Homeಮುಖಪುಟಶೇ.50 ರಷ್ಟು ಬೆಲೆ ಕುಸಿತದಿಂದ ಸಂಕಷ್ಟದಲ್ಲಿ ರೇಷ್ಮೆ ಬೆಳೆಗಾರರು: ತಿರುಗಿ ನೋಡದ ಸರ್ಕಾರ

ಶೇ.50 ರಷ್ಟು ಬೆಲೆ ಕುಸಿತದಿಂದ ಸಂಕಷ್ಟದಲ್ಲಿ ರೇಷ್ಮೆ ಬೆಳೆಗಾರರು: ತಿರುಗಿ ನೋಡದ ಸರ್ಕಾರ

- Advertisement -
- Advertisement -

ಪ್ರಪಂಚದಲ್ಲಿಯೇ ಅತಿ ಹೆಚ್ಚು ರೇಷ್ಮೆ ಉತ್ಪಾದಿಸುವ ರಾಷ್ಟ್ರಗಳಲ್ಲಿ ಭಾರತಕ್ಕೆ ಎರಡನೇ ಸ್ಥಾನ. ಇನ್ನು ಭಾರತದಲ್ಲಿಯೇ ಅತಿ ಹೆಚ್ಚು ರೇಷ್ಮೆ ಉತ್ಪಾದಿಸುವ ರಾಜ್ಯ ಕರ್ನಾಟವಾಗಿದೆ. 2018-19ರಲ್ಲಿ ಉತ್ಪಾದನೆಯಾದ 35,261 ಮೆಟ್ರಿಕ್ ಟನ್ ರೇಷ್ಮೆಯಲ್ಲಿ ಭಾರತದ ಶೇಕಡಾ 32 ರಷ್ಟು ಕೊಡುಗೆಯನ್ನು ಕರ್ನಾಟಕವೇ ನೀಡಿದೆ. ಅದೇ ರೀತಿ ಏಷ್ಯಾದಲ್ಲಿಯೇ ಅತಿ ದೊಡ್ಡ ರೇಷ್ಮೆ ಮಾರುಕಟ್ಟೆ ಕರ್ನಾಟಕದ ರಾಮನಗರದಲ್ಲಿದೆ. ಸಾವಿರಾರು ರೈತರಿಗೆ ಆಸೆಯಾಗಿದ್ದು ಅದು ಈಗ ಕಣ್ಣೀರಿನ ಕತೆ ಹೇಳುತ್ತಿದೆ.

ಹಾವೇರಿ ಜಿಲ್ಲೆಯ ಹಂದಿಗನೂರಿನ ನಿಖಿರಪ್ಪ ಗಡಿಯಪ್ಪ ಅವರು ಮೇ ತಿಂಗಳ ಕೊನೆಯಲ್ಲಿ ಸುಮಾರು 250 ಕೆಜಿ ರೇಷ್ಮೆ ತೆಗೆದುಕೊಂಡು ಟೆಂಪೊದಲ್ಲಿ ರಾಮನಗರಕ್ಕೆ ಪ್ರಯಾಣ ಬೆಳೆಸಿದರು. ಸತತ 11 ಗಂಟೆಗಳ ತಡೆರಹಿತ 370 ಕಿಲೋಮೀಟರ್ ಪ್ರಯಾಣದ ಸಮಯದಲ್ಲಿ ಲಾಕ್‌ಡೌನ್‌ ಕಾರಣಕ್ಕೆ ಅವರಿಗೆ ದಾರಿಯುದ್ದಕ್ಕೂ ಆಹಾರ ಸಿಗಲಿಲ್ಲ. ಆದರೆ ಅವರ ಚಿಂತೆ ಆಹಾರದ್ದಾಗಿರಲಿಲ್ಲ ಬದಲಿಗೆ ರೇಷ್ಮೆಗೆ ಬೆಲೆ ಕಡಿಮೆಯಾಗಿದ್ದರೆ? ಎನ್ನುವ ಚಿಂತೆ ಅವರನ್ನು ಕಾಡುತ್ತಿತ್ತು.

ಕೊನೆಗೂ ಅವರ ಆತಂಕ ನಿಜವಾಯಿತು. ಅವರ ಕನಸುಗಳು ಕಮರಿ ಹೋದವು. ಏಕೆಂದರೆ ಅಷ್ಟೆಲ್ಲ ಕಷ್ಟಪಟ್ಟರೂ ಸಹ ಕೊನೆಗೆ ಅವರಿಗೆ ಸಿಕ್ಕಿದ್ದು ಪ್ರತಿ ಕೆಜಿಗೆ 270 ರೂನಂತೆ ಕೇವಲ 67,500 ರೂ ಮಾತ್ರ.

ಮಾರ್ಚ್ ಆರಂಭದಲ್ಲಿ, ಕೆಜಿ ಬಿವೊಲ್ಟೈನ್ ರೇಷ್ಮೆಗೆ ಸುಮಾರು 550 ರೂ, ಮತ್ತು ಅಡ್ಡ-ತಳಿ ರೇಷ್ಮೆಗೆ ಸರಾಸರಿ 480 ರೂ ಇತ್ತು. ಮದುವೆಯ ಋತುವನ್ನು ಹೊರತುಪಡಿಸಿ ಸಾಮಾನ್ಯವಾಗಿ ಕೆಜಿ ಬಿವೊಲ್ಟೈನ್ ರೇಷ್ಮೆಗೆ ಸುಮಾರು 450-500 ರೂ ಮತ್ತು ಡ್ಡ-ತಳಿ ರೇಷ್ಮೆಗೆ ಸರಾಸರಿ 380-420 ರೂ ಇತ್ತು.

ನಮ್ಮ ಮನೆಯ ಹತ್ತು ಜನರು ರೇಷ್ಮೆ ಬೆಳೆಯಲು ತೊಡಗಿಸಿಕೊಂಡಿದ್ದೇವೆ. ಈಗ ಕೂಲಿ, ರೇಷ್ಮೆ ಹುಳು, ರಸಗೊಬ್ಬರ, ಸಾರಿಗೆ ಮತ್ತು ನಿರ್ವಹಣೆ ಸೇರಿ 48,000 ರೂ ಖರ್ಚು ಮಾಡಿದ್ದೆ. ಎಲ್ಲಾ ಕಳೆದರೆ ನಾನು ಕೇವಲ ರೂ. 20,000 ರೂ ಉಳಿಸುತ್ತೇನೆ ಅಷ್ಟೆ. “ನಾನು 2014 ರಿಂದ ಹಿಪ್ಪುನೇರಳೆ ಬೆಳೆಯಲು ಪ್ರಾರಂಭಿಸಿದೆ. ಈಗ ತೀವ್ರ ನಷ್ಟವಾದ್ದರಿಂದ ನಾನು ಪಡೆದಿರುವ ಸಾಲಗಳನ್ನು ಹೇಗೆ ಮರುಪಾವತಿಸುತ್ತೇನೆ ಎಂದು ನನಗೆ ತಿಳಿದಿಲ್ಲ”ಎಂದು 42 ವರ್ಷದ ಗಡಿಯಪ್ಪ ಹೇಳುತ್ತಾರೆ.

ಕೋವಿಡ್ -19 ಲಾಕ್‌ಡೌನ್ ರೇಷ್ಮೆ ಉದ್ಯಮವನ್ನು ತೀವ್ರವಾಗಿ ಬಾಧಿಸಿದೆ. ಬೆಲೆಗಳ ಕುಸಿತಕ್ಕೆ ಒಂದು ಕಾರಣವೆಂದರೆ ಸಂಪೂರ್ಣ ಬೇಡಿಕೆ-ಪೂರೈಕೆ ಸರಪಳಿಯ ಕಡಿತವಾಗಿದೆ. ಈ ಅವಧಿಯಲ್ಲಿ ಅನೇಕ ವಿವಾಹಗಳನ್ನು ಮುಂದೂಡಲಾಗಿದೆ, ಕಾರ್ಯಕ್ರಮಗಳು ರದ್ದಾಗಿವೆ ಮತ್ತು ಉಡುಪು ಮಳಿಗೆಗಳು ಸ್ಥಗಿತಗೊಂಡಿವೆ. ಆದ್ದರಿಂದ ರೇಷ್ಮೆಯ ಬೇಡಿಕೆ ತೀವ್ರವಾಗಿ ಕಡಿಮೆಯಾಗಿದೆ ಎಂದು ಮಾರುಕಟ್ಟೆ ಅಧಿಕಾರಿಗಳು ಮತ್ತು ಇತರರು ಹೇಳುತ್ತಾರೆ. ಆದರೆ ರೈತರು ಕಾಯಲು ಸಾಧ್ಯವಿಲ್ಲ. ಅವರು ಹಾಳಾಗುವ ಮುನ್ನವೇ ರೇಷ್ಮೆಯನ್ನು ಸಮಯಕ್ಕೆ ಸರಿಯಾಗಿ ಮಾರಾಟ ಮಾಡಬೇಕು.

ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ, ರಾಮನಗರ ಮಾರುಕಟ್ಟೆಯು ಮಾರ್ಚ್ 25 ರಿಂದ ಏಪ್ರಿಲ್ 1 ರವರೆಗೆ ಒಂದು ವಾರದವರೆಗೆ ಸ್ಥಗಿತಗೊಂಡಿತ್ತು ಎಂದು ಅಧಿಕಾರಿಗಳು ಹೇಳುತ್ತಾರೆ. ಇದು ಮತ್ತೆ ತೆರೆದ ನಂತರ, ಬಿವೊಲ್ಟೈನ್ ರೇಷ್ಮೆಯ ಸರಾಸರಿ ಬೆಲೆ ರೂ. ಪ್ರತಿ ಕಿಲೋಗ್ರಾಂಗೆ 330 ರೂ., ಮತ್ತು ಅಡ್ಡ-ತಳಿ ರೇಷ್ಮೆ ರೂ. ಪ್ರತಿ ಕಿಲೋಗೆ 310 ರೂ ಇತ್ತು.

ದೇಶಾದ್ಯಂತ ಲಾಕ್‌ಡೌನ್ ನಿರ್ಬಂಧಗಳನ್ನು ನಿಧಾನವಾಗಿ ಸಡಿಲಿಸಿದಾಗ ರೈತರು ರೇಷ್ಮೆ  ಬೆಲೆಗಳು ಮತ್ತೆ ಪುಟಿಯುವ ನಿರೀಕ್ಷೆಯಲ್ಲಿದ್ದರು. ಆದರೆ ಬೆಲೆಗಳು ಮತ್ತಷ್ಟು ಕಡಿಮೆಯಾದವು. ಮೇ ಕೊನೆಯ ವಾರದ ವೇಳೆಗೆ ಬಿವೊಲ್ಟೈನ್ ರೇಷ್ಮೆ ಸರಾಸರಿ ಬೆಲೆ ರೂ. 250 ಮತ್ತು ಕ್ರಾಸ್‌ಬ್ರೀಡ್ ಬೆಲೆ ಸರಿಸುಮಾರು ರೂ. 200ರೂ ಕುಸಿದಿದೆ.

ತಮಿಳುನಾಡು ಮತ್ತು ಆಂಧ್ರಪ್ರದೇಶಕ್ಕೆ ಕರ್ನಾಟಕದಿಂದ ರೇಷ್ಮೆ ಸರಬರಾಜು ಆಗುತ್ತಿತ್ತು. ಆದರೆ ಲಾಕ್‌ಡೌನ್‌ ಕಾರಣದಿಂದ ಸಾರಿಗೆ ವ್ಯವಸ್ಥೆ ವ್ಯತ್ಯಯವಾದ್ದರಿಂದ ಬೇಡಿಕೆಯಲ್ಲಿ ಕುಸಿತವಾಗಿದೆ. ಅದರಿಂದ ಸಹಜವಾಗಿ ಬೆಲೆ ಕುಸಿದಿದೆ ಎಂದು ಉಪ ನಿರ್ದೇಶಕ ಮುನ್ಶಿ ಬಸಯ್ಯ ಹೇಳಿದ್ದಾರೆ.

“ಬೆಲೆಗಳು ಕಡಿಮೆ ಇರುವುದರಿಂದ ನಾನು ಒಂದು ದಿನವೂ ಕೆಲಸವನ್ನು ನಿಲ್ಲಿಸಲು ಸಾಧ್ಯವಿಲ್ಲ. ನನ್ನ ಕುಟುಂಬವನ್ನು ನಾನು ಹೇಗೆ ಪೋಷಿಸುತ್ತೇನೆ?” ಎಂದು ಗಡಿಯಪ್ಪ ಪ್ರಶ್ನಿಸುತ್ತಾರೆ. ಮುಂದಿನ ಬ್ಯಾಚ್‌ನ ರೇಷ್ಮೆ ತಯಾರಿಸಲು ಅವರೀಗ ಮತ್ತೆ ಸಾಲದ ಮೊರೆ ಹೋಗಬೇಕಾಗಿದೆ. 2019 ರಲ್ಲಿ ಶೇ 12 ರಷ್ಟು ಬಡ್ಡಿದರದಲ್ಲಿ ಸಹಕಾರಿ ಬ್ಯಾಂಕಿನಿಂದ 3.5 ಲಕ್ಷ ರೂ ಮತ್ತು ನಾಲ್ಕು ವರ್ಷಗಳ ಹಿಂದೆ ವಿಜಯ ಬ್ಯಾಂಕಿನಿಂದ ತೆಗೆದುಕೊಂಡ  ಶೇ 7 ರಷ್ಟು ಬಡ್ಡಿಗೆ 1.5 ಲಕ್ಷ ರೂ ಸಾಲವನ್ನು ಇನ್ನೂ ತೀರಿಸಿಲ್ಲಿ ಎಂದು ಅವರು ಹೇಳುತ್ತಾರೆ.

ಸರ್ಕಾರ ಏನದರೂ ಮಧ್ಯಪ್ರವೇಶಿಸಿದೆಯೇ? ಈ ರೈತರು ಏನು ಮಾಡಬೇಕು? ಈ ಪರಿಸ್ಥಿತಿ ಯಾವಾಗ ಸುಧಾರಿಸುತ್ತದೆ? ಈ ಪ್ರಶ್ನೆಗಳಿಗೆ ಉತ್ತರ ನೀಡುವವರು ಯಾರು?

ಕೃಪೆ: ರೂರಲ್‌ಇಂಡಿಯಾಆನ್‌ಲೈನ್‌.ಆರ್ಗ್‌


ಇದನ್ನೂ ಓದಿ: ವಿಶ್ವದ 9ನೇ ಶ್ರೀಮಂತ ವ್ಯಕ್ತಿಯಾಗಿ ಮುಖೇಶ್ ಅಂಬಾನಿ: ಈ ಸ್ಥಾನಕ್ಕೆ ಬಂದಿದ್ದು ಹೇಗೆ ಗೊತ್ತೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...