Homeಕರ್ನಾಟಕಬಳ್ಳಾರಿ ಅದಿರುಗ್ಯಾಂಗ್ ಮಣ್ಣುಪಾಲು: ಡಿಸಿಎಂ ಆಗುವರೇ ಶ್ರೀರಾಮುಲು?

ಬಳ್ಳಾರಿ ಅದಿರುಗ್ಯಾಂಗ್ ಮಣ್ಣುಪಾಲು: ಡಿಸಿಎಂ ಆಗುವರೇ ಶ್ರೀರಾಮುಲು?

- Advertisement -
- Advertisement -

2008 ಮತ್ತು 2019…. ಈ ನಡುವಿನ ಅವಧಿಯೆಲ್ಲ ಕರ್ನಾಟಕಕ್ಕೆ ಬರವೇ. ಯಾವ ಪಕ್ಷವೂ ಜನರ ನೋವಿಗೆ ಮಿಡಿದೇ ಇಲ್ಲ. ಆದರೆ, ಈಗ ಈ ವರದಿಯ ಉದ್ದೇಶವಿಷ್ಟೇ: 2008ರಲ್ಲಿ ಒಂದು ‘ಅಕ್ರಮ’ ಸರ್ಕಾರವನ್ನು ನಿರ್ಮಿಸಿದ ಗುಂಪೊಂದು, ಈಗ ಇನ್ನೊಂದು ಅಕ್ರಮ ಸರ್ಕಾರ ನಿರ್ಮಾಣವಾಗುವ ವೇಳೆಯಲ್ಲಿ ಎಲ್ಲಿತ್ತು?

ಅಂದು ಲೋಡುಗಟ್ಟಲೇ ಹಣ ಹೂಡಿದವರನ್ನು ಇವತ್ತು ಬಿಜೆಪಿ ಚಿಮ್ಮಿಬಿಟ್ಟಿತೇ? ಅಥವಾ ಇವತ್ತು ಹೂಡಲಾಗದಷ್ಟು ಅಸಹಾಯಕತೆಯಲ್ಲಿ ಇರುವರೇ? ದಿಕ್ಕಾಪಾಲಾಗಿರುವ ಬಳ್ಳಾರಿ ಅದಿರಿನ ಗ್ಯಾಂಗಿಗೆ ಈಗ ಬಿಜೆಪಿಯಲ್ಲಿ ಗೌರವ ಅಷ್ಟಕ್ಕಷ್ಟೇ. ಶ್ರೀಮಂತಿಕೆಯಲ್ಲಿ ತೀರಾ ಪಾತಾಳಕ್ಕೇನೂ ಅವರು ಕುಸಿದಿಲ್ಲವಾದರೂ ರಾಜಕೀಯ ಸೋಲುಗಳಿಂದ ಕಂಗೆಟ್ಟಿದ್ದಾರೆ. ಅದಕ್ಕಿಂತ ಮುಖ್ಯವಾದ ಸಂಗತಿ ಎಂದರೆ, ಈಗ ಕೇಂದ್ರ ಬಿಜೆಪಿಯೇ ಇಂತಹವರನ್ನು ಲೋಡುಗಟ್ಟಲೇ ರೊಕ್ಕ ಕೊಟ್ಟು ಖರೀದಿಸುವ ಇಲ್ಲವೇ ಬೆದರಿಸಿ ಲಪಟಾಯಿಸುವ ಮಟ್ಟವನ್ನು ತಲುಪಿದೆ.

ಹೀಗಾಗಿ, ವಿಶ್ವಾಸಮತದ ಚರ್ಚೆಯಲ್ಲಿ ಶ್ರೀರಾಮುಲು ಮತ್ತು ಸೋಮಶೇಖರರೆಡ್ಡಿ ಇಬ್ಬರೇ ಅಕ್ಕಪಕ್ಕ ಕೂತು ತಮ್ಮ ಪಾಡಿಗೆ ತಾವು ಏನೇನೋ ಮಾತಾಡುತ್ತ ಕೂರಬೇಕಾಯಿತು. 2008ರ ಸಂದರ್ಭವನ್ನು ಒಮ್ಮೆ ಗಮನಿಸಿ: 110 ಸೀಟು ಪಡೆದ ಬಿಜೆಪಿ ಸರಳ ಬಹುಮತದ ಕೊರತೆ ಇದ್ದಾಗಲೂ ಸರ್ಕಾರ ರಚನೆಗೆ ಮುಂದಾಗಿತ್ತು. ಆಗ ಮೋದಿ-ಶಾ ಇನ್ನು ಗುಜರಾತ್ ಲೆವೆಲ್ಲಿನಲ್ಲೇ ಇದ್ದರು.

ಆಗ ರಾಜ್ಯ ಬಿಜೆಪಿ ನಂಬಿದ್ದು ಜನಾರ್ದನರೆಡ್ಡಿ ಮತ್ತು ಶ್ರೀರಾಮುಲು ಎಂಬ ಗಣಿ ಉದ್ಯಮಿಗಳನ್ನು. ಅವರು ಬಹುಮತಕ್ಕೆ ಅಗತ್ಯವಿದ್ದ ಮೂರು ಇರಲಿ ಎಂಟ್ಹತ್ತು ಶಾಸಕರನ್ನೇ ದಂಡಿಯಾಗಿ ಕರೆತಂದು ಒಗೆದು ವಿಶ್ವಾಸಮತ ಗೆಲ್ಲಿಸಿಕೊಂಡಿದ್ದರು. ಅನರ್ಹತೆ ಎಂಬ ಪದಕ್ಕೆ ಅವಕಾಶವನ್ನೇ ನೀಡದಂತೆ, ಅವರಿಂದ ರಾಜಿನಾಮೆ ಕೊಡಿಸಲಾಗಿತ್ತು. ಅವರಿಗೆಲ್ಲ ಸಚಿವಗಿರಿಯ ಜೊತೆಗೆ ಸಾಕಷ್ಟು ಗಣಿ ಮಣ್ಣಿನ ಪಾಪದ ದುಡ್ಡನ್ನು ಕಾಣಿಕೆಯಾಗಿ ನೀಡಲಾಯಿತು. ಮುಂದೆ ಉಪ ಚುನಾವಣೆಯಲ್ಲಿ ಅವರಲ್ಲಿ ಬಹುತೇಕರನ್ನು ಗೆಲ್ಲಿಸುವ ಮೂಲಕ ಬಳ್ಳಾರಿಯ ಗಣಿಗಳ್ಳರು ‘ತಮ್ಮದೇ’ ಸರ್ಕಾರವನ್ನು ಕಾಪಾಡಿಕೊಂಡರು.

ಇಡೀ ಬಳ್ಳಾರಿ ಜಿಲ್ಲೆಯೇ ಆಗ ಅವರ ಸುಪರ್ದಿಗೆ ಒಳಪಟ್ಟಿತ್ತು. ತಮಗೆ ಬೇಕಾದ ಎಸ್‍ಪಿ, ಡಿಸಿ ಮತ್ತು ಅರಣ್ಯಾಧಿಕಾರಿಗಳನ್ನೆಲ್ಲ ಹಾಕಿಸಿಕೊಂಡು ಅಕ್ರಮ ಗಣಿಗಾರಿಕೆಯನ್ನು ಅಧಿಕೃತ ವ್ಯಾಪಾರದ ಮಟ್ಟಕ್ಕೆ ಇಳಿಸಿದ್ದರು. ತಮ್ಮ ಅಕ್ರಮ ಗಣಿಗಳಲ್ಲದೇ ಇತರ ಗಣಿಗಳಿಂದ ಹಫ್ತಾ ವಸೂಲಿಯನ್ನೂ ವ್ಯವಸ್ಥಿತವಾಗಿ ಮಾಡುವ ಮೂಲಕ ಅಪಾರ ಸಂಪತ್ತನ್ನು ಕೊಳ್ಳೆ ಹೊಡೆದರು. ರಾಷ್ಟ್ರೀಯ ನಾಯಕಿ ಸುಷ್ಮಾ ಸ್ವರಾಜ್ ಅವರನ್ನು ‘ಮಂಗಳ ಗೌರಿ’ ನೆಪದಲ್ಲಿ ಉಡಿ ತುಂಬಿಸುವ ಮೂಲಕ ಒಲಿಸಿಕೊಂಡಿದ್ದ ಈ ಬಳ್ಳಾರಿ ಗ್ಯಾಂಗ್ ಒಂದು ಹಂತದಲ್ಲಿ ಯಡಿಯೂರಪ್ಪನವರ ವಿರುದ್ಧವೇ ತಿರುಗಿಬಿದ್ದು ಸರ್ಕಾರ ಬೀಳಿಸುವ ಧಮಕಿ ಹಾಕಿತ್ತು.

ವಿಧಾನಸಭಾ ಅಧಿವೇಶನದಲ್ಲೇ ಜನಾರ್ದನರೆಡ್ಡಿ ಸಿದ್ದರಾಮಯ್ಯ ಅವರಿಗೆ ‘ಬಳ್ಳಾರಿಗೆ ಬನ್ನಿ, ನಿಮ್ಮನ್ನೆಲ್ಲ ನೋಡಿಕೊಳ್ತೇವೆ’ ಎನ್ನುವ ಮಟ್ಟಕ್ಕೆ ಹೋದರೆ, ರೆಡ್ಡಿಯ ಚೇಲಾ ಶಾಸಕ ಸುರೇಶ ಬಾಬು ತೋಳೇರಿಸಿ ವಿಪಕ್ಷದವರ ಮೇಲೆ ದಾದಾಗಿರಿ ನಡೆಸಲೂ ಯತ್ನಿಸಿದ್ದರು.
ಸಂತೋಷ್ ಹೆಗ್ಡೆ ವರದಿ ನಂತರ ಕೋರ್ಟುಗಳು ಕೂಡ ತೀಕ್ಷ್ಣ ಆದೇಶಗಳನ್ನು ಕೊಡತೊಡಗಿದವು. ಇತ್ತ ಭೂ ಹಗರಣದಲ್ಲಿ ಸಿಕ್ಕ ಯಡಿಯೂರಪ್ಪ ಜೈಲು ಪಾಲಾದರು. ಅಲ್ಲಿಗೆ ಬಳ್ಳಾರಿ ಗ್ಯಾಂಗಿನ ಒಂದು ಹಂತದ ಆಟ ಮುಗಿದಿತ್ತು. ಮುಂದೆ ಯಡಿಯೂರಪ್ಪ ಒಂದು ಪಾರ್ಟಿ ಕಟ್ಟಿದರೆ, ಬಳ್ಳಾರಿ ಗ್ಯಾಂಗ್ ಇನ್ನೊಂದು ಪಾರ್ಟಿ ಕಟ್ಟಿತು. ಎರಡೂ ಮಕಾಡೆ ಮಲಗಿದವು.

ಜೈಲಲ್ಲಿ ವರ್ಷಗಳನ್ನು ಸವೆಸಿದ ರೆಡ್ಡಿಯನ್ನು ರಾಷ್ಟ್ರೀಯ ಬಿಜೆಪಿ ದೂರವಿಡತೊಡಗಿತು. ಕೇವಲ 10 ವರ್ಷಗಳಲ್ಲಿ ಎಂತಹ ಬದಲಾವಣೆ? ಅಂದು ಸರ್ಕಾರವನ್ನೇ ರಚಿಸಿದ್ದ ಬಳ್ಳಾರಿ ಗ್ಯಾಂಗ್ ಬಿಜೆಪಿ ಪಾಲಿಗೆ ಹೀರೋ ಆಗಿತ್ತು, ಈಗದು ಝೀರೋ, ಬಿಗ್ ಝೀರೋ!

ಫಾರೆಸ್ಟ್ ಅಧಿಕಾರಿಗೆ ಸಜೆ!
ಆದರೆ ರೆಡ್ಡಿಗಳ ಆಟಾಟೋಪ ಮತ್ತೆ ಮುಂದುವರೆಯಲಿದೆಯೇ ಎಂಬ ಪ್ರಶ್ನೆ ಕಾಡಲು ಕಾರಣವಾಗಿದ್ದು, ಮೊಟ್ಟ ಮೊದಲ ಬಾರಿಗೆ ಜನಾರ್ದನರೆಡ್ಡಿಯ ಅಕ್ರಮ ಗಣಿಗಾರಿಕೆಯ ಮೇಲೆ ಮುಗಿಬಿದ್ದಿದ್ದ ಫಾರೆಸ್ಟ್ ಆಫೀಸರ್ ಒಬ್ಬರನ್ನು ಕೇಂದ್ರ ಸರ್ಕಾರ ಈ ವಾರ ಕಾಯಂ ನಿವೃತ್ತಿಗೊಳಿಸಿದ ವಿಷಯ. ಕಲ್ಲೋಳ್ ಬಿಸ್ವಾಸ್ ಎಂಬ ಈ ಅಧಿಕಾರಿಯನ್ನು ಕಡ್ಡಾಯ ನಿವೃತ್ತಿಗೊಳಿಸಿದುದರ ಹಿಂದೆ ಯಡಿಯೂರಪ್ಪ ಪಾತ್ರವಿದೆಯಾ ಅಥವಾ ಜಗನ್‍ರೆಡ್ಡಿಯ ಪಾತ್ರವಿದೆಯಾ ಎಂಬುದು ಸದ್ಯಕ್ಕೆ ಅಸ್ಪಷ್ಟ…..

ಹಳೆಯ ಸೇಡನ್ನು ತೀರಿಸಿಕೊಂಡಿರುವುದರ ಹೊರತಾಗಿ, ಇದರಿಂದ ರೆಡ್ಡಿ ರಾಮುಲು ಬಳಗಕ್ಕಂತೂ ವಿಶೇಷ ಅನುಕೂಲಗಳೇನೂ ದಕ್ಕುವಂತೆ ಕಾಣುತ್ತಿಲ್ಲ. ಒಟ್ಟಿನಲ್ಲಿ ಕೋಟೆ ಕಟ್ಟಿ ಮೆರೆದ ಗಣಿಗಳ್ಳರು ಈಗ ಬಿಜೆಪಿಗೇ ಬೇಡವಾಗಿದ್ದಾರೆ! ಆದರು ಶ್ರೀರಾಮುಲು ಡಿಸಿಎಂ ಕನಸು ಬಿಟ್ಟಿಲ್ಲ. ಜಾತಿಬಲ ಮಾತ್ರವೇ ಅವರಿಗೆ ಈಗ ಆಶಾಕಿರಣವಾಗಿದೆ. ದೆಹಲಿಯಲ್ಲಿ ಅಮಿತ್ ಶಾ ಸಂಪುಟ ವಿಸ್ತರಣೆಗೆ ಅವಕಾಶ ಕೊಡುದಿರುವುದು ನೋಡಿದರೆ ಪಕ್ಕಾ ಆರ್.ಎಸ್.ಎಸ್ ನವರಿಗೆ ಮಾತ್ರ ಮಂತ್ರಿ ಭಾಗ್ಯ ಎಂಬ ಸುಳಿವು ಸಿಗುತ್ತಿವೆ. ಅಂದರೆ ಅದಿರಿನ ದಂಧೆಯ ಕುಸಿತದೊಂದಿಗೆ ಬಳ್ಳಾರಿಯ ಗ್ಯಾಂಗೂ ಮಣ್ಣು ಪಾಲಾಯಿತೇ ಎಂಬ ಪ್ರಶ್ನೆ ಬರುತ್ತಿದೆ. ಏನಾದರೂ ಆಗಲಿ ಇಂದರಿಂದ ಜನರಿಗೆ ಮಾತ್ರ ಏನೂ ಪ್ರಯೋಜನವಿಲ್ಲವೆಂಬುದು ಸತ್ಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....