Homeಕರ್ನಾಟಕಕುಮಾರಸ್ವಾಮಿ ಸರ್ಕಾರಕ್ಕೆ ಒಂದು ವರ್ಷ ತಿರುತಿರುಗಿ ಅಲ್ಲೇ ನಿಂತಿದೆ: ಇದೆಂತಹ ‘ಚಲನಶೀಲತೆ’?

ಕುಮಾರಸ್ವಾಮಿ ಸರ್ಕಾರಕ್ಕೆ ಒಂದು ವರ್ಷ ತಿರುತಿರುಗಿ ಅಲ್ಲೇ ನಿಂತಿದೆ: ಇದೆಂತಹ ‘ಚಲನಶೀಲತೆ’?

- Advertisement -
- Advertisement -

| ಪಿ.ಕೆ. ಮಲ್ಲನಗೌಡರ್ |

ಆ ಚುನಾವಣಾ ಫಲಿತಾಂಶದಿಂದ ಈ ಚುನಾವಣಾ ಫಲಿತಾಂಶ ಬರುವುದರೊಳಗೆ ಕುಮಾರಸ್ವಾಮಿ ಸರ್ಕಾರಕ್ಕೆ ಒಂದು ವರ್ಷ ತುಂಬಿದ್ದೇ ಗೊತ್ತಾಗಲಿಲ್ಲ! ಈ ಸರ್ಕಾರ ಒಂದರ್ಥದಲ್ಲಿ ‘ಚಲನಶೀಲ’ವೇ ಆಗಿದೆ. ಆದರೆ ಅದು ತಿರುತಿರುಗಿ ಮತ್ತಲ್ಲೇ ನಿಂತಿದೆ. ಹುಟ್ಟಿದಾಗ ಯಾವ ಆತಂಕದಲ್ಲಿತ್ತೋ ಅದೇ ಆತಂಕದಲ್ಲಿ ಸರ್ಕಾರವಿದ್ದರೆ, ಅವತ್ತು ಯಾವ ಭ್ರಮೆಯಲ್ಲಿತ್ತೋ ಅದೇ ಭ್ರಮೆಯಲ್ಲಿ ವಿಪಕ್ಷವಿದೆ!

ಇದು ಕರ್ನಾಟಕದ ಜನರ ದುರಾದೃಷ್ಟ. ಕಳೆದ ಸಲ ಹೊಸ ಸರ್ಕಾರ ಬಂದಾಗ ಅದು ತನ್ನ ಅಸ್ತಿತ್ವ ಕಾಪಾಡಿಕೊಳ್ಳಲೇ ಹೆಣಗಬೇಕಿತ್ತು. ಇದೇ ತಿಂಗಳಲ್ಲಿ ತೀನ್ ದಿನ್ ಕಾ ಸುಲ್ತಾನ್ ಆಗಿ, ಸಂವಿಧಾನಿಕ ನಡೆಯ ಎದುರು ತಲೆಬಾಗಬೇಕಾದ ಯಡಿಯೂರಪ್ಪನವರು ಈಗಲೂ ಜನರ ತೀರ್ಪಿನ ವ್ಯಾಖ್ಯಾನವನ್ನು ಅರಗಿಸಿಕೊಂಡಿಲ್ಲ, ಅವರಿಗೆ 24*7 ಮುಖ್ಯಮಂತ್ರಿ ಕನಸು. ಅದರ ಸುತ್ತಲೇ ಅವರ ಕಾರ್ಯಚಟುವಟಿಕೆ. ಕಳೆದ ಸಲ ಫಲಿತಾಂಶ ಬಂದಾಗಿನಿಂದ ಸಿಎಂ ಆಗುವ ತಮ್ಮ ಹಂಬಲವನ್ನು ಹೈಕಮಾಂಡ್ ಕಾರಣಕ್ಕಾಗಿ ಅದುಮಿಟ್ಟಿದ್ದ ಸಿದ್ದರಾಮಯ್ಯ ಈಗ ಅದನ್ನು ಕಾರ್ಯರೂಪಕ್ಕೆ ತರುವ ಕೆಲಸವನ್ನು ತೆರೆಮರೆಯಲ್ಲಿ ನಡೆಸಿದ್ದಾರೆ.

ಹಾಗಾದ್ದ ಮೇಲೆ ಈ ಸರ್ಕಾರಕ್ಕೆ ಒಂದು ವಿಷನ್ ಎಂಬುದು ಇರಲು ಹೇಗೆ ಸಾಧ್ಯ? ಇವರ ಕಿತ್ತಾಟದ ಫಲವೆಂದರೆ, ಈ ವರ್ಷದ ಬಜೆಟ್ ಯಾವುದೇ ರ್ಚೆಯಿಲ್ಲದೇ ಪಾಸಾಗುವ ಮೂಲಕ ಕರ್ನಾಟಕ ವಿಧಾನಸಭಾ ಇತಿಹಾಸದಲ್ಲಿ ದಾಖಲೆ ಬರೆಯಿತು. ಇದಕ್ಕೆ ಮೂರೂ ಪಕ್ಷಗಳೂ ಕಾರಣ. ಒಂದು ರಾಜ್ಯದ ಅಭಿವೃದ್ಧಿಯ, ಯೋಜನೆಗಳ ನೀಲನಕ್ಷೆಯ ವಾರ್ಷಿಕ ಮುನ್ನೋಟ ನೀಡುವ ಬಜೆಟ್ ಬಗ್ಗೆ ಮೂರೂ ಪಕ್ಷಗಳ ನಿಲುವು ಒಂದೇ ಆಗಿರುವಾಗ ಯಾವ ರಚನಾತ್ಮಕ ಕೆಲಸಗಳನ್ನು ನಿರೀಕ್ಷಿಸಲು ಸಾಧ್ಯ?

ತಳಮಟ್ಟದ ಆಡಳಿತ ಕುಸಿತ
ಇಲ್ಲಿ ಯಾವ ಸಚಿವ, ಶಾಸಕರಿಗೂ ಸ್ಥಳಿಯ ಸಮಸ್ಯೆಗಳ ಕಡೆ ಗಮನ ಹರಿಸಲು ಪುರುಸೊತ್ತಿಲ್ಲ. ಎಲ್ಲರಿಗೂ ಈ ಸರ್ಕಾರ ಬೀಳುವುದೋ ಇಲ್ಲವೋ ಎಂಬುದರ ಚಿಂತೆ. ಉಪ ಚುನಾವಣೆಗಳ ಎರಡು ಸೀಟುಗಳು ಬಹುಮುಖ್ಯವಾಗಿದ್ದರಿಂದ ಮೂರೂ ಪಕ್ಷಗಳ ನಾಯಕರು ತಲೆಕೆಡಿಸಿಕೊಂಡು ಭಾಗವಹಿಸಿದರು. ಈಗವರಿಗೆ ಕೇಂದ್ರದಲ್ಲಿ ಯಾವ ಸರ್ಕಾರ ಬರುತ್ತದೆ ಮತ್ತು ಇಲ್ಲೇನಾಗಲಿದೆ ಎಂಬುದಷ್ಟೇ ಚಿಂತೆ. ಇದೇ ಮೇ 29 ಕ್ಕೆ ಸುಮಾರು 15 ಲಕ್ಷ ಮತದಾರರು ಪಾಲ್ಗೊಳ್ಳುವ 69 ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿವೆ. ಮೂರೂ ಪಕ್ಷಗಳ ನಾಯಕರಿಗೆ ಇದರ ಕಡೆ ಪುರುಸೊತ್ತೇ ಇಲ್ಲ. 2018ರ ಅಗಸ್ಟ್‍ನಲ್ಲಿ 109 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿತ್ತು. ಸರ್ಕಾರದ ಮೀಸಲಾತಿ ನಿಗದಿಯಲ್ಲಿ ರೋಸ್ಟರ್ ಅನುಸರಿಸದೇ ಇದ್ದುದರಿಂದ ಹೈಕೋರ್ಟಿನಲ್ಲಿ ಕೆಲವರು ತಡೆಯಾಜ್ಞೆ ತಂದರು. ಆ ತಡೆಯಾಜ್ಞೆ ತೆರವುಗೋಳಿಸುವ ಆಸಕ್ತಿಯೇ ಸರ್ಕಾರಕ್ಕೆ ಇಲ್ಲದ್ದರಿಂದ ಈ 109 ಸ್ಥಳಿಯ ಸಂಸ್ಥೆಗಳಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಇನ್ನೂ ಆಗಿಲ್ಲ. ಆಡಳಿತಾಧಿಕಾರಿಗಳದ್ದೇ ಕಾರುಬಾರು. ಸದ್ಯ ಕುಡಿಯುವ ನೀರಿನ ತೀವ್ರ ಅಭಾವವಿದ್ದು ಇಂತಹ ಕಡೆ ಅಧಿಕಾರಿಗಳು ನೀರು ಪೂರೈಕೆ ನೆಪದಲ್ಲಿ ಹಣ ಮಾಡುತ್ತಿದ್ದಾರೆ. ಬಹುಪಾಲು ಶಾಸಕರು ಬೆಂಗಳೂರಲ್ಲೇ ಇರುವುದರಿಂದ ಸ್ಥಳಿಯ ಸಮಸ್ಯೆಗಳಿಗೆ ಸ್ಪಂದಿಸುವವರೇ ಇಲ್ಲದಂತಾಗಿದೆ.

ವಿಕೇಂದ್ರಿಕರಣದ ನಿರ್ಲಕ್ಷ್ಯ
ಕಳೆದ ಸರ್ಕಾರದ ಅವಧಿಯಲ್ಲಿ ಕೃಷಿ ಸಚಿವರಾಗಿ ತಣ್ಣಗೆ ಅದ್ಭುತ ಸಾಧನೆ ಮಾಡಿದ್ದ ಯುವ ಶಾಸಕ ಈ ಸಲ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಅಂತಹ ಉತ್ಸಾಹವನ್ನೇನೂ ತೋರುತ್ತಿಲ್ಲ. ಅವರ ಪೊಟೆನ್ಸಿಯಲ್‍ಗೆ ಹೋಲಿಸಿದರೆ ಈಗಿನ ಅವರ ಕಾರ್ಯವೈಖರಿ ನೀರಸವಾಗಿದೆ. ಕಳೆದ ಸಲ ಈ ಖಾತೆಗಿದ್ದ ಎಚ್.ಕೆ. ಪಾಟೀಲ ತಳಹಂತದಲಾಗುತ್ತಿದ್ದ ಪ್ರತಿ ಬೆಳವಣಿಗೆ, ಕುಂಠಿತಗಳನ್ನು ಖುದ್ದು ಪರಿಶೀಲಿಸಿ ಎಷ್ಟು ಸಾಧ್ಯವೋ ಅಷ್ಟು ಪರಿಹಾರ ಒದಗಿಸಲು ವಿವಿಧ ಸಚಿವರೊಂದಿಗೆ, ಇಲಾಖೆಗಳೊಂದಿಗೆ ಮಾತಾಡಿ, ಮನವರಿಕೆ ಮಾಡಿಕೊಟ್ಟು ಸಹಕಾರ ಪಡೆಯುತ್ತಿದ್ದರು. ಕೃಷಿಹೊಂಡ ಮತ್ತು ಕೃಷಿ ಉಪಕರಣಗಳ ಬಾಡಿಗೆ ಯೋಜನೆಗಳನ್ನು ಪರಿಣಾಮಕಾರಿಯಾಗಿ ತಂದಿದ್ದ ಕೃಷ್ಣ ಭೈರೆಗೌಡರು ಈ ಸಮ್ಮಿಶ್ರ ಜಂಜಾಟದಲ್ಲಿ ಮುಳುಗಿ ಸುಸ್ತಾಗಿಬಿಟ್ಟರೆ? ಸಚಿವರು ಪದೇ ಪದೇ ಮನೆಪಟ್ಟಿ (ತೆರಿಗೆ), ನೀರಿನ ಕರ ವಸೂಲಿ ಸರಿಯಾಗಿ ಮಾಡಿ ಎಂದು ಆದೇಶ ಕೊಡುತ್ತಾರೆ? ಸತತ ಬರದಿಂದ ತತ್ತರಿಸುವ ಪ್ರದೇಶಗಳಲ್ಲಿ ಜನರಿಗೆ ಇದನ್ನೆಲ್ಲ ಭರಿಸಲು ಸಾಧ್ಯವಾ? ಅದರ ಬದಲು, ಸದ್ಯಕ್ಕೆ ಅಂತಹ ಕರಗಳನ್ನು ಸಂಗ್ರಹಿಸುವುದನ್ನು ಮುಂದಕ್ಕೆ ಹಾಕೋಣ ಎಂಬ ಸಾಮಾಜಿಕ ಅರಿವಿನ ಚಿಂತನೆಯನ್ನು ಕೃಷ್ಣ ಭೈರೆಗೌಡರು ಮಾಡಬಹುದಿತ್ತು.

ಕಳೆದ ಸರ್ಕಾರದ ಅವಧಿಯಲ್ಲಿ ಗ್ರಾಪಂಗಳಿಗೆ ಅವರ ವ್ಯಾಪ್ತಿಯಲ್ಲಿನ ಮೊಬೈಲ್ ಟವರ್, ಗಾಳಿ ವಿದ್ಯುತ್ ಯಂತ್ರಗಳ ಕಂಪನಿಗಳಿಂದ ತೆರಿಗೆ ಪಡೆಯುವ ಅಧಿಕಾರ ನೀಡಲಾಗಿದೆ. ಆದರೆ ದೂರದಲ್ಲೆಲ್ಲೋ ಹೆಡ್ ಆಫೀಸ್ ಹೊಂದಿರುವ ಈ ಕಂಪನಿಗಳು 9-10 ನೋಟಿಸ್ ಕೊಟ್ಟರೂ ಉತ್ತರಿಸುತ್ತಿಲ್ಲ. ಸೀದಾ ಈ ಕಂಪನಿಗಳ ರಾಜ್ಯ ಪ್ರತಿನಿಧಿಗಳಿಗೆ ಜಾಡಿಸಿ ಸರಿ ದಾರಿಗೆ ತರುವ ಬದಲು ಸಂಕಷ್ಟದಲ್ಲಿರುವ ಜನರಿಂದ ಕರ ವಸೂಲಿಗೆ ಒತ್ತಾಯಿಸುತ್ತಿದ್ದಾರೆ ಸಚಿವರು.

ಇದನ್ನು ಓದಿ: ರಾಜ್ಯ ಸರ್ಕಾರದ ಭವಿಷ್ಯ ನಿಂತಿರುವುದು ಈ ನಾಲ್ಕು ಅಂಶಗಳ ಮೇಲೆ.

ಎಲ್ಲವನ್ನೂ ಅವರು ಜಿಲ್ಲಾ ಪಂಚಾಯತಿ ಸಿಇಒಗಳ ಉಸಾಬರಿಗೆ ನೀಡಿದ ಪರಿಣಾಮವಾಗಿ, ಇವತ್ತು ಗ್ರಾಮಗ್ರಾಮಗಳಲ್ಲಿ ಕುಡಿಯುವ ನೀರಿಗೆ ತಾತ್ವಾರ. ಈಗ ಅಧಿಕಾರಿಗಳು ಬಾವಿ ತೋಡಲು ಹೊರಟಿದ್ದಾರೆ.

ಇಂತಹ ಸಂದರ್ಭದಲ್ಲಿ ಕಂದಾಯ ಇಲಾಖೆ, ಕೃಷಿ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳ ಸಚಿವರ ನಡುವೆ ಸಮನ್ವಯವಿರಬೇಕಿತ್ತು. ಸದಾ ಕೈಗಾರಿಕೆ, ಮೂಲ ಸೌಕರ್ಯ ಸಚಿರಾಗಿದ್ದ ಆರ್‍ವಿ.. ದೇಶಪಾಂಡೆಯವರಿಗೆ ಕಂದಾಯ ಖಾತೆ ಒಗ್ಗುತ್ತಿಲ್ಲವೇನೋ? ಆದರೆ ಈ ಇಲಾಖೆಯ ‘ಆದಾಯ’ ಖುಷಿ ಕೊಡುತ್ತದೆ, ಆದರೆ ತಳಮಟ್ಟಕ್ಕೆ ಇಳಿದು ಕೆಲಸ ಮಾಡಲ್ಲ ಅಂದರೆ ಹೇಗೆ?

ಪ್ರಾಥಮಿಕ ಶಿಕ್ಷಣಕ್ಕೆ ಸಚಿವರೇ ಇಲ್ಲ!

ಇವತ್ತು ನಮ್ಮ ಸರ್ಕಾರಿ ಶಾಲೆಗಳು ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿವೆ. ಆದರೆ, ಸದ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆಂದು ಪ್ರತ್ಯೇಕ ಸಚಿವರಿಲ್ಲ! ಅಂದರೆ ಅದು ಪರೋಕ್ಷವಾಗಿ ಮುಖ್ಯಮಂತ್ರಿ ಬಳಿಯೇ ಇದೆ ಎಂದರ್ಥ. ಕಳೆದ ಅಕ್ಟೋಬರ್‍ನಲ್ಲಿ ಬಿಎಸ್‍ಪಿಯ ಎನ್ ಮಹೇಶ್ ಅವರ ಪಾರ್ಟಿ ಹೈಕಮಾಂಡ್ ಆದೇಶದಂತೆ ಪ್ರಾಥಮಿಕ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ ಮೇಲೆ, ಈ ಇಲಾಖೆಗೆ ಈಗ ಸಚಿವರೇ ಇಲ್ಲ! ಈ ಬಗ್ಗೆ ಕಾಂಗ್ರೆಸ್‍ಗೂ ಚಿಂತೆಯಿಲ್ಲ, ವಿಪಕ್ಷಕ್ಕೆ ಇದು ಮುಖ್ಯ ವಿಷಯವೇ ಅಲ್ಲ!

ರೆಸಾರ್ಟಿನಿಂದ ರೆಸಾರ್ಟಿಗೆ: ಇದೇ ‘ಚಲನಶೀಲತೆ’!
ಹಾಗಂತ ಈ ಸರ್ಕಾರ ಕೆಲಸವೇ ಮಾಡಿಲ್ಲ ಅಂತಲ್ಲ. ಸಾಲಮನ್ನಾ ವಿಷಯದಲ್ಲಿ ಅನಗತ್ಯ ರೂಲ್ಸ್ ಮಾಡಿ ವಿಳಂಬ ಮಾಡಿದೆಯಾದರೂ, ಅದರ ಸಾಧನೆ ಈ ವಿಷಯದಲ್ಲಿ ಪರವಾಗಿಲ್ಲ. ಆದರೆ ನೀರಾವರಿ ಯೋಜನೆಗಳಲ್ಲಿ ತುಂಬ ಹಿಂದಿದೆ. ಜಲ ಸಂಪನ್ಮೂಲ ಸಚಿವರಿಗೆ ಉಪ ಚುನಾವಣೆ ಉಸ್ತುವಾರಿ, ಬೇರೆ ಜಿಲ್ಲೆಗಳಲ್ಲಿ ಮೂಗು ತೂರಿಸುವುದು, ತಮ್ಮ ಕೇಸುಗಳನ್ನು ಫೈಟು ಮಾಡುವುದೇ ದೊಡ್ಡ ಕೆಲಸ. ಅವರ ಬಳಿ ನೀರಾವರಿ ಕುರಿತಂತೆ ಮುನ್ನೋಟವಿರಲಿ, ಆಕ್ತಿಯೂ ಇಲ್ಲ. ಈಗ ಚಾಲ್ತಿಯಲ್ಲಿರುವ ಯೋಜನೆಗಳಿಂದ ಅವರಿಗೆ ಬರಬೇಕಾದದ್ದು ಬಂದರೆ ಮುಗೀತು. ಪ್ರತಿ ಕ್ಯಾಬಿನೆಟ್ ಸಭೆಯಲ್ಲೂ ಲೋಕೋಪಯೋಗಿ ಸಚಿವ ರೇವಣ್ಣರಿಗೆ ವಿಶೇಷ ಅನುದಾನಗಳು. ಅವರ ಪಾಲಿಗೆ ‘ಲೋಕ’ ಅಂದರೆ ಹಾಸನ ಜಿಲ್ಲೆಯಷ್ಟೇ!

ಇಡೀ ಒಂದು ವರ್ಷದ ಚಿತ್ರಣ ನೋಡಲು ಹೊರಟರೆ ಆಪರೇಷನ್ ಕಮಲ, ಅದನ್ನು ತಡೆಯಲು ಹೆಣಗಾಟ, ಶಾಸಕರು ರೆಸಾರ್ಟಿನಿಂದ ರೆಸಾರ್ಟಿಗೆ ಅಲೆಯುವ ದೃಶ್ಯಗಳೇ ಜನರ ಕಣ್ಮುಂದೆ ಬರುತ್ತಿವೆ.
ಇದು ಕೇವಲ ಕುಮಾರಸ್ವಾಮಿ ಸರ್ಕಾರದ ವಿಫಲತೆಯಲ್ಲ, ರಾಜ್ಯದ ಮೂರೂ ಪ್ರಮುಖ ಪಾರ್ಟಿಗಳ ವಿಫಲತೆ ಕೂಡ.

ಇದನ್ನು ಓದಿ: ರಾಜ್ಯದ ಸಮ್ಮಿಶ್ರ ಸರ್ಕಾರ ಬೀಳತ್ತೋ? ಕೊಡವಿಕೊಂಡು ಏಳತ್ತೋ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂಪೂರ್ಣ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ

ಈ ವರ್ಷದ ಬಜೆಟ್ ಅಧಿವೇಶನದಲ್ಲಿ ಬಹುಕಾಲದ ಸಂಪೂರ್ಣ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಪರಿಶಿಷ್ಟ ಜಾತಿ (ಎಸ್‌ಸಿ) ಎಡಗೈ ಸಂಬಂಧಿತ ಜಾತಿ ಮುಖಂಡರು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳು ಮತ್ತು...

“ಇಲ್ಲಿ 60 ವರ್ಷ ವಾಸಿಸಿದ್ದೆವು, ಒಂದೇ ದಿನದಲ್ಲಿ ನಿರಾಶ್ರಿತರಾದೆವು”: ಅಜಿ ನದಿ ದಡದ ಅಕ್ರಮ ಅತಿಕ್ರಮಣ ತೆರವಿನಲ್ಲಿ ಮನೆ ಕಳೆದುಕೊಂಡವರ ಮಾತು

ಗುಜರಾತ್‌ನ ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಷನ್ (ಆರ್‌ಎಂಸಿ) ಜಂಗಲೇಶ್ವರದಲ್ಲಿ ನೂರಾರು ವಸತಿ ರಚನೆಗಳನ್ನು ನೆಲಸಮಗೊಳಿಸಿ ಹಲವಾರು ಕುಟುಂಬಗಳನ್ನು ನಿರಾಶ್ರಿತರನ್ನಾಗಿ ಮಾಡಿರುವ ಅಜಿ ನದಿಯ ದಡದಲ್ಲಿ ಅಕ್ರಮ ಅತಿಕ್ರಮಣಗಳನ್ನು ತೆಗೆದುಹಾಕಲು ದೊಡ್ಡ ಪ್ರಮಾಣದ ನೆಲಸಮ ಕಾರ್ಯಾಚರಣೆಯ...

ಇಂಡಿಯಾ ಬಣದ ಸಂಚಾಲಕರಾಗಲು ಸ್ಟಾಲಿನ್ ಸೂಕ್ತ: ಮಣಿಶಂಕರ್ ಅಯ್ಯರ್

"ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಅವರು ಇಂಡಿಯಾ ಬಣದ ಸಂಚಾಲಕರಾಗಲು ಸೂಕ್ತ" ಎಂದು ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಪ್ರತಿಪಾದಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅಯ್ಯರ್, ತಮಿಳುನಾಡು ಮುಖ್ಯಮಂತ್ರಿ ಇಂಡಿಯಾ ಬಣದ ಸಂಚಾಲಕರಾಗಲು ಉತ್ತಮ...

ಬೆಂಗಳೂರು: ಮತ್ತು ಬೆರೆಸಿದ ಪಾನೀಯ ನೀಡಿ ಗೆಳೆಯ ಮತ್ತು ಆತನ ಸ್ನೇಹಿತನಿಂದ ಅತ್ಯಾಚಾರ, ಬೆದರಿಕೆ: ಕಾಲೇಜು ವಿದ್ಯಾರ್ಥಿನಿಯಿಂದ ದೂರು

19 ವರ್ಷದ ಖಾಸಗಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ತನ್ನ ಗೆಳೆಯ ಮತ್ತು ಅವನ ಸ್ನೇಹಿತನ ವಿರುದ್ಧ ಮಾದಕ ದ್ರವ್ಯ ಸೇವಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ದೂರು ದಾಖಲಿಸಿದ್ದಾಳೆ. ಜಕ್ಕೂರಿನಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿಗೆ...

ಮಕ್ಕಳಲ್ಲಿ ಹಿಂಸಾತ್ಮಕ ಪ್ರವೃತ್ತಿ ತಡೆಯಲು ಮೀನು-ಮಾಂಸ ಮಾರಾಟ ನಿಷೇಧ: ಬಿಹಾರ ಉಪಮುಖ್ಯಮಂತ್ರಿ

ಮಕ್ಕಳಲ್ಲಿ 'ಹಿಂಸಾತ್ಮಕ ಪ್ರವೃತ್ತಿ'ಗಳನ್ನು ನಿಲ್ಲಿಸುವ ಪ್ರಯತ್ನದಲ್ಲಿ ಧಾರ್ಮಿಕ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಅಥವಾ ಜನದಟ್ಟಣೆಯ ಸ್ಥಳಗಳ ಬಳಿ ಮಾಂಸ ಮತ್ತು ಮೀನು ಮಾರಾಟವನ್ನು ನಿಷೇಧಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಬಿಹಾರ ಉಪಮುಖ್ಯಮಂತ್ರಿ ವಿಜಯ್...

ದೆಹಲಿಯಲ್ಲಿ ಅರುಣಾಚಲದ ಮಹಿಳೆಯರಿಗೆ ಜನಾಂಗೀಯ ನಿಂದನೆ : ಪ್ರಕರಣ ದಾಖಲು

ದೆಹಲಿಯ ಮಾಳವೀಯ ನಗರದಲ್ಲಿ ಅರುಣಾಚಲ ಪ್ರದೇಶದ ಮೂವರು ಮಹಿಳೆಯರಿಗೆ ಜನಾಂಗೀಯ ನಿಂದನೆ ಮಾಡಿ, ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಫೆಬ್ರವರಿ 20 ಎಸಿ ದುರಸ್ತಿ ಸಂದರ್ಭದಲ್ಲಿ ಉಂಟಾದ ಸಣ್ಣ ಜಗಳವೊಂದು ಜನಾಂಗೀಯ ನಿಂದನೆಗೆ...

ಹಿಂದುತ್ವ ಗುಂಪಿನಿಂದ ಮುಸ್ಲಿಂ ವ್ಯಕ್ತಿಯನ್ನು ರಕ್ಷಿಸಿದ್ದ ಜಿಮ್ ಟ್ರೈನರ್ ‘ಮೊಹಮ್ಮದ್ ದೀಪಕ್’ ಅವರನ್ನು ಭೇಟಿಯಾದ ರಾಹುಲ್ ಗಾಂಧಿ 

ನವದೆಹಲಿ: ಕಳೆದ ತಿಂಗಳು ಕೋಟ್ದ್ವಾರದಲ್ಲಿರುವ ಅಹ್ಮದ್ ಅವರ ಬಾಬಾ ಸ್ಕೂಲ್ ಡ್ರೆಸ್ & ಮ್ಯಾಚಿಂಗ್ ಸೆಂಟರ್‌ನ ರಕ್ಷಣೆಗೆ ಬಂದು ಸುದ್ದಿಯಲ್ಲಿದ್ದ ಜಿಮ್ ತರಬೇತುದಾರ ದೀಪಕ್ ಅವರನ್ನು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್...

‘ಸಂಘದವರ ಚಡ್ಡಿಗಳನ್ನು ತಲೆ ಮೇಲೆ ಹೊರುವುದು ದಲಿತತ್ವವಲ್ಲ..’; ಛಲವಾದಿಗೆ ಸಚಿವ ಪ್ರಿಯಾಂಕ್‌ ತಿರುಗೇಟು

"ಸಂವಿಧಾನ ವಿರೋಧಿಸಿ ಕರಡು ಪ್ರತಿಯನ್ನು ಸುಟ್ಟಿದ್ದ ಸಂಘದವರ ಚಡ್ಡಿಗಳನ್ನು ತಲೆ ಮೇಲೆ ಹೊರುವುದು ದಲಿತತ್ವವಲ್ಲ" ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ಸಚಿವ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ. ಈ ಬಗ್ಗೆ...

ಅಮೆರಿಕದಿಂದ ದಾಳಿ ಬೆದರಿಕೆ : ಇರಾನ್ ತೊರೆಯುವಂತೆ ಭಾರತೀಯ ಪ್ರಜೆಗಳಿಗೆ ಸೂಚನೆ

ಅಮೆರಿಕದ ದಾಳಿ ಬೆದರಿಕೆ ಹಾಗೂ ಮತ್ತೆ ಪ್ರತಿಭಟನೆಗಳು ಭುಗಿಲೆದ್ದಿರುವ ಕಾರಣ, ಇರಾನ್‌ನಲ್ಲಿರುವ ಎಲ್ಲಾ ಭಾರತೀಯರು ವಾಣಿಜ್ಯ ವಿಮಾನಗಳು ಸೇರಿದಂತೆ ಲಭ್ಯವಿರುವ ಸಾರಿಗೆ ವ್ಯವಸ್ಥೆಯ ಮೂಲಕ ತಕ್ಷಣ ದೇಶ ತೊರೆಯುವಂತೆ ತೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ...

ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ಎಫ್‌ಐಆರ್

ಕೇಂದ್ರ ಅಪರಾಧ ಶಾಖೆ (ಸಿಸಿಬಿ) ವಶಕ್ಕೆ ಪಡೆದು ವಿಚಾರಣೆ ನಡೆಸಿದ ಕೆಲವು ದಿನಗಳ ನಂತರ, ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.  ಪವಿತ್ರಾ ಬಿ.ಎನ್ ಸಲ್ಲಿಸಿದ ದೂರಿನ ಆಧಾರದ ಮೇಲೆ...