Homeಎಂಟರ್ತೈನ್ಮೆಂಟ್ಚಾ ಮತ್ತು ಪಂಕ್ಚರ್‌: ಬೆಕ್ಕಣ್ಣನಿಗೂ ದಾಖಲೆಗಳ ಚಿಂತೆ!

ಚಾ ಮತ್ತು ಪಂಕ್ಚರ್‌: ಬೆಕ್ಕಣ್ಣನಿಗೂ ದಾಖಲೆಗಳ ಚಿಂತೆ!

2011 ಸೆನ್ಸಸ್ ಪ್ರಕಾರ ಬೆಂಗಳೂರು ದಕ್ಷಿಣದಾಗೆ 63 ಸಾವಿರ ಮಂದಿ ಅನಕ್ಷರಸ್ಥರು ಅದಾರ... ಅವನಿಗೆ ವೋಟು ಹಾಕಿದವ್ರಲ್ಲಿ ಒಂದ್ ಹತ್ ಪರ್ಸೆಂಟಾದ್ರೂ ಎದೆ ಸೀಳಿದ್ರ ಒಂದ್ ಅಕ್ಸರ ಇಲ್ಲದೋರೆ ಅದಾರ. ಅಂವ ಮಂಗ್ಯಾನಂಥಂವ ಹೇಳ್ತಾನ ಅಂತ ನೀನೂ ಅಳ್ತೀಯಲ್ಲಲ್ಲೇ..

- Advertisement -
- Advertisement -

ಬೆಕ್ಕಣ್ಣ ಯಾಕೋ ಬಲು ಬೇಜಾರಿನ ಮುಖ ಹೊತ್ತು ಮನೆಗೆ ಬಂದಿತು.

“ಏನಾತಲೇ… ಈರುಳ್ಳಿ ಇನ್ನೂ ಆಕಾಶದಾಗೆ ತೇಲಾಡಕಹತ್ತೈತಿ ಅಂತ ಬೇಜಾರಾಗಿಯೇನ್” ಅಂತ ಕೇಳಿದೆ.

‘ಅದಕ್ಯಾಕ್ ನಾ ಬೇಜಾರಾಗ್ಲಿ… ನಾ ಏನ್ ಈರುಳ್ಳಿ ತಿನ್ನಾಂವ ಅಲ್ಲ, ಹಾಲು ಕುಡಿಯಾಂವ. ಈರುಳ್ಳಿ ತಿನ್ನಾಕಿ ನೀ ಅಳಬಕು, ನಾ ಅಲ್ಲ’ ಎಂದು ಮುಗುಮ್ಮಾಗಿ ಉತ್ತರಿಸಿತು.

“ಮತ್ಯಾಕ ಹಿಂಗ ಗಡಗಿ ಮಾರಿ ಮಾಡೀ” ಎಂದು ತುಸು ಅನುನಯಿಸಿದೆ.

“ನಾ ಎಷ್ಟ್ ಬಡಕಂಡೆ… ನನ್ನೂ ಸಾಲಿಗಿ ಹಚ್ಚು, ನಾಕ್ ಅಕ್ಸರ ಕಲೀತೀನಿ ಅಂತ. ನೀ ಕೇಳಲಿಲ್ಲ…. ಪಂಕ್ಚರ್ ಅಂಗಡ್ಯಾಗ ಇಲಿ ಹಿಡಿಯೂ ಕೆಲಸಕ್ಕೆ ಹಚ್ಚಿದಿ. ಸಾಲಿ ಕಲಿತು ಏನ್ ಕಡಿತಿ, ದಗದ ಮಾಡಬಕು ಅಂತ್ಹೇಳಿ ನಾ ಮರಿ ಇದ್ದಾಗೇ ಕೆಲಸಕ್ಕೆ ಹಚ್ಚಿದಿ…ಈಗ ನೋಡು” ಎಂದು ಅಳುಮುಖ ಮಾಡಿತು.

“ಏನಾತಲೇ ಈಗ… ಮತ್ತ ಎಲ್ಲಾರೂ ಸಾಲಿ ಕಲಿತು ಶಾಣೇ ಆಗಿ, ಕಂಪ್ಯೂಟರ್ ಮುಂದ ಕುಂತ್ರ, ಪಂಕ್ಚರ್ ತಿದ್ದೋರು ಯಾರಲೇ… ಬೆಳಗ್ಗಿ ಬೆಳಗ್ಗಿ ಏನ್ ಗೋಳು ಹಚ್ಚಿ ಹೋಗಲೇ” ಎಂದು ಜಬರಿಸಿದೆ.

“ಎದೆ ಸೀಳಿದರೆ ನಾಕ್ ಅಕ್ಸರ ಇಲ್ಲದೋರು, ಪಂಕ್ಚರ್ ಅಂಗಡ್ಯಾಗ ಕೆಲಸ ಮಾಡೋರೆಲ್ಲ ಬೀದೀ ಬದಿ ಪ್ರತಿಭಟನೆ ನಡೆಸ್ಯಾರ ಅಂತ ತೇಜಣ್ಣ ವದರಾಕ ಹತ್ತಿದ್ದ…” ಸುಂಬಳ ಮೇಲೇರಿಸುತ್ತಲೇ ವಿವರಿಸಿತು.

“ಅಂವನ ಕಾರು ಪಂಕ್ಚರ್ ಆದಾಗ ಐಟಿ ಸೆಲ್‍ ವಳಗ ಕುತ್ತೋರು ಬಂದು ತಿದ್ದತಾರೇನು… ಮತ್ತ ಅವನಿಗೆ ವೋಟು ಹಾಕಿದೋರು ಬರೀ ಪಿಎಚ್‍ಡಿ ಮಂದಿ, ಕಂಪ್ಯೂಟರ್ ಕಲಿತ ಮಂದಿ ಅಷ್ಟೇ ಏನು…ನಿನಗ ಗೊತೈತಿಲ್ಲೋ, 2011 ಸೆನ್ಸಸ್ ಪ್ರಕಾರ ಬೆಂಗಳೂರು ದಕ್ಷಿಣದಾಗೆ 63 ಸಾವಿರ ಮಂದಿ ಅನಕ್ಷರಸ್ಥರು ಅದಾರ… ಅವನಿಗೆ ವೋಟು ಹಾಕಿದವ್ರಲ್ಲಿ ಒಂದ್ ಹತ್ ಪರ್ಸೆಂಟಾದ್ರೂ ಎದೆ ಸೀಳಿದ್ರ ಒಂದ್ ಅಕ್ಸರ ಇಲ್ಲದೋರೆ ಅದಾರ. ಅಂವ ಮಂಗ್ಯಾನಂಥಂವ ಹೇಳ್ತಾನ ಅಂತ ನೀನೂ ಅಳ್ತೀಯಲ್ಲಲ್ಲೇ… ಚಾ ಮಾರೂದು ಎಷ್ಟ್ ವಳ್ಳೆ ಕೆಲಸನೋ ಪಂಕ್ಚರ್ ತಿದ್ದೂದೂ ಅಷ್ಟೇ ವಳ್ಳೆ ಕೆಲಸ” ನಾನು ಇಷ್ಟುದ್ದ ಹೇಳಿ ಸಮಾಧಾನಿಸಲು ಯತ್ನಿಸಿದೆ.

“ಆದ್ರ ಚಾ ಮಾರೂ ಮಂದೀನೆ ಬ್ಯಾರೆ ಅಂತ, ಪಂಕ್ಚರ್ ತಿದ್ದೂ ಮಂದೀನೆ ಬ್ಯಾರೆ ಅಂತ. ನನಗೇನ್ ಅಷ್ಟ್ ತಿಳಿಯಂಗಿಲ್ಲ  ಅಂತ ಮಾಡೀಯೇನ್. ಹೋಗ್ಲಿ, ನನ್ನುವು ಎಲ್ಲಾ ಡಾಕ್ಯುಮೆಂಟ್ಸ್ ಸರಿ ಇಟ್ಟೀಯಿಲ್ಲೋ… ಆಮ್ಯಾಗೆ ನಿನ್ ಮುತ್ತಜ್ಜಿ ಎಲ್ಲಿಂದ ಬಂದಾಳ ಅಂತ್ಲೇ ಗೊತ್ತಿಲ್ಲ, ನೀ  ಬ್ಯಾರೆ ಪಂಕ್ಚರ್ ಅಂಗಡಿ ಮಂದಿ ಜೋಡಿ ಕೆಲಸ ಮಾಡಾಂವ, ನೀ ಹಿಂದೂಸ್ಥಾನದಂವ ಅಲ್ಲ ಅಂತೆಲ್ಲ ಹೇಳಿ ಕ್ಯಾಂಪಿಗೆ ಕಳಿಸಬ್ಯಾಡ್ರಿ” ಎನ್ನುತ್ತ ಮನೆಯಲ್ಲಿ ತನ್ನ ಡಾಕ್ಯುಮೆಂಟ್ಸ್ ಹುಡುಕತೊಡಗಿತು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...