Homeಅಂಕಣಗಳುಇತಿಹಾಸ ಇಷ್ಟು ಬೇಗ ಮರುಕಳಿಸಿತಲ್ಲಾ ಥೂತ್ತೇರಿ!!

ಇತಿಹಾಸ ಇಷ್ಟು ಬೇಗ ಮರುಕಳಿಸಿತಲ್ಲಾ ಥೂತ್ತೇರಿ!!

- Advertisement -
- Advertisement -

ಕರ್ನಾಟಕದಲ್ಲಿ ಅದರಲ್ಲೂ ನಮ್ಮ ಪ್ರಭುತ್ವದ ಕೇಂದ್ರ ಸ್ಥಾನದಲ್ಲಿ ನಡೆದಿರುವ ಹೇಸಿಗೆ ಪ್ರಹಸನದ ಉದ್ಘಾಟಕರೇ ಕುಮಾರಣ್ಣನವರಂತಲ್ಲಾ. ಅಂದು ಧರ್ಮಸಿಂಗ್ ಸರಕಾರ ಗಜಗಾಂಭೀರ್ಯದಿಂದ ಸಾಗುತ್ತಿದ್ದಾಗ, ಕುಮಾರಣ್ಣನವರು ಜಮೀರ್ ಅಹಮದ್‍ನ ಕಾರಾಸ್ಥಾನದಲ್ಲಿ ತಯಾರಿಸಿದ ರೂಪುರೇಷೆಯಂತೆ ಜೆ.ಡಿ.ಎಸ್‍ಗೆ ಅಷ್ಟೂ ಶಾಸಕರನ್ನು ರೆಸಾರ್ಟ್‍ಗೆ ಹೊತ್ತೊಯ್ದರು. ಆ ಸಂದರ್ಭದ ದುಷ್ಟ ಚತುಷ್ಟಯರಲ್ಲಿ ಪ್ರಮುಖರಾದ ಬಾಲಕೃಷ್ಣ, ಚಲುವರಾಯ, ಜಮೀರು ಹೊತ್ತೊಯ್ದವರ ಬೇಕು, ಬೇಡಗಳು, ಜಿಹ್ವಾಚಾಪಲ್ಯ ಮತ್ತು ಗರ್ಮಿ ಪದಾರ್ಥಗಳ ಸೇವನೆಯಿಂದುಂಟಾದ ದೈಹಿಕ ಬಾಧೆಗಳನ್ನು ಪೂರೈಸಿದ್ದರಂತಲ್ಲಾ. ನಂತರ ಅವರನ್ನೆಲ್ಲ ಸುಸೂತ್ರವಾಗಿ ಕರೆದುಕೊಂಡು ಬಂದು, ವಿಧಾನಸೌಧದ ಎದುರು ಸುರಿದು ಕುಮಾರಣ್ಣ ಮುಖ್ಯಮಂತ್ರಿಯಾಗಿ ಮಾನ್ಯ ಎಡೂರಪ್ಪ ಉಪಮುಖ್ಯಮಂತ್ರಿಯಾಗುವಂತಹ ಪ್ರಹಸನವನ್ನು ನಿರೂಪಿಸಿದ್ದರಲ್ಲಾ. ಆದರೆ ಇಂತಹ ಸಾಹಸವೊಂದನ್ನು ಕಣ್ಣಲ್ಲಿ ನೋಡಲಾಗದೆ ಕಡು ದುಃಖದ ಮುಖಭಾವದಲ್ಲಿ ದೇವೇಗೌಡರು ಮನೆಯಲ್ಲೇ ಕುಳಿತಿದ್ದರಂತಲ್ಲಾ, ಥೂತ್ತೇರಿ…!

*****

ಕುಮಾರಣ್ಣನವರು ಮುಖ್ಯಮಂತ್ರಿಯಾಗಲು ಕ್ಷಣಗಣನೆ ನಡೆಯುತ್ತಿರುವಾಗ ಇತ್ತ ಪದ್ಮನಾಭನಗರದಲ್ಲಿ ದೇವೇಗೌಡರು ಬದುಕುಳಿಯುವುದೇ ಕಷ್ಟವೆಂಬ ಸ್ಥಿತಿಯಲ್ಲಿ ಕುಳಿತಿರಬೇಕಾದರೆ, ಕರ್ನಾಟಕದ ರಾಜಕಾರಣದ ಇನ್‍ಚಾರ್ಜ್ ಹೊತ್ತಿದ್ದ ಆಂಟೋನಿ ಜೊತೆಗೆ ಪಿ.ಜಿ.ಆರ್. ಸಿಂಧ್ಯಾ, ಎಂ.ಪಿ.ಪ್ರಕಾಶ್, ಮಿರಾಜುದ್ದೀನ್, ಡಿ.ಮಂಜುನಾಥ್ ಕೂಡ ದುರಂತವಾರ್ತೆ ವಿಧಾನಸೌಧದ ಕಡೆಯಿಂದ ಬರುತ್ತದೋ ಅಥವಾ ಪದ್ಮನಾಭನಗರ ಕಡೆಯಿಂದ ಹೊರಡುತ್ತದೋ ಎಂಬ ಆತಂಕದಲ್ಲೇ ಆಸೀನರಾಗಿದ್ದರಂತಲ್ಲಾ. ಆ ಯಾರೊಬ್ಬರಿಗೂ ಗೌಡರ ಮಹಾನಾಟಕ ಅರಿವಿಗೇ ಬರಲಿಲ್ಲವಂತಲ್ಲಾ. ಆ ನಾಟಕ ಯಾವುದೆಂದರೆ, ಮಗನ ಸಿಂಹಾಸನಕ್ಕೆ ತೊಂದರೆ ಕೊಡಬಹುದಾದ ಸಿದ್ದರಾಮಯ್ಯನನ್ನ ತೆಗೆದು ಬಿಸಾಡಿ, ಆ ಜಾಗಕ್ಕೆ ತಿಪ್ಪೇಮೇಗಲ ಒಣ ಸಗಣಿಯಂತ ತಿಪ್ಪಣ್ಣನನ್ನ ತಂದು ಕೂರಿಸಲಾಗಿತ್ತು. ಆತ ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರ ಮೌಖಿಕ ಆದೇಶದಂತೆ, ಕುಮಾರಣ್ಣನೇ ನಮ್ಮ ನಾಯಕ ಅನ್ನುವ ಲೆಟರನ್ನು ರಾಜ್ಯಪಾಲರಿಗೆ ಕೊಡುತ್ತಾರೆ. ರಾಜ್ಯಪಾಲ ಅದನ್ನು ಊರ್ಜಿತ ಮಾಡುತ್ತಾರೆ. ದೇವೇಗೌಡರೇ ನೇಮಿಸಿದ ಕೆ.ಆರ್.ಪೇಟೆ ಕೃಷ್ಣ ಸದನದ ಸ್ಪೀಕರ್ ಆಗಿದ್ದು ಗೌಡರ ಋಣವನ್ನು ತೀರಿಸಿದ್ದರಂತಲ್ಲ ಥೂತ್ತೇರಿ…!!

*****

ಅಂತೂ ಕುಮಾರಣ್ಣನ ಸಭಾ ಪರ್ವ ಆರಂಭವಾಗಿ ಸಿಂಧ್ಯ ಎದ್ದು ನಿಂತು ನಮ್ಮ ಸಭಾ ನಾಯಕರು ಎಂ.ಪಿ.ಪ್ರಕಾಶ್ ಎಂದಾಗ ಆ ಗುಂಡಿಗೆಯನ್ನು ಹಲವರು ಮೆಚ್ಚಿದರು. ಆದರೇ ಅಂದೇ ಅಪ್ಪಮಕ್ಕಳು ಸಿಂಧ್ಯನ ಕತೆ ಮುಗಿಸಲು ಪಣತೊಟ್ಟರು. ಸಿಂಧ್ಯನ ಗಂಡು ಮಾತಿಗೆ ತಕ್ಕ ಉತ್ತರ ಕೊಡುವ ಅವಕಾಶ ಒದಗಿ ಬಂದಾಗ ಎಂ.ಪಿ.ಪ್ರಕಾಶರು, ಕುಮಾರ ಅಲ್ಲ ನಾನೇ ಸಭಾ ನಾಯಕ ಅಂದಿದ್ದರೆ ಆ ಕತೆಯೇ ಬೇರೆಯಾಗಿ ಕರ್ನಾಟಕದ ಇಂದಿನ ಪ್ರಹಸನಕ್ಕೂ ಅವಕಾಶವಿರಲಿಲ್ಲ. ಆದರೆ ಪ್ರಕಾಶ್ ಹಿಂಜರಿದರು. ಆದರೂ ಕುಮಾರಣ್ಣನ ಸರಕಾರ ಅವರಿಗೆ ಗೃಹಸಚಿವರ ಸ್ಥಾನ ನೀಡಿದ್ದಲ್ಲದೆ ಸದನದಲ್ಲಿ ಸರಕಾರದ ಎಲ್ಲಾ ಸಮಸ್ಯೆಗಳಿಗೆ ಸಮಂಜಸ ಉತ್ತರ ನೀಡುವ ಜವಾಬ್ದಾರಿ ವಹಿಸಿತ್ತು. ಆದರೇನು, ಪ್ರಕಾಶ್ ಅವರು ಅಪ್ಪಮಗನ ಗಾಣದಲ್ಲಿ ಸಿಕ್ಕು ನಜ್ಜುಗುಜ್ಜಾಗಿ ಹೋಗಿದ್ದರು. ಕಡೆಗೆ ಇವರ ಸಹವಾಸವೇ ಸಾಕು ಎಂದು ತಮ್ಮ ಜೀವಿತಾವಧಿಯಲ್ಲಿ ಟೀಕೆ ಮಾಡಿಕೊಂಡು ಬಂದ ಕಾಂಗ್ರೆಸ್‍ಗೆ ಹೋದರು, ಅಲ್ಲಿ ಸೋತರು. ಏಕೆಂದರೆ ಗೌಡರು ಅವರ ವಿರುದ್ಧವೂ ಅಭ್ಯರ್ಥಿ ಹಾಕಿದ್ದರು. ಅಂತೂ ಪ್ರಕಾಶರ ಅವನತಿಗೆ ಗೌಡರು ಕಾರಣರಾಗಿ ಹೋದರಲ್ಲಾ ಥೂತ್ತೇರಿ…!!!

*****

ಇತಿಹಾಸ ಒಂದು ದಶಕದಲ್ಲೇ ಮರುಕಳಿಸಿ ಹೋಯ್ತಲ್ಲ! ದುಷ್ಟ ಚತುಷ್ಟರ ಪೈಕಿ, ಕುಮಾರಣ್ಣನ ಬಳಿ ಯಾರೂ ಇಲ್ಲ. ಇದ್ದರೂ ಜಮೀರನನ್ನ ಪೂರಾ ನಂಬುವಂತಿಲ್ಲ. ಇತ್ತ ಎಡೂರಪ್ಪನ ಮುಖದಲ್ಲಿ ಅಂತಹ ಗೆಲುವಿಲ್ಲ. ಇಡೀ ಬಿ.ಜೆ.ಪಿ.ಯಲ್ಲೇ ಎಡೂರಪ್ಪ ಮತ್ತೆ ವಕ್ಕರಿಸುವ ಬಗ್ಗೆ, ಹೇಳಿಕೊಳ್ಳುವ ಹುಮ್ಮಸ್ಸಿಲ್ಲ. ಅದರಲ್ಲೂ ಈಶ್ವರಪ್ಪ ದಿಕ್ಕೇ ತೋಚದಂತಾಗಿದ್ದಾರೆ. ಏಕೆಂದರೆ ಎಡೂರಪ್ಪ ಮತ್ತು ಈಶ್ವರಪ್ಪನ ದಾಯಾದಿ ಕಲಹಕ್ಕೆ ಇತಿಹಾಸವೇ ಇದೆ. ಆದ್ದರಿಂದ ಎಡೂರಪ್ಪ ಮುಖ್ಯಮಂತ್ರಿಯಾದ ಕೂಡಲೇ ಅವರ ತಲೆನೋವಾಗಿ ಪರಿಣಮಿಸಲಿದ್ದಾರೆ. ಎಡೂರಪ್ಪ ಯಾವುದಕ್ಕೂ ಬಗ್ಗದಿದ್ದರೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬದಲು, ಕನಕದಾಸ ಸಮರಸೇನೆ ಹುಟ್ಟು ಹಾಕಿದರೂ ಅಚ್ಚರಿಯಿಲ್ಲವಂತಲ್ಲಾ. ಏಕೆಂದರೆ ಕನಕದಾಸರು ಬರೀ ದಾಸರಷ್ಟೇ ಅಲ್ಲ. ಅದಕ್ಕೂ ಮೊದಲು ಬಾಡದ ನಾಯಕರಾಗಿ ಕಾದಾಡಿ, ವಿಜಯನಗರದ ಅರಸರ ಜೀತಕ್ಕಿಂತ ತಂಬೂರಿಯೇ ಲೇಸೆಂದು ಹೊರಟವರು. ಇದನ್ನೆಲ್ಲಾ ಬಿ.ಜೆ.ಪಿ ವಿದ್ವಾಂಸರಿಂದ ಸಂಗ್ರಹಿಸಿಕೊಂಡು ಮತ್ತೆ ಎಡೂರಪ್ಪನ ಎದುರು ಹೋರಾಟ ಆರಂಭಿಸುವುದಿಲ್ಲ ಎಂಬುದು ಯಾವ ಗ್ಯಾರಂಟಿ… ಥೂತ್ತೇರಿ!!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...

ಹತ್ಯಾಕಾಂಡಕ್ಕೆ ಸಮನಾದ NEET ಹಗರಣ ನಡೆಯಲು ಬಿಟ್ಟ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆದ ನಂತರದ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಜೂನ್ ಆರಂಭದಿಂದ ಇಲ್ಲಿಯವರೆಗೆ ದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ದೇಶದ ಜನತೆ ನೋಡುತ್ತಿದ್ದಾರೆ. ದೇಶದ...

ಸಿಜೆಪಿ ಮತ್ತು ಜೆನ್‌ ಜಿಫಿಕೇಶನ್: ಪ್ರಸ್ತುತ ಬೆಳವಣಿಗೆ, ಭವಿಷ್ಯದ ಸಾಧ್ಯತೆ

ಇತ್ತೀಚಿನ ಬೆಳವಣಿಗೆಗಳು ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಸಿಜೆಪಿ (ಕಾಕ್ರೋಚ್‌ ಜನತಾ ಪಕ್ಷ) ಪ್ರತಿಭಟನೆ ಈಗ ತಾರ್ಕಿಕ ಹಂತಕ್ಕೆ ತಲಪುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ನೀಟ್‌ನ (ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ) ಮೊದಲ...

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...

ಪ್ರತಿಭಟನೆಯನ್ನು ಹತ್ತಿಕ್ಕಲು ಅಕ್ಕಾಡಕ್ಕಿಳಿದಿವೆ ಹಿಂದುತ್ವವಾದಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್‌ ಮತ್ತು ಉಗ್ರ ಗೂಂಡಾ ಪಡೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಜೂನ್ 20ರಂದು ಶುರುವಾಗಿದ್ದ ಈ ಆಂದೋಲನ ಇದೀಗ ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಸಿಜೆಪಿ ಪಟ್ಟು ಹಿಡಿದಿದ್ದು, ಇಂದು...

ಜಿರಳೆಗಳನ್ನು ಸಾಯಿಸಿ ಎಂದು ವಿವಾದಾತ್ಮಕ ಪೋಸ್ಟ್‌ ಹಾಕಿದ ಪ್ರಜ್ಞಾ ಸಿಂಗ್ ಠಾಕೂರ್

ಮಾಜಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ದೇಶದಿಂದ ಜಿರಳೆಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ವ್ಯವಸ್ಥೆ ಮಾಡುವಂತೆ ದೇಶದ ನಾಯಕರಿಗೆ ಮನವಿ ಮಾಡಿದ್ದಾರೆ. X (ಟ್ವಿಟರ್) ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, 2008 ರ...

ಸೋನಮ್ ವಾಂಗ್ಚುಕ್ ಮತ್ತು ಸರ್ಕಾರದ ಡೀಲ್‌ನಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಂಶವೇ ಇಲ್ಲ

ಕೇಂದ್ರದ ಮೋದಿ ಸರ್ಕಾರ ತನ್ನ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡ ನಂತರ, ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಜುಲೈ 23ರ ಗುರುವಾರ ತಮ್ಮ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ....

“50 ಗ್ರಾಂ ಡ್ರಗ್ಸ್ ಇಟ್ಟು ಕೇಸ್ ಹಾಕ್ತೀನಿ!”: ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಮಾದಕದ್ರವ್ಯ ಪ್ರಕರಣದ ಬೆದರಿಕೆಯೊಡ್ಡಿದ ಮುಂಬೈ ಪೊಲೀಸ್!

ಮುಂಬೈ: ದೇಶಾದ್ಯಂತ ವಿದ್ಯಾರ್ಥಿ ಸಮುದಾಯದ ಆಕ್ರೋಶ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿರುವ ಯುವಜನರನ್ನು ಹತೋಟಿಗೆ ತರಲು ಪೊಲೀಸರು ಯಾವ ಮಟ್ಟದ ದಮನಕಾರಿ ಮಾರ್ಗಗಳನ್ನು ತುಳಿಯುತ್ತಿದ್ದಾರೆ ಎಂಬುದಕ್ಕೆ ಮುಂಬೈನಲ್ಲಿ ನಡೆದ ಘಟನೆಯೊಂದು...

ಬಿಡದಿ ಟೌನ್‌ಶಿಪ್: 80% ರೈತರ ಒಪ್ಪಿಗೆ ಇದೆ ಎಂಬ ವಾದ ಸಾಬೀತುಪಡಿಸಿ – ಸರ್ಕಾರಕ್ಕೆ ಸಂಯುಕ್ತ ಹೋರಾಟ ಸವಾಲು

ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಮಿ ನೀಡಲು ಉದ್ದೇಶಿತ ಪ್ರದೇಶದ ಶೇಕಡಾ 80 ರಷ್ಟು ರೈತರು ಒಪ್ಪಿದ್ದಾರೆ ಎಂಬ ಸರ್ಕಾರದ ವಾದಕ್ಕೆ ಯಾವುದೇ ವಾಸ್ತವಿಕ ಆಧಾರವಿಲ್ಲ. ಸರ್ಕಾರಕ್ಕೆ ಧೈರ್ಯವಿದ್ದರೆ ತನ್ನ ಈ ಹೇಳಿಕೆಯನ್ನು ಜನರ...