Homeಕರ್ನಾಟಕಕಾಗೇರಿ ಸ್ಪೀಕರಿಕೆ ಸುತ್ತ ಛೂಮಂತ್ರಿ ಗಾಳಿ!!

ಕಾಗೇರಿ ಸ್ಪೀಕರಿಕೆ ಸುತ್ತ ಛೂಮಂತ್ರಿ ಗಾಳಿ!!

ಉತ್ತರಕನ್ನಡದ ಇನ್ನುಳಿದ ಮೂವರು ಬಿಜೆಪಿ ಶಾಸಕರು ಶಿವರಾಮ ಹೆಬ್ಬಾರ್ ವನವಾಸ ಮುಗಿಸಿ ಬರುವವರೆಗೆ ಆತನ ಪಾದುಕೆ ಇಟ್ಟುಕೊಂಡು ಮಂತ್ರಿಗಿರಿ ಮಾಡುವ ಮಾತಾಡುತ್ತಿದ್ದಾರೆ.

- Advertisement -
- Advertisement -

ಕಾಗೇರಿ ತನಗೇ ಅರಿವಿಲ್ಲದೆ ಸ್ಪೀಕರ್ ಪೀಠ ಏರಿಬಿಟ್ಟಿದ್ದಾರೆ. ಹೊಸ ಸ್ಪೀಕರ್ ಅಭಿನಂದಿಸುತ್ತಾ ನಿರ್ಗಮಿತ ಸ್ಪೀಕರ್ ರಮೇಶ್‍ಕುಮಾರ್ ಆಡಿದ ಅರ್ಥಪೂರ್ಣ ಮಾತುಗಳು ಕಾಗೇರಿಯ ಕಂಗೆಟ್ಟ ಸ್ಥಿತಿಗತಿಗೆ ಹಿಡಿದ ಕನ್ನಡಿಯಂತಿತ್ತು!

“ಸ್ಪೀಕರ್ ಸ್ಥಾನ ತುಂಬ ದೊಡ್ಡದು… ಒದ್ದು ಮೇಲಕ್ಕೆ ಕಳಿಸ್ತಾರೆ… ಕೇಳಿದ್ರೆ ನೀನು ತುಂಬಾ ಎತ್ತರದಲ್ಲಿದ್ದೀಯಾ ಅಂತಾರೆ… ಸಾಮಾನ್ಯವಾಗಿ ಸ್ಪೀಕರ್ ಮಾಡೋದು, ಯಾರನ್ನು ಮಂತ್ರಿ ಮಾಡಲಿಕ್ಕೆ ಆಗೋದಿಲ್ಲವೋ ಅಥವಾ ಯಾರು ನಿವೃತ್ತಿ ಅಂಚಿನಲ್ಲಿರ್ತಾರೋ ಅಂಥೋರಿಗೆ” ಎಂದು ರಮೇಶ್‍ಕುಮಾರ್ ಹೇಳಿದಾಗ ಇಡೀ ಸದನ ನಗೆಗಡಲಲ್ಲಿ ತೇಲಿತ್ತು.

ಮೇಲುನೋಟಕ್ಕೆ ರಮೇಶ್ ಕುಮಾರ್ ಮಾತುಗಾರಿಕೆ ತಮಾಷೆಯಾಗಿ ಕಂಡರೂ ವಾಸ್ತವಿಕವಾಗಿ ಕಾಗೇರಿ ಸ್ಪೀಕರ್ ಹುದ್ದೆ ಒಪ್ಪಿಕೊಳ್ಳಬೇಕಾಗಿ ಬಂದ ಸಂದರ್ಭಕ್ಕೆ ಅಕ್ಷರಶಃ ಅನ್ವಯವಾಗುತ್ತದೆ. ಕಾಗೇರಿ ಸಭಾಧ್ಯಕ್ಷತೆ ಬಯಸಿ ಪಡೆದದ್ದಲ್ಲ, ಆ ಉಸಾಬರಿ ತನಗೆ ಬೇಡವೆಂದು ಕೊನೆಕ್ಷಣದವರೆಗೂ ಕಾಗೇರಿ ಕ್ಯಾತೆ ತೆಗೆಯುತ್ತಲೇ ಇದ್ದರು. ತನಗೆ ಸ್ಪೀಕರ್ ಪೀಠ ಅನಿವಾರ್ಯವಾಗಬಹುದೆಂದು ಕನಸುಮನಸಿನಲ್ಲಿಯೂ ಕಾಗೇರಿ ಎಣಿಸಿರಲಿಲ್ಲ. ತನಗೆಂದೂ ನಿಷ್ಠನಲ್ಲದ, ವಿರೋಧಿ ಬ್ರಾಹ್ಮಣ ಲಾಬಿಯ ಕಾಗೇರಿಯನ್ನು ಸ್ಪೀಕರ್ ಪೀಠದಲ್ಲಿ ಪ್ರತಿಷ್ಠಾಪಿಸುವ ಮನಸ್ಸು ಯಡ್ಡಿಗೂ ಒಂಚೂರು ಇರಲಿಲ್ಲ. ಯಡ್ಡಿಯ ಶತ್ರುವೂ, ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿರುವ ಬಿ.ಎಲ್.ಸಂತೋಷ್ ತಂಡದ ತಂತ್ರಗಾರಿಕೆಯಿಂದಾಗಿ ಕಾಗೇರಿ ಸ್ಪೀಕರ್ ಆಗಬೇಕಾಗಿ ಬಂತು.

ಕಾಗೇರಿಗೆ ಮತ್ತೊಂದು ಸಂದಿಗ್ಧವೂ ಎದುರಾಗಿತ್ತು. ಆತನ ಶಿರಸಿ ಕ್ಷೇತ್ರದ ಪಕ್ಕದ ಯಲ್ಲಾಪುರದ ಶಾಸಕನಾಗಿದ್ದ ಶಿವರಾಮ ಹೆಬ್ಬಾರ್ ಕಾಂಗ್ರೆಸ್‍ಗೆ ಕೈಕೊಟ್ಟು ಬಿಜೆಪಿ ಪಾಲಾಗಿದ್ದು ಕಾಗೇರಿಗೆ ದುಬಾರಿಯಾಗಿ ಪರಿಣಮಿಸಿತ್ತು. ಬಿಜೆಪಿ ಸರ್ಕಾರ ಹಿಂಬಾಗಿಲ ಮೂಲಕ ಸ್ಥಾಪನೆ ಆಗಿರುವುದೇ ಶಿವರಾಮ ಹೆಬ್ಬಾರ್ ಮತ್ತಿತರ 16 ಶಾಸಕರ ಬುರ್ನಾಸ್ ನಿಷ್ಠಾವಂತರಿಂದಲ್ಲವಾ? ಇವರನ್ನೆಲ್ಲಾ ಮಂತ್ರಿ ಮಾಡಬೇಕಾದ ದರ್ದು ಬಿಜೆಪಿಗಿದೆ. ಹೆಬ್ಬಾರ್‍ಗೆ ಮಂತ್ರಿ ಮಾಡಿದರೆ ಅದೇ ಹವ್ಯಕ ಜಾತಿಯ ಕಾಗೇರಿಗೆ ಸಚಿವ ಸ್ಥಾನ ಕೊಡಲಾಗದು. ಈ ಜಾತಿ-ಪ್ರಾದೇಶಿಕತೆ ಲೆಕ್ಕಾಚಾರ ಕಾಗೇರಿಯ ಆಸೆಗೆ ಕಲ್ಲು ಹಾಕಿತ್ತು. ಸ್ಪೀಕರಿಕೆ ಒಪ್ಪದಿದ್ದರೆ ಬರೀ ಶಾಸಕನಾಗಿ ಮಂತ್ರಿ ಹೆಬ್ಬಾರ್ ಎದುರು ಹೆತ್ಲಾಂಡಿಯಂತಾಗುವ ಆತಂಕ ಶುರುವಾಯಿತು. ಇದೇ ಹೊತ್ತಿಗೆ ಎಬಿವಿಪಿ ಕೇಡರಿನ ಕಾಗೇರಿಗೆ ಸಂಘಿ ಪರಿವಾರದ ಆದೇಶ ಧಿಕ್ಕರಿಸುವ ಧೈರ್ಯವೂ ಬರಲಿಲ್ಲ. ಆರ್‍ಎಸ್‍ಎಸ್ ಆಣತಿಯಂತೆ ಮತ್ತು ಅಸ್ತಿತ್ವದ ಅಂಜಿಕೆಯಿಂದ ಕಾಗೇರಿ ಸ್ಪೀಕರಿಕೆಗೆ ಸಿದ್ಧವಾಗಬೇಕಾಗಿ ಬಂತು, ಪಾಪ!!

ಈ ನೈಚ್ಚಾನುಸಂಧಾನದ ಹೊತ್ತಲ್ಲಿ ಕಾಗೇರಿ ಮಂತ್ರಿಗಿರಿ ತ್ಯಾಗಕ್ಕೆ ಒಂದು ಷರತ್ತು ವಿಧಿಸಿದ್ದಾರೆ. ಹೆಬ್ಬಾರ್ ಬಿಟ್ಟು ಉತ್ತರ ಕನ್ನಡದ ಬೇರ್ಯಾವ ಬಿಜೆಪಿ ಶಾಸಕನಿಗೂ ಮಂತ್ರಿ ಭಾಗ್ಯ ಕೊಡಬಾರದು, ಇದಕ್ಕೆ ಸಮ್ಮತಿಸಿದರಷ್ಟೇ ಸ್ಪೀಕರ್ ಆಫರ್ ಒಪ್ಪುತ್ತೇನೆಂದು ಕಾಗೇರಿ ಕಡ್ಡಿ ಮುರಿದಂತೆ ಯಡ್ಡಿಗೆ ಹೇಳಿದ್ದಾರೆ.

ಇದಕ್ಕೆ ಸಂಘ ಪರಿವಾರದ ಪ್ರಚೋದನೆ, ಅನುಮೋದನೆ ಎರಡೂ ಇತ್ತು. ಆದರೆ ಹೆಬ್ಬಾರ್‍ಗೆ ಬಿಜೆಪಿ ಸರ್ಕಾರದಲ್ಲಿ ಸಚಿವನಾಗುವ ಕಾಲ ಯಾವಾಗ ಕೂಡಿಬರುತ್ತದೋ ಹೇಳಲಾಗದು. ಅನರ್ಹತೆ ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಹೋಗಿರುವ ಅತೃಪ್ತರು ವಿಚಾರಣೆ ಮುಗಿದು ತೀರ್ಪು ಬರುವತನಕ ಮಂತ್ರಿ ಆಗಲಾರರು. ಈ ವಿಚಾರಣೆ ಎಷ್ಟು ದೂರ ಎಳೆದುಕೊಂಡು ಹೋಗುತ್ತದೋ ಹೇಳಲಾಗದು. ಹಿಂದೆ ಯಡ್ಡಿ ಪರ್ವದಲ್ಲಿ ಬಾಲಚಂದ್ರ ಜಾರಕಿಹೊಳಿ, ಆನಂದ್ ಅಸ್ನೋಟಿಕರ್, ಶಿವನಗೌಡ ನಾಯಕ್,,,, ವಗೈರೆಗಳು ಬರೋಬ್ಬರಿ ಒಂಬತ್ತು ತಿಂಗಳು ಅಂತರ್‍ಪಿಶಾಚಿಗಳಾಗಿದ್ದರು.

ಹೆಬ್ಬಾರ್ ಅತಂತ್ರತೆ ಅನಿರ್ದಿಷ್ಟಾವಧಿ ಎಂಬುದಂತೂ ಗ್ಯಾರಂಟಿ. ಹೀಗಾಗಿ ಉತ್ತರಕನ್ನಡದ ಇನ್ನುಳಿದ ಮೂವರು ಬಿಜೆಪಿ ಶಾಸಕರಲ್ಲಿ ನಿಧಾನಕ್ಕೆ ಮಂತ್ರಿ ಆಗುವ ಆಸೆ ಮೊಳೆಯುತ್ತಿದೆ. ಕಾರವಾರದ ರೂಪಾಲಿ ನಾಯಕ್, ಕುಮುಟದ ದಿನಕರ ಶೆಟ್ಟಿ ಮತ್ತು ಭಟ್ಕಳದ ಸುನೀಲ್ ನಾಯ್ಕ ಒಬ್ಬರಿಗೊಬ್ಬರು ಗೊತ್ತಾಗದಂತೆ ಹೆಬ್ಬಾರ್ ಭೇಟಿ ಮಾಡುತ್ತಿದ್ದಾರೆ. ಎಲ್ಲರದೂ ಒಂದೇ ಬೇಡಿಕೆ!! “ಹೆಬ್ಬಾರಣ್ಣ ನಿಮಗೆ ಮಂತ್ರಿ ಮಾಡುವತನಕ ನನಗೊಂದು ಚಾನ್ಸ್ ಕೊಡ್ಸಿ… ಸುಪ್ರೀಂನಲ್ಲಿ ನೀವು ಗೆದ್ದು ಬಂದತಕ್ಷಣ ಅಥವಾ ಉಪಚುನಾವಣೇಲಿ ನೀವು ಗೆದ್ದ ಕ್ಷಣವೇ ಮಂತ್ರಿಗಿರಿ ಬಿಟ್ಟುಕೊಡ್ತೀನಿ…. ನೀವೇ ಮಂತ್ರಿ ಆಗ್ರಿ….” ಎಂದು ಮಸ್ಕ ಹೊಡೆಯುತ್ತಿದ್ದಾರೆ. ಹೆಬ್ಬಾರ್ ವನವಾಸ ಮುಗಿಸಿ ಬರುವವರೆಗೆ ಆತನ ಪಾದುಕೆ ಇಟ್ಟುಕೊಂಡು ಮಂತ್ರಿಗಿರಿ ಮಾಡುವ ಮಾತಾಡುತ್ತಿದ್ದಾರೆ.

ಕುಮಟೆಯ ದಿನಕರ ಶೆಟ್ಟಿಯಂತೂ ಒಂದು ಹೆಜ್ಜೆ ಮುಂದೆಯೇ ಹೋಗಿದ್ದಾರೆ. “ಹೆಬ್ಬಾರ್ ನನ್ನ ಎಲ್‍ಎಚ್ ರೂಮಿಗೆ ಬಂದು ನೀನೆ ಮಂತ್ರಿಯಾಗು… ನಿನ್ನ ಹೆಸರು ಸಿಎಂ ಮತ್ತು ಬಿಜೆಪಿ ಹೈಕಮಾಂಡ್‍ಗೆ ರೆಕಮೆಂಡ್ ಮಾಡ್ತೇನೆ… ನನ್ನ ಚಾನ್ಸ್ ಕುದುರಿದಾಗ ತಕರಾರು ಮಾಡದೆ ಸ್ಥಾನ ಬಿಟ್ಟುಕೊಡುವುದು ಎಂದು ಹೇಳಿದ್ದಾರೆ.” ಹಾಗಾಗಿ ನನಗೇ ಮಂತ್ರಿಖಾತೆ ಎಂದು ಪೊಕಳೆ ಬಿಡುತ್ತಿದ್ದಾನೆ ಪಾಪದ ಕಾರ್ಯಕರ್ತರೆದುರು.

ಮಹಿಳಾ ಕೋಟಾದಲ್ಲಿ “ಯಡ್ಡಿಫಾದರ್” ತನಗೆ ಅವಕಾಶ ಕೊಡೋದು ಖಂಡಿತ ಎಂಬ ಭ್ರಮೆಯಲ್ಲಿ ತೇಲಾಡುತ್ತಿರುವ ರೂಪಾಲಿ ನಾಯಕ್‍ಗೆ ಈಗಾಗಲೇ ಮಂತ್ರಿ ಭೂತ ಆವಾಹನೆ ಆಗಿಹೋಗಿದೆ. ಭಂಡ ಬಂಡುಕೋರ ಶಾಸಕರು ಸ್ವಾರ್ಥಸಾಧನೆಗಾಗಿ ಮುಂಬೈ ಹೊಟೇಲು ಸೇರಿಕೊಂಡು ಸಮ್ಮಿಶ್ರ ಸರ್ಕಾರ ಉರುಳಿಸುವ ಹಿಕಮತ್ತು ಮಾಡುತ್ತಿದ್ದಾಗ ಬಿಜೆಪಿ ಶಾಸಕರನ್ನು ಬೆಂಗಳೂರಿನ ರೆಸಾರ್ಟ್‍ನಲ್ಲಿ ಜಮೆ ಮಾಡಲಾಗಿತ್ತಲ್ಲವಾ? ಅದರಲ್ಲಿ ಕಾರವಾರದ ರೂಪಾಲಿಯೂ ಇದ್ದರು. ಆ ಹೊತ್ತಲ್ಲಿ ಕಾರವಾರ-ಆಂಕೋಲಾ ಮಳೆ ಆರ್ಭಟದಿಂದ ತತ್ತರಿಸುತ್ತಿತ್ತು. ಶಾಸಕಿ ನೊಂದವರ ಕೈಗೆಟುಕಲಿಲ್ಲ. ಜನರು ಕೆರಳಿದ್ದರು. ಇದರಿಂದ ಫಜೀತಿಗೆ ಬಿದ್ದ ರೂಪಾಲಿ ಸ್ಥಳೀಯ ಪತ್ರಿಕೆಯಲ್ಲಿ “ತಪೋಪ್ಪಿಗೆ” (ತಪ್ಪೊಪ್ಪಿಗೆ) ಜಾಹೀರಾತು ಕೊಟ್ಟು ನಗೆಪಾಟಲಿಗೀಡಾಗಿದ್ದಾರೆ. ಇಂಥ ರೂಪಾಲಿ ಮಂತ್ರಿಯಾಗುತ್ತಾಳೆಂದರೆ ಅದು ಕಾರವಾರ ಕ್ಷೇತ್ರದ ದುರಂತವೆಂದೇ ಜನರಾಡಿಕೊಳ್ಳುತ್ತಾರೆ.

ಮಂತ್ರಿಯಾಗಿ ಜೀವನದ ಕೊನೆಯ ಆಸೆ ಈಡೇರಿಸಿಕೊಳ್ಳಬೇಕು ಮತ್ತು ಅದಿರು ಅವ್ಯವಹಾರದ ಕೇಸ್ ಕುಣಿಕೆಯಿಂದ ಬಚಾವಾಗಬೇಕೆಂಬ ಎರಡು ಉದ್ದೇಶವಿಟ್ಟುಕೊಂಡು ಅನೈತಿಕ ರಾಜಕಾರಣ ಹೆಬ್ಬಾರ್ ಶುರುವಿಟ್ಟುಕೊಂಡಿರುವುದು ಕಾಂಗ್ರೆಸ್‍ನಲ್ಲೂ ಕಂಪನಗಳನ್ನೆಬ್ಬಿಸುತ್ತಿದೆ. ಸುಪ್ರೀಂ ತೀರ್ಪು ಹೇಗೆ ಬರಲಿ, ಯಲ್ಲಾಪುರ-ಮುಂಡಗೋಡ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುವುದಂತು ಪಕ್ಕ. ಹೀಗಾಗಿ ಕಾಂಗ್ರೆಸ್ ಕ್ಯಾಂಡಿಡೇಟ್ ತಲಾಷೆಗಿಳಿದಿದೆ.

ಒಂದುಮೂಲದ ಪ್ರಕಾರ ಮಾಜಿ ಮಂತ್ರಿ ದೇಶಪಾಂಡೆ ಈ ಸಮರ ಸೀರಿಯಸ್ಸಾಗಿ ಪರಿಗಣಿಸಿದ್ದರಂತೆ. ಏಕೆಂದರೆ ತಾನು ಕಾಂಗ್ರೆಸ್ ಬಿಡಲು ಬಲಾಢ್ಯ ದೇಶಪಾಂಡೆಯ ಕಿರುಕುಳವೇ ಕಾರಣ ಎಂಬಂತೆ ಸೀನ್ ಸೃಷ್ಟಿಸಿರುವ ಹೆಬ್ಬಾರ್‍ಗೆ ಪಾಠ ಕಲಿಸುವ ಹಟಕ್ಕೆ ದೇಶಪಾಂಡೆ ಬಿದ್ದಿದ್ಧರಂತೆ. ಹಾಗಾಗಿ ಆತ ತನ್ನ ಮಗ ಪ್ರಶಾಂತ ದೇಶಪಾಂಡೆಯನ್ನೇ ಕಾಂಗ್ರೆಸ್ ಕ್ಯಾಂಡಿಡೇಟ್ ಮಾಡಲು ಸ್ಕೆಚ್ ಹಾಕಿದ್ದರಂತೆ. ಇನ್ನೊಂದು ಬಾತ್ಮಿ ಪ್ರಕಾರ ದೇಶಪಾಂಡೆ ಮುದಿ ವಯಸ್ಸಿನಲ್ಲಿ ಮಗನನ್ನು ಪಣಕ್ಕಿಟ್ಟು ರಾಜಕಾರಣ ಮಾಡುವ ರಿಸ್ಕ್ ತೆಗೆದುಕೊಳ್ಳಲು ಸಾಧ್ಯವೇ ಇಲ್ಲವೆಂದು ಕಾಂಗ್ರೆಸ್ ಮೂಲಗಳು ಹೇಳುತ್ತಿವೆ.

ಡಿಸಿಸಿ ಅಧ್ಯಕ್ಷ ಭೀಮಣ್ಣ ನಾಯ್ಕ ಇದೇ ಕ್ಷೇತ್ರದವರು. ಆತ ಕಳೆದ ಬಾರಿ ಶಿರಸಿಯಲ್ಲಿ ನಿಂತು ಎಡವಿದ್ದರು. ಈಗ ಯಲ್ಲಾಪುರದಲ್ಲಿ ಗೆಲ್ಲುತ್ತೇನೆಂದು ಹೇಳುತ್ತಿದ್ದಾರೆ. ಆದರೆ ಆತನಿಗೆ ಗೆಲ್ಲುವ ತಾಕತ್ತು ಇಲ್ಲ. ಜನಸಾಮಾನ್ಯರ ವಿಶ್ವಾಸ ಗಳಿಸಿದ ವ್ಯಕ್ತಿತ್ವವೇ ಭೀಮಣ್ಣನದಲ್ಲ. ಆತ ಬರೀ ಡಮ್ಮಿ! ಇದು ಕೆಪಿಸಿಸಿ ಕಿಂಗ್‍ಗಳಿಗೂ ಗೊತ್ತಿದೆ. ಹಾಗಾಗಿ ಬೆಂಗಳೂರು ಮಟ್ಟದಲ್ಲಿ ಸದ್ಯಕ್ಕೆ ಜೆಡಿಎಸ್‍ನಲ್ಲಿರುವ ರಾಮಕೃಷ್ಣ ಹೆಗಡೆಜೀ ದಾಯಾದಿ ಮೊಮ್ಮಗ ಶಶಿಭೂಷಣ ಹೆಗಡೆ ಕಾಂಗ್ರೆಸ್ ಕ್ಯಾಂಡಿಡೇಟ್ ಮಾಡಿದ್ರೆ ಹೇಗೆಂಬ ಚರ್ಚೆ ನಡೆದಿದೆ.

ಹಾಗೊಮ್ಮೆ ಶಶಿಭೂಷಣ ಹೆಗಡೆ ಕಾಂಗ್ರೆಸ್ ಕ್ಯಾಂಡಿಡೇಟ್ ಆದರೆ ಹೆಬ್ಬಾರ್‍ಗೆ ದೊಡ್ಡ ಸವಾಲಾಗೋದು ನಿಸ್ಸಂಶಯ. ಯಲ್ಲಾಪುರ ಕ್ಷೇತ್ರದಲ್ಲಿ ದೊಡ್ಡ ಸಂಖ್ಯೆಯಲ್ಲಿ ಹವ್ಯಕ ಬ್ರಾಹ್ಮಣರು ಇರುವುದರಿಂದ ಶಶಿಗೆ ಈ ಸಮುದಾಯದ ಒಂದು ಭಾಗದ ಮತ ಖಂಡಿತ ಸಿಗುತ್ತದೆ. ಜೊತೆಗೆ ಕಾಂಗ್ರೆಸ್‍ನ ಸಾಂಪ್ರದಾಯಿಕ ಮತಗಳು ಮತ್ತು ಹೆಬ್ಬಾರ್‍ನ ವಿರೋಧಿಸುವ ಬಿಜೆಪಿ ಮೂಲನಿವಾಸಿಗಳ ತಂತ್ರ ಶಶಿಗೆ ನೆರವಾಗುತ್ತದೆ.
ಆರ್ಥಿಕವಾಗಿಯೂ ತೊಂದರೆಯಲ್ಲಿರುವ ಹೆಬ್ಬಾರ್‍ಗೆ ಪಕ್ಷದ್ರೋಹ ಆಟ ದುಬಾರಿಯಾಗಿ ಪರಿಣಮಿಸುತ್ತಿದೆ. ಕಂಗಾಲಾಗಿರುವ ಹಬ್ಬಾರ್ ಅಸ್ತಿತ್ವ ಉಳಿಸಿಕೊಳ್ಳಲು ನಿದ್ದೆಗೆಡುವಂತಾಗಿದೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....