Homeಚಳವಳಿಶ್ರದ್ಧಾಂಜಲಿ : ಕರ್ನಾಟಕದ ಮಕ್ಕಳಿಗೂ ಪ್ರೇರಣೆಯಾಗಿದ್ದ ಸಂತ ಸುಂದರಲಾಲ್ ಬಹುಗುಣ

ಶ್ರದ್ಧಾಂಜಲಿ : ಕರ್ನಾಟಕದ ಮಕ್ಕಳಿಗೂ ಪ್ರೇರಣೆಯಾಗಿದ್ದ ಸಂತ ಸುಂದರಲಾಲ್ ಬಹುಗುಣ

- Advertisement -
- Advertisement -

ಋಷಿಯಂತೆ ಬದುಕಿ, ಪರಿಸರ ಜಾಗೃತಿ ಮೂಡಿಸಿ, ಅದಕ್ಕಾಗಿ ಪಾದಯಾತ್ರೆ ನಡೆಸಿ ಹೋರಾಟ ಮಾಡಿ ಹಿಮಾಲಯದ ತಪ್ಪಲು ಹಸಿರಾಗಿರುವಂತೆ ನೋಡಿಕೊಂಡ ಸುಂದರಲಾಲ್ ಬಹುಗುಣ ಅವರನ್ನು ಮೇ 21ರಂದು ಕಳೆದುಕೊಂಡೆವು.

ಎಂಟನೆಯ ತರಗತಿಯ ಇಂಗ್ಲಿಷ್ ಪಠ್ಯದಲ್ಲಿ ’ಚಿಪ್ಕೊ ಚಳವಳಿ’ಯ ಬಗ್ಗೆ ಪಾಠವಿತ್ತು. ಆ ಪಾಠವನ್ನು ಓದಿದ ನನ್ನ ಹಲವಾರು ವಿದ್ಯಾರ್ಥಿಗಳು ಆಡುಕುರಿಗಳಿಗಾಗಿ ಮತ್ತು ಉರುವಲಿಗಾಗಿ ಗಿಡ ಕಡಿಯುವವರೊಂದಿಗೆ ಜಗಳಕ್ಕಿಳಿದು ಪೊಲೀಸ್ ಸ್ಟೇಷನ್ನಿಗೆ ಸುದ್ದಿ ಮುಟ್ಟಿಸಿ ಹಲವಾರು ಗಿಡಗಳ ರಕ್ಷಣೆ ಮಾಡಿದರು. ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೂಟಿಯ ದಿನಗಳಂದು ಶಿಕ್ಷಕರ ಮಾರ್ಗದರ್ಶನದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಸುತ್ತಿದ್ದರು. ಹೊಲ ಮನೆ ಇಲ್ಲದ ನೌಕರರ ಮಕ್ಕಳು ತಮ್ಮ ಸ್ನೇಹಿತರ ಹೊಲಗಳಲ್ಲಿ ಹಣ್ಣಿನ ಗಿಡ ನೆಟ್ಟರು. ಇಂತಹ ಎಲ್ಲ ಪರಿಸರ ರಕ್ಷಣಾ ಚಟುವಟಿಕೆಗೆ ಮೂಲಕಾರಣ ಸುಂದರಲಾಲ್ ಬಹುಗುಣರು. ಗಢವಾಲದ ಈ ಸಂತ ಕರ್ನಾಟಕದ ಮಕ್ಕಳನ್ನು ಈ ರೀತಿ ಗಿಡ ನೆಡಲು ಪ್ರೇರೆಪಿಸಿದ್ದರು.

ಕೆಲವರ್ಷಗಳ ಹಿಂದೆ ’ಪಶ್ಚಿಮ ಘಟ್ಟ ಉಳಿಸಿ’ ಅಭಿಯಾನದಲ್ಲಿ ಅವರು ಗೋವೆಗೆ ಬಂದಿದ್ದರು. ಅಲ್ಲಿ ಅವರಾಡಿದ ಮಾತುಗಳು ಇನ್ನೂ ನೆನಪಿನಲ್ಲಿ ಹಸಿರಾಗಿ ಉಳಿದಿವೆ.

’ನಾವು ಶಿವನ ಜಟೆಯಲ್ಲಿ ಗಂಗೆ ವಾಸಿಸಿದ್ದಾಳೆಂದು ನಂಬಿದ್ದೇವೆ. ಶಿವ ಹಿಮಾಲಯವಾಸಿ. ಅವನ ಜಟೆಯೆಂದರೆ ಹಿಮಾಲಯದ ತಪ್ಪಲಿನ ದಟ್ಟ ಅರಣ್ಯದಲ್ಲಿಯ ವೃಕ್ಷರಾಶಿ. ತಮ್ಮ ಬೇರುಗಳ ಮೂಲಕ ನೀರನ್ನು ಭೂಮಿಯ ಅಂತರಾಳಕ್ಕೆ ಇಳಿಸುತ್ತವೆ. ಹೀಗಾಗಿ ಅಂತರ್ಜಲ ಹೆಚ್ಚಾಗಿ ವರ್ಷವಿಡೀ ನಾವು ನೀರು ಪಡೆಯುತ್ತೇವೆ. ನಾವು ಅರಣ್ಯನಾಶದಿಂದ ಶಿವನ ಜಟೆಯನ್ನು ಕತ್ತರಿಸಿದರೆ ಗಂಗೆಯ ವಾಸಸ್ಥಾನವನ್ನು ಹಾಳುಮಾಡಿದಂತಾಗುತ್ತದೆ. ಅರಣ್ಯ ಉಳಿದರೆ ಗಂಗೆ, ಗಂಗೆ ಉಳಿದರೆ ನೀರು’ ಎಂದಿದ್ದರು.

ಹಲವು ದಶಕಗಳ ಹಿಂದೆಯೇ ಸುಂದರಲಾಲ್ ಬಹುಗುಣರು ಪ್ರವಾಹಗಳ ಪರಿಣಾಮವನ್ನು ಊಹಿಸಿದ್ದರು. ಹಿಮಾಲಯದ ದೇವಧಾರು ಮತ್ತು ಇತ್ಯಾದಿ ಮರಗಳ ನಾಶದಿಂದ ಭೂಮಿಯ ಮೇಲ್ಮೈ ಸಡಿಲಗೊಂಡು ಮಣ್ಣೆಲ್ಲ ಹಳ್ಳ ತೊರೆಗಳ ಮೂಲಕ ನದಿಯನ್ನು ಸೇರುತ್ತದೆ. ನದಿಯ ಆಳ ಕಡಿಮೆಯಾಗಿ ಅಗಲ ಹೆಚ್ಚಾಗುವುದು. ನದಿ ತನ್ನ ಒಡಲನ್ನು ಬಿಟ್ಟು ಸುತ್ತೆಲ್ಲ ಪಸರಿಸಿ ಹರಿಯುತ್ತದೆ. ಊರುಗಳು ಮತ್ತು ಹೊಲಗಳಲ್ಲೆಲ್ಲ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗುತ್ತದೆ. ಭೂಮಿಯ ಮೇಲ್ಮೈ ಮಣ್ಣು ನಾಶವಾಗಿ ಭೂಮಿ ಬರಡಾಗುತ್ತದೆ. ಜನರ ಆಹಾರ ಮೂಲವಾದ ಹೊಲಗಳನ್ನು ಕಳೆದುಕೊಳ್ಳುತ್ತಾರೆ. ಗಿಡ ಕಡಿಯುವುದನ್ನು ನಿಲ್ಲಿಸಿ ಪ್ರವಾಹಗಳನ್ನು ತಡೆಯಬೇಕೆಂದು ಆಗಲೇ ಹೇಳಿದ್ದರು. ಸರಕಾರಗಳು ಟಿಂಬರ್ ಮಾಫಿಯಾಗಳ ಪ್ರಭಾವಕ್ಕೆ ಮಣಿನು ಅವರ ಮಾತನ್ನು ನಿರ್ಲಕ್ಷಿಸಿದವು. ಪ್ರತಿಫಲ ಎಲ್ಲರೂ ಅನುಭವಿಸಬೇಕಾಯಿತು.

PC : Sakshi

ಅವರು ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ವಿರೋಧಿಸಿದರು. ನಮ್ಮ ಅರಣ್ಯಗಳೇ ನಮ್ಮ ಅಣೆಕಟ್ಟುಗಳು. ಅರಣ್ಯ ಉಳಿಸಿದರೆ ಅಲ್ಲಿಯ ಗಿಡಮರಗಳು ಅಂತರ್ಜಲ ಹೆಚ್ಚಿಸಿ ವರ್ಷವಿಡಿ ನೀರನ್ನು ಹಿಡಿದಿಡುತ್ತವೆ. ನದಿಗಳು ಹನ್ನೆರಡು ತಿಂಗಳು ಹರಿಯುತ್ತವೆ. ಜೀವ ವೈವಿಧ್ಯ ರಕ್ಷಣೆಯಾಗುತ್ತದೆ. ಮಾನವನ ಅವಶ್ಯಕತೆಗಳಾದ Food, Fodder, Fibre, Fertilizer, Furniture ಇತ್ಯಾದಿಗಳು ಸುಲಭವಾಗಿ ದೊರಕುತ್ತವೆ. ಇಂತಹ ದಟ್ಟ ಅರಣ್ಯ ನಾಶಮಾಡಿ ಅಣೆಕಟ್ಟು ಕಟ್ಟಿ ನೀರನ್ನು ಉಳಿಸುವ ಪ್ರಯತ್ನವೆಂದರೆ ಜಲಸಂಪನ್ಮೂಲವನ್ನು ನಾಶ ಮಾಡಿ ಜಲ ಉಳಿಸುವ ಯತ್ನ. ಈ ಜಲಾಶಯಗಳು ಅರ್ಥಹೀನ, ಹಿಮಾಲಯದ ತಪ್ಪಲಿನಲ್ಲಿ ಈ ಜಲಾಶಯಗಳು ಟೈಂಬಾಂಬ್ ಇಟ್ಟಂತೆ ಎಂದು ಹೇಳುತ್ತಿದ್ದರು. ದೊಡ್ಡ ದೊಡ್ಡ ಅಣೆಕಟ್ಟುಗಳು ನಿರ್ಮಾಣದ ವಿರುದ್ಧ ಹೋರಾಟ ಮಾಡಿದರು.

ಗೋಧಿ, ಅಕ್ಕಿಯನ್ನು ಬೆಳೆಯಲು ಬಹಳ ನೀರು ಬೇಕು. ಅದರ ಬದಲಿಗೆ ಕಡಿಮೆ ನೀರು ಬೇಡುವ ತೃಣಧಾನ್ಯಗಳನ್ನು ಬೆಳೆಯಲು ಪ್ರೋತ್ಸಾಹಿಸಿದರು. ತಾವು ಗೋಧಿ ಮತ್ತು ಅಕ್ಕಿಯನ್ನು ಉಣ್ಣುವುದನ್ನೇ ಬಿಟ್ಟರು.

ಅವರು ಕರ್ನಾಟಕದ ಲಕ್ಷವೃಕ್ಷ ಆಂದೋಲನ, ಅಪ್ಪಿಕೊ ಚಳವಳಿ ಇತ್ಯಾದಿಗಳಲ್ಲಿ ಭಾಗವಹಿಸಿದ್ದರು. ಇಲ್ಲಿಯ ಬಹಳಷ್ಟು ಶಾಲಾಮಕ್ಕಳನ್ನು ಭೇಟಿಯಾಗಿ ಅವರೊಂದಿಗೆ ಮಾತನಾಡಿದರು. ಗಿಡಮರ ನೆಡಲು ಪ್ರೇರೇಪಿಸಿದರು.

ಆ ಹಿರಿಯ ಜೀವ ತನ್ನ ಮುಂದಿನ ಜನಾಂಗಗಳ ಬಗೆಗೆ ಹೊಂದಿದ್ದ ಕಾಳಜಿಯನ್ನು ನಾವು ಅರ್ಥಮಾಡಿಕೊಳ್ಳಬೇಕು. ಭೂಮಿಯ ಮೇಲಿನ ಹಸಿರು ಹೊದಿಕೆ ಉಳಿಸಿಕೊಳ್ಳಬೇಕು. ಈ ಮುಖಾಂತರ ಸುಂದರಲಾಲ್ ಬಹುಗುಣರಿಗೆ ಶ್ರದ್ಧಾಂಜಲಿ ಅರ್ಪಿಸಬೇಕು.

ಆರ್ ಜಿ ತಿಮ್ಮಾಪುರ
ನಿವೃತ್ತ ಶಿಕ್ಷಕರು, ಪರಿಸರಾಸಕ್ತರು ಮತ್ತು ಪ್ರಸ್ತುತ ಸಾವಯವ ಕೃಷಿಕರು


ಇದನ್ನೂ ಓದಿ: ‘ಏನಪ್ಪ, ದೇವರು ಇದಾನೆ ಅನಿಸುತ್ತಾ, ಇಲ್ಲಾ ಅನಿಸುತ್ತಾ?’ ದೊರೆಸ್ವಾಮಿ ಜೊತೆಗಿನ ನೆನಪು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ: ‘ಮಾಳವೀಯ ನಗರ’ ಅಗ್ನಿ ದುರಂತಕ್ಕೆ 21 ಜನರು ಬಲಿ: ವ್ಯವಸ್ಥೆಯ ವೈಫಲ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ನಾಗರೀಕರು 

ದೆಹಲಿಯ ಅತ್ಯಂತ ಜನನಿಬಿಡ ಮತ್ತು ವಾಣಿಜ್ಯ ಪ್ರದೇಶವಾದ ಮಾಳವೀಯ ನಗರದಲ್ಲಿ 2026 ಜೂನ್ 3, ಬುಧವಾರ ನಸುಕಿನ ಜಾವ ಸಂಭವಿಸಿದ ಭೀಕರ ಅಗ್ನಿ ದುರಂತವು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. 'ಫ್ಲೋರಿಶ್ ಸ್ಟೇ ಬಿ...

“ವಿಷ ಕಾರದೆ ಮಾತನಾಡಿ”: ಕಲ್ಲಡ್ಕ ಪ್ರಭಾಕರ ಭಟ್‌ಗೆ ಹೈಕೋರ್ಟ್ ತಾಕೀತು

ಹೆಚ್ಚು ಮಕ್ಕಳನ್ನು ಹೆರುವ ಮುಸ್ಲಿಂ ಮಹಿಳೆಯರನ್ನು ಲೇವಡಿ ಮಾಡುವ ಮೂಲಕ ಕೋಮು ದ್ವೇಷ ಹರಡಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಹಿಂದುತ್ವ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಕಲ್ಲಡ್ಕ ಅವರಿಗೆ ತಮ್ಮ ಮುಂದಿನ ಭಾಷಣಗಳಲ್ಲಿ...

ಪತ್ರಕರ್ತ- ಚಿತ್ರ ನಿರ್ಮಾಪಕ ಸೇರಿದಂತೆ ಹಲವು ಕ್ಷೇತ್ರಗಳ ಪ್ರಮುಖರನ್ನು ವಕ್ತಾರರನ್ನಾಗಿ ನೇಮಿಸಿದ ಸಿಜೆಪಿ

ಆನ್‌ಲೈನ್ ಸೆನ್ಸೇಷನ್ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)ಯು ಶಿಕ್ಷಣ ವ್ಯವಸ್ಥೆಯಲ್ಲಿನ ವೈಫಲ್ಯಗಳ ವಿರುದ್ಧ ಪ್ರಸ್ತಾಪಿಸಿದ ಪ್ರತಿಭಟನೆಗೆ ಮುಂಚಿತವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ಸಲುವಾಗಿ ಮೂವರು ವಕ್ತಾರರ ಹೆಸರನ್ನು ಘೋಷಿಸಿದೆ. ಎಕ್ಸ್‌ನಲ್ಲಿನ ಪೋಸ್ಟ್‌ ಮಾಡಿರುವ ಅಭಿಜೀತ್...

CBSE ಪರೀಕ್ಷೆಯಲ್ಲಿ OSM ವಿವಾದ | ಸಂಸದೀಯ ಸಮಿತಿಯ ಮುಂದೆ ಹಾಜರಾದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಸಿ) ಆನ್-ಸ್ಕ್ರೀನ್ ಮಾರ್ಕಿಂಗ್ (ಒಎಸ್‌ಎಂ) ಮೌಲ್ಯಮಾಪನ ವ್ಯವಸ್ಥೆಯಲ್ಲಿನ ಗಂಭೀರ ಲೋಪಗಳ ಕುರಿತು ವಿವಾದ ಭುಗಿಲೆದ್ದಿರುವ ನಡುವೆ, 17 ವರ್ಷದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್ ನವದೆಹಲಿಯ ಸಂಸತ್ ಭವನದಲ್ಲಿ...

ಬಿಜೆಪಿ ತೊರೆದು ಪ್ರಾದೇಶಿಕ ಪಕ್ಷದತ್ತ ಅಣ್ಣಾಮಲೈ : ದ್ರಾವಿಡ ಮಣ್ಣಿನಲ್ಲಿ ವಿಫಲವಾದ ಹಿಂದುತ್ವ ರಾಜಕೀಯ

ಮಾಜಿ ಐಪಿಎಸ್‌ ಅಧಿಕಾರಿ ಹಾಗೂ ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಬಿಜೆಪಿ ತೊರೆದಿದ್ದು, ಹೊಸ ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ...

45 ಲೀಟರ್ ಟ್ಯಾಂಕಿಗೆ 52 ಲೀಟರ್ ಬಿಲ್ ಕೊಟ್ಟ ಚತುರ ಕಳ್ಳರು: ಕಾನ್ಪುರದಲ್ಲಿ ಪೆಟ್ರೋಲ್ ಬಂಕ್ ವಂಚನೆ ಪತ್ತೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊಸ ಕಾರು ಖರೀದಿಸಿದ ಮಾಲೀಕರೊಬ್ಬರು ಸ್ಥಳೀಯ ಪೆಟ್ರೋಲ್ ಬಂಕ್‌ಗೆ ಹೋದಾಗ ಅವರಿಗೆ ಒಂದು ಶಾಕಿಂಗ್ ಅನುಭವವಾಗಿದೆ. ಅವರ ಕಾರಿನ ಗರಿಷ್ಠ ಇಂಧನ ಟ್ಯಾಂಕ್ ಸಾಮರ್ಥ್ಯ ಕೇವಲ 45 ಲೀಟರ್...

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...