Homeಮುಖಪುಟ‘ಬಯಲು ಶೌಚ ಮುಕ್ತ ದೇಶ’ : ಪೊಳ್ಳು ಘೋಷಣೆ ಅಡಿಯ ಕಟು ವಾಸ್ತವ...

‘ಬಯಲು ಶೌಚ ಮುಕ್ತ ದೇಶ’ : ಪೊಳ್ಳು ಘೋಷಣೆ ಅಡಿಯ ಕಟು ವಾಸ್ತವ…

‘ಕೋಟಿಗಟ್ಟಲೆ ಹೊಸ ಶೌಚಾಲಯಗಳ ನಿರ್ಮಾಣ ಎಂದರೆ ಸಾವಿರಗಟ್ಟಲೆ ಪೌರಕಾರ್ಮಿಕರನ್ನು ಮಲದ ಗುಂಡಿಗೆ ನೂಕಿದಂತೆ’ ಎಂದು ಬೆಜವಾಡ ವಿಲ್ಸನ್ ಆಕ್ರೋಶ ವ್ಯಕ್ತಪಡಿಸುತ್ತಾರೆ.

- Advertisement -
- Advertisement -

ಐದು ವರ್ಷದ ಹಿಂದೆ ಪ್ರಧಾನಿಗಳು ಉದ್ದ ಪೊರಕೆ ಹಿಡಿದು ಭಾರತ ಸ್ವಚ್ಛಗೊಳಿಸಲು ಕರೆ ನೀಡಿದಾಗ ದೇಶ ಮಾತ್ರವಲ್ಲ, ದೇಶವಾಸಿಗಳ ಮನದ ಹತ್ತುಹಲವು ಕೊಳೆಯೂ ಕಳೆದು ಶುಚಿಯಾಗುವ ಕಾಲ ಬಂದಿತೆಂಬ ಮತ್ತೊಂದು ಹಗಲುಗನಸು ಮೂಡಿತು. ದೇಶವನ್ನು ಬಯಲು ಶೌಚ ಮುಕ್ತವಾಗಿಸಬೇಕೆನ್ನುವುದು ಹೊಸ ಯೋಜನೆಯೇನಲ್ಲ, ಕಳೆದೆರಡು ದಶಕಗಳಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ದಿಕ್ಕಿನಲ್ಲಿ ಪ್ರಯತ್ನಿಸುತ್ತಿವೆ.

1999ರಲ್ಲಿ ಜಾರಿಗೊಂಡ ಸಂಪೂರ್ಣ ನೈರ್ಮಲ್ಯ ಆಂದೋಲನವನ್ನು 2012ರಲ್ಲಿ ಪುನರ್ರೂಪಿಸಿ, ನಿರ್ಮಲ ಭಾರತ ಅಭಿಯಾನದಡಿಯಲ್ಲಿ ಶೌಚಾಲಯ ಕಟ್ಟುವುದಕ್ಕೆ ಹತ್ತು ಸಾವಿರ ರೂ. ಪ್ರೋತ್ಸಾಹಧನ ನೀಡಲಾಯಿತು. 2014ರಲ್ಲಿ ಇದೇ ಯೋಜನೆಯನ್ನು ತುಸು ಬದಲಿಸಿದ ಮೋದಿ ಸರ್ಕಾರವು ‘ಗ್ರಾಮೀಣ ಸ್ವಚ್ಛ ಭಾರತ ಮಿಶನ್ (ಎಸ್.ಬಿ.ಎಂ.)’ ಅಡಿ ಮೊದಲಿದ್ದ ಪ್ರೋತ್ಸಾಹಧನವನ್ನು ಹನ್ನೆರಡು ಸಾವಿರಕ್ಕೆ ಹೆಚ್ಚಿಸಿ, ಇನ್ನಷ್ಟು ವ್ಯಾಪಕವಾಗಿ ಜಾರಿಗೊಳಿಸಿತು. ಜನರಲ್ಲಿಯೂ ಈ ಬಗ್ಗೆ ತುಸು ಜಾಗೃತಿ ಮೂಡಿದ್ದರ ಪರಿಣಾಮವಾಗಿ ಗ್ರಾಮೀಣ ಭಾಗದಲ್ಲಿ ಶೌಚಾಲಯ ನಿರ್ಮಾಣ ‘ಆಶಯ’ದಿಂದ ‘ಆದ್ಯತೆ’ಯ ವಿಚಾರವಾಗತೊಡಗಿತು. ಕತ್ತಲಾದ ಮೇಲೆ ಅಥವಾ ಬೆಳಕು ಮೂಡುವ ಮೊದಲೇ ದೇಹಬಾಧೆ ತೀರಿಸಿಕೊಳ್ಳುವ ಅನಿವಾರ್ಯ ಒತ್ತಡದಿಂದ ಹಿಂಸೆ, ಅವಮಾನ, ಕಿರಿಕಿರಿ ಅನುಭವಿಸುತ್ತಿದ್ದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಅನುಕೂಲವಾಯಿತು ಎನ್ನುವುದರಲ್ಲಿ ಎರಡು ಮಾತಿಲ್ಲ. ಹದಿಹರೆಯದ ಹುಡುಗಿಯರು, ಬಸುರಿಯರು, ಬಾಣಂತಿಯರಿಗೆ ಅತ್ಯಂತ ಖಾಸಗಿಯಾಗಿ, ಸುರಕ್ಷಿತವಾಗಿ ಶೌಚಕಾರ್ಯವನ್ನು ಮುಗಿಸಿಕೊಳ್ಳಲು ಆಸ್ಪದ ಕಲ್ಪಿಸಿತು. ಈ ಅಂಶವನ್ನು ಒಪ್ಪಿಕೊಳ್ಳುತ್ತಲೇ ಗಾಂಧಿಜಯಂತಿಯಂದು ಪ್ರಧಾನಿ ಮಾಡಿದ ‘ದೇಶವೀಗ ಸಂಪೂರ್ಣ ಬಯಲುಶೌಚ ಮುಕ್ತ’ ಎಂಬ ಪೊಳ್ಳು ಘೋಷಣೆಯಡಿಯ ಕಟುವಾಸ್ತವಕ್ಕೆ ಕಣ್ಣು ತೆರೆಯಬೇಕಿದೆ.

ಮೋದಿ ಸರ್ಕಾರ ಹಳೆಯ ಯೋಜನೆಗೆ ಆಕರ್ಷಕ ಹೊಸ ಹೆಸರಿಟ್ಟಂತೆಯೇ ಹಿಂದಿನ ಸಂಪೂರ್ಣ ನೈರ್ಮಲ್ಯ ಆಂದೋಲನದ (http:/tsc.gov.in) ಅಂತರ್ಜಾಲ ತಾಣವನ್ನೂ ಚಿತ್ತಾಕರ್ಷಕವಾಗಿ ಕಾಣುವಂತೆ ನವೀಕರಿಸಿತು. ಹಿಂದಿನ ಜಾಲತಾಣದಲ್ಲಿ ಜನಜಾಗೃತಿ ಮೂಡಿಸುವ ಐಇಸಿ (ಮಾಹಿತಿ, ಶಿಕ್ಷಣ ಮತ್ತು ಸಂವಹನ) ಕಾರ್ಯಕ್ರಮಕ್ಕೆ ಒಟ್ಟು ಎಸ್ಬಿಎಂ ಆಯವ್ಯಯದ ಎಷ್ಟು ಹಣ ಖರ್ಚಾಯಿತು, ಜಾಹೀರಾತಿಗೆ ಎಷ್ಟು ಹಣ ಬಿಡುಗಡೆಯಾಗಿದೆ ಎಂಬುದನ್ನೆಲ್ಲ ಕಂಡುಕೊಳ್ಳಲು ಸಾಧ್ಯವಿತ್ತು. ಈಗ ನಿಮಿಷಕ್ಕೂ ಅಪ್‍ಡೇಟ್ ಆಗುವ ಡ್ಯಾಷ್‍ಬೋರ್ಡ್ ನಿಮಗೆ ಕಟ್ಟಿದ ಶೌಚಾಲಯಗಳ ಸಂಖ್ಯೆ, ಬಯಲುಶೌಚ ಮುಕ್ತ ಪಂಚಾಯಿತಿಗಳು, ಹಳ್ಳಿಗಳು ಇತ್ಯಾದಿ ಸಾಧನೆಯ ಅಂಕಿಸಂಖ್ಯೆಯನ್ನೆ ಢಾಳಾಗಿ ಕಾಣಿಸುತ್ತದೆಯೇ ವಿನಃ ವಿಶ್ಲೇಷಣೆಗೆ ಅಗತ್ಯವಾದ ಈ ಅಂಕಿಸಂಖ್ಯೆಯನ್ನಲ್ಲ!

ಜಾಹೀರಾತಿನ ಮಿಂಚು
ಸ್ವಚ್ಛಭಾರತ ಮಿಶನ್ ಆರಂಭಗೊಂಡ 2014, ಅಕ್ಟೋಬರ್ 2ರಿಂದ 2017 ಜನವರಿ 31ರ ನಡುವೆ ಎಷ್ಟು ಹಣವನ್ನು ಜಾಹೀರಾತಿಗೆ ಖರ್ಚುಮಾಡಲಾಗಿದೆ ಎಂದು ಲೋಕಸಭೆಯಲ್ಲಿ 2017ರಲ್ಲಿ ಕೇಳಿದ ಪ್ರಶ್ನೆಗೆ ಈ ಅವಧಿಯಲ್ಲಿ ಅಂದರೆ 2 ವರ್ಷ ನಾಲ್ಕು ತಿಂಗಳಿಗೆ 393.12 ಕೋಟಿ ಹಣವನ್ನು ಕೇಂದ್ರ ಹಂತದಲ್ಲಿ ಜಾಹೀರಾತಿಗೆ ವ್ಯಯಿಸಲಾಗಿದೆ ಎಂದು ಉತ್ತರಿಸಲಾಗಿದೆ. ತಿಂಗಳಿಗೆ ಸರಾಸರಿ 14 ಕೋಟಿ ರೂ. ಅಂದರೆ ಈ ಲೆಕ್ಕಾಚಾರದಲ್ಲಿ ಈವರೆಗಿನ 60 ತಿಂಗಳಲ್ಲಿ ಕನಿಷ್ಠ 842 ಕೋಟಿ ರೂ. ಹಣ ಬರಿಯ ಜಾಹೀರಾತಿಗೇ ವ್ಯಯವಾಗಿದೆ ಎಂದರೆ ಇದನ್ನು ಪೋಲು ಎನ್ನದೇ ವಿಧಿಯಿಲ್ಲ. ಇದೇ ವೇಳೆ ಐಇಸಿಗೆ ಎಸ್ಬಿಎಂ ಆಯವ್ಯಯದಲ್ಲಿ ಮೀಸಲಾದ ಶೇ. 8ರಷ್ಟು ಹಣವನ್ನು ಪೂರ್ಣವಾಗಿ ರಾಜ್ಯಗಳಿಗೆ ಬಿಡುಗಡೆ ಮಾಡಿಲ್ಲ ಮತ್ತು ವರ್ಷದಿಂದ ವರ್ಷಕ್ಕೆ ಕಡಿತಗೊಳಿಸಲಾಗಿದೆ. ಜನಜಾಗೃತಿ ಮೂಡಿಸುವ ಕಾರ್ಯಕ್ರಮಗಳಿಗಿಂತ ಅಬ್ಬರದ ಪ್ರಚಾರ ಜಾಹೀರಾತುಗಳಿಗೆ ಅತ್ಯಧಿಕ ಹಣ ದುಂದು ಮಾಡಿರುವುದನ್ನು ನೋಡಿದರೆ ಸರ್ಕಾರ ಯಾವುದಕ್ಕೆ ಒತ್ತು ನೀಡುತ್ತದೆ ಎನ್ನುವುದು ನಿಚ್ಚಳ.

‘ಸಂಖ್ಯಾ’ ಸಾಧನೆ!
ಕಾಮಗಾರಿ ಗುಣಮಟ್ಟಕ್ಕಿಂತ ಕಟ್ಟಿಮುಗಿಸುವ ಶೌಚಾಲಯಗಳ ಸಂಖ್ಯೆಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದರಿಂದ ಕಳಪೆ ಕಾಮಗಾರಿಯ ಜೊತೆಗೆ ಹೆಚ್ಚಿನ ಕಡೆಗಳಲ್ಲಿ ಎರಡು ಗುಂಡಿಯ ಬದಲಿಗೆ ಒಂದೇ ಗುಂಡಿಯ ಶೌಚಾಲಯ ಕಟ್ಟಲಾಗಿದೆ. ರಾಷ್ಟ್ರೀಯ ಗ್ರಾಮೀಣ ನೈರ್ಮಲ್ಯ ಸಮೀಕ್ಷೆ (2018-19) ವರದಿಯೇ ಹೇಳುವಂತೆ ಶೇ.29ರಷ್ಟು ಶೌಚಾಲಯಗಳಲ್ಲಿ ಎರಡು ಗುಂಡಿಗಳಿದ್ದರೆ ಶೇ.19ರಷ್ಟು ಶೌಚಾಲಯಗಳು ಒಂದೇ ಗುಂಡಿಯನ್ನು ಹೊಂದಿವೆ ಮತ್ತು ಶೇ.34ರಷ್ಟು ಶೌಚಾಲಯಗಳು ಸೆಪ್ಟಿಕ್ ಟ್ಯಾಂಕ್ ಹೊಂದಿವೆ. ಎರಡು ಗುಂಡಿ ಶೌಚಾಲಯಗಳಲ್ಲಿ ಒಂದು ಗುಂಡಿ ತುಂಬಿದ ನಂತರ ಇನ್ನೊಂದರಲ್ಲಿ ಮಲವು ಸಂಗ್ರಹಗೊಳ್ಳುತ್ತದೆ ಮತ್ತು ತುಂಬಿದ ಗುಂಡಿಯಲ್ಲಿ ಮಲವು ಗೊಬ್ಬರವಾಗುತ್ತದೆ, ಹೀಗಾಗಿ ವಿಲೇವಾರಿಯ ಸಮಸ್ಯೆ ಬಾರದು ಎಂದುಕೊಳ್ಳೋಣ. ಆದರೆ ಒಂದೇ ಗುಂಡಿ ಇರುವ ಮತ್ತು ಸೆಪ್ಟಿಕ್ ಟ್ಯಾಂಕ್ ಇರುವ ಶೌಚಾಲಯಗಳು (ಇವೆರಡೂ ಒಟ್ಟು ಸೇರಿ ಶೇ.53) ತುಂಬಿದ ನಂತರ ವಿಲೇವಾರಿ ಹೇಗೆ?

‘ಕೋಟಿಗಟ್ಟಲೆ ಹೊಸ ಶೌಚಾಲಯಗಳ ನಿರ್ಮಾಣ ಎಂದರೆ ಸಾವಿರಗಟ್ಟಲೆ ಪೌರಕಾರ್ಮಿಕರನ್ನು ಮಲದ ಗುಂಡಿಗೆ ನೂಕಿದಂತೆ’ ಎಂದು ಬೆಜವಾಡ ವಿಲ್ಸನ್ ಆಕ್ರೋಶ ವ್ಯಕ್ತಪಡಿಸುತ್ತಾರೆ. ಇದೀಗ ನಮ್ಮ ಮುಂದಿರುವ ಕಟುವಾಸ್ತವ. ಒಡಿಎಫ್ ಗ್ರಾಮ ಪಂಚಾಯಿತಿಗಳಲ್ಲಿ ಈ ಕುರಿತು ಕ್ರಿಯಾಯೋಜನೆ ಮಾಡಿದ್ದಾರೆಯೇ? ಒಡಿಎಫ್ ತಾಲ್ಲೂಕುಗಳಲ್ಲಿ ಸಕ್ಕಿಂಗ್ ಮಶಿನ್‍ಗಳಿವೆಯೇ? ಇನ್ನು ನಾಲ್ಕಾರು ವರ್ಷಗಳ ನಂತರ ಅವು ತುಂಬಿಕೊಂಡ ನಂತರ ಯಾರು, ಹೇಗೆ ಸ್ವಚ್ಛಪಡಿಸುತ್ತಾರೆ? ಅದಕ್ಕೆ ಆಯವ್ಯಯ ಕೇಂದ್ರದ್ದೇ ಅಥವಾ ಪೌರಾಡಳಿತ ಸಂಸ್ಥೆಗಳದೇ?

2011ರ ಗಣತಿಯಂತೆ ದೇಶದಲ್ಲಿ ಮಲಬಾಚಿ ಸಾಗಿಸಬೇಕಾದಂತಹ ಒಣಪಾಯಿಖಾನೆಗಳು ಒಟ್ಟು 7,27,454 ಇದ್ದವು. ‘ಸಫಾಯಿ ಕರ್ಮಚಾರಿ ಆಂದೋಲನ’ದ ಪ್ರಕಾರ 26 ಲಕ್ಷ ಒಣ ಪಾಯಿಖಾನೆಗಳಿದ್ದವು. ಈ ಪಾಯಿಖಾನೆಗಳು ಇನ್ನೂ ಇವೆಯೇ? ಇವುಗಳಲ್ಲಿ ಎಷ್ಟನ್ನು ನೀರು ಬಳಸುವ ಪಾಯಿಖಾನೆಗಳನ್ನಾಗಿ ಪರಿವರ್ತಿಸಲಾಗಿದೆ? ಇಂತಹ ಯಾವುದೇ ಪ್ರಶ್ನೆಗಳಿಗೆ ಸ್ವಚ್ಛ ಭಾರತ ಮಿಶನ್ ಜಾಲತಾಣವು ಪ್ರಚಾರಿಸುವ ಅಂಕಿಸಂಖ್ಯೆಗಳಲ್ಲಿ ಅಥವಾ ಪ್ರಧಾನಿ ಘೋಷಣೆಗಳಲ್ಲಿ ಅಥವಾ ಸಮೀಕ್ಷಾ ವರದಿಗಳಲ್ಲಿ ಉತ್ತರವಿಲ್ಲ.

ವಾಸ್ತವತೆಯ ಬೆಳಕಲ್ಲಿ ಘೋಷಣೆಯನಿಟ್ಟರೆ…
ರಾಷ್ಟ್ರೀಯ ಗ್ರಾಮೀಣ ನೈರ್ಮಲ್ಯ ಸಮೀಕ್ಷೆ (2018-19) ವರದಿ ಬೊಟ್ಟುಮಾಡಿ ತೋರಿದಂತೆ ಶೇ.93.3 ಗ್ರಾಮೀಣ ಕುಟುಂಬಗಳಿಗೆ ಮಾತ್ರ ಶೌಚಾಲಯ ಲಭ್ಯತೆ ಇದೆ. ಹೀಗೆ ಲಭ್ಯವಿದ್ದವರಲ್ಲೂ ಎಲ್ಲರೂ ಶೌಚಾಲಯ ಬಳಸುವುದಿಲ್ಲ, ಶೌಚಾಲಯವಿದ್ದೂ ಶೇ.3.3ರಷ್ಟು ಜನರು ಬಯಲಿಗೆ ಹೋಗುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಸಮೀಕ್ಷೆ ಮಾಡಿದ ಬಯಲು ಶೌಚ ಮುಕ್ತ (ಒಡಿಎಫ್) ಎಂದು ಘೋಷಿಸಿದ 2891 ಹಳ್ಳಿಗಳಲ್ಲಿ ಮಾನದಂಡಗಳ ಪ್ರಕಾರ 2622 ಹಳ್ಳಿಗಳನ್ನು (ಶೇ.90.7) ಮಾತ್ರವೇ ‘ಒಡಿಎಫ್’ ಎಂದು ಖಾತ್ರಿಪಡಿಸಲಾಗಿದೆ. ಪ್ರಧಾನಿಯವರ ‘ಬಯಲು ಶೌಚ ಮುಕ್ತ ದೇಶ’ವೆಂಬ ಉದ್ಘೋಷಣೆಯನ್ನು ಈ ವಾಸ್ತವತೆಯ ಬೆಳಕಿನಲ್ಲಿಟ್ಟು ನೋಡಬೇಕಿದೆ.

ಸ್ವಚ್ಛ ಭಾರತ ಮಿಶನ್ ಅಂತರ್ಜಾಲ ತಾಣದಲ್ಲಿ ಗುಜರಾತಿನ ಯಾವುದೇ ಜಿಲ್ಲೆಯ ಯಾವುದೇ ಜಿಲ್ಲೆಯನ್ನು ಕ್ಲಿಕ್ ಮಾಡಿ; ತೀವ್ರ ನೀರಿನ ಸಮಸ್ಯೆ ಇರುವ ರಣಭೂಮಿ ಕಚ್ ಜಿಲ್ಲೆಯನ್ನೂ ಒಳಗೊಂಡಂತೆ ಎಲ್ಲ ಜಿಲ್ಲೆಗಳೂ 100% ಬಯಲು ಶೌಚ ಮುಕ್ತ ಎಂದು ತೋರಿಸುತ್ತದೆ! ಮಹತ್ವದ ಹರಪ್ಪಾ ತಾಣವಿರುವ ಧೋಲಾವಿರಾ ಹಳ್ಳಿಯಲ್ಲಿರುವ 313 ಮನೆಗಳಲ್ಲಿಯೂ ಶೌಚಾಲಯವಿದೆ, ಒಡಿಎಫ್ ಹಳ್ಳಿ ಎಂದು ಜಾಲತಾಣ ತೋರಿಸಿತು. ಅಲ್ಲಿಯ ಪುರಾತತ್ವ ಕೇಂದ್ರದಲ್ಲಿ ಕೆಲಸ ಮಾಡುವ, ನನಗೆ ಪರಿಚಯವಿರುವ ಬಹಾದುರನನ್ನೇ ವಿಚಾರಿಸುವ ಎಂದು ಕರೆ ಮಾಡಿದೆ. ‘ಹೆಚ್ಚುಕಡಿಮೆ ಎಲ್ಲರ ಮನೆಯಲ್ಲಿಯೂ ಶೌಚಾಲಯ ಕಟ್ಟಿರೋದು ನಿಜ, ಆದರೆ ಕಳಪೆ ಕಾಮಗಾರಿಯಿಂದ ಕಳೆದ ವರ್ಷ ಕಟ್ಟಿದ ಕೆಲವು ಮೊನ್ನೆ ಮಳೆಗೆ ಬಿದ್ದು ಹೋದ್ವು. ಮತ್ತೆ ಶೌಚಾಲಯ ಇರೋ ಎಲ್ರೂ ಅವನ್ನು ಬಳಸ್ತಾರೆ ಅಂತೇನೂ ಇಲ್ಲ. ಶೇ. 90ರಷ್ಟು ಜನ ಬಳಸಬಹುದು ಅಷ್ಟೆ. ಬೇಸಿಗೆಯಲ್ಲಿ ತೀರಾ ನೀರಿನ ಸಮಸ್ಯೆ ಇರುತ್ತೆ ನಮ್ಮಲ್ಲಿ. ಗುಜರಾತ್ ಮಾಡೆಲ್ ಅಂತ ತೋರಿಸಬೇಕಲ್ಲ ಹಿಂಗಾಗಿ ಕಾಗದದ ಮೇಲೆ ಎಲ್ಲವೂ 100%, ಸಚ್ ಮೇಂ ನಹೀ’ ಎಂದು ನಕ್ಕನಾತ. ಇದೀಗ ಕಾಗದದ ಮೇಲಿನ ಅಂಕಿಸಂಖ್ಯೆಗಳನ್ನು ನಂಬುವುದೋ ಅಥವಾ ಬಹಾದುರನಂತಹ ನೆಲದ ಮಕ್ಕಳು ಹೇಳುವುದನ್ನು ನಂಬುವುದೋ… ನಿಮಗೆ ಬಿಟ್ಟಿದ್ದು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಕಾಗೆ ಕಪ್ಪಗಿದೆ ಎಂಬ ಸತ್ಯವನ್ನು ಹೇಳುವುದೂ ಸಹ ಇಂದಿನ ಭವ್ಯ ಭಾರತದಲ್ಲಿ ‘ದೇಶದ್ರೋಹ’ವಾಗಲಿದೆ. ಆದುದರಿಂದ ಸಭ್ಯ ನಾಗರೀಕರಾದ ನಾವೆಲ್ಲರೂ “ಭಾರತ ಸಂಪೂರ್ಣ ಸ್ವಚ್ಛವಾಗಿ ಫಳಫಳ ಹೊಳೆಯುತ್ತಿದೆ” ಎಂದು ಪ್ರಮಾಣ ಪತ್ರ ಸಲ್ಲಿಸೋಣ.

LEAVE A REPLY

Please enter your comment!
Please enter your name here

- Advertisment -

ಕೋಮು ಸಾಮರಸ್ಯಕ್ಕಾಗಿ ಭಾರತದ ಮುಸ್ಲಿಮರು ಸಾಮೂಹಿಕ ಪ್ರಯತ್ನಗಳೊಂದಿಗೆ ಮುಂದೆ ಬರಬೇಕು: ಜಮಾಅತ್ ಅಧ್ಯಕ್ಷ

'ಭಾರತದ ಮುಸ್ಲಿಮರು, ದೇಶದಲ್ಲಿ ಕೋಮು ಸಾಮರಸ್ಯಕ್ಕಾಗಿ ವೈಯಕ್ತಿಕ ಮತ್ತು ಸಾಮೂಹಿಕ ಪ್ರಯತ್ನಗಳೊಂದಿಗೆ ಮುಂದೆ ಬರಬೇಕು' ಎಂದು ಜಮಾಅತೆ-ಇ-ಇಸ್ಲಾಮಿ ಹಿಂದ್ ಅಧ್ಯಕ್ಷ ಸೈಯದ್ ಸಾದತುಲ್ಲಾ ಹುಸೈನಿ ಅವರು ಒತ್ತಾಯಿಸಿದರು. ಕೋಮು ಸಾಮರಸ್ಯ ಇಲಾಖೆಯು ಆಯೋಜಿಸಿದ್ದ 'ಅಖಿಲ...

3 ವರ್ಷಗಳಲ್ಲಿ ರಷ್ಯಾ ಸೇನೆ ಸೇರಿದ 200 ಕ್ಕೂ ಹೆಚ್ಚು ಭಾರತೀಯರು; 26 ಮಂದಿ ಸಾವು: ವಿದೇಶಾಂಗ ಸಚಿವಾಲಯ

2022 ರಿಂದ ಕನಿಷ್ಠ 202 ಭಾರತೀಯ ಪ್ರಜೆಗಳು ರಷ್ಯಾದ ಸಶಸ್ತ್ರ ಪಡೆಗಳಿಗೆ ಸೇರಿದ್ದಾರೆ ಎಂದು ವರದಿಯಾಗಿದೆ. ಇದರಲ್ಲಿ 26 ಮಂದಿ ಸಾವನ್ನಪ್ಪಿದ್ದು, ಇಬ್ಬರನ್ನು ರಷ್ಯಾದಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ)...

ಎಸ್‌ಐಆರ್‌ ಬಳಿಕ ಕರಡು ಮತದಾರರ ಪಟ್ಟಿ ಪ್ರಕಟ : ತಮಿಳುನಾಡಿನಲ್ಲಿ 97 ಲಕ್ಷ, ಗುಜರಾತ್‌ನಲ್ಲಿ 73 ಲಕ್ಷ ಹೆಸರು ಡಿಲೀಟ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಬಳಿಕ ತಮಿಳುನಾಡು ಮತ್ತು ಗುಜರಾತ್‌ನ ಕರಡು ಮತದಾರರ ಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ಪ್ರಕಟಿಸಿದ್ದು, ಕ್ರಮವಾಗಿ 97.3 ಮತ್ತು 73.7 ಲಕ್ಷ ಮತದಾರರ...

ಅಸ್ಸಾಂ | ರಾಜಧಾನಿ ಎಕ್ಸ್ ಪ್ರೆಸ್ ರೈಲು ಢಿಕ್ಕಿ : 8 ಆನೆಗಳು ಸಾವು

ಶನಿವಾರ (ಡಿಸೆಂಬರ್ 20, 2025) ಬೆಳಗಿನ ಜಾವ ಅಸ್ಸಾಂನ ಹೊಜೈ ಜಿಲ್ಲೆಯಲ್ಲಿ ಸಾಯಿರಂಗ್-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದ ಪರಿಣಾಮ ಎಂಟು ಆನೆಗಳು ಸಾವನ್ನಪ್ಪಿದ್ದು, ಒಂದು ಗಾಯಗೊಂಡಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಐದು...

ಮಲಯಾಳಂ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಶ್ರೀನಿವಾಸನ್ ನಿಧನ

ಮಲಯಾಳಂ ಚಿತ್ರರಂಗದ ಹಿರಿಯ ನಟ, ಚಿತ್ರಕಥೆಗಾರ, ನಿರ್ದೇಶಕ ಹಾಗೂ ನಿರ್ಮಾಪಕ ಶ್ರೀನಿವಾಸನ್ ಶನಿವಾರ (ಡಿ.20) ನಿಧನರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು. ದೀರ್ಘ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀನಿವಾಸನ್ ಅವರು, ಚಿಕಿತ್ಸೆ...

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...