Homeಅಂಕಣಗಳುಯತ್ನಾಳಶಾಹಿಯ ಚದುರಂಗದಾಟ

ಯತ್ನಾಳಶಾಹಿಯ ಚದುರಂಗದಾಟ

- Advertisement -
- Advertisement -

ಮನ್ನೆ ಏನಾತಪಾ ಅಂದರ ನಮ್ಮ ಬಿಜಾಪುರದ ಬಸನಗೌಡರು ಜನಪರ ಹೋರಾಟಗಾರ ಹಾಗೂ ಸ್ವಾತಂತ್ರ್ಯ ಸೇನಾನಿ ದೊರೆಸ್ವಾಮಿ ಅವರ ಬಗ್ಗೆ ಅಪದ್ಧ ಅಪದ್ಧ ಮಾತಾಡ್ಯಾರ.

ಯತ್ನಾಳಗೌಡರು ದೊರೆಸ್ವಾಮಿ ಅವರನ್ನ ಪಾಕಿಸ್ತಾನದ ಏಜಂಟ ಅಂತ ಕರದಾರ. ನಕಲಿ ದೇಶಭಕ್ತ ಅಂತ ಹೆಸರು ಇಟ್ಟಾರ. “ಅವರೇನು ಸಾವರಕರನ ಗತೆ ದೇಶಪ್ರೇಮಿನಾ? ಬ್ರಿಟಿಷರ ಲಾಠಿ ಏಟು ತಿಂದಾರ?” ಅಂತ ಕೇಳ್ಯಾರ. ಇದು ಬರೇ ಒಬ್ಬ ಎಮ್ಮೆಲ್ಲೇ ಒಬ್ಬ ಹಿರಿಯ ಹೋರಾಟಗಾರರ ಬಗ್ಗೆ ಬಡಬಡಿಸಿದ್ದು ಅಂತ ತಿಳಕೋಬ್ಯಾಡ್ರಿ. ಅದು ಅಷ್ಟ ಸಿಂಪಲ್ಲಾದ ವಿಷಯ ಅಲ್ಲ. ಇದು ಇಲ್ಲಿಗೇ ಮುಗಿಯಂಗಿಲ್ಲ. ಇದು ಈಗ ಸುರು ಆಗೇದ. ದೊರೆಸ್ವಾಮಿಯವರನ್ನೇ ಬಿಡಲಾರದವರು ಇನ್ನು ಮತ್ತ ಯಾರನ್ನು ಬಿಟ್ಟಾರು? ಹಳ್ಳಿ ಊರಾಗ ಗೌಡನ ಕಪಾಳಕ್ಕ ಹೊಡೆದ ಹುಡುಗಾ ಉಳಿದವರನ್ನ ಬರೇ ಬೆದರಿಕೆಯಿಂದಲೇ ಮುಗಿಸಿಬಿಟ್ಟನಂತ, ಹಂಗಾತು ಇದು ಕತಿ.

ಉಪಚುನಾವಣೆಯೊಳಗ ಮಹಿಳಾ ಶಾಸಕಿಯೊಬ್ಬರನ್ನ ಹಂಗಿಸಲಿಕ್ಕೆ ಯತ್ನಾಳರು ಒಂದು ಕುಚೋದ್ಯ ಮಾಡತಿದ್ದರು. ಅವರು ಏನು ಮಾಡ್ಯಾರ? ಡ್ಯಾಶ್ -ಡ್ಯಾಶ್. ಇವರೇನು ಮಾಡ್ಯಾರ? ಡ್ಯಾಶ್- ಡ್ಯಾಶ್ ಅಂತ ಹೋದಲ್ಲೆ – ಬಂದಲ್ಲೆ ಭಾಷಣ ಮಾಡತಿದ್ದರು. ಅದರ ಹಂಗನ ಇದು ಬರೇ ಟಿಆರ್‍ಪಿ ಸಲುವಾಗಿ ಮಾಡಿದ ಡ್ಯಾಶ್ ಡ್ಯಾಶ್ ಭಾಷಣ ಅಂತ ತಿಳಕೋಬ್ಯಾಡ್ರಿ ಮತ್ತ.

ಇದು ಒಂದು ವೈರಲ್ ಆಗುವ ಸಾಧ್ಯತೆ ಇರುವ ರೋಗ. ಎಲ್ಲಾ ಉದಾರವಾದಿಗಳನ್ನ, ಪ್ರಗತಿಪರರನ್ನ, ಕೆಳಗಿನವರನ್ನ ಮ್ಯಾಲೆ ಎತ್ತಲಿಕ್ಕೆ ಕೈ ಎತ್ತಿದವರನ್ನ ಸಂಶಯದಿಂದ ನೋಡೋ ಜಡ್ಡು. ಈಗ ನಮ್ಮ ಭವ್ಯ ಭಾರತದಾಗ ಈ ಗುಮಾನಿಯ ರೋಗ ಸುರು ಆಗೇದ. ಅದು ಕೊರೋನಾ ವೈರಸ್ಸಿಗಿಂತ ಅಪಾಯಕಾರಿ. ಆಳುವ ಪಕ್ಷದವರನ್ನ, ಅಧಿಕಾರಶಾಹಿಯನ್ನ, ಯಾರೋ ಒಬ್ಬ ಜನಪ್ರಿಯ ನಾಯಕನನ್ನ ವಿರೋಧ ಮಾಡೋದನ್ನ ದೇಶದ್ರೋಹ ಅಂತ ಥೂತ್ಕರಿಸೋ ಅಸಹ್ಯವಾದ ಆಟ ಈಗ ಸುರು ಆಗೇದ. ಇದು ಯತ್ನಾಳ ಒಬ್ಬರ ಮಾತಲ್ಲ. ಅವರು ಈ ಚದುರಂಗದ ಆಟದಾಗ ಒಬ್ಬ ಬಡ ಪ್ಯಾದೆ ಅಷ್ಟ. ಇವು ಯತ್ನಾಳಶಾಹಿ ದಿನಗಳು. ಎಲ್ಲ ನಾಗರಿಕರನ್ನ ಪೇದೆಗಳನ್ನಾಗಿ ಮಾಡಿ, ಕೆಲವು ಪೇದೆಗಳನ್ನ ರಾಜರನ್ನಾಗಿ ಮಾಡಿ ಆಟ ಮುಗಿಸೋ ಮಂತ್ರಿಗಳ ಷಡ್ಯಂತ್ರ.

ಇಲ್ಲೆ ವ್ಯವಸ್ಥೆಯ ವಿರುದ್ಧ ಮಾತಾಡುವ -ಹೋರಾಟಗಾರರು, ಸಾಹಿತಿಗಳು, ಚಿಂತಕರು, ಕಲಾವಿದರು, ಶಿಲ್ಪಿ, ನಾಟಕಕಾರರು, ಚಿತ್ರಕತೆಗಾರರು, ನಟ-ನಟಿಯರು, ನಿರ್ದೇಶಕರು – ಯಾರನ್ನೂ ಸಹಿಸಲಾರದ ಮನಸ್ಥಿತಿ ತಯಾರಾಗಲಿಕ್ಕೆ ಹತ್ತೇದ. ಈ ಪಟ್ಟಿ ಬೆಳಕೋತ ಹೋಗತದ. ಇದು ಯಾವುದೇ ಹೊಸ ವಿಷಯವನ್ನ ಮಾತಾಡುವ, ಪ್ರಚಾರ ಮಾಡುವ- ತಿಳಿ ಹೇಳುವ ಯಾರನ್ನೂ ಸಹಿಸಲಾರದು. ಅವರನ್ನ ಅವಮಾನ ಮಾಡಿ, ಅವರಿಗೆ, ಅವರ ವ್ಯಕ್ತಿತ್ವಕ್ಕ, ಅವರ ವಿಚಾರಕ್ಕ ಕಿಮ್ಮತ್ತು ಇಲ್ಲಾ ಅನ್ನೋ ಹಂಗ ಮಾಡಿ ಅವರನ್ನ ಜನರ ಮನಸ್ಸಿನಿಂದಾ ದೂರ ಸರಿಸಿ ಬಿಡೋ ಸಂಚು ಇದು. ಯಾರಿಗೆ ತಮ್ಮ ಬಲದ ಬಗ್ಗೆ, ಜಾಣತನದ ಬಗ್ಗೆ ಸಂಶಯ ಇರತದೋ ಅವರು ಇತರರ ಮೌಲ್ಯಗಳ ಬಗ್ಗೆ, ಸಂಶಯ ವ್ಯಕ್ತಪಡಿಸತಾರ. ದೊಡ್ಡ ದೊಡ್ಡ ಸ್ಥಾನದಾಗ ಇರೋವರು ಇಂಥಾ ಮಾತಾಡಲಿಕ್ಕೆ ಹತ್ತಿದಾಗ ಸಣ್ಣ ವಯಸ್ಸಿನ ಹುಡುಗರು, ಕುರುಡ ಬೆಂಬಲಿಗರು ಹೌದು ಹೌದು ಅಂತ ಚಪ್ಪಾಳೆ ತಟ್ಟತಾರ. ಅವಕಾಶ ಸಿಕ್ಕರ ಈ ವಿಚಾರಗಳನ್ನ ಹಿಂಸೆಯಿಂದ ಎದುರಿಸಲಿಕ್ಕೂ ತಯಾರಾಗತಾರ. ಅದಕ್ಕ ಮಹಾತ್ಯಾಗ ಅನ್ನೋ ಹೆಸರು ಕೊಡತಾರ.

ಎಲ್ಲ ಕಡೆಯಿಂದ ಉದಾರ ವಿಚಾರ ಬರೋದನ್ನ ನಿಲ್ಲಿಸಬೇಕು, ಬರೇ ನಮ್ಮ ವಿಚಾರ ತುಂಬಿ ತುಳುಕಬೇಕು ಅಂಥೇಳಿ ಅಡ್ನಾಡಿ ಪ್ರಯತ್ನ ಮಾಡತಾರ. ಅದಕ್ಕ ಎಲ್ಲಾ ವಿಶ್ವವಿದ್ಯಾಲಯದಾಗೂ ‘ನಮ್ಮ ವಿಚಾರದ ಜನಾ ಇರಬೇಕು’ ಅನ್ನೋದರ ಮ್ಯಾಲೆ ನೇಮಕಾತಿ ಆಗ್ಯಾವು. ಆ ಮನುಷ್ಯ ಆ ಕೆಲಸಕ್ಕ ಯೋಗ್ಯ ಇದ್ದಾನೋ ಇಲ್ಲವೋ ಅನ್ನೋದರ ಬಗ್ಗೆ ಯಾರೂ ವಿಚಾರ ಮಾಡಲಿಕ್ಕೆ ಹತ್ತಿಲ್ಲ.

ಎಲ್ಲ ಪ್ರಗತಿಪರರನ್ನ, ಮುಂದಾಲೋಚನೆ ಉಳ್ಳವರನ್ನ, ಸಮಾನತಾವಾದಿಗಳನ್ನ, ವೈಜ್ಞಾನಿಕ ಮನೋಭಾವ ಇದ್ದವರನ್ನ, ಕಮ್ಯುನಿಸ್ಟ ಅಂತನೋ, ದೇಶದ್ರೋಹಿ ಅಂತನೋ, ವೈರಿದೇಶದ ಏಜೆಂಟ ಅಂತನೋ ಪಟ್ಟ ಕಟ್ಟಿ ಬಿಡುವುದು ಸಹಜ ಆಗೇತಿ. ಇದು ಭಯಂಕರ ಅಪಾಯಕಾರಿ. ಇದನ್ನ ತಲಿ ಸಮಾ ಇರೋರೆಲ್ಲಾ ವಿರೋಧಿಸಬೇಕು. ಮೂರ್ಖರ ರಾಜ್ಯದಾಗ ಬುದ್ಧಿವಂತರಾಗಿರೋದು ತಪ್ಪು ಅಂತಂತಾರ ಖರೆ. ಆದರೆ ಸುತ್ತಲಿನ ಮೂರ್ಖರ ಹುಚ್ಚುತನ ನೋಡಿಕೊಂಡು ಸುಮ್ಮನಿದ್ದರ ಅವರಿಗೂ ಇವರಿಗೂ ಏನೂ ವ್ಯತ್ಯಾಸ ಉಳಿಯಂಗಿಲ್ಲ. ಇಷ್ಟೇಲ್ಲಾ ರಾಜಾರೋಷವಾಗಿ ನಡೀಲಿಕ್ಕೆ ಹತ್ತಿದಾಗ ಇವರೆಲ್ಲಾ ಹೆಂಗ ಸುಮ್ಮನಿದ್ದರು, ಅಂತ ನಾಳೆ ಹುಟ್ಟುವವರು ತಮ್ಮ ಹಿರಿಯರನ್ನ ಆಡಿಕೊಳ್ಳೋಹಂಗಾಗತದ.

ಸುಳ್ಳು ಅನ್ನೋದು ಸೆರಗಿನ್ಯಾಗಿನ ಕೆಂಡ. ಅದನ್ನ ಕಟ್ಟಿಕೊಂಡು ಯತ್ನಾಳಶಾಹಿ ಅಪಾಯಕಾರಿ ಆಟ ಆಡಲಿಕ್ಕೆ ಹತ್ತೇದ. ಬ್ಯಾರೆಯವರ ಮನಿಗೆ ಬೆಂಕಿ ಹಚ್ಚಲಿಕ್ಕೆ ನಾವು ಅದನ್ನು ಉಪಯೋಗಿಸಬಹುದು. ಆದರ ಅದು ಕಡೀಕೆ ಎಲ್ಲಾರಿಗೂ ಹತ್ತಿಕೊಳ್ಳೋದ. ಇದನ್ನ ತಿಳಕೊಳ್ಳಲಾರದವರು ಹಾಡಾಡಿ ಕುಣೀಲಿಕ್ಕೆ ಹತ್ಯಾರ. ಹಾಡು ಮುಗಿಯೋದರಾಗ ಸೆರಗು ಸುಟ್ಟು ಹೋಗಿರತದ. ಕೆಂಡ ಮೈಗೆಲ್ಲಾ ಮೆತ್ತಿಕೊಂಡಿರತದ. ಅಷ್ಟರಾಗ ಸತ್ಯ ಅನ್ನೋ ತಣ್ಣೀರಿನ ಝರಿ ಯೊಳಗ ಜಿಗೀಬೇಕು. ಎಲ್ಲಾ ಸಮಾ ಆಗೋತನಕಾ ತೇಲಿಕೋತ ಹೋಗಬೇಕು.

ನಮ್ಮ ಇಂದಿನ ಸಂಕಟವನ್ನ, ಅದಕ್ಕ ಉತ್ತರವಾಗಿ ಆಶಾವಾದವನ್ನ ತೋರಿಸೋ ಅಮೀರ ಕಜಲಬಾಷ ಅವರ ಒಂದು ಗಜಲ್ಲಿನ ಸಾಲು ಹಿಂಗವ

ಪೂರ್ತೆ ಹಾಳ ಬಿದ್ದದ ಈ ಊರು
ಇಂಥಾದರಾಗ ಕನ್ನಡಿ ಮಾರಾಕ ಬಂದೇವಲ್ಲಾ,
ನಾವೆಷ್ಟು ಹುಚ್ಚರಿರಬೇಕು ನೋಡು
ಅವರು ನಮ್ಮನ್ನ ಬಿಟ್ಟು ಅಡ್ಯಾಡಿದರೇನಾತು,
ನಾವು-ನಾವ ಭೆಟ್ಟಿ ಆಗಕೋತ ಇರಲಿಕ್ಕೆ,
ಮಾತಾಡಿಕೋತ ಹೋಗಲಿಕ್ಕೆ
ನೆವಾ ಹುಡಕಲಿಕ್ಕೆ ಬಂದೇವೆಲ್ಲಾ
ನಾವೆಷ್ಟು ಹುಚ್ಚರಿರಬೇಕು ನೋಡು
ಆದರ ಕತ್ತಲದಾಗ ಎಷ್ಟು ದಿನಾಂತ ಇರೋದು?
ಒಂದ ಸಣ್ಣ ದೀಪ ಹಚ್ಚಬೇಕೂಂತ ಹೊಂಟೆವೆಲ್ಲಾ
ನಾವು ಎಷ್ಟು ಹುಚ್ಚರಿರಬೇಕು ನೋಡು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...

ಬಿಹಾರದ ನಳಂದ ಜಿಲ್ಲೆಯ ಶೀತ್ಲಾ ದೇವಸ್ಥಾನದಲ್ಲಿ ಕಾಲ್ತುಳಿತ: ಎಂಟು ಮಹಿಳೆಯರು ಸಾವು; ಹಲವು ಮಂದಿಗೆ ಗಾಯ 

ಬಿಹಾರದ ನಳಂದ ಜಿಲ್ಲೆಯ ಶೀತ್ಲಾ ದೇವಸ್ಥಾನದಲ್ಲಿ ಮಂಗಳವಾರ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ ಎಂಟು ಮಹಿಳೆಯರು ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.  ಪೂಜೆಗಾಗಿ ದೇವಾಲಯದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಜಮಾಯಿಸಿದಾಗ ಈ ಘಟನೆ ಸಂಭವಿಸಿದ್ದು,...

ದಲಿತ ಕ್ರೈಸ್ತರ ಎಸ್‌ಸಿ ಸ್ಥಾನಮಾನ ರದ್ದು ಆದೇಶ; ಸುಪ್ರೀಂ ಕೋರ್ಟ್ ತೀರ್ಪು ಖಂಡಿಸಿದ ಮಂದಕೃಷ್ಣ ಮಾದಿಗ

ದಲಿತರು ಕ್ರೈಸ್ತರಾದರೆ ಅವರ ಎಸ್‌ಸಿ ಸ್ಥಾನಮಾನ ರದ್ದುಗೊಳ್ಳಲಿದೆ ಎಂಬ ಸುಪ್ರೀಂ ಕೋರ್ಟ್ ತೀರ್ಪನ್ನು ಬಲವಾಗಿ ಖಂಡಿಸುತ್ತೇವೆ ಎಂದು ಎಂಆರ್‌ಪಿಎಸ್ ಫೌಂಡೇಶನ್ ಅಧ್ಯಕ್ಷ ಮಂದಕೃಷ್ಣ ಮಾದಿಗ ಹೇಳಿದರು. "ದೇಶದಲ್ಲಿ ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಬೇಕು,...