Homeಅಂಕಣಗಳುಬಹುಜನ ಭಾರತ; ಫಿರೋಜ್ ಗಾಂಧೀ ಎಂಬ ನೆಹರೂ ಅಳಿಯ ಹೀಗಿದ್ದರು...

ಬಹುಜನ ಭಾರತ; ಫಿರೋಜ್ ಗಾಂಧೀ ಎಂಬ ನೆಹರೂ ಅಳಿಯ ಹೀಗಿದ್ದರು…

- Advertisement -
- Advertisement -

ಆಗಸ್ಟ್ 20 ದಿವಂಗತ ಪ್ರಧಾನಿ ರಾಜೀವ್ ಗಾಂಧೀ ಅವರು ಹುಟ್ಟಿದ ದಿನ. ಅಲ್ಲಿಂದಾಚೆ ಇಪ್ಪತ್ತು ದಿನಗಳ ಅಂತರದಲ್ಲಿ ಎದುರಾಗುವುದು ಸೆಪ್ಟಂಬರ್ 12. ರಾಜೀವ್ ಅವರ ತಂದೆ ಮತ್ತು ಕಾಂಗ್ರೆಸ್ ಪಕ್ಷದ ಗಣ್ಯ ನಾಯಕರಲ್ಲಿ ಒಬ್ಬರಾಗಿದ್ದ ಫಿರೋಜ್ ಗಾಂಧೀ ಜನಿಸಿದ ದಿನ ಅದು. ಅವರು ಗತಿಸಿದ ದಿನ ಕೂಡ ಸೆಪ್ಟಂಬರ್ ಎಂಟು. ಈ ಎರಡೂ ದಿನಗಳು ವರ್ಷವರ್ಷವೂ ಹೇಳ ಹೆಸರಿಲ್ಲದೆ ಸರಿದುಹೋಗುತ್ತವೆ. ನೆಹರೂ ಅಳಿಯನ ಸರಳ ಸಾರ್ವಜನಿಕ ಸ್ಮರಣೆಯೂ ಕಾಂಗ್ರೆಸ್ಸಿಗೆ ಬೇಕಿಲ್ಲ.

ನೆಹರೂ ಮನೆತನಕ್ಕೆ ಗಾಂಧೀ ಎಂಬ ಕುಲನಾಮ ಅಥವಾ ಕುಟುಂಬನಾಮವು ಬಲು ದೊಡ್ಡ ಆಸ್ತಿ. ಈ ಆಸ್ತಿಯ ಕಾರಣಪುರುಷ ಫಿರೋಜ್ ಗಾಂಧೀ. ಇಂದಿರಾ ಪ್ರಿಯದರ್ಶಿನಿ ಎಂಬ ಗಟ್ಟಿಗಿತ್ತಿ ಇಂದಿರಾಗಾಂಧೀ ಎನಿಸಿಕೊಂಡದ್ದು, ಆಕೆಯ ಮಕ್ಕಳು, ಮೊಮ್ಮಕ್ಕಳಾದ ರಾಜೀವ್, ಸಂಜಯ್, ರಾಹುಲ್, ಪ್ರಿಯಾಂಕಾ, ವರುಣ್, ಸೊಸೆಯಂದಿರಾದ ಸೋನಿಯಾ ಮತ್ತು ಮೇನಕಾ ಅವರು ಹೆಸರುಗಳಿಗೆ ಗಾಂಧೀ ಎಂಬ ಕುಟುಂಬನಾಮ ಸೇರಿಕೊಂಡಿರುವ ಕಾರಣ ಫಿರೋಜ್ ಗಾಂಧಿಯೇ.

ಪಾಕಿಸ್ತಾನದ ಪ್ರಮುಖ ರಾಜಕೀಯ ಕುಟುಂಬದ ಅಳಿಯ ಆಸೀಫ್ ಅಲಿ ಜರ್ದಾರಿ. ಹತ್ಯೆಗೀಡಾಗುವ ಮುನ್ನ ಆ ದೇಶದ ಪ್ರಧಾನಿಯಾಗಿದ್ದ ಬೆನಜೀರ್ ಭುಟ್ಟೋ ಅವರ ಪತಿ. ಬೆನಜೀರ್ ಹತ್ಯೆಯ ನಂತರ ಪಾಕಿಸ್ತಾನದ ಪ್ರಧಾನಿಯಾಗಿ ಮೆರೆದರು. ಚಾಣಾಕ್ಷ ಚಂದ್ರಬಾಬು ನಾಯ್ಡು ಮಗಳ ಕೊಟ್ಟ ಮಾವ ಎನ್.ಟಿ.ಆರ್. ಅವರನ್ನೇ ನುಂಗಿ ನೀರು ಕುಡಿದು ಅಧಿಕಾರದ ಗದ್ದುಗೆಯನ್ನು ಕೈವಶ ಮಾಡಿಕೊಂಡವರು. ಶಿವಸೇನೆಯ ಮನೋಹರ ಜೋಷಿ ಅವರ ರಾಜಕೀಯ ಭವಿಷ್ಯಕ್ಕೆ ಬೆಂಕಿ ಇಕ್ಕಿದ್ದವರು ಅವರ ರಿಯಲ್ ಎಸ್ಟೇಟ್ ಉದ್ಯಮಿ ಆಳಿಯನ ಹೆಸರು ಗಿರೀಶ್ ವ್ಯಾಸ್. ಬಿಜೆಪಿಯ ಅಂತಃಪುರದಲ್ಲಿ ಗುಸುಗುಸುವಿಗೆ ಕಾರಣರಾಗಿದ್ದವರು ಅಟಲ್ ಬಿಹಾರಿ ವಾಜಪೇಯಿ ಅಳಿಯ ರಂಜನ್ ಭಟ್ಟಾಚಾರ್ಯ ಅವರು. ದೇವರಾಜ ಅರಸು ಅವರ ಅಳಿಯ ಎಂ.ಡಿ.ನಟರಾಜ್ ಮತ್ತು ರಾಮಕೃಷ್ಣ ಹೆಗಡೆ ಅಳಿಯ ಮನು ನಿಚ್ಚಾನಿ ಒಂದು ಕಾಲದಲ್ಲಿ ಸುದ್ದಿ ಮಾಡಿದ್ದ ರಾಜಕೀಯ ಕುಟುಂಬಗಳ ಅಳಿಯಂದಿರು. ಸೋನಿಯಾ ಗಾಂಧೀ ಅವರ ಅಳಿಯ ರಾಬರ್ಟ್ ವಾಡ್ರಾ ಅವರೂ ವಿವಾದದ ರಾಡಿ ಎಬ್ಬಿಸಿದ್ದವರೇ.

ಅಳಿಯಂದಿರು ರಾಜಕಾರಣದ ಕನಸು ಕಾಣುವುದನ್ನು ತಪ್ಪೆಂದು ಹೇಳಲಾಗದು. ನೆಲದ ಕಾನೂನೂ ಅದಕ್ಕೆ ಅಡ್ಡಬಾರದು. ಆದರೆ ರಾಜಕೀಯ ಅಧಿಕಾರವು ಉಳ್ಳವರಲ್ಲೇ ಹೆಪ್ಪುಗಟ್ಟಿರುವ ಪರಂಪರೆಯೊಂದು ಈ ದೇಶದಲ್ಲಿದೆ. ದೊಡ್ಡವೂ ಸಣ್ಣವೂ ಸೇರಿ 100-200 ಕುಟುಂಬಗಳೇ ಈ ದೇಶವನ್ನು ಆಳುತ್ತಿವೆ ಎಂಬುದು ಸಮೀಕ್ಷೆಯೊಂದರಿಂದ ಹೊರಬಿದ್ದಿರುವ ಸಂಗತಿ. ಜನತಂತ್ರದ ಹೆಸರಿನಲ್ಲಿ ನಡೆಯುತ್ತಿರುವ ಕುಚೋದ್ಯ. ಬಿಜೆಪಿ ಸೇರಿದಂತೆ ಯಾವ ಪಕ್ಷವೂ ಈ ಮಾತಿಗೆ ಹೊರತಲ್ಲ. ಒಂದು ಪಕ್ಷ ಹೆಚ್ಚು ಅಪರಾಧಿ ಇದ್ದೀತು, ಮತ್ತೊಂದು ಕಡಿಮೆ ಇದ್ದೀತು. ಆದರೆ ಎಲ್ಲ ಪಕ್ಷಗಳೂ ಅಪರಾಧಿಗಳೇ. ಸ್ನಾನದ ಕೋಣೆಯಲ್ಲಿ ಎಲ್ಲರೂ ಬೆತ್ತಲೆ (ಹಮಾಮ್ ಮೇಂ ಸಬ್ ನಂಗಾ) ಎಂಬ ಗಾದೆ ಮಾತಿನಂತೆ.

ವಂಶಪಾರಂಪರ್ಯ ರಾಜಕಾರಣದ ಈ ಅನಿಷ್ಟ ದಿಲ್ಲಿಯಿಂದ ಹಳ್ಳಿಯತನಕ ಬೇರು ಬಿಟ್ಟಿದೆ. ಹೇರಳ ಹಣಗಳಿಸಲು ರಾಜಕಾರಣವೇ ರಾಜಮಾರ್ಗ ಎಂಬುದು ಜನಜನಿತ ಸಂಗತಿ. ಈ ಕಾರಣದಿಂದಾಗಿಯೇ ರಾಜಕಾರಣವು ಕೌಟುಂಬಿಕ ವ್ಯಾಪಾರ-ವ್ಯವಹಾರದ ರೂಪ ತಳೆದಿದೆ.

ಅಳಿಯಂದಿರ ಮಾತಿಗೆ ಮರಳೋಣ. ಮೇಲೆ ಹೇಳಿದ ಅಳಿಯಂದಿರ ಸಾಲಿನಲ್ಲಿ ಭಿನ್ನವಾಗಿ ನಿಲ್ಲುವವರು ಜವಾಹರಲಾಲ್ ನೆಹರೂ ಅವರ ಅಳಿಯ ಫಿರೋಜ್ ಗಾಂಧೀ. ಇಂದಿರಾ ಪ್ರಿಯದರ್ಶಿನಿ ಅವರ ಪತಿ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುತ್ತಾರೆ. 1930ರಲ್ಲಿ ಫೈಜಾಬಾದ್ ಜೈಲಿನಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರೊಂದಿಗೆ 19 ತಿಂಗಳ ಕಾಲ ಜೈಲುವಾಸ ಅನುಭವಿಸಿದ್ದರು (ಯೋಗಿ ಆದಿತ್ಯನಾಥ್ ಸರ್ಕಾರ ಫೈಜಾಬಾದನ್ನು ಅಯೋಧ್ಯೆ ಎಂದು ಮರುನಾಮಕರಣ ಮಾಡಿದೆ). ಇಂದಿರಾ ಪ್ರಿಯದರ್ಶಿನಿ ಅವರೊಡನೆ ವಿವಾಹದ ನಂತರ ಸ್ವತಂತ್ರ ಭಾರತದ ಲೋಕಸಭೆಯ ಸದಸ್ಯರಾಗಿ ಆರಿಸಿ ಬಂದಿದ್ದರು. ನೆಹರೂ ನೇತೃತ್ವದ ಸರ್ಕಾರದ ಹಣಕಾಸು ಮಂತ್ರಿ ಟಿ.ಟಿ.ಕೃಷ್ಣಮಾಚಾರಿ ಅವರ ಮೇಲೆ ಆರ್ಥಿಕ ಅವ್ಯವಹಾರದ ಆಪಾದನೆಗಳನ್ನು ಮಾಡಿ ಅಲ್ಲೋಲಕಲ್ಲೋಲ ಉಂಟು ಮಾಡಿದ್ದರು. ಲೋಕಸಭೆ ಬೆಕ್ಕಸ ಬೆರಗಾಗಿತ್ತು. ಕೃಷ್ಣಮಾಚಾರಿ ಅವರು ರಾಜೀನಾಮೆ ನೀಡಬೇಕಾಗಿ ಬರುತ್ತದೆ.

ಉತ್ತರಪ್ರದೇಶದ ರಾಯಬರೇಲಿಯಿಂದ ಕಾಂಗ್ರೆಸ್ ಸಂಸದನಾಗಿ 1952ರಲ್ಲಿ ಆರಿಸಿ ಬರುವ ಫಿರೋಜ್ ಗಾಂಧೀ ಮೊದಲ ಕೆಲವು ವರ್ಷಗಳ ಕಾಲ ಹಿಂದಿನ ಬೆಂಚಿನ ಸದಸ್ಯರಾಗಿ ಕಾಲ ಕಳೆಯುತ್ತಾರೆ. 1956 ಮತ್ತು 1957ರಲ್ಲಿ ಭ್ರಷ್ಟಾಚಾರ ವಿರೋಧೀ ಆಂದೋಲನದ ಮುಂಚೂಣಿಯಲ್ಲಿ ನಿಲ್ಲುತ್ತಾರೆ.

ಆಗ ತಾನೇ ಕಣ್ಣು ಬಿಟ್ಟಿದ್ದ ಸರ್ಕಾರಿ ಸಂಸ್ಥೆ ಭಾರತೀಯ ಜೀವವಿಮಾ ನಿಗಮ ತನ್ನ ಐವತ್ತೈದು ಲಕ್ಷ ಪಾಲಿಸಿದಾರರ ಹಣದ ದುರುಪಯೋಗದ ಹಗರಣದ ಕೇಂದ್ರಬಿಂದು ಆಗುತ್ತದೆ. ಷೇರು ಮಾರುಕಟ್ಟೆ ಜೂಜು ಷೋಕಿಗೆ ಕುಖ್ಯಾತನಾಗಿದ್ದ ಹರಿದಾಸ್ ಮುಂಧ್ರಾ ಎಂಬಾತನ ಕಂಪನಿಗಳ ಷೇರುಗಳನ್ನು ಮಾರುಕಟ್ಟೆ ದರಕ್ಕಿಂತಲೂ ಹೆಚ್ಚು ದರ ತೆತ್ತು ಖರೀದಿಸಲು ಎಲ್‌ಐಸಿ ಪಾಲಿಸಿದಾರರ ಕಂತುಗಳ ಹಣವಾದ 144 ಲಕ್ಷ ರುಪಾಯಿಯನ್ನು ಬಳಸಲಾಗುತ್ತದೆ.

ಆಡಳಿತ ಪಕ್ಷದ ಸದಸ್ಯನಾಗಿ ಫಿರೋಜ್ ಲೋಕಸಭೆಯಲ್ಲಿ ನಿಂತು ತಮ್ಮ ಮಾವನ ಸರ್ಕಾರದ ಹುಳುಕನ್ನು ಬಯಲಿಗೆಳೆಯುತ್ತಾರೆ. ಈ ಹಗರಣ ಸಾರ್ವಜನಿಕ ಗದ್ದಲ ಆಗುವುದು ನೆಹರೂಗೆ ಬೇಕಿರಲಿಲ್ಲ. ಸರ್ಕಾರದ ವರ್ಚಸ್ಸಿಗೆ ಹೊಡೆತ ಬೀಳುತ್ತದೆಂಬ ಆಶಂಕೆ ಅವರದು. ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಎಂ.ಸಿ.ಛಾಗ್ಲಾ ಬಹಿರಂಗ ಬೈಠಕ್ಕುಗಳಲ್ಲಿ ನಡೆಸುವ ನ್ಯಾಯಾಂಗ ತನಿಖೆಯನ್ನು ನೋಡಲು ಜನ ದೊಡ್ಡ ಸಂಖ್ಯೆಯಲ್ಲಿ ನೆರೆಯುತ್ತಾರೆ. 1958ರಲ್ಲಿ ಹಗರಣದ ಆಪಾದನೆಗಳು ಸಾಬೀತಾಗುತ್ತವೆ. ಅಂದಿನ ಹಣಕಾಸು ಸಚಿವ ಟಿ.ಟಿ.ಕೃಷ್ಣಮಾಚಾರಿ ರಾಜೀನಾಮೆ ಕೊಡಬೇಕಾಗುತ್ತದೆ. ಹರಿದಾಸ್ ಮುಂಧ್ರಾನನ್ನು ದಿಲ್ಲಿಯ ಪ್ರತಿಷ್ಠಿತ ಹೊಟೆಲ್ ಕ್ಲ್ಯಾರಿಡ್ಜಸ್‌ನ ವಿಲಾಸೀ ಕೋಣೆಯಿಂದ ಬಂಧಿಸಿ ಕಾರಾಗೃಹಕ್ಕೆ ಕಳಿಸಲಾಗುತ್ತದೆ.

ಇಂದಿರಾ-ಫಿರೋಜ್ ಬದುಕಿನಲ್ಲಿ ಆ ವೇಳೆಗಾಗಲೇ ಬಿರುಕುಗಳು ಹಿರಿದಾಗಿರುತ್ತವೆ. ಪರಸ್ಪರರ ನಿಷ್ಠೆಯ ಕುರಿತು ಒಡಕು ಮಾತುಗಳು ದಿಲ್ಲಿ ರಾಜಕಾರಣದ ಮೊಗಸಾಲೆಯಲ್ಲಿ ಆ ಹೊತ್ತಿಗಾಗಲೆ ಗಡಚಿಕ್ಕತೊಡಗಿರುತ್ತವೆ. ಫಿರೋಜ್ ಅವರನ್ನು ನೆಹರೂ ಮತ್ತು ಇಂದಿರಾ ದೂರವೇ ಇಟ್ಟಿದ್ದು ಜನಜನಿತ.

ಫಿರೋಜ್ ಗಾಂಧೀ ಹುಟ್ಟಿದ್ದು ಮುಂಬಯಿಯಲ್ಲಿ. 1912ರ ಸೆಪ್ಟಂಬರ್ 12ರಂದು. ಗುಜರಾತೀ ಅಡ್ಡಹೆಸರಿದ್ದ ಜಹಾಂಗೀರ್ ಫೆರಾದೂನ್ ಗಾಂಧೀ ಮತ್ತು ರತ್ತೀಮಾಯಿ ಗಾಂಧೀ ಫಿರೋಜ್ ತಂದೆ ತಾಯಿ. ನಾಲ್ಕು ಮಕ್ಕಳ ತಂದೆ ಫೆರಾದೂನ್ ನೌಕಾವಿಷಯದ ಎಂಜಿನಿಯರ್. ಅಕಾಲ ಮರಣಕ್ಕೆ ತುತ್ತಾಗುತ್ತಾರೆ. ಅನಾಥ ಕುಟುಂಬ ಅಲಹಾಬಾದಿನಲ್ಲಿದ್ದ ಫೆರಾದೂನ್ ಗಾಂಧೀಯ ಚಿಕ್ಕಮ್ಮನ ಆಶ್ರಯಕ್ಕೆ ಸರಿಯುತ್ತದೆ. ಅಲ್ಲಿ ಬೆಳೆಯುವ ಫಿರೋಜ್ ಮತ್ತು ಇಂದಿರಾ ಪ್ರೀತಿಸಿ ಮದುವೆ ಆಗುತ್ತಾರೆ. ಅದು 1942ರ ಮಾರ್ಚ್ 26. ರಾಮನವಮಿಯ ದಿನ. (ಯೋಗಿ ಆದಿತ್ಯನಾಥ್ ಅವರ ಸರ್ಕಾರ ಅಲಹಾಬಾದಿನ ಹೆಸರನ್ನು ಪ್ರಯಾಗರಾಜ ಎಂದು ಬದಲಾಯಿಸಿದೆ).

ಮಹಾತ್ಮಾಗಾಂಧೀ ಮುಂದೆ ನಿಂತು ಈ ಮದುವೆ ಮಾಡಿಸುತ್ತಾರೆ. ಗಾಂಧೀಜಿ ಪ್ರಭಾವಕ್ಕೊಳಗಾಗುವ ಫಿರೋಜ್ ಗಾಂಧೀ ತಮ್ಮ ಕುಲನಾಮದ ಕಾಗುಣಿತವನ್ನು Gandhyಗೆ ಬದಲಾಗಿ Gandhi ಎಂದು ಬದಲಾಯಿಸಿಕೊಳ್ಳುತ್ತಾರೆ.

ಫಿರೋಜ್ ಹೃದಯಾಘಾತದಿಂದ 1960ರ ಸೆಪ್ಟಂಬರ್ ಎಂಟರಂದು ಕಡೆಯುಸಿರೆಳೆಯುತ್ತಾರೆ. ಆಗ ಅವರಿಗೆ ವಯಸ್ಸು 48 ಕೂಡ ಆಗಿರುವುದಿಲ್ಲ. ಮೂರು ದಿನ ಬಾಕಿ ಇರುತ್ತವೆ. ಅವರ ಅಂತ್ಯಸಂಸ್ಕಾರ ಪಾರ್ಸಿ ಮತ್ತು ಹಿಂದೂ ಪದ್ಧತಿಗಳ ಪ್ರಕಾರ ನಡೆಯುತ್ತದೆ. ದಿಲ್ಲಿಯ ನಿಗಮಬೋಧ್ ಘಾಟ್‌ನಲ್ಲಿ ತಂದೆಯ ಚಿತೆಗೆ ಕೊಳ್ಳಿ ತಗುಲಿಸುತ್ತಾರೆ ಎಳೆಯ ರಾಜೀವಗಾಂಧೀ. ಚಿತಾಭಸ್ಮದ ಅರ್ಧದಷ್ಟನ್ನು ಅಲಹಾಬಾದಿನ ತ್ರಿವೇಣಿ ಸಂಗಮದಲ್ಲಿ ವಿಸರ್ಜಿಸಿದರೆ ಇನ್ನರ್ಧವನ್ನು ಅದೇ ನಗರದ ಪಾರ್ಸೀ ರುದ್ರಭೂಮಿಯಲ್ಲಿ ಹುಗಿದು ಕಟ್ಟಿದ ಸಮಾಧಿಯನ್ನು ಈಗಲೂ ಕಾಣಬಹುದು.

ನೆಹರೂ- ಗಾಂಧೀ ವಂಶದ ಮೂಲ ನೆಲೆ ಅಲಹಾಬಾದಿನ ’ಆನಂದಭವನ’. ಫಿರೋಜ್ ಗಾಂಧೀ ಸಮಾಧಿಗೆ ಅಲ್ಲಿಂದ ಕೆಲವೇ ಕಿಲೋಮೀಟರುಗಳ ದೂರ. ಈ ಸಂಗತಿ ಆನಂದಭವನಕ್ಕೆ ಹರಿಯುವ ಬಹುತೇಕ ಪ್ರವಾಸಿಗಳಿಗೆ ತಿಳಿಯದು. ತಿಳಿಯುವಂತೆ ಮಾಡುವ ಪ್ರಯತ್ನವನ್ನು ನೆಹರೂ-ಗಾಂಧೀ ಮನೆತನ ಮಾಡಿಲ್ಲ.


ಇದನ್ನೂ ಓದಿ: ಸರ್ಕಾರಿ ದರೋಡೆಗೆ ತೆರಿಗೆ ಎಂದು ಹೆಸರು: ಬೆಲೆ ಏರಿಕೆಗೆ ಕಾಂಗ್ರೆಸ್‌ ಕಿಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿಯ ಕತ್ತು ಹಿಸುಕಿ ಕೊಂದ ನಿವೃತ್ತ ಇಸ್ರೋ ಉದ್ಯೋಗಿ ಬಂಧನ

ಬೆಂಗಳೂರು: ಆಘಾತಕಾರಿ ಘಟನೆಯೊಂದರಲ್ಲಿ, 72 ವರ್ಷದ ನಿವೃತ್ತ ಇಸ್ರೋ ಉದ್ಯೋಗಿಯೊಬ್ಬರು ವೈಟ್‌ಫೀಲ್ಡ್ ವಿಭಾಗದ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ಪತ್ನಿಯನ್ನು ಕತ್ತು ಹಿಸುಕಿ ಕೊಂದಿರುವುದಾಗಿ ವರದಿಯಾಗಿದೆ.  ಬೊಮ್ಮನಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಬೆಳಿಗ್ಗೆ...

ಮಧ್ಯಪ್ರದೇಶದಲ್ಲಿ ಶಾಸಕ ರಾಜಾ ಸಿಂಗ್‌ನಿಂದ ದ್ವೇಷ ಭಾಷಣ; ಪ್ರಚೋದನಕಾರಿ ‘ಶಿರಚ್ಛೇದನ’ ಹೇಳಿಕೆಗೆ ವಿರೋಧ

ತಮ್ಮ ಪ್ರಚೋದನಕಾರಿ ಹೇಳಿಕೆಗಳಿಂದಲೇ ಕುಖ್ಯಾತರಾಗಿರುವ ಹೈದರಾಬಾದ್‌ನ ಗೋಶಮಹಲ್ ಶಾಸಕ ಟಿ ರಾಜಾ ಸಿಂಗ್ ಸಾರ್ವಜನಿಕ ರ‍್ಯಾಲಿಯಲ್ಲಿ ಮತ್ತೊಮ್ಮೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಮಧ್ಯಪ್ರದೇಶದಲ್ಲಿ ಅವರು ಆಡಿದ ಮಾತುಗಳು ವಿವಾದಕ್ಕೆ ಕಾರಣವಾಗಿದೆ. "ಪ್ರತಿಯೊಬ್ಬ ಬಜರಂಗಿಗಳು...

ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಆರೋಪ; ‘ಬಡ್ತಿ ವಿಳಂಬವಾಗಿದೆ..’; ಎಂದ ದಲಿತ ಪ್ರಾಧ್ಯಾಪಕ

ಪಂಜಾಬ್ ವಿಶ್ವವಿದ್ಯಾಲಯದ ದಲಿತ ಸಹಾಯಕ ಪ್ರಾಧ್ಯಾಪಕ ಹರ್‌ಪ್ರೀತ್ ಸಿಂಗ್ ಅವರು ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಇದೆ ಎಂದು ಸಾರ್ವಜನಿಕವಾಗಿ ಆರೋಪಿಸಿದ್ದಾರೆ. ತನ್ನ ಜಾತಿಯ ಕಾರಣದಿಂದಾಗಿ ಉದ್ದೇಶಪೂರ್ವಕವಾಗಿ ಬಡ್ತಿ ವಿಳಂಬ ಮಾಡಲಾಗಿದೆ...

ಮಹಾರಾಷ್ಟ್ರ: ತಾಯಿ, ಸಹೋದರನ ಕಣ್ಣಿಗೆ ಮೆಣಸಿನ ಪುಡಿ ಎರೆಚಿ ಮದುವೆ ಸಿದ್ಧತೆಯಲ್ಲಿದ್ದ 21 ವರ್ಷದ ಯುವತಿಯ ಅಪಹರಣ

ಮುಂಬೈ: ಆಘಾತಕಾರಿ ಘಟನೆಯೊಂದರಲ್ಲಿ, ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ತಹಸಿಲ್‌ನ ಭಿಗ್ವಾನ್‌ನಲ್ಲಿ 21 ವರ್ಷದ ಯುವತಿಯನ್ನು ಆಕೆಯ ತಾಯಿ ಮತ್ತು ಸಹೋದರನ ಮುಂದೆಯೇ ಇಬ್ಬರು ವ್ಯಕ್ತಿಗಳು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ.ಮದುವೆ ಸಿದ್ಧತೆಯಲ್ಲಿದ್ದ ಯುವತಿ...

KERALA SIR | ಬಿಜೆಪಿ ಮುಖಂಡನ ದೂರು: ಪೌರತ್ವ ಸಾಬೀತುಪಡಿಸುವಂತೆ ಮುಸ್ಲಿಂ ವ್ಯಕ್ತಿಗೆ ನೋಟಿಸ್!

ಬಿಜೆಪಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡಾ ಎಂಬಾತನ ದೂರಿನ ಮೇರೆಗೆ ಹಿರಿಯ ವಯಸ್ಸಿನ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಭಾರತೀಯ ಪೌರತ್ವ ಸಾಬೀತುಪಡಿಸುವಂತೆ ಚುನಾವಣಾ ನೋಂದಣಿ ಅಧಿಕಾರಿ (ಇಆರ್‌ಒ) ನೋಟಿಸ್ ಜಾರಿ ಮಾಡಿದ್ದು, ಆ...

ಚೀನಾ ನಿರ್ಮಿತ ರೋಬೋ ಡಾಗ್ ತಾವೇ ಅಭಿವೃದ್ಧಿಪಡಿಸಿದ್ದಾಗಿ ಹೇಳಿಕೊಂಡಿದ್ದ ಗ್ಯಾಲ್ಗೋಟಿಯಾ ವಿವಿ AI ಸಮ್ಮಿಟ್ ಎಕ್ಸ್‌ಪೋದಿಂದ ತೆರವು

ನವದೆಹಲಿ: ಚೀನಾ ನಿರ್ಮಿತ ರೋಬೋ ಡಾಗ್ ತಮ್ಮದೇ ಎಂದು ಪ್ರದರ್ಶಿಸಿದ್ದಕ್ಕಾಗಿ ಟೀಕೆಗೆ ಗುರಿಯಾದ ನಂತರ ಮತ್ತು ಕೇಂದ್ರ ಸರ್ಕಾರವು ವಿರೋಧ ಪಕ್ಷಗಳಿಂದ ಟೀಕೆಗೆ ಗುರಿಯಾದ ನಂತರ ನೋಯ್ಡಾ ಮೂಲದ ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾಲಯವನ್ನು ಬುಧವಾರ...

ಉತ್ತರ ಪ್ರದೇಶ| ಅಹಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಟಿಟಿಇಯಿಂದ ಸೇನಾ ಆಕಾಂಕ್ಷಿಯ ಮೇಲೆ ಅತ್ಯಾಚಾರ

ಉತ್ತರ ಪ್ರದೇಶದ ಅಹಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಟಿಕೆಟ್ ಪರೀಕ್ಷಕನೊಬ್ಬ (ಟಿಟಿಇ) ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸೇನಾ ನೇಮಕಾತಿಗೆ ತಯಾರಿ ನಡೆಸುತ್ತಿದ್ದ ಯುವತಿ ಆರೋಪಿಸಿದ್ದಾರೆ. ಇಂದಾರಾ ಮತ್ತು ಡಿಯೋರಿಯಾ ರೈಲು ನಿಲ್ದಾಣಗಳ ನಡುವೆ...

ನಾನು ಭಾರತಕ್ಕೆ ಯಾವಾಗ ಹಿಂತಿರುಗುತ್ತೇನೆಂದು ಹೇಳಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಗೆ ತಿಳಿಸಿದ ಮಲ್ಯ

ವಂಚನೆ ಮತ್ತು ಹಣ ವರ್ಗಾವಣೆಯ ಹಲವಾರು ಪ್ರಕರಣಗಳನ್ನು ಎದುರಿಸುತ್ತಿರುವ, ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಯುಕೆ ತೊರೆಯುವುದನ್ನು ನನಗೆ ಕಾನೂನುಬದ್ಧವಾಗಿ ನಿಷೇಧಿಸಲಾಗಿರುವುದರಿಂದ ಯಾವಾಗ ಭಾರತಕ್ಕೆ ಹಿಂತಿರುಗುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ" ಎಂದು...

ಕಾಂಗ್ರೆಸ್‌ನಲ್ಲಿದ್ದಾಗ ನಾನು ಮುಖ್ಯಮಂತ್ರಿ ಆಗದಂತೆ ತಡೆದಿದ್ದು ರಾಹುಲ್ ಗಾಂಧಿ : ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಕಾಂಗ್ರೆಸ್‌ನಲ್ಲಿದ್ದಾಗ ನಾನು ಮುಖ್ಯಮಂತ್ರಿಯಾಗದಂತೆ ರಾಹುಲ್ ಗಾಂಧಿ ತಡೆದಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಂಗಳವಾರ (ಫೆ.17) ಆರೋಪಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "2014 ರಲ್ಲಿ ಅಂದಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ...

ಮಮತಾ ಬ್ಯಾನರ್ಜಿ ವಿರುದ್ಧ ಇಡಿ ಅರ್ಜಿ: ಮಾರ್ಚ್ 18ಕ್ಕೆ ವಿಚಾರಣೆ ಮುಂದೂಡಿಕೆ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಇತರರ ವಿರುದ್ಧದ ಐ-ಪ್ಯಾಕ್ ಕಚೇರಿ ಶೋಧಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಕೇಂದ್ರ ಜಾರಿ ನಿರ್ದೇಶನಾಲಯದ (ಇಡಿ) ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ...