Homeಕರ್ನಾಟಕಪಠ್ಯ ಪುಸ್ತಕ ಪರಿಷ್ಕರಣೆ ವಿವಾದ; ದೇವನೂರಿನಿಂದ ಗಾಂಧಿಗುಡಿಗೆ

ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ; ದೇವನೂರಿನಿಂದ ಗಾಂಧಿಗುಡಿಗೆ

- Advertisement -
- Advertisement -

ಪಠ್ಯ ಪರಿಷ್ಕರಣೆ ವಿಷಯದಲ್ಲಿ ಹೋರಾಡಲು ನಮಗಿರುವ ದೊಡ್ಡ ಶಕ್ತಿ ಯಾವುದೆಂದರೆ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು. ಪಠ್ಯ ಪರಿಷ್ಕರಣ ಕುತಂತ್ರಿಗಳ ವಿರುದ್ಧ ಮೊದಮೊದಲು ದನಿ ಎತ್ತಿದವರೇ ಅವರು. ಪರಿಷ್ಕರಣೆಯಲ್ಲಿ ಬಸವಣ್ಣನವರಿಗೆ ಅಪಚಾರವೆಸಗಿದ್ದಾರೆ ಎಂದು ಗೊತ್ತಾದಾಗ ನಡೆದ ಧಾರವಾಡದ ಸಭೆಯಲ್ಲಿ, ಎಲ್ಲ ಜಗದ್ಗುರುಗಳು ಸಾಣೆಹಳ್ಳಿ ಶ್ರೀಗಳಿಗೆ ಸರಕಾರವನ್ನ ಪ್ರಶ್ನಿಸುವ ಜವಬ್ದಾರಿ ವಹಿಸಿದರು. ಅದಾದನಂತರ ಅವರು ಮುಖ್ಯಮಂತ್ರಿ ಜತೆ ಮಾತನಾಡಿ ಹೋರಾಟದ ಎಚ್ಚರಿಕೆ ನೀಡಿದರು. ಆದರೂ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವ ಹಾಗೂ ಚಕ್ರತೀರ್ಥನ ಉದ್ಧಟತನದ ಮಾತುಗಳು ಮುಂದುವರಿದವು. ಪಠ್ಯ ಪುಸ್ತಕದಲ್ಲಿ ತಪ್ಪುಗಳಾಗಿದ್ದರೆ ಸರಿಪಡಿಸುತ್ತೇವೆ ಎಂದರು. ತಪ್ಪುಗಳು ಅವೇ ಆಗಲು ಸಾಧ್ಯವೆ? ಆರೆಸ್ಸೆಸ್ ಅಜೆಂಡಾ ಇಟ್ಟುಕೊಂಡು ತಿದ್ದಿದ್ದರಿಂದ ತಪ್ಪುಗಳಾಗಿವೆ. ಮಕ್ಕಳ ವಿದಯ ಬಗ್ಗೆ ಕಾಳಜಿಯಿದ್ದವರ್‍ಯಾರು ಇಂತಹ ಅಪರಾಧ ಎಸಗಲಾರರು. ಎಷ್ಟೇ ಆಗಲಿ ಶತಮಾನಗಳ ಕಾಲ ಶೂದ್ರ-ದಲಿತರಿಗೆ ವಿದ್ಯೆಯನ್ನ ವಂಚಿಸಿ ಮನಸ್ಸಗಳಲ್ಲವೆ!

ಇದೆಲ್ಲವನ್ನ ಚರ್ಚಿಸಿದ ಚಿಕ್ಕಮಗಳೂರಿನ ಹಲವು ಸಂಘಟನೆಯ ಗೆಳೆಯರು ಒಂದು ಜಾಥಾ ಮಾಡಿ ಸರಕಾರದ ಗಮನ ಸೆಳೆಯಲು ಯೋಚಿಸಿದರು. ಅದರಂತೆ ಲಕ್ಷ್ಮೀಶ ಕವಿಯ ನೆಲೆಯಾದ ದೇವನೂರು ಸಮೀಪದ ಎಸ್.ಕೊಪ್ಪಲಿನಿಂದ ನಿಡಘಟ್ಟದ ಗಾಂಧಿ ಗುಡಿಯವರೆಗೂ ಜಾಥಾ ತೆಗೆಯಲು ನಿರ್ಧರಿಸಿದರು. ಈ ಜಾಥಾದ ಉದ್ಘಾಟನೆಗೆ ಪಂಡಿತಾರಾಧ್ಯರನ್ನ ಆಹ್ವಾನಿಸಲು ಹೋದಾಗ ಅವರು ಸಾಮರಸ್ಯದ ನಡಿಗೆಯಾಗಿ ಬದಲಾಯಿಸಿಕೊಳ್ಳಲು ಹೇಳಿದರು. ಏಕೆಂದರೆ ಪ್ರಸ್ತುತ ಸಂದರ್ಭದಲ್ಲಿ ಸಾಮರಸ್ಯಕ್ಕೆ ಧಕ್ಕೆ ಬಂದಿರುವುದರಿಂದ ನಮ್ಮ ನಡಿಗೆ ಎಲ್ಲರನ್ನ ಒಳಗೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು; ಅದರಿಂದ ಪಠ್ಯಪರಿಷ್ಕರಣ ಅವಾಂತರ, ಸಾಮರಸ್ಯದ ನಡಿಗೆ ಸಾಮಾನ್ಯರೆಡೆಗಾಯ್ತು. ಇದರ ಫಲವಾಗಿ ಜಾಥಾಕ್ಕೆ ಬಸವಪಂಥದವರು, ದಲಿತ ಸಂಘದವರು ಮತ್ತು ಕಮ್ಯುನಿಸ್ಟರು, ಸಿಪಿಐನವರು ಹಾಗೂ ಕಾಂಗ್ರೆಸ್ ಮತ್ತು ದಳದವರೆಲ್ಲಾ ದೇವನೂರಿನಿಂದ ಗಾಂಧಿಗುಡಿಗೆ ಹೆಜ್ಜೆ ಹಾಕಿದರು. ಈ ಕಾಲ್ನಡಿಗೆ ಹೋರಾಟಗಾರರು ಮಳೆಗೇ ಸೆಡ್ಡು ಹೊಡೆದು ನಡೆದರು.

ಎಸ್. ಕೊಪ್ಪಲಿನಲ್ಲಿ ಜಾಥಾ ಉದ್ಘಾಟನೆ ಮಾಡಿದ ಪಂಡಿತಾರಾಧ್ಯರು ನೇರವಾಗಿ ಸರಕಾರ ನಡೆಸುವವರನ್ನ ಕುರಿತು, ’ಈಗ ಹೊಸ ಪಠ್ಯ ರಚನೆ ಕಷ್ಟ ಆದರೂ, ಮಕ್ಕಳಿಗೆ ಸರಿಯಾದ ಇತಿಹಾಸ ಬೋಧಿಸಬೇಕಾದ ಶಿಕ್ಷಣ ತಜ್ಞರು ಮತ್ತು ರಾಜಕೀಯ ಧುರೀಣರು ಯೋಚಿಸಬೇಕು. ದೂರದೃಷ್ಟಿ ಇಲ್ಲದೆ ಮಾಡಿರುವ ಅವಾಂತರಕ್ಕೆ ಈ ನಾಡು ಕ್ಷೆಭೆಗೊಳಪಟ್ಟಿದೆ. ಜಾತಿ ಧರ್ಮದ ಸಂಘರ್ಷವೇರ್ಪಟ್ಟಿದೆ. ಎಲ್ಲಾ ಕ್ಷೇತ್ರದಲ್ಲೂ ಕೊಳಕು ತುಂಬಿಹೋಗಿದೆ. ನಾವು ಇದನ್ನೆಲ್ಲಾ ಸ್ಪಷ್ಟಗೊಳಿಸಬೇಕಿದೆ. ನಮ್ಮ ಹೋರಾಟದ ಮನಸ್ಸುಗಳು ಎಚ್ಚರಗೊಳ್ಳಬೇಕಿದೆ. ಯಾವ ದುರ್ಘಟನೆಗೂ ನಮ್ಮ ಮನಸ್ಸು ಹೋರಾಟ ಮಾಡಲು ಅಣಿಯಾಗುತ್ತಿದ್ದು, ವ್ಯವಸ್ಥೆಯೊಂದಿಗೆ ರಾಜಿ ಮನೋಭಾವ ತುಂಬ ಅಪಾಯಕಾರಿ. ಅನ್ಯಾಯ ನಡೆದಾಗ ನಾವು ಪ್ರತಿಭಟಿಸದಿದ್ದರೆ ನಾವು ಸತ್ತಿದ್ದೇವೆ ಎಂದು ಅರ್ಥ. ಪ್ರತಿಭಟನೆಯೇ ಜೀವಂತಿಕೆಯ ಸಂಕೇತ’ ಎಂದವರು ಎಸ್.ಕೊಪ್ಪಲಿನಿಂದ ದೇವನೂರರವರೆಗೂ ನಡೆದು ಬಂದು ಜಾಥಾ ಮುನ್ನಡೆಸುವಂತೆ ಹೇಳಿಹೋದರು.

ಈ ಜಾಥಾ ರೂಪುಗೊಂಡದ್ದೇ ಕವಿ ಎಸ್.ಜಿ ಸಿದ್ದರಾಮಯ್ಯನವರಿಂದ. ಹಾಗಾಗಿ ಅವರು ಹಿಂದಿನ ದಿನವೇ ರುದ್ರಪ್ಪ ಅನಗವಾಡಿ ಮತ್ತು ಶ್ರೀಪಾದ ಭಟ್‌ರೊಡನೆ ಬಂದಿದ್ದರು. ಪಂಡಿತಾರಾಧ್ಯರು ನಿರ್ಗಮಿಸಿದ ನಂತರ ಜಾಥಾ ಮುನ್ನಡೆಸಿದ ಸಿದ್ದರಾಮಯ್ಯನವರು ಮಳೆಯಲ್ಲಿ ತೊಯ್ದರೂ ಲೆಕ್ಕಿಸದೆ ಗಾಂಧಿ ಗುಡಿ ತಲುಪಿದರು. ವಿಶೇಷ ಅಂದರೆ ಕೇವಲ ಒಂದು ಮೇಸೆಜ್ ಕಳಿಸೇಸಿದ್ದಕ್ಕೆ ಬಸವಕುಮಾರ ಸ್ವಾಮೀಜಿ ಮತ್ತು ಕಲ್ಕೆರೆ ಅಲ್ಲಮಪ್ರಭು ಪೀಠದ ತಿಪ್ಪೆರುದ್ರ ಸ್ವಾಮಿ ಬಂದು ಬರಿಗಾಲಲ್ಲೇ ನಡೆದುದು.

ಚಿಕ್ಕಮಗಳೂರು ಜಿಲ್ಲೆಯ ನಿಡಘಟ್ಟದಲ್ಲಿ ಗಾಂಧಿಗುಡಿಯಿದೆ. 1948 ಫೆಬ್ರವರಿಯಲ್ಲಿ ನಿರ್ಮಿಸಿದ ಈ ಪುಟ್ಟಗುಡಿಯಲ್ಲಿ ಗಾಂಧೀಜಿ ಪ್ರತಿಮೆಯಿದೆ. ಯಾವುದೇ ಕಾರ್ಯಕ್ರಮಕ್ಕೂ ಮುನ್ನ ಈ ಗುಡಿಯಲ್ಲಿ ನಿಂತಿರುವ ಗಾಂಧೀಜಿ ವಿಗ್ರಹಕ್ಕೆ ಮಾಲಾರ್ಪಣೆ ಮಾಡುವುದು ವಾಡಿಕೆ. ಗಾಂಧಿ ಗುಡಿ ಸಾಮಾನ್ಯವಾಗಿ ಎಲ್ಲೂ ಇರಲಾರದು. ಹರಪನಹಳ್ಳಿ ಪ್ರೈಮರಿ ಶಾಲೆಯಲ್ಲಿ ಗಾಂಧೀಜಿ ಮಲಗಿಹೋಗಿದ್ದರಂತೆ. ಅವರ ನೆನಪಿಗೆ ಎಂ.ಪಿ ಪ್ರಕಾಶ್ ಮಗ ರವೀಂದ್ರ ಆ ಶಾಲಾಕೊಠಡಿಯೊಳಗೆ ವಿಶ್ರಾಂತ ಭಂಗಿಯ ವಿಗ್ರಹ ನಿರ್ಮಿಸಿದ್ದಾರೆ. ಅದು ಬಿಟ್ಟರೆ ನಿಡಘಟ್ಟದಲ್ಲಿರುವ ಗಾಂಧಿ ಗುಡಿ ಅವರ ಹತ್ಯೆಯಾದ ನಂತರ ಅನುಯಾಯಿಗಳು ನಿರ್ಮಿಸಿದ್ದು. ತೆಳು ನಗೆಯ ಗಾಂಧಿ ಪ್ರತಿಮೆ ಜಾಥಾ ಬಂದವರನ್ನ ನೋಡಿ ಮೆಚ್ಚಿದಂತೆ ಕಾಣುತ್ತಿತ್ತು. ಹಾಗೆ ನೋಡಿದರೆ ಚಳವಳಿಗಾರರ
ಜಾಥಾಗಳೆಲ್ಲಾ ಗಾಂಧೀಜಿ ಹಾಕಿಕೊಟ್ಟ ಮಾರ್ಗಗಳು. ಚಿಕ್ಕಮಗಳೂರಲ್ಲಿ ಗಾಂಧೀಜಿಯ ನೆನಪು ಇನ್ನೂ ಹಸಿರಾಗಿದೆ. ಇಲ್ಲಿನ ಡಿ.ಸಿ ಕಚೇರಿ ಆವರಣದಲ್ಲಿ ಕುಳಿತು ಗಾಂಧೀಜಿ ಭಾಷಣ ಮಾಡಿದ್ದರು. ಆ ನೆನಪಿಗಾಗಿ ಅಂದು ತೆಗೆದ ಭಾವಚಿತ್ರ ಇಲ್ಲಿರುವುದಲ್ಲದೆ, ಅವರ ಸಂದೇಶಗಳೂ ಇವೆ. ಇಲ್ಲಿ ದಲಿತ ಚಳುವಳಿ ಕಮ್ಯುನಿಸ್ಟರ ಚಳುವಳಿ ಮತ್ತು ರೈತ ಚಳವಳಿ ಜಿಲ್ಲೆಯನ್ನು ಸದಾ ಜೀವಂತವಾಗಿಟ್ಟಿದ್ದವು. ಎಲ್ಲ ಚಳವಳಿಯ ನೇತಾರರು ಅಕಾಲ ಮರಣಕ್ಕೆ ತುತ್ತಾಗಿಹೋದರು. ಕಮ್ಯುನಿಸ್ಟ್ ನಾಯಕ ಸುಂದರೇಶ್ ರೈಲ್ವೆ ಅಪಘಾತದಲ್ಲಿ ಮಡಿದರು, ಎಂ.ಡಿ ಗಂಗಯ್ಯ ಹೃದಯಾಘಾತದಲ್ಲಿ ತೀರಿಕೊಂಡರು. ಇನ್ನ ರೈತಸಂಘದ ನಾಯಕರಾದ ಎಂ.ಡಿ ನಂಜುಂಡಸ್ವಾಮಿಯವರ ನಿಧನಾನಂತರ ಹೆಚ್.ಹೆಚ್ ದೇವರಾಜ್ ಕಾಂಗ್ರೆಸ್ ಸೇರಿದರು. ಹಾಳೂರಿಗೆ ಉಳಿದವನೇ ಹಮ್ಮೀರ ಎಂಬಂತೆ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಹೆಚ್.ಹೆಚ್ ದೇವರಾಜ್ ಎದುರಿಗೆ ಠೇವಣಿ ಕಳೆದುಕೊಂಡಿದ್ದ ಸಿ.ಟಿ ರವಿ ಬಾಬಾಬುಡನ್‌ಗಿರಿಯ ಸಮಸ್ಯೆಯನ್ನು ಬೃಹದಾಕಾರವಾಗಿ ಬೆಳೆಸಿಕೊಂಡು ಅದನ್ನೆ ಜೀವಂತವಾಗಿರಿಸಿಕೊಂಡು ಚುನಾವಣೆಯಲ್ಲಿ ಗೆದ್ದು ಬರುತ್ತಿದ್ದಾರೆ. ಇವರಿಗೆ ಪಠ್ಯಪುಸ್ತಕದ ಪರಿಷ್ಕರಣೆ ವಿಷಯದಲ್ಲಿ ಕುವೆಂಪು ಬಗ್ಗೆಯೂ ಗೌರವವಿಲ್ಲ. ಮತ್ತೆ ಬಸವಣ್ಣನ ವಿಷಯದಲ್ಲಿ ಚಕ್ರತೀರ್ಥ
ಮತ್ತು ಈತನ ಅಭಿಪ್ರಾಯಕ್ಕೆ ಯಾವುದೇ ವ್ಯತ್ಯಾಸವಿಲ್ಲ. ಒಬ್ಬ ಚಕ್ರತೀರ್ಥನನ್ನು ನೀವು ಅರಗಿಸಿಕೊಳ್ಳಲಾಗಿಲ್ಲ ಎಂಬ ಈತನ ಮಾತೇ ಕಾಲ್ನಡಿಗೆ ಜಾಥಾ ನಡೆಯುವಂತೆ ಪ್ರಚೋದಿಸಿತು. ಈಗಾಗಲೇ ಕವಿಶೈಲದಿಂದ ತೀರ್ಥಹಳ್ಳಿಗೆ ನಡೆದ ಹಲವರು ಇಲ್ಲೂ ಇದ್ದರು. ಹಾಗೆ ಮಹಿಳೆಯರ ಮುಖಂಡರಾಗಿ ರೇಖಾ ಹುಲಿಯಪ್ಪಗೌಡ, ಜಾಥಾ ಸಂಘಟಿಸಿದ ರವೀಶ್ ಬಸಪ್ಪ ಗುರುಶಾಂತಪ್ಪ ಅಮ್ಜದ್, ದೇವರಾಜ್ ಮತ್ತು ನಟರಾಜ್ ಇವರೆಲ್ಲಾ ಮುಂದೆ ಹಲವು ಜಾಥಾಗಳನ್ನ ಸಂಘಟಿಸುವ ಹುಮ್ಮಸ್ಸಿನಲ್ಲಿದ್ದರು.

ಮಳೆಯ ಕಾರಣಕ್ಕೆ ನಿಡಘಟ್ಟದ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಕವಿ ಎಸ್.ಜಿ ಸಿದ್ದರಾಮಯ್ಯನವರು ಪಠ್ಯಪರಿಷ್ಕರಣದ ಪೂರ್ಣ ವಿವರವನ್ನ ಜನರಿಗೆ ಮನವರಿಕೆ ಮಾಡಿಕೊಟ್ಟರು. ಶ್ರೀಪಾದ ಭಟ್ ಆರೆಸ್ಸೆಸಿಗರ ಹುನ್ನಾರಗಳನ್ನ ಬಿಡಿಸಿದರು. ತಿಪ್ಪೆರುದ್ರಸ್ವಾಮಿ ಒಂದಿಷ್ಟು ಆವೇಶದಿಂದ ಮಾತನಾಡಿ ಬಸವಣ್ಣನಿಗೆ ಅವಮಾನವಾಗಿದ್ದರೂ ಸುಮ್ಮನಿದ್ದೀರಲ್ಲಾ ಎಂದರು.

ಬಸವಣ್ಣನನ್ನ ಮುಗಿಸಲು ಬೊಮ್ಮಾಯಿ, ಕನಕದಾಸರನ್ನ ಮರೆಯಾಗಿಸಲು ಈಶ್ವರಪ್ಪ, ಕುವೆಂಪು ಹಣಿಯಲು ಅಶೋಕ, ಅಶ್ವತ್ಥನಾರಾಯಣ, ಸಿ.ಟಿ ರವಿ, ನಾರಾಯಣಗುರುವನ್ನು ಗತಿ ಕಾಣಿಸಲು ಸುನೀಲ್ ಕುಮಾರ್ ಇನ್ನು ಅಂಬೇಡ್ಕರ್‌ರವರಿಗೆ ಅವಮಾನಿಸಲು ನಾರಾಯಣಸ್ವಾಮಿ ಹೀಗೆ ಆಯಾ ಜಾತಿಯವರನ್ನೇ ಗುರುತಿಸಿ ಜವಾಬ್ದಾರಿ ವಹಿಸಿರುವ ಆರೆಸ್ಸೆಸ್ಸಿಗರು ತಾವು ಮಾತ್ರ ಅಗಮ್ಯ ಜಾಗದಲ್ಲಿ ಕುಳಿತು ಮಾಯಾ ಯುದ್ಧ ಮಾಡುತ್ತಿದ್ದಾರೆ. ಹಾಗಾಗಿ ಜಾಥಾಗಳು ಸಭೆಗಳು ನಾಡಿನಾದ್ಯಂತ ನಡೆಯಬೇಕಿದೆ.


ಇದನ್ನೂ ಓದಿ: ಸಂವಿಧಾನ ಒಬ್ಬರೇ ಬರೆದಿದ್ದು ಎಂದು ಹೇಗೆ ಹೇಳುತ್ತೀರಿ?: ಪಠ್ಯದಿಂದ ‘ಸಂವಿಧಾನ ಶಿಲ್ಪಿ’ ಪದ ಕೈಬಿಟ್ಟಿದ್ದಕ್ಕೆ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...