Homeಚಳವಳಿಶ್ರದ್ಧಾಂಜಲಿ : ಕರ್ನಾಟಕದ ಮಕ್ಕಳಿಗೂ ಪ್ರೇರಣೆಯಾಗಿದ್ದ ಸಂತ ಸುಂದರಲಾಲ್ ಬಹುಗುಣ

ಶ್ರದ್ಧಾಂಜಲಿ : ಕರ್ನಾಟಕದ ಮಕ್ಕಳಿಗೂ ಪ್ರೇರಣೆಯಾಗಿದ್ದ ಸಂತ ಸುಂದರಲಾಲ್ ಬಹುಗುಣ

- Advertisement -
- Advertisement -

ಋಷಿಯಂತೆ ಬದುಕಿ, ಪರಿಸರ ಜಾಗೃತಿ ಮೂಡಿಸಿ, ಅದಕ್ಕಾಗಿ ಪಾದಯಾತ್ರೆ ನಡೆಸಿ ಹೋರಾಟ ಮಾಡಿ ಹಿಮಾಲಯದ ತಪ್ಪಲು ಹಸಿರಾಗಿರುವಂತೆ ನೋಡಿಕೊಂಡ ಸುಂದರಲಾಲ್ ಬಹುಗುಣ ಅವರನ್ನು ಮೇ 21ರಂದು ಕಳೆದುಕೊಂಡೆವು.

ಎಂಟನೆಯ ತರಗತಿಯ ಇಂಗ್ಲಿಷ್ ಪಠ್ಯದಲ್ಲಿ ’ಚಿಪ್ಕೊ ಚಳವಳಿ’ಯ ಬಗ್ಗೆ ಪಾಠವಿತ್ತು. ಆ ಪಾಠವನ್ನು ಓದಿದ ನನ್ನ ಹಲವಾರು ವಿದ್ಯಾರ್ಥಿಗಳು ಆಡುಕುರಿಗಳಿಗಾಗಿ ಮತ್ತು ಉರುವಲಿಗಾಗಿ ಗಿಡ ಕಡಿಯುವವರೊಂದಿಗೆ ಜಗಳಕ್ಕಿಳಿದು ಪೊಲೀಸ್ ಸ್ಟೇಷನ್ನಿಗೆ ಸುದ್ದಿ ಮುಟ್ಟಿಸಿ ಹಲವಾರು ಗಿಡಗಳ ರಕ್ಷಣೆ ಮಾಡಿದರು. ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೂಟಿಯ ದಿನಗಳಂದು ಶಿಕ್ಷಕರ ಮಾರ್ಗದರ್ಶನದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಸುತ್ತಿದ್ದರು. ಹೊಲ ಮನೆ ಇಲ್ಲದ ನೌಕರರ ಮಕ್ಕಳು ತಮ್ಮ ಸ್ನೇಹಿತರ ಹೊಲಗಳಲ್ಲಿ ಹಣ್ಣಿನ ಗಿಡ ನೆಟ್ಟರು. ಇಂತಹ ಎಲ್ಲ ಪರಿಸರ ರಕ್ಷಣಾ ಚಟುವಟಿಕೆಗೆ ಮೂಲಕಾರಣ ಸುಂದರಲಾಲ್ ಬಹುಗುಣರು. ಗಢವಾಲದ ಈ ಸಂತ ಕರ್ನಾಟಕದ ಮಕ್ಕಳನ್ನು ಈ ರೀತಿ ಗಿಡ ನೆಡಲು ಪ್ರೇರೆಪಿಸಿದ್ದರು.

ಕೆಲವರ್ಷಗಳ ಹಿಂದೆ ’ಪಶ್ಚಿಮ ಘಟ್ಟ ಉಳಿಸಿ’ ಅಭಿಯಾನದಲ್ಲಿ ಅವರು ಗೋವೆಗೆ ಬಂದಿದ್ದರು. ಅಲ್ಲಿ ಅವರಾಡಿದ ಮಾತುಗಳು ಇನ್ನೂ ನೆನಪಿನಲ್ಲಿ ಹಸಿರಾಗಿ ಉಳಿದಿವೆ.

’ನಾವು ಶಿವನ ಜಟೆಯಲ್ಲಿ ಗಂಗೆ ವಾಸಿಸಿದ್ದಾಳೆಂದು ನಂಬಿದ್ದೇವೆ. ಶಿವ ಹಿಮಾಲಯವಾಸಿ. ಅವನ ಜಟೆಯೆಂದರೆ ಹಿಮಾಲಯದ ತಪ್ಪಲಿನ ದಟ್ಟ ಅರಣ್ಯದಲ್ಲಿಯ ವೃಕ್ಷರಾಶಿ. ತಮ್ಮ ಬೇರುಗಳ ಮೂಲಕ ನೀರನ್ನು ಭೂಮಿಯ ಅಂತರಾಳಕ್ಕೆ ಇಳಿಸುತ್ತವೆ. ಹೀಗಾಗಿ ಅಂತರ್ಜಲ ಹೆಚ್ಚಾಗಿ ವರ್ಷವಿಡೀ ನಾವು ನೀರು ಪಡೆಯುತ್ತೇವೆ. ನಾವು ಅರಣ್ಯನಾಶದಿಂದ ಶಿವನ ಜಟೆಯನ್ನು ಕತ್ತರಿಸಿದರೆ ಗಂಗೆಯ ವಾಸಸ್ಥಾನವನ್ನು ಹಾಳುಮಾಡಿದಂತಾಗುತ್ತದೆ. ಅರಣ್ಯ ಉಳಿದರೆ ಗಂಗೆ, ಗಂಗೆ ಉಳಿದರೆ ನೀರು’ ಎಂದಿದ್ದರು.

ಹಲವು ದಶಕಗಳ ಹಿಂದೆಯೇ ಸುಂದರಲಾಲ್ ಬಹುಗುಣರು ಪ್ರವಾಹಗಳ ಪರಿಣಾಮವನ್ನು ಊಹಿಸಿದ್ದರು. ಹಿಮಾಲಯದ ದೇವಧಾರು ಮತ್ತು ಇತ್ಯಾದಿ ಮರಗಳ ನಾಶದಿಂದ ಭೂಮಿಯ ಮೇಲ್ಮೈ ಸಡಿಲಗೊಂಡು ಮಣ್ಣೆಲ್ಲ ಹಳ್ಳ ತೊರೆಗಳ ಮೂಲಕ ನದಿಯನ್ನು ಸೇರುತ್ತದೆ. ನದಿಯ ಆಳ ಕಡಿಮೆಯಾಗಿ ಅಗಲ ಹೆಚ್ಚಾಗುವುದು. ನದಿ ತನ್ನ ಒಡಲನ್ನು ಬಿಟ್ಟು ಸುತ್ತೆಲ್ಲ ಪಸರಿಸಿ ಹರಿಯುತ್ತದೆ. ಊರುಗಳು ಮತ್ತು ಹೊಲಗಳಲ್ಲೆಲ್ಲ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗುತ್ತದೆ. ಭೂಮಿಯ ಮೇಲ್ಮೈ ಮಣ್ಣು ನಾಶವಾಗಿ ಭೂಮಿ ಬರಡಾಗುತ್ತದೆ. ಜನರ ಆಹಾರ ಮೂಲವಾದ ಹೊಲಗಳನ್ನು ಕಳೆದುಕೊಳ್ಳುತ್ತಾರೆ. ಗಿಡ ಕಡಿಯುವುದನ್ನು ನಿಲ್ಲಿಸಿ ಪ್ರವಾಹಗಳನ್ನು ತಡೆಯಬೇಕೆಂದು ಆಗಲೇ ಹೇಳಿದ್ದರು. ಸರಕಾರಗಳು ಟಿಂಬರ್ ಮಾಫಿಯಾಗಳ ಪ್ರಭಾವಕ್ಕೆ ಮಣಿನು ಅವರ ಮಾತನ್ನು ನಿರ್ಲಕ್ಷಿಸಿದವು. ಪ್ರತಿಫಲ ಎಲ್ಲರೂ ಅನುಭವಿಸಬೇಕಾಯಿತು.

PC : Sakshi

ಅವರು ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ವಿರೋಧಿಸಿದರು. ನಮ್ಮ ಅರಣ್ಯಗಳೇ ನಮ್ಮ ಅಣೆಕಟ್ಟುಗಳು. ಅರಣ್ಯ ಉಳಿಸಿದರೆ ಅಲ್ಲಿಯ ಗಿಡಮರಗಳು ಅಂತರ್ಜಲ ಹೆಚ್ಚಿಸಿ ವರ್ಷವಿಡಿ ನೀರನ್ನು ಹಿಡಿದಿಡುತ್ತವೆ. ನದಿಗಳು ಹನ್ನೆರಡು ತಿಂಗಳು ಹರಿಯುತ್ತವೆ. ಜೀವ ವೈವಿಧ್ಯ ರಕ್ಷಣೆಯಾಗುತ್ತದೆ. ಮಾನವನ ಅವಶ್ಯಕತೆಗಳಾದ Food, Fodder, Fibre, Fertilizer, Furniture ಇತ್ಯಾದಿಗಳು ಸುಲಭವಾಗಿ ದೊರಕುತ್ತವೆ. ಇಂತಹ ದಟ್ಟ ಅರಣ್ಯ ನಾಶಮಾಡಿ ಅಣೆಕಟ್ಟು ಕಟ್ಟಿ ನೀರನ್ನು ಉಳಿಸುವ ಪ್ರಯತ್ನವೆಂದರೆ ಜಲಸಂಪನ್ಮೂಲವನ್ನು ನಾಶ ಮಾಡಿ ಜಲ ಉಳಿಸುವ ಯತ್ನ. ಈ ಜಲಾಶಯಗಳು ಅರ್ಥಹೀನ, ಹಿಮಾಲಯದ ತಪ್ಪಲಿನಲ್ಲಿ ಈ ಜಲಾಶಯಗಳು ಟೈಂಬಾಂಬ್ ಇಟ್ಟಂತೆ ಎಂದು ಹೇಳುತ್ತಿದ್ದರು. ದೊಡ್ಡ ದೊಡ್ಡ ಅಣೆಕಟ್ಟುಗಳು ನಿರ್ಮಾಣದ ವಿರುದ್ಧ ಹೋರಾಟ ಮಾಡಿದರು.

ಗೋಧಿ, ಅಕ್ಕಿಯನ್ನು ಬೆಳೆಯಲು ಬಹಳ ನೀರು ಬೇಕು. ಅದರ ಬದಲಿಗೆ ಕಡಿಮೆ ನೀರು ಬೇಡುವ ತೃಣಧಾನ್ಯಗಳನ್ನು ಬೆಳೆಯಲು ಪ್ರೋತ್ಸಾಹಿಸಿದರು. ತಾವು ಗೋಧಿ ಮತ್ತು ಅಕ್ಕಿಯನ್ನು ಉಣ್ಣುವುದನ್ನೇ ಬಿಟ್ಟರು.

ಅವರು ಕರ್ನಾಟಕದ ಲಕ್ಷವೃಕ್ಷ ಆಂದೋಲನ, ಅಪ್ಪಿಕೊ ಚಳವಳಿ ಇತ್ಯಾದಿಗಳಲ್ಲಿ ಭಾಗವಹಿಸಿದ್ದರು. ಇಲ್ಲಿಯ ಬಹಳಷ್ಟು ಶಾಲಾಮಕ್ಕಳನ್ನು ಭೇಟಿಯಾಗಿ ಅವರೊಂದಿಗೆ ಮಾತನಾಡಿದರು. ಗಿಡಮರ ನೆಡಲು ಪ್ರೇರೇಪಿಸಿದರು.

ಆ ಹಿರಿಯ ಜೀವ ತನ್ನ ಮುಂದಿನ ಜನಾಂಗಗಳ ಬಗೆಗೆ ಹೊಂದಿದ್ದ ಕಾಳಜಿಯನ್ನು ನಾವು ಅರ್ಥಮಾಡಿಕೊಳ್ಳಬೇಕು. ಭೂಮಿಯ ಮೇಲಿನ ಹಸಿರು ಹೊದಿಕೆ ಉಳಿಸಿಕೊಳ್ಳಬೇಕು. ಈ ಮುಖಾಂತರ ಸುಂದರಲಾಲ್ ಬಹುಗುಣರಿಗೆ ಶ್ರದ್ಧಾಂಜಲಿ ಅರ್ಪಿಸಬೇಕು.

ಆರ್ ಜಿ ತಿಮ್ಮಾಪುರ
ನಿವೃತ್ತ ಶಿಕ್ಷಕರು, ಪರಿಸರಾಸಕ್ತರು ಮತ್ತು ಪ್ರಸ್ತುತ ಸಾವಯವ ಕೃಷಿಕರು


ಇದನ್ನೂ ಓದಿ: ‘ಏನಪ್ಪ, ದೇವರು ಇದಾನೆ ಅನಿಸುತ್ತಾ, ಇಲ್ಲಾ ಅನಿಸುತ್ತಾ?’ ದೊರೆಸ್ವಾಮಿ ಜೊತೆಗಿನ ನೆನಪು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...

ಆಕಸ್ಮಿಕವಾಗಿ ಗಡಿ ದಾಟಿದ್ದ 7 ಭಾರತೀಯರನ್ನು ಹಸ್ತಾಂತರಿಸಿದ ಪಾಕಿಸ್ತಾನ

2023 ರ ಪ್ರವಾಹದ ಸಮಯದಲ್ಲಿ ಅಜಾಗರೂಕತೆಯಿಂದ ಗಡಿ ದಾಟಿದ ನಂತರ ಬಂಧಿಸಲ್ಪಟ್ಟ ಏಳು ಭಾರತೀಯ ನಾಗರಿಕರನ್ನು ಪಾಕಿಸ್ತಾನ ಶನಿವಾರ ಸ್ವದೇಶಕ್ಕೆ ವಾಪಸ್ ಕಳುಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಂಜಾಬ್‌ನ ಅಟ್ಟಾರಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್‌ನಲ್ಲಿ...

ಮೀರತ್| ಅಪಹರಣ ಪ್ರಕರಣ ಹಿಂಪಡೆಯುವಂತೆ ಪೊಲೀಸರ ಒತ್ತಡ; ‘ಗೃಹಬಂಧನ’ದಲ್ಲಿ ದಲಿತ ಕುಟುಂಬ

ಜನವರಿ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಕಪ್ಸಾದ್ ಗ್ರಾಮದಲ್ಲಿ ತಾಯಿಯ ಕೊಲೆಯ ನಂತರ ಅಪಹರಿಸಲ್ಪಟ್ಟ ದಲಿತ ಹುಡುಗಿಯ ಕುಟುಂಬ ಸದಸ್ಯರು ತಾವು ಗೃಹಬಂಧನದಲ್ಲಿದ್ದು, ಆರೋಪಿಗಳ ವಿರುದ್ಧ ಪ್ರಕರಣವನ್ನು ಮುಂದುವರಿಸದಂತೆ ಪೊಲೀಸರು...

ಉದ್ಯಮಿ ಸಿಜೆ ರಾಯ್ ಮರಣೋತ್ತರ ಪರೀಕ್ಷೆ; ಹೃದಯ-ಶ್ವಾಸಕೋಶದಲ್ಲಿ 6.35 ಎಂಎಂ ಗುಂಡಿನ ಗಾಯ

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರ ಆತ್ಮಹತ್ಯೆಯ ಮರಣೋತ್ತರ ಪರೀಕ್ಷೆಯ ವರದಿಗಯನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅರವಿಂದ್ ಎಂಎನ್ ವಿವರಿಸಿದ್ದಾರೆ. 6.35 ಎಂಎಂ ಗುಂಡಿನ ದಾಳಿಯು ತಕ್ಷಣದ...

ಮುಂಬೈ| ನಿರ್ದೇಶಕ ರೋಹಿತ್ ಶೆಟ್ಟಿ ಮನೆಯ ಹೊರಗೆ 4 ಸುತ್ತು ಗುಂಡು ಹಾರಿಸಿದ ಅಪರಿಚಿತರು

ಶನಿವಾರ ತಡರಾತ್ರಿ, ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂಬೈನ ಜುಹು ನಿವಾಸದ ಹೊರಗೆ ನಾಲ್ಕು ಸುತ್ತು ಗುಂಡು ಹಾರಿಸಲಾಗಿದ್ದು, ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಚಿತ್ರ ನಿರ್ಮಾಪಕ-ನಿರ್ದೇಶಕರ ಕಟ್ಟಡದ ಬಳಿ ಅಪರಿಚಿತ...

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...