Homeಮುಖಪುಟ"ಯೆಸ್ ಬ್ಯಾಂಕ್ ಪುನಶ್ಚೇತನಕ್ಕೆ ಕೇಂದ್ರ ತೆಗೆದುಕೊಂಡಿರುವ ಕ್ರಮಗಳು ಭವಿಷ್ಯದಲ್ಲಿ ಜನರಲ್ಲಿ ಅಪನಂಬಿಕೆಯನ್ನು ಹುಟ್ಟಿಸುತ್ತವೆ"

“ಯೆಸ್ ಬ್ಯಾಂಕ್ ಪುನಶ್ಚೇತನಕ್ಕೆ ಕೇಂದ್ರ ತೆಗೆದುಕೊಂಡಿರುವ ಕ್ರಮಗಳು ಭವಿಷ್ಯದಲ್ಲಿ ಜನರಲ್ಲಿ ಅಪನಂಬಿಕೆಯನ್ನು ಹುಟ್ಟಿಸುತ್ತವೆ”

- Advertisement -
- Advertisement -

ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ನಾಲ್ಕೈದು ದಿನಗಳಲ್ಲಿ ಹೆಚ್ಚು ಹರಿದಾಡಿದ ಜೋಕು “ಲಾಭ ಖಾಸಗೀಕರಣಗೊಂಡಿದೆ ಮತ್ತು ನಷ್ಟ ರಾಷ್ಟ್ರೀಕರಣಗೊಂಡಿದೆ” ಎಂದು. ಭಾರತ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸಮಯದಲ್ಲಿ ಯೆಸ್ ಬ್ಯಾಂಕ್ ಬಿಕ್ಕಟ್ಟು ಬಹಿರಂಗಗೊಂಡು, ಆರ್.ಬಿ.ಐ ತೆಗೆದುಕೊಂದಿರುವ ಕ್ರಮಗಳ ಹಿನ್ನೆಲೆಯಲ್ಲಿ ಮತ್ತು ಈಗ ಗ್ರಾಹಕರ ಹಿತದೃಷ್ಟಿಯಿಂದ, ಈ ಖಾಸಗಿ ಬ್ಯಾಂಕ್ ರಕ್ಷಣೆಗಾಗಿ ರಾಷ್ಟ್ರೀಕೃತ ಬ್ಯಾಂಕ್ ಎಸ್ ಬಿ ಐಗೆ ಆರ್.ಬಿ.ಐ/ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಯೆಸ್ ಬ್ಯಾಂಕಿನ 49% ಶೇರುಗಳನ್ನು ಖರೀದಿಸಿ, ಅಲ್ಲಿನ ಗ್ರಾಹಕರ ಆತ್ಮವಿಶ್ವಾಸವನ್ನು ಮರುಕಳಿಸಲು ಎಸ್.ಬಿ.ಐ ಮುಂದಾಗಿದೆ. ಇಂತಹ ಪರಿಸ್ಥಿತಿಗೆ ಬಂದದ್ದು ಹೇಗೆ? ಇಂತಹ ಪರಿಹಾರಗಳು ಶಾಶ್ವತವೇ? ಈ ಬಿಕ್ಕಟ್ಟಿನ ಮತ್ತು ಮುಂದೆ ಸೃಷ್ಟಿಯಾಗಬಹುದಾದ ಬಿಕ್ಕಟ್ಟುಗಳಿಂದ ದೇಶದ ಮೇಲೆ ಉಂಟಾಗುವ ಆರ್ಥಿಕ ಪರಿಣಾಮಗಳು ಎಂತಹುವು ಎಂಬುದರ ಬಗ್ಗೆ ಅಜೀಮ್ ಪ್ರೇಮ್‍ಜೀ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಮಿತ್ ಬಾಸೊಲೆ ನ್ಯಾಯಪಥದೊಂದಿಗೆ ಚರ್ಚಿಸಿದ್ದಾರೆ.

ಪ್ರ: ಕಳೆದ ಐದಾರು ವರ್ಷಗಳಿಂದ ಬ್ಯಾಂಕಿಂಗ್ ಕ್ಷೇತ್ರದ ಬಿಕ್ಕಟ್ಟುಗಳು ಸಾರ್ವಜನಿಕವಾಗಿ ಬಹಿರಂಗವಾಗುತ್ತಿವೆ. ಈಗ ಯೆಸ್ ಬ್ಯಾಂಕ್ ಬಿಕ್ಕಟ್ಟು ಬೃಹತ್ತಾಗಿ ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಇದರ ಹಿನ್ನೆಲೆ ಮತ್ತು ಸ್ವರೂಪ ಏನು?

ನವ ಉದಾರೀಕರಣ ನೀತಿಗಳು ಭಾರತಕ್ಕೆ ಕಾಲಿಡುವ ಮುಂಚೆ ಭಾರತದಲ್ಲಿ ಬ್ಯಾಂಕುಗಳು ಹಲವು ನಿಯಂತ್ರಣಗಳಿಗೆ ಒಳಪಟ್ಟಿದ್ದವು. ನಂತರ ನಮ್ಮಲ್ಲಾಗಲೀ ಮತ್ತು ಅತಿ ದೊಡ್ಡ ಮಟ್ಟದಲ್ಲಿ ಅಮೆರಿಕಾದಲ್ಲಾಗಲೀ, ಬ್ಯಾಂಕುಗಳ ಮೇಲಿನ ನಿಯಂತ್ರಣವನ್ನು ಭಾರಿಯಾಗಿ ಸಡಿಲಿಸಲಾಯಿತು. ಖಾಸಗಿ ಬ್ಯಾಂಕುಗಳಿಗೆ ಅವಕಾಶ ಕೊಟ್ಟ ಮೇಲೆ ಅವರು ಲಾಭ, ಸಣ್ಣ ಅವಧಿಯ ಗಳಿಕೆ ಬಿಟ್ಟರೆ ದೂರದೃಷ್ಟಿಯ ಚಿಂತನೆ ಅಥವಾ ಜನಕಲ್ಯಾಣ ಯೋಜನೆಗಳ ಬಗ್ಗೆ ಅವರು ಚಿಂತಿಸುವುದಿಲ್ಲ. ಆದುದರಿಂದಲೇ ಬ್ಯಾಂಕಿಂಗ್ ಕ್ಷೇತ್ರವನ್ನು ಪ್ರತ್ಯೇಕವಾಗಿ ಇಟ್ಟಿದ್ದು. ಈ ಕ್ಷೇತ್ರದಲ್ಲಿ ಸಮಸ್ಯೆಯಾದರೆ ಸಮಾಜದ ಉಳಿದ ಎಲ್ಲಾ ವಲಯಗಳ ಮೇಲೆ ಅದು ಪರಿಣಾಮ ಬೀರುತ್ತೆ.

ಮೊದಲ ದಶಕದಲ್ಲಿ ಭಾರತದಲ್ಲಿ ಅಭಿವೃದ್ಧಿ ಮುಂಚೂಣಿಯಲ್ಲಿತ್ತು. ಎನ್‍ಡಿಎ-1 ಆಳ್ವಿಕೆಯ ಕೊನೆಯ ಭಾಗ, ಯುಪಿಎ-1 ಮತ್ತು ಯುಪಿಎ-2ರ ಸಮಯದಲ್ಲಿ ವೇಗವಾದ ಆರ್ಥಿಕ ಬೆಳವಣಿಗೆ ಕಂಡೆವು. ಮೂಲಸೌಕರ್ಯ ಮತ್ತು ನಿರ್ಮಾಣ ಉದ್ಯಮ ವಲಯಕ್ಕೆ ಸಾಕಷ್ಟು ಹಣ ಹರಿದುಬಂತು. ಈ ವಲಯಗಳು ಆರ್ಥಿಕತೆಗೆ ಸಾಕಷ್ಟು ಇಂಬು ಕೊಡುತ್ತಾ ಬಂದವು. ಇದೇ ಸಮಯದಲ್ಲಿ ಇದರ ಭಾಗವಾಗಿ ಹೊಸ ಮೂಲಸೌಕರ್ಯ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಲು ಹಲವು ಸಾಲಗಳನ್ನು ಬ್ಯಾಂಕುಗಳಿಂದ ತೆಗೆದುಕೊಳ್ಳಲಾಯಿತು. ಈ ಸಾಲ ತೆಗೆದುಕೊಳ್ಳುತ್ತಿರುವವರ ವಿಶ್ವಾಸಾರ್ಹತೆಯ ಬಗ್ಗೆ ಹೆಚ್ಚು ಯೋಚಿಸದೆ, ಇಂತಹ ರಿಸ್ಕ್ ತೆಗೆದುಕೊಳ್ಲುವುದು ಸೂಕ್ತವೇ ಪತ್ತೆ ಹಚ್ಚದೆ, ಲಾಭದ ಮೇಲಷ್ಟೇ ಕಣ್ಣಿಟ್ಟು ಬ್ಯಾಂಕುಗಳು ಯಥೇಚ್ಛವಾಗಿ ಸಾಲ ಕೊಡುತ್ತಾ ಬಂದರು. ಇಂತಹುದಕ್ಕೆ ಒಳ್ಳೆಯ ಉದಾಹರಣೆ ಯೆಸ್ ಬ್ಯಾಂಕ್. ಅವರು ಬಂದಿದ್ದು ಸುಮಾರು 2000ನೇ ಇಸವಿಯಲ್ಲಿ ಮತ್ತು ಇಂತಹ ಹಲವು ಮೂಲಸೌಕರ್ಯ ಮತ್ತು ನಿರ್ಮಾಣ ಉದ್ಯಮ ಸಂಸ್ಥೆಗಳಿಗೆ ಸಾಲ ಕೊಡುತ್ತಾ ಹೋದರು. ಈ ಬ್ಯಾಂಕಿನ ಸಾಲದ ಪಟ್ಟಿ ಸಿಕ್ಕಾಪಟ್ಟೆ ಹೆಚ್ಚಾಯಿತು. ಸಾಮಾನ್ಯವಾಗಿ ಅಪಾಯಕಾರಿ ಸಾಲ ಎಂದು ಪರಿಗಣಿಸುವುದನ್ನು ಇಂತಹ ಬ್ಯಾಂಕುಗಳು ಯಾವುದೇ ಮುಂದಾಲೋಚನೆ ಇಲ್ಲದೆ ಕೊಡುತ್ತಾ ಬಂದವು. ಆರ್ಥಿಕತೆ ಬೆಳೀತಾ ಇದೆ ಎಂಬ ಒಂದೇ ನೋಟದಿಂದ, ಮುಂದೆ ಬರಬಹುದಾದ ಸಂಕಷ್ಟಗಳನ್ನು ಊಹಿಸದೆ ಇದ್ದುದು ಇದಕ್ಕೆ ದೊಡ್ಡ ಕಾರಣ. ಪಂಜಾಬ್ ಮಹಾರಾಷ್ಟ್ರ ಕೋಆಪರೇಟಿವ್ ಬ್ಯಾಂಕ್ (ಪಿಎಂಸಿ) ಪ್ರಕರಣದಲ್ಲಿಯೂ ಹಲವು ಮಾರಕ ಹಿತಾಸಕ್ತಿಯುಳ್ಳ ಜನ ಕೆಲಸ ಮಾಡಿದ್ದನ್ನು ನಾವು ನೋಡಿದ್ದೇವೆ. ದೊಡ್ಡ ಸಾಲಗಾರರು ಇದ್ದರು. ಆ ಸಾಲಗಾರರು ಮರುಪಾವತಿಗೆ ಅರ್ಹರಲ್ಲ ಎಂದು ಬ್ಯಾಂಕ್ ಅಧಿಕಾರಿಗಳಿಗೆ ಗೊತ್ತಿದ್ದರೂ ಅವರಿಗೆ ಸಾಲಗಳನ್ನು ಕೊಡುತ್ತಾ ಬಂದರು. ಇದರ ಪರಿಣಾಮ ಆವರು ಎದುರಿಸಬೇಕಿಲ್ಲ ಎಂದು ಅವರಿಗೆ ತಿಳಿದಿತ್ತು. ಅನಿಯಂತ್ರಿಯ ಬ್ಯಾಂಕಿಂಗ್ ಅಂದರೆ ಇದೇ.

ಪ್ರ: ಈಗ ಯೆಸ್ ಬ್ಯಾಂಕ್ ರಕ್ಷಣೆಗಾಗಿ ಕೇಂದ್ರ ತೆಗೆದುಕೊಂಡಿರುವ ಕ್ರಮಗಳು ದೇಶದ ಆರ್ಥಿಕ ವ್ಯವಸ್ಥೆಯ ದೃಷ್ಟಿಯಿಂದ ಪರಿಪಕ್ವವಾದವೇ?

ಈಗ ಸದ್ಯಕ್ಕೆ ಇವು ಸಹಾಯ ಮಾಡುವಂತಹುವೇ. ಆದರೆ ದೂರದೃಷ್ಟಿಯಲ್ಲಿ ಇದು ಒಳ್ಳೆಯದಲ್ಲ. ಇದು ಜನರಲ್ಲಿ ಅಪನಂಬಿಕೆಯನ್ನು ಹುಟ್ಟಿಸುತ್ತದೆ. ಡಿಮಾನೆಟೈಸೇಶನ್ ಸಮಯದಲ್ಲಿ ಆದದ್ದೇ ಇದು. ಇಂತಹ ಕ್ರಮಗಳು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಜನರಿಗೆ ಇರುವ ನಂಬಿಕೆಗೆ ಬೆದರಿಕೆ ಒಡ್ಡುತ್ತವೆ. ನನ್ನ ದುಡ್ಡು ನಾನು ಹಿಂಪಡೆಯಲು ಇಷ್ಟು ಕಷ್ಟ ಪಡಬೇಕೆಂದರೆ ಮುಂದಿನ ಕತೆ ಏನು, ಮುಂದೆ ಯಾವ ಬ್ಯಾಂಕು ವಿಫಲ ಆಗಬಹುದು ಎಂತಹ ಸಂಗತಿಗಳು ಜನರನ್ನು ಆತಂಕಕ್ಕೀಡುಮಾಡುತ್ತವೆ. ಇದರ ಪರಿಣಾಮಗಳು ದೂರದ ಆರ್ಥಿಕ ವ್ಯವಸ್ಥೆಗೆ ಋಣಾತ್ಮಕವಾದರು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಬೇಕಿತ್ತೇನೋ. ಆದರೆ ಇಷ್ಟು ದಿನಗಳು ಇದರ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳದೆ ಏಕಾಏಕಿ ಇಂತಹ ಕ್ರಮಗಳಿಗೆ ಮುಂದಾಗಿರುವುದು ಆಶ್ಚರ್ಯ ತರಿಸಿದೆ.

ಪ್ರ: ಪ್ರಸಕ್ತ ಕೇಂದ್ರ ಸರ್ಕಾರದ ನೀತಿಗಳು ಇಂತಹ ಬಿಕ್ಕಟ್ಟುಗಳಿಗೆ ಇನ್ನಷ್ಟು ಅವಕಾಶ ನೀಡುತ್ತಿವೆಯೇ?

ಈ ಸಮಸ್ಯೆಗಳಿಗೆ ಹೆಚ್ಚು ಕಾರಣ ಅಭಿವೃದ್ಧಿ ವೇಗವಾಗಿದ್ದ 2014ರಕ್ಕಿಂತ ಹಿಂದಿನ ವರ್ಷಗಳೇ. 2014ರ ನಂತರ ಆರ್ಥಿಕತೆ ಮತ್ತು ಅಭಿವೃದ್ಧಿ ಕುಂಠಿತವಾಗಿದೆ. ಬ್ಯಾಂಕಿಂಗ್ ದೃಷ್ಟಿಯಿಂದ ಈ ಸರ್ಕಾರ ಬಿಕ್ಕಟ್ಟಿನ ಸಮಯದಲ್ಲಿ ಏನು ಮಾಡಬಹುದೋ ಅದನ್ನು ಮಾಡುತ್ತಿದೆ (ಆರ್‍ಬಿಐ ಬ್ಯಾಂಕುಗಳಿಗೆ ತನ್ನ ಆಸ್ತಿಯನ್ನು ಘೋಷಿಸುವಂತೆ ಮಾಡಿದ್ದು ಆಗಲಿ, ಇಂತಹ ಕ್ರಮಗಳು). ಆದರೆ ಈ ಸರ್ಕಾರದ ಇತರ ಆರ್ಥಿಕ ನೀತಿಗಳು ಪರಿಸ್ಥಿತಿಯನ್ನು ಬಿಗಡಾಯಿಸಿವೆ. ಸಾಮಾನ್ಯವಾಗಿ ಇಂತಹ ಬಿಕ್ಕಟ್ಟುಗಳು ಯಾರ ಸರ್ಕಾರದ ಸಮಯದಲ್ಲಿ ಬಹಿರಂಗವಾಗುತ್ತದೋ ಅಂತಹ ಸರ್ಕಾರಗಳು ಕೆಂಗಣ್ಣಿಗೆ ಗುರಿಯಾಗುತ್ತವೆ. ಈ ನಿಟ್ಟಿನಲ್ಲಿ ಈ ನಿರ್ದಿಷ್ಟ ಬಿಕ್ಕಟ್ಟಿಗೆ ಈ ಸರ್ಕಾರ ಹೊಣೆಯಲ್ಲದೆ ಹೋದರೂ, ಉಳಿದ ಗಂಭೀರ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಈ ಸರ್ಕಾರ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿಲ್ಲ. ಡಿಮಾನೆಟೈಸೇಶನ್ ಅತಿ ಕೆಟ್ಟ ನಿರ್ಧಾರ ಆಗಿತ್ತು. ಇದು ಆರ್ಥಿಕತೆಯ ಮೇಲೆ ದುಷ್ಪರಿಣಾಮ ಉಂಟುಮಾಡಿದ್ದಲ್ಲದೆ, ಆಗಲೇ ಹೇಳಿದಂತೆ ಜನರ ನಂಬಿಕೆಯ ದೃಷ್ಟಿಯಿಂದ ಕೂಡ ವಿಫಲ ನಡೆ. ಆಮೇಲೆ ಜಿಎಸ್‍ಟಿಯನ್ನು ಅವರು ಕಾರ್ಯರೂಪಗೊಳಿಸಿದ ರೀತಿ ಕೂಡ ದೊಡ್ಡ ಹೊಡೆತ ಕೊಟ್ಟಿತು. ಮಾಹಿತಿ, ಅಂಕಿ-ಅಂಶ, ಪಾರದರ್ಶಕತೆ ನಿಟ್ಟಿನಲ್ಲೂ ಅವರು ಪ್ರಾಮಾಣಿಕತೆಯಿಂದ ನಡೆದುಕೊಳ್ಳುತ್ತಿಲ್ಲ. ಇವೆಲ್ಲಾ ಅಪನಂಬಿಕೆಯ ವಾತಾವರಣಕ್ಕೆ ಕೊಡುಗೆ ನೀಡಿವೆ. ಆಮೇಲೆ ಕೋಮು ಉದ್ವಿಗ್ನತೆಯ ಸಂಗತಿಗಳು ಕೂಡ ಇದಕ್ಕೆ ಸಂಬಂಧಿಸಿರುವುದೇ. ಇದೆಲ್ಲಾ ಸಾಮಾಜಿಕ ನಂಬಿಕೆಗೆ ಧಕ್ಕೆ ತರುತ್ತವೆ. ಸಂಸ್ಥೆಗಳ ಮೇಲೆ ಹಲವು ಸ್ತರದ ನಂಬಿಕೆಗಳಿಗೆ ಸವಾಲು ಒಡ್ಡುವುದರಲ್ಲಿ ಈ ಸರ್ಕಾರದ ಪಾತ್ರ ದೊಡ್ಡದಿದೆ. ಪ್ರಸಕ್ತ ಸರ್ಕಾರದ ಅಡಿ ಆರ್‍ಬಿಐ ತನ್ನ ಸ್ವಾಯತ್ತತೆಯಲ್ಲಿ ರಾಜಿ ಮಾಡಿಕೊಂಡಿರುವುದು ಮತ್ತೊಂದು ಕಾರಣ. ಆರ್‍ಬಿಐ ಗವರ್ನರ್ ಊರ್ಜಿತ್ ಪಟೇಲ್, ಉಪ ಗವರ್ನರ್ ವಿರಳ್ ಆಚಾರ್ಯ ರಾಜೀನಾಮೆ ನೀಡಿದ್ದು, ಸರ್ಕಾರ ಆರ್‍ಬಿಐನ ಮೀಸಲು ನಿಧಿಯ ವರ್ಗಾವಣೆಗೆ ಪಟ್ಟು ಹಿಡಿದಿದ್ದು ಇತ್ಯಾದಿ. ಇವೆಲ್ಲಾ ಘಟಿಸುವುದಿಲ್ಲ ಎಂದಲ್ಲ, ಆದರೆ ಆರ್‍ಬಿಐ ಮೇಲೆ ಒತ್ತಡ ತರುವುದು ಸರಿ ಅಲ್ಲ.

ಪ್ರ: ಈಗ ಒಂದು ರಾಷ್ಟ್ರೀಕೃತ ಬ್ಯಾಂಕು ಖಾಸಗಿ ಬ್ಯಾಂಕಿನ ರಕ್ಷಣೆಗೆ ನಿಂತಿರುವ ಸಮಯದಲ್ಲಿ, ಸಾಮಾನ್ಯ ವ್ಯಕ್ತಿಗೆ ಇದು ಹೇಗೆ ಪರಿಣಾಮ ಬೀರುತ್ತದೆ?

ಮೊದಲಿಗೆ ಎನ್‍ಪಿಎಗಳ ಸಮಸ್ಯೆ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಸಹ ಇದೆ. ಇಂತಹ ಸಮಯದಲ್ಲಿ ಖಾಸಗಿ ಬ್ಯಾಂಕುಗಳ ಎನ್‍ಪಿಎ ಸಮಸ್ಯೆಯನ್ನು ಸರಿಪಡಿಸಲು ರಾಷ್ಟ್ರೀಕೃತ ಬ್ಯಾಂಕುಗಳ ಮೊರೆ ಹೋದರೆ ಹೆಚ್ಚಿನ ಉಪಯೋಗವನ್ನು ನಿರೀಕ್ಷಿಸಲು ಸಾಧ್ಯ ಇಲ್ಲ. ಈಗ ಯಾರೋ ಖಾಸಗಿ ಸಂಸ್ಥೆ ಹಿಂದಿರುಗಸದೆ ಇದ್ದ ಸಾಲದ ಪರಿಣಾಮವಾಗಿ ತಲೆದೋರುವ ಬಿಕ್ಕಟ್ಟನ್ನು ಸರಿಪಡಿಸಲು ಎಸ್‍ಬಿಐ ಬ್ಯಾಂಕ್ ಮುಂದೆ ಬಂದಾಗ, ಆ ಕೊರತೆ ಹಣವನ್ನು ಸರಿದೂಗಿಸಲು ಸಂಪನ್ಮೂಲಗಳನ್ನು ಎಸ್‍ಬಿಐ ಯಾವುದೋ ಒಂದು ಮೂಲದಿಂದ ಕ್ರೋಢೀಕರಿಸಬೇಕು. ಅದು ಎಸ್‍ಬಿಐನಲ್ಲಿರುವ ಠೇವಣಿ ಆಗಿರಬಹುದು. ಅಥವಾ ಆರ್‍ಬಿಐ ಹೊಂದಿರುವ ಮೀಸಲು ಹಣ ಆಗಿರಬಹುದು. ದೇಶದ ಹಣಕಾಸು ಸರಬರಾಜಿನ ಮೇಲೆ ಆರ್‍ಬಿಐ ನಿಯಂತ್ರಣ ಇದ್ದೇ ಇದೆ. ಆದರೆ ಇದರ ಪರಿಣಾಮ ಏನೆಂದರೆ, ಆರ್ಥಿಕವ್ಯವಸ್ಥೆಯಲ್ಲಿ ನಿಜವಾದ ಅಭಿವೃದ್ಧಿ ಇಲ್ಲದೆ ಹೋದಾಗ, ಅಂತಹ ಹೂಡಿಕೆಗಳನ್ನು ತರುವುದು ಕಷ್ಟ ಮತ್ತು ಅಪಾಯಕಾರಿ.

ಇದು ಸಾಮಾನ್ಯ ಜನರ ಮೇಲೆ ಬೀರುವ ಪರಿಣಾಮ ಏನೆಂದರೆ, ಕ್ರೆಡಿಟ್ ಪ್ರೀಜಿಂಗ್ ಅಥವಾ ಬ್ಯಾಂಕುಗಳಿಂದ ನೈಜ್ಯ ವ್ಯವಹಾರಗಳಿಗೆ ಸಾಲ ಹುಟ್ಟದೆ ಇರುವುದು. ಕೆಟ್ಟ ಸಾಲಗಾರರ ಹೊಣೆ ಒಳ್ಳೆ ಇತಿಹಾಸ ಇರುವವರು ಹೊರುವ ಪರಿಸ್ಥಿತಿ ಉಂಟಾಗುತ್ತದೆ. ಇಂತಹ ಸಮಯದಲ್ಲಿ ಸಾಲಗಳು ಸಿಗುವುದು ಕಷ್ಟ ಆಗುತ್ತದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮೆಲೆ ಭಾರಿ ಹೊಡೆತ ಬೀಳುತ್ತದೆ. ಅವರಿಗೆ ಬೇರೆ ವಲಯಗಳಿಂದ ಹೂಡಿಕೆಗಳು ಇರುವುದಿಲ್ಲ. ಈ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಲವು ಉದ್ಯೋಗಗಳನ್ನು ಸೃಷ್ಟಿಸಿವೆ. ಇವುಗಳಿಗೆ ಬ್ಯಾಂಕ್ ಹಣ ಕೊಡುವುದನ್ನು ನಿಲ್ಲಿಸಿದರೆ, ಅವರ ವಿಸ್ತರಣೆ, ಉತ್ಪಾದನೆ ಎಲ್ಲವೂ ಕಡಿಮೆಯಾಗುತ್ತದೆ.

ಇನ್ನು ಅಸಂಘಟಿತ ಆರ್ಥಿಕ ವಲಯಕ್ಕೆ ಬಂದರೆ ಇದು ಟ್ರಿಕಲ್ ಡೌನ್ (ಮೇಲಿಂದ ಎಲ್ಲರಿಗೂ ಬೀರುವ) ಪರಿಣಾಮ. ಅವರು ಬ್ಯಾಂಕಿಂಗ್‍ಗೆ ಕ್ಷೇತ್ರದ ಜೊತೆಗೆ ಸಂಬಂಧ ಇಟ್ಟುಕೊಳ್ಳದೆ ಇದ್ದರೂ, ಅವರ ವ್ಯವಹಾರಗಳು ಉಳಿದ ಆರ್ಥಿಕತೆ ಜೊತೆಗೆ ಬೆಸೆದುಕೊಂಡಿದೆ. ಈ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಆಗಲಿ, ಜನರ ಕೊಳ್ಳುವ ಶಕ್ತಿ ಆಗಲೀ, ಇವುಗಳ ಮೇಲೆ ಅವಲಂಬಿತವಾಗಿದೆ. ಜನ ಖರ್ಚು ಮಾಡುವುದನ್ನ ನಿಲ್ಲಿಸಿದರೆ, ಇದರ ಭಾರ ಈ ಅಸಂಘಟಿತ ಆರ್ಥಿಕ ವ್ಯವಸ್ಥೆಯ ಮೇಲೆ ಬೀಳುತ್ತದೆ. ಗ್ರಾಹಕ ಬೇಡಿಕೆ ಕಡಿಮೆಯಾದಾಗ ಇಂತಹ ವಲಯದ ವ್ಯವಹಾರಕ್ಕೆ ಭಾರಿ ಹೊಡೆತ ಬೀಳುತ್ತದೆ.

ಪ್ರ: ಅಭಿವೃದ್ಧಿ ಎಂಬ ಸಂಗತಿಯನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬೇಕು. ಸರ್ಕಾರಗಳು ಜನರ ಮುಂದೆ ಇಡುವ ಅಭಿವುದ್ಧಿ ಅಂಕಿ-ಅಂಶಗಳು ಎಷ್ಟು ನಂಬಲರ್ಹ?

ಸರ್ಕಾರಗಳು ಹೇಳುತ್ತಿದ್ದ ಅಭಿವೃದ್ಧಿ ಎಲ್ಲಾ ವಲಯಗಳಿಂದ ಸಾಧ್ಯವಾದದ್ದಲ್ಲ. ಇದು ಹೆಚ್ಚು ದಾಖಲಾಗುತ್ತಿದ್ದುದು ವಿತ್ತೀಯ, ವಿಮೆ, ಐ ಟಿ ಸೇವೆಗಳು ಮತ್ತು ಮೂಲಸೌಕರ್ಯದ ವಲಯಗಳಿಂದ. ಆದರೆ ಅತಿ ಹೆಚ್ಚು ಜನಕ್ಕೆ ಉದ್ಯೋಗ ನೀಡುವ ಕೃಷಿ ಮತ್ತು ಕೆಳಸ್ತರದ ಸೇವೆಗಳ ವಲಯ ಹಾಗೂ ಅಸಂಘಟಿತ ವಲಯಗಳಲ್ಲಿ ಅಭಿವೃದ್ಧಿ ಇತ್ತೇ ಎಂದರೆ ಇಲ್ಲ. ಆದುದರಿಂದ ಸರ್ಕಾರಗಳು ತೋರಿಸುತ್ತಿದ್ದ ಅಭಿವೃದ್ಧಿಯಿಂದ ಬಂದ ಲಾಭ ಕೇವಲ ಮೇಲಿನ 15% ಕಾಪೆರ್Çರೆಟ್ ವಲಯದ ಜನಕ್ಕೆ ಮಾತ್ರ ಸೀಮಿತವಾಗಿತ್ತು. ಈ ಶತಮಾನದ ಮೊದಲ 20 ವರ್ಷಗಳ ಅಭಿವೃದ್ಧಿ ಸಮಾಜದ ಎಲ್ಲಾ ವಲಯಕ್ಕೂ ಹರಡಲಿಲ್ಲ. ಇದರ ಮೇಲೆ ಡಿಮಾನೆಟೈಸೇಶನ್ ನಂತಹ ಕೆಟ್ಟ ನಡೆಗಳು ಹೆಚ್ಚು ಅಪಾಯವನ್ನು ತಂದು ಒಡ್ಡಿದವು.

ಇಂತಹ ಸಮಯದಲ್ಲಿ ಸರ್ಕಾರ ಏನು ಮಾಡಬೇಕು ಎಂಬ ಪ್ರಶ್ನೆ ತಲೆದೋರುತ್ತದೆ. ಏಕೆಂದರೆ ಖಾಸಗಿ ವಲಯ ಇಂತಹ ಸಮಸ್ಯೆಗಳ ಪರಿಹಾರಕ್ಕೆ ಏನೂ ಮಾಡುತ್ತಿಲ್ಲ. ಅಭಿವೃದ್ಧಿ ಎಲ್ಲಾ ವಲಯಗಳಿಗೂ ಹಬ್ಬುವಂತೆ ಸರ್ಕಾರ ಪರಿಹಾರ ಕಂಡುಕೊಳ್ಳಬೇಕು. ಇಂತಹ ಸಮಯದಲ್ಲಿ ಸರ್ಕಾರ ನರೇಗಾದಂತಹ ಯೋಜನೆಯಲ್ಲಿ ಹೆಚ್ಚು ಹೂಡಿಗೆ ಮಾಡಬೇಕು. ಇದನ್ನು ಹಳ್ಳಿಗಳ ಜೊತೆಗೆ, ಸಣ್ಣ ಪಟ್ಟಣಗಳಿಗೂ ವಿಸ್ತರಿಸಬೇಕು. ಸಣ್ಣ ಪಟ್ಟಣಗಳಲ್ಲಿ ಕೆಲವು ವ್ಯಾವಹಾರಿಕ ವರ್ಗಗಳನ್ನು ಬಿಟ್ಟರೆ ಉಳಿದ ಜನರ ಪರಿಸ್ಥಿತಿ ಆಶಾದಾಯಕವಾಗಿಲ್ಲ. ಆದುದರಿಂದ ಇಂತಹ ಪಟ್ಟಣಗಳಲ್ಲಿ ಅಸಂಘಟಿತ ವಲಯಗಳಿಗೆ ಹೂಡಿಕೆ ಬರುವಂತೆ ನೋಡಿಕೊಂಡರೆ ಆರ್ಥಿಕ ಸ್ಥಿತಿ ಬಹಳಷ್ಟು ಸುಧಾರಿಸುವ ಸೂಚನೆ ಇದೆ. ಇದಕ್ಕೆ 2-3 ಲಕ್ಷ ಕೋಟಿ ಹೆಚ್ಚಿನ ಹೂಡಿಕೆ ಬೇಕಾಗಬಹುದು. ಇದು ಸುಮಾರು ನಮ್ಮ ಜಿಡಿಪಿಯ 1%. ಆದುದರಿಂದ ವಿತ್ತೀಯ ಕೊರತೆ ಗುರಿಯಲ್ಲಿ 1% ಬದಲಾವಣೆ ಆಗಬಹುದು. ಅದು ಅಂತಹ ಹೊರೆಯಾಗುವುದಿಲ್ಲ. ಹೆಚ್ಚು ಉದ್ಯೋಗ ಸೃಷ್ಟಿಯಾದರೆ ಹೆಚ್ಚಿನ ಆಸ್ತಿ ಸೃಷ್ಟಿಗೆ ಇಂಬು ನೀಡುತ್ತದೆ. ಇಂತಹ ಸರ್ವಾಂಗೀಣ ಅಭಿವೃದ್ಧಿ ಯೋಜನೆಗಳ ಬಗ್ಗೆ ಸರ್ಕಾರ ಯೋಚಿಸಬೇಕು.

ಬೇಡಿಕೆ ವೃದ್ಧಿಯಾದರೆ ಬ್ಯಾಂಕಿಂಗ್ ಬಿಕ್ಕಟ್ಟು ಬಗೆಹರಿಯುತ್ತದೆ ಎಂದಲ್ಲ. ಅದಕ್ಕೆ ಪ್ರತ್ಯೇಕವಾದ ನಿಯಂತ್ರಣಗಳ ಅಗತ್ಯ ಇದೆ. ಆದರೆ ಒಟ್ಟಾರೆಯಾಗಿ ಆರ್ಥಿಕತೆಯ ವೃದ್ಧಿ ಬ್ಯಾಂಕಿಂಗ್ ವಲಯಕ್ಕೆ ಸ್ವಲ್ಪ ಪುಷ್ಟಿ ನೀಡಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...