Homeಕರ್ನಾಟಕ’ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಉಪಯೋಜನೆ’ಯಲ್ಲಿನ ವಂಚನೆಗಳು!

’ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಉಪಯೋಜನೆ’ಯಲ್ಲಿನ ವಂಚನೆಗಳು!

ಶತಮಾನಗಳಿಂದ ಶೋಷಣೆ/ದಮನಕ್ಕೆ ಒಳಗಾದ ತಳ ಸಮುದಾಯಗಳಿಗೆ ಸಮಾಜೋ-ಆರ್ಥಿಕ ನ್ಯಾಯ ಒದಗಿಸಲು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳಿಗೆ ಸಮಾಜೋ-ಆರ್ಥಿಕ ನ್ಯಾಯ ಒದಗಿಸಲು ಈ ಯೋಜನೆಯನ್ನು ಜಾರಿಗೊಳಿಸಲಾಗಿತ್ತು

- Advertisement -
- Advertisement -

ಶತಮಾನಗಳಿಂದ ಶೋಷಣೆ/ದಮನಕ್ಕೆ ಒಳಗಾದ ತಳ ಸಮುದಾಯಗಳಿಗೆ ಸಮಾಜೋ-ಆರ್ಥಿಕ ನ್ಯಾಯ ಒದಗಿಸಲು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳಿಗೆ “ಎಸ್‌ಸಿಎಸ್‌ಪಿ/ಟಿಎಸ್‌ಪಿ” (ಪರಿಶಿಷ್ಟ ಜಾತಿ ಉಪಯೋಜನೆ/ ಪರಿಶಿಷ್ಟ ಪಂಗಡ ಉಪಯೋಜನೆ) ಯೋಜನೆಯನ್ನು ಜಾರಿಗೊಳಿಸಲಾಯಿತು. ಕರ‍್ನಾಟಕದಲ್ಲಿ ಅದನ್ನು ಪರಿಶ್ಕರಿಸಿ 2013ರಲ್ಲಿ “ಎಸ್‌ಸಿಎಸ್‌ಪಿ/ಟಿಎಸ್‌ಪಿ (ಯೋಜನೆ, ಹಂಚಿಕೆ, ಹಣಕಾಸು ಸಂಪನ್ಮೂಲದ ಬಳಕೆ) ಕಾಯಿದೆ” ಜಾರಿಗೊಳಿಸಲಾಯಿತು.

2011ರ ಜನಗಣತಿಯ ಆದಾರದಲ್ಲಿ “ಎಸ್‌ಸಿಎಸ್‌ಪಿ/ಟಿಎಸ್‌ಪಿ” ಯೋಜನೆಗೆ ಪ್ರತಿ ಇಲಾಖೆಯು ಶೇ.24.1 ಪ್ರಮಾಣದ ಆರ್ಥಿಕ ಅನುದಾನವನ್ನು ಮೀಸಲಿಡಬೇಕು. ಇದರ ಅನುಸಾರ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವ್ಯಕ್ತಿಗೆ/ಕುಟುಂಬಕ್ಕೆ ಈ ಯೋಜನೆಯ ಅನುದಾನವು ನೇರವಾಗಿ ತಲುಪಬೇಕು. ಯೋಜನೆಗಳನ್ನು ರೂಪಿಸುವುದಕ್ಕೂ ಮೊದಲು ರಾಜ್ಯ ಮಟ್ಟದ ನೋಡಲ್ ಏಜೆನ್ಸಿ ಸಂಬಂದಪಟ್ಟ ಸಮುದಾಯಗಳೊಂದಿಗೆ ಸಮಾಲೋಚಿಸಬೇಕು. ಖರ್ಚಿನ ವಿವರಗಳು ಪಾರದರ್ಶಕವಾಗಿರಬೇಕು, ಇದರ ಸಮರ್ಪಕ ಜಾರಿಯ ಕುರಿತು ನಿಗಾ ವಹಿಸಲು ಒಂದು ಅಂತರ್ಜಾಲ ತಾಣವನ್ನು ಆರಂಬಿಸಬೇಕು, ಈ ಯೋಜನೆಯ ಜಾರಿಯಾಗಿರುವುದರ ವಿವರಗಳನ್ನು ಕಾಲಕಾಲಕ್ಕೆ ಪ್ರಕಟಿಸಬೇಕು. ಮತ್ತು ಮುಖ್ಯವಾಗಿ ಈ ಯೋಜನೆಗೆ ಮೀಸಲಿಟ್ಟ ಹಣವನ್ನು ಸಾಮಾನ್ಯ ಯೋಜನೆಗಳಿಗೆ ಬಳಸಿಕೊಳ್ಳಬಾರದು.

PC: Mahima A Jain

ಇದನ್ನೂ ಓದಿ: ‘ಮಹಾಡ್ – ಮೊದಲ ದಲಿತ ಬಂಡಾಯ’ ಪುಸ್ತಕದ ಆಯ್ದ ಭಾಗಗಳು

ಆದರೆ ಈ ಎಲ್ಲಾ ನಿಯಾಮವಳಿಗಳು ಕೇವಲ ಕಾಗದದ ಮೇಲೆ ಮಾತ್ರ ಉಳಿದುಕೊಂಡಿವೆ. ಮೊದಲಿಗೆ ಜಿಲ್ಲಾ ಮಟ್ಟದ ಪರಿಶೀಲನ ಸಮಿತಿಗಳನ್ನು ಸೂಕ್ತವಾಗಿ ರಚಿಸಲ್ಪಟ್ಟಿರುವುದಿಲ್ಲ, ಮತ್ತು ರಚಿತಗೊಂಡ ಸಮಿತಿಗಳು ಕಾಲ ಕಾಲಕ್ಕೆ ಸಬೆಗಳನ್ನು ನಡೆಸುವುದಿಲ್ಲ. ಇನ್ನು ಇಲ್ಲಿನ ಬಹುತೇಕ ಅದಿಕಾರಿಗಳಿಗೆ ಈ ಯೋಜನೆ ಕುರಿತು ಯಾವುದೇ ತಿಳುವಳಿಕೆಯಿರುವುದಿಲ್ಲ ಮತ್ತು ಅವರಿಗೆ ತರಬೇತಿಯನ್ನು ಸಹ ಕೊಟ್ಟಿರುವುದಿಲ್ಲ.

ದಲಿತ ಸಂಘಟನೆಗಳು “ಎಸ್‌ಸಿಎಸ್‌ಪಿ/ಟಿಎಸ್‌ಪಿ ಹೆಸರಿನಲ್ಲಿ ಪ್ರತ್ಯೇಕವಾಗಿ ಎರಡು ಬ್ಯಾಂಕ್ ಖಾತೆ ತೆರೆಯಬೇಕು ಮತ್ತು ಈ ಖಾತೆಯನ್ನು ನೋಡಲ್ ಇಲಾಖೆಗಳು ನಿರ್ವಹಿಸಬೇಕು. ಈ ಯೋಜನೆಯ ನಿಗಾ ವಹಿಸಲು ಲೋಕಪಾಲರನ್ನು ನೇಮಿಸಬೇಕು” ಎಂದು ಆಗ್ರಹಪಡಿಸಿದ್ದರು. ಈ ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಯನ್ನು ವಿಶ್ಲೇಷಿಸಿದಾಗ ಮೇಲಿನ ಎಲ್ಲಾ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ ಮತ್ತು ತಮಾಶೆಯೆಂದರೆ ಸಬಂದಪಟ್ಟ ಅದಿಕಾರಿಗಳಿಗೆ ಯಾವುದೇ ವಿಚಾರಣೆ ನಡಸಿಲ್ಲ

2020-21ರ ಹಣಕಾಸು ವರ್ಶವನ್ನು ಪರಿಶೀಲನೆ ಮಾಡೋಣ. ಈ ವರ್ಶಕ್ಕೆ ಎಸ್‌ಸಿಎಸ್‌ಪಿ/ಟಿಎಸ್‌ಪಿಗೆ 27,699.52 ಕೋಟಿ ಮೊತ್ತವನ್ನು ಹಂಚಿಕೆ ಮಾಡಲಾಯಿತು. ಆದರೆ ನಂತರ 1,084 ಕೋಟಿಯನ್ನು ಕಡಿತಗೊಳಿಸಲಾಯಿತು. ನಂತರ ಉಳಿದ ಅನುದಾನ 26,614.69 ಕೋಟಿ. ಇದಕ್ಕೆ ಯಾವುದೇ ಕಾರಣವನ್ನು ಕೊಟ್ಟಲ್ಲ.

ಇದನ್ನೂ ಓದಿ: ದೇಶದಲ್ಲಿ ಹಚ್ಚಿರುವ ಕಿಚ್ಚು ಮುಸಲ್ಮಾನರನ್ನು ಮುಕ್ಕತೊಡಗಿದೆ. ಮುಂದಿನ ಸರದಿ ದಲಿತರದು, ಕ್ರೈಸ್ತರದು ಇದ್ದೀತು

ಎಸ್‌ಸಿಎಸ್‌ಪಿ ಯೋಜನೆ:

ಹಂಚಿಕೆ : 19,432.22 ಕೋಟಿ.
ಕಡಿತಗೊಳಿಸಿದ ನಂತರದ ಮೊತ್ತ : 18,659.65 ಕೋಟಿ.
ವೆಚ್ಚ : 5,856.84 ಕೋಟಿ (ಶೇಕಡ. 31%)
ಬಳಕೆಯಾಗದೆ ಉಳಿದ ಮೊತ್ತ : 12,802.81 ಕೋಟಿ.

ಟಿಎಸ್‌ಪಿ ಯೋಜನೆ:

ಹಂಚಿಕೆ : 8,267.30 ಕೋಟಿ.
ಕಡಿತಗೊಳಿಸಿದ ನಂತರದ ಮೊತ್ತ : 7,955.69 ಕೋಟಿ.
ವೆಚ್ಚ : 2307.25 ಕೋಟಿ (ಶೇಕಡ. 32%)
ಬಳಕೆಯಾಗದೆ ಉಳಿದ ಮೊತ್ತ : 5648.44 ಕೋಟಿ.

ಒಟ್ಟಾಗಿ 2020-21ರ ಎಸ್‌ಸಿಎಸ್‌ಪಿ/ಟಿಎಸ್‌ಪಿ ಗೆ ಕೇವಲ 8164 ಕೋಟಿ ವೆಚ್ಚವಾಗಿದ್ದರೆ, 18,451.25 ಕೋಟಿ ಬಳಕೆಯಾಗದೆ ಉಳಿದುಕೊಂಡಿದೆ

  • ಮೊದಲಿಗೆ ಅಗತ್ಯವಾದ ಹಣಕಾಸು ಮೊತ್ತವನ್ನು ಹಂಚಿಕೆ ಮಾಡಿಲ್ಲ.
  • ಎರಡನೆಯದಾಗಿ ಹಂಚಿಕೆಯಾದ ಮೊತ್ತವನ್ನು ಕಡಿತಗೊಳಿಸಲಾಗಿದೆ.
  • ಮೂರನೆಯದಾಗಿ ಕಡಿತಗೊಳಿಸದ ಮೊತ್ತದಲ್ಲಿ ಶೇಕಡಾ 31ರಶ್ಟನ್ನು ಮಾತ್ರ ವೆಚ್ಚ ಮಾಡಲಾಗಿದೆ ಮತ್ತು ಶೇಕಡಾ 69ರಶ್ಟನ್ನು ಬಳಸಿಕೊಂಡಿಲ್ಲ.
  • ನಾಲ್ಕನೆಯದಾಗಿ ವೆಚ್ಚ ಮಾಡಿದ ಮೊತ್ತವನ್ನು ಈ ಯೋಜನೆಗೆ ಬಳಸಿಕೊಂಡಿಲ್ಲ, ಇತರೆ ಸಾಮಾನ್ಯ ಕೆಲಸಗಳಿಗೆ ವೆಚ್ಚ ಮಾಡಿದ್ದಾರೆ.

ಇದನ್ನೂ ಓದಿ: ದಲಿತ ಸಮರ್ಥನೆಯ ಆದ್ಯಪ್ರವರ್ತಕನ ಪಾತ್ರವಹಿಸಿದ್ದ ಮೂಕನಾಯಕ

ಇದು ದ್ರೋಹದ ಕೆಲಸ. ಇದು ಒಂದು ಮಹಾವಂಚನೆ. ಉದಾಹರಣೆಗೆ ಎಸ್‌ಸಿಎಸ್‌ಪಿ/ಟಿಎಸ್‌ಪಿ ಗೆ ಮೀಸಲಿಟ್ಟ ಹಣವನ್ನು ಮೆಟ್ರೋ ರೈಲು ಕಾಮಗಾರಿಗೆ ಬಳಸಿಕೊಳ್ಳಲಾಗಿದೆ. ಬಸ್ ನಿಲ್ದಾಣಗಳ ನಿರ್ಮಾಣಕ್ಕೆ ವೆಚ್ಚ ಮಾಡಲಾಗಿದೆ. ಹೆದ್ದಾರಿಗಳ ಕಾಮಗಾರಿಗೆ ಬಳಸಿಕೊಳ್ಳಲಾಗಿದೆ. ಅಂದರೆ ಬ್ರಶ್ಟಾಚಾರಕ್ಕೆ ಭರಪೂರು ಅವಕಾಶವಿರುವ ‘ಕಾಮಗಾರಿ’ ಯೋಜನೆಗಳಿಗೆ ಈ ಆರ್ಥಿಕ ಅನುದಾನವನ್ನು ಬಳಸಿಕೊಳ್ಳಲಾಗಿದೆ. ಇದು ಶಿಕ್ಷಾರ್ಹ ಅಪರಾದವಾಗಿದೆ. ಆದರೆ ಇಲ್ಲಿ ಪ್ರಬುತ್ವವೇ ಈ ಬ್ರಶ್ಟಾಚಾರದಲ್ಲಿ ತೊಡಗಿಕೊಂಡಿರುವುದರಿಂದ ಇದರ ವಿರುದ್ದದ ಕೂಗು ಅರಣ್ಯರೋದನವಾಗಿದೆ.

ದಲಿತ ಬಹುಜನ ಸಂಘಟನೆಯು (ದಬಸ) ಈ ಹಿಂದೆ ರಾಜ್ಯದ ಅಬಿವೃದ್ದಿಗೂ ಮತ್ತು ಪ.ಜಾತಿ/ಪ.ಪಂಗಡದ ಅಬಿವೃದ್ದಿ ಸೂಚಕಗಳಿಗೂ ನಡುವಿನ ವ್ಯತ್ಯಾಸವನ್ನು ‘ಅಬಿವೃದ್ದಿಗಳ ಅಂತರ’ದ ಮೂಲಕ ವಿಶ್ಲೇಷಣೆ ಮಾಡಿದೆ.

‘ದಬಸ’ ಮುಂದಿಟ್ಟ ಮುಖ್ಯ ಪ್ರಶ್ನೆಗಳು:

  • ಬಡತನ ರೇಖೆಗಿಂತ ಮೇಲಿರುವ ಪ.ಜಾತಿ/ಪ.ಪಂಗಡದ ಜನಸಂಖ್ಯೆಯ ಪ್ರಮಾಣವೇನು?
  • ಆರ್ಥಿಕವಾಗಿ ಸಬಲೀಕರಣಗೊಂಡವರೆಶ್ಟು?
  • ಇದಕ್ಕೂ ಮತ್ತು ಕರ‍್ನಾಟಕದ ಸೂಚ್ಯಕಂಗಳಿಗೂ ದಲಿತ ಸಮುದಾಯದ ಅಬಿವೃದ್ದಿ ಸೂಚ್ಯಂಕಗಳ ನಡುವಿನ ವ್ಯತ್ಯಾಸವೇನು?
  • ಕರ‍್ನಾಟಕ ರಾಜ್ಯದ/ ಜಿಲ್ಲೆಗಳ ಮುನ್ನೋಟ ಮತ್ತು ಅದಕ್ಕೆ ಪ್ರತಿಯಾಗಿ ಪ.ಜಾತಿ/ಪ.ಪಂಗಡದ ಮಾನವ ಅಬಿವೃದ್ದಿ ಸೂಚ್ಯಂಕದ ಕುರಿತು ದತ್ತಾಂಶವಿದೆಯೇ?
  • ಮಾನವ ಅಬಿವೃದ್ದಿ ಆದಾಯದ ಅಂತರದ ಕುರಿತು ದತ್ತಾಂಶ ಸಂಚಯವಿದೆಯೇ?
  • ಉದಾಹರಣೆಗೆ ಇತರ ಜಾತಿಗಳಿಗೆ ಹೋಲಿಸಿದರೆ ಪ.ಜಾತಿ/ಪ.ಪಂಗಡದ 100 ಮಕ್ಕಳ ಪೈಕೆ ಎಶ್ಟು ಮಕ್ಕಳು ಒಂದನೆ ತರಗತಿಗೆ ದಾಖಲಾಗಿದ್ದಾರೆ?

ಇದನ್ನೂ ಓದಿ: ಮೊದಲ ದಲಿತ ರಾಷ್ಟ್ರಪತಿ ಕೆ.ಆರ್ ನಾರಾಯಣನ್ ಸ್ಮರಣೆ: ಡಾ.ಬಿ.ಪಿ.ಮಹೇಶ ಚಂದ್ರ ಗುರು

ಆದರೆ ‘ದಬಸ’ ಪ್ರಕಾರ ‘ಅಬಿವೃದ್ದಿಯಲ್ಲಿನ ಅಂತರ’ದ ಕುರಿತು ಯಾವುದೇ ದಾಖಲೆಗಳಿಲ್ಲ, ದತ್ತಾಂಶ ಸಂಚಯಗಳಿಲ್ಲ. ಅಂದರೆ ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಗೆ ಹಣಕಾಸು ಹಂಚಿಕೆ ಮಾಡುವಾಗ ಆ ಸಮುದಾಯಗಳ ಜನಸಂಖ್ಯೆಯ ಪ್ರಮಾಣವೆಶ್ಟು? ಅದರಲ್ಲಿ ಅಗತ್ಯವಿರುವ ಪ್ರಮಾಣವೆಶ್ಟು? ಮುಂತಾದ ಸಂಗತಿಗಳ ಕುರಿತು ಸರಕಾರಕ್ಕೆ ಯಾವುದೇ ಮಾಹಿತಿಯಿಲ್ಲ. ಸಂಶೋದನೆ ನೆರವು, ಪ.ಜಾತಿ/ಪ.ಪಂಗಡಗಳಿಗೆ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು, ಪ.ಜಾತಿ/ಪ.ಪಂಗಡ ಪಂಚಾಯತ್‌ಗೆ ಅನುದಾನ, ಪುಸ್ತಕ ಅನುದಾನ, ಕೌಶಲ್ಯ ಅಬಿವೃದ್ದಿ ಮುಂತಾದ ಹೊಸ ಬಗೆಯ ಕಾರ್ಯಯೋಜನೆಗಳಿಗೆ ಎಸ್‌ಸಿಎಸ್‌ಪಿ/ಟಿಎಸ್‌ಪಿ ಆದ್ಯತೆಯ ಮೇರೆಗೆ ಕೆಲಸ ಮಾಡಬೇಕಿತ್ತು. ಆದರೆ ಪ್ರಬುತ್ವಕ್ಕೆ ಇದರ ಖಬರೂ ಸಹ ಇಲ್ಲ.

ಮುಂದೇನು?

ದಲಿತ ಸಂಘಟನೆಗಳು, ಎಡ ಸಂಘಟನೆಗಳು, ಪ್ರಗತಿಪರ ವಿದ್ಯಾರ್ಥಿ ಸಂಘಟನೆಗಳು ಒಗ್ಗಟ್ಟಾಗಿ ಈ ಕುರಿತು ತುರ್ತಾಗಿ ಸಮಾಲೋಚನೆ ಸಬೆ ನಡೆಸಬೇಕು ಮತ್ತು ಪ್ರಬುತ್ವದ ಈ ತಾರತಮ್ಯ ಮತ್ತು ವಂಚನೆಯ ವಿರುದ್ದ ಜನಾಂದೋಲನ ರೂಪಿಸಬೇಕು, ಇದನ್ನು ಹೊರತುಪಡಿಸಿ ಮತ್ಯಾವುದೇ ಮಾರ್ಗಗಳಿಲ್ಲ.

ಇದನ್ನೂ ಓದಿ: ಕೇರಳ: ದಲಿತ ವ್ಯಕ್ತಿಯನ್ನು ಅರ್ಚಕರಾಗಿ ನೇಮಿಸುತ್ತಿರುವ ದೇವಸ್ವಂ ಬೋರ್ಡ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...