Homeಮುಖಪುಟಬೆಳ್ಳಿ ಚುಕ್ಕಿ: ರಾತ್ರಿ ಆಕಾಶದಲ್ಲಿ ಒರಿಯಾನ್ ನಿಹಾರಿಕೆ ಮತ್ತು ಕೃತಿಕಾ ನಕ್ಷತ್ರ ಪುಂಜ

ಬೆಳ್ಳಿ ಚುಕ್ಕಿ: ರಾತ್ರಿ ಆಕಾಶದಲ್ಲಿ ಒರಿಯಾನ್ ನಿಹಾರಿಕೆ ಮತ್ತು ಕೃತಿಕಾ ನಕ್ಷತ್ರ ಪುಂಜ

- Advertisement -
- Advertisement -

ಆಕಾಶ ವೀಕ್ಷಣೆಯಲ್ಲಿ ಗ್ರಹಗಳು ಮತ್ತು ನಕ್ಷತ್ರ ಪುಂಜಗಳನ್ನು ನೋಡುವುದಷ್ಟೇ ಅಲ್ಲ, ಇತರೆ ಖಗೋಳೀಯ ಕಾಯಗಳಾದ ನಿಹಾರಿಕೆಗಳು (ನೆಬುಲ್ಲಾಗಳು), ತೆರೆದ ಕ್ಲಸ್ಟರ್‌ಗಳು (ನಕ್ಷತ್ರಗಳ ಗೊಂಚಲು) ಮತ್ತು ಗೋಳಾಕಾರ ಕ್ಲಸ್ಟರ್‌ಗಳು ಮತ್ತು ಗ್ಯಾಲಾಕ್ಸಿಗಳನ್ನು ಕೂಡ ನೋಡಬಹುದು. ಇಂತಹ ಆಕಾಶ ಕಾಯಗಳನ್ನು ಆಕಾಶ ವೀಕ್ಷಣಾಕಾರರು ಆಳವಾದ ಆಕಾಶಕಾಯಗಳು (Deep Sky Objects- DSO’s)ಎಂದು ಕರೆಯುತ್ತಾರೆ.

ಸಾಮಾನ್ಯವಾಗಿ DSO’s ನೋಡಲು ಕನಿಷ್ಠ ಅಂದರೂ ಬೈನಾಕ್ಯೂಲರ್ ಮುಂದುವರೆದು ಟೆಲಿಸ್ಕೋಪ್ ಅತ್ಯಗತ್ಯ. ಬರಿಕಣ್ಣಿನಲ್ಲೂ ನೋಡಬಹುದಾದ ಕೆಲವು ನಿಹಾರಿಕೆಗಳು, ಕ್ಲಸ್ಟರ್‌ಗಳು ಮತ್ತು ಗ್ಯಾಲಾಕ್ಸಿಗಳು ಇವೆ. ನಗರ ಪ್ರದೇಶಗಳಲ್ಲಿ ಬೆಳಕಿನ ಮಾಲಿನ್ಯ ಹೆಚ್ಚು ಇರುವುದರಿಂದ ಈ ಕಾಯಗಳನ್ನು ನೋಡಲು ಕಷ್ಟವಿದ್ದರೂ ಪ್ರಯತ್ನಿಸಬಹುದು.

ಒರಿಯಾನ್ ಮತ್ತು ಒರಿಯಾನ್ ನಿಹಾರಿಕೆ

ಚಿತ್ರ(1)

ಡಿಸೆಂಬರ್ ತಿಂಗಳನಲ್ಲಿ ನಾವು ಒರಿಯಾನ್ ಮತ್ತು ಒರಿಯಾನ್ ನಿಹಾರಿಕೆಯನ್ನು ಹೇಗೆ ಗುರುತಿಸುವುದು ಎಂಬುದನ್ನು ನೋಡಿದೆವು. ಈ ತಿಂಗಳೂ ಕೂಡ ಯಾವುದೇ ರಾತ್ರಿಯಂದು 8 ಗಂಟೆಯ ಸುಮಾರಿಗೆ ಪೂರ್ವ ದಿಕ್ಕಿಗೆ ಮುಖ ಮಾಡಿ ನಿಂತರೆ, ಅಂದಾಜು 45 ಡಿಗ್ರಿ ಎತ್ತರದಲ್ಲಿ ಈ ಒರಿಯಾನ್ ನಕ್ಷತ್ರ ಪುಂಜ ಕಾಣುತ್ತದೆ (ಚಿತ್ರ- 1ನ್ನು ಗಮನಿಸಿ). ಒರಿಯಾನ್ ಬಹಳ ಸುಲಭವಾಗಿ ಗುರುತಿಸಬಹುದಾದ ನಕ್ಷತ್ರ ಪುಂಜ. ಚಿತ್ರ(1)ರಲ್ಲಿ ಗುರುತು ಮಾಡಿರುವ ಪ್ರದೇಶವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮೂರು ನಕ್ಷತ್ರಗಳು ಗೋಚರಿಸುತ್ತವೆ. ಅದರಲ್ಲಿ ಮಧ್ಯ ಭಾಗದಲ್ಲಿರುವುದು ಒರಿಯಾನ್ ನಿಹಾರಿಕೆ. ನಕ್ಷತ್ರಗಳು ಹುಟ್ಟುವ ಪ್ರದೇಶ!

ಚಿತ್ರ (1)- ಒರಿಯಾನ್ ನಕ್ಷತ್ರ ಪುಂಜ ಮತ್ತು ಒರಿಯಾನ್ ನಿಹಾರಿಕೆ

ಚಿತ್ರ(1)

ಚಳಿಗಾಲದ ಆಕಾಶ ವೀಕ್ಷಣೆಗೆ ಒರಿಯಾನ್ ನಕ್ಷತ್ರ ಪುಂಜ ಒಂದು ದಿಕ್ಸೂಚಿ. ಈ ನಕ್ಷತ್ರ ಪುಂಜದ ಸಹಾಯದಿಂದ ಇತರೆ ನಕ್ಷತ್ರ ಪುಂಜಗಳು, ನಿಹಾರಿಕೆಗಳು ಮತ್ತು ಕ್ಲಸ್ಟರ್‌ಗಳನ್ನು (ನಕ್ಷತ್ರಗಳ ಗೊಂಚಲು) ಸುಲಭವಾಗಿ ನೋಡಬಹುದಾಗಿದೆ.

ಕೃತಿಕಾ ನಕ್ಷತ್ರಗಳ ಗೊಂಚಲು

ಚಿತ್ರ (2)ರಲ್ಲಿ ತೋರಿಸಿರುವಂತೆ, ಒರಿಯಾನ್ ನಕ್ಷತ್ರ ಪುಂಜದ ಮಧ್ಯಭಾಗದ ಮೂರು ಪ್ರಕಾಶಮಾನವಾದ ನಕ್ಷತ್ರಗಳನ್ನು ಸೇರಿಸಿದಂತೆ ಒಂದು ಕಾಲ್ಪನಿಕ ಗೆರೆಯನ್ನು ಕಲ್ಪಿಸಿಕೊಂಡು ಅದೇ ಚಿತ್ರದಲ್ಲಿ ತೋರಿಸಿರುವ ದಿಕ್ಕಿನಲ್ಲಿ ನಕ್ಷತ್ರಗಳನ್ನು ಗಮನಿಸುತ್ತಾ ಬನ್ನಿ. ಹಾಗೆ ಗಮನಿಸುವಾಗ, ಆ ಕಾಲ್ಪನಿಕ ರೇಖೆಯು ಒಂದು ನಕ್ಷತ್ರ ಗೊಂಚಲುಗಳ ಬಳಿ ಹಾದುಹೋಗುತ್ತದೆ. ಇದೇ ಕೃತಿಕಾ ನಕ್ಷತ್ರಗಳ ಗೊಂಚಲು.

ಚಿತ್ರ(2)

ಕೃತಿಕಾ ನಕ್ಷತ್ರ ಗೊಂಚಲು ಒಂದು ತೆರೆದ ನಕ್ಷತ್ರಗಳ ಗೊಂಚಲುಗಳಾಗಿದ್ದು (Open Cluster) ಅತ್ಯಂತ ಸುಂದರವಾಗಿ ಬರಿಗಣ್ಣಿಗೆ ಕಾಣುತ್ತದೆ. ಇದನ್ನು ಇಂಗ್ಲಿಷ್‌ನಲ್ಲಿ Pleiades Cluster ಎಂದು ಕರೆಯುತ್ತಾರೆ. ಕೃತಿಕಾ ನಕ್ಷತ್ರಗಳ ಗೊಂಚಲುಗಳನ್ನು ನೀವು ಸೂಕ್ಷ್ಮವಾಗಿ ಗಮನಿಸಿದರೆ, ಈ ಗೊಂಚಲಿನಲ್ಲಿ ಏಳು ನಕ್ಷತ್ರಗಳನ್ನು ಗುರುತಿಸಬಹುದು. ಪುರಾಣ ಕಥೆಗಳಿಗೆ ಹೋಲಿಸಿಕೊಂಡು ಈ ಏಳು ನಕ್ಷತ್ರಗಳನ್ನು ಸೆವೆನ್ ಸಿಸ್ಟ್‌ರ್‍ಸ್ ಎಂದು ಕರೆಯುವುದು ವಾಡಿಕೆಯಲ್ಲಿದೆ. ಬೈನಾಕ್ಯೂಲರ್‌ನಲ್ಲಿ ನೋಡಿದರೆ ಈ ನಕ್ಷತ್ರಗಳ ಗೊಂಚಲು ಇನ್ನೂ ಚಂದವಾಗಿ ಕಾಣುತ್ತದೆ.

ಚಿತ್ರ (3) ಕೃಪೆ: Hubble Site

ಈ ನಕ್ಷತ್ರಗಳ ಗೊಂಚಲುಗಳ ಚಿತ್ರವನ್ನು ಸಾಮಾನ್ಯವಾಗಿ ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ ಎಲ್ಲ ಪುಸ್ತಕಗಳಲ್ಲಿ ಚಿತ್ರಿಸಿರುತ್ತಾರೆ. ಹೆಚ್ಚು ಸಮಯದ ಎಕ್ಸ್‌ಪೋಶರ್ ಹೊಂದಿರುವ ಕ್ಯಾಮರಾದಿಂದ ಈ ನಕ್ಷತ್ರಗಳ ಗೊಂಚಲಿನ ಫೋಟೋ ತೆಗೆದರೆ, ಈ ಏಳು ನಕ್ಷತ್ರಗಳ ಸುತ್ತಲೂ ತಿಳಿ ನೀಲಿ ಬಣ್ಣದ ಮೋಡಗಳನ್ನು ಕಾಣಬಹುದು. ಈ ಮೋಡಗಳು ಹೈಡ್ರೋಜನ್ ಅನಿಲಗಳಿಂದ ಕೊಡಿದೆ. ಹೈಡ್ರೋಜನ್ ಅನಿಲದ ಮೋಡಗಳು ನಕ್ಷತ್ರಗಳ ಉಗಮಕ್ಕೆ ಕಾರಣ.

ಚಿತ್ರ(3), ಕೃಪೆ: Hubble Site

ಖಗೋಳೀಯ ಅಧ್ಯಯನಗಳ ಪ್ರಕಾರ ನಕ್ಷತ್ರಗಳ ಗೊಂಚಲುಗಳು ಅಥವಾ ಕ್ಲಸ್ಟರ್‌ಗಳಲ್ಲಿರುವ ನಕ್ಷತ್ರಗಳು ಸಾಮಾನ್ಯವಾಗಿ ಒಂದೇ ಮೋಡಗಳಿಂದ ಒಂದೇ ಸಮಯದಲ್ಲಿ ಹುಟ್ಟಿರುತ್ತವೆ. ಈ ಕೃತಿಕಾ ನಕ್ಷತ್ರ ಪುಂಜದ ನಕ್ಷತ್ರಗಳೂ ಸಹ ಒಂದೇ ಮೋಡದಿಂದ ಹುಟ್ಟಿದ್ದು. ಇವು ನಕ್ಷತ್ರಗಳ ಜೀವಿತಾವಧಿಯ ಯೌವ್ವನದ ಅವಧಿಗಳಲ್ಲಿವೆ ಅಂದರೆ, all these are young stars. ನಕ್ಷತ್ರಗಳ ಹುಟ್ಟು ಮತ್ತು ಸಾವಿನ ಬಗ್ಗೆ ಅಧ್ಯಯನ ನಡೆಸುವ ಖಗೋಳ ವಿಜ್ಞಾನಿಗಳಿಗೆ ಯೌವ್ವನದ ನಕ್ಷತ್ರಗಳ ಬಗ್ಗೆ ಅಧ್ಯಯನ ನಡೆಸಲು ಕೃತಿಕಾ ನಕ್ಷತ್ರ ಗೊಂಚಲು ಒಂದು ಪ್ರಯೋಗಾಲಯವೇ ಸರಿ.

ರೋಹಿಣಿ ನಕ್ಷತ್ರ, ವೃಷಭ ರಾಶಿ

ಮತ್ತೊಮ್ಮೆ ಒರಿಯಾನ್ ನಕ್ಷತ್ರ ಪುಂಜಕ್ಕೆ ಹೋಗೋಣ. ಚಿತ್ರ (2) ರಲ್ಲಿ ಒರಿಯಾನ್ ನಕ್ಷತ್ರ ಪುಂಜದಿಂದ ಎಳೆದ ಕಾಲ್ಪನಿಕ ರೇಖೆ ಒಂದು ಕಿತ್ತಳೆ ಬಣ್ಣದ ನಕ್ಷತ್ರದ ಆಸು ಪಾಸಿನಲ್ಲಿ ಹಾದು ಹೋಗುವುದನ್ನ ಕಾಣುತ್ತೇವೆ. ಈ ಕಿತ್ತಳೆ ಬಣ್ಣದ ನಕ್ಷತ್ರವೇ ರೋಹಿಣಿ ನಕ್ಷತ್ರ. ಈ ರೋಹಿಣಿ ನಕ್ಷತ್ರ ಮತ್ತು ಕೃತಕಾ ನಕ್ಷತ್ರದ ಗೊಂಚಲುಗಳು ವೃಷಭ ರಾಶಿಯಲ್ಲಿವೆ/ ನಕ್ಷತ್ರ ಪುಂಜದಲ್ಲಿದೆ. ಅಂತೆಯೇ, ಚಿತ್ರ (2)ರಲ್ಲಿನ ಕಾಲ್ಪನಿಕೆ ಗೆರೆಗಳ ಸಹಾಯದಿಂದ ವೃಷಭ ರಾಶಿಯ ಇತರೆ ನಕ್ಷತ್ರಗಳನ್ನು ನೀವು ನೋಡಬಹುದು.

ಚಂದ್ರನ ಸಹಾಯದಿಂದ ದಿಕ್ಕು ಕಂಡುಹಿಡಿಯುವುದು ಹೇಗೆ?

ಚಂದ್ರ ರಾತ್ರಿ ಆಕಾಶದಲ್ಲಿ ಕಾಣುವ ದೊಡ್ಡದಾದ ಆಕಾಶ ಕಾಯ. ಕೆಲವೊಂದು ಸಾರಿ ಇಳಿಸಂಜೆಯಲ್ಲೂ, ಮುಂಜಾನೆಯಲ್ಲೂ ಮತ್ತು ಸೂರ್ಯನಿದ್ದಾಗಲೂ ಕಾಣುತ್ತಾನೆ. ಚಂದ್ರನ ಸಹಾಯದಿಂದ ದಿಕ್ಕುಗಳನ್ನು ಗುರುತಿಸುವುದು ಹೇಗೆ?

ಚಿತ್ರ(4)

ವೃದ್ಧಿಸುವ ಚಂದ್ರ ಮತ್ತು ಕ್ಷೀಣಿಸುವ ಚಂದ್ರನ ಬಿಂಬಾವಸ್ಥೆಗಳ ಸಹಾಯದಿಂದ ದಿಕ್ಕುಗಳನ್ನು ಗುರುತಿಸುವುದನ್ನು ನೋಡೋಣ.

ಚಿತ್ರ (4)ನ್ನು ನೋಡಿ, ಫೆಬ್ರವರಿ ಐದರಂದು ಮುಂಜಾನೆ 4.10ಕ್ಕೆ ಆಕಾಶದಲ್ಲಿ ಚಂದ್ರ ಕಾಣಿಸುತ್ತಿರುವುದನ್ನು ಈ ಚಿತ್ರವು ಸೂಚಿಸುತ್ತದೆ. ಚಂದ್ರ ಕಾಣುತ್ತಿರುವ ದಿಕ್ಕು ಯಾವುದು ಅಂತ ಚಿತ್ರ (4)ನ್ನು ನೋಡಿ ಹೇಳಬಹುದಾ? ಚಿತ್ರ (5)ರಲ್ಲಿ ಪೂರ್ವ ದಿಕ್ಕು ಅಂತ ಸೂಚಿಸಲಾಗಿದೆ. ಆದರೆ, ಚಿತ್ರ (4)ರಿಂದಲೇ ಈ ದಿಕ್ಕನ್ನು ಗುರುತಿಸಬಹುದಾ ಎನ್ನುವುದು ಪ್ರಶ್ನೆ.

ಚಿತ್ರ (5)

ಚಿತ್ರ(5)

ಚಿತ್ರ (4)ರಲ್ಲಿ ಅರ್ಧ ಚಂದ್ರ ಕಾಣುತ್ತಿದೆ. ನಮಗೆ ಕಾಣುತ್ತಿರುವ ಚಂದ್ರನ ಅರ್ಧ ಭಾಗವನ್ನು(A)ಎಂದು, ಕಾಣದಿರದ ಅರ್ಧ ಭಾಗವನ್ನು (B) ಎಂದು ಕರೆಯೋಣ. ಚಂದ್ರನಿಗೆ ತನ್ನದೇ ಆದ ಬೆಳಕು ಇಲ್ಲದಿರುವುದು ನಮಗೆ ತಿಳಿದ ವಿಚಾರ. ಹಾಗಾಗಿ, ಚಂದ್ರನನ್ನು ನಾವು ನೋಡುತ್ತಿದ್ದರೆ ಅದು ಸೂರ್ಯನ ಬೆಳಕು ಚಂದ್ರನ ಮೇಲೆ ಬಿದ್ದು, ಪ್ರತಿಫಲಿತ ಕಿರಣಗಳು ನಮ್ಮ ಕಣ್ಣಿಗೆ ಬರುತ್ತಿರುವುದರಿಂದ ಮಾತ್ರ. ಚಿತ್ರ (4)ರಲ್ಲಿ ತೋರಿಸಿರುವಂತೆ ಚಂದ್ರನ(A) ಭಾಗದ ಪ್ರದೇಶದಲ್ಲಿ ಸೂರ್ಯನ ಬೆಳಕು ಬೀಳಬೇಕೆಂದರೆ ಸೂರ್ಯ ಕ್ಷಿತಿಜದ (Horizan) ಕೆಳಗೆ ಇದ್ದರೇ ಮಾತ್ರ ಸಾಧ್ಯ. ಸೂರ್ಯ ಬೇರೆ ಕಡೆಗೆ ಇದ್ದರೆ, ಈ ರೀತಿ ಚಂದ್ರನ(B) ಭಾಗದಲ್ಲಿ ಬೆಳಕು ಬಿದ್ದು, ಪ್ರತಿಫಲಿಸುವುದು ಅಸಾಧ್ಯ. ಇದಲ್ಲದೆ ಚಂದ್ರ ಕಾಣುತ್ತಿರುವ ಸಮಯವನ್ನು ಗಮನಿಸಿದರೆ ಅದು ಮುಂಜಾನೆ 04 ಗಂಟೆಯ ಸಮಯ. ಒಂದೆರಡು ಗಂಟೆಯಲ್ಲಿ ಸೂರ್ಯ ಪೂರ್ವ ದಿಕ್ಕಿನಲ್ಲಿ ಉದಯಿಸುತ್ತಾನೆ ಎಂಬುದು ತಿಳಿದ ವಿಚಾರ. ಚಂದ್ರನ(A) ಭಾಗದ ಮೇಲೆ ಸೂರ್ಯನ ಬೆಳಕು ಬಿದ್ದು, ಪ್ರತಿಫಲಿಸುತ್ತಿರುವುದರಿಂದ, ಸೂರ್ಯ ಈ ಕ್ಷಿತಿಜದಿಂದಲೇ ಉದಯಿಸಬೇಕು. ಹಾಗಾಗಿ ಇದು ಪೂರ್ವ ದಿಕ್ಕು ಎನ್ನುವ ಅಭಿಪ್ರಾಯಕ್ಕೆ ಬರಬಹುದು.

ನಾನು ಈ ಚಿತ್ರಗಳನ್ನು Stellariumತಂತ್ರಾಂಶದ ಮುಖಾಂತರ ಸೃಷ್ಟಿಸಿರುವುದರಿಂದ, ಇದರಲ್ಲಿ ಸಮಯವನ್ನು ಮುಂದಕ್ಕೆ ಹಾಕಿ ಸೂರ್ಯ ಉದಯಿಸುವುದನ್ನು ಕೂಡ ನೋಡಬಹುದು. ಅದೇ ಚಿತ್ರ (5). ಈ ಚಿತ್ರದಲ್ಲಿ, ಸೂರ್ಯ ಮತ್ತು ಚಂದ್ರ ಮತ್ತು ಅದರ(A)& (B) ಭಾಗಗಳನ್ನು ಗಮನಿಸಿ, ಬೆಳಕಿನ ಪ್ರತಿಫಲನ ನಿಯಮ ಸರಿ ಇದೆಯೇ ಪರೀಕ್ಷಿಸಿ.

ಇದೇ ವಿಧಾನದಲ್ಲಿ ಚಂದ್ರನನ್ನು ನೀವು ನೋಡಿದಾಗಲೆಲ್ಲಾ ದಿಕ್ಕುಗಳನ್ನು ಗುರುತಿಸಲು ಪ್ರಯತ್ನಿಸಿ. ಅಲ್ಲದೆ, ಆಕಾಶ ವೀಕ್ಷಣೆಯ ಬಗ್ಗೆ ನಿಮ್ಮ ಪ್ರಶ್ನೆಗಳನ್ನು, ಅಭಿಪ್ರಾಯಗಳನ್ನು ಸಹ ಹಂಚಿಕೊಳ್ಳಲು ಈಮೇಲ್ ವಿಳಾಸಕ್ಕೆ ಬರೆಯಿರಿ: [email protected].


ಇದನ್ನೂ ಓದಿ: ಬೆಳ್ಳಿ ಚುಕ್ಕಿ: ಧ್ರುವ ನಕ್ಷತ್ರವನ್ನು ಗುರುತಿಸುವುದು ಹೇಗೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...