Homeಅಂಕಣಗಳುಇತಿಹಾಸ ಇಷ್ಟು ಬೇಗ ಮರುಕಳಿಸಿತಲ್ಲಾ ಥೂತ್ತೇರಿ!!

ಇತಿಹಾಸ ಇಷ್ಟು ಬೇಗ ಮರುಕಳಿಸಿತಲ್ಲಾ ಥೂತ್ತೇರಿ!!

- Advertisement -
- Advertisement -

ಕರ್ನಾಟಕದಲ್ಲಿ ಅದರಲ್ಲೂ ನಮ್ಮ ಪ್ರಭುತ್ವದ ಕೇಂದ್ರ ಸ್ಥಾನದಲ್ಲಿ ನಡೆದಿರುವ ಹೇಸಿಗೆ ಪ್ರಹಸನದ ಉದ್ಘಾಟಕರೇ ಕುಮಾರಣ್ಣನವರಂತಲ್ಲಾ. ಅಂದು ಧರ್ಮಸಿಂಗ್ ಸರಕಾರ ಗಜಗಾಂಭೀರ್ಯದಿಂದ ಸಾಗುತ್ತಿದ್ದಾಗ, ಕುಮಾರಣ್ಣನವರು ಜಮೀರ್ ಅಹಮದ್‍ನ ಕಾರಾಸ್ಥಾನದಲ್ಲಿ ತಯಾರಿಸಿದ ರೂಪುರೇಷೆಯಂತೆ ಜೆ.ಡಿ.ಎಸ್‍ಗೆ ಅಷ್ಟೂ ಶಾಸಕರನ್ನು ರೆಸಾರ್ಟ್‍ಗೆ ಹೊತ್ತೊಯ್ದರು. ಆ ಸಂದರ್ಭದ ದುಷ್ಟ ಚತುಷ್ಟಯರಲ್ಲಿ ಪ್ರಮುಖರಾದ ಬಾಲಕೃಷ್ಣ, ಚಲುವರಾಯ, ಜಮೀರು ಹೊತ್ತೊಯ್ದವರ ಬೇಕು, ಬೇಡಗಳು, ಜಿಹ್ವಾಚಾಪಲ್ಯ ಮತ್ತು ಗರ್ಮಿ ಪದಾರ್ಥಗಳ ಸೇವನೆಯಿಂದುಂಟಾದ ದೈಹಿಕ ಬಾಧೆಗಳನ್ನು ಪೂರೈಸಿದ್ದರಂತಲ್ಲಾ. ನಂತರ ಅವರನ್ನೆಲ್ಲ ಸುಸೂತ್ರವಾಗಿ ಕರೆದುಕೊಂಡು ಬಂದು, ವಿಧಾನಸೌಧದ ಎದುರು ಸುರಿದು ಕುಮಾರಣ್ಣ ಮುಖ್ಯಮಂತ್ರಿಯಾಗಿ ಮಾನ್ಯ ಎಡೂರಪ್ಪ ಉಪಮುಖ್ಯಮಂತ್ರಿಯಾಗುವಂತಹ ಪ್ರಹಸನವನ್ನು ನಿರೂಪಿಸಿದ್ದರಲ್ಲಾ. ಆದರೆ ಇಂತಹ ಸಾಹಸವೊಂದನ್ನು ಕಣ್ಣಲ್ಲಿ ನೋಡಲಾಗದೆ ಕಡು ದುಃಖದ ಮುಖಭಾವದಲ್ಲಿ ದೇವೇಗೌಡರು ಮನೆಯಲ್ಲೇ ಕುಳಿತಿದ್ದರಂತಲ್ಲಾ, ಥೂತ್ತೇರಿ…!

*****

ಕುಮಾರಣ್ಣನವರು ಮುಖ್ಯಮಂತ್ರಿಯಾಗಲು ಕ್ಷಣಗಣನೆ ನಡೆಯುತ್ತಿರುವಾಗ ಇತ್ತ ಪದ್ಮನಾಭನಗರದಲ್ಲಿ ದೇವೇಗೌಡರು ಬದುಕುಳಿಯುವುದೇ ಕಷ್ಟವೆಂಬ ಸ್ಥಿತಿಯಲ್ಲಿ ಕುಳಿತಿರಬೇಕಾದರೆ, ಕರ್ನಾಟಕದ ರಾಜಕಾರಣದ ಇನ್‍ಚಾರ್ಜ್ ಹೊತ್ತಿದ್ದ ಆಂಟೋನಿ ಜೊತೆಗೆ ಪಿ.ಜಿ.ಆರ್. ಸಿಂಧ್ಯಾ, ಎಂ.ಪಿ.ಪ್ರಕಾಶ್, ಮಿರಾಜುದ್ದೀನ್, ಡಿ.ಮಂಜುನಾಥ್ ಕೂಡ ದುರಂತವಾರ್ತೆ ವಿಧಾನಸೌಧದ ಕಡೆಯಿಂದ ಬರುತ್ತದೋ ಅಥವಾ ಪದ್ಮನಾಭನಗರ ಕಡೆಯಿಂದ ಹೊರಡುತ್ತದೋ ಎಂಬ ಆತಂಕದಲ್ಲೇ ಆಸೀನರಾಗಿದ್ದರಂತಲ್ಲಾ. ಆ ಯಾರೊಬ್ಬರಿಗೂ ಗೌಡರ ಮಹಾನಾಟಕ ಅರಿವಿಗೇ ಬರಲಿಲ್ಲವಂತಲ್ಲಾ. ಆ ನಾಟಕ ಯಾವುದೆಂದರೆ, ಮಗನ ಸಿಂಹಾಸನಕ್ಕೆ ತೊಂದರೆ ಕೊಡಬಹುದಾದ ಸಿದ್ದರಾಮಯ್ಯನನ್ನ ತೆಗೆದು ಬಿಸಾಡಿ, ಆ ಜಾಗಕ್ಕೆ ತಿಪ್ಪೇಮೇಗಲ ಒಣ ಸಗಣಿಯಂತ ತಿಪ್ಪಣ್ಣನನ್ನ ತಂದು ಕೂರಿಸಲಾಗಿತ್ತು. ಆತ ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರ ಮೌಖಿಕ ಆದೇಶದಂತೆ, ಕುಮಾರಣ್ಣನೇ ನಮ್ಮ ನಾಯಕ ಅನ್ನುವ ಲೆಟರನ್ನು ರಾಜ್ಯಪಾಲರಿಗೆ ಕೊಡುತ್ತಾರೆ. ರಾಜ್ಯಪಾಲ ಅದನ್ನು ಊರ್ಜಿತ ಮಾಡುತ್ತಾರೆ. ದೇವೇಗೌಡರೇ ನೇಮಿಸಿದ ಕೆ.ಆರ್.ಪೇಟೆ ಕೃಷ್ಣ ಸದನದ ಸ್ಪೀಕರ್ ಆಗಿದ್ದು ಗೌಡರ ಋಣವನ್ನು ತೀರಿಸಿದ್ದರಂತಲ್ಲ ಥೂತ್ತೇರಿ…!!

*****

ಅಂತೂ ಕುಮಾರಣ್ಣನ ಸಭಾ ಪರ್ವ ಆರಂಭವಾಗಿ ಸಿಂಧ್ಯ ಎದ್ದು ನಿಂತು ನಮ್ಮ ಸಭಾ ನಾಯಕರು ಎಂ.ಪಿ.ಪ್ರಕಾಶ್ ಎಂದಾಗ ಆ ಗುಂಡಿಗೆಯನ್ನು ಹಲವರು ಮೆಚ್ಚಿದರು. ಆದರೇ ಅಂದೇ ಅಪ್ಪಮಕ್ಕಳು ಸಿಂಧ್ಯನ ಕತೆ ಮುಗಿಸಲು ಪಣತೊಟ್ಟರು. ಸಿಂಧ್ಯನ ಗಂಡು ಮಾತಿಗೆ ತಕ್ಕ ಉತ್ತರ ಕೊಡುವ ಅವಕಾಶ ಒದಗಿ ಬಂದಾಗ ಎಂ.ಪಿ.ಪ್ರಕಾಶರು, ಕುಮಾರ ಅಲ್ಲ ನಾನೇ ಸಭಾ ನಾಯಕ ಅಂದಿದ್ದರೆ ಆ ಕತೆಯೇ ಬೇರೆಯಾಗಿ ಕರ್ನಾಟಕದ ಇಂದಿನ ಪ್ರಹಸನಕ್ಕೂ ಅವಕಾಶವಿರಲಿಲ್ಲ. ಆದರೆ ಪ್ರಕಾಶ್ ಹಿಂಜರಿದರು. ಆದರೂ ಕುಮಾರಣ್ಣನ ಸರಕಾರ ಅವರಿಗೆ ಗೃಹಸಚಿವರ ಸ್ಥಾನ ನೀಡಿದ್ದಲ್ಲದೆ ಸದನದಲ್ಲಿ ಸರಕಾರದ ಎಲ್ಲಾ ಸಮಸ್ಯೆಗಳಿಗೆ ಸಮಂಜಸ ಉತ್ತರ ನೀಡುವ ಜವಾಬ್ದಾರಿ ವಹಿಸಿತ್ತು. ಆದರೇನು, ಪ್ರಕಾಶ್ ಅವರು ಅಪ್ಪಮಗನ ಗಾಣದಲ್ಲಿ ಸಿಕ್ಕು ನಜ್ಜುಗುಜ್ಜಾಗಿ ಹೋಗಿದ್ದರು. ಕಡೆಗೆ ಇವರ ಸಹವಾಸವೇ ಸಾಕು ಎಂದು ತಮ್ಮ ಜೀವಿತಾವಧಿಯಲ್ಲಿ ಟೀಕೆ ಮಾಡಿಕೊಂಡು ಬಂದ ಕಾಂಗ್ರೆಸ್‍ಗೆ ಹೋದರು, ಅಲ್ಲಿ ಸೋತರು. ಏಕೆಂದರೆ ಗೌಡರು ಅವರ ವಿರುದ್ಧವೂ ಅಭ್ಯರ್ಥಿ ಹಾಕಿದ್ದರು. ಅಂತೂ ಪ್ರಕಾಶರ ಅವನತಿಗೆ ಗೌಡರು ಕಾರಣರಾಗಿ ಹೋದರಲ್ಲಾ ಥೂತ್ತೇರಿ…!!!

*****

ಇತಿಹಾಸ ಒಂದು ದಶಕದಲ್ಲೇ ಮರುಕಳಿಸಿ ಹೋಯ್ತಲ್ಲ! ದುಷ್ಟ ಚತುಷ್ಟರ ಪೈಕಿ, ಕುಮಾರಣ್ಣನ ಬಳಿ ಯಾರೂ ಇಲ್ಲ. ಇದ್ದರೂ ಜಮೀರನನ್ನ ಪೂರಾ ನಂಬುವಂತಿಲ್ಲ. ಇತ್ತ ಎಡೂರಪ್ಪನ ಮುಖದಲ್ಲಿ ಅಂತಹ ಗೆಲುವಿಲ್ಲ. ಇಡೀ ಬಿ.ಜೆ.ಪಿ.ಯಲ್ಲೇ ಎಡೂರಪ್ಪ ಮತ್ತೆ ವಕ್ಕರಿಸುವ ಬಗ್ಗೆ, ಹೇಳಿಕೊಳ್ಳುವ ಹುಮ್ಮಸ್ಸಿಲ್ಲ. ಅದರಲ್ಲೂ ಈಶ್ವರಪ್ಪ ದಿಕ್ಕೇ ತೋಚದಂತಾಗಿದ್ದಾರೆ. ಏಕೆಂದರೆ ಎಡೂರಪ್ಪ ಮತ್ತು ಈಶ್ವರಪ್ಪನ ದಾಯಾದಿ ಕಲಹಕ್ಕೆ ಇತಿಹಾಸವೇ ಇದೆ. ಆದ್ದರಿಂದ ಎಡೂರಪ್ಪ ಮುಖ್ಯಮಂತ್ರಿಯಾದ ಕೂಡಲೇ ಅವರ ತಲೆನೋವಾಗಿ ಪರಿಣಮಿಸಲಿದ್ದಾರೆ. ಎಡೂರಪ್ಪ ಯಾವುದಕ್ಕೂ ಬಗ್ಗದಿದ್ದರೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬದಲು, ಕನಕದಾಸ ಸಮರಸೇನೆ ಹುಟ್ಟು ಹಾಕಿದರೂ ಅಚ್ಚರಿಯಿಲ್ಲವಂತಲ್ಲಾ. ಏಕೆಂದರೆ ಕನಕದಾಸರು ಬರೀ ದಾಸರಷ್ಟೇ ಅಲ್ಲ. ಅದಕ್ಕೂ ಮೊದಲು ಬಾಡದ ನಾಯಕರಾಗಿ ಕಾದಾಡಿ, ವಿಜಯನಗರದ ಅರಸರ ಜೀತಕ್ಕಿಂತ ತಂಬೂರಿಯೇ ಲೇಸೆಂದು ಹೊರಟವರು. ಇದನ್ನೆಲ್ಲಾ ಬಿ.ಜೆ.ಪಿ ವಿದ್ವಾಂಸರಿಂದ ಸಂಗ್ರಹಿಸಿಕೊಂಡು ಮತ್ತೆ ಎಡೂರಪ್ಪನ ಎದುರು ಹೋರಾಟ ಆರಂಭಿಸುವುದಿಲ್ಲ ಎಂಬುದು ಯಾವ ಗ್ಯಾರಂಟಿ… ಥೂತ್ತೇರಿ!!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ತಪ್ಪಾಗಿದೆ’ : ಕೇಂದ್ರ ಸರ್ಕಾರದ ಟ್ರಾನ್ಸ್‌ಜೆಂಡರ್‌ ವಿಧೇಯಕದ ಕುರಿತ ಟೀಕೆಗಳನ್ನು ಕೈಬಿಟ್ಟ ರಾಜಸ್ಥಾನ ಹೈಕೋರ್ಟ್

ಟ್ರಾನ್ಸ್‌ಜೆಂಡರ್ ಕಾಯ್ದೆ, 2019ರಲ್ಲಿ ಬದಲಾವಣೆಗಳನ್ನು ತರಲಿರುವ ಕೇಂದ್ರ ಸರ್ಕಾರದ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ವಿಧೇಯ, 2026ರ ಕುರಿತು ಈ ಹಿಂದೆ ಮಾಡಿದ್ದ ವಿಮರ್ಶಾತ್ಮಕ ಟಿಪ್ಪಣಿಗಳನ್ನು ರಾಜಸ್ಥಾನ ಹೈಕೋರ್ಟ್ ತೆಗೆದುಹಾಕಿದೆ ಎಂದು...

ಯುಸಿಸಿ ಜಾರಿ ನಂತರ ‘ಜನಸಂಖ್ಯಾ ನಿಯಂತ್ರಣ’ ಕಾನೂನಿಗೆ ಮುಂದಾದ ಉತ್ತರಾಖಂಡ ಬಿಜೆಪಿ ಸರ್ಕಾರ

ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತಂದ ನಂತರ, ಉತ್ತರಾಖಂಡ ಸರ್ಕಾರ ಈಗ ಜನಸಂಖ್ಯಾ ನಿಯಂತ್ರಣ ಕಾನೂನನ್ನು ತರುವ ಬಗ್ಗೆ ಯೋಚಿಸುತ್ತಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಶುಕ್ರವಾರ ಸೂಚಿಸಿದ್ದಾರೆ. ಪ್ರಸ್ತಾವಿತ ಕ್ರಮದ...

ಪಶ್ಚಿಮ ಬಂಗಾಳ| ಟಿಎಂಸಿ ನಾಯಕರ ಭದ್ರತೆಗೆ ಭಾರೀ ಪೊಲೀಸ್ ನಿಯೋಜನೆ; ಇಸಿಐ ಆಕ್ಷೇಪ

ರಾಜ್ಯದ ವಿವಿಧ ಹಂತಗಳಲ್ಲಿ ತೃಣಮೂಲ ಕಾಂಗ್ರೆಸ್ ನಾಯಕರಿಗೆ ವೈಯಕ್ತಿಕ ಭದ್ರತೆ ಒದಗಿಸಲು ಪಶ್ಚಿಮ ಬಂಗಾಳ ಪೊಲೀಸರು ಮತ್ತು ಕೋಲ್ಕತ್ತಾ ಪೊಲೀಸರು ನಿಯೋಜಿಸಿರುವ ಹೆಚ್ಚಿನ ಸಂಖ್ಯೆಯ ಸಿಬ್ಬಂದಿಯನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ಗಂಭೀರವಾಗಿ...

ಅಮೆರಿಕದ ಕದನ ವಿರಾಮ ಪ್ರಸ್ತಾವನೆ ತಿರಸ್ಕರಿಸಿದ ಇರಾನ್ : ಪಶ್ಚಿಮ ಏಷ್ಯಾ ಸಂಘರ್ಷ ಉಲ್ಬಣ

ಅಲ್ಪಾವಧಿಯ ಕದನ ವಿರಾಮಕ್ಕಾಗಿ ಅಮೆರಿಕ ಮುಂದಿಟ್ಟಿದ್ದ ಪ್ರಸ್ತಾವನೆಯನ್ನು ಇರಾನ್ ತಿರಸ್ಕರಿಸಿದೆ ಎಂದು ವರದಿಯಾಗಿದೆ. ಏಪ್ರಿಲ್ 1, 2026ರ ಬುಧವಾರದಂದು ಅಮೆರಿಕವು ಅನಾಮಧೇಯ ಮಧ್ಯಸ್ಥಿಕೆ ರಾಷ್ಟ್ರದ ಮೂಲಕ ಇರಾನ್‌ಗೆ 48 ಗಂಟೆಗಳ ತಾತ್ಕಾಲಿಕ ಕದನ ವಿರಾಮದ ಆಫರ್...

ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನರಿಗೆ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿ

ಹಿರಿಯ ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನ ಹಿರಿಯ ಸಾಧಕರು 2026ನೇ ಸಾಲಿನ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಯಚೂರು ಜಿಲ್ಲೆಯ ಹಿರಿಯ ದಲಿತ ಹೋರಾಟಗಾರ...

ಗಾಜಾ; ಗೊಂಬೆಯೊಂದಿಗೆ ‘ಅಂತ್ಯಕ್ರಿಯೆ’ ಆಟ ಆಡುವ ಎಳೆಯ ಮಕ್ಕಳ ವಿಡಿಯೋ ವೈರಲ್; ಸುತ್ತಲಿನ ಘಟನೆಯನ್ನು ಪುನರಾವರ್ತಿಸುವ ಮಕ್ಕಳು

ಅಕ್ಟೋಬರ್ 2023 ರಲ್ಲಿ ಇಸ್ರೇಲಿ ಮಿಲಿಟರಿ ದಾಳಿಯನ್ನು ಪ್ರಾರಂಭಿಸಿದ ನಂತರ ಗಾಜಾದಿಂದ ದುಃಖಕರ ದೃಶ್ಯಗಳು ಹೊರಹೊಮ್ಮುತ್ತಿವೆ. ಇತ್ತೀಚಿನ ಒಂದು ಘಟನೆಯಲ್ಲಿ, ಚಿಕ್ಕ ಮಕ್ಕಳು ಅಂತ್ಯಕ್ರಿಯೆಗಾಗಿ ಗೊಂಬೆಯನ್ನು ಹೊತ್ತುಕೊಂಡು ಹೋಗುವುದನ್ನು ಕಾಣಬಹುದು - ಇದು ಅವರು...

ದೆಹಲಿ| ಆಳವಾದ ಚರಂಡಿಗೆ ಬಿದ್ದು ನೈರ್ಮಲ್ಯ ಕಾರ್ಮಿಕ ಸಾವು; ನ್ಯಾಯಕ್ಕೆ ಆಗ್ರಹಿಸಿದ ಮೃತನ ಕುಟುಂಬ

ಮಾರ್ಚ್ 30 ರಂದು ಪೂರ್ವ ದೆಹಲಿಯ ದಿಲ್ಶಾದ್ ಗಾರ್ಡನ್ ಪ್ರದೇಶದಲ್ಲಿ ಸುರಕ್ಷತಾ ಸಾಧನಗಳಿಲ್ಲದೆ ಆಳವಾದ ಚರಂಡಿ ಸ್ವಚ್ಛಗೊಳಿಸುವ ಸಮಯದಲ್ಲಿ ಯುವ ನೈರ್ಮಲ್ಯ ಕಾರ್ಮಿಕ ರಾಹುಲ್ ಎಂಬುವವರು ಸಾವನ್ನಪ್ಪಿದ್ದಾರೆ. ಮಧ್ಯಾಹ್ನ 2:00 ರ ಸುಮಾರಿಗೆ...

ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಆಸ್ಪತ್ರೆಗೆ ದಾಖಲು; ಕಾರ್ಯಕ್ರಮದಲ್ಲಿ ಏಕಾಏಕಿ ಕುಸಿದು ಬಿದ್ದು ಅಸ್ವಸ್ಥ

ಬೆಂಗಳೂರು: ಕರ್ನಾಟಕದ ನಿವೃತ್ತ ಲೋಕಾಯುಕ್ತ ಎನ್‌.ಸಂತೋಷ್‌ ಹೆಗ್ಡೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಭಾಷಣದ ವೇಳೆ ಕುಸಿದು ಬಿದ್ದು ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಏಪ್ರಿಲ್ 4ರ, ಶುಕ್ರವಾರ ಬೆಂಗಳೂರಿನ ಕೊಂಡಜಿ ಬಸಪ್ಪ ಸಭಾಂಗಣದಲ್ಲಿ...

ಎಸ್‌ಎಸ್‌ಎಲ್‌ಸಿಯಲ್ಲಿ ತೃತೀಯ ಭಾಷೆಗೆ ಗ್ರೇಡ್: ನಿರ್ಧಾರ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ ರಾಜ್ಯಪಾಲ ಗೆಹ್ಲೋಟ್ 

ಬೆಂಗಳೂರು: 10ನೇ ತರಗತಿ ಪರೀಕ್ಷೆಯಲ್ಲಿ ತೃತೀಯ ಭಾಷೆಯ ವಿಷಯಕ್ಕೆ ಅಂಕಗಳನ್ನು ಬದಲಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ರಾಜ್ಯ ಸರ್ಕಾರವನ್ನು ಕೇಳಿದ್ದಾರೆ. ಸರ್ಕಾರವು ಈ ನಿರ್ಧಾರವನ್ನು "ಸಮಗ್ರವಾಗಿ ಪರಿಶೀಲಿಸಬೇಕು" ಎಂದು ಲೋಕಭವನವು...

ತಿರುಚ್ಚಿ ಪೂರ್ವದ ಪೆರಂಬೂರಿನಲ್ಲಿ ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಅಫಿಡವಿಟ್‌ಗಳಲ್ಲಿ ಹಲವು ವ್ಯತ್ಯಾಸಗಳಿರುವುದಾಗಿ ವರದಿ  

ಚೆನ್ನೈ: ನಟ ಮತ್ತು ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಎರಡು ಪ್ರತ್ಯೇಕ ಚುನಾವಣಾ ಅಫಿಡವಿಟ್‌ಗಳಲ್ಲಿ ವ್ಯತ್ಯಾಸಗಳು ಕಾಣಿಸಿಕೊಂಡಿದ್ದು, ವಿಧಾನಸಭಾ ಚುನಾವಣೆಗೆ ಮುನ್ನ ಕಾನೂನು ಮತ್ತು ರಾಜಕೀಯ ಪರಿಶೀಲನೆಗೆ ಅವಕಾಶ ನೀಡುವ ಸಾಧ್ಯತೆಯಿದೆ. ಪೆರಂಬೂರು ಮತ್ತು...