Homeಮುಖಪುಟಅವಳ ಹಸಿವನ್ನು ಹಂಗಿಸಿದ ನಿಮಗೆ ನನ್ನ ಧಿಕ್ಕಾರ....!!

ಅವಳ ಹಸಿವನ್ನು ಹಂಗಿಸಿದ ನಿಮಗೆ ನನ್ನ ಧಿಕ್ಕಾರ….!!

ನೀವು ವ್ಯಂಗ್ಯ ಮಾಡಿದ್ದು ಅವಳನ್ನಲ್ಲ.. ಅವಳು ಪ್ರತಿನಿಧಿಸಿದ ಅಸಹಾಯಕ ದುಡಿವ ವರ್ಗವನ್ನು, ಅವಳ ಮಾತುಗಳು ಪ್ರತಿನಿಧಿಸಿದ ಹಸಿವಿನ ಬಲಿಪಶುಗಳನ್ನು...

- Advertisement -
- Advertisement -

ಏನಿಲ್ಲ ಸಾರ್…
ಬರೀ Dolo 650.. ಕೊರೋನಾದವರಿಗೆ ಅದೇ ಸಾರ್….. ಹೀಗೆಂದು ತಿಂಗಳಿಂದೆ ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ಮಾಧ್ಯಮದ ಮುಂದೆ ಬೋಲ್ಡ್ ಆಗಿ ಮಾತನಾಡಿದ ಆ ಹದಿ ಹರೆಯದ ಸಹೋದರಿಯ ಮಾತುಗಳು ಇಂದು ಸಾಮಾಜಿಕ ಜಾಲತಾಣಗಳಲ್ಲಿ ಗೇಲಿಗೊಳಗಾಗುತ್ತಿವೆ.. ಆಕೆಯ ಮಾತುಗಳಿಗೆ ಮ್ಯೂಸಿಕ್ ಹಾಕಿ ರಿಮಿಕ್ಸ್ ಸಂಗೀತದಂತೆ ಮತ್ತೆ ವೈರಲ್ ಮಾಡಲಾಗುತ್ತಿದೆ..

ದುಡಿವ ಕೈಗಳಿಗೆ ಉದ್ಯೋಗವಿಲ್ಲದ್ದರ ಬಗ್ಗೆ, ಹಸಿದ ಹೊಟ್ಟೆಗಳಿಗೆ ಅನ್ನವಿಲ್ಲದ್ದರ ಬಗ್ಗೆ, ನಾಡ ಜನತೆಯ ಬೇನೆಗೆ ಸೂಕ್ತ ಔಷಧಿ ನೀಡಲಾಗದ ಷಂಡ ಪ್ರಭುತ್ವದ ವಿರುದ್ಧ ಆಕೆ ಮಾತನಾಡಿದ್ದಾಳೆ. ಆಕೆಗೆ ನಿಮ್ಮಂತಹ ಟಾಕು, ಟೀಕಿನ ಇಂಗ್ಲಿಷ್ ಮಿಶ್ರಿತ ಕನ್ನಡವನ್ನು ವಯ್ಯಾರದಿಂದ ಮಾತನಾಡಲು ಬಾರದಿರಬಹುದು. ಆಕೆ ತನ್ನ ಆಡುಭಾಷೆಯಲ್ಲೇ ಪ್ರಭುತ್ವದ ಕ್ರೌರ್ಯವನ್ನು ಪ್ರಶ್ನೆ ಮಾಡಿದ್ದಾಳೆ. ಆ ಮೂಲಕ ಆಕೆ ಸಮಸ್ತ ಅಸಹಾಯಕ ಕನ್ನಡಿಗರ ನೋವಿಗೆ ಧ್ವನಿಯಾಗಿದ್ದಾಳೆ.

ಆಕೆ ಆ ರೀತಿ ತನ್ನದೇ ದಾಟಿಯಲ್ಲಿ ತನ್ನ ಸಿಟ್ಟನ್ನು, ತನ್ನ ಅಸಹಾಯಕತೆಯನ್ನು ಮಾಧ್ಯಮಗಳ ಮುಂದೆ ಹೊರಗೆಡಹಿದ್ದಾಳೆ.. ನೀವು ಗೇಲಿ ಮಾಡಬೇಕಿದ್ದು ನನ್ನ ಆ ಸಹೋದರಿಯ ಗ್ರಾಮ್ಯ ಭಾಷೆಯನ್ನಲ್ಲ, ಅವಳ ಆಂಗಿಕ ಚಲನೆಯನ್ನಲ್ಲ… ಯಾವ ಪ್ರಭುತ್ವ, ಯಾವ ವ್ಯವಸ್ಥೆ ಆಕೆಯನ್ನು ಅಂತಹ ಮಾತುಗಳನ್ನಾಡಲು ಅಸಹಾಯಕಳಾಗಿಸಿತೋ ಆ ಪ್ರಭುತ್ವ , ಆ ವ್ಯವಸ್ಥೆಯನ್ನು ನೀವು ಗೇಲಿ ಮಾಡಬೇಕಿತ್ತು.

ಓರ್ವ ದುಷ್ಟ ರಾಜಕಾರಣಿಯನ್ನು ಗೇಲಿ ಮಾಡುವಂತೆ ನೀವು ಆ ಅಸಹಾಯಕ ಹೆಣ್ಮಗಳನ್ನು ಗೇಲಿ ಮಾಡುತ್ತಿದ್ದೀರಿ.. ಅದನ್ನು ಪ್ರಶ್ನಿಸಿದರೆ ಆಕೆಗೆ ಒಳ್ಳೆಯ ಪ್ರಚಾರ ಸಿಕ್ಕಿತಲ್ಲಾ ಎಂದು ಮತ್ತೆ ವ್ಯಂಗ್ಯವಾಡುತ್ತಿದ್ದೀರಿ.. ಆಕೆಯ ಪರವಾಗಿ ಧ್ವನಿಯೆತ್ತಲು ನ್ಯಾಯಾಂಗದಲ್ಲೋ, ಕಾರ್ಯಾಂಗದಲ್ಲೋ, ಶಾಸಕಾಂಗದಲ್ಲೋ ಯಾರೂ ಇಲ್ಲ ಎಂಬುವುದು ನಿಮ್ಮ ಈ ಧೈರ್ಯಕ್ಕೆ ಕಾರಣವಾಗಿದ್ದರೆ ಅವಳ ಪರವಾಗಿ ಧ್ವನಿಯೆತ್ತಲು ಮಾನವೀಯ ಸಂವೇದನೆಯಿರುವ ನಾವಿದ್ದೇವೆ.

ನೀವು ವ್ಯಂಗ್ಯ ಮಾಡಿದ್ದು ಅವಳನ್ನಲ್ಲ.. ನೀವು ವ್ಯಂಗ್ಯ ಮಾಡಿದ್ದು ಅವಳು ಪ್ರತಿನಿಧಿಸಿದ ಅಸಹಾಯಕ ದುಡಿವ ವರ್ಗವನ್ನು, ಅವಳ ಮಾತುಗಳು ಪ್ರತಿನಿಧಿಸಿದ ಹಸಿವಿನ ಬಲಿಪಶುಗಳನ್ನು…

ಹೃದಯ ಸತ್ತ ನಿಮ್ಮಂತವರ ದಾರ್ಷ್ಟ್ಯಕ್ಕೆ ನನ್ನದೊಂದು ಧಿಕ್ಕಾರ…

ಇಸ್ಮತ್ ಪಜೀರ್


ಇದನ್ನೂ ಓದಿ; ಹೋರಾಟಗಾರನ ಫೇಸ್‌ಬುಕ್ ಪೋಸ್ಟ್‌ಗೆ NSA ಪ್ರಕರಣ: ಸಂಜೆಯೊಳಗೆ ಬಿಡುಗಡೆಗೊಳಿಸಿ ಎಂದ ಸುಪ್ರೀಂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಯಾರಪ್ಪ ಹಂಗಿಸಿದ್ದು. ಅದು ಮೈಸೂರು ಭಾಗದ ಭಾಷೆ, ಉತ್ತರ ಕರ್ನಾಟಕದ್ದಲ್ಲ. ವೈರಲ್ ಆಗಿರುವುದು ಆ ಹುಡುಗಿಯ ಮಾತಿನ ಲಾಲಿತ್ಯದಿಂದ, ವೈರಲ್ ಮಾಡಿದವರಾರೂ ಅವರನ್ನು ಆಡಿಕೊಂಡಿಲ್ಲ. ಮೆಚ್ಚುಗೆಯಿಂದ ವಿವಿಧ ರೀತಿಯಲ್ಲಿ ತೋರಿಸಿದ್ದಾರೆ. ಕೊಳಕು ಮನಸ್ಸಿನ, ನಕಾರಾತ್ಮಕ‌ ಧೋರಣೆಯ, ಜನರ ಕಷ್ಟವನ್ನೆ ಬಂಡವಾಳ ಮಾಡಿಕೊಂಡು ಹೊಟ್ಟೆ ಹೊರೆಯುವ ನಿಮ್ಮಂತವರಷ್ಟೆ ಅವರ ವಿಡಿಯೊಗಳನ್ನು ಸಹ ಹೊಟ್ಟೆಪಾಡಿಗೆ ಬಳಸಿಕೊಂಡು ಈ ರೀತಿ ಪೋಸ್ಟ್ ಮಾಡಿರುವುದು

  2. ಆಹಾ… ಇವನ ಪ್ರೀತಿ ನೋಡ…
    ಹಸಿವಿನ ಕಾಠಿಣ್ಯವರಿಯದ ನಿನ್ನಂತವರಿಗೆ ಭಾಷೆಯ ಲಾಲಿತ್ಯವನ್ನು ಕೊಂಡಾಡಿದಂತೆ ಕಾಣುತ್ತೆ ಬಿಡು..

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...