Homeಮುಖಪುಟಮೋದಿ ಸರ್ಕಾರದಿಂದ ಜಾಗತಿಕ ಮಟ್ಟದಲ್ಲಿ ದೇಶಕ್ಕೆ ‘ಭವ್ಯ’ ಅವಮಾನ! -ಬೃಂದಾ ಕಾರಟ್

ಮೋದಿ ಸರ್ಕಾರದಿಂದ ಜಾಗತಿಕ ಮಟ್ಟದಲ್ಲಿ ದೇಶಕ್ಕೆ ‘ಭವ್ಯ’ ಅವಮಾನ! -ಬೃಂದಾ ಕಾರಟ್

ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಹ್ಯಾಶ್‌ಟ್ಯಾಗ್ ಮತ್ತು ಪ್ರತಿಭಟನೆಗಳು ಪ್ರಪಂಚದಾದ್ಯಂತ ಹರಡಿದಾಗ, ಸೂಚಿಸಲಾದ ಕ್ರಿಯೆಗಳನ್ನು ಒಳಗೊಂಡ ಟೂಲ್‌ಕಿಟ್‌ಗಳನ್ನು ಹಂಚಿಕೊಳ್ಳಲಾಗಿತ್ತು. ಆಗ ಟ್ರಂಪ್ ಕೂಡ ಪೊಲೀಸರಿಂದ ತನಿಖೆ ನಡೆಸಿರಲಿಲ್ಲ!

- Advertisement -
- Advertisement -

ಭಾರತೀಯ ರೈತರ ಹೋರಾಟದೊಂದಿಗೆ ಐಕಮತ್ಯ ವ್ಯಕ್ತಪಡಿಸಿದ ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳ ಟ್ವೀಟ್‌ಗಳಿಗೆ ಪ್ರತಿಕ್ರಿಯೆಯಾಗಿ ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳನ್ನು ‘ಸರ್ವಾಧಿಕಾರಿಯನ್ನು ಹೊಂದಿರುವ ದೇಶದಲ್ಲಿ “ನಿರಂಕುಶಾಧಿಕಾರಿ ಆಡಳಿತಗಾರ, ಭವ್ಯತೆಯ ಭ್ರಮೆಗಳೊಂದಿಗೆ” ಎಂದು ವ್ಯಾಖ್ಯಾನಿಸಬಹುದು. ಇತ್ತೀಚಿನ ಸಮೀಕ್ಷೆಗಳ ಪ್ರಕಾರ ಪ್ರಧಾನಮಂತ್ರಿಯವರ ಜನಪ್ರಿಯತೆಯು ವಿಶ್ವದಾದ್ಯಂತದ ಎಲ್ಲ ರಾಷ್ಟ್ರಗಳ ಮುಖ್ಯಸ್ಥರಿಗಿಂತ ಅತಿ ಹೆಚ್ಚು. ಹಾಗಾದರೆ ಕೆಲವು ಟ್ವೀಟ್‌ಗಳಿಗೆ ಈ ಪ್ರತಿಕ್ರಿಯೆ ಏಕೆ? ಇಷ್ಟು ಪ್ರಬಲ ಪ್ರಧಾನ ಮಂತ್ರಿಯಡಿಯಲ್ಲಿ ನಾವು ಇಷ್ಟು ದುರ್ಬಲ ರಾಷ್ಟ್ರವಾಗಿದ್ದೇವೆಯೇ?

ಭಾರತದ ರೈತರ ಪರ ಬೀಸಿದ ಟ್ವಿಟರ್ ಚಂಡಮಾರುತದ ಬೆಂಬಲದ ವಿರುದ್ಧ ವಿದೇಶಾಂಗ ಸಚಿವಾಲಯದ ಅತಿರೇಕದ ಖಂಡನೆ ಸಾಕಷ್ಟು ಕೆಟ್ಟದ್ದಲ್ಲ ಎಂಬಂತೆ, ದೆಹಲಿ ಪೊಲೀಸರು ಒಂದು ಹೆಜ್ಜೆ ಮುಂದೆ ಹೋಗಿ “ಟೂಲ್‌ಕಿಟ್ ಸಂಚು” ಪ್ರಕರಣದಲ್ಲಿ ಹೆಸರುಗಳನ್ನು ಹೆಸರಿಸದೆ ಮುಕ್ತ ಎಫ್‌ಐಆರ್ ದಾಖಲಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಹೆಚ್ಚಿನ ಅವಮಾನವನ್ನು ಮಾಡಿದ್ದಾರೆ. ಟೂಲ್‌ಕಿಟ್ ಉಲ್ಲೇಖಿಸಿರುವ ದೆಹಲಿ ಪೊಲೀಸ್ ವಿಶೇಷ ಆಯುಕ್ತ ಪ್ರವೀರ್ ರಂಜನ್, ಭಾರತದ ವಿರುದ್ಧ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಪ್ರಾದೇಶಿಕ ಯುದ್ಧವನ್ನು ನಡೆಸುವುದು ಇದರ ಉದ್ದೇಶವಾಗಿದೆ” ಎಂದು ತಿಳಿಸಿದ್ದಾರೆ.

ರೈತ ಪ್ರತಿಭಟನೆಯನ್ನು ಪ್ರಚೋದಿಸಲು “ಸಂಘಟಿತ ಸಾಗರೋತ್ತರ ಜಾಲದ ಮೂಲಕ ಯೋಜಿಸಿದ ಪಿತೂರಿಯನ್ನು ಟೂಲ್‌ಕಿಟ್ ಬಹಿರಂಗಪಡಿಸುತ್ತದೆ” ಎಂದು ಅವರು ಹೇಳಿದ್ದಾರೆ.

ರೈತರು ಏಕೆ ಪ್ರತಿಭಟಿಸುತ್ತಿದ್ದಾರೆ ಎಂಬ ವಿವರಗಳನ್ನು ವಿವರಿಸುವ ಟೂಲ್‌ಕಿಟ್ ವಿಷಯದಲ್ಲಿ ಏನೇನೂ ವಿವಾದಾತ್ಮಕ ಎಂಬುದು ಇಲ್ಲವೇ ಇಲ್ಲ. ಟೂಲ್‌ಕಿಟ್‌ನಲ್ಲಿ ಉಲ್ಲೇಖಿಸಲಾದ ಅನೇಕ ವಿಷಯಗಳನ್ನು –ಉದಾಹರಣೆಗೆ ಈ ಕಾನೂನುಗಳು ಕಾರ್ಪೊರೇಟ್ ಸಂಸ್ಥೆಗಳಿಗೆ ಸಹಾಯ ಮಾಡುತ್ತವೆ- ಸಂಸತ್ತಿನಲ್ಲಿ ಪ್ರತಿಪಕ್ಷಗಳು ಪ್ರಸ್ತಾಪಿಸಿವೆ. ಟೂಲ್‌ಕಿಟ್‌ನಲ್ಲಿ ಸೂಚಿಸಲಾದ ಕ್ರಮಗಳು ಸಹ ರೂಟಿನ್ ಪ್ರಕ್ರಿಯೆಯಾಗಿದೆ. “ಭಾರತೀಯ ರೈತರಿಗೆ ನಿಮ್ಮ ಬೆಂಬಲವನ್ನು ಟ್ವೀಟ್ ಮಾಡಿ. #FarmersProtest, #StandWithFarmer ಎಂಬ ಹ್ಯಾಶ್‌ಟ್ಯಾಗ್ ಬಳಸಿ. ನಿಮ್ಮ ಯಾವುದೇ ಸರ್ಕಾರಿ ಪ್ರತಿನಿಧಿಗಳಿಗೆ ಕರೆ ಮಾಡಿ / ಇಮೇಲ್ ಮಾಡಿ ಮತ್ತು ಕ್ರಮ ತೆಗೆದುಕೊಳ್ಳಲು ಹೇಳಿ, ಆನ್‌ಲೈನ್ ಅರ್ಜಿಗಳಿಗೆ ಸಹಿ ಮಾಡಿ 2021 ರ ಫೆಬ್ರವರಿ 13/14 ರಂದು ಹತ್ತಿರದ ಭಾರತೀಯ ರಾಯಭಾರ ಕಚೇರಿ, ಮೀಡಿಯಾ ಹೌಸ್ ಅಥವಾ ನಿಮ್ಮ ಸ್ಥಳೀಯ ಸರ್ಕಾರಿ ಕಚೇರಿಯ ಬಳಿ ಪ್ರತಿಭಟನೆ ಆಯೋಜಿಸಿ. #FarmersProtest #StandWithFarmers ಹ್ಯಾಶ್‌ಟ್ಯಾಗ್ ಬಳಸಿ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಭಟನೆಯ ಚಿತ್ರಗಳನ್ನು ಹಂಚಿಕೊಳ್ಳಿ-ಇಂತಹ ವಿಷಯ ಇವೆ ಅಷ್ಟೇ!

ಇದರಲ್ಲೇನು ದೇಶದ್ರೋಹವಿದೆ?

ಟೂಲ್‌ಕಿಟ್ ಅನ್ನು ಟ್ವೀಟ್ ಮಾಡಿದ್ದು ಹದಿಹರೆಯದ ಪರಿಸರವಾದಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್. ಇಂತಹ ಟೂಲ್‌ಕಿಟ್‌ಗಳು ಜನಾಂಗಗಳು ಮತ್ತು ರಾಷ್ಟ್ರೀಯ ಗಡಿಗಳ ಸಮಸ್ಯೆಗಳ ಕುರಿತು ಅಂತರರಾಷ್ಟ್ರೀಯ ಒಗ್ಗಟ್ಟಿನ ಕ್ರಮಗಳಿಗೆ ಅಗತ್ಯವಾಗಿದೆ. ಉದಾಹರಣೆಗೆ, ಪ್ಯಾಲೇಸ್ಟಿನಿಯನ್ ಜನರು ತಮ್ಮ ತಾಯ್ನಾಡಿನ ಹಕ್ಕಿಗೆ ಹೋರಾಡುತ್ತಿರುವ ಕಾರಣವನ್ನು ವಿಶ್ವಸಂಸ್ಥೆಯು ಸಹ ಬೆಂಬಲಿಸಿದೆ, ‘ಪ್ಯಾಲೇಸ್ಟಿನಿಯನ್ ಜನರೊಂದಿಗೆ ಅಂತರರಾಷ್ಟ್ರೀಯ ಐಕ್ಯಮತ ದಿನಾಚರಣೆ’ಯ ಕರೆ ನೀಡಲಾಗಿದೆ. ವಾಸ್ತವವಾಗಿ, ಅಂತಹ ಕ್ರಿಯೆಗಳ ದಿನವನ್ನು ಡಿಸೆಂಬರ್ 20, 2020 ಎಂದು ಸಹ ನಿರ್ಧರಿಸಲಾಯಿತು. ವಿವಿಧ ರೀತಿಯ ಟೂಲ್‌ಕಿಟ್‌ಗಳನ್ನು ಘೋಷಣೆಗಳು, ಹ್ಯಾಶ್‌ಟ್ಯಾಗ್‌ಗಳು ಮತ್ತು ಹಲವಾರು ಸಂಸ್ಥೆಗಳಿಂದ ಸೂಚಿಸಲಾದ ಕ್ರಮಗಳೊಂದಿಗೆ ಹಂಚಿಕೊಳ್ಳಲಾಯಿತು. ಅಮೆರಿಕದ ಮೂಲದ ರಾಚೆಲ್ ಕೊರಿ ಫೌಂಡೇಶನ್ ಮತ್ತು ವಿಶ್ವದಾದ್ಯಂತ ಇತರ ಸಂಘಟನೆಗಳು ಇಂತಹ ಹೋರಾಟದ ಟೂಲ್‌ಕಿಟ್ ಹಂಚಿಕೊಂಡಿವೆ. ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಹ್ಯಾಶ್‌ಟ್ಯಾಗ್ ಮತ್ತು ಪ್ರತಿಭಟನೆಗಳು ಪ್ರಪಂಚದಾದ್ಯಂತ ಹರಡಿದಾಗ, ಸೂಚಿಸಲಾದ ಕ್ರಿಯೆಗಳನ್ನು ಟೂಲ್‌ಕಿಟ್‌ಗಳನ್ನು ಹಂಚಿಕೊಳ್ಳಲಾಗಿತ್ತು. ಆಗ ಪ್ರತಿ ಪ್ರತಿಭಟನೆಯ ಹಿಂದೆ ತನ್ನ ಮತ್ತು ಅಮೆರಿಕದ ವಿರುದ್ಧ ಪಿತೂರಿಯನ್ನು ಆಯೋಜಿಸಲಾಗಿದೆಯೆಂದು ನಂಬಿದ್ದ ಡೊನಾಲ್ಡ್ ಟ್ರಂಪ್ ಕೂಡ ಈ ವಿಷಯದಲ್ಲಿ ಪೊಲೀಸರ ಮೂಲಕ ತನಿಖೆ ನಡೆಸಲಿಲ್ಲ.

ಸರ್ಕಾರದ ಅಧಿಕೃತ ಕೌಂಟರ್-ಹ್ಯಾಶ್‌ಟ್ಯಾಗ್ ಅನ್ನು ಮೊದಲು ಗೃಹ ಸಚಿವ ಅಮಿತ್ ಶಾ ಪೋಸ್ಟ್ ಮಾಡಿದ್ದಾರೆ ಮತ್ತು ನಂತರ ವಿದೇಶಾಂಗ ಸಚಿವಾಲಯ ಅಥವಾ ಎಂಇಎ ಅಧಿಕೃತ ವೆಬ್‌ಸೈಟ್ ಪೋಸ್ಟ್ ಮಾಡಿದೆ, ಅದು ‘ಇಂಡಿಯಾ ಟುಗೆದರ್’. ಭಾರತ ಒಟ್ಟಿಗೆ – ಯಾರ ವಿರುದ್ಧ? ಹೆಣಗಾಡುತ್ತಿರುವ ರೈತರು ಭಾರತೀಯರಲ್ಲವೇ? ಭಾರತೀಯ ರೈತರಿಗೆ ಬೆಂಬಲ ಭಾರತ ವಿರೋಧಿ ಆಗುತ್ತದೆಯೇ? ಭಾರತೀಯ ವಲಸೆಗಾರರಿಗೆ ಆಯೋಜಿಸಿದ್ದ “ಹೌಡಿ ಮೋದಿ”ನಂತಹ ಕಾರ್ಯಕ್ರಮಗಳಿಗೆ ಟೂಲ್‌ಕಿಟ್‌ಗಳನ್ನು ಹಂಚಿಕೊಳ್ಳುವ ಹಕ್ಕು ಭಾರತೀಯ ವಿದೇಶಿ ಘಟಕಗಳು, ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಮಿತ್ರ ಸಂಘಟನೆಗಳಿಗೆ ಇದ್ದರೆ, ಇತರರು ಜೈ ಕಿಸಾನ್‌ಗಾಗಿ ಸಂಘಟಿಸಿದರೆ, ಅದು ಹೇಗೆ ರಾಷ್ಟ್ರ ವಿರೋಧಿ?

ಎಲ್ಲಾ ಸಂವಹನಗಳನ್ನು ನಿಲ್ಲಿಸಲು ಹರಿಯಾಣದಾದ್ಯಂತ ಅಂತರ್ಜಾಲವನ್ನು ಕತ್ತರಿಸಲಾಗಿದೆ ಎಂಬುದು ಸತ್ಯವಲ್ಲವೇ? ದೆಹಲಿ ಗಡಿಗಳನ್ನು ಸಾವಿನ ಬಲೆಗಳಾಗಿ ಮತ್ತು ಬೃಹತ್ ಮೊಳೆಗಳು ಮತ್ತು ಕಬ್ಬಿಣದ ಬ್ಯಾರಿಕೇಡ್‌ಗಳನ್ನು ಹೊಂದಿರುವ ಚಿತ್ರಹಿಂಸೆ ಕೋಣೆಗಳಾಗಿ ಮಾರ್ಪಡಿಸಲಾಗಿದೆ, ಇದು ಸಾವಿರಾರು ರೈತರನ್ನು ತಮ್ಮ ಪ್ರತಿಭಟನಾ ಸ್ಥಳಗಳಲ್ಲಿ ಪರಿಣಾಮಕಾರಿಯಾಗಿ ಬಂಧಿಸಿದೆ. ಭಾರತದ ನ್ಯೂಸ್‌ರೂಮ್‌ಗಳಲ್ಲಿ ನ್ಯೂಸ್ ಸ್ಟೋರಿಗಳನ್ನು ಕೊಲ್ಲುವ ಗೃಹ ಸಚಿವಾಲಯದ ಆದೇಶಗಳಿಗೆ ಬದ್ಧವಾಗಿರದ ಚಾನೆಲ್‌ಗಳು ಪ್ರಪಂಚದಾದ್ಯಂತ ದೆಹಲಿ ಗಡಿಯ ಚಿತ್ರಗಳನ್ನು ತೋರಿಸುತ್ತವೆ, ಈ ಚಿತ್ರಗಳನ್ನು ನೋಡುವ ವೀಕ್ಷಕರು ಖಂಡಿತವಾಗಿಯೂ ರೈತರ ಹೋರಾಟದ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವ ಹಕ್ಕುಗಳ ಮೇಲಿನ ದಾಳಿಯ ಬಗ್ಗೆ ತಮ್ಮದೇ ಆದ ಅಭಿಪ್ರಾಯಗಳನ್ನು ರೂಪಿಸಿಕೊಳ್ಳುತ್ತಾರೆ.

ಎಂಇಎ ಮತ್ತೊಂದು ಹ್ಯಾಶ್‌ಟ್ಯಾಗ್ ಅನ್ನು ಹೊಂದಿತ್ತು: “ಇಂಡಿಯಾ ಎಗೇನ್ಸ್ಟ್ ಪ್ರೊಪಗಂಡಾ”. ಮತ್ತೆ ಪ್ರಶ್ನೆ: ಯಾರ ವಿರುದ್ಧ ಪ್ರೊಪಗಂಡಾ? ರೈತರ ಹೋರಾಟದ ಆರಂಭದಿಂದಲೂ, ರೈತರು ಖಲಿಸ್ತಾನಿಗಳು, ಚೀನೀ ಮತ್ತು ಪಾಕಿಸ್ತಾನಿ ಏಜೆಂಟರು ಎಂದು ಸರ್ಕಾರ ಪ್ರೊಪಗಂಡಾ ಮಾಡಿದೆ; ಅವರು ದೇಶ ವಿರೋಧಿಗಳು, ಅವರು ಪ್ರತಿಪಕ್ಷದ ಏಜೆಂಟರು ಅಥವಾ ಪ್ರತಿಪಕ್ಷಗಳಿಂದ ದಾರಿ ತಪ್ಪುತ್ತಿದ್ದಾರೆ ಎಂಬ ಪ್ರೊಪಗಂಡಾವನ್ನು ಸಕಾರವೇ ನಡೆಸಿದೆ. ಗೋಬೆಲ್ಸ್ ವಿವರಿಸಿದ ತಂತ್ರವನ್ನು ನೆನಪಿಸುವ ಈ ಪ್ರೊಪಗಂಡಾಕ್ಕೆ ಭಾರತದ ನೈಜ ವಿರೋಧವಿದೆ: “ನೀವು ಸಾಕಷ್ಟು ದೊಡ್ಡದಾದ ಸುಳ್ಳನ್ನು ಹೇಳಿದರೆ ಮತ್ತು ಅದನ್ನು ಪುನರಾವರ್ತಿಸುತ್ತಿದ್ದರೆ, ಜನರು ಅಂತಿಮವಾಗಿ ಅದನ್ನು ನಂಬುತ್ತಾರೆ”- ಈ ಪ್ರೊಪಗಂಡಾಕ್ಕೆ ಭಾರತೀಯರ ವಿರೋಧವಿದೆ. ಭಾರತವು ವಿರೋಧಿಸಬೇಕಾದ ಪ್ರೊಪಗಂಡಾದಲ್ಲಿ ತಪ್ಪಿತಸ್ಥರು ರೈತರು ಅಥವಾ ಪ್ರಪಂಚದಾದ್ಯಂತ ಇರುವ ಅವರ ಬೆಂಬಲಿಗರಲ್ಲ.

ಕೆಲವು ವ್ಯಾಖ್ಯಾನಕಾರರು ವಿವರಿಸಿದಂತೆ ಸರ್ಕಾರದ ಕ್ರಮಗಳು ಕೇವಲ “ಅತಿಯಾದ ಪ್ರತಿಕ್ರಿಯೆಗಳು” ಅಲ್ಲ. ಇಂತಹ ಕ್ರಮಗಳು ಈ ಸರ್ಕಾರದ ಡಿಎನ್‌ಎಯಲ್ಲಿ ಆಳವಾಗಿ ಹುದುಗಿರುವ ಅಸಹಿಷ್ಣುತೆಯಿಂದ ಒಡಮೂಡಿವೆ. ಇದು ಯಾವುದೇ ರೀತಿಯ ಭಿನ್ನಾಭಿಪ್ರಾಯ ಅಥವಾ ಸರ್ಕಾರವನ್ನು ಪ್ರಶ್ನಿಸುವುದು ಮತ್ತು ಆಡಳಿತ ಪಕ್ಷದ ನೀತಿಗಳನ್ನು ವಿರೋಧಿಸುವುದನ್ನು ಈ ಡಿಎನ್‌ಎ ಸಹಿಸುವುದಿಲ್ಲ. ಭಿನ್ನಾಭಿಪ್ರಾಯ ಹೊಂದಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಮತ್ತು ನಂತರ ಮುಂದಿನ ಸರ್ವಾಧಿಕಾರಿ ವಿಧಾನ – ಐಕ್ಯಮತವನ್ನು ರಾಕ್ಷಸೀಕರಿಸುವುದು. ಈಗ ಸರ್ಕಾರವು ಈ ವಿಧಾನವನ್ನು ದೇಶೀಯ ವಲಯದಿಂದ ಅಂತರರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸುತ್ತಿದೆ.

ದೌರ್ಜನ್ಯ ಅಥವಾ ಅನ್ಯಾಯದಿಂದ ಗಾಬರಿಗೊಂಡ ಸಾಮಾನ್ಯ ನಾಗರಿಕರು ತಮ್ಮ ಆತ್ಮಸಾಕ್ಷಿಯ ಕರೆಯಂತೆ ಸಂತ್ರಸ್ತರ ಪರ ಐಕ್ಯಮತ ವ್ಯಕ್ತಪಡಿಸಿದಾಗ ಅಥವಾ ಜವಾಬ್ದಾರಿಯುತವಾದವರ ತಪ್ಪು ಕ್ರಮಗಳ ವಿರುದ್ಧದ ಹೋರಾಟವನ್ನು ಬೆಂಬಲಿಸಿದಾಗ ಸಮಾಜದ ನೈತಿಕ ಬೆನ್ನುಮೂಳೆಯು ಖಂಡಿತವಾಗಿಯೂ ಬಲಗೊಳ್ಳುತ್ತದೆ. ಸಮುದಾಯಗಳು, ವರ್ಷಗಟ್ಟಲೆ ಒಟ್ಟಿಗೆ ಕೆಲಸ ಮಾಡುವ ಸಹೋದ್ಯೋಗಿಗಳು, ಸ್ನೇಹಿತರು ಮತ್ತು ಕುಟುಂಬಗಳ ನಡುವಿನ ಸಹಜ ಒಗ್ಗಟ್ಟನ್ನು ಮುರಿಯಲು ನಾಜಿ ಆಡಳಿತದ ಯಶಸ್ಸಿನ ಮೊದಲಿಗೆ ಭಯ ಬಿತ್ತಲಾಗಿತ್ತು ಮತ್ತು ನಂತರ ಭಯೋತ್ಪಾದನೆ ಹರಡಲಾಗಿತು. ತಮ್ಮ ಯಹೂದಿ ನೆರೆಹೊರೆಯವರನ್ನು ಕಸಾಯಿಖಾನೆಗಳಿಗೆ ಕರೆದೊಯ್ಯುವಾಗ ಲಕ್ಷಾಂತರ ಜನರು ಮೌನವಾಗಿದ್ದರು. ಈ ಐಕ್ಯಮತದ ನಾಶವು, ಹಿಟ್ಲರನ ಕಾನ್ಸಂಟ್ರೇಶನ್ ಕ್ಯಾಂಪ್‌ಗಳಲ್ಲಿ ಸೆರೆವಾಸದಿಂದ ಬದುಕುಳಿದ ಲುಥೆರನ್ ಪ್ರೀಸ್ಟ್ ಮಾರ್ಟಿನ್ ನಿಮೊಲ್ಲರ್ ಅವರಿಗೆ ಈ ಪ್ರಸಿದ್ಧ ಪದ್ಯವನ್ನು ಬರೆಯಲು ಪ್ರೇರೆಪಿಸಿರಬಹುದು:

“ಅವರು ಕಮ್ಯುನಿಸ್ಟರಿಗಾಗಿ ಬಂದರು, ನಾನು ಮಾತನಾಡಲಿಲ್ಲ
ಏಕೆಂದರೆ ನಾನು ಕಮ್ಯುನಿಸ್ಟ್ ಅಲ್ಲ,
ಆಗ ಅವರು ಸಮಾಜವಾದಿಗಳಿಗಾಗಿ ಬಂದರು, ನಾನು ಮಾತನಾಡಲಿಲ್ಲ
ಯಾಕೆಂದರೆ ನಾನು ಸಮಾಜವಾದಿ ಅಲ್ಲ
ನಂತರ ಅವರು ಟ್ರೇಡ್ ಯೂನಿಯನಿಸ್ಟ್‌ಗಳಿಗಾಗಿ ಬಂದರು, ನಾನು ಮಾತನಾಡಲಿಲ್ಲ
ಏಕೆಂದರೆ ನಾನು ಟ್ರೇಡ್ ಯೂನಿಯನಿಸ್ಟ್ ಆಗಿರಲಿಲ್ಲ
ಆಗ ಅವರು ಯಹೂದಿಗಳಿಗಾಗಿ ಬಂದರು
ಆಗಲೂ ನಾನು ಮಾತನಾಡಲಿಲ್ಲ
ಏಕೆಂದರೆ ನಾನು ಯಹೂದಿ ಅಲ್ಲ
ನಂತರ ಅವರು ನನಗಾಗಿ ಬಂದರು
ಮತ್ತು ಈಗ ಯಾರೂ ಉಳಿದಿಲ್ಲ
ನನಗಾಗಿ ಮಾತನಾಡಲು”..

ಇಂದು ಭಾರತದಲ್ಲಿ, ಈ ಪಾಠಗಳು ಪ್ರಸ್ತುತವಾಗಿವೆ.

ಸರ್ವಾಧಿಕಾರಿಗಳು, ನಿರಂಕುಶಾಧಿಕಾರಿಗಳು ಐಕ್ಯಮತಕ್ಕೆ ಭಯಪಡುತ್ತಾರೆ. ಎಲ್ಲಾ ಭಾರತೀಯರ ಐಕ್ಯತೆಯನ್ನು ಖಚಿತಪಡಿಸಿಕೊಳ್ಳಬೇಕಾದ ಸರ್ಕಾರಗಳು ಧರ್ಮ, ಜಾತಿ, ಭಾಷೆಯನ್ನು ದ್ವೇಷವನ್ನು ಹರಡಲು, ಜನರನ್ನು ವಿಭಜಿಸಲು ಹೇಗೆ ಬಳಸುತ್ತವೆ ಎಂಬುದನ್ನು ನಾವು ನೋಡಿದ್ದೇವೆ. ರೈತರ ಹೋರಾಟವು ಜಾತಿ ಮತ್ತು ಧರ್ಮಗಳನ್ನು ದಾಟಿ ಜಾತ್ಯತೀತ ಹೋರಾಟವಾಗಿದೆ. ಸಿಂಘು ಗಡಿಯಲ್ಲಿ ಗೂಂಡಾಗಳು, ರೈತರ ಮೇಲೆ ದಾಳಿ ನಡೆಸಿದಾಗ, ಅವರಲ್ಲಿ ಕೆಲವರು “ಜೈ ಶ್ರೀ ರಾಮ್” ಘೋಷಣೆಗಳನ್ನು ಕೂಗಿದರು. ಸಿಂಘು ಗಡಿಯ ರೈತರಲ್ಲಿ ಬಹುತೇಕರು ಸಿಖ್ ಧರ್ಮಕ್ಕೆ ಸೇರಿದವರು. ಐಪಿಸಿಯ ಸೆಕ್ಷನ್ 153 ಬಿ ಅಡಿಯಲ್ಲಿ ದಾಳಿ ಮಾಡಿದ ಗೂಂಡಾಗಳ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿಲ್ಲವಲ್ಲ, ಆದರೆ “ಟೂಲ್‌ಕಿಟ್ ಪಿತೂರಿ” ಪ್ರಕರಣದಲ್ಲಿ ದೆಹಲಿ ಪೊಲೀಸರು 153 ಬಿ ಅನ್ನು ದುರುಪಯೋಗ ಮಾಡಿಕೊಂಡಿದ್ದಾರಲ್ಲ?

ಇಂದು ನಮ್ಮ ದುಡಿಯುವ ಜನರ ಎಲ್ಲಾ ವರ್ಗದವರು ಸರ್ಕಾರದ ನೀತಿಗಳ ಒತ್ತಡವನ್ನು ಅನುಭವಿಸುತ್ತಿದ್ದಾರೆ. ಅವು ಅವರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ. ಅವರ ಅಭಿಪ್ರಾಯಗಳನ್ನು ಕೇಳುತ್ತಿಲ್ಲ ಅಥವಾ ಅವರ ಅಹವಾಲುಗಳನ್ನು ಆಲಿಸುತ್ತಿಲ್ಲ. ಹೊಸ ಕಾರ್ಮಿಕ ನಿಯಮಗಳು ಕಾರ್ಮಿಕರನ್ನು ನಿರ್ಲಕ್ಷಿಸಿವೆ. ನಮ್ಮ ಅರಣ್ಯಗಳು ಮತ್ತು ಜಮೀನುಗಳನ್ನು ಕಸಿದುಕೊಳ್ಳುವ ಮತ್ತು ನಮ್ಮ ಅಧಿಕಾರಗಳ ಗ್ರಾಮ ಸಭೆಗಳನ್ನು ಕಸಿದುಕೊಳ್ಳುವ ಹೊಸ ಗಣಿಗಾರಿಕೆ ಕಾನೂನುಗಳನ್ನು ಸಮಾಲೋಚಿಸದೆ ಜಾರಿಗೆ ತಂದಾಗ ಆದಿವಾಸಿಗಳ ಬದುಕೇ ನಾಶವಾಗಿತು. ಅಂತಹ ಅನೇಕ ಉದಾಹರಣೆಗಳಿವೆ.

ರೈತರನ್ನು ಸಂಪರ್ಕಿಸದೆ ಕೃಷಿ ಕಾನೂನುಗಳನ್ನು ಸಂಸತ್ತಿನ ಮೂಲಕ ತಳ್ಳುವುದು ಇತ್ತೀಚಿನ ಉದಾಹರಣೆಯಾಗಿದೆ. ಅಂಗವಿಕಲರ ಹೋರಾಟಗಳಲ್ಲಿ ಒಂದು ಘೋಷಣೆ ಇದೆ: “ನಮ್ಮ ಬಗ್ಗೆ ಏನೂ ಇಲ್ಲ, ನಾವೂ ಇಲ್ಲದೇ”. ಇಂದು ನಾವು ವಾಸಿಸುತ್ತಿರುವ ಭಾರತದಲ್ಲಿ ಇದು ಕಂಡುಬರುತ್ತದೆ, ಈ ಘೋಷಣೆ ಎಲ್ಲರಿಗೂ ಸೂಕ್ತವಾಗಿದೆ. ಆದ್ದರಿಂದ ರೈತರ ಐತಿಹಾಸಿಕ ಮತ್ತು ಅಪ್ರತಿಮ ಹೋರಾಟವು, ರೈತರಂತೆ ನಿರ್ಲಕ್ಷಿಸಲ್ಪಟ್ಟ ಸಮಾಜದ ಇತರ ವರ್ಗಗಳಿಗೂ ಅನ್ವಯವಾಗುತ್ತಿದೆ, ಅವರೆಲ್ಲ ರೈತ ಹೋರಾಟವನ್ನು ಬೆಂಬಲಿಸುತ್ತಿದ್ದರೆ. ಈ ಬೆಳೆಯುತ್ತಿರುವ ಐಕ್ಯಮತದಿಂದಲೇ ಬೆದರುತ್ತಿರುವ ಸರ್ಕಾರ ಅದನ್ನು ಮುರಿಯಲು ಬಯಸಿದೆ. ಈಗ ಅದು ವ್ಯಾಪಕವಾದ ಅಂತರರಾಷ್ಟ್ರೀಯ ಪ್ರೇಕ್ಷಕರಿಗೆ ಹರಡಿದೆ. ಭಾರತದಲ್ಲಿ ಸಾಕಷ್ಟು ಯಶಸ್ವಿಯಾಗಿರುವ ಅದರ ಬೆದರಿಸುವ ತಂತ್ರಗಳು ಮತ್ತು ಸುಳ್ಳು ರಾಷ್ಟ್ರೀಯತೆ ಜನರನ್ನು ಸುಮ್ಮನಾಗಿಸುತ್ತವೆ ಮತ್ತು ಒಗ್ಗಟ್ಟನ್ನು ದುರ್ಬಲಗೊಳಿಸುತ್ತವೆ ಎಂದು ಅದು ಭಾವಿಸಿದೆ.
ಆದರೆ, ಇದು ಅಷ್ಟು ಸುಲಭವಲ್ಲ, ಮುಖ್ಯವಾಗಿ ರೈತರ ಹೋರಾಟದ ಬೆಳವಣಿಗೆಯಿಂದಾಗಿ ಸರ್ಕಾರವು ಹಿನ್ನಡೆ ಅನುಭವಿಸುತ್ತಿದೆ. ಹೆಚ್ಚುತ್ತಿರುವ ಮಹಿಳೆಯರ ಪ್ರಭಾವಶಾಲಿ ಭಾಗವಹಿಸುವಿಕೆಯು ಅದರ ಶಕ್ತಿಯ ಸೂಚನೆಯಾಗಿದೆ. ಪಂಚಾಯತ್ ಸಮಾವೇಶಗಳಲ್ಲಿ ದೆಹಲಿ ಗಡಿ ಪ್ರತಿಭಟನೆಯಲ್ಲಿ ಸೇರಲು ಮತ್ತು ರೈತರ ಬೇಡಿಕೆಗಳಿಗೆ ವಿರುದ್ಧವಾಗಿರುವ ಚುನಾಯಿತ ಪ್ರತಿನಿಧಿಗಳನ್ನೆಲ್ಲ ಸಾಮಾಜಿಕವಾಗಿ ಬಹಿಷ್ಕರಿಸಲು ಕರೆ ನೀಡಿದ್ದು ಒಳ್ಳೆಯ ಸುದ್ದಿಯಾಗುವುದಿಲ್ಲ.

“ಸಾಗರೋತ್ತರ ಪಿತೂರಿಯ” ಎಫ್‌ಐಆರ್‌ಗಳನ್ನು ದಾಖಲಿಸುವುದು ಮತ್ತು ಬೆದರಿಕೆಗಳನ್ನು ನೀಡುವ ಮೂಲಕ ಭಾರತವನ್ನು ವಿಶ್ವದ ದೃಷ್ಟಿಯಲ್ಲಿ ಅಪಖ್ಯಾತಿಗೊಳಿಸುವುದರಿಂದ ವಾಸ್ತವಗಳನ್ನು ಮುಚ್ಚಿ ಇಡಲಾಗುವುದಿಲ್ಲ. ಇದು ರೈತರಿಂದ ರೈತರಿಗಾಗಿ ನಡೆಯುತ್ತಿರುವ ರೈತ ಹೋರಾಟ. ಆದರೆ ಕೇವಲ ರೈತರಿಗೆ ಮಾತ್ರವಲ್ಲ. ಇದು ಇಡೀ ಭಾರತ ಮತ್ತು ಅದರ ಪ್ರಜಾಪ್ರಭುತ್ವಕ್ಕಾಗಿ ನಡೆಯುತ್ತಿರುವ ಜೋರಾಟ.

  • ಬೃಂದಾ ಕಾರಟ್
Photo Courtesy: Deccan Herald

(ಬೃಂದಾ ಕಾರಟ್ ಸಿಪಿಐ(ಎಂ) ನ ಪಾಲಿಟ್‌ಬ್ಯುರೊ ಸದಸ್ಯರು ಮತ್ತು ಮಾಜಿ ರಾಜ್ಯಸಭಾ ಸದಸ್ಯರು)

ಲೇಖನ ಕೃಪೆ: ಎನ್‌ಡಿಟಿವಿ


ಇದನ್ನೂ ಓದಿ: ಪ್ರತ್ಯಕ್ಷದರ್ಶಿಯ ರೈತ ಪ್ರತಿಭಟನೆ ವರದಿ, ವಿಶ್ಲೇಷಣೆ; ಒಂದು ಹೆಜ್ಜೆ ಹಿಂದಕ್ಕೆ, ಎರಡು ಹೆಜ್ಜೆ ಮುಂದಕ್ಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...