ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ದ.ಕ. ಸಂಸದರೂ ಆಗಿರುವ ನಳಿನ್ ಕುಮಾರ್ ಕಟೀಲ್ ಕೋರ್ಟಿಗೆ ಹಾಜರಾಗಿ 25 ಸಾವಿರ ರುಪಾಯಿ ಶೂರಿಟಿ ಕಟ್ಟಿ ಜಾಮಿನು ಪಡೆದುಕೊಂಡಿದ್ದಾರೆ.
ಲೋಕಸಭಾ ಚುನಾವಣೆಯ ಸಂಧರ್ಭದಲ್ಲಿ ಸಂಸದ ರಿಜ್ವಾನ್ ಅರ್ಷದ್ ಬಗ್ಗೆ ಅವಹೇಳನಕಾರಿ ಟ್ವೀಟನ್ನು “ಕರ್ನಾಟಕ ಬಿಜೆಪಿ” ಟ್ವಿಟ್ಟರ್ ಹ್ಯಾಂಡಲ್ ನಿಂದ ಟ್ವೀಟಿಸಲಾಗಿತ್ತು. ಇದನ್ನು ಪ್ರಶ್ನಿಸಿ ಕಾಂಗ್ರೆಸ್ ನ ರಿಜ್ವಾನ್ ಅರ್ಷದ್ ಕೋರ್ಟ್ ಮೆಟ್ಟಿಲೇರಿದ್ದರು. ಈ ಬಗ್ಗೆ ಸಮನ್ಸ್ ಹೊರಡಿಸಿದ ಕೋರ್ಟ್ ಸೋಮವಾರ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರನ್ನು ಕೋರ್ಟಿಗೆ ಹಾಜರಾಗುವಂತೆ ಆದೇಶಿಸಿತ್ತು. ಆದರೆ ಅಂದು ಕಟೀಲ್ ಹಾಜರಾಗಿರಲ್ಲಿಲ್ಲ. ಸಂಜೆಯೊಳಗಡೆ ಹಾಜರಾಗದೆ ಇದ್ದರೆ ವಾರೆಂಟ್ ಹೊರಡಿಸಲಾಗುವುದು ಎಂದು ಕೋರ್ಟ್ ಎಚ್ಚರಿಸಿತ್ತು. ಆದರೆ ಅವರು ದೆಹಲಿಯಲ್ಲಿ ಇರುವುದರಿಂದ ಕೋರ್ಟಿಗೆ ಅಂದೇ ಹಾಜರಾಗಲು ಸಾಧ್ಯವಿಲ್ಲ ಎಂಬುವುದನ್ನು ಮನವರಿಕೆ ಮಾಡಿಸಿದ ನಂತರ ಮಂಗಳವಾರ ಹಾಜರಾಗುವಂತೆ ಕೋರ್ಟ್ ಸೂಚಿಸಿತ್ತು.
ಮಂಗಳವಾರ ಕೋರ್ಟಿಗೆ ಹಾಜರಾದ ನಳಿನ್ ಕುಮಾರ್ ಕಟೀಲ್ 25 ಸಾವಿರ ಶೂರಿಟಿ ಕಟ್ಟಿ ಜಾಮಿನು ಪಡೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಲೀಗಲ್ ಸೆಲ್ಲಿನ ಕಾರ್ಯದರ್ಶಿ “ಸೂರ್ಯ ಮುಕುಂದರಾಜ್” ಹೇಳಿದ್ದಾರೆ.