆಹ್ರಾನ್ ವಿಶ್ವವಿದ್ಯಾಲಯದ ಹಾಸ್ಟೆಲ್ ಮೇಲೆ ದಾಳಿ ಮಾಡಿದ್ದವು. ಅವರ ಗುರಿ ಧರ್ಮಾತೀತವಾಗಿ ಮಾನವ ಹಕ್ಕುಗಳನ್ನು ಪ್ರತಿಪಾದಿಸುವ ಮತ್ತು ಕಟ್ಟರ್ ಚಾಳಿಯ ರಾಜಕೀಯ ವ್ಯವಸ್ಥೆಯನ್ನು ಪ್ರತಿಭಟಿಸುವ ಯುವ ಸಮೂಹದ ಮೇಲಾಗಿತ್ತು. ವಿದ್ಯಾರ್ಥಿ ದಂಗೆ ಎಂದು ತಿರುಚಲ್ಪಡುವ ಉದ್ದೇಶದಿಂದ ಕರೆಯಲಾದ ಆ ಆಕ್ರಮಣದಲ್ಲಿ ರಕ್ಷಣಾ ಸಿಬ್ಬಂದಿಯು ಇಜ್ಜತ್ ಇಬ್ರಾಹಿಂ ನಿಜಾಬ್ ಎಂಬ ವಿದ್ಯಾರ್ಥಿಯನ್ನು ಗುಂಡಿಟ್ಟು ಕೊಂದಿದ್ದೇ ಅಲ್ಲದೇ ಪೊಲೀಸರೆನಿಸಿಕೊಂಡವರೇ ಅತ್ಯಂತ ಹಿಂಸಾತ್ಮಕ ದಾಳಿಯನ್ನು ವಿದ್ಯಾರ್ಥಿಗಳ ಮೇಲೆ ನಡೆಸಿದರು. ಇಬ್ರಾಹಿಂನನ್ನು ಕೊಂದವರಾರೂ ವಿಚಾರಣೆಗೆ ಒಳಪಡಲಿಲ್ಲ ಮತ್ತು ಆ ಪೊಲೀಸರೂ ಕೂಡಾ ಕಾನೂನಿನಿಂದ ತಪ್ಪಿಸಿಕೊಂಡರು. ಇಬ್ರಾಹಿಂನ ಮನೆಯವರ ಪರವಾಗಿ ನಿಂತು ಪ್ರಕರಣವನ್ನು ನ್ಯಾಯಾಲಯದಲ್ಲಿ ನ್ಯಾಯಕ್ಕಾಗಿ ಹೋರಾಡಿದ್ದು ಶಿರಿನ್ ಇಬಾದಿ.

ಇಬ್ರಾಹಿಂನ ತಂದೆ ತಾಯಿ ಮತ್ತು ಕುಟುಂಬದ ಇತರ ಸದಸ್ಯರು ಶವವನ್ನೂ ಕೂಡಾ ನೋಡಲು ಬಿಡದಂತೆ ಗುಂಪುಗಳು ಅವರ ಮೇಲೆ ಕಲ್ಲುಗಳನ್ನು ತೂರಾಡುತ್ತಾ ದಾಳಿ ಮಾಡಿತ್ತು. ಅದಕ್ಕಾಗಿ ನೀವು ಮಗನ ಸಮಾಧಿಗೆ ಹೋಗಬೇಡಿ ಎಂದು ಸರ್ಕಾರ ಅವರ ಮೇಲೆ ನಿಷೇಧ ಹೇರಿದ್ದು ದುರದೃಷ್ಟಕರ.

ಇಂತಹ ಪ್ರಕರಣಗಳಿಗೆ ಬೆಂಬಲವಾಗಿ ಹೋರಾಡುವ ಮಾನವಹಕ್ಕುಗಳ ನ್ಯಾಯವಾದಿಯಾಗಿದ್ದ ಮತ್ತು ನೊಬಲ್ ಶಾಂತಿ ಪ್ರಶಸ್ತಿ ವಿಜೇತರಾದ ಎಪ್ಪತ್ತೆರಡು ವರ್ಷದ ಶಿರಿನ್ ಇಬಾದಿ ರಾಜಕೀಯ ಹೋರಾಟಗಾರ್ತಿ. ಪ್ರಜಾಪ್ರಭುತ್ವ ಮತ್ತು ಮಾನವಹಕ್ಕುಗಳಿಗಾಗಿ ಇರಾನಿನಲ್ಲಿ ಹೋರಾಡುತ್ತಿದ್ದಾರೆ. ಅದರಲ್ಲೂ ಮಹಿಳೆ, ಮಕ್ಕಳು ಮತ್ತು ನಿರ್ಗತಿಕ ವಲಸೆಗಾರರ ಹಕ್ಕುಗಳಿಗಾಗಿ ಹೋರಾಡಿದವರು. ಡಿಫೆಂಡರ್ಸ್ ಆಫ್ ಹ್ಯೂಮನ್ ರೈಟ್ಸ್ ಸೆಂಟರನ್ನು ಸ್ಥಾಪಿಸಿದರು. ನೊಬಲ್ ಪ್ರಶಸ್ತಿಯನ್ನು ಪಡೆದ ಮೊದಲ ಮುಸ್ಲಿಂ ಮಹಿಳೆ, ಅದರಲ್ಲೂ ಮೊದಲ ಇರಾನಿ ಮಹಿಳೆ (2003) ಅವರಾಗಿದ್ದರು. ಆದರೆ ಅವರು ಪಡೆದ ನೊಬಲ್ ಪ್ರಶಸ್ತಿ ಸಂಪ್ರದಾಯವಾದಿ ಮಾಧ್ಯಮಗಳಿಗೂ ಮತ್ತು ಸರಕಾರಕ್ಕೇನೂ ಖುಷಿಯಾಗಲಿಲ್ಲ. ಬದಲಾಗಿ ಇದೇ ಮೊದಲ ಬಾರಿಗೆ ಇರಾನಿ ಸರಕಾರವು ಪ್ರಶಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತು. ಟೆಹ್ರಾನಿನಲ್ಲಿ ನೆಲೆಸಿದ್ದ ಶಿರಿನ್ ಸರ್ಕಾರದ ಆಡಳಿತವನ್ನು ಟೀಕಿಸಿ ಅಲ್ಲಿನ ಜನರ ಉಪದ್ರವ ತಡೆಯಲಾರದೇ ಗಡಿಪಾರಾಗಿ ಇಂಗ್ಲೆಂಡಿನಲ್ಲಿ ಆಶ್ರಯ ಪಡೆದಿದ್ದರು. ಫೋಬ್ಸ್ ಪತ್ರಿಕೆ ಗುರುತಿಸಿದ್ದ ನೂರು ಪ್ರಭಾವಿ ಮಹಿಳೆಯರಲ್ಲಿ ಇವರೂ ಒಬ್ಬರು.

ತಮ್ಮ ಸಾಮರ್ಥ್ಯದಿಂದ ಇವರು ಇರಾನಿನ ಮೊದಲ ಮಹಿಳಾ ನ್ಯಾಯಮೂರ್ತಿಯಾದರು. 1975ರಲ್ಲಿ ಇಸ್ಲಾಮಿಕ್ ರೆವಲ್ಯೂಶನ್ ಚುನಾವಣೆಯಲ್ಲಿ ಗೆದ್ದು ಬಂದಿತು. ಆಗ ಸಂಪ್ರದಾಯವಾದಿ ಧಾರ್ಮಿಕರು ಮಹಿಳೆಯು ನ್ಯಾಯಾಧೀಶೆಯಾಗಿರುವುದನ್ನು ವಿರೋಧಿಸಿ ಪ್ರತಿರೋಧ ಒಡ್ಡಿದರು. ನ್ಯಾಯಮೂರ್ತಿಯಾಗಿದ್ದವರನ್ನು ನ್ಯಾಯಾಲಯದಲ್ಲೇ ಗುಮಾಸ್ತೆಯಾಗಿರುವಂತೆ ಸೂಚಿಸಿತು. ಆದರೆ ಶಿರಿನ್ ಮತ್ತು ಇತರ ಮಹಿಳಾ ನ್ಯಾಯಮೂರ್ತಿಗಳು ಕರ್ಮಠರ ವಿರುದ್ಧ ಪ್ರತಿಭಟನೆ ಮಾಡಿದರು. ಇವರ ಪ್ರತಿಭಟನೆಗೆ ಪ್ರತಿಯಾಗಿ ಆಡಳಿತ ವ್ಯವಸ್ಥೆಯು ನ್ಯಾಯಮೂರ್ತಿಗಳಾಗುವ ಬದಲು ಸ್ವಲ್ಪ ಉನ್ನತಸ್ಥಾನವಾದ ಕಾನೂನುತಜ್ಞರ ಪದವಿಗೆ ಇವರನ್ನು ಸೀಮಿತಗೊಳಿಸಿತು. ಸ್ವಯಂನಿವೃತ್ತಿ ಘೋಷಿಸಿಕೊಂಡ ಶಿರಿನ್ ಬದಲಾಗದ ಆಡಳಿತ ವ್ಯವಸ್ಥೆಯಿಂದ ಹೊರಗೆ ಬಂದರು. ಆದರೆ ಅವರು ನ್ಯಾಯವಾದಿಯಾಗಿ ಮುಂದುವರಿಯಲು ಅವರಿಗೆ ಅವಕಾಶ ಕೊಡಲಿಲ್ಲ. ಅದಕ್ಕಾಗಿ ಅವರು ಸಲ್ಲಿಸುತ್ತಿದ್ದ ಅರ್ಜಿಗಳನ್ನು ಪದೇಪದೇ ತಿರಸ್ಕರಿಸಲಾಯಿತು. ಆದರೆ ಅವರು 1993ರಲ್ಲಿ ತಮ್ಮ ವಕೀಲರ ಕಚೇರಿಯನ್ನು ತೆರೆದಿದ್ದರು. ನ್ಯಾಯವಾದಿಯಾಗಿ ತಾವು ತಿರಸ್ಕೃತರಾಗಿದ್ದ ಆ ಸಮಯವನ್ನು ಪತ್ರಿಕೆಗಳಿಗೆ ಲೇಖನಗಳನ್ನು ಬರೆಯಲು ಮತ್ತು ಪುಸ್ತಕ ಬರೆಯಲು ಉಪಯೋಗಿಸಿಕೊಂಡರು.

ವಕೀಲೆಯಾಗಿ ಕೇಸುಗಳನ್ನು ಅವರು ತೆಗೆದುಕೊಂಡಿದ್ದು ಹೆಚ್ಚಾಗಿ ಮಕ್ಕಳ ಮತ್ತು ಹೆಂಗಸರ ಕುರಿತಾದ ಅಂತರಾಷ್ಟ್ರೀಯ ಪ್ರಕರಣಗಳನ್ನು ಮತ್ತು ಪತ್ರಿಕೆಗಳು ಎದುರಿಸುತ್ತಿದ್ದ ಪ್ರಕರಣಗಳನ್ನು. ಜೊತೆಯಲ್ಲಿ ಮಾನವ ಹಕ್ಕಿನ ವಿಷಯವಾಗಿ ವಿಶ್ವವಿದ್ಯಾಲಯದಲ್ಲಿ ಪಾಠ ಮಾಡುತ್ತಿದ್ದರು. ಟೆಹರಾನಿನ ಯುನಿಸೆಫ್ ಪ್ರಾಯೋಜಕತ್ವದಲ್ಲಿ ಅನೇಕ ಯೋಜನೆಗಳನ್ನು ಮಾಡಿದ್ದಾರೆ. ಮಕ್ಕಳ ಮತ್ತು ಮಾನವ ಹಕ್ಕುಗಳ ಕುರಿತಾಗಿ ತಿಳಿವಳಿಕೆ ನೀಡಲು ಅನೇಕ ವೇದಿಕೆಗಳನ್ನು ಬಳಸಿಕೊಳ್ಳುತ್ತಾರೆ. ಹಾಗೆಯೇ ನೀಡುತ್ತಾರೆ ಕೂಡಾ.

ಇದರಿಂದಾಗಿ ಇವರಿಗೆ ಇರುವ ಜೀವ ಬೆದರಿಕೆ ಅಷ್ಟಿಷ್ಟಲ್ಲ. ಒಂದಲ್ಲಾ ಒಂದು ಬಗೆಯ ಆಕ್ರಮಣಕ್ಕೆ ತುತ್ತಾಗುತ್ತಲೇ ಇರುತ್ತಾರೆ. ಜೊತೆಗೆ ಇವರ ಕುಟುಂಬವೂ ಕೂಡ ಭೀತಿಯ ಜೀವನವನ್ನು ಸಾಗಿಸುತ್ತಿದೆ. ಸರ್ಕಾರ, ಪೊಲೀಸ್ ವ್ಯವಸ್ಥೆ, ನ್ಯಾಯಾಂಗ ವ್ಯವಸ್ಥೆ ಮತ್ತು ಮತೀಯ ನಾಗರಿಕರು ಎಲ್ಲರೂ ಇವರ ಮತ್ತು ಇವರಂತಹ ಮಾನವ ಹಕ್ಕುಗಳ ಹೋರಾಟಗಾರರ ವಿರುದ್ಧವೇ ಇದ್ದಾರೆ.

ಶಿರಿನ್ ಇಬಾದಿಯವರು ಮಾಡುವ ದ್ರೋಹಗಳಿವು ಎಂದು ಆರೋಪಿಸುವವರ ಪಟ್ಟಿಯಲ್ಲಿ ಏನೇನಿವೆ ನೋಡಿ.

1. ಇರಾನಿನ ಅಲ್ಪಸಂಖ್ಯಾತರಾಗಿರುವ ಬಹಾಯಿ ಶ್ರದ್ಧೆಯುಳ್ಳವರೊಂದಿಗೆ ಸಂಪರ್ಕವಿದೆ ಮತ್ತು ಅವರ ನಾಗರಿಕ ಹಕ್ಕುಗಳಿಗೆ ಹೋರಾಡುತ್ತಾರೆ.
2. ಸಲಿಂಗ ಕಾಮವನ್ನು ಸಮರ್ಥಿಸಿ ಸಲಿಂಗ ಕಾಮಿಗಳನ್ನು ಕಾನೂನಾತ್ಮಕವಾಗಿ ರಕ್ಷಿಸಲು ಮುಂದಾಗುತ್ತಾರೆ.
3. ಹಿಜಾಬ್ ಧರಿಸದೆಯೇ ಹೊರಗೆ ಬರುತ್ತಾರೆ ಮತ್ತು ತಮ್ಮ ಕಾರ್ಯಕ್ಷೇತ್ರಗಳಲ್ಲಿ ಸುತ್ತಾಡುತ್ತಾರೆ.
4. ಇಸ್ಲಾಂ ಕಾನೂನು ವಿಧಿಸುವ ಶಿಕ್ಷೆಗಳನ್ನು ಪ್ರಶ್ನಿಸುತ್ತಾರೆ.
5. ಇವರ ಮಗಳು ನರ್ಗೀಸ್ ಬಹಾಯಿ ಶ್ರದ್ಧೆಯನ್ನು ಅಂಗೀಕರಿಸಿ ಇಸ್ಲಾಮಿಕ್ ರಿಪಬ್ಲಿಕ್ ಪ್ರಕಾರ ಶಿಕ್ಷಾರ್ಹ ಅಪರಾಧವನ್ನು ಮಾಡಿದ್ದಾಳೆ.
ಇವುಗಳನ್ನು ಮುಂದಿಟ್ಟುಕೊಂಡು ಇರಾನಿ ಸರ್ಕಾರವು ಶಿರಿನ್‍ರವರ ಮಾನವ ಹಕ್ಕುಗಳ ಕಾರ್ಯಾಲಯವನ್ನು ಮುಚ್ಚಿಸಿತು. ತನ್ನ ಮೇಲಾಗುತ್ತಿರುವ ಎಲ್ಲಾ ಬಗೆಯ ದಾಳಿಗಳನ್ನೂ ಎದುರಿಸುತ್ತಾ ಶಿರಿನ್ ತಮ್ಮ ಹೋರಾಟಗಳನ್ನು ಮುಂದುವರೆಸಿದ್ದಾರೆ. 2018ರ ಸಂದರ್ಶನವೊಂದರಲ್ಲಿ ಅವರು ಹೇಳಿದ್ದೇನೆಂದರೆ, “ಇರಾನಿನಲ್ಲಿ ಇಸ್ಲಾಮಿಕ್ ರಿಪಬ್ಲಿಕನ್ನು ಯಾರೂ ಹೇಗೂ ಸರಿಪಡಿಸಲಾಗದು” ಎಂದು. ಇದು ಹತಾಶಾ ಭಾವವೋ ಅಥವಾ ಹದಿನೆಂಟನೆಯ ಶತಮಾನದ ಅಂತ್ಯದಿಂದ ನಡೆಯುತ್ತಿರುವ ಹೋರಾಟದ ಮುಂದುವರಿದ ಭಾಗವಾಗಿ ನುಡಿದ ಅನುಭವವೋ – ಗೊತ್ತಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಹೊತ್ತಿ ಉರಿಯುತ್ತಿರುವ ಮಣಿಪುರ’: ಶತಮಾನದ ಬೆಂಕಿಗೆ ತುಪ್ಪ ಸುರಿದ ಬಿಜೆಪಿಯ ಕೋಮುರಾಜಕಾರಣ

ಭಾರತದ ಈಶಾನ್ಯ ರಾಜ್ಯ ಮಣಿಪುರ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಶತಮಾನಗಳಿಂದ ಹೊಗೆಯಾಡುತ್ತಿದ್ದ ಹಗೆತನಕ್ಕೆ ಕೋಮುರಾಜಕಾರಣದ ಬಣ್ಣ ಬಳಿದ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಮಣಿಪುರದ ಜನರತ್ತ ತಿರುಗಿಯೂ ನೋಡುತ್ತಿಲ್ಲ. 2023ರಲ್ಲಿ ಭುಗಿಲೆದ್ದ ಉದ್ವಿಗ್ನತೆ...

ಮಧ್ಯಪ್ರದೇಶ| ದಲಿತ ದಂಪತಿಗೆ ಹನುಮಾನ್ ದೇಗುಲ ಪ್ರವೇಶ ನಿರಾಕರಣೆ; ಸಾಮಾಜಿಕ ಬಹಿಷ್ಕಾರ

ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಹನುಮಾನ್ ದೇವಸ್ಥಾನಕ್ಕೆ ನವವಿವಾಹಿತ ದಲಿತ ದಂಪತಿಗೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ಗ್ರಾಮದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿದೆ. ಈ ಘಟನೆಯು ಜಾತಿ ಆಧಾರಿತ ತಾರತಮ್ಯದ ಕುರಿತು ಕಳವಳ...

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...