Homeಮುಖಪುಟಜಮ್ಮು ಕಾಶ್ಮೀರದಂತೆ ಇನ್ನು ಹತ್ತು ರಾಜ್ಯಗಳಿಗೆ ಈಗಲೂ ವಿಶೇಷ ಸ್ಥಾನಮಾನ ಚಾಲ್ತಿಯಲ್ಲಿದೆ. ನಿಮಗಿದು ಗೊತ್ತೆ?

ಜಮ್ಮು ಕಾಶ್ಮೀರದಂತೆ ಇನ್ನು ಹತ್ತು ರಾಜ್ಯಗಳಿಗೆ ಈಗಲೂ ವಿಶೇಷ ಸ್ಥಾನಮಾನ ಚಾಲ್ತಿಯಲ್ಲಿದೆ. ನಿಮಗಿದು ಗೊತ್ತೆ?

- Advertisement -
- Advertisement -

370ನೇ ಕಲಂ ರದ್ದುಗೊಳಿಸು ಮೂಲಕ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ಕಿತ್ತುಹಾಕಿರುವುದು ನಿಮಗೆಲ್ಲ ತಿಳಿದಿರುವ ವಿಚಾರ. ರಾಷ್ಟ್ರಪತಿಯವರ ಆದೇಶದ ಮೂಲಕ ಈ ಕ್ರಮವನ್ನು ಜರುಗಿಸಲಾಗಿದೆ. ಈ ಕ್ರಮ ಸಾಂವಿಧಾನಿಕವೇ ಇಲ್ಲವೇ ಎಂಬುದರ ಕುರಿತು ಸಾಕಷ್ಟು ಚರ್ಚೆಗಳು ಕೇಳಿಬರುತ್ತಿವೆ. ಕೆಲವರು ವಿಶೇಷ ಸ್ಥಾನಮಾನ ರದ್ದು ಮಾಡಿರುವುದಕ್ಕೆ ಭಾರೀ ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ.

ಇದೇ ಸಮಯದಲ್ಲಿ ಜಮ್ಮು ಕಾಶ್ಮೀರ ಮಾತ್ರವಲ್ಲದೆ ಸಂವಿಧಾನದ ಮೂಲಕ ವಿಶೇಷ ಸ್ಥಾನಮಾನ ಪಡೆದ ಇನ್ನು ಹತ್ತು ರಾಜ್ಯಗಳಿವೆ ಎಂದರೆ ನೀವು ನಂಬಲೇಬೇಕು. ಇದರಲ್ಲಿ ಕೆಲವು ರಾಜ್ಯಗಳಲ್ಲಿ ಸಂಸದೀಯ ಕಾನೂನುಗಳು ಸಹ ನಿಯಂತ್ರಣಕ್ಕೊಳಪಟ್ಟಿವೆ. ಅವುಗಳೆಂದರೆ

ಕಲಂ 371: ಮಹಾರಾಷ್ಟ್ರ ಮತ್ತು ಗುಜರಾತ್

ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯದ ರಾಜ್ಯಪಾಲರುಗಳಿಗೆ ಅಭಿವೃದ್ದಿಯ ಬೋರ್ಡ್ ಗಳನ್ನು ನೇಮಕ ಮಾಡುವ ವಿಶೇಷ ಅಧಿಕಾರವಿರುತ್ತದೆ. ವಿದರ್ಭ, ಮರಾಠವಾಡ, ಕಟಕ್ ಈ ರೀತಿಯಾಗಿ ರಚನೆಯಾಗಿರುವ ಕೆಲವು ಪ್ರಾಂತ್ಯಗಳಾಗಿವೆ.

ಕಲಂ 371ಎ: ನಾಗಾಲ್ಯಾಂಡ್

ನಾಗಾ ಜನರ ಧಾರ್ಮಿಕ ಮತ್ತು ಸಾಮಾಜಿಕ ಆಚರಣೆಗಳು, ನಾಗಾ ಕಾನೂನು ಮತ್ತು ಕಾರ್ಯವಿಧಾನ, ನಾಗಾ ಜನರ ಕ್ರಿಮಿನಲ್ ಮತ್ತು ಸಿವಿಲ್ ಕೇಸುಗಳು, ಅವರ ನೈಸರ್ಗಿಕ ಸಂಪತ್ತು ಮತ್ತು ಭೂಮಿಯನ್ನು ಕೊಳ್ಳುವುದು ಮಾರುವುದು ಇಷ್ಟು ವಿಚಾರಗಳಿಗೆ ಪಾರ್ಲಿಮೆಂಟ್ ನ ಕಾನೂನುಗಳು ಅನ್ವಯವಾಗುವುದಿಲ್ಲ. ಇದಕ್ಕೆ ನಾಗಾ ಜನರೇ ರೂಪಿಸಿಕೊಂಡಿರುವ ವಿಶೇಷ ಕಾನೂನುಗಳಿವೆ. ಈ ವಿಷಯಗಳಿಗೆ ಕೇಂದ್ರ ಸರ್ಕಾರದ ಕಾನೂನುಗಳು ಅನ್ವಯವಾಗಬೇಕಾದರೆ ನಾಗಾ ವಿಧಾನಸಭೆಯು ಒಪ್ಪಿ ನಿರ್ಣಯವನ್ನು ಪಾಸು ಮಾಡಬೇಕಿರುವುದು ಅಗತ್ಯವಾಗಿರುತ್ತದೆ.

ಕಲಂ 371ಬಿ: ಅಸ್ಸಾಂ

ಅಸ್ಸಾಂನ ಬುಡಕಟ್ಟು ಜನರಿಂದ ಆಯ್ಕೆಯಾದ ವಿಧಾನಸಭಾ ಸದಸ್ಯರ ಸಮಾಲೋಚನೆಯೊಂದಿಗೆ ಅಸ್ಸಾಂ ವಿಧಾನಸಭೆಯು ಅಲ್ಲಿನ ಬುಡಕಟ್ಟು ಜನರ ಸ್ವಾಯುತ್ತತ್ತೆ ಮತ್ತು ಹಿತಾಸಕ್ತಿಗಾಗಿ ವಿಶೇಷ ಕಾರ್ಯಚಟುವಟಿಕೆಗಳು ಮತ್ತು ಸಂವಿಧಾನವನ್ನು ರೂಪಿಸುವ ಅಧಿಕಾರ ರಾಷ್ಟ್ರಪತಿಯವರಿಗಿರುತ್ತದೆ.

ಕಲಂ 371ಸಿ: ಮಣಿಪುರ

ಇದು ಸಹ ಅಸ್ಸಾಂ ರೀತಿಯ ಅಧಿಕಾರವಾಗಿದೆ

ಕಲಂ 371ಡಿ ಮತ್ತು ಇ: ಆಂಧ್ರ ಪ್ರದೇಶ

ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಆಂಧ್ರ ಪ್ರದೇಶದ ಜನರ ಹಕ್ಕು, ಹಿತಾಸಕ್ತಿಗಳನ್ನು ಕಾಪಾಡಲು, ಅವರಿಗೆ ಸಮಾನ ಅವಕಾಶ ಮತ್ತು ಸೌಲಭ್ಯಗಳನ್ನು ಒದಗಿಸುವ ಉದ್ದೇಶಕ್ಕಾಗಿ ಕಲಂ 371ಡಿಯನ್ನು ಸಂವಿಧಾನಕ್ಕೆ 1974ರಲ್ಲಿ ಸೇರಿಸಲಾಯಿತು. ಇದರಂತೆ ಆಂಧ್ರ ಪ್ರದೇಶವು ಸ್ಥಳೀಯವಾಗಿ ಅಗತ್ಯಕ್ಕನುಗುಣವಾಗಿ ಉದ್ಯೋಗಗಳನ್ನು ಸೃಷ್ಟಿಸುವ ಮತ್ತು ನೇರ ನೇಮಕಾತಿ ಮಾಡಿಕೊಳ್ಳುವ ಅಧಿಕಾರ ಹೊಂದಿದೆ. ಕಲಂ 371ಇ ಆಂಧ್ರಪ್ರದೇಶವು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವುದಕ್ಕೆ ಪಾರ್ಲಿಮೆಂಟ್ ಅವಕಾಶ ನೀಡುವುದಾಗಿದೆ.

ಕಲಂ 371ಎಫ್: ಸಿಕ್ಕಿಂ

1975ರಲ್ಲಿ ಇದು ಸೇರ್ಪಡೆಯಾಯಿತು. ಇದರಂತೆ ಸಿಕ್ಕಿಂ ವಿಧಾನಸಭೆಯ ಸದಸ್ಯರ ಸಂಖ್ಯೆ 30ಕ್ಕಿಂತ ಕಡಿಮೆ ಇರಬಾರದು. ಸಿಕ್ಕಿಂ ನಲ್ಲಿರುವ ವಿವಿಧ ಗುಂಪುಗಳನ್ನು ಒಳಗೊಳ್ಳುವುದು ಮತ್ತು ವಿವಿಧ ಜನವಿಭಾಗಗಳಿಗೆ ಅವಕಾಶ ನೀಡುವುದಕ್ಕಾಗಿ ಈ ವಿಶೇಷ ಸ್ಥಾನಮಾನ ನೀಡಲಾಗಿದೆ.

ಕಲಂ 371ಜಿ: ಮಿಝೋರಾಂ

ಇದು ಕಲಂ 371ಎ ನಾಗಾಲ್ಯಾಂಡ ನಂತೆಯೂ ಮಿಝೋರಾಂ ನ ಜನತೆಗೂ ಅನ್ವಯಿಸುತ್ತವೆ.

ಕಲಂ 371ಎಚ್: ಅರುಣಚಲಪ್ರದೇಶ

ಇದು ಅಲ್ಲಿನ ಗವರ್ನರ್ ಗೆ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ವಿಶೇಷ ಅಧಿಕಾರವಿರುತ್ತದೆ. ಇದರನ್ವಯ ಇವರು ಅಲ್ಲಿನ ಮುಖ್ಯಮಂತ್ರಿಯ ನಿರ್ಧಾರಗಳನ್ನು ತಳ್ಳಿಹಾಕುವ ಅಧಿಕಾರ ಗವರ್ನರ್ ಗೆ ಇರುತ್ತದೆ.

ಕಲಂ 371ಐ: ಗೋವಾ

ಇದರಂತೆ ಗೋವಾ ವಿಧಾನಸಭೆಯ ಸದಸ್ಯರ ಸಂಖ್ಯೆ 30ಕ್ಕಿಂತ ಕಡಿಮೆ ಇರಬಾರದು.

ಕಲಂ 371ಜೆ: ಕರ್ನಾಟಕ

ಕಲಂ 371ಜೆ ಯು ಹೈದರಾಬಾದ್ ಕರ್ನಾಟಕದ 6 ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನವನ್ನು ನೀಡುತ್ತದೆ. ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಿಗಿರುವಂತೆ ಅಭಿವೃದ್ದಿಯ ಬೋರ್ಡ್ ಗಳನ್ನು ನೇಮಕ ಮಾಡುವ ವಿಶೇಷ ಅಧಿಕಾರವಿರುತ್ತದೆ. ಜೊತೆಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸ್ಥಳೀಯರಿಗೆ ಮೀಸಲಾತಿಯನ್ನು ಒದಗಿಸುತ್ತದೆ.

ಕೃಪೆ: ಲೈವ್ ಲಾ

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

8 COMMENTS

  1. Nanu Gouri anta heli En Eno madoke ready ansute Gouri MadaM idare IdeLa Madta idaro ila adare avara name nali Matra En eno Barta ide Yardo name use Madodakinta Nanu mUrty anta use madi article publishe madi

    370 and 371J diffraction Enu anta frst odi amele Anuvad madi Sumane advertisement GE Madodu beda

  2. ಜಮ್ಮು ಕಾಶ್ಮೀರದಂತೆ ಇನ್ನು ಹತ್ತು ರಾಜ್ಯಗಳಿಗೆ ಈಗಲೂ ವಿಶೇಷ ಸ್ಥಾನಮಾನ DIFFERENCE ಪಟ್ಟಿ ಮಾಡಿ ?

  3. Hello Nanu Gouri
    HYDRABADA KARNTAKA DAILY ? HAKOLA
    ARMY ILAA YAVAGA BEKADRU HOGI BARBHUDU. KARNATAK DALI ILWA NIVU
    370 J YAKE ವಿಶೇಷ ಸ್ಥಾನಮಾನವನ್ನು Nididevi anta Gota Banaglre nali idare gotagola HK Hogi bani

    • Neevu heluva tharada vishesha sthaanamaana innoo halavaaru bhaagagalige kottiddaare. Aadare illi idee raajyakke vishesha sthaanamaana neediruvudu – bereyavaru aasti kolluva haagilla tharaddu, adara bagge bareyalaagide.

  4. ಜಮ್ಮು ಕಾಶ್ಮೀರಕ್ಕೆ ಇದ್ದ 370 ಕಾಯ್ದೆಗೂ ಇತರ ರಾಜ್ಯಗಳಿಗೆ ಇರುವ ಇದೇ ಕಾಯ್ದೆಯ ಸಬ್ ಕಾಯ್ದೆಗಳಿಗೂ ಬಹಳ ವ್ಯತ್ಯಾಸವಿದೆ.ಹಾಗೂ ಈ ಕಾಯ್ದೆಯನ್ನು ಜಮ್ಮು ವಿನಲ್ಲಿ ಕೆಲವು ರಾಜಕೀಯ ಪಕ್ಷಗಳು&ಕುಟುಂಬ ಗಳು ದುರುಪಯೋಗ ಮತ್ತು ಸ್ವಾರ್ಥ ಕ್ಕಾಗಿ ಬಳಸಿಕೊಂಡು, ಪಾಕ್ ಕುತಂತ್ರ ಗಳಿಗೆ ಹಾಗೂ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡಿದ್ದರಿಂದ ಕಾಯ್ದೆ ರದ್ದು ಮಾಡಲು ಕಾರಣವಾಯಿತು.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...