Homeಕರ್ನಾಟಕಬಳ್ಳಾರಿ ಅದಿರುಗ್ಯಾಂಗ್ ಮಣ್ಣುಪಾಲು: ಡಿಸಿಎಂ ಆಗುವರೇ ಶ್ರೀರಾಮುಲು?

ಬಳ್ಳಾರಿ ಅದಿರುಗ್ಯಾಂಗ್ ಮಣ್ಣುಪಾಲು: ಡಿಸಿಎಂ ಆಗುವರೇ ಶ್ರೀರಾಮುಲು?

- Advertisement -
- Advertisement -

2008 ಮತ್ತು 2019…. ಈ ನಡುವಿನ ಅವಧಿಯೆಲ್ಲ ಕರ್ನಾಟಕಕ್ಕೆ ಬರವೇ. ಯಾವ ಪಕ್ಷವೂ ಜನರ ನೋವಿಗೆ ಮಿಡಿದೇ ಇಲ್ಲ. ಆದರೆ, ಈಗ ಈ ವರದಿಯ ಉದ್ದೇಶವಿಷ್ಟೇ: 2008ರಲ್ಲಿ ಒಂದು ‘ಅಕ್ರಮ’ ಸರ್ಕಾರವನ್ನು ನಿರ್ಮಿಸಿದ ಗುಂಪೊಂದು, ಈಗ ಇನ್ನೊಂದು ಅಕ್ರಮ ಸರ್ಕಾರ ನಿರ್ಮಾಣವಾಗುವ ವೇಳೆಯಲ್ಲಿ ಎಲ್ಲಿತ್ತು?

ಅಂದು ಲೋಡುಗಟ್ಟಲೇ ಹಣ ಹೂಡಿದವರನ್ನು ಇವತ್ತು ಬಿಜೆಪಿ ಚಿಮ್ಮಿಬಿಟ್ಟಿತೇ? ಅಥವಾ ಇವತ್ತು ಹೂಡಲಾಗದಷ್ಟು ಅಸಹಾಯಕತೆಯಲ್ಲಿ ಇರುವರೇ? ದಿಕ್ಕಾಪಾಲಾಗಿರುವ ಬಳ್ಳಾರಿ ಅದಿರಿನ ಗ್ಯಾಂಗಿಗೆ ಈಗ ಬಿಜೆಪಿಯಲ್ಲಿ ಗೌರವ ಅಷ್ಟಕ್ಕಷ್ಟೇ. ಶ್ರೀಮಂತಿಕೆಯಲ್ಲಿ ತೀರಾ ಪಾತಾಳಕ್ಕೇನೂ ಅವರು ಕುಸಿದಿಲ್ಲವಾದರೂ ರಾಜಕೀಯ ಸೋಲುಗಳಿಂದ ಕಂಗೆಟ್ಟಿದ್ದಾರೆ. ಅದಕ್ಕಿಂತ ಮುಖ್ಯವಾದ ಸಂಗತಿ ಎಂದರೆ, ಈಗ ಕೇಂದ್ರ ಬಿಜೆಪಿಯೇ ಇಂತಹವರನ್ನು ಲೋಡುಗಟ್ಟಲೇ ರೊಕ್ಕ ಕೊಟ್ಟು ಖರೀದಿಸುವ ಇಲ್ಲವೇ ಬೆದರಿಸಿ ಲಪಟಾಯಿಸುವ ಮಟ್ಟವನ್ನು ತಲುಪಿದೆ.

ಹೀಗಾಗಿ, ವಿಶ್ವಾಸಮತದ ಚರ್ಚೆಯಲ್ಲಿ ಶ್ರೀರಾಮುಲು ಮತ್ತು ಸೋಮಶೇಖರರೆಡ್ಡಿ ಇಬ್ಬರೇ ಅಕ್ಕಪಕ್ಕ ಕೂತು ತಮ್ಮ ಪಾಡಿಗೆ ತಾವು ಏನೇನೋ ಮಾತಾಡುತ್ತ ಕೂರಬೇಕಾಯಿತು. 2008ರ ಸಂದರ್ಭವನ್ನು ಒಮ್ಮೆ ಗಮನಿಸಿ: 110 ಸೀಟು ಪಡೆದ ಬಿಜೆಪಿ ಸರಳ ಬಹುಮತದ ಕೊರತೆ ಇದ್ದಾಗಲೂ ಸರ್ಕಾರ ರಚನೆಗೆ ಮುಂದಾಗಿತ್ತು. ಆಗ ಮೋದಿ-ಶಾ ಇನ್ನು ಗುಜರಾತ್ ಲೆವೆಲ್ಲಿನಲ್ಲೇ ಇದ್ದರು.

ಆಗ ರಾಜ್ಯ ಬಿಜೆಪಿ ನಂಬಿದ್ದು ಜನಾರ್ದನರೆಡ್ಡಿ ಮತ್ತು ಶ್ರೀರಾಮುಲು ಎಂಬ ಗಣಿ ಉದ್ಯಮಿಗಳನ್ನು. ಅವರು ಬಹುಮತಕ್ಕೆ ಅಗತ್ಯವಿದ್ದ ಮೂರು ಇರಲಿ ಎಂಟ್ಹತ್ತು ಶಾಸಕರನ್ನೇ ದಂಡಿಯಾಗಿ ಕರೆತಂದು ಒಗೆದು ವಿಶ್ವಾಸಮತ ಗೆಲ್ಲಿಸಿಕೊಂಡಿದ್ದರು. ಅನರ್ಹತೆ ಎಂಬ ಪದಕ್ಕೆ ಅವಕಾಶವನ್ನೇ ನೀಡದಂತೆ, ಅವರಿಂದ ರಾಜಿನಾಮೆ ಕೊಡಿಸಲಾಗಿತ್ತು. ಅವರಿಗೆಲ್ಲ ಸಚಿವಗಿರಿಯ ಜೊತೆಗೆ ಸಾಕಷ್ಟು ಗಣಿ ಮಣ್ಣಿನ ಪಾಪದ ದುಡ್ಡನ್ನು ಕಾಣಿಕೆಯಾಗಿ ನೀಡಲಾಯಿತು. ಮುಂದೆ ಉಪ ಚುನಾವಣೆಯಲ್ಲಿ ಅವರಲ್ಲಿ ಬಹುತೇಕರನ್ನು ಗೆಲ್ಲಿಸುವ ಮೂಲಕ ಬಳ್ಳಾರಿಯ ಗಣಿಗಳ್ಳರು ‘ತಮ್ಮದೇ’ ಸರ್ಕಾರವನ್ನು ಕಾಪಾಡಿಕೊಂಡರು.

ಇಡೀ ಬಳ್ಳಾರಿ ಜಿಲ್ಲೆಯೇ ಆಗ ಅವರ ಸುಪರ್ದಿಗೆ ಒಳಪಟ್ಟಿತ್ತು. ತಮಗೆ ಬೇಕಾದ ಎಸ್‍ಪಿ, ಡಿಸಿ ಮತ್ತು ಅರಣ್ಯಾಧಿಕಾರಿಗಳನ್ನೆಲ್ಲ ಹಾಕಿಸಿಕೊಂಡು ಅಕ್ರಮ ಗಣಿಗಾರಿಕೆಯನ್ನು ಅಧಿಕೃತ ವ್ಯಾಪಾರದ ಮಟ್ಟಕ್ಕೆ ಇಳಿಸಿದ್ದರು. ತಮ್ಮ ಅಕ್ರಮ ಗಣಿಗಳಲ್ಲದೇ ಇತರ ಗಣಿಗಳಿಂದ ಹಫ್ತಾ ವಸೂಲಿಯನ್ನೂ ವ್ಯವಸ್ಥಿತವಾಗಿ ಮಾಡುವ ಮೂಲಕ ಅಪಾರ ಸಂಪತ್ತನ್ನು ಕೊಳ್ಳೆ ಹೊಡೆದರು. ರಾಷ್ಟ್ರೀಯ ನಾಯಕಿ ಸುಷ್ಮಾ ಸ್ವರಾಜ್ ಅವರನ್ನು ‘ಮಂಗಳ ಗೌರಿ’ ನೆಪದಲ್ಲಿ ಉಡಿ ತುಂಬಿಸುವ ಮೂಲಕ ಒಲಿಸಿಕೊಂಡಿದ್ದ ಈ ಬಳ್ಳಾರಿ ಗ್ಯಾಂಗ್ ಒಂದು ಹಂತದಲ್ಲಿ ಯಡಿಯೂರಪ್ಪನವರ ವಿರುದ್ಧವೇ ತಿರುಗಿಬಿದ್ದು ಸರ್ಕಾರ ಬೀಳಿಸುವ ಧಮಕಿ ಹಾಕಿತ್ತು.

ವಿಧಾನಸಭಾ ಅಧಿವೇಶನದಲ್ಲೇ ಜನಾರ್ದನರೆಡ್ಡಿ ಸಿದ್ದರಾಮಯ್ಯ ಅವರಿಗೆ ‘ಬಳ್ಳಾರಿಗೆ ಬನ್ನಿ, ನಿಮ್ಮನ್ನೆಲ್ಲ ನೋಡಿಕೊಳ್ತೇವೆ’ ಎನ್ನುವ ಮಟ್ಟಕ್ಕೆ ಹೋದರೆ, ರೆಡ್ಡಿಯ ಚೇಲಾ ಶಾಸಕ ಸುರೇಶ ಬಾಬು ತೋಳೇರಿಸಿ ವಿಪಕ್ಷದವರ ಮೇಲೆ ದಾದಾಗಿರಿ ನಡೆಸಲೂ ಯತ್ನಿಸಿದ್ದರು.
ಸಂತೋಷ್ ಹೆಗ್ಡೆ ವರದಿ ನಂತರ ಕೋರ್ಟುಗಳು ಕೂಡ ತೀಕ್ಷ್ಣ ಆದೇಶಗಳನ್ನು ಕೊಡತೊಡಗಿದವು. ಇತ್ತ ಭೂ ಹಗರಣದಲ್ಲಿ ಸಿಕ್ಕ ಯಡಿಯೂರಪ್ಪ ಜೈಲು ಪಾಲಾದರು. ಅಲ್ಲಿಗೆ ಬಳ್ಳಾರಿ ಗ್ಯಾಂಗಿನ ಒಂದು ಹಂತದ ಆಟ ಮುಗಿದಿತ್ತು. ಮುಂದೆ ಯಡಿಯೂರಪ್ಪ ಒಂದು ಪಾರ್ಟಿ ಕಟ್ಟಿದರೆ, ಬಳ್ಳಾರಿ ಗ್ಯಾಂಗ್ ಇನ್ನೊಂದು ಪಾರ್ಟಿ ಕಟ್ಟಿತು. ಎರಡೂ ಮಕಾಡೆ ಮಲಗಿದವು.

ಜೈಲಲ್ಲಿ ವರ್ಷಗಳನ್ನು ಸವೆಸಿದ ರೆಡ್ಡಿಯನ್ನು ರಾಷ್ಟ್ರೀಯ ಬಿಜೆಪಿ ದೂರವಿಡತೊಡಗಿತು. ಕೇವಲ 10 ವರ್ಷಗಳಲ್ಲಿ ಎಂತಹ ಬದಲಾವಣೆ? ಅಂದು ಸರ್ಕಾರವನ್ನೇ ರಚಿಸಿದ್ದ ಬಳ್ಳಾರಿ ಗ್ಯಾಂಗ್ ಬಿಜೆಪಿ ಪಾಲಿಗೆ ಹೀರೋ ಆಗಿತ್ತು, ಈಗದು ಝೀರೋ, ಬಿಗ್ ಝೀರೋ!

ಫಾರೆಸ್ಟ್ ಅಧಿಕಾರಿಗೆ ಸಜೆ!
ಆದರೆ ರೆಡ್ಡಿಗಳ ಆಟಾಟೋಪ ಮತ್ತೆ ಮುಂದುವರೆಯಲಿದೆಯೇ ಎಂಬ ಪ್ರಶ್ನೆ ಕಾಡಲು ಕಾರಣವಾಗಿದ್ದು, ಮೊಟ್ಟ ಮೊದಲ ಬಾರಿಗೆ ಜನಾರ್ದನರೆಡ್ಡಿಯ ಅಕ್ರಮ ಗಣಿಗಾರಿಕೆಯ ಮೇಲೆ ಮುಗಿಬಿದ್ದಿದ್ದ ಫಾರೆಸ್ಟ್ ಆಫೀಸರ್ ಒಬ್ಬರನ್ನು ಕೇಂದ್ರ ಸರ್ಕಾರ ಈ ವಾರ ಕಾಯಂ ನಿವೃತ್ತಿಗೊಳಿಸಿದ ವಿಷಯ. ಕಲ್ಲೋಳ್ ಬಿಸ್ವಾಸ್ ಎಂಬ ಈ ಅಧಿಕಾರಿಯನ್ನು ಕಡ್ಡಾಯ ನಿವೃತ್ತಿಗೊಳಿಸಿದುದರ ಹಿಂದೆ ಯಡಿಯೂರಪ್ಪ ಪಾತ್ರವಿದೆಯಾ ಅಥವಾ ಜಗನ್‍ರೆಡ್ಡಿಯ ಪಾತ್ರವಿದೆಯಾ ಎಂಬುದು ಸದ್ಯಕ್ಕೆ ಅಸ್ಪಷ್ಟ…..

ಹಳೆಯ ಸೇಡನ್ನು ತೀರಿಸಿಕೊಂಡಿರುವುದರ ಹೊರತಾಗಿ, ಇದರಿಂದ ರೆಡ್ಡಿ ರಾಮುಲು ಬಳಗಕ್ಕಂತೂ ವಿಶೇಷ ಅನುಕೂಲಗಳೇನೂ ದಕ್ಕುವಂತೆ ಕಾಣುತ್ತಿಲ್ಲ. ಒಟ್ಟಿನಲ್ಲಿ ಕೋಟೆ ಕಟ್ಟಿ ಮೆರೆದ ಗಣಿಗಳ್ಳರು ಈಗ ಬಿಜೆಪಿಗೇ ಬೇಡವಾಗಿದ್ದಾರೆ! ಆದರು ಶ್ರೀರಾಮುಲು ಡಿಸಿಎಂ ಕನಸು ಬಿಟ್ಟಿಲ್ಲ. ಜಾತಿಬಲ ಮಾತ್ರವೇ ಅವರಿಗೆ ಈಗ ಆಶಾಕಿರಣವಾಗಿದೆ. ದೆಹಲಿಯಲ್ಲಿ ಅಮಿತ್ ಶಾ ಸಂಪುಟ ವಿಸ್ತರಣೆಗೆ ಅವಕಾಶ ಕೊಡುದಿರುವುದು ನೋಡಿದರೆ ಪಕ್ಕಾ ಆರ್.ಎಸ್.ಎಸ್ ನವರಿಗೆ ಮಾತ್ರ ಮಂತ್ರಿ ಭಾಗ್ಯ ಎಂಬ ಸುಳಿವು ಸಿಗುತ್ತಿವೆ. ಅಂದರೆ ಅದಿರಿನ ದಂಧೆಯ ಕುಸಿತದೊಂದಿಗೆ ಬಳ್ಳಾರಿಯ ಗ್ಯಾಂಗೂ ಮಣ್ಣು ಪಾಲಾಯಿತೇ ಎಂಬ ಪ್ರಶ್ನೆ ಬರುತ್ತಿದೆ. ಏನಾದರೂ ಆಗಲಿ ಇಂದರಿಂದ ಜನರಿಗೆ ಮಾತ್ರ ಏನೂ ಪ್ರಯೋಜನವಿಲ್ಲವೆಂಬುದು ಸತ್ಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...