Homeಅಂಕಣಗಳುಹಾಸನ ಪ್ರಥಮ ಸ್ಥಾನಕ್ಕೆ ಭವಾನಿ ಕಾರಣ ಕಂಡ್ರೀ

ಹಾಸನ ಪ್ರಥಮ ಸ್ಥಾನಕ್ಕೆ ಭವಾನಿ ಕಾರಣ ಕಂಡ್ರೀ

- Advertisement -
- Advertisement -

ಯಾಹೂ |

ಅದೊಂದು ಕಾಲದಲ್ಲಿ ಎಸ್ಸೆಸೆಲ್ಸಿಯಲ್ಲಿ ಪೇಲಾಗುವುದು ಅವಮಾನವೇ ಅಲ್ಲ. ಆದರು ಪಾಸದವರು ಸರಸ್ವತಿ ಪುತ್ರನಂತೆ ಬೀಗುತ್ತಿದ್ದರು. ಕಾಲ ಮಾಗಿದ ಬದಲಾವಣೆಯಲ್ಲಿ ಬದುಕೇ ಮುಖ್ಯವಾಗಿ, ಡಿಗ್ರಿಗಳು ಸರ್ಟಿಪಿಕೇಟುಗಳಾಗುತ್ತಿರುವ ಸಮಯದಲ್ಲಿ ಫಲಿತಾಂಶಗಳೂ ಮಹತ್ವ ಕಳೆದುಕೊಂಡಿರುವಾಗ ಮಾನ್ಯ ರೇವಣ್ಣನವರ ಜಿಲ್ಲೆ ಎಸ್ಸೆಸ್ಸೆಲ್ಸಿಯಲ್ಲಿ ಟಾಪ್ ಒನ್ ನಂಬರಿಗೆ ಬಂದಿದೆಯಂತಲ್ಲಾ. ಈ ಅಚ್ಚರಿ ಸುದ್ದಿಯನ್ನು ರೇವಣ್ಣನವರ ಜೊತೆಯಲ್ಲದೆ ಇನ್ನಾರ ಜೊತೆ ಹಂಚಿಕೊಳ್ಳಬೇಕು ಅನ್ನಿಸಿ ಫೋನ್ ಮಾಡಿದಾಗ ರಿಂಗಾಯ್ತು.
ರಿಂಗ್‍ಠೋನ್: ಶಾರದೆ ದಯತೋರು ನೀ………. ಶಾರದೆ “ಹಲೋ ಯಾರ್ರೀ”
“ನಾನು ಸರ್ ಯಾಹು”
“ಯಾವೂ ಅಂದ್ರ್ಯಾರ್ರೀ”
“ಪತ್ರಕರ್ತ ಸರ್”
“ಏನಾಗಬೇಕು”
“ಏನೂ ಆಗಬೇಕಾಗಿಲ್ಲ ಸಾರ್, ಅಭಿನಂದನೆ ಹೇಳನ ಅಂತ ಮಾಡಿದೆ”
“ರಿಜಲ್ಟು ಬಂದ ಮ್ಯಾಲೆ ಹೇಳಿ”
“ಯಲಕ್ಷನ್ ವಿಷಯ ಅಲ್ಲ ಸಾ, ಹಾಸನ ಜಿಲ್ಲೇಲಿ ಈಸಾರಿ ಎಸೆಸೆಲ್ಸಿ ಎಕ್ಸಾಮಲ್ಲಿ ಮಕ್ಕಳು ಪ್ರಥಮ ಸ್ಥಾನಗಳಿಸಿವೆ”
“ಅದ್ಕೆ ಭವಾನಿಗೆ ಅಭಿನಂದನೆ ಹೇಳ್ರಿ”
“ಭವಾನಿ ಏನು ಮಾಡಿದ್ರು ಸಾರ್”
“ಇದೇನ್ರಿ ಹಿಂಕೇಳ್ತಿರಿ, ಭವಾನಿ ಏನು ವಸಿ ಕಷ್ಟ ಪಟ್ಳೇನ್ರಿ, ಅವುಳು ಕಷ್ಟಪಡದ ನಾನೇ ನೋಡಕ್ಕಾಗಲಿಲ್ಲ”
“ಆಶ್ಚರ್ಯ ಸಾರ್, ನಮಿಗೆ ಗೊತ್ತೇ ಇರಲಿಲ್ಲ.”
“ಅವುಳು ನನ್ನ ಮದುವೆಯಾದಾಗ ನನಿಗೇನು ಗೊತ್ತಿತ್ರಿ ಪ್ರತಿಯೊಂದನ್ನು ಕಲಿಸಿದ್ಲು.”
“ಪ್ರತಿಯೊಂದನ್ನು ಅಂದ್ರೆ ಸಾ”
“ಪೇಪರ್ ಓದದ ಕಲಿಸಿದ್ಲು, ಯಾರತ್ರ ಯಂಗೆ ಮಾತಾಡಬೇಕು ಅನ್ನದ್ರಿಂದ ಹಿಡುದು ಏನುತ್ತರ ಕೊಡಬೇಕು ಅನ್ನೋವರಿಗು ಪ್ರತಿಯೊಂದನ್ನು ಕಲಿಸಿದ್ಲು ಕಂಡ್ರಿ”
“ರಿಯಲಿ ದೇವೇಗೌಡ್ರು ಗ್ರೇಟ್ ಸಾರ್.”
“ಯಾಕ್ರೀ.”
“ತಮ್ಮ ಮಗನನ್ನ ಗ್ರಹಿಸಿ, ಅವನನ್ನ ತಿದ್ದಿ ವಿದ್ಯೆ ಬುದ್ದಿ ಕಲಸೊ ಹೆಣ್ಣು ತಂದು ಮದುವೆ ಮಾಡಿದ್ರಲ್ಲ ಅದ್ಕೆ.”
“ನಿಜವಾಗ್ಲು ಭವಾನಿ ನನ್ನ ಭಾಗಕ್ಕೆ ಕಾಳಿಕಂಡ್ರಿ.”
“ಅಷ್ಟು ವಳ್ಳೆ ಹೆಣ್ಣುಮಗಳ ಕಾಳಿ ಅಂತೀರಲಾ ಸಾರ್.”
“ನಾನೇಳದ ಸಲುಪ ತಿಳಕಳ್ರಿ, ಕವಿರತ್ನ ಸುಮ್ಮಸುಮ್ಮನೆ ಆದನೇನ್ರಿ, ಕಾಳಿ ಅವುನಿಗೆ ವಿದ್ಯೆ ಬುದ್ದಿ ಕೊಟ್ಟಮ್ಯಾಲವುನು ಕತೆ ಕವನ ಬರದ ಅಲವೇನ್ರಿ.”
“ರಿಯಲಿ ಗ್ರೇಟ್ ಸಾರ್, ಭವಾನಿ ನಿಮ್ಮ ಭಾಗದ ಸರಸ್ವತಿ; ರೇವಣ್ಣನಿಗೆ ವಿದ್ಯಾಬುದ್ದಿ ಕಲಿಸಿ, ಎಮ್ಮೆಲ್ಲೆ ಮಾಡಿ, ಮಂತ್ರಿ ಮಾಡಿ, ಇವತ್ತು ಕರ್ನಾಟಕಕ್ಕೆ ಒಬ್ಬ ಸಮರ್ಥ ಮಂತ್ರಿ ಕೊಟ್ಟಿರೋದ್ರ ಕ್ರೆಡಿಟ್ಟು ಭವಾನಿಗೇ ಸೇರಬೇಕು ಸಾ. ಅಂಥ ರೇವಣ್ಣನಿಗೇ ವಿದ್ಯೆ ಹೇಳಿದ್ಕೆ ಇಡೀ ಹಾಸನಕ್ಕೆ ಹೇಳೊ ಶಕ್ತಿ ಬಂತು.”
“ಅದೇ ಕಂಡ್ರಿ ನಾನೇಳದು. ಭವಾನಿ ಬರಿ ಜಿಲ್ಲಾ ಪಂಚಾಯ್ತಿ ಮೆಂಬ್ರಾಗಿ ಕುಂತಿರಲಿಲ್ಲ. ಜಿಲ್ಲೆ ಪ್ರತಿ ಶಾಲೆಗೂ ಹೋಗಿ ದಡ್ಡುಡುಗುರನ್ನೆಲ್ಲ ಪತ್ತೆ ಮಾಡೀ, ಕಡೆಗೆ ಅವುರಪ್ಪ ಅವ್ವನ್ನು ಭೇಟಿ ಮಾಡಿ ನಿಮ್ಮುಡಗರಿಗೆ ಯಂಗೆ ಪಾಠ ಮಾಡಬೇಕು ಯಂಗೆ ಪಾಸಾಗಂಗೆ ಮಾಡಬೇಕು ಅನ್ನದ ಹೇಳತಿದ್ಲು. ಅದ ನಾನೇ ನೋಡಿದೀನಿ.”
“ಮತ್ತೆ ಪ್ರಥಮ ಸ್ಥಾನಕ್ಕೆ ಜಿಲ್ಲಾಧಿಕಾರಿ ರೋಹಿಣಿ ಕಾರಣ ಅಂತರಲ್ಲ ಸಾ.”
“ನನಿಗೆಲ್ಲಿ ನಗಬೇಕೊ ಗೊತ್ತಾಯ್ತಾಯಿಲ್ಲ ಕಂಡ್ರಿ, ಈ ಮಾತ ಕೇಳಿ. ಅಲ್ರೀ ರೋಹಿಣಿ ಏನು ಜಿಲ್ಲೆ ಇಸುಗೂಲಿಗೆಲ್ಲಾ ಹೆಡ್ಮೇಷ್ಟ್ರಾಗಿದ್ಲ, ಹೋಗ್ಲಿ ಪ್ರಿನ್ಸಿಪಾಲಾಗಿದ್ಲಾ? ಪಾಪ ಅವುಳಿಗೆ ಜಿಲ್ಲಾಧಿಕಾರಿ ಕ್ಯಲಸನೆ ರಾಶಿ ಬಿದ್ದಿತ್ತು. ಆ ಕ್ಯಲಸನೆ ಒಂದು ಖಂಡಗ ಇದ್ದಾಗ ಇನ್ನ ಮಕ್ಕಳ ಮಾತಾಡಿಸೋದಕ್ಕೆ ಪುರುಸೊತ್ತೆಲ್ಲೀ?””
“ಅದು ನಿಜವೆ, ಆದ್ರು ಆ ಹೆಣಮಗಳು ತಾನು ಹ್ಯಾಂಗೆ ಓದಿ ಮುಂದಕ್ಕೆ ಬಂದೆ ಅನ್ನೋ ಮೆತಡ್ಡ ಇಡೀ ಜಿಲ್ಲೆ ಮೇಷ್ಟ್ರಿಗೆ ಹೇಳಿದ್ದರಂತೆ. ಅವುರು ವಿದ್ಯಾರ್ಥಿಗಳಿಗೆ ಹೇಳಿದ್ರಂತೆ, ಅಂಗಾಗಿ ಎಸ್ಸೆಲ್ಸಿ ರಿಜಲ್ಟಲ್ಲಿ ಜಿಲ್ಲೆ ಪ್ರಥಮ ಬಂದದೆ ಅಂತ ಪತ್ರಕರ್ತರೆ ಬರದವುರೆ ಸಾ.”
“ನೀವು, ಪತ್ರಕರ್ತರಿಗೇನು ಬರೀತೀರಿ ಕಂಡ್ರಿ, ಈಗ ಅಂಗ್ಯಲ್ಲ ಬರಿಯೋರು ಈಟು ದಿನ ಎಲ್ಲೋಗಿದ್ರಪ್ಪ, ರೋಹಿಣಿ ಎಲ್ಲೆಲ್ಲಿ ಪಾಠ ಮಾಡಿದ್ರು ಅಂತ ಆಗ್ಲೇ ಬರೀಬೇಕಾಗಿತ್ತು. ಅವುರೇನೋ ಮಾಡಿದ್ರು ಅಂತ ಬರೀತಾ ಇರೊ ಈ ಪತ್ರಕರ್ತರು. ಅದೇ ಭವಾನಿ ಬಗ್ಗೆ ಒಂದು ಮಾತ ಬರೀಲಿಲ್ಲ. ನಾನೇ ಹೇಳಬೇಕಾಯ್ತು.”
“ಪತ್ರಕರ್ತರು ಬುಡಿ ಸಾ ನಿಮ್ಮ ಪ್ಯಾಮಿಲಿ ಕಂಡ್ರೆಸಾಕು ಏನೇನೊ ಬರೀತಾರೆ, ಆದ್ರು ಬಹಳ ಹಿಂದೆನೆ ನೀವು ನಿಮ್ಮ ಭವಾನಿ ಮೇಡಂನ ಸರಿಯಾಗಿ ಬಳಸಿಕಂಡಿದ್ದ್ರೆ, ಯಲ್ರೂ ಎಸ್ಸೆಲ್ಸೀಲಿ ಪಸ್ಟ್ ಕ್ಲಾಸಲ್ಲಿ ಪಾಸಾಗಬಹುದಿತ್ತು.”
“ಅಂಗಾಗದಿಲ್ಲ ಕಂಡ್ರೀ, ನಮ್ಮ ಮನೆ ಹುಡುಗರಿಗೆ ನಾವು ಪಾಠ ಹೇಳಕ್ಕಾಗತ್ತೇ, ವಡದುಬುಡ್ತಿವಿ ಕಂಡ್ರಿ, ಅದ್ಕೆ ಅಲವ ಬ್ಯಾರೆ ಮೇಸ್ಟ್ರುತಕ್ಕೆ ಕಳಸದು. ಆಗ ಭವಾನಿ ನನಿಗೊಬ್ಬನಿಗೆ ವಿದ್ಯೆ ಬುದ್ದಿ ಕಲಸಕ್ಕೆ ಸಾಕಾಗೋಯ್ತಿತ್ತು. ಇನ್ನ ಉಳದೋರಿಗೆ ಎಲ್ಲಿಂದ ಹೇಳಿಕೊಡದ್ರಿ.”
“ಆಗದಿಲ್ಲ ಸಾ, ನಿಜಕ್ಕೂ ನಿಮ್ಮ ಕಥೆ ಕೇಳಿದ್ರೆ ಮಲ್ಲಮ್ಮನ ಪವಾಡ ಸಿನುಮ ಕತೆ ಕೇಳಿದಂಗಾಯ್ತು ಸಾ.”
“ನಾನು ಕವಿರತ್ನ ಕಾಳಿದಾಸ ಅಂದ್ರೆ, ನೀವು ಮಲ್ಲಮ್ಮನ ಪವಾಡ ಅಂತೀರಲ್ರೀ.”
“ಸಾರಿ ಸಾ. ಸರಿಯಾದ ಹೋಲಿಕೆನೂ ಬರಲ್ಲ ನಂಗೆ. ಆದ್ರು ಒಂದು ಡವುಟು ಸಾ.”
“ಏನ್ರಿ ಡವುಟು”
“2016-17ನೇ ಸಾಲಲ್ಲಿ 7ನೇ ಸ್ಥಾನದಲ್ಲಿದ್ದ ಜಿಲ್ಲೆ, 2019ಕ್ಕೆ ಪ್ರಥಮ ಸ್ಥಾನಕ್ಕೆ ಯಂಗೆ ಬಂತು ಅಂತ”
“ಅದೆ ಹೇಳ್ಳಿಲ್ಲವೇನ್ರಿ, ಭವಾನಿ ಮನಸು ಮಾಡಿದ್ಕೆ ಅಂತ”
“ನನಗಿರೊ ಡವುಟು ಪ್ರಕಾರ, ಇಂತ ಪವಾಡ ನ್ಯಡಿಬೇಕಾದ್ರೆ ಸಾಮೂಹಿಕ ಕಾಫಿ ನ್ಯಡಿದಿರಬೇಕು ಸಾ”
“ಅದ್ಯಂಗ್ರಿ ಇಡೀ ಜಿಲ್ಲೇನೆ ಕಾಫಿ ಮಾಡ್ತದೆ”
“ಒಂದು ಸತಿ ಪೋಲೀಸ್‍ನೋರ್ಯಲ್ಲ ಅಕೌಂಟ್ ಹೈಯರ್, ಲೋಯರ್, ಜನರಲ್ ಲಾ, ಎಕ್ಸಾಂ ತಗಂಡಿದ್ರು ಸಾ, ಎಸ್ಸಿ ಕೆಂಪಯ್ಯನೋರು ಮನಸು ಮಾಡಿದ್ರಿಂದ ಯಲ್ಲ ಪೋಲೀಸ್ರು ಕಾಫಿ ಮಾಡಿ ಯಲ್ಲ ಪಾಸಾಗಿದ್ರು. ಅಂಗೇನಾರ ಭವಾನಿ ಮಾಡಿದ್ರ ಅಂತ”
“ಯಾವನ್ರಿ ನಿಮಗೇಳಿದೋನು? ಹೊಟ್ಟಿಗೆ ಅನ್ನ ತಿಂತಿರೊ ಇಲ್ಲ ಮಣ್ಣು ತಿಂತಿರೊ”
“ಬರಿ ಮುದ್ದೆ ಸಾ”
“ಅದ್ಕೆ ಹಿಂಗೆ ಮಾತಾಡದು ನೀವು”
“ದೇವೇಗೌಡ್ರು ಅದ್ನೆ ಅಲವ ಸಾ ತಿನ್ನದು”
“ಥೂತ್ತೇರಿ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...