Homeಅಂಕಣಗಳುಯತ್ನಾಳಶಾಹಿಯ ಚದುರಂಗದಾಟ

ಯತ್ನಾಳಶಾಹಿಯ ಚದುರಂಗದಾಟ

- Advertisement -
- Advertisement -

ಮನ್ನೆ ಏನಾತಪಾ ಅಂದರ ನಮ್ಮ ಬಿಜಾಪುರದ ಬಸನಗೌಡರು ಜನಪರ ಹೋರಾಟಗಾರ ಹಾಗೂ ಸ್ವಾತಂತ್ರ್ಯ ಸೇನಾನಿ ದೊರೆಸ್ವಾಮಿ ಅವರ ಬಗ್ಗೆ ಅಪದ್ಧ ಅಪದ್ಧ ಮಾತಾಡ್ಯಾರ.

ಯತ್ನಾಳಗೌಡರು ದೊರೆಸ್ವಾಮಿ ಅವರನ್ನ ಪಾಕಿಸ್ತಾನದ ಏಜಂಟ ಅಂತ ಕರದಾರ. ನಕಲಿ ದೇಶಭಕ್ತ ಅಂತ ಹೆಸರು ಇಟ್ಟಾರ. “ಅವರೇನು ಸಾವರಕರನ ಗತೆ ದೇಶಪ್ರೇಮಿನಾ? ಬ್ರಿಟಿಷರ ಲಾಠಿ ಏಟು ತಿಂದಾರ?” ಅಂತ ಕೇಳ್ಯಾರ. ಇದು ಬರೇ ಒಬ್ಬ ಎಮ್ಮೆಲ್ಲೇ ಒಬ್ಬ ಹಿರಿಯ ಹೋರಾಟಗಾರರ ಬಗ್ಗೆ ಬಡಬಡಿಸಿದ್ದು ಅಂತ ತಿಳಕೋಬ್ಯಾಡ್ರಿ. ಅದು ಅಷ್ಟ ಸಿಂಪಲ್ಲಾದ ವಿಷಯ ಅಲ್ಲ. ಇದು ಇಲ್ಲಿಗೇ ಮುಗಿಯಂಗಿಲ್ಲ. ಇದು ಈಗ ಸುರು ಆಗೇದ. ದೊರೆಸ್ವಾಮಿಯವರನ್ನೇ ಬಿಡಲಾರದವರು ಇನ್ನು ಮತ್ತ ಯಾರನ್ನು ಬಿಟ್ಟಾರು? ಹಳ್ಳಿ ಊರಾಗ ಗೌಡನ ಕಪಾಳಕ್ಕ ಹೊಡೆದ ಹುಡುಗಾ ಉಳಿದವರನ್ನ ಬರೇ ಬೆದರಿಕೆಯಿಂದಲೇ ಮುಗಿಸಿಬಿಟ್ಟನಂತ, ಹಂಗಾತು ಇದು ಕತಿ.

ಉಪಚುನಾವಣೆಯೊಳಗ ಮಹಿಳಾ ಶಾಸಕಿಯೊಬ್ಬರನ್ನ ಹಂಗಿಸಲಿಕ್ಕೆ ಯತ್ನಾಳರು ಒಂದು ಕುಚೋದ್ಯ ಮಾಡತಿದ್ದರು. ಅವರು ಏನು ಮಾಡ್ಯಾರ? ಡ್ಯಾಶ್ -ಡ್ಯಾಶ್. ಇವರೇನು ಮಾಡ್ಯಾರ? ಡ್ಯಾಶ್- ಡ್ಯಾಶ್ ಅಂತ ಹೋದಲ್ಲೆ – ಬಂದಲ್ಲೆ ಭಾಷಣ ಮಾಡತಿದ್ದರು. ಅದರ ಹಂಗನ ಇದು ಬರೇ ಟಿಆರ್‍ಪಿ ಸಲುವಾಗಿ ಮಾಡಿದ ಡ್ಯಾಶ್ ಡ್ಯಾಶ್ ಭಾಷಣ ಅಂತ ತಿಳಕೋಬ್ಯಾಡ್ರಿ ಮತ್ತ.

ಇದು ಒಂದು ವೈರಲ್ ಆಗುವ ಸಾಧ್ಯತೆ ಇರುವ ರೋಗ. ಎಲ್ಲಾ ಉದಾರವಾದಿಗಳನ್ನ, ಪ್ರಗತಿಪರರನ್ನ, ಕೆಳಗಿನವರನ್ನ ಮ್ಯಾಲೆ ಎತ್ತಲಿಕ್ಕೆ ಕೈ ಎತ್ತಿದವರನ್ನ ಸಂಶಯದಿಂದ ನೋಡೋ ಜಡ್ಡು. ಈಗ ನಮ್ಮ ಭವ್ಯ ಭಾರತದಾಗ ಈ ಗುಮಾನಿಯ ರೋಗ ಸುರು ಆಗೇದ. ಅದು ಕೊರೋನಾ ವೈರಸ್ಸಿಗಿಂತ ಅಪಾಯಕಾರಿ. ಆಳುವ ಪಕ್ಷದವರನ್ನ, ಅಧಿಕಾರಶಾಹಿಯನ್ನ, ಯಾರೋ ಒಬ್ಬ ಜನಪ್ರಿಯ ನಾಯಕನನ್ನ ವಿರೋಧ ಮಾಡೋದನ್ನ ದೇಶದ್ರೋಹ ಅಂತ ಥೂತ್ಕರಿಸೋ ಅಸಹ್ಯವಾದ ಆಟ ಈಗ ಸುರು ಆಗೇದ. ಇದು ಯತ್ನಾಳ ಒಬ್ಬರ ಮಾತಲ್ಲ. ಅವರು ಈ ಚದುರಂಗದ ಆಟದಾಗ ಒಬ್ಬ ಬಡ ಪ್ಯಾದೆ ಅಷ್ಟ. ಇವು ಯತ್ನಾಳಶಾಹಿ ದಿನಗಳು. ಎಲ್ಲ ನಾಗರಿಕರನ್ನ ಪೇದೆಗಳನ್ನಾಗಿ ಮಾಡಿ, ಕೆಲವು ಪೇದೆಗಳನ್ನ ರಾಜರನ್ನಾಗಿ ಮಾಡಿ ಆಟ ಮುಗಿಸೋ ಮಂತ್ರಿಗಳ ಷಡ್ಯಂತ್ರ.

ಇಲ್ಲೆ ವ್ಯವಸ್ಥೆಯ ವಿರುದ್ಧ ಮಾತಾಡುವ -ಹೋರಾಟಗಾರರು, ಸಾಹಿತಿಗಳು, ಚಿಂತಕರು, ಕಲಾವಿದರು, ಶಿಲ್ಪಿ, ನಾಟಕಕಾರರು, ಚಿತ್ರಕತೆಗಾರರು, ನಟ-ನಟಿಯರು, ನಿರ್ದೇಶಕರು – ಯಾರನ್ನೂ ಸಹಿಸಲಾರದ ಮನಸ್ಥಿತಿ ತಯಾರಾಗಲಿಕ್ಕೆ ಹತ್ತೇದ. ಈ ಪಟ್ಟಿ ಬೆಳಕೋತ ಹೋಗತದ. ಇದು ಯಾವುದೇ ಹೊಸ ವಿಷಯವನ್ನ ಮಾತಾಡುವ, ಪ್ರಚಾರ ಮಾಡುವ- ತಿಳಿ ಹೇಳುವ ಯಾರನ್ನೂ ಸಹಿಸಲಾರದು. ಅವರನ್ನ ಅವಮಾನ ಮಾಡಿ, ಅವರಿಗೆ, ಅವರ ವ್ಯಕ್ತಿತ್ವಕ್ಕ, ಅವರ ವಿಚಾರಕ್ಕ ಕಿಮ್ಮತ್ತು ಇಲ್ಲಾ ಅನ್ನೋ ಹಂಗ ಮಾಡಿ ಅವರನ್ನ ಜನರ ಮನಸ್ಸಿನಿಂದಾ ದೂರ ಸರಿಸಿ ಬಿಡೋ ಸಂಚು ಇದು. ಯಾರಿಗೆ ತಮ್ಮ ಬಲದ ಬಗ್ಗೆ, ಜಾಣತನದ ಬಗ್ಗೆ ಸಂಶಯ ಇರತದೋ ಅವರು ಇತರರ ಮೌಲ್ಯಗಳ ಬಗ್ಗೆ, ಸಂಶಯ ವ್ಯಕ್ತಪಡಿಸತಾರ. ದೊಡ್ಡ ದೊಡ್ಡ ಸ್ಥಾನದಾಗ ಇರೋವರು ಇಂಥಾ ಮಾತಾಡಲಿಕ್ಕೆ ಹತ್ತಿದಾಗ ಸಣ್ಣ ವಯಸ್ಸಿನ ಹುಡುಗರು, ಕುರುಡ ಬೆಂಬಲಿಗರು ಹೌದು ಹೌದು ಅಂತ ಚಪ್ಪಾಳೆ ತಟ್ಟತಾರ. ಅವಕಾಶ ಸಿಕ್ಕರ ಈ ವಿಚಾರಗಳನ್ನ ಹಿಂಸೆಯಿಂದ ಎದುರಿಸಲಿಕ್ಕೂ ತಯಾರಾಗತಾರ. ಅದಕ್ಕ ಮಹಾತ್ಯಾಗ ಅನ್ನೋ ಹೆಸರು ಕೊಡತಾರ.

ಎಲ್ಲ ಕಡೆಯಿಂದ ಉದಾರ ವಿಚಾರ ಬರೋದನ್ನ ನಿಲ್ಲಿಸಬೇಕು, ಬರೇ ನಮ್ಮ ವಿಚಾರ ತುಂಬಿ ತುಳುಕಬೇಕು ಅಂಥೇಳಿ ಅಡ್ನಾಡಿ ಪ್ರಯತ್ನ ಮಾಡತಾರ. ಅದಕ್ಕ ಎಲ್ಲಾ ವಿಶ್ವವಿದ್ಯಾಲಯದಾಗೂ ‘ನಮ್ಮ ವಿಚಾರದ ಜನಾ ಇರಬೇಕು’ ಅನ್ನೋದರ ಮ್ಯಾಲೆ ನೇಮಕಾತಿ ಆಗ್ಯಾವು. ಆ ಮನುಷ್ಯ ಆ ಕೆಲಸಕ್ಕ ಯೋಗ್ಯ ಇದ್ದಾನೋ ಇಲ್ಲವೋ ಅನ್ನೋದರ ಬಗ್ಗೆ ಯಾರೂ ವಿಚಾರ ಮಾಡಲಿಕ್ಕೆ ಹತ್ತಿಲ್ಲ.

ಎಲ್ಲ ಪ್ರಗತಿಪರರನ್ನ, ಮುಂದಾಲೋಚನೆ ಉಳ್ಳವರನ್ನ, ಸಮಾನತಾವಾದಿಗಳನ್ನ, ವೈಜ್ಞಾನಿಕ ಮನೋಭಾವ ಇದ್ದವರನ್ನ, ಕಮ್ಯುನಿಸ್ಟ ಅಂತನೋ, ದೇಶದ್ರೋಹಿ ಅಂತನೋ, ವೈರಿದೇಶದ ಏಜೆಂಟ ಅಂತನೋ ಪಟ್ಟ ಕಟ್ಟಿ ಬಿಡುವುದು ಸಹಜ ಆಗೇತಿ. ಇದು ಭಯಂಕರ ಅಪಾಯಕಾರಿ. ಇದನ್ನ ತಲಿ ಸಮಾ ಇರೋರೆಲ್ಲಾ ವಿರೋಧಿಸಬೇಕು. ಮೂರ್ಖರ ರಾಜ್ಯದಾಗ ಬುದ್ಧಿವಂತರಾಗಿರೋದು ತಪ್ಪು ಅಂತಂತಾರ ಖರೆ. ಆದರೆ ಸುತ್ತಲಿನ ಮೂರ್ಖರ ಹುಚ್ಚುತನ ನೋಡಿಕೊಂಡು ಸುಮ್ಮನಿದ್ದರ ಅವರಿಗೂ ಇವರಿಗೂ ಏನೂ ವ್ಯತ್ಯಾಸ ಉಳಿಯಂಗಿಲ್ಲ. ಇಷ್ಟೇಲ್ಲಾ ರಾಜಾರೋಷವಾಗಿ ನಡೀಲಿಕ್ಕೆ ಹತ್ತಿದಾಗ ಇವರೆಲ್ಲಾ ಹೆಂಗ ಸುಮ್ಮನಿದ್ದರು, ಅಂತ ನಾಳೆ ಹುಟ್ಟುವವರು ತಮ್ಮ ಹಿರಿಯರನ್ನ ಆಡಿಕೊಳ್ಳೋಹಂಗಾಗತದ.

ಸುಳ್ಳು ಅನ್ನೋದು ಸೆರಗಿನ್ಯಾಗಿನ ಕೆಂಡ. ಅದನ್ನ ಕಟ್ಟಿಕೊಂಡು ಯತ್ನಾಳಶಾಹಿ ಅಪಾಯಕಾರಿ ಆಟ ಆಡಲಿಕ್ಕೆ ಹತ್ತೇದ. ಬ್ಯಾರೆಯವರ ಮನಿಗೆ ಬೆಂಕಿ ಹಚ್ಚಲಿಕ್ಕೆ ನಾವು ಅದನ್ನು ಉಪಯೋಗಿಸಬಹುದು. ಆದರ ಅದು ಕಡೀಕೆ ಎಲ್ಲಾರಿಗೂ ಹತ್ತಿಕೊಳ್ಳೋದ. ಇದನ್ನ ತಿಳಕೊಳ್ಳಲಾರದವರು ಹಾಡಾಡಿ ಕುಣೀಲಿಕ್ಕೆ ಹತ್ಯಾರ. ಹಾಡು ಮುಗಿಯೋದರಾಗ ಸೆರಗು ಸುಟ್ಟು ಹೋಗಿರತದ. ಕೆಂಡ ಮೈಗೆಲ್ಲಾ ಮೆತ್ತಿಕೊಂಡಿರತದ. ಅಷ್ಟರಾಗ ಸತ್ಯ ಅನ್ನೋ ತಣ್ಣೀರಿನ ಝರಿ ಯೊಳಗ ಜಿಗೀಬೇಕು. ಎಲ್ಲಾ ಸಮಾ ಆಗೋತನಕಾ ತೇಲಿಕೋತ ಹೋಗಬೇಕು.

ನಮ್ಮ ಇಂದಿನ ಸಂಕಟವನ್ನ, ಅದಕ್ಕ ಉತ್ತರವಾಗಿ ಆಶಾವಾದವನ್ನ ತೋರಿಸೋ ಅಮೀರ ಕಜಲಬಾಷ ಅವರ ಒಂದು ಗಜಲ್ಲಿನ ಸಾಲು ಹಿಂಗವ

ಪೂರ್ತೆ ಹಾಳ ಬಿದ್ದದ ಈ ಊರು
ಇಂಥಾದರಾಗ ಕನ್ನಡಿ ಮಾರಾಕ ಬಂದೇವಲ್ಲಾ,
ನಾವೆಷ್ಟು ಹುಚ್ಚರಿರಬೇಕು ನೋಡು
ಅವರು ನಮ್ಮನ್ನ ಬಿಟ್ಟು ಅಡ್ಯಾಡಿದರೇನಾತು,
ನಾವು-ನಾವ ಭೆಟ್ಟಿ ಆಗಕೋತ ಇರಲಿಕ್ಕೆ,
ಮಾತಾಡಿಕೋತ ಹೋಗಲಿಕ್ಕೆ
ನೆವಾ ಹುಡಕಲಿಕ್ಕೆ ಬಂದೇವೆಲ್ಲಾ
ನಾವೆಷ್ಟು ಹುಚ್ಚರಿರಬೇಕು ನೋಡು
ಆದರ ಕತ್ತಲದಾಗ ಎಷ್ಟು ದಿನಾಂತ ಇರೋದು?
ಒಂದ ಸಣ್ಣ ದೀಪ ಹಚ್ಚಬೇಕೂಂತ ಹೊಂಟೆವೆಲ್ಲಾ
ನಾವು ಎಷ್ಟು ಹುಚ್ಚರಿರಬೇಕು ನೋಡು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...