Homeಮುಖಪುಟಪ್ರೀತಿಸುವ ಕಲೆ - ಎರಿಕ್ ಫ್ರಾಂ : ಯೋಗೇಶ್ ಮಾಸ್ಟರ್

ಪ್ರೀತಿಸುವ ಕಲೆ – ಎರಿಕ್ ಫ್ರಾಂ : ಯೋಗೇಶ್ ಮಾಸ್ಟರ್

- Advertisement -
- Advertisement -

ಜಗತ್ತಿನಲ್ಲಿ ಅಗತ್ಯದ ಅಥವಾ ಸಾಂತ್ವನ ನೀಡುವಂತಹ ಅನೇಕ ಪರಿಕಲ್ಪನೆಗಳು ಅಪವ್ಯಾಖ್ಯಾನಕ್ಕೆ ಒಳಗಾಗಿವೆ. ದೇವರು, ಧರ್ಮ, ಸಂಬಂಧಗಳ ಮೌಲ್ಯ, ರಾಜಕೀಯ, ಸಂಸ್ಕೃತಿ ಇತ್ಯಾದಿಗಳಂತೆ ಪ್ರೀತಿಯೂ ಕೂಡಾ.

ಮೋಹ, ಕಾಮ, ವ್ಯಾಮೋಹ, ಇಷ್ಟ ಇತ್ಯಾದಿಗಳನ್ನೆಲ್ಲಾ ಪ್ರೀತಿ ಎಂದುಕೊಂಡುಬಿಡುವ ಉದಾಹರಣೆಗಳಿವೆ. ಹಾಗೆಯೇ ಪ್ರೀತಿಯೆಂದುಕೊಂಡು ವ್ಯಕ್ತಿಗೋ, ಸಿದ್ಧಾಂತಕ್ಕೋ ಅಥವಾ ಇನ್ನಾವುದಕ್ಕೋ ಅಂಟಿಕೊಂಡು ಅದು ಗೀಳಾಗಿ ಮನೋರೋಗವಾಗಿವೆ. ನಾನು ಪ್ರೀತಿಸುತ್ತೇನೆ ಎಂದು ವ್ಯಕ್ತಿಯನ್ನು ಬಂಧನದಲ್ಲಿಟ್ಟುಕೊಂಡು ಪೆÇಸೆಸ್ಸಿವ್ ಆಗಿರುವುದನ್ನು ಕಂಡಿದ್ದೇವೆ.

ಹಾಗಾದರೆ ಪ್ರೇಮವೆಂದರೆ ಏನು? ವ್ಯಾಖ್ಯಾನಕ್ಕೆ ಮೀರಿದ್ದು ಅಂತ ಉನ್ನತೀಕರಿಸಿ, ಅರಿಯುವ ಬದಲು ಅಪಾರ್ಥದಲ್ಲೇ ಬೆಚ್ಚಗಿಟ್ಟುಕೊಳ್ಳುವ ಧೋರಣೆಯಿಂದ ಪ್ರೀತಿ ಉನ್ನತ ಕ್ಲೀಷೆಯಾಗಿ ಪರಿಣಮಿಸಿದೆ. ಅದಕ್ಕಾಗಿಯೇ ಪ್ರೀತಿಯ ಬಗ್ಗೆ ಎರಿಕ್ ಫ್ರಾಂ ಅಚ್ಚುಕಟ್ಟಾಗಿ ಅರಿವಿನ ಒಳನೋಟವನ್ನು ಕೊಡಲು ತನ್ನ ಆರ್ಟ್ ಆಫ್ ಲವ್ಹಿಂಗ್ (1956) ಪುಸ್ತಕದಲ್ಲಿ ಪ್ರಯತ್ನಿಸಿದ್ದಾರೆ.

ಪ್ರೀತಿ ಎಂಬ ಪರಿಕಲ್ಪನೆಯನ್ನು ಬರೀ ಗಂಡುಹೆಣ್ಣುಗಳ ನಡುವಿನ ಆಕರ್ಷಣೆಯಿಂದ ಬಿಡುಗಡೆಗೊಳಿಸಿ ಉದಾತ್ತಗೊಳಿಸಿದ ಕೀರ್ತಿ ಯೇಸುಕ್ರಿಸ್ತನಿಗೇ ಸಲ್ಲುತ್ತದೆ. ಅವನಿಗೂ ಮುನ್ನ ಭಾರತೀಯ ಮತ್ತು ಇತರ ತತ್ವಶಾಸ್ತ್ರ ಮತ್ತು ಪುರಾಣಗಳಲ್ಲಿ ಕಾಮ ಮತ್ತು ನಿಷ್ಕಾಮವನ್ನು, ಪ್ರೇಮಿಗಳ ಪ್ರೇಮ, ಇತರ ಸಂಬಂಧಗಳೊಡನೆ ವಾತ್ಸಲ್ಯ ಅಥವಾ ವ್ಯಾಮೋಹ ನೋಡಬಹುದಿತ್ತು. ವಾತ್ಸಾಯನನ ಕಾಮಶಾಸ್ತ್ರದಲ್ಲಿ ಕಾಮದಾನಂದ ಪಡೆಯಬೇಕಾದರೆ ಸಂಗಾತಿಗಳು ಪರಸ್ಪರ ಇರಬೇಕಾಗಿರುವ ಧೋರಣೆಯನ್ನು ವಿವರಿಸುತ್ತಾನೆ. ಆದರೆ ಅನಿರ್ಬಂಧಿತ ಅಥವಾ ಕಟ್ಟಳೆಗಳಿಲ್ಲದ ಪ್ರೇಮದ ಪಾಠ ಆಗಿದ್ದು ಕ್ರಿಸ್ತನಿಂದ. ಅದನ್ನೇ ಮುಂದುವರಿಸಿ ಮನಶಾಸ್ತ್ರಜ್ಞನೂ ಮತ್ತು ಸಮಾಜ ತತ್ವಜ್ಞಾನಿಯೂ ಆದ ಎರಿಕ್ ಫ್ರಾಂ ಮನೋವೈಜ್ಞಾನಿಕವಾಗಿ ಸಾಮಾಜಿಕ ವರ್ತನಾ ಶಾಸ್ತ್ರದಲ್ಲಿ ಹೇಳುತ್ತಾರೆ.

ಎರಿಕ್ ಪ್ರೀತಿಸುವ ಕಲೆಯನ್ನು ಹೇಳಿಕೊಡುವ ಮುನ್ನ ಪ್ರೀತಿಸುವುದರಲ್ಲಿರುವ ಸಮಸ್ಯೆಗಳನ್ನು ಮೊದಲು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಹೌದು, ಪ್ರೀತಿಸಲ್ಪಡುವ ಆನಂದಕ್ಕೆ ಆಸೆಪಟ್ಟು ಪ್ರೀತಿಸುವ ಕಲೆಯನ್ನು ಉಪೇಕ್ಷಿಸಿಬಿಡುತ್ತಾರೆ. ಬೇರೆ ಜೀವನಕ್ಕೆ ಅಗತ್ಯವಿರುವ ಎಷ್ಟೋ ವಿದ್ಯೆಗಳನ್ನು ಕಲಿಯುತ್ತಾ ಪ್ರೀತಿಸುವ ಕಲೆಯನ್ನು ಕಲಿಯಲು ಸಮಯ ಕೊಡುವುದಿಲ್ಲ. ಪ್ರೀತಿಸುವುದು (ಸಿನಿಮಾಗಳಲ್ಲಿ ತೋರಿಸುವಂತೆ) ಬಹಳ ಕಷ್ಟ, ತುಂಬಾ ಒದ್ದಾಡಿ ಹೋರಾಡಿದ ಮೇಲೆ ಕೊನೆಗೆ ಪ್ರೇಮಿಗಳು ಒಂದಾಗುತ್ತಾರೆ ಎಂಬ ಮನಸ್ಥಿತಿ.

ನಿಜವಾದ ಪ್ರೇಮದಲ್ಲಿ ಬೀಳುವುದಲ್ಲ, (ಫಾಲಿಂಗ್ ಇನ್ ಲವ್ಹ್) ಬದಲಾಗಿ ಹೇಗೆ ಪ್ರೇಮದಲ್ಲಿ ತೊಡಗಿಸಿಕೊಳ್ಳುವುದು ಎಂಬುದನ್ನು ನೋಡಬೇಕೆನ್ನುತ್ತಾರೆ. ಇದು ಸುಲಭವಲ್ಲ ನಿಜ. ಆದರೆ, ಇದು ಅಸ್ತಿತ್ವದ ಅರ್ಥವನ್ನು ಅನಾವರಣ ಮಾಡುತ್ತಾ ಮಾನವ ಬದುಕಿನ ಸಮಸ್ಯೆಗಳನ್ನು ಬಗೆಹರಿಸುತ್ತಾ ತೃಪ್ತ ಮತ್ತು ಸ್ವಾಸ್ಥ ಮನಸ್ಸನ್ನು ದೃಢಗೊಳಿಸುತ್ತದೆ. ಇನ್ನೇನು ಬೇಕು?

ಪ್ರೇಮ ಜೀವನಪೂರ್ತಿ ತೊಡಗಿಸಿಕೊಳ್ಳಬೇಕಾಗಿರುವ ಸೃಜನಶೀಲ ಯೋಜನೆ ಎನ್ನುವ ಎರಿಕ್ ಫ್ರಾಂ ‘ಪ್ರೀತಿಸುವುದ ತಿಳಿಯದೇ ಪ್ರೀತಿಗೊಳಗಾಗುವ ಆತುರ ನಮ್ಮ ಪ್ರೀತಿಪಾತ್ರರನ್ನು ಹೇಗೆ ನೋಯಿಸುತ್ತದೆ’ ಎಂದು ವಿವರಿಸುತ್ತಾರೆ. ಸೋದರ ಪ್ರೇಮ, ಕುಟುಂಬ ಪ್ರೇಮ, ಸತಿ ಪತಿ ಪ್ರೇಮ ಇತ್ಯಾದಿಗಳೆಲ್ಲವೂ ಒಂದೇ ಪ್ರೇಮದ ಒಂದೇ ಮೂಲವನ್ನು ಹೊಂದಿದ್ದು ವಿವಿಧ ಹೊಣೆಗಾರಿಕೆ ಮತ್ತು ಅಭಿವ್ಯಕ್ತತೆಗಳಿಂದ ಬೇರೆಯಾಗಿ ತೋರುತ್ತದೆ ಎಂದು ವಿವರಿಸುತ್ತಾರೆ.

ಅಪ್ರಬುದ್ಧ ಪ್ರೇಮ ಹೇಳುವುದೇನೆಂದರೆ, ಗಿವ್ ರೆಸ್ಪೆಕ್ಟ್ ಟೇಕ್ ರೆಸ್ಪೆಕ್ಟ್ ತರ, ನನ್ನ ಪ್ರೀತಿಸಿದರೆ ನಾನು ಪ್ರೀತಿಸುತ್ತೇನೆ ಎಂದು. ಆದರೆ ಪಕ್ವವಾದ ಪ್ರೇಮವು ತನಗೆ ಪ್ರೀತಿಸಲು ಸಾಧ್ಯ, ಪ್ರೀತಿಸುತ್ತೇನೆ’ ಎಂಬುದು.

ಪ್ರೇಮವೆಂಬುದು ಇದ್ದಕ್ಕಿದ್ದಂತೆ ಆಗಿಬಿಡುವುದಲ್ಲ. ಅದೊಂದು ಗ್ರಹಿಕೆ, ತಿಳಿವಳಿಕೆ ಮತ್ತು ತರಬೇತಿಗಳ ಪ್ರಕ್ರಿಯೆಯ ಮನೋಭಾವದ ರೂಪ. ಆದ್ದರಿಂದಲೇ ಸಂಗೀತ, ನೃತ್ಯ, ವಿಜ್ಞಾನಗಳನ್ನೆಲ್ಲಾ ಕಲಿಯುವಂತೆ ಪ್ರೀತಿಸುವುದನ್ನೂ ಪ್ರಜ್ಞಾಪೂರ್ವಕವಾಗಿ ಕಲಿಯಬೇಕು ಎನ್ನುತ್ತಾರೆ.

ಪ್ರೇಮವೆಂಬುದು ನಿರ್ದಿಷ್ಟ ವ್ಯಕ್ತಿಯೊಂದಿಗೆ ನಾವು ಹೊಂದುವ ಸಂಬಂಧದ ತೀವ್ರ ಪ್ರಭಾವವೋ, ಭಾವ ತೀವ್ರತೆಯೋ ಖಂಡಿತ ಅಲ್ಲ. ಬದಲಾಗಿ ಅದೊಂದು ಧೋರಣೆ ಅಥವಾ ದೃಷ್ಟಿ.

ಒಟ್ಟಾರೆ ಪ್ರೀತಿಯೆಂಬುದು ವ್ಯವಹಾರವಲ್ಲ, ವ್ಯಸನವಲ್ಲ. ಜೀವನಶಕ್ತಿ.
ಒಟ್ಟಾರೆ ಒಲವೇಜೀವನ ಸಾಕ್ಷಾತ್ಕಾರ. ಹೇಗೆ? ಓದಿ, ಪ್ರೀತಿಸುವ ಕಲೆ. ಕನ್ನಡದಲ್ಲಿಯೂ ಅನುವಾದವಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...