Homeಮುಖಪುಟ’ನಡುಗುತ್ತಿರುವ ಗಣತಂತ್ರದಲ್ಲಿ ಆಂದೋಲನದ ಬಿಸಿ’: ಡಾ. ಸ್ವಾತಿ

’ನಡುಗುತ್ತಿರುವ ಗಣತಂತ್ರದಲ್ಲಿ ಆಂದೋಲನದ ಬಿಸಿ’: ಡಾ. ಸ್ವಾತಿ

- Advertisement -
- Advertisement -

ಮಧ್ಯಪ್ರದೇಶದ ಪ್ರಸಿದ್ಧ ವಿಡಂಬನಕಾರ ಹರಿಶಂಕರ್ ಪಾರ್ಸಾಯಿ ಅವರು ಗಣರಾಜ್ಯೋತ್ಸವದಂದು ’ತಿಥುರ್ತಾ ಗಣತಂತ್ರ್ ಔರ್ ಭೀಗ್ತಿ ಸ್ವತಂತ್ರ್’ (ನಡುಗುತ್ತಿರುವ ಗಣತಂತ್ರ ಮತ್ತು ಸೊರಗುತ್ತಿರುವ ಸ್ವಾತಂತ್ರ್ಯ ದಿವಸ) ಎಂಬ ಶೀರ್ಷಿಕೆಯ ಕಿರು ಪ್ರಬಂಧವನ್ನು ಬರೆದಿದ್ದಾರೆ. ಇದರಲ್ಲಿ ’ನಮ್ಮ ಗಣರಾಜ್ಯ ದಿನ ನಡುಗುತ್ತಿದೆ, ಸ್ವಾತಂತ್ರ್ಯ ದಿನ ಸೊರಗುತ್ತಿದೆ’ ಎಂದು ಅವರು ಪ್ರತಿಪಾದಿಸುತ್ತಾರೆ.

ಈ ರಾಷ್ಟ್ರೀಯ ದಿನಗಳು ಮತ್ತು ಅಧಿಕೃತ ರಜಾದಿನಗಳ ಹಿನ್ನೆಲೆಯಲ್ಲಿ ಪಾರ್ಸಾಯಿ ಈ ವಿಡಂಬನೆ ಬರೆದಿದ್ದಾರೆ. ದೆಹಲಿಯಲ್ಲೆ ನಡೆದ ಗಣರಾಜ್ಯೋತ್ಸವದ ಸರ್ಕಾರಿ ಕಾರ್ಯಕ್ರಮದ ಮೆರವಣಿಗೆಯ ವಾತಾವರಣವನ್ನು ಪಾರ್ಸಾಯಿ ವಿವರಿಸಿದ್ದಾರೆ. ರೇಡಿಯೊ ಅನೌನ್ಸರ್ (ಉದ್ಘೋಷಕಿ), ’ಜೋರಾಗಿ ಚಪ್ಪಾಳೆ ಕೇಳಿಸುತ್ತಿವೆ’ ಎಂದು ವಿವರಿಸುವುದನ್ನು ಲೇಖಕ ಕೇಳಿಸಿಕೊಳ್ಳುತ್ತಾರೆ. ಆದರೆ ಪಾರ್ಸಾಯ್‌ಗೆ ಆ ಚಪ್ಪಾಳೆಗಳು ಎಲ್ಲಿಂದ ಬರುತ್ತವೆ ಎಂದು ನೋಡಲು/ತಿಳಿಯಲು ಸಾಧ್ಯವಾಗುವುದಿಲ್ಲ. ಓವರ್‌ಕೋಟ್ ಧರಿಸಿ, ಕುರ್ಚಿಗಳ ಮೇಲೆ ಕುಳಿತ ಪ್ರೇಕ್ಷಕರಿಂದ ಈ ಚಪ್ಪಾಳೆಗಳು ಬರುತ್ತಿಲ್ಲ. ಕೈ ಬೆಚ್ಚಗಾಗಲು ಓವರ್‌ಕೋಟ್ ಪಾಕೆಟ್‌ಗಳಿಲ್ಲದ, ನೆಲದ ಮೇಲೆ ಕುಳಿತಿರುವ ಜನರ ನಿರಂತರ ಚಪ್ಪಾಳೆಯಿಂದ ಈ ಶಬ್ದ ಬರುತ್ತಿದೆ. ಈ ನಡುಗುವ ಕೈಗಳ ಚಪ್ಪಾಳೆಯನ್ನು ಗಣತಂತ್ರವು ಹಿಡಿದಿಟ್ಟುಕೊಂಡಿದೆ ಎಂದು ತೋರುತ್ತದೆ.

ಭಾರತದ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯ ತೀಕ್ಷ್ಣ ವಿಡಂಬನೆ ಮತ್ತು ವ್ಯಾಖ್ಯಾನಕ್ಕೆ ಹೆಸರುವಾಸಿಯಾದ ಪಾರ್ಸಾಯಿ ವಸ್ತುಸ್ಥಿತಿಯನ್ನು ಬಿಂಬಿಸಿದ್ದಾರೆ. ರಾಜಕೀಯ ಪಕ್ಷಗಳು ಮತ್ತು ಅವುಗಳ ಪುನರಾವರ್ತಿತ ಭರವಸೆಗಳಿಂದ ಮತ್ತೆ ಮತ್ತೆ ಮೂರ್ಖರಾಗುವ ಜನರನ್ನು ಸಹ ಅವರು ಟೀಕಿಸಿದ್ದಾರೆ. ಬಹುಷಃ ಪಾರ್ಸಾಯಿ ಹೇಳಿದಂತೆ, ಚಪ್ಪಾಳೆ ಹೊಡಿ ಯುತ್ತಿರುವ ಕೈಗಳ ಶಾಖದ ಹೊರತಾಗಿ ಜನರ ಬಳಿ ಏನೂ ಇಲ್ಲ.

ಚಳವಳಿಯ ಬೆಂಕಿ

ಪ್ರತಿಯೊಬ್ಬ ಸಿನಿಕ ವ್ಯಕ್ತಿಯ ಹಿಂದೆ ಒಬ್ಬ ನಿರಾಶೆಗೊಂಡ ಆದರ್ಶವಾದಿ ಇರುತ್ತಾನೆ

– ಜಾರ್ಜ್ ಕ್ಯಾರ್ಲಿನ್.

ಪರ್ಸಾಯಿ ಅವರ ವಿಡಂಬನೆಯು ಜಯಪ್ರಕಾಶ್ ನಾರಾಯಣರು ನೀಡಿದ್ದ ಭರವಸೆಗಳ ವೈಫಲ್ಯ ಮತ್ತು ಲೋಹಿಯಾವಾದಿ ಚಳವಳಿಯಿಂದಾದ ನಿರಾಸೆಯಿಂದ ಹುಟ್ಟುತ್ತದೆ.

ರೈತ ಹೋರಾಟವನ್ನು ನೋಡಲು ಅವರು ಬದುಕಿರಬೇಕಿತ್ತೆಂದು ನನಗೆಷ್ಟು ಅನ್ನಿಸುತ್ತಿದೆ ನೋಡಿ.
ಅವರಂತಹ ಸಿನಿಕ ವ್ಯಕ್ತಿಯನ್ನು ಅದು ಜನಶಕ್ತಿಯ ಮೇಲೆ ಭರವಸೆಯಿಟ್ಟಿರುವ ವ್ಯಕ್ತಿಯನ್ನಾಗಿ ಪರಿವರ್ತಿಸುತ್ತಿತ್ತು.

ಮಾಸ್ಟರ್‌ಸ್ಟ್ರೋಕ್

ದೆಹಲಿಯಲ್ಲಿ ಇಳಿಯುವ ಮುಂಚೆ ಕುಟುಂಬ ಮತ್ತು ಸ್ನೇಹಿತರು ದೆಹಲಿಯ ಚಳವಳಿಯ ಕುರಿತು ಮತ್ತು ಸರ್ಕಾರ ಹಾಗೂ ಚಳವಳಿಕಾರರಿಂದ ಉಂಟಾಗಬಹುದಾದ ಹಿಂಸೆಯ ಕುರಿತು ಎಚ್ಚರಿಸಿದ್ದರು. ದೆಹಲಿಯ ಚಳಿಯು ದಿನೇ ದಿನೇ ಹೆಚ್ಚೆಚ್ಚು ಕೊರೆಯುತ್ತಿದ್ದು, ಪ್ರತೀ ವರ್ಷ 20-40-50 ವರ್ಷಗಳ ದಾಖಲೆಯನ್ನು ಮುರಿಯುತ್ತಲೇ ಇದೆ. ನಾನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಿದ್ಧಳಾಗಿಯೇ ಬಂದಿದ್ದೆ. ಸಿಂಘು ಗಡಿಯಲ್ಲಿ ಬೆಳಿಗಿನ ಚಳಿಯು ಮಂಜಿನ ಕಾರಣದಿಂದ ಇನ್ನೂ ತೀವ್ರವಾಗಿತ್ತು. ಸಿಂಘು ಗಡಿಯ ಪ್ರವೇಶದಲ್ಲಿ ವಿಪರೀತವಾಗಿ ನಿಯೋಜಿಸಲಾಗಿದ್ದ ಪೊಲೀಸ್ ಮತ್ತು ಮೀಸಲುಪಡೆಯು ಪ್ರತಿಭಟನಾಕಾರರನ್ನು ಸದೆಬಡಿಯಲು ದೆಹಲಿ ಪೊಲೀಸರ ಕುಪ್ರಸಿದ್ಧ ಆಯುಧಗಳಾದ ಜಲಫಿರಂಗಿ, ಲಾಠಿಗಳ ಚಿತ್ರಣವನ್ನು ಕಣ್ಣ ಮುಂದೆ ತಂದಿತು.

ಆ ಪ್ರದೇಶವನ್ನು ಪ್ರವೇಶಿಸುತ್ತಿದ್ದಂತೆ ನನ್ನೊಳಗೆ ಭಯವೂ ಪ್ರವೇಶಿಸಿತು. ಆದರೆ, ಇನ್ನಷ್ಟು ಒಳಗೆ ಹೋದಂತೆ ರೈತರ ಬೆಚ್ಚಗಿನ ನಡವಳಿಕೆಯಿಂದ ಚಳಿಯು ಮಾಯವಾಯಿತು. ಈ ರೈತರು 60 ದಿನಗಳಿಗಿಂತಲೂ ಹೆಚ್ಚು ಕಾಲದಿಂದ ಇಲ್ಲಿದ್ದು ಕಟ್ಟಿರುವ ಚಳವಳಿಯು ಇನ್ನೂ ಎಷ್ಟೋ ಚಳವಳಿಗಳಿಗೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ.

ಸಾಮಾನ್ಯವಾಗಿ ನಮ್ಮ ಮೊದಲ ಅನಿಸಿಕೆಯು ಅದುವರೆಗೆ ಮನದಲ್ಲಿ ಮೂಡಿರುವ ಪೂರ್ವಗ್ರಹಗಳಿಂದ ರೂಪುಗೊಳ್ಳುತ್ತದೆ ಮತ್ತು ಪಂಜಾಬಿನ ಕುರಿತು ಅಂತಹವು ಸಾಕಷ್ಟಿವೆ. ಪಂಜಾಬಿನ ಸಂಪತ್ತು ಮತ್ತು ಮಹಿಳೆಯರ ಕುರಿತಂತೆ ಇರುವ ಪಾಪ್ ಹಾಡುಗಳು ಮತ್ತು ರ್‍ಯಾಪ್ ಸಂಗೀತವು ಬಹಳ ಸಾಮಾನ್ಯ. ಆದರೆ ಈ ಚಳವಳಿಯು ವಿದೇಶದಿಂದ ಬಂದ ಸಂಪತ್ತು ಮತ್ತು ಉಪಭೋಗಿತನದಲ್ಲಿ ಬಹುಕಾಲ ಮುಳುಗಿದ್ದ ಪಂಜಾಬಿನ ಇನ್ನೊಂದು ಮುಖದ ಪರಿಚಯವನ್ನು ನಮಗೆ ಮಾಡಿಕೊಡುತ್ತದೆ. ಬಹುತೇಕ ಕುಟುಂಬಗಳ ಒಬ್ಬ ಸದಸ್ಯ ವಿದೇಶದಲ್ಲಿದ್ದು, ಇನ್ನೊಬ್ಬರು ಕೃಷಿ ಮಾಡುತ್ತಿರುವುದನ್ನು ನೀವು ನೋಡಬಹುದು.

ಈ ಚಳವಳಿಯು ಪಂಜಾಬನ್ನು ಎಷ್ಟರಮಟ್ಟಿಗೆ ಬಡಿದೆಬ್ಬಿಸಿದೆಯೆಂದರೆ, ತಪ್ಪುದಾರಿಗೆ ಹೋಗಿರುವವರನ್ನೂ ಸರಿದಾರಿಗೆ ಕರೆತರುವ ರೀತಿಯ ಬದಲಾವಣೆಗೆ ಕಾರಣವಾಗಿ, ಸರ್ವರ ಅಭಿವೃದ್ಧಿಯ ಕಡೆಗೆ ಕೊಂಡೊಯ್ಯಲಿದೆ. ಪ್ರತೀ ಮೂಲೆಗೂ ಏನೋ ಒಂದು ಸೌಲಭ್ಯ ಕಲ್ಪಿಸುವ ಜನರಿದ್ದಾರೆ. ಅದು ಊಟದ ಮನೆಯಾಗಿರಬಹುದು, ಶೂ ಪಾಲಿಷ್, ಕಾಲಿನ ಮಸಾಜ್, ಹೊದಿಕೆಗಳು, ಟೆಂಟುಗಳು ಇತ್ಯಾದಿ ಇತ್ಯಾದಿ. ನೀವು ದೂರದ ಊರಿಂದ ಹೋರಾಟವನ್ನು ಬೆಂಬಲಿಸಲು ಬಂದಿದ್ದೀರೆಂದು ಗೊತ್ತಾದರೆ ಇಲ್ಲಿನ ಜನರು ಬಹಳ ಸಂತಸಗೊಳ್ಳುತ್ತಾರೆ.
ಹಿಂದೆಂದೂ ಹೋರಾಟದಲ್ಲಿ ಪಾಲ್ಗೊಂಡ ಅನುಭವವಿಲ್ಲದ ರೈತರು ಈ ಸಾರಿಯ ಹೋರಾಟದಲ್ಲಿ ಸೇರಿಕೊಂಡು ಸಂಗಾತಿಗಳು, ಸ್ನೇಹಿತರು, ಕುಟುಂಬಸ್ಥರೇ ಆಗಿ ಹೋಗಿದ್ದಾರೆ. ಈ ಆಂದೋಲನದಲ್ಲಿ ಅವರು ಹೊಸ ಮನುಷ್ಯರೇ ಆಗಿದ್ದಾರೆ. ಕೆನಡಾಕ್ಕೆ ಹೋಗುವುದಕ್ಕಿಂತ ಸಾರ್ಥಕವಾದ ಹೊಸ ಬದುಕು ಇಲ್ಲಿನ ಬಾಂಧವ್ಯದಲ್ಲಿದೆ ಎನ್ನುವಂತಾಗಿದೆ. ಸಮಾಜದ ಕುರಿತಾದ ವಿಶೇಷ ಚಿಂತನೆಯ ಅಗತ್ಯವಿಲ್ಲದಂತೆ ಗಂಡು ಹೆಣ್ಣಿನ ಪಾತ್ರಗಳಲ್ಲೂ ನಿಧಾನದ ಬದಲಾವಣೆ ಕಾಣಸಿಗುತ್ತದೆ. ದೇಶವನ್ನು ಕಾಡುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸುತ್ತಾ ಗಂಡು ಹೆಣ್ಣುಗಳಿಬ್ಬರೂ ಒಟ್ಟಿಗೆ ಅಡಿಗೆ ಮಾಡುತ್ತಾರೆ.

ಪಂಜಾಬ್ ಮತ್ತು ಹರಿಯಾಣಗಳಲ್ಲಿ ನಿರುದ್ಯೋಗ ಹೆಚ್ಚಾಗಿರುವುದು ಹಾಗೂ ವಿಶ್ವವಿದ್ಯಾಲಯಗಳ ಖಾಸಗೀಕರಣದ ಕುರಿತು ಚರ್ಚಿಸುವ ವಿದ್ಯಾರ್ಥಿಗಳು ಈ ಹೋರಾಟದ ನಂತರ ಮೂಡಿಬರುವ ಹೊಸ ಹೋರಾಟಗಳ ಕುರಿತು ಭರವಸೆಯಿಂದ ಚರ್ಚಿಸುತ್ತಾರೆ. ಚೆ, ಕ್ಯಾಸ್ಟ್ರೋ ಮತ್ತು ಚೇತನ್ ಭಗತ್‌ರನ್ನೂ ಅವರಲ್ಲಿ ಓದುತ್ತಿದ್ದಾರೆ. ಸಂಜೆಯ ಚಹಾ ಮತ್ತು ತಡರಾತ್ರಿಯವರೆಗಿನ ಚರ್ಚೆಗಳು ದೇಶವನ್ನು ಕಾಡುತ್ತಿರುವ ಸಂಗತಿಗಳು ಮತ್ತು ಅಸಮಾನತೆ, ಜಾತಿ, ಜೆಂಡರ್‌ಗಳ ಸಂಕೋಲೆಗಳನ್ನು ಒಡೆದು ಅವರವರ ಹಕ್ಕುಗಳನ್ನು ಪಡೆಯುವ ಬಗ್ಗೆ ನಡೆಯುತ್ತವೆ.

ಇಂದು ನಡುಗುತ್ತಿರುವ ಗಣರಾಜ್ಯದಲ್ಲಿ ಜನರು ಚಪ್ಪಾಳೆಗಳ ಮೂಲಕ ಬೆಚ್ಚಗಾಗುತ್ತಿಲ್ಲ; ಬದಲಿಗೆ ಅವರ ಜಠರದಲ್ಲಿ ಉರಿಯುತ್ತಿರುವ ಬೆಂಕಿ ಮತ್ತು ಹೃದಯದ ಬೆಚ್ಚಗಿನ ಭಾವನೆಗಳು ಬೆಚ್ಚಗಾಗಿಸಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...