Homeಅಂಕಣಗಳುಇತಿಹಾಸ ಇಷ್ಟು ಬೇಗ ಮರುಕಳಿಸಿತಲ್ಲಾ ಥೂತ್ತೇರಿ!!

ಇತಿಹಾಸ ಇಷ್ಟು ಬೇಗ ಮರುಕಳಿಸಿತಲ್ಲಾ ಥೂತ್ತೇರಿ!!

- Advertisement -
- Advertisement -

ಕರ್ನಾಟಕದಲ್ಲಿ ಅದರಲ್ಲೂ ನಮ್ಮ ಪ್ರಭುತ್ವದ ಕೇಂದ್ರ ಸ್ಥಾನದಲ್ಲಿ ನಡೆದಿರುವ ಹೇಸಿಗೆ ಪ್ರಹಸನದ ಉದ್ಘಾಟಕರೇ ಕುಮಾರಣ್ಣನವರಂತಲ್ಲಾ. ಅಂದು ಧರ್ಮಸಿಂಗ್ ಸರಕಾರ ಗಜಗಾಂಭೀರ್ಯದಿಂದ ಸಾಗುತ್ತಿದ್ದಾಗ, ಕುಮಾರಣ್ಣನವರು ಜಮೀರ್ ಅಹಮದ್‍ನ ಕಾರಾಸ್ಥಾನದಲ್ಲಿ ತಯಾರಿಸಿದ ರೂಪುರೇಷೆಯಂತೆ ಜೆ.ಡಿ.ಎಸ್‍ಗೆ ಅಷ್ಟೂ ಶಾಸಕರನ್ನು ರೆಸಾರ್ಟ್‍ಗೆ ಹೊತ್ತೊಯ್ದರು. ಆ ಸಂದರ್ಭದ ದುಷ್ಟ ಚತುಷ್ಟಯರಲ್ಲಿ ಪ್ರಮುಖರಾದ ಬಾಲಕೃಷ್ಣ, ಚಲುವರಾಯ, ಜಮೀರು ಹೊತ್ತೊಯ್ದವರ ಬೇಕು, ಬೇಡಗಳು, ಜಿಹ್ವಾಚಾಪಲ್ಯ ಮತ್ತು ಗರ್ಮಿ ಪದಾರ್ಥಗಳ ಸೇವನೆಯಿಂದುಂಟಾದ ದೈಹಿಕ ಬಾಧೆಗಳನ್ನು ಪೂರೈಸಿದ್ದರಂತಲ್ಲಾ. ನಂತರ ಅವರನ್ನೆಲ್ಲ ಸುಸೂತ್ರವಾಗಿ ಕರೆದುಕೊಂಡು ಬಂದು, ವಿಧಾನಸೌಧದ ಎದುರು ಸುರಿದು ಕುಮಾರಣ್ಣ ಮುಖ್ಯಮಂತ್ರಿಯಾಗಿ ಮಾನ್ಯ ಎಡೂರಪ್ಪ ಉಪಮುಖ್ಯಮಂತ್ರಿಯಾಗುವಂತಹ ಪ್ರಹಸನವನ್ನು ನಿರೂಪಿಸಿದ್ದರಲ್ಲಾ. ಆದರೆ ಇಂತಹ ಸಾಹಸವೊಂದನ್ನು ಕಣ್ಣಲ್ಲಿ ನೋಡಲಾಗದೆ ಕಡು ದುಃಖದ ಮುಖಭಾವದಲ್ಲಿ ದೇವೇಗೌಡರು ಮನೆಯಲ್ಲೇ ಕುಳಿತಿದ್ದರಂತಲ್ಲಾ, ಥೂತ್ತೇರಿ…!

*****

ಕುಮಾರಣ್ಣನವರು ಮುಖ್ಯಮಂತ್ರಿಯಾಗಲು ಕ್ಷಣಗಣನೆ ನಡೆಯುತ್ತಿರುವಾಗ ಇತ್ತ ಪದ್ಮನಾಭನಗರದಲ್ಲಿ ದೇವೇಗೌಡರು ಬದುಕುಳಿಯುವುದೇ ಕಷ್ಟವೆಂಬ ಸ್ಥಿತಿಯಲ್ಲಿ ಕುಳಿತಿರಬೇಕಾದರೆ, ಕರ್ನಾಟಕದ ರಾಜಕಾರಣದ ಇನ್‍ಚಾರ್ಜ್ ಹೊತ್ತಿದ್ದ ಆಂಟೋನಿ ಜೊತೆಗೆ ಪಿ.ಜಿ.ಆರ್. ಸಿಂಧ್ಯಾ, ಎಂ.ಪಿ.ಪ್ರಕಾಶ್, ಮಿರಾಜುದ್ದೀನ್, ಡಿ.ಮಂಜುನಾಥ್ ಕೂಡ ದುರಂತವಾರ್ತೆ ವಿಧಾನಸೌಧದ ಕಡೆಯಿಂದ ಬರುತ್ತದೋ ಅಥವಾ ಪದ್ಮನಾಭನಗರ ಕಡೆಯಿಂದ ಹೊರಡುತ್ತದೋ ಎಂಬ ಆತಂಕದಲ್ಲೇ ಆಸೀನರಾಗಿದ್ದರಂತಲ್ಲಾ. ಆ ಯಾರೊಬ್ಬರಿಗೂ ಗೌಡರ ಮಹಾನಾಟಕ ಅರಿವಿಗೇ ಬರಲಿಲ್ಲವಂತಲ್ಲಾ. ಆ ನಾಟಕ ಯಾವುದೆಂದರೆ, ಮಗನ ಸಿಂಹಾಸನಕ್ಕೆ ತೊಂದರೆ ಕೊಡಬಹುದಾದ ಸಿದ್ದರಾಮಯ್ಯನನ್ನ ತೆಗೆದು ಬಿಸಾಡಿ, ಆ ಜಾಗಕ್ಕೆ ತಿಪ್ಪೇಮೇಗಲ ಒಣ ಸಗಣಿಯಂತ ತಿಪ್ಪಣ್ಣನನ್ನ ತಂದು ಕೂರಿಸಲಾಗಿತ್ತು. ಆತ ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರ ಮೌಖಿಕ ಆದೇಶದಂತೆ, ಕುಮಾರಣ್ಣನೇ ನಮ್ಮ ನಾಯಕ ಅನ್ನುವ ಲೆಟರನ್ನು ರಾಜ್ಯಪಾಲರಿಗೆ ಕೊಡುತ್ತಾರೆ. ರಾಜ್ಯಪಾಲ ಅದನ್ನು ಊರ್ಜಿತ ಮಾಡುತ್ತಾರೆ. ದೇವೇಗೌಡರೇ ನೇಮಿಸಿದ ಕೆ.ಆರ್.ಪೇಟೆ ಕೃಷ್ಣ ಸದನದ ಸ್ಪೀಕರ್ ಆಗಿದ್ದು ಗೌಡರ ಋಣವನ್ನು ತೀರಿಸಿದ್ದರಂತಲ್ಲ ಥೂತ್ತೇರಿ…!!

*****

ಅಂತೂ ಕುಮಾರಣ್ಣನ ಸಭಾ ಪರ್ವ ಆರಂಭವಾಗಿ ಸಿಂಧ್ಯ ಎದ್ದು ನಿಂತು ನಮ್ಮ ಸಭಾ ನಾಯಕರು ಎಂ.ಪಿ.ಪ್ರಕಾಶ್ ಎಂದಾಗ ಆ ಗುಂಡಿಗೆಯನ್ನು ಹಲವರು ಮೆಚ್ಚಿದರು. ಆದರೇ ಅಂದೇ ಅಪ್ಪಮಕ್ಕಳು ಸಿಂಧ್ಯನ ಕತೆ ಮುಗಿಸಲು ಪಣತೊಟ್ಟರು. ಸಿಂಧ್ಯನ ಗಂಡು ಮಾತಿಗೆ ತಕ್ಕ ಉತ್ತರ ಕೊಡುವ ಅವಕಾಶ ಒದಗಿ ಬಂದಾಗ ಎಂ.ಪಿ.ಪ್ರಕಾಶರು, ಕುಮಾರ ಅಲ್ಲ ನಾನೇ ಸಭಾ ನಾಯಕ ಅಂದಿದ್ದರೆ ಆ ಕತೆಯೇ ಬೇರೆಯಾಗಿ ಕರ್ನಾಟಕದ ಇಂದಿನ ಪ್ರಹಸನಕ್ಕೂ ಅವಕಾಶವಿರಲಿಲ್ಲ. ಆದರೆ ಪ್ರಕಾಶ್ ಹಿಂಜರಿದರು. ಆದರೂ ಕುಮಾರಣ್ಣನ ಸರಕಾರ ಅವರಿಗೆ ಗೃಹಸಚಿವರ ಸ್ಥಾನ ನೀಡಿದ್ದಲ್ಲದೆ ಸದನದಲ್ಲಿ ಸರಕಾರದ ಎಲ್ಲಾ ಸಮಸ್ಯೆಗಳಿಗೆ ಸಮಂಜಸ ಉತ್ತರ ನೀಡುವ ಜವಾಬ್ದಾರಿ ವಹಿಸಿತ್ತು. ಆದರೇನು, ಪ್ರಕಾಶ್ ಅವರು ಅಪ್ಪಮಗನ ಗಾಣದಲ್ಲಿ ಸಿಕ್ಕು ನಜ್ಜುಗುಜ್ಜಾಗಿ ಹೋಗಿದ್ದರು. ಕಡೆಗೆ ಇವರ ಸಹವಾಸವೇ ಸಾಕು ಎಂದು ತಮ್ಮ ಜೀವಿತಾವಧಿಯಲ್ಲಿ ಟೀಕೆ ಮಾಡಿಕೊಂಡು ಬಂದ ಕಾಂಗ್ರೆಸ್‍ಗೆ ಹೋದರು, ಅಲ್ಲಿ ಸೋತರು. ಏಕೆಂದರೆ ಗೌಡರು ಅವರ ವಿರುದ್ಧವೂ ಅಭ್ಯರ್ಥಿ ಹಾಕಿದ್ದರು. ಅಂತೂ ಪ್ರಕಾಶರ ಅವನತಿಗೆ ಗೌಡರು ಕಾರಣರಾಗಿ ಹೋದರಲ್ಲಾ ಥೂತ್ತೇರಿ…!!!

*****

ಇತಿಹಾಸ ಒಂದು ದಶಕದಲ್ಲೇ ಮರುಕಳಿಸಿ ಹೋಯ್ತಲ್ಲ! ದುಷ್ಟ ಚತುಷ್ಟರ ಪೈಕಿ, ಕುಮಾರಣ್ಣನ ಬಳಿ ಯಾರೂ ಇಲ್ಲ. ಇದ್ದರೂ ಜಮೀರನನ್ನ ಪೂರಾ ನಂಬುವಂತಿಲ್ಲ. ಇತ್ತ ಎಡೂರಪ್ಪನ ಮುಖದಲ್ಲಿ ಅಂತಹ ಗೆಲುವಿಲ್ಲ. ಇಡೀ ಬಿ.ಜೆ.ಪಿ.ಯಲ್ಲೇ ಎಡೂರಪ್ಪ ಮತ್ತೆ ವಕ್ಕರಿಸುವ ಬಗ್ಗೆ, ಹೇಳಿಕೊಳ್ಳುವ ಹುಮ್ಮಸ್ಸಿಲ್ಲ. ಅದರಲ್ಲೂ ಈಶ್ವರಪ್ಪ ದಿಕ್ಕೇ ತೋಚದಂತಾಗಿದ್ದಾರೆ. ಏಕೆಂದರೆ ಎಡೂರಪ್ಪ ಮತ್ತು ಈಶ್ವರಪ್ಪನ ದಾಯಾದಿ ಕಲಹಕ್ಕೆ ಇತಿಹಾಸವೇ ಇದೆ. ಆದ್ದರಿಂದ ಎಡೂರಪ್ಪ ಮುಖ್ಯಮಂತ್ರಿಯಾದ ಕೂಡಲೇ ಅವರ ತಲೆನೋವಾಗಿ ಪರಿಣಮಿಸಲಿದ್ದಾರೆ. ಎಡೂರಪ್ಪ ಯಾವುದಕ್ಕೂ ಬಗ್ಗದಿದ್ದರೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬದಲು, ಕನಕದಾಸ ಸಮರಸೇನೆ ಹುಟ್ಟು ಹಾಕಿದರೂ ಅಚ್ಚರಿಯಿಲ್ಲವಂತಲ್ಲಾ. ಏಕೆಂದರೆ ಕನಕದಾಸರು ಬರೀ ದಾಸರಷ್ಟೇ ಅಲ್ಲ. ಅದಕ್ಕೂ ಮೊದಲು ಬಾಡದ ನಾಯಕರಾಗಿ ಕಾದಾಡಿ, ವಿಜಯನಗರದ ಅರಸರ ಜೀತಕ್ಕಿಂತ ತಂಬೂರಿಯೇ ಲೇಸೆಂದು ಹೊರಟವರು. ಇದನ್ನೆಲ್ಲಾ ಬಿ.ಜೆ.ಪಿ ವಿದ್ವಾಂಸರಿಂದ ಸಂಗ್ರಹಿಸಿಕೊಂಡು ಮತ್ತೆ ಎಡೂರಪ್ಪನ ಎದುರು ಹೋರಾಟ ಆರಂಭಿಸುವುದಿಲ್ಲ ಎಂಬುದು ಯಾವ ಗ್ಯಾರಂಟಿ… ಥೂತ್ತೇರಿ!!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...