ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯಚೂರಿ ಅವರ ಹಿರಿಯ ಮಗ, ಪತ್ರಕರ್ತ ಆಶಿಶ್ ಯಚೂರಿ ಇಂದು ಬೆಳಿಗ್ಗೆ ಕೊರೊನಾದಿಂದ ಮೃತಪಟ್ಟಿದ್ದಾರೆ. ಬಿಹಾರದ ಮಾಜಿ ಶಾಸಕ ಹಾಗೂ ಪ್ರಸ್ತುತ ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಮಿಥಿಲೇಶ್ ಕುಮಾರ್ ತಿವಾರಿ ಅವರು, ‘ಚೀನಾ ಬೆಂಬಲಿಗ ಯಚೂರಿಯ ಮಗ ಆಶಿಶ್ ಚೀನೀ ಕೊರೊನಾಗೆ ನಿಧನರಾಗಿದ್ದಾರೆ’ ಎಂದು ಹಂಗಿಸಿ ವಿಕೃತಿ ಮೆರೆದಿದ್ದಾರೆ.
ವಿಥಿಲೇಶ್ ಕುಮಾರ್ ತಿವಾರಿ ಅವರು 2015 ರಲ್ಲಿ ಬೈಕುಂತ್ಪುರ ಕ್ಷೇತ್ರದಿಂದ ಬಿಹಾರ ವಿಧಾನಸಭೆಗೆ ಬಿಜೆಪಿಯಿಂದ ಆಯ್ಕೆಯಾಗಿದ್ದರು. ಇಂದು ಅವರು ಟ್ವೀಟ್ ಮಾಡಿದ ನಂತರ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಹಾಗಾಗಿ ಅದನ್ನು ಅವರು ಡಿಲಿಟ್ ಮಾಡಿದ್ದಾರೆ. ಟ್ವೀಟ್ನಲ್ಲಿ ಅವರು, “ಚೀನಾ ಬೆಂಬಲಿಗ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯಚೂರಿ ಅವರ ಮಗ ಆಶಿಶ್ ಯಚೂರಿ ಚೀನೀ ಕೊರೊನಾದಿಂದ ನಿಧನ” ಎಂದು ಬರೆದಿದ್ದರು.
ಇದನ್ನೂ ಓದಿ: ಸಿಪಿಎಂ ನಾಯಕ ಸೀತಾರಾಮ್ ಯಚೂರಿ ಅವರ ಮಗ, ಪತ್ರಕರ್ತ ಆಶಿಶ್ ಯಚೂರಿ(34) ಕೊರೊನಾದಿಂದ ನಿಧನ
ಅವರ ಟ್ವೀಟ್ಗೆ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
It takes a special category of ___________ to gloat over the death of a person’s son. You can always rely on someone in the BJP to set the bar so low that a snake wouldn’t be able to slither under it. pic.twitter.com/t1wtbCjxna
— Omar Abdullah (@OmarAbdullah) April 22, 2021
ತನಿಖಾ ಪತ್ರಕರ್ತರಾಗಿದ್ದ 35 ವರ್ಷದ ಆಶಿಶ್ ಯೆಚೂರಿ ಗುರುವಾರ ಬೆಳಿಗ್ಗೆ ಗುರಗಾಂವ್ನ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿನಿಂದಾಗಿ ಎರಡು ವಾರಗಳ ಹೋರಾಟದ ನಂತರ ನಿಧನರಾಗಿದ್ದಾರೆ.
ಸೀತಾರಾಮ್ ಯೆಚೂರಿ ಅವರ ಪುತ್ರನ ನಿಧನಕ್ಕೆ ರಾಷ್ಟ್ರಪತಿ, ಉಪಾ ರಾಷ್ಟ್ರಪತಿ, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಇತರ ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ಆಡಳಿತದಲ್ಲಿ ರಾಜ್ಯಪಾಲರ ಹಸ್ತಕ್ಷೇಪ: ಬಿಎಸ್ವೈ ವಿರುದ್ಧ ಬಿಜೆಪಿ ಹೈಕಮಾಂಡ್ ತಂತ್ರವೇ?