Homeಕರ್ನಾಟಕ’ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಉಪಯೋಜನೆ’ಯಲ್ಲಿನ ವಂಚನೆಗಳು!

’ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಉಪಯೋಜನೆ’ಯಲ್ಲಿನ ವಂಚನೆಗಳು!

ಶತಮಾನಗಳಿಂದ ಶೋಷಣೆ/ದಮನಕ್ಕೆ ಒಳಗಾದ ತಳ ಸಮುದಾಯಗಳಿಗೆ ಸಮಾಜೋ-ಆರ್ಥಿಕ ನ್ಯಾಯ ಒದಗಿಸಲು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳಿಗೆ ಸಮಾಜೋ-ಆರ್ಥಿಕ ನ್ಯಾಯ ಒದಗಿಸಲು ಈ ಯೋಜನೆಯನ್ನು ಜಾರಿಗೊಳಿಸಲಾಗಿತ್ತು

- Advertisement -
- Advertisement -

ಶತಮಾನಗಳಿಂದ ಶೋಷಣೆ/ದಮನಕ್ಕೆ ಒಳಗಾದ ತಳ ಸಮುದಾಯಗಳಿಗೆ ಸಮಾಜೋ-ಆರ್ಥಿಕ ನ್ಯಾಯ ಒದಗಿಸಲು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳಿಗೆ “ಎಸ್‌ಸಿಎಸ್‌ಪಿ/ಟಿಎಸ್‌ಪಿ” (ಪರಿಶಿಷ್ಟ ಜಾತಿ ಉಪಯೋಜನೆ/ ಪರಿಶಿಷ್ಟ ಪಂಗಡ ಉಪಯೋಜನೆ) ಯೋಜನೆಯನ್ನು ಜಾರಿಗೊಳಿಸಲಾಯಿತು. ಕರ‍್ನಾಟಕದಲ್ಲಿ ಅದನ್ನು ಪರಿಶ್ಕರಿಸಿ 2013ರಲ್ಲಿ “ಎಸ್‌ಸಿಎಸ್‌ಪಿ/ಟಿಎಸ್‌ಪಿ (ಯೋಜನೆ, ಹಂಚಿಕೆ, ಹಣಕಾಸು ಸಂಪನ್ಮೂಲದ ಬಳಕೆ) ಕಾಯಿದೆ” ಜಾರಿಗೊಳಿಸಲಾಯಿತು.

2011ರ ಜನಗಣತಿಯ ಆದಾರದಲ್ಲಿ “ಎಸ್‌ಸಿಎಸ್‌ಪಿ/ಟಿಎಸ್‌ಪಿ” ಯೋಜನೆಗೆ ಪ್ರತಿ ಇಲಾಖೆಯು ಶೇ.24.1 ಪ್ರಮಾಣದ ಆರ್ಥಿಕ ಅನುದಾನವನ್ನು ಮೀಸಲಿಡಬೇಕು. ಇದರ ಅನುಸಾರ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವ್ಯಕ್ತಿಗೆ/ಕುಟುಂಬಕ್ಕೆ ಈ ಯೋಜನೆಯ ಅನುದಾನವು ನೇರವಾಗಿ ತಲುಪಬೇಕು. ಯೋಜನೆಗಳನ್ನು ರೂಪಿಸುವುದಕ್ಕೂ ಮೊದಲು ರಾಜ್ಯ ಮಟ್ಟದ ನೋಡಲ್ ಏಜೆನ್ಸಿ ಸಂಬಂದಪಟ್ಟ ಸಮುದಾಯಗಳೊಂದಿಗೆ ಸಮಾಲೋಚಿಸಬೇಕು. ಖರ್ಚಿನ ವಿವರಗಳು ಪಾರದರ್ಶಕವಾಗಿರಬೇಕು, ಇದರ ಸಮರ್ಪಕ ಜಾರಿಯ ಕುರಿತು ನಿಗಾ ವಹಿಸಲು ಒಂದು ಅಂತರ್ಜಾಲ ತಾಣವನ್ನು ಆರಂಬಿಸಬೇಕು, ಈ ಯೋಜನೆಯ ಜಾರಿಯಾಗಿರುವುದರ ವಿವರಗಳನ್ನು ಕಾಲಕಾಲಕ್ಕೆ ಪ್ರಕಟಿಸಬೇಕು. ಮತ್ತು ಮುಖ್ಯವಾಗಿ ಈ ಯೋಜನೆಗೆ ಮೀಸಲಿಟ್ಟ ಹಣವನ್ನು ಸಾಮಾನ್ಯ ಯೋಜನೆಗಳಿಗೆ ಬಳಸಿಕೊಳ್ಳಬಾರದು.

PC: Mahima A Jain

ಇದನ್ನೂ ಓದಿ: ‘ಮಹಾಡ್ – ಮೊದಲ ದಲಿತ ಬಂಡಾಯ’ ಪುಸ್ತಕದ ಆಯ್ದ ಭಾಗಗಳು

ಆದರೆ ಈ ಎಲ್ಲಾ ನಿಯಾಮವಳಿಗಳು ಕೇವಲ ಕಾಗದದ ಮೇಲೆ ಮಾತ್ರ ಉಳಿದುಕೊಂಡಿವೆ. ಮೊದಲಿಗೆ ಜಿಲ್ಲಾ ಮಟ್ಟದ ಪರಿಶೀಲನ ಸಮಿತಿಗಳನ್ನು ಸೂಕ್ತವಾಗಿ ರಚಿಸಲ್ಪಟ್ಟಿರುವುದಿಲ್ಲ, ಮತ್ತು ರಚಿತಗೊಂಡ ಸಮಿತಿಗಳು ಕಾಲ ಕಾಲಕ್ಕೆ ಸಬೆಗಳನ್ನು ನಡೆಸುವುದಿಲ್ಲ. ಇನ್ನು ಇಲ್ಲಿನ ಬಹುತೇಕ ಅದಿಕಾರಿಗಳಿಗೆ ಈ ಯೋಜನೆ ಕುರಿತು ಯಾವುದೇ ತಿಳುವಳಿಕೆಯಿರುವುದಿಲ್ಲ ಮತ್ತು ಅವರಿಗೆ ತರಬೇತಿಯನ್ನು ಸಹ ಕೊಟ್ಟಿರುವುದಿಲ್ಲ.

ದಲಿತ ಸಂಘಟನೆಗಳು “ಎಸ್‌ಸಿಎಸ್‌ಪಿ/ಟಿಎಸ್‌ಪಿ ಹೆಸರಿನಲ್ಲಿ ಪ್ರತ್ಯೇಕವಾಗಿ ಎರಡು ಬ್ಯಾಂಕ್ ಖಾತೆ ತೆರೆಯಬೇಕು ಮತ್ತು ಈ ಖಾತೆಯನ್ನು ನೋಡಲ್ ಇಲಾಖೆಗಳು ನಿರ್ವಹಿಸಬೇಕು. ಈ ಯೋಜನೆಯ ನಿಗಾ ವಹಿಸಲು ಲೋಕಪಾಲರನ್ನು ನೇಮಿಸಬೇಕು” ಎಂದು ಆಗ್ರಹಪಡಿಸಿದ್ದರು. ಈ ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಯನ್ನು ವಿಶ್ಲೇಷಿಸಿದಾಗ ಮೇಲಿನ ಎಲ್ಲಾ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ ಮತ್ತು ತಮಾಶೆಯೆಂದರೆ ಸಬಂದಪಟ್ಟ ಅದಿಕಾರಿಗಳಿಗೆ ಯಾವುದೇ ವಿಚಾರಣೆ ನಡಸಿಲ್ಲ

2020-21ರ ಹಣಕಾಸು ವರ್ಶವನ್ನು ಪರಿಶೀಲನೆ ಮಾಡೋಣ. ಈ ವರ್ಶಕ್ಕೆ ಎಸ್‌ಸಿಎಸ್‌ಪಿ/ಟಿಎಸ್‌ಪಿಗೆ 27,699.52 ಕೋಟಿ ಮೊತ್ತವನ್ನು ಹಂಚಿಕೆ ಮಾಡಲಾಯಿತು. ಆದರೆ ನಂತರ 1,084 ಕೋಟಿಯನ್ನು ಕಡಿತಗೊಳಿಸಲಾಯಿತು. ನಂತರ ಉಳಿದ ಅನುದಾನ 26,614.69 ಕೋಟಿ. ಇದಕ್ಕೆ ಯಾವುದೇ ಕಾರಣವನ್ನು ಕೊಟ್ಟಲ್ಲ.

ಇದನ್ನೂ ಓದಿ: ದೇಶದಲ್ಲಿ ಹಚ್ಚಿರುವ ಕಿಚ್ಚು ಮುಸಲ್ಮಾನರನ್ನು ಮುಕ್ಕತೊಡಗಿದೆ. ಮುಂದಿನ ಸರದಿ ದಲಿತರದು, ಕ್ರೈಸ್ತರದು ಇದ್ದೀತು

ಎಸ್‌ಸಿಎಸ್‌ಪಿ ಯೋಜನೆ:

ಹಂಚಿಕೆ : 19,432.22 ಕೋಟಿ.
ಕಡಿತಗೊಳಿಸಿದ ನಂತರದ ಮೊತ್ತ : 18,659.65 ಕೋಟಿ.
ವೆಚ್ಚ : 5,856.84 ಕೋಟಿ (ಶೇಕಡ. 31%)
ಬಳಕೆಯಾಗದೆ ಉಳಿದ ಮೊತ್ತ : 12,802.81 ಕೋಟಿ.

ಟಿಎಸ್‌ಪಿ ಯೋಜನೆ:

ಹಂಚಿಕೆ : 8,267.30 ಕೋಟಿ.
ಕಡಿತಗೊಳಿಸಿದ ನಂತರದ ಮೊತ್ತ : 7,955.69 ಕೋಟಿ.
ವೆಚ್ಚ : 2307.25 ಕೋಟಿ (ಶೇಕಡ. 32%)
ಬಳಕೆಯಾಗದೆ ಉಳಿದ ಮೊತ್ತ : 5648.44 ಕೋಟಿ.

ಒಟ್ಟಾಗಿ 2020-21ರ ಎಸ್‌ಸಿಎಸ್‌ಪಿ/ಟಿಎಸ್‌ಪಿ ಗೆ ಕೇವಲ 8164 ಕೋಟಿ ವೆಚ್ಚವಾಗಿದ್ದರೆ, 18,451.25 ಕೋಟಿ ಬಳಕೆಯಾಗದೆ ಉಳಿದುಕೊಂಡಿದೆ

  • ಮೊದಲಿಗೆ ಅಗತ್ಯವಾದ ಹಣಕಾಸು ಮೊತ್ತವನ್ನು ಹಂಚಿಕೆ ಮಾಡಿಲ್ಲ.
  • ಎರಡನೆಯದಾಗಿ ಹಂಚಿಕೆಯಾದ ಮೊತ್ತವನ್ನು ಕಡಿತಗೊಳಿಸಲಾಗಿದೆ.
  • ಮೂರನೆಯದಾಗಿ ಕಡಿತಗೊಳಿಸದ ಮೊತ್ತದಲ್ಲಿ ಶೇಕಡಾ 31ರಶ್ಟನ್ನು ಮಾತ್ರ ವೆಚ್ಚ ಮಾಡಲಾಗಿದೆ ಮತ್ತು ಶೇಕಡಾ 69ರಶ್ಟನ್ನು ಬಳಸಿಕೊಂಡಿಲ್ಲ.
  • ನಾಲ್ಕನೆಯದಾಗಿ ವೆಚ್ಚ ಮಾಡಿದ ಮೊತ್ತವನ್ನು ಈ ಯೋಜನೆಗೆ ಬಳಸಿಕೊಂಡಿಲ್ಲ, ಇತರೆ ಸಾಮಾನ್ಯ ಕೆಲಸಗಳಿಗೆ ವೆಚ್ಚ ಮಾಡಿದ್ದಾರೆ.

ಇದನ್ನೂ ಓದಿ: ದಲಿತ ಸಮರ್ಥನೆಯ ಆದ್ಯಪ್ರವರ್ತಕನ ಪಾತ್ರವಹಿಸಿದ್ದ ಮೂಕನಾಯಕ

ಇದು ದ್ರೋಹದ ಕೆಲಸ. ಇದು ಒಂದು ಮಹಾವಂಚನೆ. ಉದಾಹರಣೆಗೆ ಎಸ್‌ಸಿಎಸ್‌ಪಿ/ಟಿಎಸ್‌ಪಿ ಗೆ ಮೀಸಲಿಟ್ಟ ಹಣವನ್ನು ಮೆಟ್ರೋ ರೈಲು ಕಾಮಗಾರಿಗೆ ಬಳಸಿಕೊಳ್ಳಲಾಗಿದೆ. ಬಸ್ ನಿಲ್ದಾಣಗಳ ನಿರ್ಮಾಣಕ್ಕೆ ವೆಚ್ಚ ಮಾಡಲಾಗಿದೆ. ಹೆದ್ದಾರಿಗಳ ಕಾಮಗಾರಿಗೆ ಬಳಸಿಕೊಳ್ಳಲಾಗಿದೆ. ಅಂದರೆ ಬ್ರಶ್ಟಾಚಾರಕ್ಕೆ ಭರಪೂರು ಅವಕಾಶವಿರುವ ‘ಕಾಮಗಾರಿ’ ಯೋಜನೆಗಳಿಗೆ ಈ ಆರ್ಥಿಕ ಅನುದಾನವನ್ನು ಬಳಸಿಕೊಳ್ಳಲಾಗಿದೆ. ಇದು ಶಿಕ್ಷಾರ್ಹ ಅಪರಾದವಾಗಿದೆ. ಆದರೆ ಇಲ್ಲಿ ಪ್ರಬುತ್ವವೇ ಈ ಬ್ರಶ್ಟಾಚಾರದಲ್ಲಿ ತೊಡಗಿಕೊಂಡಿರುವುದರಿಂದ ಇದರ ವಿರುದ್ದದ ಕೂಗು ಅರಣ್ಯರೋದನವಾಗಿದೆ.

ದಲಿತ ಬಹುಜನ ಸಂಘಟನೆಯು (ದಬಸ) ಈ ಹಿಂದೆ ರಾಜ್ಯದ ಅಬಿವೃದ್ದಿಗೂ ಮತ್ತು ಪ.ಜಾತಿ/ಪ.ಪಂಗಡದ ಅಬಿವೃದ್ದಿ ಸೂಚಕಗಳಿಗೂ ನಡುವಿನ ವ್ಯತ್ಯಾಸವನ್ನು ‘ಅಬಿವೃದ್ದಿಗಳ ಅಂತರ’ದ ಮೂಲಕ ವಿಶ್ಲೇಷಣೆ ಮಾಡಿದೆ.

‘ದಬಸ’ ಮುಂದಿಟ್ಟ ಮುಖ್ಯ ಪ್ರಶ್ನೆಗಳು:

  • ಬಡತನ ರೇಖೆಗಿಂತ ಮೇಲಿರುವ ಪ.ಜಾತಿ/ಪ.ಪಂಗಡದ ಜನಸಂಖ್ಯೆಯ ಪ್ರಮಾಣವೇನು?
  • ಆರ್ಥಿಕವಾಗಿ ಸಬಲೀಕರಣಗೊಂಡವರೆಶ್ಟು?
  • ಇದಕ್ಕೂ ಮತ್ತು ಕರ‍್ನಾಟಕದ ಸೂಚ್ಯಕಂಗಳಿಗೂ ದಲಿತ ಸಮುದಾಯದ ಅಬಿವೃದ್ದಿ ಸೂಚ್ಯಂಕಗಳ ನಡುವಿನ ವ್ಯತ್ಯಾಸವೇನು?
  • ಕರ‍್ನಾಟಕ ರಾಜ್ಯದ/ ಜಿಲ್ಲೆಗಳ ಮುನ್ನೋಟ ಮತ್ತು ಅದಕ್ಕೆ ಪ್ರತಿಯಾಗಿ ಪ.ಜಾತಿ/ಪ.ಪಂಗಡದ ಮಾನವ ಅಬಿವೃದ್ದಿ ಸೂಚ್ಯಂಕದ ಕುರಿತು ದತ್ತಾಂಶವಿದೆಯೇ?
  • ಮಾನವ ಅಬಿವೃದ್ದಿ ಆದಾಯದ ಅಂತರದ ಕುರಿತು ದತ್ತಾಂಶ ಸಂಚಯವಿದೆಯೇ?
  • ಉದಾಹರಣೆಗೆ ಇತರ ಜಾತಿಗಳಿಗೆ ಹೋಲಿಸಿದರೆ ಪ.ಜಾತಿ/ಪ.ಪಂಗಡದ 100 ಮಕ್ಕಳ ಪೈಕೆ ಎಶ್ಟು ಮಕ್ಕಳು ಒಂದನೆ ತರಗತಿಗೆ ದಾಖಲಾಗಿದ್ದಾರೆ?

ಇದನ್ನೂ ಓದಿ: ಮೊದಲ ದಲಿತ ರಾಷ್ಟ್ರಪತಿ ಕೆ.ಆರ್ ನಾರಾಯಣನ್ ಸ್ಮರಣೆ: ಡಾ.ಬಿ.ಪಿ.ಮಹೇಶ ಚಂದ್ರ ಗುರು

ಆದರೆ ‘ದಬಸ’ ಪ್ರಕಾರ ‘ಅಬಿವೃದ್ದಿಯಲ್ಲಿನ ಅಂತರ’ದ ಕುರಿತು ಯಾವುದೇ ದಾಖಲೆಗಳಿಲ್ಲ, ದತ್ತಾಂಶ ಸಂಚಯಗಳಿಲ್ಲ. ಅಂದರೆ ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಗೆ ಹಣಕಾಸು ಹಂಚಿಕೆ ಮಾಡುವಾಗ ಆ ಸಮುದಾಯಗಳ ಜನಸಂಖ್ಯೆಯ ಪ್ರಮಾಣವೆಶ್ಟು? ಅದರಲ್ಲಿ ಅಗತ್ಯವಿರುವ ಪ್ರಮಾಣವೆಶ್ಟು? ಮುಂತಾದ ಸಂಗತಿಗಳ ಕುರಿತು ಸರಕಾರಕ್ಕೆ ಯಾವುದೇ ಮಾಹಿತಿಯಿಲ್ಲ. ಸಂಶೋದನೆ ನೆರವು, ಪ.ಜಾತಿ/ಪ.ಪಂಗಡಗಳಿಗೆ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು, ಪ.ಜಾತಿ/ಪ.ಪಂಗಡ ಪಂಚಾಯತ್‌ಗೆ ಅನುದಾನ, ಪುಸ್ತಕ ಅನುದಾನ, ಕೌಶಲ್ಯ ಅಬಿವೃದ್ದಿ ಮುಂತಾದ ಹೊಸ ಬಗೆಯ ಕಾರ್ಯಯೋಜನೆಗಳಿಗೆ ಎಸ್‌ಸಿಎಸ್‌ಪಿ/ಟಿಎಸ್‌ಪಿ ಆದ್ಯತೆಯ ಮೇರೆಗೆ ಕೆಲಸ ಮಾಡಬೇಕಿತ್ತು. ಆದರೆ ಪ್ರಬುತ್ವಕ್ಕೆ ಇದರ ಖಬರೂ ಸಹ ಇಲ್ಲ.

ಮುಂದೇನು?

ದಲಿತ ಸಂಘಟನೆಗಳು, ಎಡ ಸಂಘಟನೆಗಳು, ಪ್ರಗತಿಪರ ವಿದ್ಯಾರ್ಥಿ ಸಂಘಟನೆಗಳು ಒಗ್ಗಟ್ಟಾಗಿ ಈ ಕುರಿತು ತುರ್ತಾಗಿ ಸಮಾಲೋಚನೆ ಸಬೆ ನಡೆಸಬೇಕು ಮತ್ತು ಪ್ರಬುತ್ವದ ಈ ತಾರತಮ್ಯ ಮತ್ತು ವಂಚನೆಯ ವಿರುದ್ದ ಜನಾಂದೋಲನ ರೂಪಿಸಬೇಕು, ಇದನ್ನು ಹೊರತುಪಡಿಸಿ ಮತ್ಯಾವುದೇ ಮಾರ್ಗಗಳಿಲ್ಲ.

ಇದನ್ನೂ ಓದಿ: ಕೇರಳ: ದಲಿತ ವ್ಯಕ್ತಿಯನ್ನು ಅರ್ಚಕರಾಗಿ ನೇಮಿಸುತ್ತಿರುವ ದೇವಸ್ವಂ ಬೋರ್ಡ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...