Homeಕರ್ನಾಟಕಪಠ್ಯ ಪುಸ್ತಕ ಪರಿಷ್ಕರಣೆ ವಿವಾದ; ದೇವನೂರಿನಿಂದ ಗಾಂಧಿಗುಡಿಗೆ

ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ; ದೇವನೂರಿನಿಂದ ಗಾಂಧಿಗುಡಿಗೆ

- Advertisement -
- Advertisement -

ಪಠ್ಯ ಪರಿಷ್ಕರಣೆ ವಿಷಯದಲ್ಲಿ ಹೋರಾಡಲು ನಮಗಿರುವ ದೊಡ್ಡ ಶಕ್ತಿ ಯಾವುದೆಂದರೆ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು. ಪಠ್ಯ ಪರಿಷ್ಕರಣ ಕುತಂತ್ರಿಗಳ ವಿರುದ್ಧ ಮೊದಮೊದಲು ದನಿ ಎತ್ತಿದವರೇ ಅವರು. ಪರಿಷ್ಕರಣೆಯಲ್ಲಿ ಬಸವಣ್ಣನವರಿಗೆ ಅಪಚಾರವೆಸಗಿದ್ದಾರೆ ಎಂದು ಗೊತ್ತಾದಾಗ ನಡೆದ ಧಾರವಾಡದ ಸಭೆಯಲ್ಲಿ, ಎಲ್ಲ ಜಗದ್ಗುರುಗಳು ಸಾಣೆಹಳ್ಳಿ ಶ್ರೀಗಳಿಗೆ ಸರಕಾರವನ್ನ ಪ್ರಶ್ನಿಸುವ ಜವಬ್ದಾರಿ ವಹಿಸಿದರು. ಅದಾದನಂತರ ಅವರು ಮುಖ್ಯಮಂತ್ರಿ ಜತೆ ಮಾತನಾಡಿ ಹೋರಾಟದ ಎಚ್ಚರಿಕೆ ನೀಡಿದರು. ಆದರೂ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವ ಹಾಗೂ ಚಕ್ರತೀರ್ಥನ ಉದ್ಧಟತನದ ಮಾತುಗಳು ಮುಂದುವರಿದವು. ಪಠ್ಯ ಪುಸ್ತಕದಲ್ಲಿ ತಪ್ಪುಗಳಾಗಿದ್ದರೆ ಸರಿಪಡಿಸುತ್ತೇವೆ ಎಂದರು. ತಪ್ಪುಗಳು ಅವೇ ಆಗಲು ಸಾಧ್ಯವೆ? ಆರೆಸ್ಸೆಸ್ ಅಜೆಂಡಾ ಇಟ್ಟುಕೊಂಡು ತಿದ್ದಿದ್ದರಿಂದ ತಪ್ಪುಗಳಾಗಿವೆ. ಮಕ್ಕಳ ವಿದಯ ಬಗ್ಗೆ ಕಾಳಜಿಯಿದ್ದವರ್‍ಯಾರು ಇಂತಹ ಅಪರಾಧ ಎಸಗಲಾರರು. ಎಷ್ಟೇ ಆಗಲಿ ಶತಮಾನಗಳ ಕಾಲ ಶೂದ್ರ-ದಲಿತರಿಗೆ ವಿದ್ಯೆಯನ್ನ ವಂಚಿಸಿ ಮನಸ್ಸಗಳಲ್ಲವೆ!

ಇದೆಲ್ಲವನ್ನ ಚರ್ಚಿಸಿದ ಚಿಕ್ಕಮಗಳೂರಿನ ಹಲವು ಸಂಘಟನೆಯ ಗೆಳೆಯರು ಒಂದು ಜಾಥಾ ಮಾಡಿ ಸರಕಾರದ ಗಮನ ಸೆಳೆಯಲು ಯೋಚಿಸಿದರು. ಅದರಂತೆ ಲಕ್ಷ್ಮೀಶ ಕವಿಯ ನೆಲೆಯಾದ ದೇವನೂರು ಸಮೀಪದ ಎಸ್.ಕೊಪ್ಪಲಿನಿಂದ ನಿಡಘಟ್ಟದ ಗಾಂಧಿ ಗುಡಿಯವರೆಗೂ ಜಾಥಾ ತೆಗೆಯಲು ನಿರ್ಧರಿಸಿದರು. ಈ ಜಾಥಾದ ಉದ್ಘಾಟನೆಗೆ ಪಂಡಿತಾರಾಧ್ಯರನ್ನ ಆಹ್ವಾನಿಸಲು ಹೋದಾಗ ಅವರು ಸಾಮರಸ್ಯದ ನಡಿಗೆಯಾಗಿ ಬದಲಾಯಿಸಿಕೊಳ್ಳಲು ಹೇಳಿದರು. ಏಕೆಂದರೆ ಪ್ರಸ್ತುತ ಸಂದರ್ಭದಲ್ಲಿ ಸಾಮರಸ್ಯಕ್ಕೆ ಧಕ್ಕೆ ಬಂದಿರುವುದರಿಂದ ನಮ್ಮ ನಡಿಗೆ ಎಲ್ಲರನ್ನ ಒಳಗೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು; ಅದರಿಂದ ಪಠ್ಯಪರಿಷ್ಕರಣ ಅವಾಂತರ, ಸಾಮರಸ್ಯದ ನಡಿಗೆ ಸಾಮಾನ್ಯರೆಡೆಗಾಯ್ತು. ಇದರ ಫಲವಾಗಿ ಜಾಥಾಕ್ಕೆ ಬಸವಪಂಥದವರು, ದಲಿತ ಸಂಘದವರು ಮತ್ತು ಕಮ್ಯುನಿಸ್ಟರು, ಸಿಪಿಐನವರು ಹಾಗೂ ಕಾಂಗ್ರೆಸ್ ಮತ್ತು ದಳದವರೆಲ್ಲಾ ದೇವನೂರಿನಿಂದ ಗಾಂಧಿಗುಡಿಗೆ ಹೆಜ್ಜೆ ಹಾಕಿದರು. ಈ ಕಾಲ್ನಡಿಗೆ ಹೋರಾಟಗಾರರು ಮಳೆಗೇ ಸೆಡ್ಡು ಹೊಡೆದು ನಡೆದರು.

ಎಸ್. ಕೊಪ್ಪಲಿನಲ್ಲಿ ಜಾಥಾ ಉದ್ಘಾಟನೆ ಮಾಡಿದ ಪಂಡಿತಾರಾಧ್ಯರು ನೇರವಾಗಿ ಸರಕಾರ ನಡೆಸುವವರನ್ನ ಕುರಿತು, ’ಈಗ ಹೊಸ ಪಠ್ಯ ರಚನೆ ಕಷ್ಟ ಆದರೂ, ಮಕ್ಕಳಿಗೆ ಸರಿಯಾದ ಇತಿಹಾಸ ಬೋಧಿಸಬೇಕಾದ ಶಿಕ್ಷಣ ತಜ್ಞರು ಮತ್ತು ರಾಜಕೀಯ ಧುರೀಣರು ಯೋಚಿಸಬೇಕು. ದೂರದೃಷ್ಟಿ ಇಲ್ಲದೆ ಮಾಡಿರುವ ಅವಾಂತರಕ್ಕೆ ಈ ನಾಡು ಕ್ಷೆಭೆಗೊಳಪಟ್ಟಿದೆ. ಜಾತಿ ಧರ್ಮದ ಸಂಘರ್ಷವೇರ್ಪಟ್ಟಿದೆ. ಎಲ್ಲಾ ಕ್ಷೇತ್ರದಲ್ಲೂ ಕೊಳಕು ತುಂಬಿಹೋಗಿದೆ. ನಾವು ಇದನ್ನೆಲ್ಲಾ ಸ್ಪಷ್ಟಗೊಳಿಸಬೇಕಿದೆ. ನಮ್ಮ ಹೋರಾಟದ ಮನಸ್ಸುಗಳು ಎಚ್ಚರಗೊಳ್ಳಬೇಕಿದೆ. ಯಾವ ದುರ್ಘಟನೆಗೂ ನಮ್ಮ ಮನಸ್ಸು ಹೋರಾಟ ಮಾಡಲು ಅಣಿಯಾಗುತ್ತಿದ್ದು, ವ್ಯವಸ್ಥೆಯೊಂದಿಗೆ ರಾಜಿ ಮನೋಭಾವ ತುಂಬ ಅಪಾಯಕಾರಿ. ಅನ್ಯಾಯ ನಡೆದಾಗ ನಾವು ಪ್ರತಿಭಟಿಸದಿದ್ದರೆ ನಾವು ಸತ್ತಿದ್ದೇವೆ ಎಂದು ಅರ್ಥ. ಪ್ರತಿಭಟನೆಯೇ ಜೀವಂತಿಕೆಯ ಸಂಕೇತ’ ಎಂದವರು ಎಸ್.ಕೊಪ್ಪಲಿನಿಂದ ದೇವನೂರರವರೆಗೂ ನಡೆದು ಬಂದು ಜಾಥಾ ಮುನ್ನಡೆಸುವಂತೆ ಹೇಳಿಹೋದರು.

ಈ ಜಾಥಾ ರೂಪುಗೊಂಡದ್ದೇ ಕವಿ ಎಸ್.ಜಿ ಸಿದ್ದರಾಮಯ್ಯನವರಿಂದ. ಹಾಗಾಗಿ ಅವರು ಹಿಂದಿನ ದಿನವೇ ರುದ್ರಪ್ಪ ಅನಗವಾಡಿ ಮತ್ತು ಶ್ರೀಪಾದ ಭಟ್‌ರೊಡನೆ ಬಂದಿದ್ದರು. ಪಂಡಿತಾರಾಧ್ಯರು ನಿರ್ಗಮಿಸಿದ ನಂತರ ಜಾಥಾ ಮುನ್ನಡೆಸಿದ ಸಿದ್ದರಾಮಯ್ಯನವರು ಮಳೆಯಲ್ಲಿ ತೊಯ್ದರೂ ಲೆಕ್ಕಿಸದೆ ಗಾಂಧಿ ಗುಡಿ ತಲುಪಿದರು. ವಿಶೇಷ ಅಂದರೆ ಕೇವಲ ಒಂದು ಮೇಸೆಜ್ ಕಳಿಸೇಸಿದ್ದಕ್ಕೆ ಬಸವಕುಮಾರ ಸ್ವಾಮೀಜಿ ಮತ್ತು ಕಲ್ಕೆರೆ ಅಲ್ಲಮಪ್ರಭು ಪೀಠದ ತಿಪ್ಪೆರುದ್ರ ಸ್ವಾಮಿ ಬಂದು ಬರಿಗಾಲಲ್ಲೇ ನಡೆದುದು.

ಚಿಕ್ಕಮಗಳೂರು ಜಿಲ್ಲೆಯ ನಿಡಘಟ್ಟದಲ್ಲಿ ಗಾಂಧಿಗುಡಿಯಿದೆ. 1948 ಫೆಬ್ರವರಿಯಲ್ಲಿ ನಿರ್ಮಿಸಿದ ಈ ಪುಟ್ಟಗುಡಿಯಲ್ಲಿ ಗಾಂಧೀಜಿ ಪ್ರತಿಮೆಯಿದೆ. ಯಾವುದೇ ಕಾರ್ಯಕ್ರಮಕ್ಕೂ ಮುನ್ನ ಈ ಗುಡಿಯಲ್ಲಿ ನಿಂತಿರುವ ಗಾಂಧೀಜಿ ವಿಗ್ರಹಕ್ಕೆ ಮಾಲಾರ್ಪಣೆ ಮಾಡುವುದು ವಾಡಿಕೆ. ಗಾಂಧಿ ಗುಡಿ ಸಾಮಾನ್ಯವಾಗಿ ಎಲ್ಲೂ ಇರಲಾರದು. ಹರಪನಹಳ್ಳಿ ಪ್ರೈಮರಿ ಶಾಲೆಯಲ್ಲಿ ಗಾಂಧೀಜಿ ಮಲಗಿಹೋಗಿದ್ದರಂತೆ. ಅವರ ನೆನಪಿಗೆ ಎಂ.ಪಿ ಪ್ರಕಾಶ್ ಮಗ ರವೀಂದ್ರ ಆ ಶಾಲಾಕೊಠಡಿಯೊಳಗೆ ವಿಶ್ರಾಂತ ಭಂಗಿಯ ವಿಗ್ರಹ ನಿರ್ಮಿಸಿದ್ದಾರೆ. ಅದು ಬಿಟ್ಟರೆ ನಿಡಘಟ್ಟದಲ್ಲಿರುವ ಗಾಂಧಿ ಗುಡಿ ಅವರ ಹತ್ಯೆಯಾದ ನಂತರ ಅನುಯಾಯಿಗಳು ನಿರ್ಮಿಸಿದ್ದು. ತೆಳು ನಗೆಯ ಗಾಂಧಿ ಪ್ರತಿಮೆ ಜಾಥಾ ಬಂದವರನ್ನ ನೋಡಿ ಮೆಚ್ಚಿದಂತೆ ಕಾಣುತ್ತಿತ್ತು. ಹಾಗೆ ನೋಡಿದರೆ ಚಳವಳಿಗಾರರ
ಜಾಥಾಗಳೆಲ್ಲಾ ಗಾಂಧೀಜಿ ಹಾಕಿಕೊಟ್ಟ ಮಾರ್ಗಗಳು. ಚಿಕ್ಕಮಗಳೂರಲ್ಲಿ ಗಾಂಧೀಜಿಯ ನೆನಪು ಇನ್ನೂ ಹಸಿರಾಗಿದೆ. ಇಲ್ಲಿನ ಡಿ.ಸಿ ಕಚೇರಿ ಆವರಣದಲ್ಲಿ ಕುಳಿತು ಗಾಂಧೀಜಿ ಭಾಷಣ ಮಾಡಿದ್ದರು. ಆ ನೆನಪಿಗಾಗಿ ಅಂದು ತೆಗೆದ ಭಾವಚಿತ್ರ ಇಲ್ಲಿರುವುದಲ್ಲದೆ, ಅವರ ಸಂದೇಶಗಳೂ ಇವೆ. ಇಲ್ಲಿ ದಲಿತ ಚಳುವಳಿ ಕಮ್ಯುನಿಸ್ಟರ ಚಳುವಳಿ ಮತ್ತು ರೈತ ಚಳವಳಿ ಜಿಲ್ಲೆಯನ್ನು ಸದಾ ಜೀವಂತವಾಗಿಟ್ಟಿದ್ದವು. ಎಲ್ಲ ಚಳವಳಿಯ ನೇತಾರರು ಅಕಾಲ ಮರಣಕ್ಕೆ ತುತ್ತಾಗಿಹೋದರು. ಕಮ್ಯುನಿಸ್ಟ್ ನಾಯಕ ಸುಂದರೇಶ್ ರೈಲ್ವೆ ಅಪಘಾತದಲ್ಲಿ ಮಡಿದರು, ಎಂ.ಡಿ ಗಂಗಯ್ಯ ಹೃದಯಾಘಾತದಲ್ಲಿ ತೀರಿಕೊಂಡರು. ಇನ್ನ ರೈತಸಂಘದ ನಾಯಕರಾದ ಎಂ.ಡಿ ನಂಜುಂಡಸ್ವಾಮಿಯವರ ನಿಧನಾನಂತರ ಹೆಚ್.ಹೆಚ್ ದೇವರಾಜ್ ಕಾಂಗ್ರೆಸ್ ಸೇರಿದರು. ಹಾಳೂರಿಗೆ ಉಳಿದವನೇ ಹಮ್ಮೀರ ಎಂಬಂತೆ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಹೆಚ್.ಹೆಚ್ ದೇವರಾಜ್ ಎದುರಿಗೆ ಠೇವಣಿ ಕಳೆದುಕೊಂಡಿದ್ದ ಸಿ.ಟಿ ರವಿ ಬಾಬಾಬುಡನ್‌ಗಿರಿಯ ಸಮಸ್ಯೆಯನ್ನು ಬೃಹದಾಕಾರವಾಗಿ ಬೆಳೆಸಿಕೊಂಡು ಅದನ್ನೆ ಜೀವಂತವಾಗಿರಿಸಿಕೊಂಡು ಚುನಾವಣೆಯಲ್ಲಿ ಗೆದ್ದು ಬರುತ್ತಿದ್ದಾರೆ. ಇವರಿಗೆ ಪಠ್ಯಪುಸ್ತಕದ ಪರಿಷ್ಕರಣೆ ವಿಷಯದಲ್ಲಿ ಕುವೆಂಪು ಬಗ್ಗೆಯೂ ಗೌರವವಿಲ್ಲ. ಮತ್ತೆ ಬಸವಣ್ಣನ ವಿಷಯದಲ್ಲಿ ಚಕ್ರತೀರ್ಥ
ಮತ್ತು ಈತನ ಅಭಿಪ್ರಾಯಕ್ಕೆ ಯಾವುದೇ ವ್ಯತ್ಯಾಸವಿಲ್ಲ. ಒಬ್ಬ ಚಕ್ರತೀರ್ಥನನ್ನು ನೀವು ಅರಗಿಸಿಕೊಳ್ಳಲಾಗಿಲ್ಲ ಎಂಬ ಈತನ ಮಾತೇ ಕಾಲ್ನಡಿಗೆ ಜಾಥಾ ನಡೆಯುವಂತೆ ಪ್ರಚೋದಿಸಿತು. ಈಗಾಗಲೇ ಕವಿಶೈಲದಿಂದ ತೀರ್ಥಹಳ್ಳಿಗೆ ನಡೆದ ಹಲವರು ಇಲ್ಲೂ ಇದ್ದರು. ಹಾಗೆ ಮಹಿಳೆಯರ ಮುಖಂಡರಾಗಿ ರೇಖಾ ಹುಲಿಯಪ್ಪಗೌಡ, ಜಾಥಾ ಸಂಘಟಿಸಿದ ರವೀಶ್ ಬಸಪ್ಪ ಗುರುಶಾಂತಪ್ಪ ಅಮ್ಜದ್, ದೇವರಾಜ್ ಮತ್ತು ನಟರಾಜ್ ಇವರೆಲ್ಲಾ ಮುಂದೆ ಹಲವು ಜಾಥಾಗಳನ್ನ ಸಂಘಟಿಸುವ ಹುಮ್ಮಸ್ಸಿನಲ್ಲಿದ್ದರು.

ಮಳೆಯ ಕಾರಣಕ್ಕೆ ನಿಡಘಟ್ಟದ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಕವಿ ಎಸ್.ಜಿ ಸಿದ್ದರಾಮಯ್ಯನವರು ಪಠ್ಯಪರಿಷ್ಕರಣದ ಪೂರ್ಣ ವಿವರವನ್ನ ಜನರಿಗೆ ಮನವರಿಕೆ ಮಾಡಿಕೊಟ್ಟರು. ಶ್ರೀಪಾದ ಭಟ್ ಆರೆಸ್ಸೆಸಿಗರ ಹುನ್ನಾರಗಳನ್ನ ಬಿಡಿಸಿದರು. ತಿಪ್ಪೆರುದ್ರಸ್ವಾಮಿ ಒಂದಿಷ್ಟು ಆವೇಶದಿಂದ ಮಾತನಾಡಿ ಬಸವಣ್ಣನಿಗೆ ಅವಮಾನವಾಗಿದ್ದರೂ ಸುಮ್ಮನಿದ್ದೀರಲ್ಲಾ ಎಂದರು.

ಬಸವಣ್ಣನನ್ನ ಮುಗಿಸಲು ಬೊಮ್ಮಾಯಿ, ಕನಕದಾಸರನ್ನ ಮರೆಯಾಗಿಸಲು ಈಶ್ವರಪ್ಪ, ಕುವೆಂಪು ಹಣಿಯಲು ಅಶೋಕ, ಅಶ್ವತ್ಥನಾರಾಯಣ, ಸಿ.ಟಿ ರವಿ, ನಾರಾಯಣಗುರುವನ್ನು ಗತಿ ಕಾಣಿಸಲು ಸುನೀಲ್ ಕುಮಾರ್ ಇನ್ನು ಅಂಬೇಡ್ಕರ್‌ರವರಿಗೆ ಅವಮಾನಿಸಲು ನಾರಾಯಣಸ್ವಾಮಿ ಹೀಗೆ ಆಯಾ ಜಾತಿಯವರನ್ನೇ ಗುರುತಿಸಿ ಜವಾಬ್ದಾರಿ ವಹಿಸಿರುವ ಆರೆಸ್ಸೆಸ್ಸಿಗರು ತಾವು ಮಾತ್ರ ಅಗಮ್ಯ ಜಾಗದಲ್ಲಿ ಕುಳಿತು ಮಾಯಾ ಯುದ್ಧ ಮಾಡುತ್ತಿದ್ದಾರೆ. ಹಾಗಾಗಿ ಜಾಥಾಗಳು ಸಭೆಗಳು ನಾಡಿನಾದ್ಯಂತ ನಡೆಯಬೇಕಿದೆ.


ಇದನ್ನೂ ಓದಿ: ಸಂವಿಧಾನ ಒಬ್ಬರೇ ಬರೆದಿದ್ದು ಎಂದು ಹೇಗೆ ಹೇಳುತ್ತೀರಿ?: ಪಠ್ಯದಿಂದ ‘ಸಂವಿಧಾನ ಶಿಲ್ಪಿ’ ಪದ ಕೈಬಿಟ್ಟಿದ್ದಕ್ಕೆ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...