Homeಮುಖಪುಟ’ನಡುಗುತ್ತಿರುವ ಗಣತಂತ್ರದಲ್ಲಿ ಆಂದೋಲನದ ಬಿಸಿ’: ಡಾ. ಸ್ವಾತಿ

’ನಡುಗುತ್ತಿರುವ ಗಣತಂತ್ರದಲ್ಲಿ ಆಂದೋಲನದ ಬಿಸಿ’: ಡಾ. ಸ್ವಾತಿ

- Advertisement -
- Advertisement -

ಮಧ್ಯಪ್ರದೇಶದ ಪ್ರಸಿದ್ಧ ವಿಡಂಬನಕಾರ ಹರಿಶಂಕರ್ ಪಾರ್ಸಾಯಿ ಅವರು ಗಣರಾಜ್ಯೋತ್ಸವದಂದು ’ತಿಥುರ್ತಾ ಗಣತಂತ್ರ್ ಔರ್ ಭೀಗ್ತಿ ಸ್ವತಂತ್ರ್’ (ನಡುಗುತ್ತಿರುವ ಗಣತಂತ್ರ ಮತ್ತು ಸೊರಗುತ್ತಿರುವ ಸ್ವಾತಂತ್ರ್ಯ ದಿವಸ) ಎಂಬ ಶೀರ್ಷಿಕೆಯ ಕಿರು ಪ್ರಬಂಧವನ್ನು ಬರೆದಿದ್ದಾರೆ. ಇದರಲ್ಲಿ ’ನಮ್ಮ ಗಣರಾಜ್ಯ ದಿನ ನಡುಗುತ್ತಿದೆ, ಸ್ವಾತಂತ್ರ್ಯ ದಿನ ಸೊರಗುತ್ತಿದೆ’ ಎಂದು ಅವರು ಪ್ರತಿಪಾದಿಸುತ್ತಾರೆ.

ಈ ರಾಷ್ಟ್ರೀಯ ದಿನಗಳು ಮತ್ತು ಅಧಿಕೃತ ರಜಾದಿನಗಳ ಹಿನ್ನೆಲೆಯಲ್ಲಿ ಪಾರ್ಸಾಯಿ ಈ ವಿಡಂಬನೆ ಬರೆದಿದ್ದಾರೆ. ದೆಹಲಿಯಲ್ಲೆ ನಡೆದ ಗಣರಾಜ್ಯೋತ್ಸವದ ಸರ್ಕಾರಿ ಕಾರ್ಯಕ್ರಮದ ಮೆರವಣಿಗೆಯ ವಾತಾವರಣವನ್ನು ಪಾರ್ಸಾಯಿ ವಿವರಿಸಿದ್ದಾರೆ. ರೇಡಿಯೊ ಅನೌನ್ಸರ್ (ಉದ್ಘೋಷಕಿ), ’ಜೋರಾಗಿ ಚಪ್ಪಾಳೆ ಕೇಳಿಸುತ್ತಿವೆ’ ಎಂದು ವಿವರಿಸುವುದನ್ನು ಲೇಖಕ ಕೇಳಿಸಿಕೊಳ್ಳುತ್ತಾರೆ. ಆದರೆ ಪಾರ್ಸಾಯ್‌ಗೆ ಆ ಚಪ್ಪಾಳೆಗಳು ಎಲ್ಲಿಂದ ಬರುತ್ತವೆ ಎಂದು ನೋಡಲು/ತಿಳಿಯಲು ಸಾಧ್ಯವಾಗುವುದಿಲ್ಲ. ಓವರ್‌ಕೋಟ್ ಧರಿಸಿ, ಕುರ್ಚಿಗಳ ಮೇಲೆ ಕುಳಿತ ಪ್ರೇಕ್ಷಕರಿಂದ ಈ ಚಪ್ಪಾಳೆಗಳು ಬರುತ್ತಿಲ್ಲ. ಕೈ ಬೆಚ್ಚಗಾಗಲು ಓವರ್‌ಕೋಟ್ ಪಾಕೆಟ್‌ಗಳಿಲ್ಲದ, ನೆಲದ ಮೇಲೆ ಕುಳಿತಿರುವ ಜನರ ನಿರಂತರ ಚಪ್ಪಾಳೆಯಿಂದ ಈ ಶಬ್ದ ಬರುತ್ತಿದೆ. ಈ ನಡುಗುವ ಕೈಗಳ ಚಪ್ಪಾಳೆಯನ್ನು ಗಣತಂತ್ರವು ಹಿಡಿದಿಟ್ಟುಕೊಂಡಿದೆ ಎಂದು ತೋರುತ್ತದೆ.

ಭಾರತದ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯ ತೀಕ್ಷ್ಣ ವಿಡಂಬನೆ ಮತ್ತು ವ್ಯಾಖ್ಯಾನಕ್ಕೆ ಹೆಸರುವಾಸಿಯಾದ ಪಾರ್ಸಾಯಿ ವಸ್ತುಸ್ಥಿತಿಯನ್ನು ಬಿಂಬಿಸಿದ್ದಾರೆ. ರಾಜಕೀಯ ಪಕ್ಷಗಳು ಮತ್ತು ಅವುಗಳ ಪುನರಾವರ್ತಿತ ಭರವಸೆಗಳಿಂದ ಮತ್ತೆ ಮತ್ತೆ ಮೂರ್ಖರಾಗುವ ಜನರನ್ನು ಸಹ ಅವರು ಟೀಕಿಸಿದ್ದಾರೆ. ಬಹುಷಃ ಪಾರ್ಸಾಯಿ ಹೇಳಿದಂತೆ, ಚಪ್ಪಾಳೆ ಹೊಡಿ ಯುತ್ತಿರುವ ಕೈಗಳ ಶಾಖದ ಹೊರತಾಗಿ ಜನರ ಬಳಿ ಏನೂ ಇಲ್ಲ.

ಚಳವಳಿಯ ಬೆಂಕಿ

ಪ್ರತಿಯೊಬ್ಬ ಸಿನಿಕ ವ್ಯಕ್ತಿಯ ಹಿಂದೆ ಒಬ್ಬ ನಿರಾಶೆಗೊಂಡ ಆದರ್ಶವಾದಿ ಇರುತ್ತಾನೆ

– ಜಾರ್ಜ್ ಕ್ಯಾರ್ಲಿನ್.

ಪರ್ಸಾಯಿ ಅವರ ವಿಡಂಬನೆಯು ಜಯಪ್ರಕಾಶ್ ನಾರಾಯಣರು ನೀಡಿದ್ದ ಭರವಸೆಗಳ ವೈಫಲ್ಯ ಮತ್ತು ಲೋಹಿಯಾವಾದಿ ಚಳವಳಿಯಿಂದಾದ ನಿರಾಸೆಯಿಂದ ಹುಟ್ಟುತ್ತದೆ.

ರೈತ ಹೋರಾಟವನ್ನು ನೋಡಲು ಅವರು ಬದುಕಿರಬೇಕಿತ್ತೆಂದು ನನಗೆಷ್ಟು ಅನ್ನಿಸುತ್ತಿದೆ ನೋಡಿ.
ಅವರಂತಹ ಸಿನಿಕ ವ್ಯಕ್ತಿಯನ್ನು ಅದು ಜನಶಕ್ತಿಯ ಮೇಲೆ ಭರವಸೆಯಿಟ್ಟಿರುವ ವ್ಯಕ್ತಿಯನ್ನಾಗಿ ಪರಿವರ್ತಿಸುತ್ತಿತ್ತು.

ಮಾಸ್ಟರ್‌ಸ್ಟ್ರೋಕ್

ದೆಹಲಿಯಲ್ಲಿ ಇಳಿಯುವ ಮುಂಚೆ ಕುಟುಂಬ ಮತ್ತು ಸ್ನೇಹಿತರು ದೆಹಲಿಯ ಚಳವಳಿಯ ಕುರಿತು ಮತ್ತು ಸರ್ಕಾರ ಹಾಗೂ ಚಳವಳಿಕಾರರಿಂದ ಉಂಟಾಗಬಹುದಾದ ಹಿಂಸೆಯ ಕುರಿತು ಎಚ್ಚರಿಸಿದ್ದರು. ದೆಹಲಿಯ ಚಳಿಯು ದಿನೇ ದಿನೇ ಹೆಚ್ಚೆಚ್ಚು ಕೊರೆಯುತ್ತಿದ್ದು, ಪ್ರತೀ ವರ್ಷ 20-40-50 ವರ್ಷಗಳ ದಾಖಲೆಯನ್ನು ಮುರಿಯುತ್ತಲೇ ಇದೆ. ನಾನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಿದ್ಧಳಾಗಿಯೇ ಬಂದಿದ್ದೆ. ಸಿಂಘು ಗಡಿಯಲ್ಲಿ ಬೆಳಿಗಿನ ಚಳಿಯು ಮಂಜಿನ ಕಾರಣದಿಂದ ಇನ್ನೂ ತೀವ್ರವಾಗಿತ್ತು. ಸಿಂಘು ಗಡಿಯ ಪ್ರವೇಶದಲ್ಲಿ ವಿಪರೀತವಾಗಿ ನಿಯೋಜಿಸಲಾಗಿದ್ದ ಪೊಲೀಸ್ ಮತ್ತು ಮೀಸಲುಪಡೆಯು ಪ್ರತಿಭಟನಾಕಾರರನ್ನು ಸದೆಬಡಿಯಲು ದೆಹಲಿ ಪೊಲೀಸರ ಕುಪ್ರಸಿದ್ಧ ಆಯುಧಗಳಾದ ಜಲಫಿರಂಗಿ, ಲಾಠಿಗಳ ಚಿತ್ರಣವನ್ನು ಕಣ್ಣ ಮುಂದೆ ತಂದಿತು.

ಆ ಪ್ರದೇಶವನ್ನು ಪ್ರವೇಶಿಸುತ್ತಿದ್ದಂತೆ ನನ್ನೊಳಗೆ ಭಯವೂ ಪ್ರವೇಶಿಸಿತು. ಆದರೆ, ಇನ್ನಷ್ಟು ಒಳಗೆ ಹೋದಂತೆ ರೈತರ ಬೆಚ್ಚಗಿನ ನಡವಳಿಕೆಯಿಂದ ಚಳಿಯು ಮಾಯವಾಯಿತು. ಈ ರೈತರು 60 ದಿನಗಳಿಗಿಂತಲೂ ಹೆಚ್ಚು ಕಾಲದಿಂದ ಇಲ್ಲಿದ್ದು ಕಟ್ಟಿರುವ ಚಳವಳಿಯು ಇನ್ನೂ ಎಷ್ಟೋ ಚಳವಳಿಗಳಿಗೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ.

ಸಾಮಾನ್ಯವಾಗಿ ನಮ್ಮ ಮೊದಲ ಅನಿಸಿಕೆಯು ಅದುವರೆಗೆ ಮನದಲ್ಲಿ ಮೂಡಿರುವ ಪೂರ್ವಗ್ರಹಗಳಿಂದ ರೂಪುಗೊಳ್ಳುತ್ತದೆ ಮತ್ತು ಪಂಜಾಬಿನ ಕುರಿತು ಅಂತಹವು ಸಾಕಷ್ಟಿವೆ. ಪಂಜಾಬಿನ ಸಂಪತ್ತು ಮತ್ತು ಮಹಿಳೆಯರ ಕುರಿತಂತೆ ಇರುವ ಪಾಪ್ ಹಾಡುಗಳು ಮತ್ತು ರ್‍ಯಾಪ್ ಸಂಗೀತವು ಬಹಳ ಸಾಮಾನ್ಯ. ಆದರೆ ಈ ಚಳವಳಿಯು ವಿದೇಶದಿಂದ ಬಂದ ಸಂಪತ್ತು ಮತ್ತು ಉಪಭೋಗಿತನದಲ್ಲಿ ಬಹುಕಾಲ ಮುಳುಗಿದ್ದ ಪಂಜಾಬಿನ ಇನ್ನೊಂದು ಮುಖದ ಪರಿಚಯವನ್ನು ನಮಗೆ ಮಾಡಿಕೊಡುತ್ತದೆ. ಬಹುತೇಕ ಕುಟುಂಬಗಳ ಒಬ್ಬ ಸದಸ್ಯ ವಿದೇಶದಲ್ಲಿದ್ದು, ಇನ್ನೊಬ್ಬರು ಕೃಷಿ ಮಾಡುತ್ತಿರುವುದನ್ನು ನೀವು ನೋಡಬಹುದು.

ಈ ಚಳವಳಿಯು ಪಂಜಾಬನ್ನು ಎಷ್ಟರಮಟ್ಟಿಗೆ ಬಡಿದೆಬ್ಬಿಸಿದೆಯೆಂದರೆ, ತಪ್ಪುದಾರಿಗೆ ಹೋಗಿರುವವರನ್ನೂ ಸರಿದಾರಿಗೆ ಕರೆತರುವ ರೀತಿಯ ಬದಲಾವಣೆಗೆ ಕಾರಣವಾಗಿ, ಸರ್ವರ ಅಭಿವೃದ್ಧಿಯ ಕಡೆಗೆ ಕೊಂಡೊಯ್ಯಲಿದೆ. ಪ್ರತೀ ಮೂಲೆಗೂ ಏನೋ ಒಂದು ಸೌಲಭ್ಯ ಕಲ್ಪಿಸುವ ಜನರಿದ್ದಾರೆ. ಅದು ಊಟದ ಮನೆಯಾಗಿರಬಹುದು, ಶೂ ಪಾಲಿಷ್, ಕಾಲಿನ ಮಸಾಜ್, ಹೊದಿಕೆಗಳು, ಟೆಂಟುಗಳು ಇತ್ಯಾದಿ ಇತ್ಯಾದಿ. ನೀವು ದೂರದ ಊರಿಂದ ಹೋರಾಟವನ್ನು ಬೆಂಬಲಿಸಲು ಬಂದಿದ್ದೀರೆಂದು ಗೊತ್ತಾದರೆ ಇಲ್ಲಿನ ಜನರು ಬಹಳ ಸಂತಸಗೊಳ್ಳುತ್ತಾರೆ.
ಹಿಂದೆಂದೂ ಹೋರಾಟದಲ್ಲಿ ಪಾಲ್ಗೊಂಡ ಅನುಭವವಿಲ್ಲದ ರೈತರು ಈ ಸಾರಿಯ ಹೋರಾಟದಲ್ಲಿ ಸೇರಿಕೊಂಡು ಸಂಗಾತಿಗಳು, ಸ್ನೇಹಿತರು, ಕುಟುಂಬಸ್ಥರೇ ಆಗಿ ಹೋಗಿದ್ದಾರೆ. ಈ ಆಂದೋಲನದಲ್ಲಿ ಅವರು ಹೊಸ ಮನುಷ್ಯರೇ ಆಗಿದ್ದಾರೆ. ಕೆನಡಾಕ್ಕೆ ಹೋಗುವುದಕ್ಕಿಂತ ಸಾರ್ಥಕವಾದ ಹೊಸ ಬದುಕು ಇಲ್ಲಿನ ಬಾಂಧವ್ಯದಲ್ಲಿದೆ ಎನ್ನುವಂತಾಗಿದೆ. ಸಮಾಜದ ಕುರಿತಾದ ವಿಶೇಷ ಚಿಂತನೆಯ ಅಗತ್ಯವಿಲ್ಲದಂತೆ ಗಂಡು ಹೆಣ್ಣಿನ ಪಾತ್ರಗಳಲ್ಲೂ ನಿಧಾನದ ಬದಲಾವಣೆ ಕಾಣಸಿಗುತ್ತದೆ. ದೇಶವನ್ನು ಕಾಡುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸುತ್ತಾ ಗಂಡು ಹೆಣ್ಣುಗಳಿಬ್ಬರೂ ಒಟ್ಟಿಗೆ ಅಡಿಗೆ ಮಾಡುತ್ತಾರೆ.

ಪಂಜಾಬ್ ಮತ್ತು ಹರಿಯಾಣಗಳಲ್ಲಿ ನಿರುದ್ಯೋಗ ಹೆಚ್ಚಾಗಿರುವುದು ಹಾಗೂ ವಿಶ್ವವಿದ್ಯಾಲಯಗಳ ಖಾಸಗೀಕರಣದ ಕುರಿತು ಚರ್ಚಿಸುವ ವಿದ್ಯಾರ್ಥಿಗಳು ಈ ಹೋರಾಟದ ನಂತರ ಮೂಡಿಬರುವ ಹೊಸ ಹೋರಾಟಗಳ ಕುರಿತು ಭರವಸೆಯಿಂದ ಚರ್ಚಿಸುತ್ತಾರೆ. ಚೆ, ಕ್ಯಾಸ್ಟ್ರೋ ಮತ್ತು ಚೇತನ್ ಭಗತ್‌ರನ್ನೂ ಅವರಲ್ಲಿ ಓದುತ್ತಿದ್ದಾರೆ. ಸಂಜೆಯ ಚಹಾ ಮತ್ತು ತಡರಾತ್ರಿಯವರೆಗಿನ ಚರ್ಚೆಗಳು ದೇಶವನ್ನು ಕಾಡುತ್ತಿರುವ ಸಂಗತಿಗಳು ಮತ್ತು ಅಸಮಾನತೆ, ಜಾತಿ, ಜೆಂಡರ್‌ಗಳ ಸಂಕೋಲೆಗಳನ್ನು ಒಡೆದು ಅವರವರ ಹಕ್ಕುಗಳನ್ನು ಪಡೆಯುವ ಬಗ್ಗೆ ನಡೆಯುತ್ತವೆ.

ಇಂದು ನಡುಗುತ್ತಿರುವ ಗಣರಾಜ್ಯದಲ್ಲಿ ಜನರು ಚಪ್ಪಾಳೆಗಳ ಮೂಲಕ ಬೆಚ್ಚಗಾಗುತ್ತಿಲ್ಲ; ಬದಲಿಗೆ ಅವರ ಜಠರದಲ್ಲಿ ಉರಿಯುತ್ತಿರುವ ಬೆಂಕಿ ಮತ್ತು ಹೃದಯದ ಬೆಚ್ಚಗಿನ ಭಾವನೆಗಳು ಬೆಚ್ಚಗಾಗಿಸಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...