Homeಕರ್ನಾಟಕಪಾಪ! ಯಾರಿಗೂ ಬೇಡ ಸ್ಪೀಕರ್ ಕಾಗೇರಿಯ ಪೀಕಲಾಟ!!

ಪಾಪ! ಯಾರಿಗೂ ಬೇಡ ಸ್ಪೀಕರ್ ಕಾಗೇರಿಯ ಪೀಕಲಾಟ!!

ಸಂಸದೀಯ ಪಟ್ಟುಗಳು, ಭಾಷೆಯ ಮೇಲಿನ ಹಿಡಿತ, ಕಾನೂನು, ನೆನಪಿನ ಶಕ್ತಿಯ ಧೈತ್ಯ ಸಿದ್ಧರಾಮಯ್ಯ ಮಾತಿಗೆ ನಿಂತರಂತೂ ಕಾಗೇರಿಗೆ ದಿಕ್ಕೇ ತೋಚದಂತಾಗುತ್ತದೆ.

- Advertisement -
- Advertisement -

ಒಲ್ಲದ ಮನಸ್ಸಿನಿಂದಲೇ ಸ್ಪೀಕರಿಕೆ “ದಂಡ” ದೀಕ್ಷೆ ಪಡೆದ ವಿಶ್ವೇಶ್ವರ ಹೆಗಡೆ ಕಾಗೇರಿ ಈಗ ಕತ್ತಲಲ್ಲಿ ಕೋಲು ಕಳಕೊಂಡ ಅರೆ ಕುರುಡನಂತೆ ಕಂಗಾಲು ಬಿದ್ದಿದ್ದಾರೆ. ಸತತ ಆರು ಬಾರಿ ಮತೋನ್ಮತ್ತ ಮಸಲತ್ತಿನ ಬಲದಿಂದ ಶಾಸಕಾಗಿರುವ ಈ ಎಬಿವಿಪಿ ಕೇಡರಿನ “ಹಿರಿಯ” ಸಂಘಿ ಸರದಾರ, ಸದನದಲ್ಲಿ ಸಂಸದೀಯ ಜಾಣ್ಮೆ ಪ್ರದರ್ಶಿಸಿದ ಕುರುಹುಗಳೇನೂ ಕಾಣಿಸುತ್ತಿಲ್ಲ. ಕಾಗೇರಿ ಅಂಥ ಜನತಾಂತ್ರಿಕ, ಜನಪದ ಕುಶಾಗ್ರಮತಿ ರಾಜಕಾರಣಿಯೇನಲ್ಲ ಎಂಬುದು ಆತನ ಕಾಲು ಶತಮಾನದ ಗ್ರಾಫು-ಟ್ಯ್ರಾಕು ನೋಡಿದರೆ ಎಂಥವರಿಗೆ ಪಕ್ಕಾ ಆಗುತ್ತದೆ. ಆತನ ಸ್ವಪಕ್ಷದ ಆಜನ್ಮ ಶತ್ರುವೂ, ಬೆಂಕಿ ಬಡಾಯಿ ಸಂಸದನೂ ಆದ ಅನಂತ್ಮಾಣಿ ಆಗಾಗ ಕಾಗೇರಿಗೆ “ಸಂಭಾವಿತ ಹೇಡಿ” ಎಂದು ಪರೋಕ್ಷವಾಗಿ ತಿವಿಯುತ್ತಲೇ ಇರುತ್ತಾನೆ.

ನಿಧಾನಗತಿಯ ಕಾಗೇರಿಯಲ್ಲಿ ಸದನ ನಿಭಾಯಿಸುವ ಪ್ರಜಾತಾಂತ್ರಿಕ ಕೌಶಲ್ಯವಾಗಲೀ, ಹಾರಾಡುವ ಶಾಸಕರನ್ನು ನಿಯಮ ನೀತಿಗಳ ಅಂಕುಶದಿಂದ ನಿಯಂತ್ರಿಸುವ ಜ್ಞಾನವಾಗಲೀ ಇಲ್ಲವೆಂದು ಕೇಶವಕೃಪದಲ್ಲಿ ಒಂದು ಸುತ್ತಿನ ಚರ್ಚೆಯೂ ಆಗಿದೆಯಂತೆ. ಆತ ಅಧಿವೇಶನ ನಡೆಯುವ ಹೊತ್ತಲ್ಲಿ ವಿಧಾನಸಭಾ ಅಧ್ಯಕ್ಷತೆ ಕುರ್ಚಿಯಲ್ಲಿ ಒಂಥರಾ ಕಕ್ಕಾಬಿಕ್ಕಿ ಆಗಿರುವುದಂತೂ ಹೌದು. ಸಂಸದೀಯ ಪಟ್ಟುಗಳು, ಭಾಷೆಯ ಮೇಲಿನ ಹಿಡಿತ, ಕಾನೂನು, ನೆನಪಿನ ಶಕ್ತಿಯ ಧೈತ್ಯ ಸಿದ್ಧರಾಮಯ್ಯ ಮಾತಿಗೆ ನಿಂತರಂತೂ ಕಾಗೇರಿಗೆ ದಿಕ್ಕೇ ತೋಚದಂತಾಗುತ್ತದೆ.

ಯಡ್ಡಿ ಸರ್ಕಾರದ ಕಡೆಯಲ್ಲಿ ಸಂಸದೀಯ ವ್ಯವಹಾರ ಸಚಿವ ಮಾಧುಸ್ವಾಮಿ ಒಬ್ಬರು ಬಿಟ್ಟರೆ ಸಂಸಧೀಯ ಪರಿಭಾಷೆಯಲ್ಲಿ ಮಾತಾಡುವ ತಂತ್ರಗಾರರು ಇಲ್ಲ. ಸಿ.ಟಿ.ರವಿಯಂಥ ದೇಶ “ಕುಟ್ಟುವ” ಹಿಂದೂತ್ವದ ಹಿರೇಮಣಿಗಳು ಬಿಜೆಪಿ ಬದಿಯಲ್ಲಿದ್ದಾರೆಯೇ ಹೊರತು ಕಾಂಗ್ರೆಸ್‍ನ ಸಿದ್ದು, ರಮೇಶ್ ಕುಮಾರ್, ಕೃಷ್ಣ ಭೈರೇಗೌಡ….. ಮುಂತಾದ ನುರಿತ ಸಂಸದೀಯ ಪಟುಗಳಿಗೆ ತಿರುಗೇಟು ಕೊಡುವ ಚತುರರಿಲ್ಲ!

ಇದು ಪೆದ್ದು ಸ್ಪೀಕರ್ ಪೀಕಲಾಟವನ್ನು ಮತ್ತಷ್ಟು ಜಾಸ್ತಿಮಾಡಿದೆ! ಆತ ಯಡ್ಡಿಯ ಅಕ್ರಮ ಸರ್ಕಾರಕ್ಕೆ ಸಂದಿಗ್ಧ ಎದುರಾದಾಗೆಲ್ಲಾ ತಿಣುಕಾಡುವಂತಾಗಿದೆ ಪಾಪ!!. ಕಾಗೇರಿಯ ಇನ್ನೊಂದು ದೊಡ್ಡ ಕಷ್ಣವೆಂದರೆ ಅನರ್ಹ ಶಾಸಕರ ಗಲೀಜು ಪ್ರಕರಣ. ಈ ಕೇಸು ಸುಪ್ರೀಂ ಕೋರ್ಟಿನಲ್ಲಿದೆಯಾದರೂ ವಿಧಾನಸಭಾಧ್ಯಕ್ಷ ಕಾಗೇರಿಯನ್ನೂ ಇದು ಕಂಡೂಕಾಣದಂತೆ ಬಾದಿಸುತ್ತಿದೆ. ಮಾಧ್ಯಮದವರನ್ನು ಅಧಿವೇಶನಕ್ಕೆ ಬರದಂತೆ ನಿರ್ಬಂಧಿಸಿರುವ ಕಾಗೇರಿ ವಿವಾದಕ್ಕೆ ಸಿಲುಕಿದ್ದಾರೆ. ಇಂಥ ಹಲವು “ಧರ್ಮಸೂಕ್ಷ್ಮ”ಕ್ಕೆ ಬಿದ್ದಿರುವ ಕಾಗೇರಿಗೆ ಸ್ಪೀಕರಿಕೆ ಹೊಣೆಗಾರಿಕೆ ಸುಸ್ತು ಹೊಡೆಸುತ್ತಿದೆ.

ಅಧಿಕಾರ ವಹಿಸಿಕೊಂಡ ಮರುಕ್ಷಣದಿಂದಲೇ ಕಾಗೇರಿ ಆಸರೆಗಾಗಿ ತಡಕಾಡುತ್ತಲೇ ಇದ್ದರು. ಸದನ ಮತ್ತು ಕಲಾಪದ ತಂತ್ರಜ್ಞಾನದ ಆಳ-ಅಗಲ ಬಲ್ಲವನೊಬ್ಬನ ಸಹಾಯಕನಾಗಿ ನೇಮಿಸಿಕೊಳ್ಳುವ ಅರ್ಜಂಟಿಗೆ ಬಿದ್ದಿದ್ದರು. ಕಾಗೇರಿಯ ದೌರ್ಬಲ್ಯ ಗೊತ್ತಾಗಿದ್ದೇ ತಡ, ವಿಧಾನ ಸಭೆಯ ನಿವೃತ್ತ ಕಾರ್ಯದರ್ಶಿ ಓಂ ಪ್ರಕಾಶ್ ಚುರುಕಾದರು. ಬಿಜೆಪಿ ವಲಯದಲ್ಲಿ ಪ್ರಭಾವಿ ಸಂಪರ್ಕಗಳನ್ನು ಹೊಂದಿರುವ ಓಂ ಪ್ರಕಾಶ್ ಹತ್ತಿರದ ಸಂಬಂಧಿಯೊಬ್ಬರು ಬಿಜೆಪಿಯ ಆಯಕಟ್ಟಿನ ಜಾಗದಲ್ಲೂ ಇದ್ದಾರೆ. ಈತ ಕಾಗೇರಿಗೂ ಪರಮಾಪ್ತ. ಹಿಂದೆ ಇಂಥದೇ ಆಟ ಆಡಿ ವಿಧಾನಸಭೆ-ವಿಧಾನ ಪರಿಷತ್ ಎರಡಕ್ಕೂ ಸೇರಿದ ಮಹಾಪ್ರಧಾನ ಕಾರ್ಯದರ್ಶಿ ಆಗಲು ಓಂ ಪ್ರಕಾಶ್ ಹವಣಿಸಿದ್ದರು. ಆಗ ಯಡ್ಡಿ ಸಿಎಂ ಆಗಿದ್ದರೆ, ಒಂ ಪ್ರಕಾಶ್ ವಿಧಾನಸಭೆಯ ಕಾರ್ಯದರ್ಶಿಯಾಗಿದ್ದರು. ಆದರೆ ಆಗ ಅದು ವಿಫಲವಾಗಿತ್ತು.

ಇದೇ ಓಂ ಪ್ರಕಾಶ್‍ರನ್ನು ಕಾಗೇರಿ ಈಗ ತನ್ನ “ಸಲಹೆಗಾರ”ನಾಗಿ ನೇಮಿಸಿಕೊಂಡಿದ್ದಾರೆ. ವಿಧಾನಸಭೆಯ ಇತಿಹಾಸದಲ್ಲೇ ಯಾವ ಸ್ಪೀಕರೂ ಇಂಥ ದೈನೇಸಿ ಸ್ಥಿತಿಗೆ ಬಿದ್ದಿರಲಿಲ್ಲ. ಸ್ಪೀಕರ್ ವಿಶೇಷ ಕರ್ತವ್ಯಾಧಿಕಾರಿ ನೇಮಿಸಿ ಕೊಳ್ಳಬಹುದೇ ಹೊರತು “ಸಲಹೆಗಾರ” ಹುದ್ದೆ ಸೃಷ್ಟಿಗೆ ವಿಧಾನಸಭೆಯ ಸಿ ಆ್ಯಂಡ್ ಆರ್ ನಿಯಮದಂತೆ ಅವಕಾಶವೇ ಇಲ್ಲ! ನಡುಪಕ್ಷೀಯವಾಗಿ ಓಂ ಪ್ರಕಾಶ್‍ರನ್ನು ಸಲಹೆಗಾರನೆಂದು ನೇಮಿಸಿಕೊಂಡಿರುವ ಕಾಗೇರಿ ಸಂಪ್ರದಾಯ, ನೀತಿಯನ್ನೆಲ್ಲಿ ಬುದ್ದಿ ಪೂರ್ವಕವಾಗೇ ದಿಕ್ಕರಿಸಿದ್ದಾರೆ. ಇಂಥ ನೇಮಕಾತಿ ಹೊತ್ತಲ್ಲಿ ವಿಧಾನಸಭೆ ಸಮಿತಿ ಸಭೆ ಕರೆಯುವುದು ಪದ್ಧತಿ. ವಾಡಿಕೆಯನ್ನೆಲ್ಲ ಕಡೆಗಣಿಸಿ ಸಲಹೆಗಾರನ ನೇಮಿಸಿಕೊಂಡಿರುವ ಕಾಗೇರಿ ನಡೆಯಿಂದ ವಿಧಾನಸಭೆ ಸಿಬ್ಬಂದಿ ಬೆಚ್ಚಿಬಿದ್ದಿದೆ. ಇದ್ಯಾವುದಕ್ಕೂ ಕೇರ್ ಮಾಡದ ಕಾಗೇರಿ ತನ್ನ ನಿಲುವು ಅಚಲ ಎಂದು ಸಿಬ್ಬಂದಿಗೆ ರೋಪು ಹಾಕಿದ್ದಾರಂತೆ.

ವಿಧಾನಸಭೆಯ ಕಾರ್ಯದರ್ಶಿಗೆ ತತ್ಸಮಾನವಾದ ಹುದ್ದೆ ಸಲಹೆಗಾರ ಸಾಹೇಬರಿಗೆ ದಯಪಾಲಿಸಲಾಗಿದೆ. ಇದರಿಂದ ಎರಡು ಅಧಿಕಾರ ಕೇಂದ್ರ ಸೃಷ್ಟಿಯಾಗಿ ಸಿಬ್ಬಂದಿಯಲ್ಲಿ ಗುಂಪುಗಾರಿಕೆ ಅನಾಹುತ ಎದುರಾಗಲಿದೆ. ದೈನಂದಿನ ಕಾರ್ಯನಿರ್ವಹಣೆಯಲ್ಲಿ ಎಡವಟ್ಟಾಗಲಿದೆ. ಅನಗತ್ಯ ದುಂದು ವೆಚ್ಚವಾಗಲಿದೆ. ಅಷ್ಟಕ್ಕೂ ಇಂಥದೊಂದು ಸಲಹೆಗಾರನ ಅಗತ್ಯವಾದರೂ ಇತ್ತೇ ಎಂದರೆ, ಊಹುಂ ಅದೂ ಇಲ್ಲ! ಸಚಿವಾಲಯದ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿಗಳಿಗೆ ಸದನದ ಕಲಾಪದ ನಿಯಮಾವಳಿ, ಇನ್ನಿತರ ಕಾನೂನು, ಶಾಸಕರ ಹಕ್ಕು ಬಾಧ್ಯತೆಗಳ ತಿಳುವಳಿಕೆ ಇದ್ದೇ ಇರುತ್ತದೆ. ಇವರೆಲ್ಲ ಸ್ಪೀಕರ್ ಎಂಥ ಮೊದ್ಮಣಿಯಾದರೂ ಗೈಡ್ ಮಾಡಿ ಹಳಿಗೆ ತರುವ ಜಾಣರಿರುತ್ತಾರೆ.

ಆದರೆ ಗೊಂದಲಕ್ಕೆ ಬಿದ್ದಿರುವ ಕಾಗೇರಿಗೆ ಸಿಬ್ಬಂದಿ, ಕಾರ್ಯದರ್ಶಿಗಳಿಗಿಂತ ಖಾಸಗಿ ಸಲಹೆಗಾರನ ಮೇಲೆಯೇ ನಂಬಿಕೆ ಹೆಚ್ಚು! ಸಾಮಾನ್ಯವಾಗಿ ಇಂಥ ಅಯೋಗ್ಯ ನೇಮಕಾತಿಗೆ ಹಣಕಾಸು ಇಲಾಖೆ ಆಕ್ಷೇಪವೆತ್ತಿ ಕಡತ ತಿರಸ್ಕಾರಿಸುತ್ತಾರೆ. ಆದರೆ ವಿಚಿತ್ರವೆಂದರೆ ಕಾಗೇರಿಯ ಈ ಕರಾಮತ್ತನ್ನು ಈವರೆಗೆ ಹಣಕಾಸು ಇಲಾಖೆ ಪ್ರಶ್ನಿಸದೇ ನಿಗೂಢ ಮೌನದಲ್ಲಿದೆ.

ಇದು ಸಂಘದೊಳಗಿನ ಸರ್ಕಸ್ ಮತ್ತು ಕಾಗೇರಿಯ ಪೊಕ್ಕುತನದ ಮಹಿಮೆ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾಂಗ್ರೆಸ್ ನಿಂದ ಏಪ್ರಿಲ್ 12ರಂದು ‘ರನ್ ಫಾರ್ ಅಂಬೇಡ್ಕರ್, ರನ್ ಫಾರ್ ಕಾನ್ಸ್ಟಿಟ್ಯೂಷನ್’ ಮ್ಯಾರಥಾನ್ ಆಯೋಜನೆ

ನವದೆಹಲಿ: ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಕಾಂಗ್ರೆಸ್ ಭಾನುವಾರ 'ಅಂಬೇಡ್ಕರ್‌ಗಾಗಿ ಓಟ, ಸಂವಿಧಾನಕ್ಕಾಗಿ ಓಟ' ಮ್ಯಾರಥಾನ್ ಆಯೋಜಿಸಿದೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಲ್ಲಿನ ಮಂಡಿ ಹೌಸ್‌ನಿಂದ ಮ್ಯಾರಥಾನ್‌ಗೆ...

ಮುಖ್ಯವಾಹಿನಿಗೆ ಬಂದ 42 ಕೇಡರ್‌ಗಳು; ರಾಜ್ಯದಲ್ಲಿ’ಮಾವೋವಾದಿ ಕಾರ್ಯಾಚರಣೆ’ ಅಂತ್ಯವಾಗಿದೆ ಎಂದ ತೆಲಂಗಾಣ ಪೊಲೀಸರು

ರಾಜ್ಯದಲ್ಲಿ ಸಿಪಿಐ (ಮಾವೋವಾದಿ) ಸಂಘಟನೆಯ ಕಾರ್ಯಚರಣೆ ಅಂತಿಮವಾಗಿದೆ ಎಂದು ತೆಲಂಗಾಣ ಪೊಲೀಸರು ಘೋಷಣೆ ಮಾಡಿದ್ದಾರೆ. ಬೆಟಾಲಿಯನ್ ಕಮಾಂಡರ್ ಮತ್ತು ಎರಡು ಪ್ರಮುಖ ಗುಂಪುಗಳ ಹಿರಿಯ ನಾಯಕತ್ವ ಸೇರಿದಂತೆ ನಿಷೇಧಿತ ಸಂಘಟನೆಯ 42 ಕೇಡರ್‌ಗಳು...

‘ಹಿಂದಿ ನಿರ್ಮೂಲನೆ ಮಾಡುತ್ತೇವೆ’ ಎಂದು ಸಚಿವರು ಹೇಳಿಲ್ಲ; ಹಿಂದಿ ಪರ ಅರ್ಜಿ ವಜಾ; ₹1 ಲಕ್ಷ ದಂಡ ವಿಧಿಸಿದ ಹೈಕೋರ್ಟ್‌

ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳ ಮೌಲ್ಯಮಾಪನ ಸಂಬಂಧ ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ನೀಡಿದ ಹೇಳಿಕೆಯ ವಿರುದ್ಧ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಕರ್ನಾಟಕ...

ದೆಹಲಿ| ಮುಸ್ಲಿಮರ ಮೇಲಿನ ದ್ವೇಷಕ್ಕೆ ಜೀವಂತ ಹಂದಿಗಳನ್ನು ಪೂಜಿಸುತ್ತಿರುವ ಹಿಂದೂಗಳು

ಹಳೆಯ ದೆಹಲಿಯ ಹಿಂದೂ-ಮುಸ್ಲಿಂ ಜನರು ವಾಸಿಸುವ ತ್ರನಗರದ ನೆರೆಹೊರೆಯಲ್ಲಿ ಹಿಂದೂ ಕುಟುಂಬಗಳು ಜೀವಂತ ಹಂದಿಗಳನ್ನು ಪೂಜಿಸುತ್ತಿದ್ದಾರೆ. ಮುಸ್ಲಿಮರ ಮೇಲಿನ ದ್ವೇಷಕ್ಕೆ ಮನೆಯ ಮುಂಭಾಗ ಅಲಂಕೃತ ಹಂದಿ (ವರಹಾಸ್ವಾಮಿ) ಚಿತ್ರಗಳನ್ನು ಅಳವಡಿಸಿದ್ದಾರೆ ಎಂದು 'ದಿ...

ಪ. ಬಂಗಾಳ: ಮಹಿಳೆಯರಿಗೆ ₹3,000 ರಿಂದ 6 ತಿಂಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಸೇರಿದಂತೆ ಹಲವು ಭರವಸೆ ನೀಡಿದ ಬಿಜೆಪಿ 

ಕೋಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಪ್ರಚಾರ ಆರಂಭವಾಗಿದ್ದು, ಮೊದಲ ಹಂತದ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಪಶ್ಚಿಮ ಬಂಗಾಳದ ಬಿಜೆಪಿ...

ಹಾಸನ| ರೈತ ಮುಖಂಡ ವಾಸುದೇವ ಕಲ್ಕೆರೆ ಮೇಲೆ ಹಲ್ಲೆ; ದುಷ್ಕರ್ಮಿಗಳ ಬಂಧನಕ್ಕೆ ಕೆಪಿಆರ್‌ಎಸ್‌ ಆಗ್ರಹ

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್‌) ಕಾರ್ಯದರ್ಶಿ ಹಾಗೂ ಕಲ್ಕೆರೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ವಾಸುದೇವ ಕಲ್ಕೆರೆ ಮೇಲೆ ಹಲ್ಲೆ-ದೌರ್ಜನ್ಯ ನಡೆಸಿರುವ ಗೂಂಡಾಗಳನ್ನು...

ಉತ್ತರ ಪ್ರದೇಶ| ಡಿಜಿಟಲ್ ಬಂಧನದಿಂದ ಪೋಷಕರನ್ನು ರಕ್ಷಿಸಿದ 8ನೇ ತರಗತಿ ವಿದ್ಯಾರ್ಥಿ

ಸುಮಾರು 10 ಗಂಟೆಗಳ ಕಾಲ ವೀಡಿಯೊ ಕರೆ ಮೂಲಕ ಡಿಜಿಟಲ್ ಬಂಧನಕ್ಕೆ ಒಳಗಾಗಿದ್ದ ತನ್ನ ಹೆತ್ತವರು ಹಣ ಕಳೆದುಕೊಳ್ಳದಂತೆ 8ನೇ ತರಗತಿಯ ಬಾಲಕನೊಬ್ಬ ರಕ್ಷಿಸಿರುವ ಘಟನೆ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ...

ಅಸ್ಸಾಂ: ಪವನ್ ಖೇರಾ ವಿರುದ್ಧದ ಪ್ರಕರಣದಲ್ಲಿ ಒಂದು ವಾರದ ನಿರೀಕ್ಷಣ ಜಾಮೀನು ನೀಡಿದ ತೆಲಂಗಾಣ ಹೈಕೋರ್ಟ್

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ಸಲ್ಲಿಸಿದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ತೆಲಂಗಾಣ ಹೈಕೋರ್ಟ್ ಶುಕ್ರವಾರ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ಒಂದು ವಾರದ...

ನಿವಾಸದಲ್ಲಿ ನಗದು ಪತ್ತೆ ಪ್ರಕರಣದಲ್ಲಿ ಸಿಲುಕಿದ್ದ ನ್ಯಾಯಮೂರ್ತಿ ಯಶವಂತ್ ವರ್ಮಾ ರಾಜೀನಾಮೆ

ತಮ್ಮ ನಿವಾಸದಲ್ಲಿ ನಗದು ಪತ್ತೆ ಆರೋಪದ ಕೇಂದ್ರಬಿಂದುವಾಗಿದ್ದ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಕಳೆದ ವರ್ಷ ಏಪ್ರಿಲ್ 5...

ಆಂಧ್ರಪ್ರದೇಶ: ಬೇಸಿಗೆ ವಿಹಾರಕ್ಕೆಂದು ತೆರಳಿದ್ದ ಮೂವರು ಅಪ್ರಾಪ್ತ ಬಾಲಕಿಯರು ಅನಂತಗಿರಿ ಜಲಪಾತದಲ್ಲಿ ಮುಳುಗಿ ಸಾವು 

ಅನಂತಗಿರಿ: ಬೇಸಿಗೆ ವಿಹಾಕ್ಕೆಂದು ತೆರಳಿದ್ದ ಮೂವರು ಅಪ್ರಾಪ್ತ ಬಾಲಕಿಯರು ಅನಂತಗಿರಿ ಜಲಪಾತದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಜಲಪಾತಕ್ಕೆ ಇಳಿದು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲೂರಿ ಸೀತಾರಾಮರಾಜು ಮೂಲಗುಮ್ಮಿ ಗ್ರಾಮದಲ್ಲಿ ನಾಲ್ವರು...